Homeಮುಖಪುಟಈಗ ಸತ್ಯ ಹೇಳುವುದು ಅತ್ಯಂತ ಕಠಿಣ ಕಾರ್ಯವಾಗಿ ಪರಿಣಮಿಸಿದೆ : ಪಿ.ಮಹಮದ್

ಈಗ ಸತ್ಯ ಹೇಳುವುದು ಅತ್ಯಂತ ಕಠಿಣ ಕಾರ್ಯವಾಗಿ ಪರಿಣಮಿಸಿದೆ : ಪಿ.ಮಹಮದ್

- Advertisement -
- Advertisement -

ದಕ್ಷಿಣ ಕನ್ನಡದ ಪಿ.ಮಹಮ್ಮದ್ ಭಾರತದ ಇಂದಿನ ಪ್ರಮುಖ ಕಾರ್ಟೂನಿಸ್ಟ್‍ಗಳಲ್ಲಿ ಒಬ್ಬರು. ಜನವಾಹಿನಿಯಲ್ಲಿ ಅವರ ಕಾರ್ಟೂನ್‍ಗಳನ್ನು ನೋಡಿ ಓದುಗರು ಅಚ್ಚರಿಗೊಂಡರು. ಕಾರ್ಟೂನ್‍ಗಳಿಗೇ ವಿಶಿಷ್ಟವಾದ ಮೊನಚು ವ್ಯಂಗ್ಯ ಹಾಗೂ ಗೆರೆಗಳ ಆಟದ ಜೊತೆಗೆ ಸ್ಪಷ್ಟ ರಾಜಕೀಯ, ಸಾಮಾಜಿಕ ನಿಲುವು ಮಹಮ್ಮದ್‍ರವರ ವಿಶೇಷತೆ. ಕಲಾವಿದರಿಗೆ ಇರಬೇಕಾದ ಸ್ವಾತಂತ್ರ್ಯದ ಕುರಿತೂ ಅವರದು ಕಟು ನಿಲುವು. ಪ್ರಜಾವಾಣಿ, ವಿಜಯಕರ್ನಾಟಕಗಳಲ್ಲಿ ಕೆಲಸ ಮಾಡಿದ ನಂತರ ಈಗ ಸಂಪೂರ್ಣ ಸ್ವತಂತ್ರರು. ಆಂದೋಲನ, ವಾರ್ತಾಭಾರತಿ ಪತ್ರಿಕೆಗಳ ಜೊತೆಗೆ ಫೇಸ್‍ಬುಕ್‍ನ ಲಕ್ಷಾಂತರ ಓದುಗರು ನಿತ್ಯ ಅವರ ಕಾರ್ಟೂನ್‍ಗೆ ಕಾಯುತ್ತಾರೆ.

ನಾವು ಬದುಕುತ್ತಿರುವ ಕಾಲ ಅನೇಕ ವಿರೋಧಾಭಾಸಗಳಿಂದ ಕೂಡಿದೆ. ಈಗ ಅಭಿವ್ಯಕ್ತಿಸಲು ಮಾಧ್ಯಮಗಳ ಕೊರತೆಯಿಲ್ಲ. ಕೈಯಲ್ಲಿ ಮೊಬೈಲ್ ಇದ್ದರಾಯ್ತು – ನಮ್ಮ ಅನಿಸಿಕೆ – ಅಭಿಪ್ರಾಯಗಳನ್ನು ಜಗತ್ತಿನ ಯಾವ ಮೂಲೆಗೂ ತಲುಪಿಸಬಹುದು. ಆದರೆ ಅದೇ ಸಾಧನವನ್ನು ಟ್ರಾಲ್‍ಗಳ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲಿಕ್ಕೂ ಬಳಸಲಾಗುತ್ತದೆ. ಗುಸುಗುಸು, ವದಂತಿ, ಚಾಡಿ ಮಾತುಗಳು ಇಂಟರ್ನೆಟ್ ಮಾಧ್ಯಮದ ಮೂಲಕ ಬಹುಮುಖ್ಯ ಅಭಿಪ್ರಾಯ ಎಂಬಂತೆ ಬಿತ್ತರಗೊಳ್ಳುತ್ತಿವೆ. ಬರೀ ವಾಟ್ಸಾಪ್ ಫಾರ್ವರ್ಡ್‍ಗಳನ್ನಷ್ಟೇ ನೋಡುವ ಮತ್ತು ಅವುಗಳನ್ನು ನಂಬುವ ದೊಡ್ಡದೊಂದು ಜನವರ್ಗ ಸೃಷ್ಟಿಯಾಗಿದ್ದು ಅವರು ಚುನಾವಣೆಗಳಲ್ಲಿ ತೆಗೆದುಕೊಳ್ಳುವ ತೀರ್ಮಾನದಿಂದಾಗಿ ಏನೆಲ್ಲಾ ಆಗಬಹುದು ಎಂಬುದನ್ನೂ ನೋಡುತ್ತಾ ಇದ್ದೇವೆ.

ಪ್ರಾಥಮಿಕ ಶಾಲೆಗಳಲ್ಲಿಯೇ ಸತ್ಯಮೇವ ಜಯತೆ ಎಂದು ಪಾಠ ಕೇಳುತ್ತಾ ಬಂದಿದ್ದೇನೆ. ಆದರೆ ಈಗ ಸತ್ಯ ಹೇಳುವುದು ಅತ್ಯಂತ ಕಠಿಣ ಕಾರ್ಯವಾಗಿ ಪರಿಣಮಿಸಿದೆ. ಮೊದಲೆಲ್ಲ ಸತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳು ಹೇಳುವವರನ್ನು ನೋಡಿದ್ದೆವು. ಈಗ ಸತ್ಯದ ತಲೆಯನ್ನೇ ಹಾರಿಸಿ ಸುಳ್ಳು ಹೇಳಲಾಗುತ್ತಿದೆ.

ವೃತ್ತಿಪರ ಕಾರ್ಟೂನಿಸ್ಟ್ ಆಗಿ ಕೆಲಸ ಮಾಡುತ್ತಿರುವ ನನಗೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿ ಎಂದರೆ ಏನು ಎಂದು ನನ್ನ ವೃತ್ತಿಜೀವನದ ಮೂವ್ವತ್ತು ವರ್ಷಗಳಲ್ಲಿ ಚೆನ್ನಾಗಿ ಮನದಟ್ಟಾಗಿದೆ. ಶಾ ಬಾನು ವಿವಾದ, ಬಾಬರಿ ಮಸೀದಿ ಧ್ವಂಸ ಸಂದರ್ಭಗಳಲ್ಲಿ ನಾನು ರಚಿಸಿದ ಕಾರ್ಟೂನುಗಳಿಗೆ ತೀಕ್ಷ್ಣವಾದ ಪ್ರತಿಕ್ರಿಯೆಗಳನ್ನು ಎದುರಿಸಿದ್ದೇನೆ. ಆದರೆ ಅವುಗಳಿಂದ ನಾನು ಮತ್ತು ನನ್ನಂಥ ಕಾರ್ಟೂನಿಸ್ಟರ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಶಕ್ತಿಗೆ ಏನೂ ತೊಂದರೆಯಾಗಿರಲಿಲ್ಲ. 2002ರ ಗುಜರಾತ್ ನರಮೇಧ ನಡೆದಾಗಲೂ ನಾವು ನಮ್ಮ ಮಾಧ್ಯಮವನ್ನು ಬಳಸಿಕೊಂಡು ಆ ಘಟನೆಗಳ ಬಗ್ಗೆ ಓದುಗರಿಗೆ ತಿಳಿಸಬೇಕಾದ್ದನ್ನು ತಿಳಿಸಿದ್ದೆವು.

ಆದರೆ 2014ರ ನಂತರದ ಸನ್ನಿವೇಶ ಸಂಪೂರ್ಣ ಭಿನ್ನವಾಗಿದೆ. ಒಂದು ನಿರ್ದಿಷ್ಟ ರಾಜಕೀಯ ನಾಯಕನ ವಿರುದ್ಧವಾದ ಕಾರ್ಟೂನ್ ರಚಿಸಿದರೆ ರಚಿಸಿದಾತನ ವಿರುದ್ಧ ‘ಟ್ರೋಲ್’ ಕಾಲಾಳುಗಳು ಮುಗಿಬೀಳುತ್ತಾರೆ. ಆತಂಕದ ವಿಷಯವೆಂದರೆ ಈ ಟ್ರೋಲ್‍ಗಳನ್ನು ದುಡ್ಡುಕೊಟ್ಟು ಈ ಉದ್ದೇಶಕ್ಕಾಗಿಯೇ ಇಟ್ಟುಕೊಳ್ಳಲಾಗುತ್ತದೆಯಂತೆ! ಇಂಥದಕ್ಕೆ ಮಣಿಯದವರ ಕುಟುಂಬ ಸದಸ್ಯರ ಮೇಲೇ ದೈಹಿಕ ದಾಳಿ ನಡೆಸುವ ಬೆದರಿಕೆ ಹಾಕಲಾಗುತ್ತದೆ. ಇವುಗಳನ್ನೆಲ್ಲ ಎದುರಿಸಿಯೂ ತಾನು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಿಟ್ಟುಕೊಡಲಾರೆ ಎಂದು ಹೇಳಲು ಸಾಕಷ್ಟು ಗಟ್ಟಿಯಾದ ಗುಂಡಿಗೆಯೇ ಬೇಕು. ಆದರೆ ಇಂಥ ಗುಂಡಿಗೆಯವರಿದ್ದರೂ ಅವರಿಗೆ ಮುಕ್ತವಾದ ಕೆಲಸ ಮಾಡಲು ಅವಕಾಶ ನೀಡಬೇಕಾದ ಮಾಧ್ಯಮ ಸಂಸ್ಥೆಗಳಿಗೇ ಧೈರ್ಯದ ಕೊರತೆಯಿರುತ್ತದೆ. ಕಾರ್ಪೊರೇಟ್ ಮಾಧ್ಯಮಗಳ ಈ ಕಾಲಘಟ್ಟದಲ್ಲಿ ಸರಕಾರವನ್ನು ಎದುರುಹಾಕಿಕೊಳ್ಳಲು ಯಾರೂ ತಯಾರಿಲ್ಲ.

ಪರಿಸ್ಥಿತಿ ಹೀಗಿರುವಾಗ ನನ್ನಂಥ ಸ್ಥಳೀಯ ಭಾಷೆಗಳಲ್ಲಿ ಕೆಲಸ ಮಾಡುವ ಕಾರ್ಟೂನಿಸ್ಟರಿಗೆ ಜೀವನ ನಿರ್ವಹಣೆಗಾಗಿ ದುಡಿಯುವುದೋ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯಲಿಕ್ಕಾಗಿ ದುಡಿಯುವುದೋ ಎನ್ನುವುದು ಅಕ್ಷರಶಃ ಜೀವನ್ಮರಣದ ಪ್ರಶ್ನೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಅಕ್ಷರಶಃ ಜೀವನ್ಮರಣದ ಪ್ರಶ್ನೆ! ನಿಮ್ಮ ಮಾತು ನೂರರಷ್ಟು ನಿಜ. ಆದರೆ, ನಮ್ಮಂಥವರು ನಿಮ್ಮ ವಿಡಂಭನಾತ್ಮಕ ಕಾರ್ಟೂನ್ ಗಳನ್ನು ನೋಡುತ್ತಾ ಬೆಳೆದವರು. ಅನುಸರಿಸಿದವರು. ಎದೆಗುಂದುವ ಹಾಗೆ ಇಲ್ಲ. ನಿಮ್ಮೊಂದಿಗೆ ನಾವುಗಳು ಇದ್ದೇವೆ. ನೀವೇ ಹೇಳಿದ ಹಾಗೆ ಹಿಂದೆಂದಿಗಿಂತಲೂ ನಿಮ್ಮಂಥವರ ಅಗತ್ಯ ಬಹಳವಿದೆ. ಮುಂದುವರೆಸಿ ಸಾರ್…ಸತ್ಯಕ್ಕೆ ತಡವಾಗಿಯಾದರೂ ಗೆಲುವೇ ಇದ್ದೇ ಇರುತ್ತೆ..

  2. ಪಿ.ಮುಹಮ್ಮದ್ ಅವರ ಮಾತುಗಳಲ್ಲಿ ಹುರುಳಿದೆ ,ಇದೆಯಂದು ಎಲ್ಲರಿಗೂ ಗೊತ್ತು ಇದೆ. ಹಾಗೆಂದು ಮಾತು ಆರಂಭಿಸುವವರು ಯಾರು, ಎಂಬುದು ಪ್ರಶ್ನೆ. ಇದಕ್ಕೆ ವ್ಯಂಗ್ಯಚಿತ್ರಗಳೇ ಉತ್ತರಿಸುತ್ತಿದ್ದವು. ಆರ್. ಕೆ..ಲಕ್ಷ್ಮಣ್ರು ನಮ್ಮ ಸೂಪ್ತ ಉತ್ತರಗಳನ್ನು ತಮ್ಮ ವ್ಯಂಗ್ಯಚಿತ್ರಗಳಲ್ಲಿ ಕೊಟ್ಟಂತೆ ಭಾಸವಾಗುತ್ತಿತ್ತು.
    ಇಂದು ಕರ್ನಾಟಕದ ವ್ಯಂಗ್ಯಚಿತ್ರಕಾರರೊಬ್ಬರ ಉದ್ಗಾರಗಳು ಆತಂಕ ತಡಿ ಎಮ್ ನದಾಫ್ ಅಫಜಲಪುರ.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...