Homeಪಶ್ಚಿಮ ಬಂಗಾಳದ ಬಿಜೆಪಿ ಗೆಲುವು ಎಸ್‌ಐಆರ್‌ ಕುತಂತ್ರದ ಫಲ?

ಪಶ್ಚಿಮ ಬಂಗಾಳದ ಬಿಜೆಪಿ ಗೆಲುವು ಎಸ್‌ಐಆರ್‌ ಕುತಂತ್ರದ ಫಲ?

- Advertisement -
- Advertisement -

ಕಳೆದ 15 ವರ್ಷದಿಂದ ಪಶ್ಚಿಮ ಬಂಗಾಳದ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಮಮತಾ ಬ್ಯಾನರ್ಜಿ ಆಡಳಿತಕ್ಕೆ 2026ರ ಚುನಾವಣಾ ಫಲಿತಾಂಶ ಬ್ರೇಕ್ ನೀಡಿದೆ.  ಪಶ್ಚಿಮ ಬಂಗಾಳದ ಒಟ್ಟು 294 ಕ್ಷೇತ್ರಗಳ ಪೈಕಿ 200ರಲ್ಲಿ ಬಿಜಿಪಿ ಪಕ್ಷವು ಗೆಲುವಿಗೆ ದಾಪುಗಾಲಿಡುತ್ತಿದೆ.

ಬಿಜೆಪಿಯ ರಾಜಕೀಯ ಕುತಂತ್ರದ ಬಗ್ಗೆ ಮಮತಾ ಬ್ಯಾನರ್ಜಿ ಎಷ್ಟೆಲ್ಲಾ ಎಚ್ಚರಿಕೆಯನ್ನು ವಹಿಸಿದ್ದರು, ಅದನ್ನು ಭೇದಿಸುವಲ್ಲಿ ವಿಫಲವಾಗಿದ್ದಾರೆ. ಅದರ ಪರಿಣಾಮ ಬಂಗಾಳದಲ್ಲಿ ಕಮಲ ಅರಳಿದೆ. ಕಮಲ ಅರಳಲು ಮತ್ತೊಂದು ಮುಖ್ಯ ಕಾರಣ ಭಾರತೀಯ ಚುನಾವನಾ ಆಯೋಗ ಜಾರಿ ಮಾಡಿದ ವಿಶೇಷ ತೀವ್ರ ಪರಿಷ್ಕರಣೆ (SIR) ಎಂಬ ಮಾತುಗಳು ಕೇಳಿಬರುತ್ತಿವೆ.

ಹೌದು ಪಶ್ಚಿಮ ಬಂಗಾಳದ ಈ ಚುನಾವಣಾ ಫಲಿತಾಂಶ ಮತ್ತು ಮತದಾರರ ಪಟ್ಟಿಯ ಪರಿಷ್ಕರಣೆಯ (SIR) ಕುರಿತಾದ ದತ್ತಾಂಶಗಳು ಪ್ರಜಾಪ್ರಭುತ್ವದ ವ್ಯವಸ್ಥೆಯ ಬಗ್ಗೆ ಗಂಭೀರವಾಗಿ ಯೋಚಿಸುವಂತೆ ಮಾಡುತ್ತವೆ. ವಿಶೇಷವಾಗಿ 90 ಲಕ್ಷ ಮತದಾರರ ಹೆಸರುಗಳನ್ನು ಅಳಿಸಿಹಾಕಿರುವುದು ಮತ್ತು ಆ ಮೂಲಕ ಚುನಾವಣಾ ಅಖಾಡವನ್ನೇ ಬದಲಿಸಿರುವುದು ಅತ್ಯಂತ ಕಳವಳಕಾರಿ ವಿಷಯ.

ಚುನಾವಣಾ ಆಯೋಗವು ನಡೆಸಿದ SIR ಪ್ರಕ್ರಿಯೆಯು ಬಂಗಾಳದ ಮತದಾರರ ಪಟ್ಟಿಯಲ್ಲಿ ಭಾರಿ ಬದಲಾವಣೆಗಳನ್ನು ತಂದಿತು. ಇದು ಚುನಾವಣಾ ಫಲಿತಾಂಶದ ಮೇಲೆ ಬೀರಿದ ಪ್ರಭಾವವನ್ನು ಈ ಕೆಳಗಿನ ಅಂಶಗಳ ಮೂಲಕ ವಿಶ್ಲೇಷಿಸಬಹುದು.

ಮತದಾನದಿಂದ ವಂಚಿತರಾದ ಶೇ.12 ಮತದಾರರು 

ಎಸ್‌ಐಆರ್ ಪ್ರಕ್ರಿಯೆಯ ನಂತರ ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯಿಂದ ಸುಮಾರು 90 ಲಕ್ಷ ಹೆಸರುಗಳನ್ನು ಅಳಿಸಿಹಾಕಲಾಯಿತು. ಇದು ಒಟ್ಟು ಮತದಾರರ ಸಂಖ್ಯೆಯಲ್ಲಿ ಶೇ. 12ರಷ್ಟು ದೊಡ್ಡ ಕುಸಿತವಾಗಿದೆ. ಈ ಹೆಸರುಗಳ ಅಳಿಸುವಿಕೆಯು ಅನೇಕ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಗೆಲುವಿನ ಅಂತರದ ಮೇಲೆ ನೇರ ಪರಿಣಾಮ ಬೀರಿದೆ.

ಪಶ್ಚಿಮ ಬಂಗಾಳದ ಮತದಾರರ ಸಂಖ್ಯೆಯು ಎಸ್‌ಐಆರ್ ಪ್ರಕ್ರಿಯೆಯ ಮೊದಲು 7.66 ಕೋಟಿ ಇತ್ತು. ಅಂತಿಮ ಪಟ್ಟಿ ಮತ್ತು ನ್ಯಾಯಾಂಗ ಪರಿಶೀಲನೆಯ (Under adjudication) ನಂತರ ಈ ಸಂಖ್ಯೆಯು 6.75 ಕೋಟಿಗೆ ಕುಸಿದಿತ್ತು. ಒಟ್ಟಾರೆಯಾಗಿ ಮತದಾರರ ಪಟ್ಟಿಯಲ್ಲಿ ಶೇ. 12 ರಷ್ಟು ಇಳಿಕೆಯಾಗಿತ್ತು.ಇದುವರೆಗೆ ಒಟ್ಟು 90,62,188 (ಸುಮಾರು 90 ಲಕ್ಷ) ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ. ಅಳಿಸಿಹಾಕಲಾದವರಲ್ಲಿ ಶೇ. 63.42 ರಷ್ಟು ಜನರು ಹಿಂದೂ ಸಮುದಾಯಕ್ಕೆ ಸೇರಿದವರಾಗಿದ್ದರೆ, ಶೇ. 34.32 ರಷ್ಟು ಜನರು ಮುಸ್ಲಿಂ ಸಮುದಾಯದವರಾಗಿದ್ದಾರೆ.

ಬಾಂಗ್ಲಾದೇಶದಿಂದ ಬಂದಿರುವ ಹಿಂದೂ ಮತುವಾ ಪ್ರಾಬಲ್ಯದ ಜಿಲ್ಲೆಗಳಿಂದ (ಉತ್ತರ 24 ಪರಗಣ ಮತ್ತು ನಾದಿಯಾ) ಒಟ್ಟು 2,42,721 ಹೆಸರುಗಳನ್ನು ಅಳಿಸಲಾಗಿದೆ. ಸುಮಾರು 58 ಲಕ್ಷ ಹೆಸರುಗಳು ಈ ವರ್ಗದಲ್ಲಿ ಅಳಿಸಲ್ಪಟ್ಟಿವೆ. ಸುಮಾರು 27 ಲಕ್ಷ ಹೆಸರುಗಳನ್ನು ಈ ಹಂತದಲ್ಲಿ ತೆಗೆಯಲಾಗಿದ್ದು, ಇದರಲ್ಲಿ ಮುಸ್ಲಿಂ ಮತದಾರರ ಸಂಖ್ಯೆ (ಸುಮಾರು 17 ಲಕ್ಷ) ಅತಿ ಹೆಚ್ಚಾಗಿದೆ.

ಕ್ಷೇತ್ರವಾರು ಸಂಶೋಧನಾ ಮಾಹಿತಿ (ಸಬರ್ ಇನ್‌ಸ್ಟಿಟ್ಯೂಟ್):

  • ನಂದಿಗ್ರಾಮ: ಇಲ್ಲಿ ಅಳಿಸಲಾದ ಒಟ್ಟು 3,461 ಮತದಾರರಲ್ಲಿ ಶೇ. 94.5 ರಷ್ಟು (3,270) ಜನರು ಮುಸ್ಲಿಂ ಸಮುದಾಯದವರಾಗಿದ್ದಾರೆ.
  • ಭವಾನಿಪುರ: ಇಲ್ಲಿ ಅಳಿಸಲಾದ 3,875 ಮತದಾರರಲ್ಲಿ ಶೇ. 40.1 ರಷ್ಟು ಜನರು ಮುಸ್ಲಿಮರಾಗಿದ್ದು, ಶೇ. 59.9 ರಷ್ಟು ಜನರು ಮುಸ್ಲಿಮೇತರರಾಗಿದ್ದಾರೆ.

ಮುಸ್ಲಿಂ ಸಮುದಾಯದವರ ಬಳಿ ಸರಿಯಾದ ದಾಖಲೆಗಳಿದ್ದರೂ ಸಹ, ‘ಲಾಜಿಕಲ್ ಡಿಸ್ಕ್ರಿಪನ್ಸಿ’ (LD) ಹೆಸರಿನಲ್ಲಿ ಅವರ ಹೆಸರುಗಳನ್ನು ಅಸಮರ್ಪಕವಾಗಿ ಗುರಿಯಾಗಿಸಿ ಅಳಿಸಲಾಗಿದೆ ಎಂಬ ಆರೋಪವು ಇದೆ. ಚುನಾವಣಾ ಆಯೋಗವು ಮುಸ್ಲಿಂ ಹೆಸರುಗಳನ್ನು ಗುರುತಿಸಲು ಕೃತಕ ಬುದ್ಧಿಮತ್ತೆಯನ್ನು (AI) ಬಳಸಿರುವ ಬಗ್ಗೆಯು ಕಳವಳ ವ್ಯಕ್ತವಾಗಿದೆ.

ಹೆಸರು ಅಳಿಸಲ್ಪಟ್ಟ ಮತದಾರರು ಮುಂದಿನ ದಿನಗಳಲ್ಲಿ ಪಟ್ಟಿಗೆ ಸೇರ್ಪಡೆಗೊಳ್ಳಲು ನ್ಯಾಯಮಂಡಳಿಯನ್ನು (Tribunal) ಸಂಪರ್ಕಿಸುತ್ತಿದ್ದಾರೆ. ಆದಾಗ್ಯೂ, ಏಪ್ರಿಲ್ 23 ಮತ್ತು 29 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ಮತ ಚಲಾಯಿಸಲು ಅವಕಾಶ ನೀಡಲಾಗಿಲ್ಲ.

ಬಂಗಾಳದ ಫಲಿತಾಂಶದ ಮೇಲೆ ಎಸ್‌ಐಆರ್ ಪ್ರಭಾವ

‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪಶ್ಚಿಮ ಬಂಗಾಳದ 2026ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಮುನ್ನಡೆಗೆ ದಾರಿ ತೋರಿದೆ ಫಲಿತಾಂಶದ ಮೇಲೆ ಹೇಗೆ ನೇರ ಪ್ರಭಾವ ಬೀರಿದೆ ಎಂಬುದನ್ನು ಲಭ್ಯವಿರುವ ಅಂಕಿಅಂಶಗಳು ಸಾಬೀತುಪಡಿಸುತ್ತಿವೆ.

5000 ಕ್ಕಿಂತ ಕಡಿಮೆ ಮತದಾರರನ್ನು ಅಳಿಸಿಹಾಕಿದ ಕ್ಷೇತ್ರಗಳು (<5K):

ಯಾವ ಕ್ಷೇತ್ರಗಳಲ್ಲಿ 5000ಕ್ಕಿಂತ ಕಡಿಮೆ ಹೆಸರುಗಳನ್ನು ಅಳಿಸಲಾಗಿದೆಯೋ ಅಂತಹ 13 ಕ್ಷೇತ್ರಗಳ ಪೈಕಿ ಬಿಜೆಪಿ 12 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ, ಟಿಎಂಸಿ ಕೇವಲ 1 ಸ್ಥಾನದಲ್ಲಿ ಗೆದ್ದಿದೆ.

5,000 ದಿಂದ 15,000 ಮತದಾರರನ್ನು ಅಳಿಸಿಹಾಕಿದ ಕ್ಷೇತ್ರಗಳು (5K-15K):

ಸರಾಸರಿ 5 ರಿಂದ 15 ಸಾವಿರ ಮತದಾರರ ಹೆಸರನ್ನು ಅಳಿಸಿಹಾಕಲಾದ 64 ಕ್ಷೇತ್ರಗಳಲ್ಲಿ ಬಿಜೆಪಿ 46 ಸ್ಥಾನಗಳನ್ನು ಗೆದ್ದರೆ, ಟಿಎಂಸಿ 17 ಸ್ಥಾನಗಳನ್ನು ಗೆದ್ದಿದೆ.

15,000 ದಿಂದ 25,000 ಮತದಾರರನ್ನು ಅಳಿಸಿಹಾಕಿದ ಕ್ಷೇತ್ರಗಳು (15K-25K):

ಭಾರಿ ಪ್ರಮಾಣದಲ್ಲಿ ಅಂದರೆ 15 ರಿಂದ 25 ಸಾವಿರದಷ್ಟು ಹೆಸರುಗಳನ್ನು ಅಳಿಸಿಹಾಕಲಾದ 69 ಕ್ಷೇತ್ರಗಳ ಪೈಕಿ ಬಿಜೆಪಿ 44 ಸ್ಥಾನಗಳಲ್ಲಿ ಜಯಗಳಿಸಿದೆ ಮತ್ತು ಟಿಎಂಸಿ 23 ಸ್ಥಾನಗಳನ್ನು ಪಡೆದಿದೆ.

25,000 ಕ್ಕಿಂತ ಹೆಚ್ಚು ಮತದಾರರನ್ನು ಅಳಿಸಿಹಾಕಿದ ಕ್ಷೇತ್ರಗಳು (>25K):

ಅತಿ ಹೆಚ್ಚು ಅಂದರೆ 25 ಸಾವಿರಕ್ಕೂ ಅಧಿಕ ಹೆಸರುಗಳನ್ನು ಪಟ್ಟಿಯಿಂದ ಕೈಬಿಟ್ಟಿರುವ 147 ಕ್ಷೇತ್ರಗಳ ಪೈಕಿ ಬಿಜೆಪಿ 87 ಸ್ಥಾನಗಳನ್ನು ಗೆದ್ದು  ಮುನ್ನಡೆ ಸಾಧಿಸಿದೆ, ಇಲ್ಲಿ ಟಿಎಂಸಿ 60 ಸ್ಥಾನಗಳನ್ನು ಗೆದ್ದಿದೆ.

ಹೆಚ್ಚಿನ ಅಳಿಸುವಿಕೆ = ಬಿಜೆಪಿಗೆ ದೊಡ್ಡ ಲಾಭ:

ಅತಿ ಹೆಚ್ಚು ಅಂದರೆ 25,000ಕ್ಕೂ ಅಧಿಕ ಮತದಾರರನ್ನು ಅಳಿಸಿಹಾಕಲಾದ 147 ಕ್ಷೇತ್ರಗಳ ಪೈಕಿ ಬಿಜೆಪಿ 87 ಸ್ಥಾನಗಳನ್ನು ಗೆದ್ದುಕೊಂಡಿದೆ. ಇದು ಆಯಕಟ್ಟಿನ ಜಾಗಗಳಲ್ಲಿ ದೊಡ್ಡ ಮಟ್ಟದ ಮತದಾರರನ್ನು ಗುರಿಯಾಗಿಸಿ ಪಟ್ಟಿಯಿಂದ ಹೊರಹಾಕಿರುವುದನ್ನು ತೋರಿಸುತ್ತದೆ.

ಮಧ್ಯಮ ಮಟ್ಟದ ಅಳಿಸುವಿಕೆಯಲ್ಲೂ ಕುತಂತ್ರ: 5,000 ದಿಂದ 25,000ದವರೆಗೆ ಮತದಾರರನ್ನು ಅಳಿಸಿದ ಒಟ್ಟು 133 ಕ್ಷೇತ್ರಗಳಲ್ಲಿ , ಬಿಜೆಪಿ 90 ಸ್ಥಾನಗಳನ್ನು ಕಿತ್ತುಕೊಂಡಿದೆ. ಅಂದರೆ, ಡಿಲೀಶನ್ ಪ್ರಮಾಣ ಹೆಚ್ಚಾದಷ್ಟೂ ಬಿಜೆಪಿಯ ಗೆಲುವಿನ ಸಾಧ್ಯತೆಯೂ ಹೆಚ್ಚಾಗಿರುವುದು ಇಲ್ಲಿ ಸ್ಪಷ್ಟ.

ಅಲ್ಪ ಅಳಿಸುವಿಕೆ ನಡೆದ ಕಡೆಯೂ ಬಿಡದ ಹಿಡಿತ: ಕೇವಲ 5,000ಕ್ಕಿಂತ ಕಡಿಮೆ ಅಳಿಸುವಿಕೆ ನಡೆದ 13 ಕ್ಷೇತ್ರಗಳ ಪೈಕಿ 12ರಲ್ಲಿ ಬಿಜೆಪಿ ಜಯ ಸಾಧಿಸಿದೆ. ಇದು ಕಡಿಮೆ ಅಳಿಸುವಿಕೆ ನಡೆದ ಕಡೆಯೂ ಸಹ ಬಿಜೆಪಿ ತನ್ನ ಕುತಂತ್ರದ ಮೂಲಕ ಸಮೀಕರಣಗಳನ್ನು ತನಗೆ ಪೂರಕವಾಗಿ ಬದಲಿಸಿಕೊಂಡಿರುವುದನ್ನು ಎತ್ತಿ ತೋರಿಸುತ್ತದೆ.

ಬಿಜೆಪಿಯ ಗೆಲುವು ಕೇವಲ ರಾಜಕೀಯ ಪ್ರಚಾರದಿಂದ ಬಂದಿದ್ದಲ್ಲ. ಇದು 90 ಲಕ್ಷ ಮತದಾರರನ್ನು (ಶೇ. 12) ವ್ಯವಸ್ಥಿತವಾಗಿ ಪಟ್ಟಿಯಿಂದ ಹೊರಹಾಕಿದ ‘SIR’ ಎಂಬ ಕುತಂತ್ರದ ಫಲ. ವಿಶೇಷವಾಗಿ ಅಲ್ಪಸಂಖ್ಯಾತ ಮತ್ತು ಟಿಎಂಸಿ ಪರ ಒಲವಿರುವ ಮತದಾರರನ್ನು ಗುರಿಯಾಗಿಸಿಕೊಂಡು ಈ ಡಿಲೀಶನ್ ಮಾಡಲಾಗಿದೆ ಎಂಬ ಸಂಶೋಧನಾ ವರದಿಗಳು ಈ ಗೆಲುವಿನ ಹಿಂದಿನ ಕರಾಳ ಮುಖವನ್ನು ಬಯಲು ಮಾಡುತ್ತವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...