Homeಮುಖಪುಟಸೆಂಟ್ರಲ್ ವಿಸ್ತಾ: ಭವನ ಪ್ರಜಾಪ್ರಭುತ್ವದ್ದು, ಭಾವನೆ ರಾಜಪ್ರಭುತ್ವದ್ದು

ಸೆಂಟ್ರಲ್ ವಿಸ್ತಾ: ಭವನ ಪ್ರಜಾಪ್ರಭುತ್ವದ್ದು, ಭಾವನೆ ರಾಜಪ್ರಭುತ್ವದ್ದು

- Advertisement -
- Advertisement -

“ಪ್ರಶ್ನೆ ಭವನದ್ದಲ್ಲ, ಭಾವನೆಯದ್ದು”. ನನಗೆ ಸಂಸತ್ತಿನ ಹೊಸ ಭವನದ ಬಗ್ಗೆ ಪ್ರತಿಕ್ರಿಯೆ ನೀಡಬೇಕೆಂದು ಕೇಳಿದಾಗ, ನನ್ನ ಗಂಟಲಿನಿಂದ ಹೊರಬಂದದ್ದು ಇದೊಂದೇ ಮಾತು.

ಭಾರತೀಯ ಸಂಸತ್ತಿಗೆ ಹೊಸದೊಂದು ಕಟ್ಟಡ ಬೇಕಿತ್ತೋ ಇಲ್ಲವೋ ಎಂಬುದು ಪ್ರಶ್ನೆ ಅಲ್ಲ. ಹಳೆಯ ಕಟ್ಟಡವು ಈಗ ಕಾರ್ಯ ನಿರ್ವಹಿಸಲು ಸೂಕ್ತವಾಗಿಲ್ಲ ಹಾಗೂ ಹೊಸ ಕಾಲದ ಅಗತ್ಯಗಳಿಗೆ ಅನುಗುಣವಾಗಿಲ್ಲ ಎಂದು ಹಲವಾರು ಸಂಸದರು ಹೇಳಿದ್ದರು. ನಾನಾದರೋ, ಈಗಲೂ ಮಿತವ್ಯಯಿ ಮನೋಭಾವದವನು, ಯಾವಾಗಲೂ ದುಂದುಗಾರಿಕೆ ತಪ್ಪಿಸಲು ಪ್ರಯತ್ನಿಸುತ್ತಿರುತ್ತೇನೆ. ಹಳೆಯ ಕಟ್ಟಡ ರಿಪೇರಿ ಮಾಡಿ ನವೀಕರಿಸಬಹುದಿತ್ತು ಎಂದು ನನಗೆ ಅನಿಸುತ್ತಿತ್ತು. ಹೇಗೂ ಬಡಜನರ ಈ ಪ್ರಜಾಪ್ರಭುತ್ವದ ಪ್ರತೀಕವಾಗಿ ಯಾವುದೇ ಒಂದು ಅತ್ಯಂತ ಭವ್ಯವಾದ ಕಟ್ಟಡ ಇರುವ ವಿಷಯವನ್ನು ಅರಗಿಸಿಕೊಳ್ಳುವುದು ಕಷ್ಟವೇ. ಆದರೆ ನಾನು ಎಂದೂ ಈ ಕಟ್ಟಡವನ್ನು ಬಳಸಿದವನಲ್ಲವಾದ್ದರಿಂದ, ಅಲ್ಲಿ ಪ್ರತಿದಿನ ಹೋಗುವ ಸಂಸದರ ಮಾತು ಸರಿ ಇರಬಹುದು. ಹೊಸದೊಂದು ಭವನವೊಂದೇ ಪರ್ಯಾಯವಾಗಿರಬಹುದು. ಮೊದಲಿನ ಭವನಕ್ಕಿಂತ ಈ ಹೊಸ ಭವನವೇ ಚೆನ್ನಾಗಿರಬಹುದು. ಇದು ನಿಸ್ಸಂಶಯವಾಗಿಯೂ ಸೌಲಭ್ಯಗಳು ಮತ್ತು ತಂತ್ರಜ್ಞಾನದೊಂದಿಗೆ ಸಜ್ಜಾಗಿರುತ್ತದೆ. ಆದರೆ ಇದು ಅಸಲಿ ಪ್ರಶ್ನೆಯಲ್ಲ. ಪ್ರಶ್ನೆ ಇರುವುದು, ಈ ಹೊಸ ಭವನ ಯಾವ ಭಾವನೆಯನ್ನು ಪ್ರತಿನಿಧಿಸುತ್ತಿದೆ ಎಂಬುದು.

ಸರಕಾರಿ ಮತ್ತು ಭಟ್ಟಂಗಿ ಜನರ ಮಾತು ಕೇಳಿದರೆ, ಸಂಸತ್ತಿನ ಈ ಹೊಸ ಭವನವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಶಕ್ತಿಯ ಭವ್ಯ ಪ್ರತೀಕವಾಗಿದೆ. ಸ್ವಾಭಾವಿಕವಾಗಿಯೇ ವಿರೋಧ ಪಕ್ಷಗಳು ಈ ಹೇಳಿಕೆಗಳನ್ನು ಒಪ್ಪುತ್ತಿಲ್ಲ. ಕಳೆದ 9 ವರ್ಷಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಾಧನೆಗಳು ಏನೇ ಇದ್ದರೂ, ಅವರ ಸಮರ್ಥಕರು ಕೂಡ ಮೋದಿಯವರು ಪ್ರಜಾಸತ್ತಾತ್ಮಕ ಪ್ರತಿಷ್ಠೆ ಮತ್ತು ಸಂಸದೀಯ ಪರಂಪರೆಗಳಿಗೆ ಗೌರವ ನೀಡಿದ್ದಾರೆ ಎಂದು ಹೇಳಲು ಸಂಕೋಚಪಟ್ಟುಕೊಳ್ಳುತ್ತಾರೆ. ಅವರ ಕಾರ್ಯಾವಧಿಯಲ್ಲಿ ಸಂಸತ್ತಿನ ಕಲಾಪಗಳ ಅವಧಿ ಕಿರಿದಾದವು, ಯಾವುದೇ ಚರ್ಚೆಯಿಲ್ಲದೇ ಜಾರಿಗೊಳಿಸಲಾದ ಕಾನೂನುಗಳ ಸಂಖ್ಯೆ ಹೆಚ್ಚಿತು. ಮೊದಲ ಬಾರಿ ರಾಜ್ಯಸಭೆಯಲ್ಲಿ ಮತದಾನ ಮಾಡದೇ ಕಾನೂನುಗಳನ್ನು ಜಾರಿಗೊಳಿಸಲಾಯಿತು. ಮೊದಲ ಬಾರಿ ಬಜೆಟ್ ಮತ್ತು ವಿತ್ತೀಯ ಮಸೂದೆಗಳ ನೆಪದಲ್ಲಿ ಸಾಮಾನ್ಯ ಕಾನೂನುಗಳನ್ನು ಮೇಲ್ಮನೆಯಿಂದ ಬೈಪಾಸ್ ಮಾಡಲಾಯಿತು. ಮೊದಲ ಬಾರಿ ವಿರೋಧ ಪಕ್ಷದ ನಾಯಕರು ಮಾತನಾಡುವ ಸಮಯದಲ್ಲಿ ಕ್ಯಾಮರಾಗಳನ್ನು ಬಂದ್ ಮಾಡಿಸಲಾಯಿತು, ಅವರ ಮೈಕ್‌ಗಳೂ ಬಂದ್ ಆದವು. ಮೊದಲ ಬಾರಿ ಆಡಳಿತಾರೂಢ ಪಕ್ಷವೇ ಹುಯಿಲೆಬ್ಬಿಸಿ ಸಂಸತ್ತಿನ ಕಾರ್ಯಕಲಾಪವನ್ನು ಬಂದ್ ಮಾಡಿಸಿತು. ಮೊದಲ ಬಾರಿ ವಿರೋಧ ಪಕ್ಷದ ಪ್ರಮುಖ ಸಂಸದನ ಸದಸ್ಯತ್ವ ರದ್ದುಪಡಿಸುವ ಆಟ ಆಡಲಾಯಿತು. ಹಾಗಾಗಿ, ಯಾವ ಸಂಸತ್ತಿನ ಹಿರಿಮೆ ಕುಸಿಯುತ್ತಿದೆಯೋ, ಅದಕ್ಕಾಗಿ ಭವ್ಯ ಭವನದ ನಿರ್ಮಾಣವು ಪ್ರಶ್ನೆಗಳನ್ನು ಹುಟ್ಟುಹಾಕುವುದು ಸ್ವಾಭಾವಿಕವಾಗಿದೆ.

ಭವನದ ಉದ್ಘಾಟನೆಯೊಂದಿಗೆ ಸಂಬಂಧಿಸಿದ ವಿವಾದವನ್ನು ಇದೇ ಬೆಳಕಿನಲ್ಲಿ ನೋಡಬೇಕಿದೆ. ಹಾಗೆ ನೋಡಿದರೆ, ಉದ್ಘಾಟನೆಯು ರಾಷ್ಟ್ರಪತಿಯ ಕೈಯಿಂದಲೇ ಆಗಬೇಕು ಎಂಬ ಕಡ್ಡಾಯವೇನಿಲ್ಲ. ಹಾಗೆಯೇ, 26ನೆಯ ಜನವರಿಯಂದು ನಡೆಯುವ ಪರೇಡ್‌ನ ಸಲಾಮಿ/ಗೌರವವಂದನೆ ರಾಷ್ಟ್ರಪತಿಗಳೇ ಸ್ವೀಕರಿಸಬೇಕು ಎಂತಲೂ ಎಲ್ಲಿಯೂ ಬರೆದಿಲ್ಲ. ಇವೆಲ್ಲ ಪ್ರಜಾಪ್ರಭುತ್ವದ ಸಂಪ್ರದಾಯಗಳು ಹಾಗೂ ನಿಸ್ಸಂದೇಹವಾಗಿ ಈ ಬಾರಿ ಆ ಗೌರವದ ಉಲ್ಲಂಘನೆಯಾಗಿದೆ. ವಿರೋಧ ಪಕ್ಷಗಳು ಈ ಉದ್ಘಾಟನಾ ಸಮಾರಂಭವನ್ನು ಬಾಯ್ಕಾಟ್ ಮಾಡುವ ನಿರ್ಧಾರವನ್ನು ಮುಂಚೆಯೇ ತೆಗೆದುಕೊಂಡಿರುವ ಸಾಧ್ಯತೆಯೂ ಇದೆ ಹಾಗೂ ಈ ತಾಂತ್ರಿಕ ಆಕ್ಷೇಪಣೆಯನ್ನೂ ಮಾಡಿರಬಹುದು; ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಈ ನೂತನ ಸಂಸತ್ತಿನಲ್ಲಿ ನಡೆಯಲಿದ್ದ ಆಚರಣೆಗಳನ್ನು ತಮ್ಮ ವ್ಯಕ್ತಿಗತ ಇಮೇಜ್ ಕಟ್ಟಿಕೊಳ್ಳಲು ಬಳಸಲು ಬಯಸಿದ್ದರು ಹಾಗೂ ಆ ಫೋಟೋದಲ್ಲಿ ಅಥವಾ ಚಿತ್ರಣದಲ್ಲಿ ಬೇರೆ ಯಾರೂ, ಅವರು ಮಹಾಮಹಿಮ ರಾಷ್ಟ್ರಪತಿಯೇ ಆಗಿರಲಿ, ಯಾರೂ ಅಡ್ಡಬರುವುದು ಅವರಿಗೆ ಇಷ್ಟವಿರಲಿಲ್ಲ ಎಂಬುದೂ ನಿಚ್ಚಳ ಸತ್ಯ. ನಿನ್ನೆಯ ತನಕ ಯಾವ ಮೊದಲ ಆದಿವಾಸಿ ಮಹಿಳಾ ರಾಷ್ಟ್ರಪತಿಯನ್ನು ಇಡೀ ದೇಶದ ಹೆಮ್ಮೆಯ ಪ್ರತೀಕ ಎಂದು ಬಿಂಬಿಸಲಾಗುತ್ತಿತ್ತೋ, ಅವರನ್ನು ಈ ಐತಿಹಾಸಿಕ ಸಂದರ್ಭದಲ್ಲಿ ಮೂಲೆಗುಂಪು ಮಾಡುವ ಈ ಕೆಲಸವು ಒಂದು ಪ್ರಶ್ನೆಯನ್ನು ಹುಟ್ಟುಹಾಕುತ್ತದೆ; ಈ ಸರಕಾರಕ್ಕೆ ಭಾರತದ ಪ್ರಜಾಸತ್ತಾತ್ಮಕ ಇತಿಹಾಸದಿಂದ ಏನಾದರೂ ತೊಂದರೆ ಇದೆಯೇ?

ಇದನ್ನೂ ಓದಿ: ‘ಹಳೆಯ’ ಸಂಸತ್ ಭವನದ ಗತವೈಭವದ ಕುರಿತು ಒಂದಿಷ್ಟು

ಈ ಸಮಾರಂಭಕ್ಕೆ ಸಂಬಂಧಿಸಿದ ಅನೇಕ ಪ್ರತೀಕಗಳು ಸರಕಾರದ ನಿಯತ್ತಿನ ಮೇಲೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಇದನ್ನು ವಿನಾಯಕ ದಾಮೋದರ ಸಾವರ್ಕರ್‌ನ ಜನ್ಮದಿನ ಮೇ, 26ರಂದು ಆಯೋಜಿಸಿರುವುದು ಒಂದು ಆಳವಾದ ಸೂಚಕವಾಗಿದೆ. ನೆನಪಿಡಿ ಸಾವರ್ಕರ್ ಪ್ರಜಾಪ್ರಭುತ್ವದ ಬೆಂಬಲಿಗರಾಗಿದ್ದಿಲ್ಲ, ಅವರು ಹಿಟ್ಲರ್ ಮತ್ತು ಮುಸೊಲಿನಿಯ ಪ್ರಶಂಸಕರಾಗಿದ್ದರು. ಈ ಸಂದರ್ಭದಲ್ಲಿ ಧರ್ಮಗುರುಗಳ ಉಪಸ್ಥಿತಿ ಹಾಗೂ ಸ್ವಯಂ ಒಂದು ಧಾರ್ಮಿಕ ಸಮುದಾಯದ ಆಚರಣೆಯನ್ನು ಬಳಸಿರುವುದು ಭಾರತದ ಜಾತ್ಯತೀತ ಸ್ವರೂಪಕ್ಕೆ ಹೊಂದಿಕೆಯಾಗುವುದಿಲ್ಲ. ಸೆಂಗೋಲ್ ರೂಪದಲ್ಲಿರುವ ರಾಜದಂಡವನ್ನು ವಸ್ತುಸಂಗ್ರಹಾಲಯದಿಂದ ಹೊರತಂದು ಅದಕ್ಕೆ ಪೌರಾಣಿಕ ಮಹತ್ವ ನೀಡಿ, ಅದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯ ಕೈಗೆ ಅರ್ಪಿಸುವುದು, ಇವೆಲ್ಲ ಈ ಸಮಾರಂಭಕ್ಕೆ ರಾಜ್ಯಾಭಿಷೇಕದ ಸ್ವರೂಪ ನೀಡುತ್ತವೆ, ಪ್ರಜಾಪ್ರಭುತ್ವದ ಬದಲಿಗೆ ರಾಜತಂತ್ರದ ಇಮೇಜ್ ಸೃಷ್ಟಿಸುತ್ತವೆ.

ಒಂದು ವೇಳೆ ಮೇ 28ರಂದು ಘಟಿಸಿದ ಈ ಅಪೂರ್ವ ಘಟನೆಯ ಭಾವನೆಯನ್ನು ತಿಳಿದುಕೊಳ್ಳುವಲ್ಲಿ ಇನ್ನೂ ಯಾವುದೇ ಸಂದೇಹ ಬಾಕಿ ಇದ್ದರೆ, ಅದನ್ನು ಮಹಿಳಾ ಕುಸ್ತಿಪಟುಗಳೊಂದಿಗೆ ಆದ ಅನುಚಿತ ವರ್ತನೆಯು ಪೂರ್ಣಗೊಳಿಸಿತು. ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದು ಪ್ರಜಾಪ್ರಭುತ್ವದ ಜೀವವಿದ್ದಂತೆ. ಪ್ರಜಾಪ್ರಭುತ್ವದ ಮಂದಿರದ ಉದ್ಘಾಟನೆಯ ಸಂದರ್ಭದಲ್ಲಿ ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವುದು ಆ ಮಂದಿರವನ್ನು ಮೈಲಿಗೆ ಮಾಡಿದಂತೆ. ಇಂತಹ ಅನುಚಿತ ವರ್ತನೆ ಯಾವ ಪ್ರಜೆಯೊಂದಿಗೂ ಆಗಬಾರದಿತ್ತು, ಆದರೆ ರಾಷ್ಟ್ರೀಯ ಹೆಮ್ಮೆಯ ಪ್ರತೀಕವಾದ ಇಂತಹ ಒಲಿಂಪಿಕ್ ಆಟಗಾರರೊಂದಿಗೆ ಹೀಗೆ ಮಾಡುವುದು ಅಧಿಕಾರದ ನಿರಂಕುಶತೆಯನ್ನು ಪರಿಚಯಿಸುತ್ತದೆ. ಅದೂ ಕೂಡ ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಒಬ್ಬ ನಾಯಕನನ್ನು ಉಳಿಸಲು. ಮಹಿಳಾ ಕುಸ್ತಿಪಟುಗಳನ್ನು ಪೊಲೀಸರು ಎಳೆದುಕೊಂಡು ಹೋಗುತ್ತಿರುವ ಚಿತ್ರಣಗಳು ವಿಶ್ವದಾದ್ಯಂತ ಭಾರತೀಯ ಪ್ರಜಾಪ್ರಭುತ್ವದ ಹೆಸರನ್ನು ಕಳಂಕಿತಗೊಳಿಸಿವೆ.

ದುರಹಂಕಾರಿ ಸರ್ವಾಧಿಕಾರಿಗಳು ವಿರಾಟವಾದ ಸ್ಮಾರಕ ಮತ್ತು ಭವ್ಯ ಭವನಗಳನ್ನು ನಿರ್ಮಿಸುವ ಶೋಕಿ ಹೊಂದಿರುತ್ತಾರೆ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಯಾವ ಸಂಸದರು ಕೇವಲ ರಬ್ಬರ್ ಸ್ಟಾಂಪ್ ಆಗಿರುತ್ತಾರೋ, ಸಾಮಾನ್ಯವಾಗಿ ಅವರ ಭವನಗಳೂ ತುಂಬಾ ಭವ್ಯವಾಗಿರುತ್ತವೆ. ಆದರೆ ಇತಿಹಾಸ ಮತ್ತೊಂದನ್ನೂ ನೆನಪಿಸುತ್ತದೆ, ಕೊನೆಯಲ್ಲಿ ಜನರ ಭಾವನೆಗಳು ಆಡಳಿತದಲ್ಲಿರುವವರ ಭಾವನೆಗಳಿಗಿಂತಲೂ ಪ್ರಬಲವೆಂದು ಸಾಬೀತಾಗಿದೆ ಎಂದು. ಒಂದು ವೇಳೆ ಭಾರತೀಯ ಪ್ರಜಾಪ್ರಭುತ್ವವು ಬ್ರಿಟಿಷರಿಂದ ನಿರ್ಮಿಸಲಾದ ಸಂಸತ್ತಿನ ಭವನವನ್ನು ಪ್ರಜಾಸತ್ತಾತ್ಮಕ ಭಾವನೆಗಳಿಂದ ತುಂಬಿಸಲು ಸಾಧ್ಯವಾಗಿದೆಯೆಂದರೆ, ಸಂಸತ್ತಿನ ಹೊಸ ಭವನದ ಮೇಲೆ ಸ್ಥಾಪಿಸಲಾಗಿರುವ ಇಂದಿನ ಆಡಳಿತಗಾರರ ಭಾವನೆ ಹೆಚ್ಚು ಕಾಲ ಉಳಿಯುವುದಿಲ್ಲ ಎಂಬುದರ ಮೇಲೆಯೂ ಭರವಸೆ ಇರಿಸಬೇಕಾಗುತ್ತದೆ. ನಿರಂಕುಶ ಆಡಳಿತದ ಉದ್ದೇಶಗಳನ್ನು ಸೋಲಿಸಿ ಪ್ರಜಾಪ್ರಭುತ್ವ ಗೆಲ್ಲಲಿದೆ.

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ಸ್ವರಾಜ್ ಇಂಡಿಯಾ ಸಂಸ್ಥಾಪಕರಲ್ಲೊಬ್ಬರು, ರಾಜಕೀಯ ಚಿಂತಕರು. ಪ್ರಸ್ತುತ ರಾಜಕೀಯ ಸಂಗತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರ ಬಜೆಟ್ 2026: ಅಪರೂಪದ ಭೂಮಿಯ ಕಾರಿಡಾರ್‌ನಿಂದ ಹೈಸ್ಪೀಡ್ ರೈಲಿನವರೆಗೆ: ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಕೇಂದ್ರ ಬಜೆಟ್ ನಲ್ಲಿ ಸಿಕ್ಕಿದ್ದೇನು?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಲೋಕಸಭೆಯಲ್ಲಿ ತಮ್ಮ ಸತತ 9 ನೇ ಬಜೆಟ್ ಅನ್ನು ಮಂಡಿಸಿದ್ದಾರೆ. ಈ ಬಜೆಟ್ ನಲ್ಲಿ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಂತಹ ಚುನಾವಣೆ...

ಬಲೂಚಿಸ್ತಾನ: ಭದ್ರತಾ ಕಾರ್ಯಾಚರಣೆಯಲ್ಲಿ 15 ಪಾಕ್ ಸೈನಿಕರು, 92 ಭಯೋತ್ಪಾದಕರು ಸಾವು

ಬಲೂಚಿಸ್ತಾನ ಪ್ರಾಂತ್ಯದ ಸುಮಾರು 12 ಸ್ಥಳಗಳಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಕನಿಷ್ಠ 15 ಪಾಕಿಸ್ತಾನಿ ಸೈನಿಕರು ಮತ್ತು 92 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನಿ ಸೇನೆ ತಿಳಿಸಿರುವುದಾಗಿ ಪಿಟಿಐ ವರದಿ...

ಕೇಂದ್ರ ಬಜೆಟ್ 2026 | ಯಾವುದು ಅಗ್ಗ ಮತ್ತು ಯಾವುದು ದುಬಾರಿ..? 

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ (ಫೆಬ್ರವರಿ 1, 2026) ತಮ್ಮ ಒಂಬತ್ತನೇ ಬಜೆಟ್ ಮಂಡಿಸಿದ್ದಾರೆ. ಈ ವರ್ಷದ (2026-27 ಹಣಕಾಸು) ಬಜೆಟ್ ತೀವ್ರಗೊಳ್ಳುತ್ತಿರುವ ಜಾಗತಿಕ ವ್ಯಾಪಾರ ಉದ್ವಿಗ್ನತೆ, ರೂಪಾಯಿ ಮೌಲ್ಯದಲ್ಲಿ...

ಕೇಂದ್ರ ಬಜೆಟ್ 2026| ರಕ್ಷಣಾ ಇಲಾಖೆಗೆ 7.85 ಲಕ್ಷ ಕೋಟಿ ರೂ. ಮೀಸಲು

ಕೇಂದ್ರ ಸರ್ಕಾರದ ಬಜೆಟ್ 2026 ರಲ್ಲಿ ರಕ್ಷಣಾ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಈ ವಲಯಕ್ಕೆ 7.85 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಇದು ಕಳೆದ ವರ್ಷದ 6.81 ಲಕ್ಷ ಕೋಟಿ ರೂ.ಗಳಿಗಿಂತ ಗಮನಾರ್ಹ...

‘ಭಾರತ ವೆನೆಜುವೆಲಾದ ತೈಲ ಖರೀದಿಸಲಿದೆ’ ಎಂದ ಟ್ರಂಪ್: ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

ನವದೆಹಲಿ: ಭಾರತ ಇರಾನ್ ಬದಲು ವೆನೆಜುವೆಲಾದಿಂದ ತೈಲ ಖರೀದಿಸಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಭಾನುವಾರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಮೆರಿಕದ ನಾಯಕ "ನಮ್ಮ...

ಕೇಂದ್ರ ಬಜೆಟ್ 2026: ಕ್ಯಾನ್ಸರ್ ಸೇರಿದಂತೆ ಇತರ 7 ಕಾಯಿಲೆಗಳ ಔಷಧಿ ಬೆಲೆಯಲ್ಲಿ ಇಳಿಕೆ

ಗಂಭೀರ ಖಾಯಿಲೆಗಳಿಂದ ಬಳುತ್ತಿರುವ ರೋಗಿಗಳಿಗೆ ಗಮನಾರ್ಹ ಪರಿಹಾರವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026 ರ ಬಜೆಟ್‌ನಲ್ಲಿ 17 ವಿಧದ ಕ್ಯಾನ್ಸರ್ ಮತ್ತು ಇತರ ಏಳು ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಿಗಳನ್ನು...

ಕೇಂದ್ರ ಬಜೆಟ್ 2026: ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ; ವಿದೇಶಿ ಪ್ರವಾಸದ ಟಿಸಿಎಸ್ ದರ ಶೇ.2ಕ್ಕೆ ಇಳಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಕೇಂದ್ರ ಬಜೆಟ್ 2026 ಅನ್ನು ಮಂಡಿಸಿದರು. "2025ರ ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ, ಪ್ರಸ್ತುತ ಶೇ.5 ಮತ್ತು ಶೇ.20...

ಗಾಜಾದಲ್ಲಿ ಇಸ್ರೇಲ್ ನಡೆಸಿದ ಹೊಸ ಕದನ ವಿರಾಮ ಉಲ್ಲಂಘನೆಯಲ್ಲಿ ಮಕ್ಕಳು ಸೇರಿದಂತೆ 31 ಮಂದಿ ಸಾವು

ಮೇ 2024ರ ನಂತರ ಇಸ್ರೇಲ್ ಮೊದಲ ಬಾರಿಗೆ ಈಜಿಪ್ಟ್‌ನೊಂದಿಗೆ ರಫಾ ಕ್ರಾಸಿಂಗ್ ಅನ್ನು ಮತ್ತೆ ತೆರೆಯಲು ಸಜ್ಜಾಗುತ್ತಿರುವ ಒಂದು ದಿನ ಮೊದಲು, ಅಲ್ ಜಜೀರಾ ಜೊತೆ ಮಾತನಾಡಿದ ವೈದ್ಯಕೀಯ ಮೂಲಗಳು, ಬೆಳಗಿನ ಜಾವದಿಂದ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎರಡನೇ ಪ್ರಕರಣದಲ್ಲೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ

ಕೊಲ್ಲಂ (ಕೇರಳ): ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ, ತಮ್ಮ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣದಲ್ಲಿ ಶಾಸನಬದ್ಧ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹ...

ಆಕಸ್ಮಿಕವಾಗಿ ಗಡಿ ದಾಟಿದ್ದ 7 ಭಾರತೀಯರನ್ನು ಹಸ್ತಾಂತರಿಸಿದ ಪಾಕಿಸ್ತಾನ

2023 ರ ಪ್ರವಾಹದ ಸಮಯದಲ್ಲಿ ಅಜಾಗರೂಕತೆಯಿಂದ ಗಡಿ ದಾಟಿದ ನಂತರ ಬಂಧಿಸಲ್ಪಟ್ಟ ಏಳು ಭಾರತೀಯ ನಾಗರಿಕರನ್ನು ಪಾಕಿಸ್ತಾನ ಶನಿವಾರ ಸ್ವದೇಶಕ್ಕೆ ವಾಪಸ್ ಕಳುಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಂಜಾಬ್‌ನ ಅಟ್ಟಾರಿ ಇಂಟಿಗ್ರೇಟೆಡ್ ಚೆಕ್ ಪೋಸ್ಟ್‌ನಲ್ಲಿ...