ಇತ್ತೀಚೆಗೆ ಮುಕ್ತಾಯಗೊಂಡ 2025 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ 128 ಕ್ಷೇತ್ರಗಳಲ್ಲಿ (ಮತ ಅಳಿಸುವಿಕೆ) ರಿಗ್ಗಿಂಗ್ ನಡೆದಿದೆ ಎಂದು ಕೇರಳ ಕಾಂಗ್ರೆಸ್ ಆರೋಪಿಸಿದೆ. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಗೆದ್ದ 202 ಸ್ಥಾನಗಳಲ್ಲಿ, 128 ಕ್ಷೇತ್ರಗಳಲ್ಲಿ ಗೆಲುವು ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಅಭಿಯಾನದ ಸಮಯದಲ್ಲಿ ನಡೆಸಿದ ಮತದಾರರ ಅಳಿಸುವಿಕೆಯಿಂದ ಉಂಟಾಗಿದೆ ಎಂದು ಪಕ್ಷ ಹೇಳಿಕೊಂಡಿದೆ.
ಮತದಾರರ ಅಳಿಸುವಿಕೆಯ ಡೇಟಾವನ್ನು ವಿಶ್ಲೇಷಿಸಿದ ನಂತರ ಮತ್ತು ಪ್ರತಿ ಕ್ಷೇತ್ರದ ಗೆಲುವಿನ ಅಂತರದೊಂದಿಗೆ ಹೋಲಿಸಿದ ನಂತರ, ಭಾರತೀಯ ಚುನಾವಣಾ ಆಯೋಗ (ECI) ನಡೆಸಿದ SIR ಡ್ರೈವ್ ಅಡಿಯಲ್ಲಿ ನಿಜವಾದ ಮತದಾರರನ್ನು ನಿರಂಕುಶವಾಗಿ ತೆಗೆದುಹಾಕಲಾಗಿದೆ ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ.
ಈ ಕುರಿತು ಶನಿವಾರ ತನ್ನ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಕೇರಳ ಕಾಂಗ್ರೆಸ್ 2025ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ 128 ವಿಧಾನಸಭಾ ಕ್ಷೇತ್ರಗಳಲ್ಲಿ ಮತ-ಅಳಿಸುವಿಕೆ (ರಿಗ್ಗಿಂಗ್) ನಡೆದಿದೆ ಎಂದು ಗಂಭೀರವಾಗಿ ಆರೋಪಿಸಿದೆ.
BIHAR RIGGING | 128 seats out of the 202 won by the NDA came purely from SIR-based voter deletions.
We analysed the voter deletion data published by the ECI as ordered by the Supreme Court and compared it with the victory margins in each constituency. The pattern is… pic.twitter.com/HiLjWjkWyZ
— Congress Kerala (@INCKerala) November 15, 2025
ಕಾಂಗ್ರೆಸ್ ಈ ಆರೋಪಗಳನ್ನು ಮುಂದಿಟ್ಟಿದ್ದು, “SIR ಬಾಂಗ್ಲಾದೇಶ, ಮಯನ್ಮಾರ್ ಮತ್ತು ನೇಪಾಳದಿಂದ ಬಂದ ಅಕ್ರಮ ವಲಸಿಗರನ್ನು ಗುರುತಿಸಿ ತೆಗೆದುಹಾಕಲು ಮಾಡಿದ್ದ ಕಾನೂನಾಗಿದೆ. ಆದರೆ ECI ಪ್ರಕಟಪಡಿಸಿದ ಇಪ್ಪತ್ತು ಡೇಟಾಸೆಟ್ನಲ್ಲಿ ಒಬ್ಬರಿಗೂ ಅಕ್ರಮ ವಲಸಿಗರು ದೊರೆತಿಲ್ಲ,” “ನಿಜಕ್ಕೂ ಏನು ನಡೆದಿದೆ ಎಂದರೆ, SIR ಹೆಸರಿನಲ್ಲಿ ಬಡತನ ಮತ್ತು ದುರ್ಬಲ ಮತದಾರರನ್ನು – ಎನ್ಡಿಎ ಅಡಿಯಲ್ಲಿ ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದವರನ್ನು – ತೆಗೆದುಹಾಕುವ ಸಂಪೂರ್ಣ ಶುದ್ಧೀಕರಣ. ಅವರನ್ನು ಪಟ್ಟಿಯಿಂದ ತೆಗೆದುಹಾಕಿದ ನಂತರ, ಉಳಿದವರನ್ನು ಮತದಾನ ಮಾಡದಂತೆ ತಡೆದು, ಆ ನಂತರ ಸಂಪೂರ್ಣವಾಗಿ ಚುನಾವಣೆಯನ್ನೇ ನಿರ್ವಹಿಸಿದೆ ಎಂದು ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ ಅವರ “ಲೋಕತಂತ್ರದ ತಾಯಿ” ಎಂಬ ಪುನರಾವರ್ತಿತ ಹೇಳಿಕೆಯನ್ನು ಟೀಕಿಸಿರುವ ಕೇರಳ ಕಾಂಗ್ರೆಸ್, ಈ ಯೋಜನೆಯನ್ನು ಈಗಲೇ ಅರ್ಥಮಾಡಿಕೊಳ್ಳಬೇಕು, ಇಲ್ಲದಿದ್ದರೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಪ್ರತಿ ನಾಗರಿಕನನ್ನು ಮತದಾರ ಪಟ್ಟಿಯಿಂದ ತೆಗೆದುಹಾಕುತ್ತದೆ ಎಂದು ಹೇಳಿದೆ.
ಜೊತೆಗೆ ಈ ‘ಲೋಕತಂತ್ರದ ತಾಯಿ’ ಯೋಜನೆಯನ್ನು ಈಗಲೇ ಅರ್ಥ ಮಾಡಿಕೊಳ್ಳದಿದ್ದರೆ, ಬಿಜೆಪಿ ನಮ್ಮಲ್ಲಿ ಪ್ರತಿಯೊಬ್ಬರನ್ನು ಶಾಂತವಾಗಿ ಪಟ್ಟಿಯಿಂದ ತೆಗೆದುಹಾಕಿ, ನಮ್ಮ ಸ್ಥಳಕ್ಕೆ ಡಮ್ಮಿ ಬ್ರೆಜಿಲಿಯನ್ನರನ್ನು ಸೇರಿಸಿ, ಅವರ ಹೆಸರಿನಲ್ಲಿ ಮತಗಳನ್ನು ಹಾಕಿ, ಶಾಶ್ವತವಾಗಿ ಚುನಾವಣೆಗಳನ್ನು ಗೆಲ್ಲುತ್ತಾ ಇರುತ್ತದೆ,” ಎಂದು ಪಕ್ಷ ಹೇಳಿದೆ.


