Homeಫ್ಯಾಕ್ಟ್‌ಚೆಕ್ಮಹಾರಾಷ್ಟ್ರ ಬಿಟ್ ಕಾಯಿನ್ ಅಕ್ರಮ ಆರೋಪ : ಬಿಜೆಪಿ ಹಂಚಿಕೊಂಡ ಆಡಿಯೋ ನಕಲಿ ಎಂದ ಫ್ಯಾಕ್ಟ್‌ಚೆಕ್

ಮಹಾರಾಷ್ಟ್ರ ಬಿಟ್ ಕಾಯಿನ್ ಅಕ್ರಮ ಆರೋಪ : ಬಿಜೆಪಿ ಹಂಚಿಕೊಂಡ ಆಡಿಯೋ ನಕಲಿ ಎಂದ ಫ್ಯಾಕ್ಟ್‌ಚೆಕ್

- Advertisement -
- Advertisement -

ಮಹಾರಾಷ್ಟ್ರದ ಪ್ರತಿಪಕ್ಷಗಳಾದ ಕಾಂಗ್ರೆಸ್‌ ಮತ್ತು ಎನ್‌ಸಿಪಿ (ಶರದ್ ಪವಾರ್ ಬಣ) ನಾಯಕರಾದ ನಾನಾ ಪಟೋಲೆ ಮತ್ತು ಸುಪ್ರಿಯಾ ಸುಳೆ ಬಿಟ್ ಕಾಯಿನ್ ಹಣವನ್ನು ಚುನಾವಣೆಗೆ ಬಳಸಿಕೊಂಡು ಅಕ್ರಮವೆಸಗಿದ್ದಾರೆ ಎಂದು ಬಿಜೆಪಿ ಮಂಗಳವಾರ (ನ.19) ಆರೋಪಿಸಿತ್ತು.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಮತದಾನ ನಿನ್ನೆ(ನ.20) ನಡೆದಿದೆ. ಅದರ ಮುನ್ನಾದಿನ ಮಂಗಳವಾರ (ನ.19) ರಾತ್ರಿ 10.58, 11.00, 11.02 ಮತ್ತು 11.04ಕ್ಕೆ ಬಿಜೆಪಿ ರಾಷ್ಟ್ರೀಯ ಸಮಿತಿಯ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ 4 ಆಡಿಯೋ ರೆಕಾರ್ಡಿಂಗ್ ಕ್ಲಿಪ್‌ಗಳನ್ನು ಅಪ್ಲೋಡ್ ಮಾಡಿತ್ತು.

ಈ ನಾಲ್ಕು ಆಡಿಯೋ ರೆಕಾರ್ಡಿಂಗ್‌ಗಳು ಎನ್‌ಸಿಪಿ (ಎಸ್‌ಪಿ) ನಾಯಕಿ ಸುಪ್ರಿಯಾ ಸುಳೆ, ಕಾಂಗ್ರೆಸ್ ನಾಯಕ ನಾನಾ ಪಟೋಲೆ, ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ತಂಡದ ಇನ್‌ಸ್ಪೆಕ್ಟರ್ ಜನರಲ್ ಹಾಗೂ ಐಪಿಎಸ್‌ ಅಧಿಕಾರಿ ಅಮಿತಾಬ್ ಗುಪ್ತಾ ಮತ್ತು ಸಾರಥಿ ಎಂಬ ಆಡಿಟ್ ಸಂಸ್ಥೆಯ ಉದ್ಯೋಗಿ ಗೌರವ್ ಮೆಹ್ತಾ ನಡುವಿನ ಸಂಭಾಷಣೆಯದ್ದು ಎಂದು ಬಿಜೆಪಿ ಆರೋಪಿಸಿತ್ತು.

ಇದಕ್ಕೂ ಮುನ್ನ ಮಂಗಳವಾರ ಪುಣೆಯ ಮಾಜಿ ಪೊಲೀಸ್ ಅಧಿಕಾರಿ ರವೀಂದ್ರನಾಥ್ ಪಾಟೀಲ್ ಅವರು, ಸುಪ್ರಿಯಾ ಸುಳೆ ಮತ್ತು ನಾನಾ ಪಟೋಲೆ ಅವರು 2018ರ ಕ್ರಿಪ್ಟೋ ಕರೆನ್ಸಿ ಹಗರಣ ಪ್ರಕರಣದ ಬಿಟ್‌ ಕಾಯಿನ್‌ಗಳನ್ನು ದುರುಪಯೋಗಪಡಿಸಿಕೊಂಡು, ಅದರ ಹಣವನ್ನು ರಾಜ್ಯ ಚುನಾವಣೆಗೆ ಬಳಸಿದ್ದಾರೆ ಎಂದು ಆರೋಪಿಸಿದ್ದರು.

ಪುಣೆಯ ಮಾಜಿ ಪೊಲೀಸ್ ಆಯುಕ್ತ ಹಾಗೂ ಐಪಿಎಸ್ ಅಧಿಕಾರಿ ಅಮಿತಾಬ್ ಗುಪ್ತಾ, ಸಾರಥಿ ಆಡಿಟ್ ಸಂಸ್ಥೆಯ ಉದ್ಯೋಗಿ ಗೌರವ್ ಮೆಹ್ತಾ, ಪ್ರಸ್ತುತ ಚಂದ್ರಾಪುರದಲ್ಲಿ ಮಹಾರಾಷ್ಟ್ರ ಮೀಸಲು ಪೊಲೀಸ್ ಪಡೆಯ ಎಸ್ಪಿಯಾಗಿರುವ ಐಪಿಎಸ್ ಅಧಿಕಾರಿ ಭಾಗ್ಯಶ್ರೀ ನವತಾಕೆ ವಿರುದ್ದ ಕೂಡ ರವೀಂದ್ರನಾಥ್ ಪಾಟೀಲ್ ಆರೋಪ ಹೊರಿಸಿದ್ದರು. ಇವರ ನಡುವಿನ ಸಂಭಾಷಣೆಯ ಆಡಿಯೋ ಬಿಡುಗಡೆ ಮಾಡುವುದಾಗಿ ಹೇಳಿದ್ದರು.

ರವೀಂದ್ರನಾಥ್ ಪಾಟೀಲ್ ಆರೋಪ ಮಾಡಿದ ಬೆನ್ನಲ್ಲೇ, ಬಿಜೆಪಿ ನಾಲ್ಕು ಆಡಿಯೋ ಕ್ಲಿಪ್‌ಗಳನ್ನು ತನ್ನ ಎಕ್ಸ್‌ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿತ್ತು.

ಬಿಜೆಪಿ ಹಂಚಿಕೊಂಡ ಆಡಿಯೋದಲ್ಲಿ ಸುಪ್ರಿಯಾ ಸುಳೆ ಮತ್ತು ನಾನಾ ಪಟೋಲೆ ಎನ್ನಲಾದ ವ್ಯಕ್ತಿಗಳು ನಾಲ್ಕು ಕ್ರಿಪ್ಟೋ ವ್ಯಾಲೆಟ್‌ಗಳಲ್ಲಿ ಸಂಗ್ರಹವಾಗಿರುವ ಬಿಟ್‌ಕಾಯಿನ್‌ಗಳಿಗೆ ಬದಲಾಗಿ ಹಣ ಕೇಳುವುದು ಮತ್ತು ಈ ವಿಷಯದಲ್ಲಿ ಯಾವುದೇ ತನಿಖೆ ನಡೆಯುವುದಿಲ್ಲ ಎಂದು ಭರವಸೆ ಕೊಡುವುದು ಇದೆ.

ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬೀತ್ ಪಾತ್ರ ಬುಧವಾರ (ನ.20) ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿ, ಸುಪ್ರಿಯಾ ಸುಳೆ ಮತ್ತು ನಾನಾ ಪಟೋಲೆ ವಿರುದ್ದ ಗಂಭೀರ ಆರೋಪ ಮಾಡಿದ್ದರು. “ತನಿಖೆ ನಡೆದರೆ ಎಲ್ಲಾ ಹಗರಣ ಹೊರ ಬರಲಿದೆ. ಪ್ರತಿಪಕ್ಷಗಳ ಮೈತ್ರಿಕೂಟ ‘ಎಂವಿಎ ಗೋಡೆ ಮೇಲೆ ಬರೆದ ಬರಹದಂತೆ ತಮ್ಮ ಸೋಲನ್ನು ಎದುರು ನೋಡುತ್ತಿದೆ” ಎಂದಿದ್ದರು.

ಫ್ಯಾಕ್ಟ್‌ಚೆಕ್ : ಪ್ರಮುಖ ಫ್ಯಾಕ್ಟ್‌ಚೆಕ್ ಸುದ್ದಿ ಸಂಸ್ಥೆಯಾದ boomlive.in ಬಿಜೆಪಿ ಹಂಚಿಕೊಂಡಿರುವ ಆಡಿಯೋ ಕ್ಲಿಪ್‌ಗಳು ನಕಲಿ ಎಂದು ಹೇಳಿವೆ. ನಾನಾ ಪಟೋಲೆ, ಸುಪ್ರಿಯಾ ಸುಳೆ ಹಾಗೂ ಮತ್ತಿರರ ಹೆಸರಿನಲ್ಲಿ ಬಿಜೆಪಿ ಹಂಚಿಕೊಂಡಿರುವ ಆಡಿಯೋ ಕ್ಲಿಪ್‌ಗಳನ್ನು ಎಐ (ಕೃತಕ ಬುದ್ದಿಮತ್ತೆ) ತಂತ್ರಜ್ಞಾನ ಬಳಸಿ ಸೃಷ್ಟಿಸಲಾಗಿದೆ ಎಂದಿದೆ. ಪತ್ರಕರ್ತರು ಮತ್ತು ಸಂಶೋಧಕರಿಗೆ ಲಭ್ಯವಿರುವ TrueMedia.org ಡೀಪ್‌ಫೇಕ್ ಪತ್ತೆ ಸಾಧನ ಬಳಸಿಕೊಂಡು ನಾವು ಆಡಿಯೊ ಕ್ಲಿಪ್‌ಗಳನ್ನು ಪರೀಕ್ಷಿಸಿದ್ದೇವೆ ಎಂದು ತಿಳಿಸಿದೆ.

ಬಿಜೆಪಿ ಹಂಚಿಕೊಂಡಿರುವ ನಾಲ್ಕು ಆಡಿಯೋಗಳ ಪೈಕಿ ಮೂರು ಎಐ ಬಳಸಿ ಸೃಷ್ಟಿಸಿರುವುದಕ್ಕೆ ಸಾಕಷ್ಟು ಪುರಾವೆಗಳು ದೊರೆತಿವೆ. ಒಂದು ಆಡಿಯೋ ಮಾತ್ರ ಎಐ ಎಂಬುವುದನ್ನು ಸಂಪೂರ್ಣವಾಗಿ ಖಚಿತಪಡಿಸಲು ಸಾಧ್ಯವಾಗಿಲ್ಲ. ಅದು ಕೇವಲ ಐದು ಸೆಕೆಂಡ್‌ಗಳಿವೆ. ಆ ಕ್ಲಿಪ್ ತುಂಬಾ ಚಿಕ್ಕದಾಗಿರುವುದರಿಂದ ಪರೀಕ್ಷಿಸಲು ಸಾಧ್ಯವಾಗಿಲ್ಲ ಎಂದು ಹೇಳಿದೆ.

ನಾವು ಸುಪ್ರಿಯಾ ಸುಳೆ, ನಾನಾ ಪಟೋಲೆ ಮತ್ತು ಐಪಿಎಸ್‌ ಅಧಿಕಾರಿ ಅಮಿತಾಬ್ ಗುಪ್ತಾ ಅವರ ಅಸಲಿ ಧ್ವನಿಯನ್ನು ಯೂಟ್ಯೂಬ್‌ ಸಂದರ್ಶನಗಳಿಂದ ಆಲಿಸಿದ್ದೇವೆ. ಬಿಜೆಪಿ ಹಂಚಿಕೊಂಡಿರುವ ಆಡಿಯೋಗಳಿಗೂ ಈ ಮೂವರ ಅಸಲಿ ಧ್ವನಿಗೂ ಸಾಮ್ಯತೆ ಕಂಡು ಬಂದಿಲ್ಲ ಎಂದು ಬೂಮ್ ತಿಳಿಸಿದೆ.

ಆಡಿಯೋ-1  ಆಡಿಟ್ ಸಂಸ್ಥೆ ಉದ್ಯೋಗಿ ಗೌರವ್ ಮೆಹ್ತಾ ಮತ್ತು ಐಪಿಎಸ್ ಅಧಿಕಾರಿ ಅಮಿತಾಬ್ ಮೆಹ್ತಾ ನಡುವಿನ ಸಂಭಾಷಣೆ

ಈ ಆಡಿಯೋದಲ್ಲಿ ಆಡಿಟ್ ಸಂಸ್ಥೆ ಸಾರಥಿ ಅಸೋಸಿಯೇಟ್ಸ್‌ನ ಉದ್ಯೋಗಿ ಗೌರವ್ ಮೆಹ್ತಾ, ಪುಣೆಯ ಮಾಜಿ ಪೊಲೀಸ್ ಆಯುಕ್ತ ಹಾಗೂ ಐಪಿಎಸ್ ಅಧಿಕಾರಿ ಅಮಿತಾಬ್ ಗುಪ್ತಾ ಅವರೊಂದಿಗೆ ಮಾತನಾಡುತ್ತಿರುವುದು ಎನ್ನಲಾಗಿದೆ.

ಬ್ಲೂಮ್ TrueMedia ದ AI ಡೀಪ್‌ಫೇಕ್ ಪತ್ತೆ ಸಾಧನವನ್ನು ಬಳಸಿಕೊಂಡು ಈ ಆಡಿಯೋ ಕ್ಲಿಪ್ ಅನ್ನು ಪರೀಕ್ಷಿಸಿದೆ. ಇದರಲ್ಲಿ ಆಡಿಯೋವನ್ನು ಎಐ ಮೂಲಕ ಸೃಷ್ಟಿಸಿದ್ದು ಎನ್ನುವುದಕ್ಕೆ ಹಲವು ಪುರಾವೆಗಳು ದೊರೆತಿವೆ..ಅದು ಇಲ್ಲಿದೆ.

ಆಡಿಯೋ-2 ಎನ್‌ಸಿಪಿ (ಶರದ್ ಪವಾರ್) ನಾಯಕಿ ಸುಪ್ರಿಯಾ ಸುಳೆ ಮತ್ತು ಗೌರವ್ ಮೆಹ್ತಾ ನಡುವಿನ ಸಂಭಾಷಣೆ

ಈ ಆಡಿಯೋದಲ್ಲಿ ಸುಳೆ ಅವರು “ತನಿಖೆಯ ಬಗ್ಗೆ ಚಿಂತಿಸಬೇಡಿ, ಬಿಟ್‌ಕಾಯಿನ್‌ಗಳಿಗೆ ಬದಲಾಗಿ ಹಣ ಕೊಡಿ” ಎಂದು ಗೌರವ ಮೆಹ್ತಾ ಬಳಿ ಕೇಳುತ್ತಿರುವುದು ಎನ್ನಲಾಗಿದೆ.

ಬೂಮ್ ಸಂಸ್ಥೆ, 2023ರಲ್ಲಿ ಸಮ್ದೀಶ್ ಭಾಟಿಯಾ ಅವರ ವಿಡಿಯೋ ಪಾಡ್‌ಕಾಸ್ಟ್‌ ‘ಅನ್‌ಫಿಲ್ಟರ್ಡ್ ಬೈ ಸಮ್ದೀಶ್’ ಸಂದರ್ಶನಲ್ಲಿ ಸುಪ್ರಿಯಾ ಸುಳೆ ಮಾತನಾಡಿರುವ ಧ್ವನಿ ಜೊತೆ ಈ ಆಡಿಯೋವನ್ನು ಹೋಲಿಸಿ ನೋಡಿದೆ. ಈ ವೇಳೆ ಎರಡೂ ಧ್ವನಿಗಳು ಸಂಪೂರ್ಣ ಭಿನ್ನವಾಗಿ ಕಂಡು ಬಂದಿದೆ. ಸಮ್ದೀಶ್ ಭಾಟಿಯಾ ಪಾಡ್‌ಕಾಸ್ಟ್‌ನಲ್ಲಿ ಸುಪ್ರಿಯಾ ಸುಳೆ ಮಾತನಾಡಿರುವುದು ಇಲ್ಲಿದೆ.

TrueMedia AI ಡೀಪ್‌ಫೇಕ್ ಪತ್ತೆ ಸಾಧನವು ಈ ಆಡಿಯೋ ಕೃತವಾಗಿ ಸೃಷ್ಟಿಸಿದ್ದು ಎಂಬುವುದಕ್ಕೆ ಹಲವು ಪುರಾವೆಗಳನ್ನು ಕಂಡು ಹಿಡಿದಿದೆ. ಅದರ ಫಲಿತಾಂಶ ಇಲ್ಲಿದೆ 

ಆಡಿಯೋ-3  ಕಾಂಗ್ರೆಸ್ ನಾಯಕ ನಾನಾ ಪಟೋಲೆ ಮತ್ತು ಐಪಿಎಲ್ ಅಧಿಕಾರಿ ಅಮಿತಾಬ್ ಗುಪ್ತಾ ನಡುವಿನ ಸಂಭಾಷಣೆ

ಈ ಆಡಿಯೋ ಪಟೋಲೆ ಅವರು ಬಿಟ್‌ಕಾಯಿನ್ ಅನ್ನು ನಗದು ರೂಪದಲ್ಲಿ ಪರಿವರ್ತಿಸುವಂತೆ ಐಪಿಎಸ್ ಅಧಿಕಾರಿ ಅಮಿತಾಬ್ ಗುಪ್ತಾ ಅವರಿಗೆ ಬೆದರಿಕೆ ಹಾಕುತ್ತಿರುವುದು ಎಂದು ಆರೋಪಿಸಲಾಗಿದೆ.

TrueMedia.org ಈ ಆಡಿಯೋ ಎಐ ಎಂಬುವುದನ್ನು ನಿರ್ಧಿರಿಸಲು ಕೆಲವೊಂದು ಪುರಾವೆಗಳು ಇವೆ ಎಂದಿವೆ. ಅದರ ಫಲಿತಾಂಶ ಇಲ್ಲಿದೆ. ಆದರೆ, ಈ ಆಡಿಯೋ ಕೇವಲ 5 ಸೆಕೆಂಡ್‌ ಇರುವುದರಿಂದ ಈಗ ಲಭ್ಯವಿರುವ ಸಾಧನಗಳನ್ನು ಬಳಸಿಕೊಂಡು ಇದರ ಸತ್ಯಾಸತ್ಯತೆ ಕಂಡು ಖಚಿತಪಡಿಸುವುದು ಸಾಧ್ಯವಿಲ್ಲ ಎಂದು ಬೂಮ್ ಹೇಳಿದೆ.

ನಾವು ಆಡಿಯೋ ರೆಕಾರ್ಡಿಂಗ್‌ನಲ್ಲಿರುವ ಪಟೋಲೆ ಅವರ ಧ್ವನಿಯನ್ನು ನವೆಂಬರ್ 19,2024 ರಂದು ಯುಟ್ಯೂಬ್ ಚಾನೆಲ್ ಜಿಸ್ಟ್‌ನ್ಯೂಸ್‌ನಲ್ಲಿ ಪ್ರಕಟಿಸಿದ ಪಟೋಲೆ ಅವರ ಸಂದರ್ಶನದ ಧ್ವನಿಯೊಂದಿಗೆ ಹೋಲಿಕೆ ಮಾಡಿದ್ದೇವೆ. ಈ ವೇಳೆ ಎರಡು ಧ್ವನಿಗಳು ಹೋಲಿಕೆಯಾಗಿಲ್ಲ ಎಂದು ಬ್ಲೂಮ್ ತಿಳಿಸಿದೆ. ಜಿಸ್ಟ್‌ನ್ಯೂಸ್‌ ಜೊತೆಗಿನ ನಾನಾ ಪಟೋಲೆ ಅವರ ಸಂದರ್ಶನದ ವಿಡಿಯೋ ಇಲ್ಲಿದೆ.

ಆಡಿಯೋ-4 ಐಪಿಎಸ್‌ ಅಧಿಕಾರಿ ಅಮಿತಾಬ್ ಗುಪ್ತಾ ಮತ್ತು ಗೌರವ್ ಮೆಹ್ತಾ ನಡುವಿನ ಸಂಭಾಷಣೆ

ಇದು ಪುಣೆಯ ಮಾಜಿ ಪೊಲೀಸ್ ಆಯುಕ್ತ ಹಾಗೂ ಐಪಿಎಸ್ ಅಧಿಕಾರಿ ಅಮಿತಾಬ್ ಗುಪ್ತಾ ಮತ್ತು ಗೌರವ್ ಮೆಹ್ತಾ ನಡುವಿನ ಸಂಭಾಷಣೆಯ ಆಡಿಯೋ ಎನ್ನಲಾಗಿದೆ. ಇದರಲ್ಲಿ ನಾನಾ ಪಟೋಲೆ ಮತ್ತು ಸುಪ್ರಿಯಾ ಸುಳೆ ಹೇಳಿದಂತೆ ಬಿಟ್‌ ಕಾಯಿನ್ ಅನ್ನು ನಗದಾಗಿ ಪರಿವರ್ತಿಸುವ ಕುರಿತು ಇದೆ.

ಯೂಟ್ಯೂಬ್‌ನಲ್ಲಿ ಐಪಿಎಸ್ ಗುಪ್ತಾ ಅವರ ಹಲವಾರು ಸಂದರ್ಶನಗಳನ್ನು ನಾವು ಗಮನಿಸಿದ್ದೇವೆ. ಅವುಗಳಲ್ಲಿ ಯಾವುದೇ ಸಂದರ್ಶನದ ಧ್ವನಿ ಬಿಜೆಪಿ ಪೋಸ್ಟ್ ಮಾಡಿರುವ ಆಡಿಯೋ ರೆಕಾರ್ಡಿಂಗ್‌ಗೆ ಹೋಲಿಕೆಯಾಗಿಲ್ಲ ಎಂದು ಬೂಮ್ ತಿಳಿಸಿದೆ. ಮಾರ್ಚ್ 15, 2024 ರ ಸಂದರ್ಶನದಲ್ಲಿ ಗುಪ್ತಾ ಅವರು ಮಾತನಾಡಿರುವ ಮೂಲ ಧ್ವನಿಯನ್ನು ಇಲ್ಲಿ ಕೇಳಬಹುದು

ಬಿಜೆಪಿ ಹಂಚಿಕೊಂಡಿರುವ ಆಡಿಯೋ ಎಐ ಸೃಷ್ಟಿತ ಎಂಬುವುದಕ್ಕೆ ಪುರಾವೆಗಳು ದೊರೆತಿದೆ ಎಂದು TrueMedia AI ದೃಢಪಡಿಸಿದೆ ಎಂದು ಬೂಮ್ ಹೇಳಿದೆ. ಫಲಿತಾಂಶ ಇಲ್ಲಿ ನೋಡಬಹುದು.

ಇವಿಷ್ಟೆ ಅಲ್ಲದೆ ಇನ್ನೂ ಕೆಲ ಎಐ ಪತ್ತೆ ಸಾಧನಗಳ ಮೂಲಕ ಬೂಮ್ ಸಂಸ್ಥೆ ಬಿಜೆಪಿ ಹಂಚಿಕೊಂಡಿರುವ ಆಡಿಯೋ ನಕಲಿ ಎಂದು ಹೇಳಿದೆ.

ಇದನ್ನೂ ಓದಿ | FACT CHECK : ಮುಂಬೈ ಸಿದ್ದಿ ವಿನಾಯಕ ದೇವಸ್ಥಾನದ ಜಾಗ ತನ್ನದೆಂದ ವಕ್ಫ್‌ ಬೋರ್ಡ್..ವೈರಲ್ ಸುದ್ದಿಯ ಅಸಲಿಯತ್ತೇನು? 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚಿಕ್ಕಮಗಳೂರಿನಲ್ಲಿ ಎಸ್‌ಐಆರ್ (SIR) ವಿರೋಧಿ ಜಾಥಾ: ಮತದಾರರ ಹಕ್ಕು ಕಸಿಯುವ ಹುನ್ನಾರದ ವಿರುದ್ಧ ಆಕ್ರೋಶ

ಭಾರತ ಚುನಾವಣಾ ಆಯೋಗವು ಜಾರಿಗೆ ತಂದಿರುವ ವಿಶೇಷ ತೀವ್ರ ಪರಿಷ್ಕರಣೆ (SIR - Special Intensive Revision) ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಜಾಗ್ರತೆ ವಹಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ....

ಮಂಗಳೂರು: ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಮುಖವಾಣಿಯಾಗಿ ಕಾರ್ಯನಿರ್ವಹಿಸುತ್ತಿದೆ: ವಿ.ಎಸ್. ಶ್ರೀಧರ್ 

ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರಗತಿಪರ ಸಂಘಟನೆಗಳು, ಎದ್ದೇಳು ಕರ್ನಾಟಕ ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟವಾದ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ಎಸ್‌ಐಆರ್ ಜನಜಾಗೃತಿ ಜಾಥಾದ ಭಾಗವಾಗಿ ಇಂದು (ಜೂನ್-14) ಮಂಗಳೂರಿನಲ್ಲಿ ಸಭೆ...

ಬಿಸಿಲ ನಾಡು ಕಲಬುರಗಿಯಲ್ಲಿ ಮೊಳಗಿದ SIR ವಿರೋಧಿ ಘೋಷಣೆ.

ಕೇಂದ್ರ ಚುನಾವಣಾ ಆಯೋಗ ಜಾರಿಗೆ ತಂದಿರುವ ವಿಶೇಷ ತೀವ್ರ ಮತ ಪರಿಷ್ಕರಣೆ SIR ಅನ್ನು ಕರ್ನಾಟಕದಲ್ಲಿ ಜಾರಿ ಮಾಡಬಾರದು ಎಂದು ಆಗ್ರಹಿಸಿ ಕರ್ನಾಟಕದಾದ್ಯಂತ ಎದ್ದೇಳು ಕರ್ನಾಟಕ ಹಾಗಾ SIR ವಿರೋಧಿ ಕರ್ನಾಟಕ ವೇದಿಕೆಯು...

ವಿಜಯಪುರ : ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾಗೆ ಚಾಲನೆ

ರಾಜ್ಯದ ಆರು ಜಿಲ್ಲೆಗಳಲ್ಲಿ ನಡೆಯಲಿರುವ ಎಸ್‌ಐಆರ್‌ ವಿರೋಧಿ ಜನಜಾಗೃತಿ ಜಾಥಾಗೆ ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ (ಜೂ.13) ಸಂಜೆ ಚಾಲನೆ ದೊರೆಯಿತು. ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಅಹಿಂದ ಮುಖಂಡ ಎಸ್ ಎಂ ಪಾಟೀಲ...

ಬಸವಣ್ಣನ ಕಲ್ಯಾಣದಲ್ಲಿ SIR ವಿರೋಧಿ ಜಾಥಾ.

ಬಸವಕಲ್ಯಾಣSIR ವಿರೋಧಿಸಿ ಕರ್ನಾಟಕದಾದ್ಯಂತ ನಡೆಯುತ್ತಿರುವ ಜಾಗೃತಿ ಜಾತಾವು ಬಸವಕಲ್ಯಾಣಕ್ಕೆ ತಲುಪಿತು. ಬಸವಕಲ್ಯಾಣದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಜನರು ಜನವಿರೋಧಿ SIR ನ್ನೂ ವಿರೋಧಿಸಿ ನಿರ್ಣಯ ಕೈಗೊಂಡರು. ಸಭೆಯಲ್ಲಿ ಮಾತನಾಡಿದ ಜಾಥಾದ ಮುಖ್ಯಸ್ಥ...

ಸಂಸದ ಬಿ.ವೈ ರಾಘವೇಂದ್ರ ನಡೆಸುತ್ತಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ SIR ವಿರೋಧಿ ಜನಜಾಗೃತಿ ಜಾಥಾ ಕರಪತ್ರ ಹಂಚಿದ ಕಾರ್ಯಕರ್ತರು

ಶಿವಮೊಗ್ಗ : ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲೆಯ ಸಾಗರ ತಾಲ್ಲೂಕಿನ ರೈಲು ನಿಲ್ದಾಣದಲ್ಲಿ ಕುಂದುಕೊರತೆಗಳ ಸಭೆ ನಡೆಸುತ್ತಿದ್ದ ವೇಳೆ ಎಸ್‌ಐಆರ್ ವಿರುದ್ಧ ’ಎದ್ದೇಳು ಕರ್ನಾಟಕ’ ಮತ್ತು ’ಎಸ್‌ಐಆರ್ ವಿರೋಧಿ ಒಕ್ಕೂಟ’ದ ಮುಖಂಡರು...

ಬೀದರ್‌ ನಿಂದ ಶುರವಾದ SIR ವಿರೋಧಿ ಜನಜಾಗೃತಿ ಜಾಥಾ

SIR ವಿರೋಧಿ ಕರ್ನಾಟಕ ಹಾಗೂ ಎದ್ದೇಳು ಕರ್ನಾಟಕವು ಕರ್ನಾಟಕದಲ್ಲಿ SIR ಜಾರಿಯನ್ನು ವಿರೋಧಿಸಿ ರಾಜ್ಯದ 5 ಸ್ಥಳಗಳಿಂದ ಜನಜಾಗೃತಿ ಜಾಥಾ ಆಯೋಜಿಸಿದೆ. ಇಂದು ಬೀದರ್‌ ನ ಅಂಬೇಡ್ಕರ್‌ ಸರ್ಕಲ್‌ ನಿಂದ ಆರಂಭವಾದ ಜಾಥಾವು...

ಒಬ್ಬರೇ ಒಬ್ಬ ಅರ್ಹ ಮತದಾರರ ಹೊರಗಿಡುವುದನ್ನು ಒಪ್ಪುವುದಿಲ್ಲ : ಯೂಸುಫ್ ಕನ್ನಿ

ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲಿ, ಆದರೆ, ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬೇಡವೇ ಬೇಡ. ಎಸ್‌ಐಆರ್‌ ಮೂಲಕ ಒಬ್ಬರೇ ಒಬ್ಬರು ಅರ್ಹ ಮತದಾರರನ್ನೂ ಪಟ್ಟಿಯಿಂದ ಹೊರಗಿಡುವುದನ್ನು ನಾವು ಒಪ್ಪುವುದಿಲ್ಲ ಎಂದು ಜಮಾಅತೆ ಇಸ್ಲಾಮಿ...

ಪ್ರಜಾಪ್ರಭುತ್ವದ ರಕ್ಷಣೆಗೆ ಎಸ್‌ಐಆರ್ (SIR) ವಿರುದ್ಧ ಜನಜಾಗೃತಿ ಜಾಥಾಕ್ಕೆ ಶಿವಮೊಗ್ಗದಲ್ಲಿ ಚಾಲನೆ

ಕೇಂದ್ರ ಸರ್ಕಾರದ ಎಸ್‌ಐಆರ್ (SIR) ನೀತಿಯ ವಿರುದ್ಧ ರಾಜ್ಯಾದ್ಯಂತ ಜನವಿರೋಧಿ ಅಲೆ ಎದ್ದಿದೆ. "ಸಂತ-ಶರಣರ ಈ ನಾಡಿನಲ್ಲಿ ಯಾವುದೇ ರೀತಿಯ ದುಷ್ಟ ಆಟ, ಮೋಸ, ವಂಚನೆಗೆ ಅವಕಾಶವಿಲ್ಲ" ಎಂಬ ದೃಢ ಸಂಕಲ್ಪದೊಂದಿಗೆ 'ಎಸ್‌ಐಆರ್...

ಜೂನ್ 13 ರಿಂದ ಕರ್ನಾಟಕದಲ್ಲಿ ‘SIR ವಿರೋಧಿ’ ಜನಜಾಗೃತಿ ಜಾಥ

ರಾಜ್ಯ ಚುನಾವಣಾ ಆಯೋಗವು ಎಸ್‌ಐಆರ್ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ನಾಗರಿಕರ ಆಕ್ಷೇಪಣೆಗಳಿಗೆ ಸ್ಪಂದಿಸದಿರುವ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಾಗೂ ‘ಎದ್ದೇಳು ಕರ್ನಾಟಕ’ ಸಂಘಟನೆಯ ವತಿಯಿಂದ ಜೂನ್ 13 ರಿಂದ...