Homeಮುಖಪುಟಈ ಸೋಲು ಕಾಂಗ್ರೆಸ್ಸಿನದೋ? ಪ್ರಗತಿಪರರದ್ದೋ?

ಈ ಸೋಲು ಕಾಂಗ್ರೆಸ್ಸಿನದೋ? ಪ್ರಗತಿಪರರದ್ದೋ?

- Advertisement -
- Advertisement -

ಇಲ್ಲಿ ಕಾಂಗ್ರೆಸ್ ಎಂದಾಗ ಕಾಂಗ್ರೆಸ್ ಮತ್ತು ಇತರ ಕೆಲವು ಪ್ರತಿಪಕ್ಷಗಳು ಎಂದೂ, ಪ್ರಗತಿಪರರು ಎಂದಾಗ ಎಡ, ಲಿಬರಲ್ ಇತ್ಯಾದಿ ಎಂದೂ ಓದಿಕೊಳ್ಳಬಹುದು. 2019ರ ಲೋಕಸಭಾ ಚುನಾವಣೆಯಲ್ಲಿ ಕಂಡುಬಂದ ಫಲಿತಾಂಶವು ಸಮಾಜದಲ್ಲಿ ಆಗಿರುವ ಬದಲಾವಣೆಯ ಪ್ರತೀಕ ಎಂಬುದು ಈಗಂತೂ ಸಾಬೀತಾಗಿದೆ. ಸೋತು ಸೊರಗಿ ಹೋಗಿರುವ ಪ್ರಧಾನ ಪ್ರತಿಪಕ್ಷವಾದ ಕಾಂಗ್ರೆಸ್‍ನ ಅಧ್ಯಕ್ಷ ರಾಹುಲ್‍ಗಾಂಧಿಯವರು ರಾಜೀನಾಮೆ ಕೊಟ್ಟರಲ್ಲದೇ, ಅದು ನಾಟಕವಲ್ಲ ಎಂದು ಸ್ಪಷ್ಟಪಡಿಸಿದರು. ಅವರು ರಾಜೀನಾಮೆ ಕೊಟ್ಟಾಗ, ಪಕ್ಷದೊಳಗೆ ಇನ್ನಷ್ಟು ಅಧಿಕಾರ ಪಡೆದುಕೊಳ್ಳಲು ಮತ್ತು ಕೆಲವು ಹಿರಿಯರನ್ನು ದೂರಲು ಮಾಡಿರುವ ನಾಟಕ ಎಂದು ಭಾವಿಸಲಾಯಿತು. ಬಿಜೆಪಿಯು ವಂಶಾಡಳಿತದ ಮೇಲೆ ನಡೆಸುತ್ತಿರುವ ದಾಳಿಯಿಂದ ತಪ್ಪಿಸಿಕೊಳ್ಳಲು ರಾಹುಲ್‍ಗಾಂಧಿ ನಿಜಕ್ಕೂ ಅಧಿಕಾರ ತ್ಯಜಿಸುತ್ತಿದ್ದಾರೆ ಎಂದೂ ಹೇಳಲಾಯಿತು. ಇವೆರಡರಲ್ಲಿ ಯಾವುದು ನಿಜ, ಯಾವುದು ಸುಳ್ಳು ಎಂಬುದು ಪತ್ತೆಯಾಗುವುದು ಕಷ್ಟ. ಗಾಂಧಿ ಕುಟುಂಬ ಅಧಿಕಾರ ಬೇಡವೆಂದರೂ, ಅವರಿಗೇ ಅಂಟಿಕೊಂಡಿರಬೇಕಾದ ಅನಿವಾರ್ಯತೆ ಕಾಂಗ್ರೆಸ್ಸಿಗಿರಬಹುದು. ಇಲ್ಲವೇ ಅವರಿಗೂ ಅಧಿಕಾರ ಅಭ್ಯಾಸವಾಗಿರುವ ಸಾಧ್ಯತೆಯೂ ಇದೆ. ಒಟ್ಟಿನಲ್ಲಿ ಸೋನಿಯಾಗಾಂಧಿ ಮತ್ತೆ ‘ಹಂಗಾಮಿ’ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದು ಎಷ್ಟು ತಾತ್ಕಾಲಿಕ ಎಂಬುದನ್ನು ಮುಂದಿನ ದಿನಗಳು ಹೇಗೂ ತಿಳಿಸುತ್ತವೆ.

ಆದರೆ, ದೇಶಕ್ಕೊಂದು ಪ್ರತಿಪಕ್ಷವೂ ಗತಿಯಿರದ ಸ್ಥಿತಿಗೆ ಭಾರತದ ಪ್ರಜಾಪ್ರಭುತ್ವ ತಲುಪಿದೆ. ಸರ್ವಾಧಿಕಾರ ಲಕ್ಷಣಗಳು ಬಹಳ ಹಿಂದೆಯೇ ಕಾಣಿಸಿತ್ತಾದರೂ, ಅದು ಜಾರಿಗೆ ಬರುತ್ತಿರುವುದು ಕಣ್ಣ ಮುಂದೆಯೇ ಕಾಣುತ್ತಿದೆ. ದೇಶದ ಆರ್ಥಿಕ ಬಿಕ್ಕಟ್ಟು ತೀವ್ರವಾಗುತ್ತಿದ್ದರೂ, ದೇಶವಾಳುತ್ತಿರುವ ಪಕ್ಷವನ್ನು ಕಾಪಾಡಲು ಹೊರಗೆ ಪಾಕಿಸ್ತಾನವಿದೆ. ಒಳಗೆ ಜಾತಿ-ಧರ್ಮ ಮತ್ತು ಹಣಬಲವಿದೆ. ಹೀಗಿರುವಾಗ ಜನರೊಳಗಿಂದಲೇ ಪ್ರತಿಪಕ್ಷವು ಹುಟ್ಟಿಕೊಳ್ಳಬೇಕು ಎಂಬ ಮಾತು ಎಷ್ಟೇ ಕ್ಲೀಷೆಯೆನಿಸಿದರೂ ಬೇರೆ ಯಾವ ಷಾರ್ಟ್‍ಕಟ್ ಸಹಾ ಇದಕ್ಕಿಲ್ಲ.

ಮುಂದಣ ದಾರಿಯನ್ನು ಕಂಡುಕೊಳ್ಳುವಾಗ, ಹಿಂದಣ ಹೆಜ್ಜೆಯನ್ನು ಒಮ್ಮೆ ತಿರುಗಿ ನೋಡಿಕೊಳ್ಳಬೇಕು. ಕಳೆದ ಎರಡು ದಶಕಗಳಿಂದ, ಅದರಲ್ಲೂ 2019ರ ಚುನಾವಣೆಯ ಸಂದರ್ಭದಲ್ಲಿ ಚಾಲ್ತಿಯಲ್ಲಿದ್ದ ಒಂದು ವಾದವನ್ನು ಒರೆಗೆ ಹಚ್ಚಿ ನೋಡುವ ಅಗತ್ಯವಿದೆ. ಬಿಜೆಪಿಗೆದುರಾಗಿ ಕಾಂಗ್ರೆಸ್ ಬಿಟ್ಟರೆ ಬೇರೆ ದಾರಿಯಿಲ್ಲವೆಂತಲೂ, ಕಾಂಗ್ರೆಸ್‍ನ ನೇತೃತ್ವದಲ್ಲಿ ಪ್ರತಿಪಕ್ಷಗಳೆಲ್ಲವೂ ಒಂದಾಗಬೇಕೆಂತಲೂ ಬಿಜೆಪಿ ವಿರೋಧಿಗಳು ಬಯಸಿದರು. ಅದೇ ಮುಳುವಾಯಿತು ಎಂದು ಹೇಳಲಾಗದಿದ್ದರೂ, ಅದು ಯಾವ ರೀತಿಯಲ್ಲೂ ಪ್ರಯೋಜನಕ್ಕೆ ಬರಲಿಲ್ಲ ಎಂಬುದಂತೂ ವಾಸ್ತವ.

ಈ ಒತ್ತಡವನ್ನು ವಿವಿಧ ರಾಜಕೀಯ ಪಕ್ಷಗಳ ಮೇಲೆ ಜನಪರವಾಗಿ ಆಲೋಚನೆ ಮಾಡುವ ಶಕ್ತಿಗಳಿಗಿಂತಲೂ ಮುಸ್ಲಿಂ ಮತಗಳ ಪ್ರಮಾಣವು ಉಂಟು ಮಾಡಿದ್ದವು. ಅದಕ್ಕೆ ಬೇಕಾದ ಆಟವನ್ನು ಒಂದಲ್ಲಾ ಒಂದು ರೀತಿಯಲ್ಲಿ ವಿವಿಧ ಪಕ್ಷಗಳು ಹೂಡಿದವು. ಆಮ್‍ಆದ್ಮಿ ಪಕ್ಷವು ಕಾಂಗ್ರೆಸ್‍ನೊಂದಿಗೆ ನಡೆಸಿದ ಮೈತ್ರಿಯ ವಿಫಲ ನಾಟಕವೂ ಅದಕ್ಕೇ ಆಗಿತ್ತು. ಬಲಶಾಲಿಯಲ್ಲದ ಕಾಂಗ್ರೆಸ್‍ಗೆ ಮತ ಹಾಕಬೇಡಿ ಎಂದು ಮಾಯಾವತಿಯವರು ಕರೆ ಕೊಟ್ಟಿದ್ದೂ ಮುಸ್ಲಿಮರಿಗೆ.

ಜನಪರವಾಗಿ ಆಲೋಚನೆ ಮಾಡುವ ಚುನಾವಣೇತರ ಶಕ್ತಿಗಳು ಮತ್ತು ಎಡಚಿಂತಕರು ಕಾಂಗ್ರೆಸ್ ಮೇಲೆ ಒಂದು ಒತ್ತಡ ಸೃಷ್ಟಿಸಲು ಯಶಸ್ವಿಯಾಗಿದ್ದರು. ಅದು ಒಂದು ಅಸಲೀ ಜನಪರ ನೆರೇಟಿವ್ ಮುಂದಿಡಬೇಕು ಮತ್ತು ಜನಸಾಮಾನ್ಯರ ನಿಜವಾದ ಕಷ್ಟಗಳಿಗೆ ಸ್ಪಂದಿಸಲು ಬೇಕಾದ ನೀತಿಗಳನ್ನು ಜಾರಿಗೆ ತರುವ ಆಶ್ವಾಸನೆ ಕೊಡಬೇಕು ಎಂಬ ಒತ್ತಡ ಕಾಂಗ್ರೆಸ್‍ನ ಮೇಲೆ ಉಂಟಾಗಿತ್ತು. ರಾಹುಲ್‍ಗಾಂಧಿ ನೇರವಾಗಿ ಅನಿಲ್ ಅಂಬಾನಿಯ ಮೇಲೆ ಪದೇ ಪದೇ ಆರೋಪಗಳನ್ನು ಮಾಡಿದ್ದಲ್ಲದೇ, ದೇಶದ 15-20 ಉದ್ದಿಮೆಪತಿಗಳ ಹಿತಕ್ಕಾಗಿ ಈ ಸರ್ಕಾರವು ನಡೆಯುತ್ತಿದೆ ಎಂದು ಯಾವ ಮುಲಾಜಿಲ್ಲದೇ ಹೇಳಿದರು. ಅದರ ಪ್ರಣಾಳಿಕೆಯಲ್ಲಿದ್ದ ನ್ಯಾಯ್, ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ಹಿಂಪಡೆತ, ರೈತರ ಸಾಲಮನ್ನಾ ಒಳಗೊಂಡಂತೆ ಹಲವು ಜನಪರ ಅಂಶಗಳು ಅದನ್ನು ಸೂಚಿಸುತ್ತಿತ್ತು. ಇವತ್ತಿನ ವ್ಯವಸ್ಥೆಯಲ್ಲಿ ಕಮ್ಯುನಿಸ್ಟ್ ಪಕ್ಷವೊಂದು ಮುಂದಿಡಬಹುದಾದ ಹಲವು ಭರವಸೆಗಳು ಅದರಲ್ಲಿದ್ದವು.

ಪಿ.ಚಿದಂಬರಂರಂತಹ ಮುಕ್ತ ಮಾರುಕಟ್ಟೆ ಪ್ರತಿಪಾದಕ, ಭಾರತದಲ್ಲಿ ಜಾಗತೀಕರಣ ನೀತಿಗಳನ್ನು ಜಾರಿಗೆ ತಂದ ಮನಮೋಹನ್‍ಸಿಂಗ್‍ರಿಂದ ಹಿಡಿದು, ಕಾಂಗ್ರೆಸ್ ಪಕ್ಷವು ತನ್ನ ಮಧ್ಯಮ ಮಾರ್ಗಕ್ಕೆ ಅಂಟಿಕೊಂಡಿರಬೇಕು ಎಂದು ಒತ್ತಾಯಿಸುವ ಕ್ವಿಂಟ್‍ನ ಸಂಪಾದಕ ರಾಘವ್ ಬೆಹ್ಲ್ ಸಹಾ ಅದನ್ನು ಸಮರ್ಥಿಸಿ ಮಾತನಾಡಿದರು. ಹೆಚ್ಚು ಕಡಿಮೆ ಒಂದು ವರ್ಷದ ಮುಂಚೆಯೇ ಪ್ರಣಾಳಿಕೆ ತಯಾರಿಯ ಪ್ರಕ್ರಿಯೆ ಆರಂಭಿಸಿದ ಕಾಂಗ್ರೆಸ್ಸು, ಅದನ್ನು ಬಿಡುಗಡೆ ಮಾಡಿದ್ದು ತಡವಾಗಿ. ಅದನ್ನು ಜನರಿಗೆ ತಲುಪಿಸಲು ಬೇಕಿದ್ದ ಸಮಯವಾಗಲೀ, ತಲುಪಿಸಬಲ್ಲ ಯಂತ್ರಾಂಗವಾಗಲೀ ಅದಕ್ಕಿರಲೇ ಇಲ್ಲ. ಒಂದು ವೇಳೆ ತಲುಪಿದ್ದರೂ ಅಂತಹ ದೊಡ್ಡ ಪ್ರಯೋಜವಾಗುತ್ತಿರಲಿಲ್ಲ ಎಂಬುದನ್ನು ಫಲಿತಾಂಶವು ಎತ್ತಿ ತೋರಿಸಿತು.

ಜನಪರವಾದ ನೆರೇಟಿವ್ ಕಟ್ಟಿಕೊಟ್ಟಿದ್ದು ತಪ್ಪಲ್ಲ. ಅದಕ್ಕಿಂತ ಒಳ್ಳೆಯದೇನಿದೆ? ಆದರೆ ಕಾಂಗ್ರೆಸ್ಸಿನ ಬಾಯಲ್ಲಿ ಜನಪರವಾದ, ಉದ್ದಿಮೆಪತಿಗಳ ವಿರುದ್ಧದ ಮಾತುಗಳನ್ನು ಜನರು ನಂಬುವುದು ಕಷ್ಟ. ಈ ಮಾತುಗಳನ್ನು ಅದರ ಸರ್ವೋಚ್ಚ ನಾಯಕ ಆಡುತ್ತಿರುವಾಗಲೇ ಅದೇ ಪಕ್ಷದಲ್ಲಿ ಸಾವಿರಾರು ಕೋಟಿ ಆಸ್ತಿ ಹೊಂದಿರುವ ಎಷ್ಟೋ ಮರಿನಾಯಕರಿದ್ದಾರೆ. ಬಿಜೆಪಿಯ ನೀತಿಗಳಿಗಿಂತ ಭಿನ್ನವಾದ ಸಾಮಾಜಿಕ ನಿಲುವನ್ನೇನೂ ಹೊಂದಿರದ ಕಾಂಗ್ರೆಸ್ ನಾಯಕರನ್ನು ಜನರು ತಮ್ಮ ಕಣ್ಣೆದುರಿಗೆ ನೋಡುತ್ತಿದ್ದರು. ಇದನ್ನೆಲ್ಲಾ ಜನರನ್ನು ಮೋಸಗೊಳಿಸಿ ಓಟು ಪಡೆಯಲು ಮಾತ್ರ ಮಾಡಬೇಕೆಂದಿದ್ದಲ್ಲಿ ಅದನ್ನು ಬಿಜೆಪಿ ಇನ್ನೂ ಅದ್ಭುತವಾಗಿ ಮಾಡುತ್ತಿತ್ತು.

ಕಾಂಗ್ರೆಸ್ಸು ಒಂದು ಮಧ್ಯಮಮಾರ್ಗದ ಪಕ್ಷವಾಗಿಯೇ ಉಳಿದುಕೊಳ್ಳುವುದು ಒಳಿತು. ದೆಹಲಿಯಿಂದ ಹಳ್ಳಿಯ ಮೂಲೆಗಳ ತನಕ ಅದಕ್ಕಿರುವ ತಳಹದಿಯನ್ನು ರಾಹುಲ್‍ಗಾಂಧಿಯೂ ಬದಲಿಸುವುದು ಸಾಧ್ಯವಿಲ್ಲ. ಹೊಸ ಅಧ್ಯಕ್ಷೆಗೂ ಸಾಧ್ಯವಿಲ್ಲ.

ಇಲ್ಲಿ ನಿಜಕ್ಕೂ ಸೋಲುಂಡಿದ್ದು ಜನಪರ ಶಕ್ತಿಗಳು. ತಮ್ಮದೇ ಪರ್ಯಾಯವನ್ನು ಸಮಾಜದಲ್ಲಿ ಮತ್ತು ಸಂಸತ್ತಿನಲ್ಲಿ ಕಟ್ಟಲು ಸಾಧ್ಯವಾಗದೇ ಈಗಾಗಲೇ ತಿರಸ್ಕೃತಗೊಂಡಿರುವ ರಾಜಕೀಯ ಪಕ್ಷಗಳೇ ಅದನ್ನು ಮಾಡಲಿ ಎಂದು ಅವು ಬಯಸಿದವು. ಫಲಿತಾಂಶದ ತಕ್ಷಣದ ಶಾಕ್‍ನಿಂದ ಹೊರಬಂದ ಮೇಲಾದರೂ ಆ ನಿಟ್ಟಿನಲ್ಲಿ ಯೋಚಿಸಿ ಸಮಾಜದಲ್ಲೂ, ಸಂಸತ್ತಿನಲ್ಲೂ ಬದಲಾವಣೆ ತರಲು ಬೇಕಾದ ಸುದೀರ್ಘ ಕಷ್ಟಕರ ಪ್ರಯಾಣಕ್ಕೆ ಮುಂದಾದರೆ ಮಾತ್ರ ದೇಶಕ್ಕೆ ಭವಿಷ್ಯವಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...