Homeಚಳವಳಿ'Prisonor No. 626710 is present' ಸಾಕ್ಷ್ಯ ಚಿತ್ರ | 'ನಿನ್ನೆಯ ಸಂಜೆ ಉಮರ್‌ ಜೊತೆ...'

‘Prisonor No. 626710 is present’ ಸಾಕ್ಷ್ಯ ಚಿತ್ರ | ‘ನಿನ್ನೆಯ ಸಂಜೆ ಉಮರ್‌ ಜೊತೆ…’

- Advertisement -
- Advertisement -

ನಿನ್ನೆ ಬೆಂಗಳೂರಿನ ಆಶಿರ್ವಾದ್‌ ಕೇಂದ್ರದಲ್ಲಿ Prisonor No. 626710 is present ಎಂಬ ಸಾಕ್ಷ್ಯ ಚಿತ್ರದ ಪ್ರದರ್ಶನ ಏರ್ಪಾಡಾಗಿತ್ತು. 6.30ಕ್ಕೆ ಪ್ರದರ್ಶನ ಎಂದು ಹಾಕಲಾಗಿತ್ತು. 6.15ಕ್ಕೇ ಹಾಲ್‌ ಫುಲ್‌ ಆಗಿತ್ತು. ಆದರೂ ಸಿನಿಮಾ ಶುರುವಾದದ್ದು 6.45ಕ್ಕೆ. ಬಂದವರನ್ನು ಕೂರಿಸಲು ಫಾದರ್‌ ಅರುಣ್‌ ಲೂಯಿಸ್ ಪೇಚಾಡುತ್ತಿದ್ದರು. ಸುಮಾರು ಜನ ನೆಲದ ಮೇಲೆಯೇ ಕೂತರು. ಕೂರಲೂ ಜಾಗವಿಲ್ಲ. ಹಾಗೂ ಹೀಗೂ ಮಾಡಿ ಚಿತ್ರವನ್ನು ಚಾಲು ಮಾಡಲಾಯಿತು.ಉಮರ್ ಖಾಲಿದ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ

“ನೀವು ಈ ವಿಡಿಯೋ ನೋಡುತ್ತಿದ್ದೀರೆಂದರೆ ನಾನು ಬಂಧನವಾಗಿದ್ದೇನೆ ಎಂದೇ ಅರ್ಥ” ಎಂಬ ಉಮರ್‌ ನ ಮಾತಿನೊಂದಿಗೆ ಸಾಕ್ಷ್ಯ ಚಿತ್ರ ಪ್ರಾರಂಭವಾಯಿತು. ತನ್ನ ಬಂಧನವನ್ನು ನಿರೀಕ್ಷಿಸಿದ್ದ ಉಮರ್‌ ಮೊದಲೇ ರೆಕಾರ್ಡ್‌ ಮಾಡಿದ್ದ ವಿಡಿಯೋ ಅದು. ಸ್ವಯಂ ಉಮರ್‌, ಅವರ ಬಾಳ ಸಂಗಾತಿ ಜೋಸ್ನ ಹಾಗೂ ಅವರ ಮತ್ತೊಬ್ಬ ಮಿತ್ರನ ಮಾತುಗಳನ್ನು ನಿರೂಪಣೆಯಾಗಿ ಹೆಣೆಯಲಾಗಿದೆ.

ಇದನ್ನೂ ಓದಿ: ವಿಚಾರಣೆಯಿಲ್ಲದೆ ನಾಲ್ಕು ವರ್ಷಗಳಿಂದ ಜೈಲಿನಲ್ಲಿರುವ ವಿದ್ಯಾರ್ಥಿ ಮುಖಂಡ ಉಮರ್ ಖಾಲಿದ್

ಮಧ್ಯದಲ್ಲಿ 2016 ರಿಂದ 2020ರ ನಡುವೆ ಜೆ ಎನ್‌ ಯು ಹಾಗೂ ದೆಹಲಿಯಲ್ಲಿ ನಡೆದ ಘಟನಾವಳಿಗಳನ್ನು ಹಿನ್ನೆಲೆಯಾಗಿ ಸಮರ್ಥ ರೀತಿಯಲ್ಲಿ ಬಳಸಲಾಗಿದೆ. ಸಿನೆಮಾ ಉಮರ್‌ ಬಗ್ಗೆ ಮಾತನಾಡಿದರೂ ಅದು ಹೇಳುವುದು ಈ ದೇಶದ ದುರಂತ ಕಥೆಯನ್ನು. ಬಹಳ ಸರಳವಾಗಿ, ನೇರವಾಗಿ, ಕಣ್ಣಿಗೆ ಕಟ್ಟುವ ವಿಡಿಯೋ ತುಣುಕುಗಳ ಮೂಲಕ ಹಾಗೂ ಹೃದಯ ಕಲಕುವ ವಾಸ್ತವಗಳ ಮೂಲಕ ನಿರ್ದೇಶಕ ಲಲಿತ್‌ ವಾಚಾನಿ ಅವರು ಚಿತ್ರವನ್ನು ಕಟ್ಟಿಕೊಡುವ ಪರಿ simple but super.

ಸಿನಿಮಾ ಮುಗಿದ ಮೇಲೆ ಸಂವಾದದ ಆರಂಭಿಕ ಮಾತುಗಳನ್ನಾಡಲು ನನ್ನನ್ನು ಕರೆದರು. ಉಮರ್‌ ಅವರನ್ನು ಹತ್ತಿರದಿಂದ ಬಲ್ಲವನು ಎಂಬ ಕಾರಣಕ್ಕೆ. ಮನದಾಳದಿಂದ ಉಮರ್‌ ಗೆ ಕ್ಷಮೆ ಕೇಳಿದೆ. ಉಮರ್‌ ಬಿಡುಗಡೆಗೆ ಇಷ್ಟು ವರ್ಷವಾದರೂ ನಾವು ಗಟ್ಟಿ ದನಿ ಎತ್ತಲಿಲ್ಲವಲ್ಲಾ ಎಂಬ ಕೊರಗು ಕಾಡುತ್ತಿತ್ತು. ನನ್ನದು ಮಾತ್ರವಲ್ಲ ಬಂದವರೆಲ್ಲರ ಮನಸ್ಸುಗಳೂ ಉಮರ್‌ ಬಿಡುಗಡೆಗೆ ಏನಾದರೂ ಮಾಡಬೇಕು ಎಂದು ಒತ್ತಾಯಿಸುತ್ತಿದ್ದವು.

ಭಾಗವಹಿಸಿದವರಲ್ಲಿ ಬಹುತೇಕ ಯುವ ಮುಖಗಳು. ಅ ಮುಖಗಳಲ್ಲಿ ಒಂದು ಕಾಳಜಿ ಇತ್ತು, ಹೊಳಪಿತ್ತು. ಸಂವಾದದ ಭಾಗವಾಗಿ ಹಲವರು ಯುವ ಮಿತ್ರರು ಬಹಳ ಚೆನ್ನಾಗಿ ಮಾತನಾಡಿದರು. ಮರ ಸಂಸ್ಥೆಯ ರಾಮ್‌ ಅರ್ಥಪೂರ್ಣ ಮಾತುಗಳ ಮೂಲಕ ಸಭೆಯನ್ನು ಸಮಾರೋಪಗೊಳಿಸಿದರು. ಸಭೆ ಮುಗಿದರೂ ಅನೇಕರಿಗೆ ಹೊರಡುವ ಮನಸ್ಸಿರಲಿಲ್ಲ. ಅಲ್ಲಲ್ಲೆ ಗುಂಪಾಗಿ ನಿಂತು, ಕುಳಿತು, ಮಾತಿನಲ್ಲಿ ತಲ್ಲೀನರಾಗಿದ್ದರು. ಕಳಕಳಿಯ ಮನಸ್ಸುಗಳ ಕಲರವದ ಮಾತಾವರಣ ಎಲ್ಲರನ್ನು ಹಿಡಿದಿಟ್ಟುಕೊಂಡಿತ್ತು ಅನಿಸುತ್ತೆ.

ಇದನ್ನೂಓದಿ: ಉಮರ್ ಖಾಲಿದ್ ಜಾಮೀನು ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ

ಯುವಜನರ ನಡುವೆ ಹಿರಿಯ ಹೋರಾಟಗಾರರೂ ಇದ್ದರು. ಯುವಜನರಿಗೆ ಮಾತನಾಡಲು ಬಿಟ್ಟು ಅವರು ಸುಮ್ಮನೆ ಕೂತು ಆಲಿಸುತ್ತಿದ್ದರು. ಒಂದು ರೀತಿಯಲ್ಲಿ ಆನಂದಿಸುತ್ತಿದ್ದರು. ಪ್ರಸಿದ್ಧ ರಂಗ ಕರ್ಮಿ ರಘುನಂದನ್ ಅವರು ವಿರೋಧ ಪಕ್ಷಗಳಾವುವೂ ಕೋರೆಗಾಂವ್‌ ಆರೋಪಿಗಳ ಬಗ್ಗೆಯಾಗಲೀ, ಉಮರ್‌ ಬಗ್ಗೆಯಾಗಲೀ ಮಾತನಾಡುತ್ತಿಲ್ಲ. ಎಲ್ಲಿ ತಮ್ಮನ್ನೂ ಭಯೋತ್ಪಾದಕರ ಬೆಂಬಲಿಗರು ಎಂದು ದೂಷಿಸಲಾಗುತ್ತೋ ಎಂಬ ಭಯ ಅವರಿಗೆ. ಆದರೆ ಈ ಪಕ್ಷಗಳೂ ಸಹ ಮಾತನಾಡಲೇಬಾಕಾದಂತಹ ವಾತಾವರಣವನ್ನು ಹಾಗೂ ಒತ್ತಡವನ್ನು ನಾವು ಸೃಷ್ಟಿಸಬೇಕು ಎಂದು ಸಲಹೆ ಮಾಡಿದರು.

ಸ್ಕ್ರೀನಿಂಗ್‌ ಹಾಗೂ ಸಂವಾದ ಎರಡನ್ನೂ ಮುಗಿಸಿಕೊಂಡು ಹೊರಟೆ. ಆದರೂ ಎರಡೂ ಹಿಂಬಾಲಿಸುತ್ತಲೇ ಬಂದವು. ಈಗಲೂ ಮನದ ಮೂಲೆಯಲ್ಲಿ ಗಟ್ಟಿಯಾಗಿ ಕೂತಿವೆ. ಏನು ಮಾಡುತ್ತೀರಿ ಎಂದು ಕೇಳುತ್ತಿವೆ. ಉತ್ತರ ಕಂಡುಕೊಳ್ಳಲೇಬೇಕು, ನಾವೆಲ್ಲರೂ ಕೂಡಿ.

ಮುಗಿಸುವ ಮುನ್ನ ಒಂದು ಮಾತು. ಈ ಸಾಕ್ಷ್ಯ ಚಿತ್ರ ತಾವು ನೋಡಲೇಬೇಕು. ಸಾಧ್ಯವಾದಷ್ಟು ನೀವಿರುವ ಕಡೆಗಳಲ್ಲಿ ಸ್ಕ್ರೀನಿಂಗ್‌ ಏರ್ಪಡಿಸಿ ಸಮಾನ ಮನಸ್ಕರ ಜೊತೆ ನೋಡಿ. ಆಗದಿದ್ದರೆ ವ್ಯಕ್ತಿಗತವಾಗಿಯಾದರೂ ನೋಡಿ. ಚಿತ್ರದ ಲಿಂಕ್‌ ಬೇಕಿದ್ದಲ್ಲಿ ನಿಸಾರ್‌ [8056035809] ಅವರನ್ನು ಸಂಪರ್ಕಿಸಿ.

ಉಮರ್‌ ಬಳಿ ಮತ್ತೊಮ್ಮೆ ಕ್ಷಮೆ ಕೋರುತ್ತಾ.

ವಿಡಿಯೊನೋಡಿ: ಕಟ್ಟುತ್ತೇವಾ ನಾವು ಜಾತಿ ಇಲ್ಲದ ಭೀತಿ ಇಲ್ಲದ ನಾಡ ಕಟ್ಟುತ್ತೇವೆ; ಹಾಡು ನೋಡಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...