Homeಕರ್ನಾಟಕದೊರೆಸ್ವಾಮಿಯವರ ಸಾರ್ಥಕ ಬದುಕಿಗೆ ಅಖಂಡ ಬೆಂಬಲವಾಗಿ ನಿಂತಿದ್ದ ಲಲಿತಮ್ಮ

ದೊರೆಸ್ವಾಮಿಯವರ ಸಾರ್ಥಕ ಬದುಕಿಗೆ ಅಖಂಡ ಬೆಂಬಲವಾಗಿ ನಿಂತಿದ್ದ ಲಲಿತಮ್ಮ

- Advertisement -
- Advertisement -

ಲಲಿತಮ್ಮನವರು ಹುಟ್ಟಿದ್ದು ಮದ್ದೂರು ತಾಲೂಕು ಕೌಡ್ಲೆ. ಬೆಳೆದಿದ್ದು ಬೆಂಗಳೂರು. ದೊರೆಸ್ವಾಮಿಯವರ ಜೊತೆ ಮದುವೆ (ದೊರೆಸ್ವಾಮಿಯವರ ಪ್ರಕಾರ “ಒಂದು ರೀತಿಯಲ್ಲಿ ಲವ್ ಮ್ಯಾರೇಜ್”!) ಡಿಸೆಂಬರ್ 1950. ಭರ್ತಿ 69 ವರ್ಷಗಳ ಸಹಜೀವನ ನಡೆಸಿ ಈಗ ತಮ್ಮ 89 ವರ್ಷನೇ ವರ್ಷದಲ್ಲಿ ಇಹಲೋಕ ತ್ಯಜಿಸಿದ್ದಾರೆ.

ಜೀವನ ಪೂರ್ತಿ ದೊರೆಸ್ವಾಮಿಯವರ ಸಾರ್ಥಕ ಬದುಕಿಗೆ ಅಖಂಡ ಬೆಂಬಲವಾಗಿ ನಿಂತ ಸಾರ್ಥಕ ಬದುಕು ಬದುಕಿದರು. ಗಂಡನಾದ ಜಂಗಮ ತಿಂಗಳಿಗೆ ಕೈಗೆ ತಂದಿಡುತ್ತಿದ್ದ 100 ರೂ. ಮಾಸಾಶನದಲ್ಲಿ 34 ರೂಪಾಯಿ ಮನೆ ಬಾಡಿಗೆ ಕಟ್ಟಿ, ಮೂರೋ ನಾಲಕೋ ರೂಪಾಯಿ ಮನೆಗೆಲಸದಾಕೆಗೆ ಕೊಟ್ಟು ಮಿಕ್ಕಿದ್ದರಲ್ಲಿ ಎರಡು ಮಕ್ಕಳ ಎಲ್ಲ ಬೇಕುಬೇಡಗಳನ್ನು ನಿಭಾಯಿಸಿ ಮನೆ ತೂಗಿಸಿಕೊಂಡು ಬಂದ ಗಟ್ಟಿಗಿತ್ತಿ ಅವರಾಗಿದ್ದರು.

ಗಂಡ ಸತತ ನಾಲ್ಕು ವರ್ಷಗಳ ಕಾಲ ಭೂದಾನ ಚಳವಳಿಯ ಸಂಘಟಕರಾಗಿ ತಿಂಗಳಲ್ಲಿ ಮೂರುವಾರ ಊರೂರು ತಿರುಗಿ ಒಂದು ವಾರ ಮಾತ್ರ ಮನೆಯಲ್ಲಿರುತ್ತಿದ್ದುದು.

ಖಾದಿ ಪ್ರಸಾರ ಇತ್ಯಾದಿ ಕಾರಣ

ನಂತರ ಕೂಡ ದೊರೆಸ್ವಾಮಿಯವರು ಖಾದಿ ಪ್ರಸಾರ, ಪರಿಸರ ಚಳವಳಿ, ಶಾಲೆಗಳು-ಸಹಕಾರಿ ಸಂಘಗಳು, ಭ್ರಷ್ಟಾಚಾರ ವಿರೋಧಿ ಚಳವಳಿ ಇವೇ ಮುಂತಾದವುಗಳಲ್ಲಿ ಎಡೆಬಿಡದೆ ತೊಡಗಿಸಿಕೊಂಡು ತಿಂಗಳಲ್ಲಿ ಮೂರು ವಾರ ಹೊರಗೆ ಇರುತ್ತಿದ್ದವರೇ. ಕೈಗಾ ಚಳವಳಿಯಲ್ಲಿ ಸತತ ಎರಡು ವರ್ಷ ಆ ಕಡೆಯೇ ಇದ್ದವರು. ಆಗೆಲ್ಲ ಅಮ್ಮ ‘ಏಕಾಂಗವೀರ’ರೇ!

ಸಬ್‍ಇನ್‍ಸ್ಪೆಕ್ಟರ್‍ಗೇ ಗದರಿದರು!

ತುರ್ತುಪರಿಸ್ಥಿತಿ ಅವಧಿಯಲ್ಲಿ ದೊರೆಸ್ವಾಮಿಯವರು ನಾಲ್ಕು ತಿಂಗಳ ಕಾಲ ಜೈಲಿನಲ್ಲಿದ್ದರು. ಆಗ ಅಮ್ಮ ಪ್ರತಿವಾರ ಕೋಡುಬಳೆ, ನಿಪ್ಪಟ್ಟು, ಚಕ್ಕುಲಿ, ರವೆಉಂಡೆ, ಪುಳಿಯೋಗರೆ… ಹೀಗೆ ಏನಾದರೊಂದು ತಿಂಡಿಯನ್ನು ಎಲ್ಲ ಸತ್ಯಾಗ್ರಹಿಗಳಿಗೂ ಆಗುವಷ್ಟು ಮಾಡಿಕೊಂಡು ಜೈಲುಭೇಟಿಗೆ ಹೋಗುವರು. ಎಲ್ಲರೂ ಗಂಟೆ ಕಾಲ ಕೂತು ಹರಟುತ್ತ ಕುರುಕುತ್ತ ಸಮಯ ಕಳೆಯುವರು. ಜೈಲು ಸಿಬ್ಬಂದಿ ಕೂಡ ಸಾಮಾನ್ಯವಾಗಿ ಅಡ್ಡಿಪಡಿಸುತ್ತಿರಲಿಲ್ಲ.

ಆದರೆ ಒಮ್ಮೆ ಯಾರೋ ಒಬ್ಬ ಹೊಸಬ ‘ಉತ್ಸಾಹಿ’ ಸಬ್‍ಇನ್‍ಸ್ಪೆಕ್ಟರ್‍ಗೆ ಗ್ರಹಚಾರ ಕೆಟ್ಟುಬಿಟ್ಟಿತ್ತು! “ಅದನ್ನೆಲ್ಲ ಇಲ್ಲಿ ತರಬಾರದಮ್ಮ. ಇದು ಜೈಲು. ಗೊತ್ತು ತಾನೆ? ಇಲ್ಲಿ ಅದನ್ನೆಲ್ಲ ಅಲೋ ಮಾಡಲ್ಲ” ಅಂದರು. ಅಮ್ಮ ಅವರಿಗೆ ಸಮಾಧಾನವಾಗಿಯೇ ತಿಳಿಹೇಳಿ ನೋಡಿದರು. ಆತ ಜಗ್ಗಲಿಲ್ಲ. ತನ್ನ ಮಗನ ವಯಸ್ಸಿನ ಆತನಿಗೆ “ಇದೇನಪ್ಪ. ಇಷ್ಟು ದಿನ ಬಿಡುತ್ತಿದ್ದರು, ನಿಮ್ಮದೊಂದು ಹೊಸ ರೂಲ್ಸಾ?” ಎಂದರು ಅಮ್ಮ. ಆತನದು ಬಿಸಿರಕ್ತ. ತನ್ನ ರೂಲುದೊಣ್ಣೆ ಅಡ್ಡಹಿಡಿದು ತಡೆದು ಬಿಟ್ಟ. ಅಮ್ಮ ರಣಚಂಡಿಯಾಗಿ ಬಿಟ್ಟರು!

“ಏನು ಮಾಡ್ತೀಯೋ ಮಾಡ್ಕೋ. ಜೈಲಿಗೆ ಹಾಕ್ತೀಯಾ? ತಯಾರಾಗಿಯೇ ಬಂದಿದೀನಿ. ಈ ತಿಂಡಿಯನ್ನು ಮಾತ್ರ ನಾನು ಹಂಚದೆ ವಾಪಸ್ ಹೋಗೋಳಲ್ಲ..” ಎನ್ನುತ್ತಾ ಅವನ ರೂಲ್ ದೊಣ್ಣೆಯನ್ನೂ ಅವನನ್ನೂ ತಳ್ಳಿ ನುಗ್ಗಿ ನಡೆದೇಬಿಟ್ಟರು. ಇದು ಯಾಕೋ ವಿಕೋಪಕ್ಕೆ ಹೋಗಬಹುದೆಂದು ಹೆದರಿದ ಇತರ ಸಿಬ್ಬಂದಿ ಓಡಿಬಂದು ಇಬ್ಬರನ್ನೂ ಸಮಾಧಾನಪಡಿಸಿದರು. ಅಮ್ಮನಿಗೆ, “ಸಾಹೇಬ ಹೊಸಬ. ನಿಧಾನವಾಗಿ ನಾವು ಅವನಿಗೆ ಹೇಳ್ತೀವಿ. ಇವತ್ತೊಂದು ದಿನ ನಮ್ಮ ಕೈಲೇ ಕೊಡಿಯಮ್ಮ, ನಾವೇ ಹಂಚ್ತೀವಿ” ಅಂತ ರಣಚಂಡಿಯನ್ನು ಶಾಂತಗೊಳಿಸಿ ಪರಿಸ್ಥಿತಿ ತಿಳಿಗೊಳಿಸಿದರು!

ದೊರೆಸ್ವಾಮಿಯವರು ಅಮ್ಮನನ್ನು ನೆನೆದು ಹೇಳುತ್ತಾರೆ..

“70 ವರ್ಷಗಳ ಸಾರ್ಥಕ ಬದುಕು ಒಟ್ಟಿಗೆ ಕಳೆದೆವು. ಕಷ್ಟ ಸುಖ ಎಲ್ಲವನ್ನೂ ಕಂಡಿದ್ದೀವಿ. ಕಷ್ಟವನ್ನು ಪಟ್ಟಿದ್ದೀವಿ, ಸುಖವನ್ನು ಹಂಚಿಕೊಂಡಿದ್ದೆವು. ನಿಮ್ಮಂತ ನೂರಾರು ಗೆಳೆಯರನ್ನು ಪಡೆಯಲಿಕ್ಕೆ ಅವಳು ಇಲ್ಲದಿದ್ದರೆ ಸಾಧ್ಯವಾಗುತ್ತಿರಲಿಲ್ಲ. ಅವಳು ನನ್ನ ಪಾಡಿಗೆ ನನ್ನನ್ನು ಬಿಟ್ಟು ಮನೆ ಮತ್ತು ಮಕ್ಕಳನ್ನು ನೋಡಿಕೊಂಡಿದ್ದರಿಂದಲೇ ನಾನು ಊರೂರು ತಿರುಗಿಕೊಂಡು ನಿಮ್ಮೆಲ್ಲರ ಪ್ರೀತಿಯನ್ನು ಗಳಿಸಲಿಕ್ಕೆ ಸಾಧ್ಯವಾಯಿತು. ನನಗೆ ನೀವೆಲ್ಲರೂ ಸೇರಿ ಸಮಾಜ ನನ್ನ ರಕ್ಷಣೆಗೆ ನಿಲ್ಲುತ್ತದೆ. ಒಂದು ವೇಳೆ ನಾನೇ ಮೊದಲು ಹೊರಟುಹೋಗಿದ್ದರೆ ಅವಳನ್ನು ಯಾರು ನೋಡಿಕೊಳ್ಳುತ್ತಿದ್ದರು ಎಂಬ ಆತಂಕ ಕಾಡುತ್ತಿತ್ತು. ಆ ಆತಂಕ ಇವತ್ತು ದೂರವಾಗಿದೆ. ಅವಳು ಮುಂದೆ ಹೋಗಿದ್ದಾಳೆ. ಇದು ನಿಜವಾಗಿಯೂ ಸಮಾಧಾನದ ದಿನವಾಗಿದೆ.

ಹೌದು ಅವಳಿಲ್ಲದಿರುವುದು ಹಲವು ದಿನಗಳು ಕಾಡುತ್ತದೆ ನಿಜ. ಆದರೂ ಪರವಾಗಿಲ್ಲ. ನೀವೆಲ್ಲರೂ ಇದ್ದೀರಿ, ಇಷ್ಟೊಂದು ಜನ ನನ್ನ ವಿಶ್ವಾಸಿಗಳು, ಸ್ನೇಹಿತರೂ, ಹಿತೈಷಿಗಳಾಗಿದ್ದಿರಿ. ನಿಮ್ಮೆಲ್ಲರ ಬೆಂಬಲದೊಂದಿಗೆ ಇನ್ನುಳಿದ ಜೀವನವನ್ನು ಕಳೆಯಬಲ್ಲೆ ಎಂಬುದಾಗಿ ದೊರೆಸ್ವಾಮಿಯವರು ಅಮ್ಮನನ್ನು ನೆನಪಿಸಿಕೊಳ್ಳುತ್ತಾರೆ.

ಸಾವಿನಲ್ಲೂ ಮಾದರಿ

ಶ್ರೀಮತಿ ಲಲಿತಮ್ಮನವರಿಗೆ ದೊರೆಸ್ವಾಮಿಯವರು ಮತ್ತವರ ಕುಟುಂಬವರ್ಗದವರು ಯಾವುದೇ ಸಾಂಪ್ರದಾಯಿಕ ಅಂತ್ಯಸಂಸ್ಕಾರ ಮಾಡದೆ ಬೆಂಗಳೂರಿನ ಕೆಂಪೇಗೌಡ ವೈದ್ಯಕೀಯ ಕಾಲೇಜಿಗೆ ವೈದ್ಯಕೀಯ ವಿದ್ಯಾರ್ಥಿಗಳ ಸಂಶೋಧನೆಗೋಸ್ಕರ ದೇಹದಾನ ಮಾಡಿದ್ದಾರೆ. ಸಮಾಜಕ್ಕೆ ಮಾದರಿ ಮತ್ತು ಆದರ್ಶವಾಗಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...