Homeಅಂಕಣಗಳುಜನರ ತಲೆಗೆ ಮೌಢ್ಯದ ‘ಚಿಪ್ಪು’!

ಜನರ ತಲೆಗೆ ಮೌಢ್ಯದ ‘ಚಿಪ್ಪು’!

- Advertisement -
- Advertisement -

ಬುರುಡೆ ಜ್ಯೋತಿಷ್ಯವು ಹೇಗೆ ಹುಟ್ಟಿದ ಮಗುವನ್ನು ತಕ್ಷಣವೇ ಸುತ್ತಿಕೊಳ್ಳುತ್ತದೆ ಮತ್ತು ಹೆಸರಿನ ನೆಪದಲ್ಲಿ ಹೇಗೆ ‘ಹ್ಯೂಮನ್ ಐಡೆಂಟಿಟಿ, ಸ್ಟೇಟಸ್ ರೆಕಗ್ನಿಷನ್ ಸಿಸ್ಟಮ್’ ಎಂಬ ಅದ್ಭುತ ಆವಿಷ್ಕಾರವು ಮನುಷ್ಯನ ಜಾತಿ ಮತ್ತು ಹಿನ್ನೆಲೆಯನ್ನು ಹೇಗೆ ಗುರುತಿಸುತ್ತದೆ ಹಾಗೂ ‘ಹ್ಯೂಮನ್ ಫಿಲ್ತ್ ಸೆಪರೇಶನ್ ಎಂಡ್ ಸೆಗ್ರೆಗೇಶನ್ ಸಿಸ್ಟಮ್’ ಎಂಬ ಅವಿಷ್ಕಾರವು ಹೇಗೆ ನಿಕೃಷ್ಟ ಮಾನವರನ್ನು ಗುರುತಿಸಿ, ಜೀವನದುದ್ದಕ್ಕೂ ಪ್ರತ್ಯೇಕಿಸಿ ಮೂಲೆಗುಂಪು ಮಾಡುತ್ತದೆ ಎಂಬುದನ್ನು ಕಳೆದ ಸಂಚಿಕೆಯಲ್ಲಿ ನೋಡಿದೆವು.

ದಶಕಗಳ ಹಿಂದೆ ಪಂಚಾಂಗಗಳು ಮನೆಮನೆಯನ್ನು ಪ್ರವೇಶಿಸಲು ಅರಂಭಿಸಿದವು. ದಿನಮಾನವನ್ನು ಅಂದರೆ ಭೂಮಿ ಚಂದ್ರಾದಿ ಗ್ರಹಗಳ ಚಲನೆಯನ್ನು, ಋತುಗಳನ್ನು, ಗ್ರಹಣಗಳನ್ನು ನಿಖರವಾಗಿ ಗುರುತಿಸುವ ಈ ಪಂಚಾಂಗಗಳು ವಾಸ್ತವಿಕವಾಗಿ ನಮ್ಮ ಪುರಾತನ ಖಗೋಳಶಾಸ್ತ್ರಜ್ಞರ, ಗಣಿತಜ್ಞರ, ವೈಜ್ಞಾನಿಕ ಕೊಡುಗೆ. ಅದರೆ, ಅದರ ಪೇಟೆಂಟ್ ಪಡೆದುಕೊಂಡ ಬುರುಡೆ ಶಾಸ್ತ್ರಜ್ಞರು ಅದಕ್ಕೆ ತಮ್ಮದೇ ಆದ ಹೊಸಹೊಸ ಆವಿಷ್ಕಾರಗಳನ್ನು ಸೇರಿಸಿ, ಮುಗ್ಧ ಜನರ ‘ಇಯರ್ ಮೇಲೆ ಫ್ಲವರ್’ ಇಡಲು ಪ್ರಾರಂಭಿಸಿದರು.
ಒಂದು ಪ್ರದೇಶದ ಋತುಮಾನ, ಹವಾಮಾನ, ಮಳೆಯ ಸಮಯವನ್ನು ಗುರುತಿಸಲು ಈ ಲೆಕ್ಕಾಚಾರಗಳು ರೈತಾಪಿ ಜನರಿಗೆ ಅನುಕೂಲಕರವಾದುದರಿಂದ ಸ್ವಲ್ಪ ಅಕ್ಷರ ಬಲ್ಲವರ ಮನೆಗಳಲ್ಲಿ ಪಂಚಾಂಗಗಳು ಇರುತ್ತಿದ್ದವು. ಅವರು ಕಾಂಪೌಂಡರ್‍ಗಳಂತೆ ಉಳಿದವರ ಚಿಕ್ಕಪುಟ್ಟ ಸಮಸ್ಯೆಗಳಿಗೆ ಮದ್ದು ಕೊಡುತ್ತಿದ್ದರು. ದೊಡ್ಡ ಸಮಸ್ಯೆಗಳು ಎದುರಾದರೆ ಜೋಯಿಸರ ಬಳಿಯೇ ಹೋಗಬೇಕಾಗುತ್ತಿತ್ತು.
ಈ ಪಂಚಾಂಗಗಳಲ್ಲಿ ನಕ್ಷತ್ರಗಳ ಪಟ್ಟಿ, ಘಳಿಗೆ, ಇಲ್ಲದ ರಾಹುಕಾಲ, ಗುಳಿಕಕಾಲ, ಯಮಗಂಡ ಕಾಲ, ರಾಶಿ, ದೋಷಗಳು, ಫಲಗಳು, ಕಾಟಗಳು ಇತ್ಯಾದಿಗಳನ್ನು ಸೇರಿಸಲಾಯಿತು. ಇವರ ಅತ್ಯಂತ ದೊಡ್ಡ ಆವಿಷ್ಕಾರವೆಂದರೆ ವೈಜ್ಞಾನಿಕವಾದ ಪುರಾತನ ಆವಿಷ್ಕಾರಗಳಿಗೆ ಬುರುಡೆ ಅಪ್ಲಿಕೇಷನ್‍ಗಳನ್ನು ಕಂಡುಹಿಡಿದು, ಅವುಗಳ ಜೊತೆಗೆ ಭಯದ ಪ್ರೋಗ್ರಾಮ್ ಚಿಪ್ಪನ್ನು ಜನರ ಮೆದುಳಿಗೆ ಇಂಪ್ಲಾಂಟ್ ಮಾಡಿದ್ದು! ಇಂದಿಗೂ ವಿದ್ಯಾವಂತರೆನಿಸಿಕೊಂಡವರು ಕೂಡಾ ಇಂತಹ ಒಂದು ಚಿಪ್ಪನ್ನು ತಲೆಯೊಳಗೆ ಹೊತ್ತು ತಿರುಗುವುದನ್ನು ನೋಡಬಹುದು. ನಮ್ಮ ಮಾಧ್ಯಮದಲ್ಲೂ ಇಂತಹ ‘ಚಿಪ್ಪು’ ಹಂದಿಗಳು ದಂಡಿಯಾಗಿವೆ!
ಪಂಚಾಂಗಗಳ ದೊಡ್ಡ

ಸಾಧನೆ ಎಂದರೆ ಮನುಷ್ಯನ ಹುಟ್ಟು-ಸಾವು-ಕರ್ಮಗಳಿಗೂ ಗ್ರಹ-ನಕ್ಷತ್ರ-ಘಳಿಗೆಗಳಿಗೂ, ಭವಿಷ್ಯಕ್ಕೂ ಇಲ್ಲದ ಸಂಬಂಧ ಕಲ್ಪಿಸಿದ್ದು! ಮತ್ತು ಮಂತ್ರವಾದಿ ಕತೆಗಳಂತಹ ಕಾಲ್ಪನಿಕ ಚಿತ್ರಣವನ್ನು ಪಂಚಾಂಗಕ್ಕೆ ಸೇರಿಸಿ ಸಂವತ್ಸರಗಳು ಪಿಶಾಚಿಗಳಂತೆ ಜನರ ತಲೆಯಲ್ಲಿ ಕುಣಿಯುವಂತೆ ಮಾಡಿದ್ದು.
ನನ್ನ ಬಾಲ್ಯದಲ್ಲಿ ಪಂಚಾಂಗ ಮನೆ ಸೇರಿದ ಕೂಡಲೇ ತಂದೆಯವರು ಒಮ್ಮೆ ಕಣ್ಣಾಡಿಸಿದ್ದೇ ತಡ ಅದು ನನ್ನ ಪಾಲಾಗುತ್ತಿತ್ತು. ಯಾಕೆಂದರೆ ಶಾಲೆಗಳಲ್ಲಿ ಅಶ್ವಿನಿ, ಭರಣಿ, ಕೃತ್ತಿಕಾ… ಮುಂತಾದ ನಕ್ಷತ್ರಗಳು, ಮೇಷ, ವೃಷಭ, ಮಿಥುನ… ಮುಂತಾದ ರಾಶಿಗಳು, ಚೈತ್ರ, ವೈಶಾಖ, ಆಷಾಡ…ಇತ್ಯಾದಿ ಋತುಗಳು, ಪ್ರಭವ, ವಿಭವ, ಶುಕ್ಲ…ಇತ್ಯಾದಿ ಸಂವತ್ಸರಗಳನ್ನು ಉರುಹೊಡೆಸಲಾಗುತ್ತಿತ್ತು.
ಮಹಾ ಕುತೂಹಲಕಾರಿ, ಅದ್ಭುತ, ಭಯಾನಕವಾಗಿದ್ದುದು ಮಾತ್ರ ಚಂದಾಮಾಮ ಕತೆಗಳನ್ನು ಮೀರಿಸುವ ಸಂವತ್ಸರ ಫಲ! ಅವುಗಳಲ್ಲಿ ಆಯಾ ಸಂವತ್ಸರಕ್ಕೆ ಒಂದೊಂದು ಭಯಾನಕ ರೂಪ ಕೊಡಲಾಗುತ್ತಿತ್ತು. “ರಕ್ತಾಕ್ಷಿ ನಾಮದ ದೇವತೆಯು ಪೀತವಸ್ತ್ರಧಾರಿಣಿಯಾಗಿ, ಒಂದು ಕೈಯಲ್ಲಿ ಕಪಾಳವನ್ನೂ ಇನ್ನೊಂದು ಕೈಯ್ಯಲ್ಲಿ ಶೂಲವನ್ನೂ ಹಿಡಿದುಕೊಂಡು, ನೇರಳೆ ಬಣ್ಣದ ಹೂವಿನ ಮಾಲೆಯನ್ನು ಧರಿಸಿಕೊಂಡು, ಭಿಕ್ಷಾನ್ನವನ್ನು ಮುಕ್ಕುತ್ತಾ, ಪಶ್ಚಿಮದಿಂದ ಪೂರ್ವಾಭಿಮುಖವಾಗಿ ದಕ್ಷಿಣ ದಿಕ್ಕನ್ನು ದಿಟ್ಟಿಸುತ್ತಾ ಕತ್ತೆಯ ಮೇಲೇರಿ ಪಯಣಿಸುವಳು… ಎರಡು ಕೊಳಗ ಮಳೆಯನ್ನು ಸುರಿಸುವಳು… ಇಷ್ಟ ಧಾನ್ಯ ಗೋಧಿ… ಆಕೆ ಬಳಸಿದ ವಸ್ತುಗಳಿಗೆ ಕೊರತೆಯಾಗುವುದು… ಹೀಗೆ ಸಾಗುವ ಕತೆಯನ್ನು ಓದಿ ನಾವು ಮಕ್ಕಳು ರಾತ್ರಿ ವೇಳೆ ಭಯಾನಕ ಕನಸುಬಿದ್ದು ಬೆವರುತ್ತಿದ್ದರೆ, ಹಿರಿಯರು ಇವುಗಳಿಗೆ ತಮ್ಮದೇ ಕಾಲ್ಪನಿಕ ಅರ್ಥ ಕಲ್ಪಿಸಿ, ಈ ಸಲ ಮಳೆ ಕಡಿಮೆ, ಕಾಲ ಕಷ್ಟ, ಗೋಧಿಗೆ ಹೇಗೋ ಗೊತ್ತಿಲ್ಲ; ಭತ್ತಕ್ಕೆ ತೊಂದರೆಯಿಲ್ಲ ಎಂಬಿತ್ಯಾದಿ ಚಿಂತೆಗಳಲ್ಲಿ ಮುಳುಗಿರುತ್ತಿದ್ದರು. ಇಂತಹಾ ಒಂದು ಸಾಮೂಹಿಕ ಸನ್ಮೋಹನದ, ಸಮೂಹ ಸನ್ನಿಯ ಮನಶ್ಶಾಸ್ತ್ರೀಯ ಆವಿಷ್ಕಾರವನ್ನು ಭಾರತದ ಬುರುಡೆ ಜ್ಯೋತಿಷಿಗಳು ಬಿಟ್ಟರೆ ಪ್ರಪಂಚದಲ್ಲಿ ಬೇರಾರೂ ಮಾಡಿರಲಿಕ್ಕಿಲ್ಲ.
ಒಂದೆರಡು ಕೊಳಗ ಮಳೆ ಎಂದರೆ ಬರ ಬರುತ್ತದೆಂದೂ, ನಾಲ್ಕು ಕೊಳಗ ಎಂದರೆ ಪ್ರಳಯವೆಂದೂ ನಂಬುವ ರೈತಾಪಿ ಜನರು, ಈ ಸಂವತ್ಸರವು ಇಡೀ ಜಗತ್ತಿಗೆ ಅನ್ವಯಿಸುವುದಾದರೆ ಮರುಭೂಮಿಯಲ್ಲಿ ಕಡಿಮೆ ಮಳೆ, ಕರಾವಳಿ-ಮಲೆನಾಡುಗಳಲ್ಲಿ ಹೆಚ್ಚು ಮಳೆ ಯಾಕೆ ಸುರಿಸುತ್ತದೆ ಎಂದು ಎಂದಿಗೂ ಯೋಚಿಸುವುದಿಲ್ಲ! ಏನಾದರೂ ಹೆಚ್ಚುಕಡಿಮೆ ಅದರೆ, ಸಮಜಾಯಿಷಿ ಕೊಡಲು ಜೋಯಿಸರಿಗೆ ಮಾತ್ರ ಈ ತರ್ಕ ಅನುಕೂಲಕ್ಕೆ ಬರುತ್ತದೆ.
ನಾಲ್ಕು ಕೊಳಗ ಮಳೆ ಎಂದಿದ್ದಾಗ ತೀರಾ ಕಡಿಮೆ ಮಳೆ ಬಂದಿದ್ದನ್ನೂ, 1974ರಲ್ಲಿ ಎರಡೋ ಮೂರೋ ಕೊಳಗ ಎಂದಿದ್ದಾಗ, ನೇತ್ರಾವತಿ ನದಿಯಲ್ಲಿ ಒಂದು ಇಡೀ ತಲೆಮಾರು ಮರೆಯದ, ಪ್ರಳಯದಂತಹ ಮಳೆ ಮತ್ತು ನೆರೆ ಬಂದದ್ದನ್ನೂ ನಾನು ಕಂಡಿದ್ದೇನೆ, ಆ ಮಾತು ಬೇರೆ.
ಈ ಜೋಯಿಸರು ಒಳ್ಳೆಯ ಹಾಸ್ಯಪಟುಗಳೂ ಹೌದು! ಅದಕ್ಕಾಗಿಯೇ ಅವರು ‘ಗವಳಿ ಪತನ ಫಲ’ ಎಂದೇನೋ ಒಂದು ಶಕುನವನ್ನೂ ಕೊಡುತ್ತಿದ್ದರು. ಅಂದರೆ, ಅಕಸ್ಮಾತ್ ಹಲ್ಲಿಯೇನಾದರೂ ಮೈಮೇಲೆ ಬಿದ್ದರೆ ಯಾವ ಫಲ ಇತ್ಯಾದಿ. ಕೈಗೆ ಬಿದ್ದರೆ, ಹೆಗಲಿಗೆ ಬಿದ್ದರೆ…ಹೀಗೆ ಫಲಗಳಿರುತ್ತವೆ. ಇರುವ ಎಲ್ಲಾ ಮನೆವಾರ್ತೆ ಪ್ರಾಣಿಗಳಲ್ಲಿ ಹಲ್ಲಿ ಏಕೆ ವಿಶೇಷ ಎಂದು ನನಗಿನ್ನೂ ಒಗಟು. ಹಲ್ಲಿ ಏನಾದರೂ ಬ್ಯಾಲೆನ್ಸ್ ತಪ್ಪಿ ಜೋಕಾಲಿಯಿಂದ ಬಲೆಗೆ ಬೀಳುವ ಸರ್ಕಸಿನ ಜೋಕರ್‍ನಂತೆ ಅನ್ನದ ಪಾತ್ರೆಗೆ ಬಿದ್ದರೆ ಏನು ಫಲ ಎಂದರೆ, ತಿಂದವರಿಗೆ ವಾಂತಿ-ಬೇಧಿ ಎಂದು ಕಂಡಿದ್ದೇನೆ. ಅದರೆ ಹಲ್ಲಿ ಬೀಳುವುದಕ್ಕೂ ಭವಿಷ್ಯಕ್ಕೂ ಏನು ಸಂಬಂಧ? ಆಗ ಭವಿಷ್ಯದ ಮೇಲೆ ಪ್ರಭಾವ ಬೀರುವ ಗ್ರಹ, ನಕ್ಷತ್ರಗಳು ರಜೆ ಹಾಕಿರುತ್ತವೆಯೆ!?
ನಾನು ಏಳನೇ ತರಗತಿಯಲ್ಲಿರುವಾಗ ಹಲ್ಲಿ ಪತನದ ಪರಿಣಾಮವನ್ನು ಕಣ್ಣಾರೆ ಕಾಣುವಂತಾಯಿತು. ಆ ಭಯಾನಕ ಘಟನೆ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದಂತಿದೆ! ನಮ್ಮದು ಅಗಲೇ ಏಳ್ನೂರು ವಿದ್ಯಾರ್ಥಿಗಳಿದ್ದ ಅತ್ಯಂತ ಹಳೆಯ ಖಾಸಗಿ ಅನುದಾನಿತ ಕನ್ನಡ ಮಾಧ್ಯಮ ಶಾಲೆ! ಭಾರಿ ಕಟ್ಟಡ, ಇಪ್ಪತ್ತೈದು ಅಡಿ ಮೀರಿದ ಛಾವಣಿ.
ಒಂದು ದಿನ ಬೋಳು ತಲೆಯ ಒಬ್ಬರು ಮೇಷ್ಟ್ರು ಪಾಠ ಮಾಡುತ್ತಿದ್ದರು. ಮೇಲ್ಜಾತಿಗೆ ಸೇರಿದ ಅವರು ಮಕ್ಕಳನ್ನು ಜಾತಿ-ಧರ್ಮದ ಹೆಸರೆತ್ತಿ ಅವಮಾನಿಸುತ್ತಿದ್ದರಿಂದ, ಹೊಡೆಯುತ್ತಿದ್ದುದರಿಂದ ಅವರನ್ನು ಕಂಡರೆ ನಮಗ್ಯಾರಿಗೂ ಆಗುತ್ತಿರಲಿಲ್ಲ! ಆ ದಿನ ಮಟಮಟ ಮಧ್ಯಾಹ್ನ! ಒಂದು ಹಲ್ಲಿ ತಟಕ್ಕನೇ ಅವರ ಬೋಳು ನೆತ್ತಿಯ ಮೇಲೆ ಬಿತ್ತು! ಇಡೀ ತರಗತಿ ದಂಗಾಯಿತು. ನನ್ನನ್ನೂ ಸೇರಿದಂತೆ ಹೆಚ್ಚಿನವರಿಗೇ ಒಳಗೊಳಗೇ ಖುಷಿ ಕೂಡ- “ಮಾಷ್ಟ್ರು ಸಾಯುತ್ತಾರೆ!”. ನಡುನೆತ್ತಿಗೆ ಹಲ್ಲಿ ಬಿದ್ದರೆ ಮರಣ ಅಂತ ಪಂಚಾಂಗದಲ್ಲಿ ಬರೆದಿದೆ! ಕೊನೆಗೂ ಹಾಗೆಯೇ ಆಯಿತು!
ಮೇಷ್ಟ್ರು ಕೇಳಿದರು, “ಪಂಚಾಂಗ ನೋಡುತ್ತೀರ?! ನಡು ನೆತ್ತಿಯ ಮೇಲೆ ಹಲ್ಲಿ ಬಿದ್ದರೆ ಏನು ಫಲ?”
ನಾನು ತಟ್ಟನೇ ಉತ್ತರಿಸಿದೆ, “ಮರಣ!”
ಮೇಷ್ಟ್ರು “ಹೌದು! ಮರಣ! ಯಾರಿಗೆ?…ಹಲ್ಲಿಗೆ!” ಎಂದವರೇ ನೆಲ ತೋರಿಸಿದರು. ಅಲ್ಲಿ ಅಷ್ಟು ಎತ್ತರದಿಂದ ಬಿದ್ದಿದ್ದ ಹಲ್ಲಿ ಕಾಲು ಮೇಲಾಗಿ ಬಿಳಿಹೊಟ್ಟೆ ತೋರಿಸುತ್ತಾ ಸತ್ತುಬಿದ್ದಿತ್ತು! ಅಂದೇ, ಈ ಬುರುಡೆ ಜ್ಯೋತಿಷ್ಯ ಕುರಿತ ನನ್ನ ನಂಬಿಕೆ ಕಳಚಿಹೋಯಿತು. ಈ ಮೇಷ್ಟ್ರು ಇಂದಿಗೂ ಮುಂಬಯಿಯಲ್ಲಿ ಮಕ್ಕಳ ಮನೆಯಲ್ಲಿ ಇದ್ದಾರೆಂದು ಕೇಳಿದ್ದೆ!
ಇವೆಲ್ಲವುಗಳ ವಾಸ್ತವವನ್ನು ಮುಂದೆ ಆಧುನಿಕ ವಿಜ್ಞಾನದ ಮೂಲಕ ವಿವರವಾಗಿ ಮತ್ತು ತಾರ್ಕಿಕವಾಗಿ ಪರಿಶೀಲಿಸುವ ಮೊದಲು ಇಂತಹ ಇನ್ನಷ್ಟು ಆವಿಷ್ಕಾರಗಳ ಕತೆಗಳನ್ನು ಕೇಳೋಣ!

– ನಿಖಿಲ್ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

“ಎಷ್ಟೊಂದು ದುರಹಂಕಾರ!”: ಜೆ.ಪಿ.ನಡ್ಡಾ ಹೇಳಿಕೆಗೆ ಕಪಿಲ್ ಸಿಬಲ್ ತೀವ್ರ ಆಕ್ಷೇಪ; ಪ್ರತಿಭಟನಾನಿರತ ಸಿಜೆಪಿ ಬೆಂಬಲಿಸಿ ವೀಡಿಯೋ ಸಂದೇಶ

ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಕ್ರಾಂತಿಕಾರಿ ಜಿರಳೆ ಜನತಾ ಪಕ್ಷ (ಸಿಜೆಪಿ) ನಡೆಸುತ್ತಿರುವ ವಿದ್ಯಾರ್ಥಿ ಪ್ರತಿಭಟನೆಯ ವಿಚಾರದಲ್ಲಿ ಕೇಂದ್ರ ಸರ್ಕಾರದ ನಡೆಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ಕೇಂದ್ರ ಸಚಿವ ಜೆ.ಪಿ....

ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯ: ಮೋದಿ-ಅಮಿತ್ ಶಾ ರಾಜೀನಾಮೆಗೆ ರಾಹುಲ್ ಗಾಂಧಿ ಆಗ್ರಹ

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ 'ಸಂಸತ್ ಚಲೋ' ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ಕಾಂಗ್ರೆಸ್ ನಾಯಕ ರಾಹುಲ್...

ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದ ಸಿಜೆಪಿ ನಿಯೋಗ; ಮನವಿ ಪತ್ರ ಸಲ್ಲಿಕೆ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ ನವದೆಹಲಿಯಲ್ಲಿ ಪ್ರತಿಭಟನೆ ತೀವ್ರಗೊಂಡಿರುವ ಬೆನ್ನಲ್ಲೇ ಇಂದು ಕೇಂದ್ರ ಸಚಿವ ಜೆಪಿ ನಡ್ಡಾ ಅವರನ್ನು ಸಿಜೆಪಿ ಸದಸ್ಯರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ...

‘ಸಂಸತ್ ಚಲೋ’: ‘ಸೋನಮ್ ವಾಂಗ್ಚುಕ್ ಪತ್ನಿ ಮೇಲೆ ದೆಹಲಿ ಪೊಲೀಸರಿಂದ ಹಲ್ಲೆ’: ವಿದ್ಯಾರ್ಥಿಗಳ ಮೇಲೂ ಲಾಠಿ ಚಾರ್ಜ್  

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಆಯೋಜಿಸಲಾಗಿದ್ದ ‘ಸಂಸದ್ ಚಲೋ’ ಮೆರವಣಿಗೆಯ ವೇಳೆ ಶಿಕ್ಷಣ ತಜ್ಞ ಹಾಗೂ ಲಡಾಖ್ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಸೇರಿದಂತೆ ಹಲವಾರು ಪ್ರತಿಭಟನಾಕಾರರ ಮೇಲೆ...

ಕನಿಷ್ಠ 20 ಸಾವಿರ ‘ಕಾಕ್ರೋಚ್‌’ಗಳಿಂದ ಸಂಸತ್ತಿಗೆ ಮೆರವಣಿಗೆ; ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಲಾಠಿಚಾರ್ಜ್ – ಅಶ್ರುವಾಯು

ಧರ್ಮೇಂದ್ರ ಪ್ರಧಾನ್ ರಾಜೀನಾಮಗೆ ಒತ್ತಾಯಿಸಿ ಮುಂಗಾರು ಅಧಿವೇಶನದ ಮೊದಲ ದಿನದಂದು ಸಂಸತ್ತಿಗೆ ಮೆರವಣಿಗೆ ನಡೆಸಲು ದೆಹಲಿಯಲ್ಲಿ ಜಮಾಯಿಸಿದ್ದ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಾವಿರಾರು ಬೆಂಬಲಿಗರನ್ನು ಚದುರಿಸಲು ದೆಹಲಿ ಪೊಳಿಸರು ಅಶ್ರುವಾಯು ಶೆಲ್‌ಗಳನ್ನು...

ಸಿಜೆಪಿ ಪ್ರತಿಭಟನೆಗೆ ನಡುಗಿದ ಕೇಂದ್ರ ಸರ್ಕಾರ; ತರಾತುರಿಯಲ್ಲಿ ಸಂಸತ್ತಿನ ಗೇಟ್ ಮುಚ್ಚಿದ ಭದ್ರತಾ ಸಿಬ್ಬಂದಿ

ನೀಟ್‌ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ವಿರೋಧಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಇಂದು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಹಮ್ಮಿಕೊಂಡಿರುವ ಸಂಸತ್ ಮೆರವಣಿಗೆಗೆ ಕೇಂದ್ರ ಸರ್ಕಾರ...

ಹಕ್ಕುಗಳ ಕಾಯ್ದೆಗೆ 7 ವರ್ಷ: ಕಾಗದದಲ್ಲಷ್ಟೇ ಸಮಾನತೆ, ಉದ್ಯೋಗ ಸಿಗದೆ ಬೀದಿಗೆ ತಳ್ಳಲ್ಪಡುತ್ತಿರುವ ಟ್ರಾನ್ಸ್‌ಜೆಂಡರ್‌ ಸಮುದಾಯ

ಬೆಂಗಳೂರು: ರಾಷ್ಟ್ರೀಯ ಮಟ್ಟದಲ್ಲಿ ‘ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ-2019’ ಜಾರಿಗೆ ಬಂದು ಏಳು ವರ್ಷಗಳು ಕಳೆದಿದ್ದರೂ, ಸಮುದಾಯದ ಆರ್ಥಿಕ ಸಬಲೀಕರಣ ಇನ್ನೂ ಕನಸಾಗಿಯೇ ಉಳಿದಿದೆ. ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ...

ಸಂಸತ್‌ ಚಲೋ: ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಗೆ ಭಾರೀ ಬೆಂಬಲ

ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್‌ (NEET) ಪ್ರಶ್ನೆಪತ್ರಿಕೆ ಸೋರಿಕೆ, ಸಾಲು ಸಾಲು ವಿದ್ಯಾರ್ಥಿಗಳ ಆತ್ಮಹತ್ಯೆ ಹಾಗೂ ದೇಶದ ಪರೀಕ್ಷಾ ವ್ಯವಸ್ಥೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಆಯೋಜಿಸಿರುವ...

ಡಿಜಿಟಲೀಕರಣಗೊಂಡ 2002ರ ಮತದಾರರ ಪಟ್ಟಿಯಿಂದ ಬೆಂಗಳೂರಿನ ಮತಗಟ್ಟೆಗಳೇ ಮಾಯ: ಮಾಹಿತಿ ಸಿಗದೆ ಆತಂಕದಲ್ಲಿ ನೂರಾರು ಮತದಾರರು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಭಾಗಗಳಲ್ಲಿ 2002ರ ಡಿಜಿಟಲೀಕರಣಗೊಂಡ ಮತದಾರರ ಪಟ್ಟಿಯಿಂದ ಇಡೀ ಮತಗಟ್ಟೆಗಳೇ ಕಾಣೆಯಾಗಿರುವ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದರಿಂದಾಗಿ ನೂರಾರು ಮತದಾರರು ಆತಂಕ ಮತ್ತು ಗೊಂದಲಕ್ಕೊಳಗಾಗಿದ್ದಾರೆ ಎಂದು...

‘ರಾಮನಿಗೆ ಅವಮಾನಿಸಿದ್ದಕ್ಕೆ ಶಾಯಿ ಎರಚಿದೆ’: ಜಂತರ್ ಮಂತರ್‌ನಲ್ಲಿ ಅಭಿಜೀತ್ ದೀಪ್ಕೆ ಮೇಲಿನ ದಾಳಿಯನ್ನು ಸಮರ್ಥಿಸಿಕೊಂಡ ಬರ್ಖಾ ಟ್ರೆಹಾನ್

ನವದೆಹಲಿ: ದೇಶದ ರಾಜಧಾನಿಯ ಜಂತರ್ ಮಂತರ್‌ನಲ್ಲಿ ಜುಲೈ 18 ರ ಶನಿವಾರದಂದು ನಡೆದ ಪ್ರತಿಭಟನಾ ಸಭೆಯಲ್ಲಿ ಭಾಷಣ ಮಾಡುತ್ತಿದ್ದ ‘ಜಿರಳೆ ಜನತಾ ಪಕ್ಷ’ದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರ ಮೇಲೆ ಶಾಯಿ ಎರಚಿದ...