Homeಅಂಕಣಗಳುಬೆನ್ನು ಸೀಳುವ ರಾಮ ಧನಸ್ಸೇ: ಯಾರನ್ನು ಕೂಗಲಿ? ರಾಮಧನಸ್ಸೇ ನಟ್ಟಿರುವಾಗ? ವಿನಯಾ ಒಕ್ಕುಂದರವರ ಅಂಕಣ

ಬೆನ್ನು ಸೀಳುವ ರಾಮ ಧನಸ್ಸೇ: ಯಾರನ್ನು ಕೂಗಲಿ? ರಾಮಧನಸ್ಸೇ ನಟ್ಟಿರುವಾಗ? ವಿನಯಾ ಒಕ್ಕುಂದರವರ ಅಂಕಣ

ಧರ್ಮೋನ್ಮಾದದ ದುರಂತವು ಎಲ್ಲ ಒಮ್ಮೆ ಆಕಸ್ಮಿಕವಾಗಿ ನಡೆದು ಮುಗಿದುಹೋಗುವಂತದ್ದಲ್ಲ. ಇದು ಸಹಜೀವಿಗಳನ್ನು ಭಯಗೊಳಿಸಿ ಹದ್ದುಬಸ್ತಿನಲ್ಲಿಟ್ಟುಕೊಳ್ಳಲು ನಡೆಸುವ ಆಂತರಿಕ ಯುದ್ಧ. ಈ ಕಾರ್ಯಾಚರಣೆ ದೇಶದ ವಿವಿಧ ಭಾಗಗಳಲ್ಲಿ ಏಕಕಾಲದಲ್ಲಿ ನಡೆಯುತ್ತಿರುತ್ತದೆ.

- Advertisement -
- Advertisement -

ರಾಷ್ಟ್ರೀಯತೆ ಎನ್ನುವುದು ಬಹು ದೊಡ್ಡ ಅಪಾಯವಾಗಬಹುದು. ‘ಒಬ್ಬ ವ್ಯಕ್ತಿ ತಾನು ಪ್ರಬಲನಾಗಲು ಎಂತಹ ಅನೈತಿಕ ಕೆಲಸಗಳನ್ನು ಮಾಡಬಲ್ಲನೋ ಹಾಗೆ ಒಂದು ಸಮುದಾಯ ತಾನು ಪ್ರಬಲವಾಗಲು ಅನೈತಿಕವಾಗಿ ವರ್ತಿಸಬಲ್ಲದು’ ಎಂದಿದ್ದರು ರವೀಂದ್ರನಾಥ ಠಾಗೋರ್.

ನನ್ನ ದೇಶದಲ್ಲೀಗ ರಾಷ್ಟ್ರೀಯತೆಯ ಹೆಸರಿನಲ್ಲಿ ಮತೀಯ ಉನ್ಮಾದ ಹೆಚ್ಚುತ್ತಿದೆ. ರಾಷ್ಟ್ರ ಮತ್ತು ಧರ್ಮಗಳನ್ನು ಒಂದಾಗಿಸುವ ಪ್ರಯತ್ನದಲ್ಲಿ ಬಹುತ್ವದ ಬೇರು ಕತ್ತರಿಸಲಾಗುತ್ತಿದೆ. ಗಾಂಧೀಜಿ ತಮ್ಮ ಹಿಂದ್ ಸ್ವರಾಜ್‍ನಲ್ಲಿ ಯಾವ ಧರ್ಮಾಧಾರಿತ ರಾಷ್ಟ್ರೀಯತೆಯನ್ನು ಸ್ಪಷ್ಟವಾಗಿ ನಿರಾಕರಿಸಿದ್ದರೋ ಅದನ್ನೇ ರಾಷ್ಟ್ರೀಯ ಸ್ವಯಂಸೇವಕ ಸಂಘವು ಹರಡಲು ಯತ್ನಿಸುತ್ತಿದೆ. ಒಂದೇ ಧರ್ಮವಿದ್ದರೆ ಒಂದು ರಾಷ್ಟ್ರ ಎನ್ನುವುದು ಸರಿಯಾದದ್ದಲ್ಲ, ಪ್ರತಿಯೊಂದು ಪ್ರಬಲ ಧರ್ಮವೂ ಪ್ರತ್ಯೇಕ ರಾಷ್ಟ್ರದ ತುಡಿತ ಹೊಂದಿದರೆ ಮುಂದೇನು? ಎಂದು ಪ್ರಶ್ನಿಸಿದ್ದರು. ಧರ್ಮ ಬೇರೆಯಿದೆ ಎಂದ ಕ್ಷಣ ಯಾರೂ ವೈರಿಗಳಾಗುವುದಿಲ್ಲ ಎಂದಿದ್ದರು.

ಗಾಂಧೀ ಹತ್ಯೆ ವಾರಸುದಾರರು ಗಾಂಧೀ ಸಾಮರಸ್ಯದ ಚಿಂತನೆಯ ಹತ್ಯಾರರಾಗಿ ಬೆಳೆಯತೊಡಗಿದರು. ಭಾರತಮಾತೆಯ ಜಾಗದಲ್ಲೀಗ ಶ್ರೀರಾಮ ಬಂದು ಕೂತಿದ್ದಾನೆ. ಪ್ರಭುತ್ವದ ಸಂಗೋಪನೆಗಾಗಿ ಎದುರಾದ ಬಿಕ್ಕಟ್ಟುಗಳನ್ನು ನಿವಾರಿಸಲು ಚಾರಿತ್ರಿಕ ತಪ್ಪುಗಳನ್ನು ಮಾಡಿದ್ದ ಶ್ರೀರಾಮ ಆ ನಂತರದಲ್ಲಿ ತನ್ನ ಕೃತ್ಯಗಳಿಗಾಗಿ ಪರಿತಪಿಸಿದವನು. ಮರಣ ಮುಖದಲ್ಲಿದ್ದ ವಾಲಿಯ ಎದುರು ಮೊಣಕಾಲೂರಿ ತಪ್ಪೊಪ್ಪಿಕೊಂಡವನು. ಆ ಶ್ರೀರಾಮನನ್ನು ಕರೆತಂದು ಇತ್ತೀಚೆಗೆ ಜೈಶ್ರೀರಾಮ್ ಘೋಷಣೆ ಕೂಗದ ಕಾರಣಕ್ಕೆ ಹಲ್ಲೆಗೀಡಾಗಿ ಶವವಾಗಿದ್ದ ಮಗನ ಪಕ್ಕ ಶೂನ್ಯ ದಿಟ್ಟಿಸುತ್ತಾ ಕೂತಿದ್ದ ಅಪ್ಪನ ಎದುರು ತಂದು ನಿಲ್ಲಿಸಬೇಕು. ಈ ತಂದೆಯ ದಿಗ್ಭ್ರಾಂತ ದೈನ್ಯಕ್ಕೆ ಶ್ರೀರಾಮ ಏನೆನ್ನಬಹುದು? ಖಂಡಿತ, ಮಗನ ಅಗಲಿಕೆಯ ನೋವಿನ ತೀವ್ರತೆಯನ್ನು ತಾಳದೆ ಮರಣಿಸಿದ ಅಪ್ಪ ದಶರಥನ ಕಣ್ಣಾಳದಲ್ಲಿ ಹೆಪ್ಪುಗಟ್ಟಿದ ಮಮತೆಯ ಸೆಳೆಯನ್ನವನಿಲ್ಲಿ ಕಾಣುತ್ತಿದ್ದನು. ಕರುಣಾಳು ರಾಘವನಿಗೆ ಖಂಡಿತ ಆ ಕಾಣ್ಕಿಯಿತ್ತು.

ಧರ್ಮೋನ್ಮಾದದ ದುರಂತವು ಎಲ್ಲೋ ಒಮ್ಮೆ ಆಕಸ್ಮಿಕವಾಗಿ ನಡೆದು ಮುಗಿದುಹೋಗುವಂತದ್ದಲ್ಲ. ಇದು ಸಹಜೀವಿಗಳನ್ನು ಭಯಗೊಳಿಸಿ ಹದ್ದುಬಸ್ತಿನಲ್ಲಿಟ್ಟುಕೊಳ್ಳಲು ನಡೆಸುವ ಆಂತರಿಕ ಯುದ್ಧ. ಈ ಕಾರ್ಯಾಚರಣೆ ದೇಶದ ವಿವಿಧ ಭಾಗಗಳಲ್ಲಿ ಏಕಕಾಲದಲ್ಲಿ ನಡೆಯುತ್ತಿರುತ್ತದೆ. ಜೈಶ್ರೀರಾಮ್ ಘೋಷಣೆ ಕೂಗಿಲ್ಲದ ಕಾರಣಕ್ಕೆ ಜಾರ್ಖಂಡ್‍ನಲ್ಲಿ ಯುವಕನ ಹತ್ಯೆಯಾಗಿದೆ. ಜಾರ್ಖಂಡ್‍ನ ಮುಸ್ಲಿಂ ಶಾಸಕರೊಬ್ಬರಿಗೆ ಈ ಘೋಷಣೆ ಕೂಗಲು ಒತ್ತಾಯಿಸುವ ವಿಡಿಯೋ ವೈರಲ್ ಆಗಿದೆ. ಕಲ್ಕತ್ತದಲ್ಲಿ ಶಿಕ್ಷಕರೊಬ್ಬರನ್ನು ರೈಲು ಪ್ರಯಾಣದಲ್ಲಿ ಹೀಗೆ ಪೀಡಿಸಲಾಗಿದೆ. ವರದಿಯಾಗಿರುವ ಘಟನೆಗಳನ್ನು ಗಮನಿಸಿದರೆ ದೇಶವೀಗ ಕುದಿಯುತ್ತಿದೆ. ದೇವರು ಧರ್ಮ ಎಂಬ ಜೀವಪ್ರೇಮದ ಸಂಕೇತಗಳನ್ನು ದ್ವೇಷದ ಕಾರಣವಾಗಿ ಬದಲಿಸುವುದು ಎಂದರೆ ಜೀವಪೋಷಕ ಜಲವನ್ನು ವಿನಾಶಕ್ಕೆ ಉದ್ದೀಪಿಸಿದಂತೆ.

ಈ ಉನ್ಮತ್ತತೆ ಎಳೆಎಳೆಯ ಯುವಕರ ಬೆನ್ನಿನ ಮೇಲೆ ‘. . . . .ಹುಲಿ ಮುಟ್ಟಿದರೆ ಬಲಿ’ ಎಂಬ ಹಿಂಸಾಶಾಸನವಾಗಿ ರಾರಾಜಿಸುತ್ತಿದೆ. ಇಂತಹ ಸಂದರ್ಭಗಳನ್ನು ತಹಬಂದಿಗೆ ತರಬೇಕಾದ ನಿಷ್ಠುರ ಕಾನೂನು ರಕ್ಷಣೆಯೂ ಕಾಣುತ್ತಿಲ್ಲ. ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ 15 ವರ್ಷದ ಬಾಲಕ ಇದೇ ಹಿಂಸೆಯಿಂದ ಆಸ್ಪತ್ರೆ ಸೇರಿ ಪೊಲೀಸರು ಬಾಲಕನ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಬಾಲಕನ ಮಾತುಗಳು ಆಸ್ಪತ್ರೆಯ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ. ಆದರೆ ಪೊಲೀಸರು ‘ಬಾಲಕ ವ್ಯತಿರಿಕ್ತ ಹೇಳಿಕೆಗಳನ್ನು ಕೊಡುತ್ತಿದ್ದಾನೆ. ಅವನೂ ಅವನ ತಾಯಿಯೂ ಒತ್ತಡಕ್ಕೆ ಮಣಿಯುತ್ತಿದ್ದಾರೆ’ ಎನ್ನುತ್ತಿದ್ದಾರೆ. ಪೊಲೀಸರ ಈ ಪಕ್ಷಪಾತ ವರ್ತನೆಯ ಕಾರಣಗಳು ಸ್ಪಷ್ಟ. ಅವರು ಆರೋಪಿಗಳ ರಕ್ಷಕರಾಗಿರುವ ಪ್ರಭುತ್ವದ ಪರವಾಗಿರಲು ಯತ್ನಿಸುತ್ತಾರೆ. ಇಂತಹ ಘಟನೆಗಳು ಯಾವ ದೇಶದ ಆಂತರಿಕ ವಿಕಾಸಕ್ಕೂ ತಕ್ಕುದಲ್ಲ. ಆದರೇನು? ಪ್ರಜಾಪ್ರಭುತ್ವವನ್ನೇ ಆರಾಣೆ-ಬಾರಾಣೆಗೆ ಮಾರಿಕೊಳ್ಳಲು ನಿಂತ ಮೇಲೆ ಅದರ ಘನತೆಯ ಮಾತೇನು?

ನಾವೀಗ ಚಲಾವಣೆಗೆ ತಂದುಕೊಂಡಿರುವುದು ಬಂಡವಾಳಶಾಹಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು. ಇದರಲ್ಲಿ ಪ್ರಜಾಪ್ರಭುತ್ವದ ಆಶಯಗಳು ಕ್ವಚಿತ್ತಾಗಿ ಆಕಸ್ಮಿಕವಾಗಿ ನಡೆಯುತ್ತವೆ. ಬಂಡವಾಳಶಾಹಿ ಹಿತಾಸಕ್ತಿಗಳೇ ಕಾರ್ಯರೂಪದಲ್ಲಿರುತ್ತವೆ. ನಮ್ಮ ಚುನಾವಣೆಗಳು ಬಹುಕೋಟಿ ಹೂಡಿಕೆಯ ಉದ್ಯಮವಾಗಿದೆ. ನಮ್ಮ ಸಂಸತ್ತುಗಳಲ್ಲಿ ಪ್ರವೇಶ ಪಡೆಯುವವರು ಕೋಟ್ಯಾಧಿಪತಿಗಳೂ, ಕ್ರಿಮಿನಲ್ ಹಿನ್ನೆಲೆಯವರೂ ಆಗಿರುವುದನ್ನು ಸಹಜ ಎಂದು ಒಪ್ಪಿಕೊಳ್ಳುತ್ತಿದ್ದೇವೆ. ಬಂಡವಾಳಪರ ರಾಜಕಾರಣ ಉಗ್ರ ಬಲಪಂಥೀಯ ರಾಷ್ಟ್ರೀಯವಾದವನ್ನು ಬೆಳೆಸುತ್ತದೆ. ಸಾದತ್ ಹಸನ್ ಮಾಂಟೋ ಕಥೆ ‘ಕಾರ್ಯಾಚರಣೆ’ ಈ ಮತೀಯ ಉನ್ಮಾದ ಮತ್ತು ಬಂಡವಾಳೋದ್ಯಮದ ಬಿಗಿತವನ್ನು ಹೇಳುತ್ತದೆ. ಈ ಕಥೆ ಹೀಗಿದೆ ‘ರಾತ್ರಿಯೆಲ್ಲ ಆ ಓಣಿ ಬೆಂಕಿಯಲ್ಲಿ ಬೆಂದುಹೋಯಿತು. ಒಂದು ಅಂಗಡಿ ಸುಡದೇ ಉಳಿದಿತ್ತು. ಬೆಳಗ್ಗೆ ಅಂಗಡಿಯ ಮುಂದಿನ ಬೋರ್ಡಿನಲ್ಲಿ ಇಲ್ಲಿ ಮನೆ ರಿಪೇರಿಯ ಸಾಮಗ್ರಿಗಳು ಮಾರಾಟಕ್ಕಿದೆ ಎಂದು ಬರೆದಿತ್ತು.’ ಮತೀಯ ಹಿಂಸೆ ಮತ್ತು ಬಂಡವಾಳದ ಬೆರಕೆಯನ್ನು ಇನ್ನೂ ಸಂಕೀರ್ಣ ರೂಪಕದಲ್ಲಿಡಲು ಸಾಧ್ಯವಿಲ್ಲ. ಇಂತಹ ಸ್ಥಿತಿಯಲ್ಲಿ ಪ್ರಜಾಪ್ರಭುತ್ವ ಉಸಿರುಗಟ್ಟುತ್ತದೆ. ‘ಜೈಶ್ರೀರಾಮ್’ ಘೋಷಣೆಯನ್ನೂ ಭಾರತದಲ್ಲಿ ಕೂಗದೆ ಪಾಕಿಸ್ತಾನದಲ್ಲಿ ಕೂಗಲು ಸಾಧ್ಯವೇ? ಎಂದು ದೇಶದ ಗೃಹಮಂತ್ರಿಗಳು ಹೇಳಲು ಸಾಧ್ಯವಾಗುತ್ತದೆ.

ವಾಲ್ಮೀಕಿ ಹೇಳುವ ರಾಮಕಥೆಯೊಂದು ಹೀಗಿದೆ. ‘ರಾಮ ಸೀತೆಯರು ವನವಾಸದ ಸೌಖ್ಯದಲ್ಲಿದ್ದ ಕಾಲ. ಅರೆ ಸಂಜೆ ಕಲ್ಲು ಬಂಡೆಯ ಮೇಲೆ ಕುಳಿತು ಹರಟೆ. ರಾಮಧನಸ್ಸು ನೆಲಕ್ಕೆ ಚುಚ್ಚಿತ್ತು. ಎದ್ದು ಹೊರಟು ಬಿಲ್ಲು ಎತ್ತಿದರೆ, ಬಿಲ್ಲಿನ ಮೊನೆಗೆ ಚುಚ್ಚಿದ್ದ ಮಂಡೂಕ ಜಟ್ಟಿಯಾಗಿ ವಿಲಗೂಡುತ್ತಿತ್ತು. ಸೀತೆ ಗಾಬರಿಯಿಂದ ಕೇಳಿದಳಂತೆ ಯಾಕೆ ಸುಮ್ಮನಿದ್ದೆ? ಕೂಗಬಾರದೆ? ಮಂಡೂಕ ವಿಷಾದದಿಂದ ಉಸುರಿತಂತೆ. ಯಾರನ್ನು ಕೂಗಲಿ? ರಾಮಧನಸ್ಸೇ ನಟ್ಟಿರುವಾಗ?’ ಈ ಘಟನೆ ಸೀತೆಗೆ ಅವಳ ಮುಂದಿನ ದಿನಗಳಲ್ಲಿ ಪದೇಪದೇ ನೆನಪಾಗುತ್ತದೆ. ರಾಮನನ್ನು ಪ್ರೀತಿಸಿದ ಭಾರತೀಯ ಮನಸ್ಸೀಗ ಈ ಸ್ಥಿತಿಯಲ್ಲಿಯೇ ಇದೆಯೇ?

ಇದೀಗ ಪ್ರತಿರೋಧವನ್ನು ಉಸುರುವುದೂ ಅಪರಾಧವಾಗಿದೆ. ‘ಜೈರಾಮ್ ಘೋಷಣೆ ಯುದ್ಧದ ಘೋಷಣೆಯಂತೆ ಬಳಕೆಯಾಗುತ್ತಿದೆ. ರಾಮನ ಹೆಸರು ಅಪವಿತ್ರಗೊಳ್ಳುತ್ತಿದೆ’ ಎಂದು ದೇಶದ 49 ಚಿಂತಕರು, ಸೃಜನಶೀಲರು ಪ್ರಧಾನಮಂತ್ರಿಯವರಿಗೊಂದು ಪತ್ರ ಬರೆದರು. ಅದರೀಗ ಅವರ ಕಳಕಳಿಯನ್ನೇ ತಪ್ಪೆಂದು ಸಾಧಿಸುವ ಪ್ರಯತ್ನ ನಡೆಯುತ್ತಿದೆ. 62 ಸೆಲೆಬ್ರಿಟಿಗಳಿಂದ ‘ಈ ಪತ್ರ ದೇಶದ್ರೋಹ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ’ ಎಂದು ಮರುಪತ್ರ ಹೋಯಿತು. ಇದರ ಆಧಾರದಿಂದ ಬಿಹಾರದ ಕೋರ್ಟಿನಲ್ಲಿ ಪ್ರಕರಣ ದಾಖಲಿಸಲಾಯಿತು. ದೇಶಪ್ರೇಮದ ನಿಜವಾದ ಆಯಾಮವನ್ನು ದ್ರೋಹವೆಂದು ತಿರುಚುವ ಸ್ಥಿತಿಯಿದು.

ಕೇರಳದ ಬಿಜೆಪಿಯವರು ತಮ್ಮ ನಾಡಿನ ಹೆಮ್ಮೆಯಾದ ಪದ್ಮವಿಭೂಷಣ ದಾದಾಸಾಹೇಬ ಫಾಲ್ಕೆ ಪ್ರಶಸ್ತಿ ಪಡೆದ ಗೋಪಾಲಕೃಷ್ಣ ಆಡೂರರಿಗೆ ಭಾರತ ಬಿಟ್ಟು ಚಂದ್ರಗ್ರಹಕ್ಕೆ ಹೋಗುವಂತೆ ಹೀನಾಯಿಸಿದರು. ಪಶ್ಚಿಮ ಬಂಗಾಳದಲ್ಲಿ ನಟ ಕೌಶಿಕ್ ಸೇನರಿಗೆ ಜೀವಬೆದರಿಕೆಯ ಕರೆಗಳು ಬಂದವು. ಏನಾಗುತ್ತಿದೆ ನಮ್ಮ ದೇಶಕ್ಕೆ? ರಾಷ್ಟ್ರಧ್ವಜದ ಕೆಳಗೆ ನಿಂತು ಜನಗಣಮನ ಹಾಡುವಾಗ ನಮ್ಮನ್ನು ನಾವು ಕೇಳಿಕೊಳ್ಳಬೇಕಿದೆ. ಈ ದುರಂತದಲ್ಲಿ ನನ್ನ ಪಾಲೆಷ್ಟು?

ಯಾವ ವ್ಯಕ್ತಿಗೂ ಯಾವ ನೆಪದಿಂದಲೂ ಇನ್ನೊಬ್ಬರ ವ್ಯಕ್ತಿ ಸ್ವಾತಂತ್ರ್ಯವನ್ನು ಅಪಹರಿಸುವ ಹಕ್ಕಿಲ್ಲ – ಎಂದಿದ್ದರು ಶಿವರಾಮ ಕಾರಂತರು. ಬೇಂದ್ರೆಯವರು ಓರಿಯೆಂಟಲ್ ಹಿಸ್ಟರಿಯ ವಿರುದ್ಧ ಜನಕಥನಕ್ಕೆ ಕಿವಿಗೊಡಿ ಎಂದಿದ್ದರು.
ಭರತಖಂಡ ಬದನಿಕಾಯಿ,
ಭರತಾ ಮಾಡಬ್ಯಾಡ ತಮ್ಮಾ
ಸುರತದ ಕಲಹ ಮೆತ್ತಬ್ಯಾಡ,
ಒಮ್ಮನವಿರದೆ ನಮ್ಮ ನಿಮ್ಮ
ಎಂದು ತಿಳಿಸಿದ್ದರು.

ನವೋದಯದ ಸಾಹಿತ್ಯದಲ್ಲಿ ದೇಶಪ್ರೇಮ ತೊಟ್ಟಿಕ್ಕುತ್ತದೆ. ದೇಶವಿಭಜನೆಯ ಹಿಂಸೆಯಲ್ಲಿ ದೇಶಪ್ರೇಮದ ಬೆಳಕಿನ ಕಿರಣದ ಶೋಧನೆಯಿದೆ. ದೇಶಪ್ರೇಮ ಮತ್ತು ಮತೀಯ ಉನ್ಮಾದಗಳು ಪರಸ್ಪರ ವಿಮುಖವಾದದೆಂಬ ತಿಳಿವಿದ್ದ ಕಾಲವದು. ಆದರೀಗ ದೇಶಪ್ರೇಮವು ಉನ್ಮಾದವನ್ನು ಉದ್ದೀಪಿಸುವ ಸರಕಾಗಿದೆ. ಅದರೊಳಗಿದ್ದ ಮತಧರ್ಮ ಪ್ರೇಮವು ಚರ್ಮಕಿತ್ತು ಹೊರಗಿಣುಕುತ್ತಿದೆ. ರಾಷ್ಟ್ರಭಕ್ತಿ–ರಾಷ್ಟ್ರ ಚಾರಿತ್ರ್ಯದ ವಿಷಯದಲ್ಲಿ ತಪ್ಪು ಕಲಿತು, ತಪ್ಪು ಬೆಳೆಸಿ, ತಪ್ಪು ವಿಜೃಂಭಿಸುತ್ತಿರುವ ವರ್ತಮಾನವಿದು ಕವಿ ಆರ್.ವಿ.ಭಂಡಾರಿಯವರ ‘ಇತಿಹಾಸ’ ಪದ್ಯ ನೆನಪಾಗುತ್ತಿದೆ.
ನೇಗಿಲ ಮೊನೆಯಿಂದ ಇತಿಹಾಸ ಕೊರೆಯಲ್ಪಟ್ಟಿತು
ಕಿರೀಟದ ವಜ್ರದ ಮೊನೆಯಿಂದ ಎಂದು ಕಲಿಸಿದರು
ಗೆಯ್ಮೆಯ ಕೈಯಿಂದ ಇತಿಹಾಸ ನಿರ್ಮಾಣವಾಯಿತು
ಆದರೆ ಪುರೋಹಿತರ ಮಂತ್ರದಿಂದ ಎಂದು ಕಲಿಸಿದರು.
ನಮ್ಮನ್ನು ತಪ್ಪಾಗಿ ಕಲಿಸಿದ ಪಾಠಗಳಿಂದ ಬಿಡುಗಡೆಗೊಂಡು, ನಿಜದ ಬೆಳಕಿನಲ್ಲಿ ಇತಿಹಾಸ -ವರ್ತಮಾನಗಳನ್ನು ಕಾಣುವ, ಸತ್ಯದ ವಿಷದ ಬಟ್ಟಲುಗಳಲ್ಲಿ ನಮ್ಮ ಪಾಲೂ ಇರಲಿ ಎಂದು ಧ್ವಜಕ್ಕೆ ನಮಿಸುವಾ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: 2ಲಕ್ಷ ಮತದಾರರಲ್ಲಿ ಬಸವನಗುಡಿಯಲ್ಲಿ ಉಳಿಯುವುದು 88 ಸಾವಿರ ಮಾತ್ರಾ?: SIR ಪರಿಷ್ಕರಣೆಯ ಆಘಾತಕಾರಿ ಲೆಕ್ಕಾಚಾರ

2023ರ ಚುನಾವಣೆಯಲ್ಲಿ ಬಸವನಗುಡಿಯಲ್ಲಿ 1.28 ಲಕ್ಷ ಮತಗಳು ಚಲಾಯಿಸಲ್ಪಟ್ಟಿದ್ದವು. ಆದರೆ ಪ್ರಸ್ತುತ SIR ಪ್ರಕ್ರಿಯೆಯಲ್ಲಿ 1.13 ಲಕ್ಷ ಜನರನ್ನು ಹೊರಗಿಟ್ಟು, ಕರಡು ಪಟ್ಟಿಯಲ್ಲಿ ಕೇವಲ 1.35 ಲಕ್ಷ ಮತದಾರರನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಇದರ...

ಕರ್ನಾಟಕ ಎಸ್ಐಆರ್: 43.81 ಲಕ್ಷ ಜನರಿಗೆ SIR ನೋಟಿಸ್: ಗಣ್ಯರ ಹೆಸರು ಸರಿಪಡಿಸುವ ಚುನಾವಣಾ ಆಯೋಗಕ್ಕೆ ಜನ-ಸಾಮಾನ್ಯರ ನೋವು ಕಾಣುತ್ತಿಲ್ಲವೇ?

ಕರ್ನಾಟಕದಲ್ಲಿ SIR ವೇಳೆ 43.81 ಲಕ್ಷ ಮತದಾರರ ಪ್ರಕರಣಗಳಿಗೆ ನೋಟಿಸ್‌ಗಳನ್ನು ಸೃಷ್ಟಿಸಲಾಗಿದ್ದು, ಅವರ ದಾಖಲೆಗಳ ಪರಿಶೀಲನೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಪೈಕಿ 23.45 ಲಕ್ಷ ಪ್ರಕರಣಗಳಲ್ಲಿ 2002ರ ಮತದಾರರ ಪಟ್ಟಿಯೊಂದಿಗೆ ಮ್ಯಾಪಿಂಗ್ ಆಗದಿರುವುದು...

ಪಿಣರಾಯಿ ವಿಜಯನ್ ವಿರುದ್ಧ ಎಫ್‌ಐಆರ್‌ಗೆ ಇಡಿ ಪತ್ರ: ಕಾನೂನು ಪರಿಶೀಲನೆ ನಡೆಸಲಾಗುವುದು ಎಂದ ಸಿಎಂ ವಿ.ಡಿ. ಸತೀಶನ್

ಆರೋಪಿತ ಸಿಎಂಆರ್‌ಎಲ್ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಐ(ಎಂ) ಹಿರಿಯ ನಾಯಕ ಪಿಣರಾಯಿ ವಿಜಯನ್ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲು ಜಾರಿ ನಿರ್ದೇಶನಾಲಯ (ಇಡಿ) ನೀಡಿರುವ ಪತ್ರವನ್ನು ಕಾನೂನುಬದ್ಧವಾಗಿ ಪರಿಶೀಲಿಸಲಾಗುವುದು, ಅದರ ನಂತರ...

‘ಸಿಇಸಿ ಜ್ಞಾನೇಶ್ ಕುಮಾರ್ ಮಗಳು’ : ನೋಯ್ಡಾ ಜಿಲ್ಲಾಧಿಕಾರಿಗೆ ಅಲಹಾಬಾದ್ ಹೈಕೋರ್ಟ್ ತಪರಾಕಿ ಬೆನ್ನಲ್ಲೇ ವಿಪಕ್ಷ ನಾಯಕರ ವಾಗ್ದಾಳಿ

ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (NSA) ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದಿದ್ದಕ್ಕಾಗಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಮಗಳು ಹಾಗೂ ನೋಯ್ಡಾ ಜಿಲ್ಲಾಧಿಕಾರಿ ಮೇಧಾ ರೂಪಮ್ ಅವರನ್ನು...

ಮಲ್ಲಿಕಾರ್ಜುನ ಖರ್ಗೆ ಸಭೆಯ ನಂತರ ‘ಶುದ್ಧೀಕರಣ’ ವಿವಾದ: ಅಪರಿಚಿತರ ವಿರುದ್ಧ ಎಫ್‌ಐಆರ್, ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್!

ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಾರ್ವಜನಿಕ ಸಭೆ ನಡೆದ ನಂತರ, ಆ ಮೈದಾನವನ್ನು 'ಶುದ್ಧೀಕರಣ' (ಶುದ್ಧೀಕರಣ ಯಜ್ಞ) ಗೊಳಿಸಿದ ವಿವಾದಾತ್ಮಕ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ದ್ವಾನಿಯ ಕೊತ್ವಾಲಿ...

ದೆಹಲಿ ಮತದಾರರ ಪಟ್ಟಿಗೆ ರಾಘವ್ ಚಡ್ಡಾ ಹೆಸರು ಸೇರ್ಪಡೆ; ಸೂಕ್ತ ಪ್ರಕ್ರಿಯೆ ಅನುಸರಿಸಿಲ್ಲ ಎಂದು ಎಎಪಿ ಆರೋಪ

ರಾಷ್ಟ್ರ ರಾಜಧಾನಿಯ ಮತದಾರರ ಪಟ್ಟಿಯ ಪ್ರಸ್ತುತ ನಡೆಯುತ್ತಿರುವ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಅಡಿಯಲ್ಲಿ, ಪಂಜಾಬ್‌ನ ಬಿಜೆಪಿ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಹೆಸರನ್ನು ದೆಹಲಿಯ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಚುನಾವಣಾ...

ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ವೇದಿಕೆ ‘ಶುದ್ಧೀಕರಣ’ : 29 ದಿನಗಳ ನಂತರ ಎಫ್‌ಐಆರ್ ದಾಖಲು

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಉತ್ತರಾಖಂಡದ ಹಲ್ದ್ವಾನಿಯ ವೇದಿಕೆಯೊಂದರಲ್ಲಿ 'ಶುದ್ಧೀಕರಣ' ನಡೆದ ಇಪ್ಪತ್ತೊಂಬತ್ತು ದಿನಗಳ ನಂತರ, ಪೊಲೀಸರು ಮಂಗಳವಾರ (ಸೆಪ್ಟೆಂಬರ್ 8) ಎಸ್‌ಸಿ/ಎಸ್‌ಟಿ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ...

‘ಪ್ರೊ. ಸಿಎನ್ಆರ್ ರಾವ್‌ ಅವರಿಗೆ ನೋಟಿಸ್ ಕೊಟ್ಟಿಲ್ಲ..’; ಚುನಾವಣಾ ಆಯೋಗದ ಸ್ಪಷ್ಟನೆ

ಕರ್ನಾಟಕದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ವೇಳೆ ಹೆಸರಿನ ಕಾಗುಣಿತದಲ್ಲಿನ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ, ದೇಶದ ಪ್ರಸಿದ್ಧ ವಿಜ್ಞಾನಿಗಳಲ್ಲಿ ಒಬ್ಬರಾದ ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್ ಅವರಿಗೆ ತಮ್ಮ ಗುರುತನ್ನು ಸಾಬೀತುಪಡಿಸಲು...

‘ಬಂಗಾಳಿಗಳು ಮೀನು ಇಲ್ಲದೆ ಬದುಕಲು ಸಾಧ್ಯವಿಲ್ಲ’; ಆಹಾರ ಪದ್ಧತಿ ನಿರ್ಧಾರ ಬಿಜೆಪಿ ಕೆಲಸವಲ್ಲ: ಬಿಜೆಪಿ ಮುಖ್ಯಸ್ಥ ಸಮಿಕ್ ಭಟ್ಟಾಚಾರ್ಯ 

ಕೊಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ದುರ್ಗಾ ಪೂಜೆ ಮತ್ತು ನವರಾತ್ರಿ ಆಚರಣೆಗಳ ಸಂದರ್ಭದಲ್ಲಿ ಆಹಾರ ಪದ್ಧತಿಯ ಕುರಿತು ಕೆಲವು ಧಾರ್ಮಿಕ ನಾಯಕರು ಹಾಗೂ ವಿಶ್ವ ಹಿಂದೂ...

ಮತದಾರ ಇರುವುದು ವಿದೇಶದಲ್ಲಿ, ಆದರೆ ವಿಚಾರಣೆ ನಡೆಯುತ್ತಿರುವುದು ಇಲ್ಲಿ: ಕರ್ನಾಟಕ SIR ತಂದಿಟ್ಟ ಧರ್ಮಸಂಕಟ

ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದ ಅನೇಕ ಅನಿವಾಸಿ ಕನ್ನಡಿಗರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹೆಸರಿನಲ್ಲಿನ ವ್ಯತ್ಯಾಸ, ವಯಸ್ಸಿನ ವ್ಯತ್ಯಾಸ...