Homeಚಳವಳಿ'Prisonor No. 626710 is present' ಸಾಕ್ಷ್ಯ ಚಿತ್ರ | 'ನಿನ್ನೆಯ ಸಂಜೆ ಉಮರ್‌ ಜೊತೆ...'

‘Prisonor No. 626710 is present’ ಸಾಕ್ಷ್ಯ ಚಿತ್ರ | ‘ನಿನ್ನೆಯ ಸಂಜೆ ಉಮರ್‌ ಜೊತೆ…’

- Advertisement -
- Advertisement -

ನಿನ್ನೆ ಬೆಂಗಳೂರಿನ ಆಶಿರ್ವಾದ್‌ ಕೇಂದ್ರದಲ್ಲಿ Prisonor No. 626710 is present ಎಂಬ ಸಾಕ್ಷ್ಯ ಚಿತ್ರದ ಪ್ರದರ್ಶನ ಏರ್ಪಾಡಾಗಿತ್ತು. 6.30ಕ್ಕೆ ಪ್ರದರ್ಶನ ಎಂದು ಹಾಕಲಾಗಿತ್ತು. 6.15ಕ್ಕೇ ಹಾಲ್‌ ಫುಲ್‌ ಆಗಿತ್ತು. ಆದರೂ ಸಿನಿಮಾ ಶುರುವಾದದ್ದು 6.45ಕ್ಕೆ. ಬಂದವರನ್ನು ಕೂರಿಸಲು ಫಾದರ್‌ ಅರುಣ್‌ ಲೂಯಿಸ್ ಪೇಚಾಡುತ್ತಿದ್ದರು. ಸುಮಾರು ಜನ ನೆಲದ ಮೇಲೆಯೇ ಕೂತರು. ಕೂರಲೂ ಜಾಗವಿಲ್ಲ. ಹಾಗೂ ಹೀಗೂ ಮಾಡಿ ಚಿತ್ರವನ್ನು ಚಾಲು ಮಾಡಲಾಯಿತು.ಉಮರ್ ಖಾಲಿದ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ

“ನೀವು ಈ ವಿಡಿಯೋ ನೋಡುತ್ತಿದ್ದೀರೆಂದರೆ ನಾನು ಬಂಧನವಾಗಿದ್ದೇನೆ ಎಂದೇ ಅರ್ಥ” ಎಂಬ ಉಮರ್‌ ನ ಮಾತಿನೊಂದಿಗೆ ಸಾಕ್ಷ್ಯ ಚಿತ್ರ ಪ್ರಾರಂಭವಾಯಿತು. ತನ್ನ ಬಂಧನವನ್ನು ನಿರೀಕ್ಷಿಸಿದ್ದ ಉಮರ್‌ ಮೊದಲೇ ರೆಕಾರ್ಡ್‌ ಮಾಡಿದ್ದ ವಿಡಿಯೋ ಅದು. ಸ್ವಯಂ ಉಮರ್‌, ಅವರ ಬಾಳ ಸಂಗಾತಿ ಜೋಸ್ನ ಹಾಗೂ ಅವರ ಮತ್ತೊಬ್ಬ ಮಿತ್ರನ ಮಾತುಗಳನ್ನು ನಿರೂಪಣೆಯಾಗಿ ಹೆಣೆಯಲಾಗಿದೆ.

ಇದನ್ನೂ ಓದಿ: ವಿಚಾರಣೆಯಿಲ್ಲದೆ ನಾಲ್ಕು ವರ್ಷಗಳಿಂದ ಜೈಲಿನಲ್ಲಿರುವ ವಿದ್ಯಾರ್ಥಿ ಮುಖಂಡ ಉಮರ್ ಖಾಲಿದ್

ಮಧ್ಯದಲ್ಲಿ 2016 ರಿಂದ 2020ರ ನಡುವೆ ಜೆ ಎನ್‌ ಯು ಹಾಗೂ ದೆಹಲಿಯಲ್ಲಿ ನಡೆದ ಘಟನಾವಳಿಗಳನ್ನು ಹಿನ್ನೆಲೆಯಾಗಿ ಸಮರ್ಥ ರೀತಿಯಲ್ಲಿ ಬಳಸಲಾಗಿದೆ. ಸಿನೆಮಾ ಉಮರ್‌ ಬಗ್ಗೆ ಮಾತನಾಡಿದರೂ ಅದು ಹೇಳುವುದು ಈ ದೇಶದ ದುರಂತ ಕಥೆಯನ್ನು. ಬಹಳ ಸರಳವಾಗಿ, ನೇರವಾಗಿ, ಕಣ್ಣಿಗೆ ಕಟ್ಟುವ ವಿಡಿಯೋ ತುಣುಕುಗಳ ಮೂಲಕ ಹಾಗೂ ಹೃದಯ ಕಲಕುವ ವಾಸ್ತವಗಳ ಮೂಲಕ ನಿರ್ದೇಶಕ ಲಲಿತ್‌ ವಾಚಾನಿ ಅವರು ಚಿತ್ರವನ್ನು ಕಟ್ಟಿಕೊಡುವ ಪರಿ simple but super.

ಸಿನಿಮಾ ಮುಗಿದ ಮೇಲೆ ಸಂವಾದದ ಆರಂಭಿಕ ಮಾತುಗಳನ್ನಾಡಲು ನನ್ನನ್ನು ಕರೆದರು. ಉಮರ್‌ ಅವರನ್ನು ಹತ್ತಿರದಿಂದ ಬಲ್ಲವನು ಎಂಬ ಕಾರಣಕ್ಕೆ. ಮನದಾಳದಿಂದ ಉಮರ್‌ ಗೆ ಕ್ಷಮೆ ಕೇಳಿದೆ. ಉಮರ್‌ ಬಿಡುಗಡೆಗೆ ಇಷ್ಟು ವರ್ಷವಾದರೂ ನಾವು ಗಟ್ಟಿ ದನಿ ಎತ್ತಲಿಲ್ಲವಲ್ಲಾ ಎಂಬ ಕೊರಗು ಕಾಡುತ್ತಿತ್ತು. ನನ್ನದು ಮಾತ್ರವಲ್ಲ ಬಂದವರೆಲ್ಲರ ಮನಸ್ಸುಗಳೂ ಉಮರ್‌ ಬಿಡುಗಡೆಗೆ ಏನಾದರೂ ಮಾಡಬೇಕು ಎಂದು ಒತ್ತಾಯಿಸುತ್ತಿದ್ದವು.

ಭಾಗವಹಿಸಿದವರಲ್ಲಿ ಬಹುತೇಕ ಯುವ ಮುಖಗಳು. ಅ ಮುಖಗಳಲ್ಲಿ ಒಂದು ಕಾಳಜಿ ಇತ್ತು, ಹೊಳಪಿತ್ತು. ಸಂವಾದದ ಭಾಗವಾಗಿ ಹಲವರು ಯುವ ಮಿತ್ರರು ಬಹಳ ಚೆನ್ನಾಗಿ ಮಾತನಾಡಿದರು. ಮರ ಸಂಸ್ಥೆಯ ರಾಮ್‌ ಅರ್ಥಪೂರ್ಣ ಮಾತುಗಳ ಮೂಲಕ ಸಭೆಯನ್ನು ಸಮಾರೋಪಗೊಳಿಸಿದರು. ಸಭೆ ಮುಗಿದರೂ ಅನೇಕರಿಗೆ ಹೊರಡುವ ಮನಸ್ಸಿರಲಿಲ್ಲ. ಅಲ್ಲಲ್ಲೆ ಗುಂಪಾಗಿ ನಿಂತು, ಕುಳಿತು, ಮಾತಿನಲ್ಲಿ ತಲ್ಲೀನರಾಗಿದ್ದರು. ಕಳಕಳಿಯ ಮನಸ್ಸುಗಳ ಕಲರವದ ಮಾತಾವರಣ ಎಲ್ಲರನ್ನು ಹಿಡಿದಿಟ್ಟುಕೊಂಡಿತ್ತು ಅನಿಸುತ್ತೆ.

ಇದನ್ನೂಓದಿ: ಉಮರ್ ಖಾಲಿದ್ ಜಾಮೀನು ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ

ಯುವಜನರ ನಡುವೆ ಹಿರಿಯ ಹೋರಾಟಗಾರರೂ ಇದ್ದರು. ಯುವಜನರಿಗೆ ಮಾತನಾಡಲು ಬಿಟ್ಟು ಅವರು ಸುಮ್ಮನೆ ಕೂತು ಆಲಿಸುತ್ತಿದ್ದರು. ಒಂದು ರೀತಿಯಲ್ಲಿ ಆನಂದಿಸುತ್ತಿದ್ದರು. ಪ್ರಸಿದ್ಧ ರಂಗ ಕರ್ಮಿ ರಘುನಂದನ್ ಅವರು ವಿರೋಧ ಪಕ್ಷಗಳಾವುವೂ ಕೋರೆಗಾಂವ್‌ ಆರೋಪಿಗಳ ಬಗ್ಗೆಯಾಗಲೀ, ಉಮರ್‌ ಬಗ್ಗೆಯಾಗಲೀ ಮಾತನಾಡುತ್ತಿಲ್ಲ. ಎಲ್ಲಿ ತಮ್ಮನ್ನೂ ಭಯೋತ್ಪಾದಕರ ಬೆಂಬಲಿಗರು ಎಂದು ದೂಷಿಸಲಾಗುತ್ತೋ ಎಂಬ ಭಯ ಅವರಿಗೆ. ಆದರೆ ಈ ಪಕ್ಷಗಳೂ ಸಹ ಮಾತನಾಡಲೇಬಾಕಾದಂತಹ ವಾತಾವರಣವನ್ನು ಹಾಗೂ ಒತ್ತಡವನ್ನು ನಾವು ಸೃಷ್ಟಿಸಬೇಕು ಎಂದು ಸಲಹೆ ಮಾಡಿದರು.

ಸ್ಕ್ರೀನಿಂಗ್‌ ಹಾಗೂ ಸಂವಾದ ಎರಡನ್ನೂ ಮುಗಿಸಿಕೊಂಡು ಹೊರಟೆ. ಆದರೂ ಎರಡೂ ಹಿಂಬಾಲಿಸುತ್ತಲೇ ಬಂದವು. ಈಗಲೂ ಮನದ ಮೂಲೆಯಲ್ಲಿ ಗಟ್ಟಿಯಾಗಿ ಕೂತಿವೆ. ಏನು ಮಾಡುತ್ತೀರಿ ಎಂದು ಕೇಳುತ್ತಿವೆ. ಉತ್ತರ ಕಂಡುಕೊಳ್ಳಲೇಬೇಕು, ನಾವೆಲ್ಲರೂ ಕೂಡಿ.

ಮುಗಿಸುವ ಮುನ್ನ ಒಂದು ಮಾತು. ಈ ಸಾಕ್ಷ್ಯ ಚಿತ್ರ ತಾವು ನೋಡಲೇಬೇಕು. ಸಾಧ್ಯವಾದಷ್ಟು ನೀವಿರುವ ಕಡೆಗಳಲ್ಲಿ ಸ್ಕ್ರೀನಿಂಗ್‌ ಏರ್ಪಡಿಸಿ ಸಮಾನ ಮನಸ್ಕರ ಜೊತೆ ನೋಡಿ. ಆಗದಿದ್ದರೆ ವ್ಯಕ್ತಿಗತವಾಗಿಯಾದರೂ ನೋಡಿ. ಚಿತ್ರದ ಲಿಂಕ್‌ ಬೇಕಿದ್ದಲ್ಲಿ ನಿಸಾರ್‌ [8056035809] ಅವರನ್ನು ಸಂಪರ್ಕಿಸಿ.

ಉಮರ್‌ ಬಳಿ ಮತ್ತೊಮ್ಮೆ ಕ್ಷಮೆ ಕೋರುತ್ತಾ.

ವಿಡಿಯೊನೋಡಿ: ಕಟ್ಟುತ್ತೇವಾ ನಾವು ಜಾತಿ ಇಲ್ಲದ ಭೀತಿ ಇಲ್ಲದ ನಾಡ ಕಟ್ಟುತ್ತೇವೆ; ಹಾಡು ನೋಡಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...