Homeಕರ್ನಾಟಕಬಳ್ಳಾರಿ ಅದಿರುಗ್ಯಾಂಗ್ ಮಣ್ಣುಪಾಲು: ಡಿಸಿಎಂ ಆಗುವರೇ ಶ್ರೀರಾಮುಲು?

ಬಳ್ಳಾರಿ ಅದಿರುಗ್ಯಾಂಗ್ ಮಣ್ಣುಪಾಲು: ಡಿಸಿಎಂ ಆಗುವರೇ ಶ್ರೀರಾಮುಲು?

- Advertisement -
- Advertisement -

2008 ಮತ್ತು 2019…. ಈ ನಡುವಿನ ಅವಧಿಯೆಲ್ಲ ಕರ್ನಾಟಕಕ್ಕೆ ಬರವೇ. ಯಾವ ಪಕ್ಷವೂ ಜನರ ನೋವಿಗೆ ಮಿಡಿದೇ ಇಲ್ಲ. ಆದರೆ, ಈಗ ಈ ವರದಿಯ ಉದ್ದೇಶವಿಷ್ಟೇ: 2008ರಲ್ಲಿ ಒಂದು ‘ಅಕ್ರಮ’ ಸರ್ಕಾರವನ್ನು ನಿರ್ಮಿಸಿದ ಗುಂಪೊಂದು, ಈಗ ಇನ್ನೊಂದು ಅಕ್ರಮ ಸರ್ಕಾರ ನಿರ್ಮಾಣವಾಗುವ ವೇಳೆಯಲ್ಲಿ ಎಲ್ಲಿತ್ತು?

ಅಂದು ಲೋಡುಗಟ್ಟಲೇ ಹಣ ಹೂಡಿದವರನ್ನು ಇವತ್ತು ಬಿಜೆಪಿ ಚಿಮ್ಮಿಬಿಟ್ಟಿತೇ? ಅಥವಾ ಇವತ್ತು ಹೂಡಲಾಗದಷ್ಟು ಅಸಹಾಯಕತೆಯಲ್ಲಿ ಇರುವರೇ? ದಿಕ್ಕಾಪಾಲಾಗಿರುವ ಬಳ್ಳಾರಿ ಅದಿರಿನ ಗ್ಯಾಂಗಿಗೆ ಈಗ ಬಿಜೆಪಿಯಲ್ಲಿ ಗೌರವ ಅಷ್ಟಕ್ಕಷ್ಟೇ. ಶ್ರೀಮಂತಿಕೆಯಲ್ಲಿ ತೀರಾ ಪಾತಾಳಕ್ಕೇನೂ ಅವರು ಕುಸಿದಿಲ್ಲವಾದರೂ ರಾಜಕೀಯ ಸೋಲುಗಳಿಂದ ಕಂಗೆಟ್ಟಿದ್ದಾರೆ. ಅದಕ್ಕಿಂತ ಮುಖ್ಯವಾದ ಸಂಗತಿ ಎಂದರೆ, ಈಗ ಕೇಂದ್ರ ಬಿಜೆಪಿಯೇ ಇಂತಹವರನ್ನು ಲೋಡುಗಟ್ಟಲೇ ರೊಕ್ಕ ಕೊಟ್ಟು ಖರೀದಿಸುವ ಇಲ್ಲವೇ ಬೆದರಿಸಿ ಲಪಟಾಯಿಸುವ ಮಟ್ಟವನ್ನು ತಲುಪಿದೆ.

ಹೀಗಾಗಿ, ವಿಶ್ವಾಸಮತದ ಚರ್ಚೆಯಲ್ಲಿ ಶ್ರೀರಾಮುಲು ಮತ್ತು ಸೋಮಶೇಖರರೆಡ್ಡಿ ಇಬ್ಬರೇ ಅಕ್ಕಪಕ್ಕ ಕೂತು ತಮ್ಮ ಪಾಡಿಗೆ ತಾವು ಏನೇನೋ ಮಾತಾಡುತ್ತ ಕೂರಬೇಕಾಯಿತು. 2008ರ ಸಂದರ್ಭವನ್ನು ಒಮ್ಮೆ ಗಮನಿಸಿ: 110 ಸೀಟು ಪಡೆದ ಬಿಜೆಪಿ ಸರಳ ಬಹುಮತದ ಕೊರತೆ ಇದ್ದಾಗಲೂ ಸರ್ಕಾರ ರಚನೆಗೆ ಮುಂದಾಗಿತ್ತು. ಆಗ ಮೋದಿ-ಶಾ ಇನ್ನು ಗುಜರಾತ್ ಲೆವೆಲ್ಲಿನಲ್ಲೇ ಇದ್ದರು.

ಆಗ ರಾಜ್ಯ ಬಿಜೆಪಿ ನಂಬಿದ್ದು ಜನಾರ್ದನರೆಡ್ಡಿ ಮತ್ತು ಶ್ರೀರಾಮುಲು ಎಂಬ ಗಣಿ ಉದ್ಯಮಿಗಳನ್ನು. ಅವರು ಬಹುಮತಕ್ಕೆ ಅಗತ್ಯವಿದ್ದ ಮೂರು ಇರಲಿ ಎಂಟ್ಹತ್ತು ಶಾಸಕರನ್ನೇ ದಂಡಿಯಾಗಿ ಕರೆತಂದು ಒಗೆದು ವಿಶ್ವಾಸಮತ ಗೆಲ್ಲಿಸಿಕೊಂಡಿದ್ದರು. ಅನರ್ಹತೆ ಎಂಬ ಪದಕ್ಕೆ ಅವಕಾಶವನ್ನೇ ನೀಡದಂತೆ, ಅವರಿಂದ ರಾಜಿನಾಮೆ ಕೊಡಿಸಲಾಗಿತ್ತು. ಅವರಿಗೆಲ್ಲ ಸಚಿವಗಿರಿಯ ಜೊತೆಗೆ ಸಾಕಷ್ಟು ಗಣಿ ಮಣ್ಣಿನ ಪಾಪದ ದುಡ್ಡನ್ನು ಕಾಣಿಕೆಯಾಗಿ ನೀಡಲಾಯಿತು. ಮುಂದೆ ಉಪ ಚುನಾವಣೆಯಲ್ಲಿ ಅವರಲ್ಲಿ ಬಹುತೇಕರನ್ನು ಗೆಲ್ಲಿಸುವ ಮೂಲಕ ಬಳ್ಳಾರಿಯ ಗಣಿಗಳ್ಳರು ‘ತಮ್ಮದೇ’ ಸರ್ಕಾರವನ್ನು ಕಾಪಾಡಿಕೊಂಡರು.

ಇಡೀ ಬಳ್ಳಾರಿ ಜಿಲ್ಲೆಯೇ ಆಗ ಅವರ ಸುಪರ್ದಿಗೆ ಒಳಪಟ್ಟಿತ್ತು. ತಮಗೆ ಬೇಕಾದ ಎಸ್‍ಪಿ, ಡಿಸಿ ಮತ್ತು ಅರಣ್ಯಾಧಿಕಾರಿಗಳನ್ನೆಲ್ಲ ಹಾಕಿಸಿಕೊಂಡು ಅಕ್ರಮ ಗಣಿಗಾರಿಕೆಯನ್ನು ಅಧಿಕೃತ ವ್ಯಾಪಾರದ ಮಟ್ಟಕ್ಕೆ ಇಳಿಸಿದ್ದರು. ತಮ್ಮ ಅಕ್ರಮ ಗಣಿಗಳಲ್ಲದೇ ಇತರ ಗಣಿಗಳಿಂದ ಹಫ್ತಾ ವಸೂಲಿಯನ್ನೂ ವ್ಯವಸ್ಥಿತವಾಗಿ ಮಾಡುವ ಮೂಲಕ ಅಪಾರ ಸಂಪತ್ತನ್ನು ಕೊಳ್ಳೆ ಹೊಡೆದರು. ರಾಷ್ಟ್ರೀಯ ನಾಯಕಿ ಸುಷ್ಮಾ ಸ್ವರಾಜ್ ಅವರನ್ನು ‘ಮಂಗಳ ಗೌರಿ’ ನೆಪದಲ್ಲಿ ಉಡಿ ತುಂಬಿಸುವ ಮೂಲಕ ಒಲಿಸಿಕೊಂಡಿದ್ದ ಈ ಬಳ್ಳಾರಿ ಗ್ಯಾಂಗ್ ಒಂದು ಹಂತದಲ್ಲಿ ಯಡಿಯೂರಪ್ಪನವರ ವಿರುದ್ಧವೇ ತಿರುಗಿಬಿದ್ದು ಸರ್ಕಾರ ಬೀಳಿಸುವ ಧಮಕಿ ಹಾಕಿತ್ತು.

ವಿಧಾನಸಭಾ ಅಧಿವೇಶನದಲ್ಲೇ ಜನಾರ್ದನರೆಡ್ಡಿ ಸಿದ್ದರಾಮಯ್ಯ ಅವರಿಗೆ ‘ಬಳ್ಳಾರಿಗೆ ಬನ್ನಿ, ನಿಮ್ಮನ್ನೆಲ್ಲ ನೋಡಿಕೊಳ್ತೇವೆ’ ಎನ್ನುವ ಮಟ್ಟಕ್ಕೆ ಹೋದರೆ, ರೆಡ್ಡಿಯ ಚೇಲಾ ಶಾಸಕ ಸುರೇಶ ಬಾಬು ತೋಳೇರಿಸಿ ವಿಪಕ್ಷದವರ ಮೇಲೆ ದಾದಾಗಿರಿ ನಡೆಸಲೂ ಯತ್ನಿಸಿದ್ದರು.
ಸಂತೋಷ್ ಹೆಗ್ಡೆ ವರದಿ ನಂತರ ಕೋರ್ಟುಗಳು ಕೂಡ ತೀಕ್ಷ್ಣ ಆದೇಶಗಳನ್ನು ಕೊಡತೊಡಗಿದವು. ಇತ್ತ ಭೂ ಹಗರಣದಲ್ಲಿ ಸಿಕ್ಕ ಯಡಿಯೂರಪ್ಪ ಜೈಲು ಪಾಲಾದರು. ಅಲ್ಲಿಗೆ ಬಳ್ಳಾರಿ ಗ್ಯಾಂಗಿನ ಒಂದು ಹಂತದ ಆಟ ಮುಗಿದಿತ್ತು. ಮುಂದೆ ಯಡಿಯೂರಪ್ಪ ಒಂದು ಪಾರ್ಟಿ ಕಟ್ಟಿದರೆ, ಬಳ್ಳಾರಿ ಗ್ಯಾಂಗ್ ಇನ್ನೊಂದು ಪಾರ್ಟಿ ಕಟ್ಟಿತು. ಎರಡೂ ಮಕಾಡೆ ಮಲಗಿದವು.

ಜೈಲಲ್ಲಿ ವರ್ಷಗಳನ್ನು ಸವೆಸಿದ ರೆಡ್ಡಿಯನ್ನು ರಾಷ್ಟ್ರೀಯ ಬಿಜೆಪಿ ದೂರವಿಡತೊಡಗಿತು. ಕೇವಲ 10 ವರ್ಷಗಳಲ್ಲಿ ಎಂತಹ ಬದಲಾವಣೆ? ಅಂದು ಸರ್ಕಾರವನ್ನೇ ರಚಿಸಿದ್ದ ಬಳ್ಳಾರಿ ಗ್ಯಾಂಗ್ ಬಿಜೆಪಿ ಪಾಲಿಗೆ ಹೀರೋ ಆಗಿತ್ತು, ಈಗದು ಝೀರೋ, ಬಿಗ್ ಝೀರೋ!

ಫಾರೆಸ್ಟ್ ಅಧಿಕಾರಿಗೆ ಸಜೆ!
ಆದರೆ ರೆಡ್ಡಿಗಳ ಆಟಾಟೋಪ ಮತ್ತೆ ಮುಂದುವರೆಯಲಿದೆಯೇ ಎಂಬ ಪ್ರಶ್ನೆ ಕಾಡಲು ಕಾರಣವಾಗಿದ್ದು, ಮೊಟ್ಟ ಮೊದಲ ಬಾರಿಗೆ ಜನಾರ್ದನರೆಡ್ಡಿಯ ಅಕ್ರಮ ಗಣಿಗಾರಿಕೆಯ ಮೇಲೆ ಮುಗಿಬಿದ್ದಿದ್ದ ಫಾರೆಸ್ಟ್ ಆಫೀಸರ್ ಒಬ್ಬರನ್ನು ಕೇಂದ್ರ ಸರ್ಕಾರ ಈ ವಾರ ಕಾಯಂ ನಿವೃತ್ತಿಗೊಳಿಸಿದ ವಿಷಯ. ಕಲ್ಲೋಳ್ ಬಿಸ್ವಾಸ್ ಎಂಬ ಈ ಅಧಿಕಾರಿಯನ್ನು ಕಡ್ಡಾಯ ನಿವೃತ್ತಿಗೊಳಿಸಿದುದರ ಹಿಂದೆ ಯಡಿಯೂರಪ್ಪ ಪಾತ್ರವಿದೆಯಾ ಅಥವಾ ಜಗನ್‍ರೆಡ್ಡಿಯ ಪಾತ್ರವಿದೆಯಾ ಎಂಬುದು ಸದ್ಯಕ್ಕೆ ಅಸ್ಪಷ್ಟ…..

ಹಳೆಯ ಸೇಡನ್ನು ತೀರಿಸಿಕೊಂಡಿರುವುದರ ಹೊರತಾಗಿ, ಇದರಿಂದ ರೆಡ್ಡಿ ರಾಮುಲು ಬಳಗಕ್ಕಂತೂ ವಿಶೇಷ ಅನುಕೂಲಗಳೇನೂ ದಕ್ಕುವಂತೆ ಕಾಣುತ್ತಿಲ್ಲ. ಒಟ್ಟಿನಲ್ಲಿ ಕೋಟೆ ಕಟ್ಟಿ ಮೆರೆದ ಗಣಿಗಳ್ಳರು ಈಗ ಬಿಜೆಪಿಗೇ ಬೇಡವಾಗಿದ್ದಾರೆ! ಆದರು ಶ್ರೀರಾಮುಲು ಡಿಸಿಎಂ ಕನಸು ಬಿಟ್ಟಿಲ್ಲ. ಜಾತಿಬಲ ಮಾತ್ರವೇ ಅವರಿಗೆ ಈಗ ಆಶಾಕಿರಣವಾಗಿದೆ. ದೆಹಲಿಯಲ್ಲಿ ಅಮಿತ್ ಶಾ ಸಂಪುಟ ವಿಸ್ತರಣೆಗೆ ಅವಕಾಶ ಕೊಡುದಿರುವುದು ನೋಡಿದರೆ ಪಕ್ಕಾ ಆರ್.ಎಸ್.ಎಸ್ ನವರಿಗೆ ಮಾತ್ರ ಮಂತ್ರಿ ಭಾಗ್ಯ ಎಂಬ ಸುಳಿವು ಸಿಗುತ್ತಿವೆ. ಅಂದರೆ ಅದಿರಿನ ದಂಧೆಯ ಕುಸಿತದೊಂದಿಗೆ ಬಳ್ಳಾರಿಯ ಗ್ಯಾಂಗೂ ಮಣ್ಣು ಪಾಲಾಯಿತೇ ಎಂಬ ಪ್ರಶ್ನೆ ಬರುತ್ತಿದೆ. ಏನಾದರೂ ಆಗಲಿ ಇಂದರಿಂದ ಜನರಿಗೆ ಮಾತ್ರ ಏನೂ ಪ್ರಯೋಜನವಿಲ್ಲವೆಂಬುದು ಸತ್ಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಜಾರಿ ಮಾಡದಿದ್ದರೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಮತ: ಮಾದಿಗ ಸಮುದಾಯದ ನಿರ್ಣಯ

ಮಾ.27 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿರುವ ವಿಶೇಷ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಾದಿಗ ಸಮುದಾಯಕ್ಕೆ ಸರ್ಕಾರಿ ನೇಮಕಾತಿಯಲ್ಲಿ ಶೇ.6 ಒಳಮೀಸಲಾತಿಯನ್ನು ಹಂಚಿಕೆ ಮಾಡದಿದ್ದರೆ ದಾವಣಗೆರೆ ಹಾಗೂ ಬಾಗಲಕೋಟೆ ಉಪ ಚುನಾವಣೆಯಲ್ಲಿ...

ಗುರುಗ್ರಾಮ ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣ: ಮೂವರು ಮಹಿಳಾ ಐಪಿಎಸ್ ಒಳಗೊಂಡ ವಿಶೇಷ ತನಿಖಾ ತಂಡ ರಚಿಸಿದ ಸುಪ್ರೀಂ

ಗುರುಗ್ರಾಮ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದ ತನಿಖೆಗಾಗಿ ಸುಪ್ರೀಂ ಕೋರ್ಟ್ ಬುಧವಾರ ಮೂವರು ಮಹಿಳಾ ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಿದೆ.  ಸಿಜೆಐ ಸೂರ್ಯ ಕಾಂತ್ ನೇತೃತ್ವದ ಮೂವರು ನ್ಯಾಯಾಧೀಶರ...

ಗೋವಾ | 25 ರಿಂದ 30 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ : ಬಿಜೆಪಿ ಕೌನ್ಸಿಲರ್ ಮಗನ ಬಂಧನ

ಗೋವಾದ ಕುರ್ಚೋರೆಮ್ ಪುರಸಭೆಯ ಬಿಜೆಪಿ ಕೌನ್ಸಿಲರ್ ಸುಶಾಂತ್ ನಾಯ್ಕ್ ಅವರ ಮಗ ಸೋಹಮ್ ನಾಯ್ಕ್ (20) ಎಂಬಾತನನ್ನು ಸುಮಾರು 25ರಿಂದ 30 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ದಕ್ಷಿಣ ಗೋವಾ ಪೊಲೀಸರು ಬಂಧಿಸಿದ್ದಾರೆ.  ಆರೋಪಿ...

ಇರಾನ್‌ ಕದನ ವಿರಾಮಕ್ಕೆ 15 ಅಂಶಗಳ ಪ್ರಸ್ತಾಪ ಮುಂದಿಟ್ಟ ಟ್ರಂಪ್

ಪಶ್ಚಿಮ ಏಷ್ಯಾ ಸಂಘರ್ಷ ಪ್ರಾರಂಭಗೊಂಡು ನಾಲ್ಕು ವಾರಗಳು ಪೂರ್ಣಗೊಳ್ಳುವಾಗ, ಈವರೆಗೆ ಸುಮಾರು 2000 ಜೀವಗಳನ್ನು ಬಲಿ ಪಡೆದ ಹಾಗೂ ಜಾಗತಿಕವಾಗಿ ಇಂಧನ ಸಮಸ್ಯೆಯನ್ನು ಹುಟ್ಟು ಹಾಕಿರುವ ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಇರಾನ್‌ ಮುಂದೆ...

ಗುಜರಾತ್: ತೀವ್ರ ವಿರೋಧದ ನಡುವೆಯೂ ಏಕರೂಪ ನಾಗರೀಕ ಸಂಹಿತೆ ಮಸೂದೆ ಅಂಗೀಕಾರ; ಇದು ‘ಮುಸ್ಲಿಂ ವಿರೋಧಿ’ ಎಂದ ಕಾಂಗ್ರೆಸ್

ಗುಜರಾತ್ ವಿಧಾನಸಭೆ ಮಂಗಳವಾರ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮಸೂದೆಯನ್ನು ಅಂಗೀಕರಿಸಿದೆ. ಇದು ಧರ್ಮವನ್ನು ಲೆಕ್ಕಿಸದೆ ಮದುವೆ, ವಿಚ್ಛೇದನ, ಉತ್ತರಾಧಿಕಾರ ಮತ್ತು ಲಿವ್-ಇನ್ ಸಂಬಂಧಗಳನ್ನು ನಿಯಂತ್ರಿಸುವ ಸಾಮಾನ್ಯ ಕಾನೂನು ಚೌಕಟ್ಟನ್ನು ರಚಿಸುವ ಗುರಿಯನ್ನು...

ಅಜಿತ್ ಪವಾರ್ ಸಾವಿನ ಕುರಿತು ಹಲವು ಅನುಮಾನ : ಬೆಂಗಳೂರಿನಲ್ಲಿ ಎಫ್‌ಐಆರ್ ದಾಖಲು

ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ದಿವಂಗತ ಅಜಿತ್ ಪವಾರ್ ಅವರ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ, ಈ ಹಿಂದೆ ಸರಣಿ ಸುದ್ದಿಗೋಷ್ಠಿಗಳನ್ನು ನಡೆಸಿದ್ದ ಎನ್‌ಸಿಪಿ (ಎಸ್‌ಪಿ) ಶಾಸಕ ರೋಹಿತ್ ಪವಾರ್, ಮಂಗಳವಾರ (ಮಾ.24) ಬೆಂಗಳೂರಿನ...

ಇಂಧನ ಕೊರತೆ ವದಂತಿ: ಆತಂಕದಿಂದ ಕುಕ್ಕರ್, ಹಾಲಿನ ಡಬ್ಬಿ, ನೀರಿನ ಬಕೆಟ್ ಗಳಲ್ಲಿ ಇಂಧನ ಸಂಗ್ರಹಣೆಗೆ ಮುಂದಾದ ಜನರು

ಇಂಧನ ಕೊರತೆಯ ವದಂತಿಗಳಿಂದಾಗಿ ದೇಶದ ವಿವಿಧ ಭಾಗಗಳಲ್ಲಿ ಜನರು ಕುಕ್ಕರ್, ಅಡುಗೆ ಪಾತ್ರೆ, ಹಾಲಿನ ಡಬ್ಬಿಗಳು, ನೀರಿನ ಟ್ಯಾಂಕರ್, ನೀರಿನ ಬಕೆಟ್ ಮತ್ತು ಬ್ಯಾರೆಲ್‌ಗಳಂತಹ ಅಡುಗೆ ಸಲಕರಣೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು...

ಪಂಜಾಬ್: ಮಹಿಳೆಗೆ ಲೈಂಗಿಕ ಶೋಷಣೆ, ಬೆದರಿಕೆ ಆರೋಪ; ತಲೆಮರೆಸಿಕೊಂಡಿದ್ದ ಎಎಪಿ ಶಾಸಕ ಹರ್ಮೀತ್ ಸಿಂಗ್ ಪಠಾಣಮಜ್ರಾ ಬಂಧನ 

ಕಳೆದ ಸೆಪ್ಟೆಂಬರ್‌ನಿಂದ ಅತ್ಯಾಚಾರ ಪ್ರಕರಣವೊಂದರಲ್ಲಿ ತಲೆಮರೆಸಿಕೊಂಡಿದ್ದ ಎಎಪಿ ಶಾಸಕ ಹರ್ಮೀತ್ ಸಿಂಗ್ ಪಠಾಣಮಜ್ರಾ ಅವರನ್ನು ಪಂಜಾಬ್ ಪೊಲೀಸರು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಸನೂರ್‌ನಿಂದ ಮೊದಲ ಬಾರಿಗೆ ಶಾಸಕರಾಗಿರುವ ಪಠಣಮಜ್ರಾ...

ಆಸ್ತಿ ವಿವರ ಮುಚ್ಚಿಟ್ಟು ನಾಮಪತ್ರ ಸಲ್ಲಿಸಿದ ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ : ಕಾಂಗ್ರೆಸ್ ಆರೋಪ

ಬಿಜೆಪಿ ಕೇರಳ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ತಮ್ಮ ಆಸ್ತಿ ವಿವರಗಳನ್ನು ಮುಚ್ಚಿಟ್ಟು ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ತಿರುವನಂತಪುರಂ ಜಿಲ್ಲೆಯ ನೇಮಮ್...

2026ರ ಮೊದಲ 74 ದಿನಗಳಲ್ಲಿ 170 ಕಸ್ಟಡಿ ಸಾವುಗಳು ವರದಿ; ಸಂಸತ್ತಿಗೆ ಕೇಂದ್ರ ಸರ್ಕಾರ ಮಾಹಿತಿ 

2026 ರ ಮೊದಲ 74 ದಿನಗಳಲ್ಲಿ (ಜನವರಿ 1 ರಿಂದ ಮಾರ್ಚ್ 15 ರವರೆಗೆ) ಭಾರತದಾದ್ಯಂತ ಒಟ್ಟು 170 ಕಸ್ಟಡಿ ಸಾವಿನ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಸಂಸತ್ತಿಗೆ ತಿಳಿಸಿದೆ. ಗೃಹ...