Homeಕರ್ನಾಟಕಮಂಗಳೂರು ಪ್ರತಿಭಟನೆ ಕನ್ನಡ ನ್ಯೂಸ್ ಚಾನೆಲ್‍ಗಳ ಪಕ್ಷಪಾತದ ಧೋರಣೆ

ಮಂಗಳೂರು ಪ್ರತಿಭಟನೆ ಕನ್ನಡ ನ್ಯೂಸ್ ಚಾನೆಲ್‍ಗಳ ಪಕ್ಷಪಾತದ ಧೋರಣೆ

- Advertisement -
- Advertisement -

ಒಂದು ಪತ್ರ

‘ಪೌರತ್ವ’ ಕಾಯ್ದೆಯನ್ನು ವಿರೋಧಿಸಿ ಇತ್ತೀಚೆಗೆ ಮಂಗಳೂರಲ್ಲಿ ನಡೆದ ಪ್ರತಿಭಟನೆಯ ವೇಳೆ ಪೊಲೀಸರು ನಡೆಸಿದ ಗೋಲಿಬಾರ್‍ನಿಂದ ಇಬ್ಬರು ಮೃತಪಟ್ಟು ಅನೇಕರು ಗಾಯಗೊಂಡಿರುವ ಸುದ್ದಿಯ ಗಂಭೀರತೆಯನ್ನು ತಗ್ಗಿಸಲು ಕೆಲವೂಂದು ಟಿ.ವಿ. ವಾಹಿನಿಗಳು ಪ್ರಯತ್ನಿಸುತ್ತಿದೆ. ಉತ್ತರಪ್ರದೇಶದಲ್ಲಿ ಸಂಘಪರಿವಾರದ ಜನರು ಹಾಡುಹಗಲೇ ಪೊಲೀಸರನ್ನು ಅಟ್ಟಾಡಿಸಿಕೊಂಡು ಕೊಂದ ಹಾಗೂ ಅವರ ಜೀಪಿನಲ್ಲಿಯೇ ಹತ್ಯೆಮಾಡಿದಾಗ ಜಾಗ್ರತಗೊಳ್ಳದ ಪೊಲೀಸ್‍ಪ್ರೇಮ ಈಗ ಯಡಿಯೂರಪ್ಪರವರ ನೆಚ್ಚಿನ ಪದದಲ್ಲಿ ಹೇಳುವುದಾದರೆ ನೂರಕ್ಕೆ ನೂರು ಜಾಗೃತವಾಗಿದೆ. ಅದಿರಲಿ.

ಪ್ರತಿಭಟನೆಯ ದೃಶ್ಯಾವಳಿಯ ತುಣುಕುಗಳನ್ನು ಪೋಣಿಸಿ ಪ್ರತಿಭಟನಾಕಾರರನ್ನೇ ಅಪರಾಧಿಗಳು ಎಂಬಂತೆ ಬಿಂಬಿಸುತ್ತಿರುವ ಹಿನ್ನೆಲೆಯಲ್ಲಿರುವ ಕನ್ನಡದ ಕೆಲವು ವಾಹಿನಿಗಳ ಮನೋಸ್ಥಿತಿ ಇಲ್ಲಿಯ ಮುಸ್ಲಿಮರಿಗೆ ಅಜ್ಞಾತವಲ್ಲ.

ಪಬ್ಲಿಕ್ ಟಿ.ವಿ. ಎಂಬ ಒಂದು ವಾಹಿನಿ ಪೊಲೀಸರ ಮೇಲಿನ ದಾಳಿಯನ್ನು ಪ್ರಸಾರಗೂಳಿಸಿದ ದೃಶ್ಯಾವಳಿಗಳ ಕುರಿತು ನಡೆಸಿದ ಪ್ಯಾನಲ್ ಚರ್ಚೆಯಲ್ಲಿ ಆ್ಯಂಕರ್‍ನೊಬ್ಬ ಪ್ರತಿಭಟನೆಗಾರರ ಪರವಾಗಿ ಭಾಗವಹಿಸಿದ ಅಶ್ರಫ್ ಎಂಬವರಿಗೆ ಎನ್.ಆರ್.ಸಿ, ಸಿ.ಎ.ಎ. ಎಂದರೇನೆಂದು ಎಂಬ ಪ್ರಶ್ನೆಯನ್ನು ಕೀ ಕೊಟ್ಟ ಗೊಂಬೆಯಂತೆ ಪುನರಾವರ್ತಿಸಿ ಅತನ ಚಾನಲ್ ಪ್ರಸಾರಗೊಳಿಸಿದ ದೃಶ್ಯಾವಳಿಯ ಸಾಚಾತನವನ್ನು ಪ್ರಶ್ನಿಸಲು ಅವಕಾಶವನ್ನೇ ಕೊಡಲಿಲ್ಲ. ಚರ್ಚೆಯ ನಡುವೆ ಅದರ ತುಣುಕುಗಳನ್ನು ಪ್ರಸಾರಗೊಳಿಸುತ್ತಲೂ ಇದ್ದರು. ಆದರೆ ಕ್ಯಾಪ್ಟನನ ಚಾನೆಲ್ ನೈಜಸಂಗತಿ ಹೊರಬಾರದಂತೆ ಪೌರತ್ವದ ಬೇಲಿ ಹಾಕಿತು. ಚಾಣಕ್ಯರಾದ ಅಶ್ರಫ್ ಬಾರಿಬಾರಿಗೂ ಚರ್ಚೆಯ ದಿಕ್ಕು ತಪ್ಪಿಸಬೇಡಿ ಎಂದು ವಿನಂತಿಸಿದರೂ ಪ್ರಯೋಜನವಾಗಲಿಲ್ಲ. ಪೊಲೀಸರ ಮೇಲಿನ ದಾಳಿಯನ್ನು ಪ್ರಸಾರಗೊಳಿಸಿದಂತೆ ಅವರು ನಡೆಸಿದ ದೌರ್ಜನ್ಯದ ದೃಶ್ಯಾವಳಿಗಳು ಲೋಕವನ್ನೆಲ್ಲ ಜಾಲಾಡುವ ಈ ಚಾನಲ್‍ಗೆ ಲಭ್ಯವಾಗದೆ ಹೋಯಿತೇ? ಸಂಘರ್ಷಪೀಡಿತ ಸಿರಿಯಾದ ಪಟ್ಟಣವಾದ ‘ಇದ್ಲಿಬ್’ಅನ್ನು ‘ಇದ್ರಿಸ್’ ಎಂದು ಉಚ್ಚರಿಸುವ ವಾಹಿನಿಯ ಕ್ಯಾಪ್ಟನ್ (ಹೀಗೆಂದು ಅಕ್ಕರೆಯಿಂದ ಕರೆಯುತ್ತಿದ್ದ ಒಬ್ಬ ಆ್ಯಂಕರ್ ಈಗ ಬೇರೊಂದು ಚಾನೆಲ್‍ನಲ್ಲಿದ್ದಾರೆ) ಮುಸ್ಲಿಮರ ಪರವಾಗಿ ಪ್ರಕಟಿಸದಿರಲು (ಎಲ್ಲಾ ಚಾನೆಲ್‍ಗಳು ಹಾಗೆ ಪ್ರಸಾರಗೊಳಿಸಿದ ನಂತರ) ಅಸಾಧ್ಯವಾದಾಗ ಒಂದು ಔದಾರ್ಯವೆಂಬಂತೆ ಪ್ರಸಾರಗೊಳಿಸುತ್ತಿರುವುದನ್ನು ಮುಸ್ಲಿಮರು ಬಲ್ಲರು. ಆತನ ಹಾವಭಾವ, ಮಾತಿನ ಶೈಲಿ, ಸ್ವರಗಳ ಏರಿಳಿತದಿಂದ ಇದನ್ನು ಗಮನಿಸಬಹುದಾಗಿದೆ. ಬಾರಿಬಾರಿಗೂ ತನ್ನನ್ನು ಚೆಡ್ದಿ ಎಂದು ಕರೆಯುತ್ತಾರೆಂದು ಅವಲತ್ತುಕೊಳ್ಳುವ ಅಥವಾ ಸಂತೋಷಪಡುವ ಕ್ಯಾಪ್ಟನ್ ಈಗ ಪ್ಯಾಂಟ್ ಬಂದಿರುವುದರಿಂದ ಚೆಡ್ಡಿ ಕಾಲಹರಣಗೊಂಡಿದೆಯೆಂದು ನೆನಪಿಸಿ ಕೊಡುವುದನ್ನು ಮರೆಯುವುದಿಲ್ಲ.

ಕೆಲವು ಚಾನೆಲ್‍ಗಳು ಮುಸ್ಲಿಮರ ಸಮಸ್ಯೆಗಳ ಕುರಿತು ಚರ್ಚೆ ನಡೆಸುವಾಗ ಒಂದಿಬ್ಬರು ಕಾಯಂ ಗಿರಾಕಿಗಳನ್ನು ಪ್ಯಾನೆಲ್‍ನಲ್ಲಿ ಕೂರಿಸಿ ಪೂರ್ವ ನಿರ್ಧರಿತವಾದಂತೆ ಸೋಲಿಸಿ ಹಿಂದೆ ಕಳುಹಿಸಿಬಿಡುತ್ತವೆ. ಜಿಲ್ಲೆಯ ವಿದ್ಯಾವಂತ, ಬುದ್ಧಿವಂತ ಮುಸ್ಲಿಮ್ ಪ್ರತಿಭೆಗಳನ್ನು ಪ್ಯಾನಲ್ ಚರ್ಚೆಗೆ ಕೂರಿಸುವ ಧೈರ್ಯ ತೆಗೆದುಕೊಳ್ಳುವುದಿಲ್ಲ. ಏಕೆಂದರೆ, ಮುಸ್ಲಿಮರ ನೈಜ ಸಮಸ್ಯೆಗಳು ಹೊರಬರುವುದು ಅವರಿಗೆ ಬೇಕಿಲ್ಲ.
ಪೌರತ್ವ ಕಾಯ್ದೆಯ ಪ್ರಕಾರ ಪಾಕಿಸ್ತಾನ, ಬಾಂಗ್ಲಾದೇಶ, ಅಫಘಾನಿಸ್ತಾನದಿಂದ ಬರುವ ಮುಸ್ಲಿಮೇತರ ಅಕ್ರಮ ವಲಸಿಗರಿಗೆ ಭಾರತದ ಪೌರತ್ವ ಲಭಿಸುತ್ತದೆ. ಅಕ್ರಮ ವಲಸಿಗನಾದ ಓರ್ವ ಮುಸ್ಲಿಮ್ ಹಿಂದೂಧರ್ಮಕ್ಕೆ ಮತಾಂತರವಾದರೆ ಅವನಿಗೆ ಪೌರತ್ವ ಲಭಿಸುತ್ತದೆಯೇ? ಹಾಗೆಯೇ ಓರ್ವ ಹಿಂದೂ ಇಸ್ಲಾಮಿಗೆ ಮತಾಂತರವಾದರೆ ಅವನ ಪೌರತ್ವ ರದ್ದಾಗುತ್ತದೆಯೇ? ಒಟ್ಟಾರೆಯಗಿ ಧರ್ಮಾಧಾರಿತ ಪೌರತ್ವ ಸಂವಿಧಾನದ ಮೂಲಭೂತ ಸ್ವರೂಪಕ್ಕೆ ವಿರುದ್ಧವಾಗಿದೆ.

ಕನ್ನಡದ ಚಾನೆಲ್‍ಗಳು ದಿನಬೆಳಗಾದರೆ ಪ್ರಸಾರಗೊಳಿಸುತ್ತಿರುವ ಜ್ಯೋತಿಷ್ಯ, ಫಲ ಜ್ಯೋತಿಷ್ಯ, ವಾಸ್ತು, ಹೀಗೂ ಉಂಟೇ? ಮುಂತಾದ ಕಾರ್ಯಕ್ರಮದ ಪ್ರಕಾರ ಈ ಲೋಕ ಅದೆಷ್ಟೋ ಸಲ ನಿರ್ನಾಮವಾಗಬೇಕಿತ್ತು| ಕರಾವಳಿಯಂತೂ ನೂರಾರುಬಾರಿ ಸುನಾಮಿಗೆ ಕೊಚ್ಚಿಹೋಗಬೇಕಿತ್ತು| ಮಲೆಯಾಳಂ ಚಾನೆಲ್‍ಗಳು ಜನರಲ್ಲಿ ವೈಜ್ಞಾನಿಕ ಮನೋಭಾವವನ್ನು ಮೂಡಿಸಲು ಪ್ರಯತ್ನಿಸುವಾಗ ನಮ್ಮ ಕೆಲವು ಚಾನೆಲ್‍ಗಳು ಜನರನ್ನು ಮೂಢನಂಬಿಕೆ, ಕಂದಾಚಾರಗಳ ಕೂಪಕ್ಕೆ ತಳ್ಳುತ್ತಿದೆ. ನಮ್ಮ ಚಾನೆಲ್‍ಗಳು ಹತ್ತಿಪ್ಪತ್ತು ಮಂದಿಯನ್ನು ಗುಡ್ಡೆ ಹಾಕಿಕೊಂಡು ಚಾನೆಲನ್ನು ಮೀನು ಮಾರುಕಟ್ಟೆಯಾಗಿ ಮಾರ್ಪಡಿಸಿರುವ ಸುಳ್ಳಿನ ಸರದಾರ ಅರ್ನಾಬ್ ಗೋಸ್ವಾಮಿಯನ್ನು ಅನುಸರಿಸುವ ಬದಲು ಎನ್.ಡಿ.ಟಿ.ವಿ.ಯ ರವೀಶ್‍ಕುಮಾರ್ ಹಾಗೂ ಇಂಡಿಯಾ ಟುಡೆಯ ರಾಜ್‍ದೀಪ್ ಸರ್ದೇಸಾಯಿ ಅವರನ್ನು ಅನುಸರಿಸಲಿ. ಬಿ.ಬಿ.ಸಿ, ಸಿ.ಎನ್.ಎನ್, ಅಲ್ ಜಝೀರ ಪ್ರಸಾರಗೊಳಿಸುವ ಅಂತರ್ ರಾಷ್ಟ್ರೀಯ ಸುದ್ದಿಗಳನ್ನು ಮರುಪ್ರಸಾರಗೊಳಿಸಿ (ಮೌಢ್ಯ ಬಿತ್ತರಿಸುವ ಬದಲಿಗೆ) ತಮ್ಮ ಚಾನೆಲ್‍ಗಳ ಗುಣಮಟ್ಟವನ್ನು ಹೆಚ್ಚಿಸಲು ಪ್ರಯತ್ನಿಸಲಿ. ರಿಮೋಟ್ ಜನರ ಕೈಯಲ್ಲಿಯೇ ಇರುವುದರಿಂದ ಜನರು ತಾವು ಹೇಳಿದ್ದನ್ನೇ ಪರಮಸತ್ಯವೆಂದು ನಂಬುತ್ತಾರೆ ಎಂಬ ಭ್ರಮೆ ಯಾರಿಗೂ ಬೇಡ.

ಜಿಲ್ಲೆಯಮಟ್ಟಿಗೆ ಹೇಳುವುದಾದರೆ ಬೆಳಗ್ಗಿನ ಪತ್ರಿಕೆಗಳಿಗಿಂತ ಸಂಜೆ ಪತ್ರಿಕೆಗಳೇ ಹೆಚ್ಚು ಜಾತ್ಯತೀತವಾದಿಯಾಗಿವೆ. ಅವುಗಳ ಸಂಘಪರಿವಾರಕ್ಕೆ ನೀಡಿದಷ್ಟೇ ಪ್ರಾಮುಖ್ಯತೆಯನ್ನು ಇತರರಿಗೂ ನೀಡುವ ಮೂಲಕ ತಕ್ಕಡಿಯ ಮುಳ್ಳನ್ನು ನೇರವಾಗಿರಿಸಲು ಪ್ರಯತ್ನಿಸುತ್ತಿದೆ. ರಾಜ್ಯಮಟ್ಟದಲ್ಲಿ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಜಾವಾಣಿ, ವಾರ್ತಾಭಾರತಿ, ನ್ಯಾಯಪಥದಂತಹ ಪತ್ರಿಕೆಗಳಿರುವಂತೆ ಒಂದು ಚಾನಲ್‍ನ ಅಗತ್ಯವಿದೆ. ಜಾತ್ಯತೀತ ಪ್ರೇಮಿಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವರೆಂದು ಆಶಿಸಲೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...