Homeಅಂಕಣಗಳುಬಹುಸಂಖ್ಯಾತ ಪ್ರಬಲ ಜಾತಿಗಳ ಸುತ್ತಲೇ ಚುನಾವಣೆಗಳು ಸುತ್ತಬೇಕೇ?

ಬಹುಸಂಖ್ಯಾತ ಪ್ರಬಲ ಜಾತಿಗಳ ಸುತ್ತಲೇ ಚುನಾವಣೆಗಳು ಸುತ್ತಬೇಕೇ?

- Advertisement -
- Advertisement -

ಏಪ್ರಿಲ್ 24, 2023, ಬಸವ ಜಯಂತಿಯಂದು ಕರ್ನಾಟಕದಾದ್ಯಂತ 12ನೇ ಶತಮಾನದ ಸಮಾಜ ಸುಧಾರಕ ಕ್ರಾಂತಿಕಾರಿ ಬಸವೇಶ್ವರರನ್ನು ಕೆಲವರಾದರೂ ಒಳ್ಳೆಯ ರೀತಿಯಲ್ಲಿ ನೆನಪಿಸಿಕೊಂಡರು. ಆದರೆ ಚುನಾವಣೆ ಕಾವಿನಲ್ಲಿ ಬೆವರು ಸುರಿಸುತ್ತಿರುವ ರಾಜಕಾರಣಿಗಳು ಅದರಲ್ಲಿಯೂ ಬಿಜೆಪಿ ಪಕ್ಷದ ಮುಖಂಡರು ಕೆಲವು ದಿನಗಳಿಂದ ನಡೆಯುತ್ತಿರುವ ’ಲಿಂಗಾಯತ ಕೇಂದ್ರಿತ ರಾಜಕಾರಣ’ವನ್ನು ಚರ್ಚಿಸಿ ಆರೋಪ-ಪ್ರತ್ಯಾರೋಪಗಳನ್ನು ಮಾಡುವುದರಲ್ಲಿ ಮುಳುಗಿದ್ದರು. ತಾನು ಬಿಜ್ಜಳನ ಅಸ್ಥಾನದಲ್ಲಿ ಮಂತ್ರಿಯಾಗಿದ್ದಾಗ 800 ವರ್ಷಗಳ ಹಿಂದೆಯೇ ಅನುಭವ ಮಂಟಪದ ಮೂಲಕ, ಪ್ರಜಾಪ್ರಭುತ್ವದ ಲಕ್ಷಣಗಳಿಗೆ ಬುನಾದಿ ಹಾಕಿದವರು ಬಸವಣ್ಣ. ಜಾತಿಜಡ ಸಂಪ್ರದಾಯದ ಕೂಪದಲ್ಲಿ ಬಿದ್ದು ಒದ್ದಾಡುತ್ತಿದ್ದ ಸಮಾಜವನ್ನು ಸುಧಾರಿಸಿ, ಮೇಲುಕೀಳು ಮತ್ತು ಶ್ರೇಷ್ಠತೆಯನ್ನು ತಿರಸ್ಕರಿಸಿ ಸಮಸಮಾಜಕ್ಕೆ ಅಡಿಪಾಯ ಹಾಕಹೊರಟವರು ಅವರು. ದೇವಸ್ಥಾನಗಳಲ್ಲಿ ಇದ್ದ ತಾರತಮ್ಯವನ್ನು ವಿರೋಧಿಸಿ ತಮ್ಮದೇ ದೇವರನ್ನು ಸೃಷ್ಟಿಸಿಕೊಳ್ಳಲು ಕರೆಕೊಟ್ಟವರು. ಅನುಭವಮಂಟಪದಲ್ಲಿ ಸಮಾಜದ ಎಲ್ಲ ಬಗೆಯ ಜಾತಿಸಮುದಾಯಗಳು ಪಾಲ್ಗೊಂಡು ಸಂವಾದ ಚರ್ಚೆಗಳಲ್ಲಿ ಭಾಗವಹಿಸಲು ಅವಕಾಶವಿತ್ತು. ಅಂತರ್ಜಾತಿ ಮದುವೆಯನ್ನು ಪ್ರೋತ್ಸಾಹಿಸಿ, ಅದಕ್ಕೆ ಬಸವಣ್ಣ ಬೆಲೆ ತೆತ್ತೆಬೇಕಾಗಿ ಬಂತು. ಇಂತಹ ಕ್ರಾಂತಿಕಾರಿ ವ್ಯಕ್ತಿಯಿಂದ ಪ್ರಾರಂಭವಾಯಿತೆನ್ನಲಾಗುವ ಲಿಂಗಾಯತ ಧರ್ಮದ ಬಗೆಗಿನ ಇಂದಿನ ಚರ್ಚೆಯ ವಾದವಿವಾದಗಳು, ಪ್ರಜಾಪ್ರಭುತ್ವಕ್ಕೆ ಮಾರಕವಾದ ಬಹುಸಂಖ್ಯಾತವಾದದ ದನಿಯನ್ನು ಪಡೆದಿರುವುದು ಕುಸಿತದ ದ್ಯೋತಕವಾಗಿದೆ.

ಆಪರೇಷನ್ ಕಮಲ ಭೀತಿ: ಕಾಂಗ್ರೆಸ್ ಮೈತ್ರಿಕೂಟದ 20 ಅಭ್ಯರ್ಥಿಗಳು ಜೈಪುರ ರೆಸಾರ್ಟ್‌ಗೆ | Naanu gauri

ಬಿಜೆಪಿಯ ಟಿಕೆಟ್ ಹಂಚಿಕೆಯಿಂದ ಪ್ರಾರಂಭವಾದ ಈ ಚರ್ಚೆ, ಬಿಜೆಪಿ ಲಿಂಗಾಯತರನ್ನು ಕಡೆಗಣಿಸುತ್ತಿದೆ, ಲಿಂಗಾಯತ ಶಾಸಕನನ್ನು ಬಿಜೆಪಿ ಮುಂದಿನ ಬಾರಿಗೆ ಮುಖ್ಯಮಂತ್ರಿ ಮಾಡುವುದಿಲ್ಲ ಎಂಬ ಚರ್ಚೆಗಳಿಂದ ಪ್ರಾರಂಭವಾಗಿ, ಸಿದ್ದರಾಮಯ್ಯನವರು ಲಿಂಗಾಯತ ವಿರೋಧಿ, ಅವರು ಲಿಂಗಾಯತರನ್ನು ಭ್ರಷ್ಟರೆಂದು ಕರೆದಿದ್ದಾರೆ, ಕ್ಷಮೆ ಕೇಳದಿದ್ದರೆ ಅವರ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಲಾಗುವುದು ಎಂಬ ಅರ್ಥವಿಲ್ಲದ ಚರ್ಚೆ ಬೆಳೆದು ಇನ್ನೂ ರಾಡಿಯಾಗುತ್ತಲೇ ಇದೆ. ಒಂದು ಕಡೆ ಬಿಜೆಪಿ ರಾಷ್ಟ್ರಮಟ್ಟದಲ್ಲಿ ’ಹಿಂದೂ’-’ಹಿಂದುತ್ವ’ ಎನ್ನುವ ಮೆಜಾರಿಟೇರಿಯನಿಸಂ ಅಥವಾ ಬಹುಸಂಖ್ಯಾತವಾದದ ರಾಜಕಾರಣ ಮಾಡುತ್ತಿದ್ದರೆ, ಮತ್ತೊಂದೆಡೆ ಕರ್ನಾಟಕದಲ್ಲಿ ಬಹುಸಂಖ್ಯಾತ ’ಲಿಂಗಾಯತ’ ಜಾತಿರಾಜಕಾರಣಕ್ಕೆ ಅಂಟಿಕೊಂಡಿದೆ. ಎರಡೂ ಕಡೆಗಳಲ್ಲಿ ಮುಸ್ಲಿಂ ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳ ವಿರೋಧಿ ಭಾವನೆಯನ್ನು ಉದ್ದೀಪಿಸುವುದು ಮಾತ್ರ ಬದಲಾಗಿಲ್ಲ. ಉದಾಹರಣೆಗೆ ಈ ಚುನಾವಣೆಯಲ್ಲಿಯೂ ಬಿಜೆಪಿ ಯಾವುದೇ ಮುಸ್ಲಿಂ ವ್ಯಕ್ತಿಗೆ ಟಿಕೆಟ್ ನೀಡದೆ ತನ್ನ ಸಂಪ್ರದಾಯವನ್ನು ಮುಂದುವರಿಸಿದೆ. ಇನ್ನು ಲಿಂಗಾಯತರಿಗೆ ಸುಮಾರು 65ಕ್ಕೂ ಹೆಚ್ಚು ಟಿಕೆಟ್ ಕೊಟ್ಟಿದೆ. ಅಂದರೆ ವಿಧಾನಸಭಾ ಒಟ್ಟು ಕ್ಷೇತ್ರಗಳ ಸುಮಾರು 30%. ಇವುಗಳಲ್ಲಿ ಮೀಸಲು ಕ್ಷೇತ್ರಗಳನ್ನು ಹೊರತುಪಡಿಸಿ ಹೇಳುವುದಾದರೆ 40% ಟಿಕೆಟ್ ಲಿಂಗಾಯತ ಸಮುದಾಯಕ್ಕೆ ಹೋಗಿವೆ. ಇನ್ನು ಲಿಂಗಾಯತ, ಒಕ್ಕಲಿಗ ಮತ್ತು ಬ್ರಾಹ್ಮಣ ಅಭ್ಯರ್ಥಿಗಳ ಸಂಖ್ಯೆಯನ್ನು ಒಟ್ಟಿಗೆ ತೆಗೆದುಕೊಂಡು, ಮೀಸಲು ಕ್ಷೇತ್ರಗಳನ್ನು ಹೊರತುಪಡಿಸಿದರೆ ಈ ಮೂರು ಜಾತಿಗಳಿಗೆ ಶೇ.70ಕ್ಕಿಂತಲೂ ಹೆಚ್ಚು ಪ್ರತಿನಿಧಿತ್ವ ಸಿಕ್ಕಿದೆ. ಅಂದರೆ ಶೇ.30 ಟಿಕೆಟ್‌ಗಳನ್ನು ಉಳಿದ ಹಿಂದುಳಿದ ಸಮುದಾಯದ ಅಭ್ಯರ್ಥಿಗಳಿಗೆ ಹಂಚಿದಾಗ ಎಷ್ಟೋ ಸಮುದಾಯಗಳ ಹೆಸರು ಕೂಡ ಅಲ್ಲಿ ಕಾಣುವುದಿಲ್ಲ. (ಮಡಿವಾಳ, ಉಪ್ಪಾರ ಹೀಗೇ ನೂರಾರು ಜಾತಿ ಸಮುದಾಯಗಳಿಗೆ ಪ್ರತಿನಿಧಿತ್ವವೇ ಅಲ್ಲಿಲ್ಲ.) ಲಿಂಗಾಯತರನ್ನು ಯಾರು ಎಷ್ಟು ಅವಮಾನ ಮಾಡುತ್ತಿದ್ದಾರೆಂಬ ಅರ್ಥಹೀನ ಚರ್ಚೆಯಲ್ಲಿ ಈ ಎಲ್ಲ ಸಮುದಾಯಗಳ ಪ್ರತಿನಿಧಿತ್ವದ ಪ್ರಶ್ನೆ ಗೌಣವಾಗಿ ಹೋಗಿದೆ. ಈ ಸಮುದಾಯಗಳ ವ್ಯಕ್ತಿಗಳಿಗೆ ಕನಿಷ್ಠ ಚುನಾವಣೆಯನ್ನು ಎದುರಿಸುವ ಅವಕಾಶವನ್ನಾದರೂ ನೀಡಬೇಕೆಂಬ ಕಾಳಜಿಯೂ ಕಾಣೆಯಾಗಿದೆ. ಬಸವಣ್ಣನವರ ಆಶಯಗಳು ಅಲ್ಲಿಗೆ ಬಸವ ಜಯಂತಿಗಷ್ಟೇ ಮೀಸಲಾಗಿ ಹೋದವು.

ಇದನ್ನೂ ಓದಿ: ‘ಈದಿನ’ ಮಾಧ್ಯಮದ ಚುನಾವಣಾ ಮೆಗಾ ಸರ್ವೇ; ಬೊಮ್ಮಾಯಿ ಬೇಡ ಎಂದ ಜನತೆ

ಇನ್ನು ಚುನಾವಣೆಯಲ್ಲಿ ಅತಿಹೆಚ್ಚು ಅಭ್ಯರ್ಥಿಗಳನ್ನು ನಿಯೋಜಿಸಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಕೂಡ ಲಿಂಗಾಯತ ಮತ್ತು ಒಕ್ಕಲಿಗ ಅಭ್ಯರ್ಥಿಗಳಿಗೆ ಹೆಚ್ಚು ಮಣೆ ಹಾಕಿರುವುದು ಕ್ರೂರ ವಾಸ್ತವಕ್ಕೆ ಕನ್ನಡಿ ಹಿಡಿದಿದೆ. ಮುಸಲ್ಮಾನ ಸಮುದಾಯದ ವ್ಯಕ್ತಿಗಳನ್ನು ಈ ಎರಡೂ ಪಕ್ಷಗಳು ಒಂದು ಮಟ್ಟಕ್ಕೆ ಅಭ್ಯರ್ಥಿಯನ್ನಾಗಿಸಿವೆ ಎಂಬ ಅಂಶವನ್ನು ಹೊರತುಪಡಿಸಿದರೆ, ಟಿಕೆಟ್ ಹಂಚಿಕೆಯಲ್ಲಿ ಬಹುಸಂಖ್ಯಾತವಾದ ಮೂಗಿಗೆ ಬಡಿಯುತ್ತದೆ.

ಇಂತಹ ಸಂದರ್ಭದಲ್ಲಿ ಯಾವ ಪಕ್ಷ ಸರ್ಕಾರ ರಚಿಸಿದರೂ ಇವೇ ಪ್ರಬಲ ಸಮುದಾಯದ ಶಾಸಕರು ಹೆಚ್ಚೆಚ್ಚು ಸಚಿವ ಸ್ಥಾನಗಳನ್ನು ಕಬಳಿಸುವುದರಲ್ಲಿ ಅನುಮಾನವೇನೂ ಉಳಿದಿರುವುದಿಲ್ಲ. ಒಂದು ಕಾಲದಲ್ಲಿ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸ್ ಅವರು ಅತಿ ಸಣ್ಣಸಣ್ಣ ಸಮುದಾಯದ ವ್ಯಕ್ತಿಗಳಿಗೆ ಟಿಕೆಟ್ ಕೊಡಿಸಿ ಗೆಲ್ಲಿಸಿ ಅವರನ್ನು ಸಚಿವರನ್ನಾಗಿ ಮಾಡುವ ವಿವೇಕದ ನಡೆಯನ್ನು ಕರ್ನಾಟಕಕ್ಕೆ ಹಾಕಿಕೊಟ್ಟಿದ್ದರು. ನಂತರ ಬಂದ ಸಾಲುಸಾಲು ಸರ್ಕಾರಗಳು ಅದನ್ನು ಮರೆಯುತ್ತಾ ಹೋದವು. ಇನ್ನು ಬಿಜೆಪಿ ಕರ್ನಾಟಕದ ರಾಜಕೀಯದ ಮೂಲಕ ದಕ್ಷಿಣ ಭಾರತದಲ್ಲಿ ತನ್ನ ಪ್ರವೇಶದ್ವಾರವನ್ನು ಕಲ್ಪಿಸಿಕೊಂಡ ನಂತರವಂತೂ, ಕೆಲವು ಸಮುದಾಯಗಳನ್ನು ಟಾರ್ಗೆಟ್ ಮಾಡಿ ತನ್ನ ವೋಟ್ ಬ್ಯಾಂಕ್ ಮಾಡಿಕೊಂಡಿತು. ಇದರರ್ಥ ಲಿಂಗಾಯತರೋ ಅಥವಾ ಮತ್ಯಾವುದೋ ಒಂದು ಸಮುದಾಯದ ಜನ ಸಾರಾಸಗಟಾಗಿ ಬಿಜೆಪಿಗೇ ಮತ ಚಲಾಯಿಸುತ್ತಾರೆಂದಲ್ಲ. ಆದರೆ ಮುಖ್ಯಮಂತ್ರಿ ತಮ್ಮ ಸಮುದಾಯದದಿನಾಗಬೇಕು ಎನ್ನುವುದನ್ನು ಭಾವನಾತ್ಮಕ ಅಸ್ತ್ರವನ್ನಾಗಿಸಿ, ಪಕ್ಷಗಳು ನಿರ್ದಿಷ್ಟ ಸಮುದಾಯದ ವೋಟುಗಳನ್ನು ತಮ್ಮೆಡೆಗೆ ಪೋಲರೈಸ್ ಮಾಡುವುದು ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ ತೀವ್ರವಾಯಿತು. ಈ ಬೆಳವಣಿಗೆಯಿಂದ ಲಿಂಗಾಯತ ಸಮುದಾಯ ಹೆಚ್ಚು ಬಿಜೆಪಿ ಪರ ವಾಲುತ್ತದೆಂಬ ಹವಾ ಸೃಷ್ಟಿ ಮಾಡಲಾಯಿತು. ಇದು ನಿಜವಲ್ಲ ಎಂದು ಸಾಬೀತುಪಡಿಸುವ ಹತ್ತಾರು ಕ್ಷೇತ್ರಗಳು ಕರ್ನಾಟಕದಲ್ಲಿವೆ ಅನ್ನುವುದು ಕೂಡ ವಾಸ್ತವ.

ಇತ್ತೀಚಿಗೆ ಈದಿನ.ಕಾಂ ನಡೆಸಿದ ಸರ್ವೆಯೊಂದರಲ್ಲಿ ಕೂಡ ಒಂದು ಭರವಸೆಯ ಅಂಶ ಬೆಳಕಿಗೆ ಬಂದಿದೆ. ಬಹುತೇಕ ಎಲ್ಲ ಸಮುದಾಯಗಳಲ್ಲೂ ಸದರಿ ಸರ್ಕಾರ ಮರು ಆಯ್ಕೆಯಾಗಬಾರದು ಎಂದು ಹೇಳುವವರ ಸಂಖ್ಯೆ ದೊಡ್ಡದಿದ್ದರೆ, ಲಿಂಗಾಯತ ಸಮುದಾಯದಲ್ಲಿಯೂ 47% ಜನ ಸದರಿ ಸರ್ಕಾರದ ಮರುಆಯ್ಕೆ ಬೇಡವೆಂದಿದ್ದಾರೆ. ಯಾವ ಒಂದು ಸಮುದಾಯ ಬಿಜೆಪಿ ಪಕ್ಷದ ನಿಷ್ಠ ಮತದಾರರು ಎಂದು ನಂಬಲಾಗಿತ್ತೋ ಅವರು ಆ ಪಕ್ಷದಿಂದ ಬಹಳಷ್ಟು ದೂರ ಸರಿಯುತ್ತಿರುವ ಸೂಚನೆ ಅದು. ಯಾರೋ ಒಂದಿಬ್ಬರು ನಾಯಕರು ಬಿಜೆಪಿ ಪಕ್ಷ ತೊರೆದಿರುವುದರಿಂದ ಖಂಡಿತಾ ಇದು ಸಂಭವಿಸಿರುವುದಿಲ್ಲ. ಜನಸಾಮಾನ್ಯರ ವಿವೇಕ ಎಂದಿಗಾದರೂ ಜಾಗೃತವಾಗಬಹುದು. ಅದಕ್ಕೆ ಬಸವಣ್ಣನವರ ಪರಂಪರೆಯೂ ಸಹಕರಿಸಿರಬಹುದು. ಜನಪರ ಹೋರಾಟಗಳೂ! ಒಟ್ಟಿನಲ್ಲಿ ಇನ್ನು ಮುಂದಾದರೂ ಬಹುಸಂಖ್ಯಾತ ಜಾತಿಗಳ ರಾಜಕಾರಣವನ್ನು ಮೀರಿದ ರಾಜಕೀಯ ಕರ್ನಾಟಕದಲ್ಲಿ ಬೆಳೆಯಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...