ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ.
ಸದನದಲ್ಲಿ ಮಾತನಾಡಿದ ಅವರು, “ಜನರನ್ನು ವಿಭಜಿಸುವ ಸನಾತನವನ್ನು ನಿರ್ಮೂಲನೆ ಮಾಡಬೇಕು” ಎಂದು ಹೇಳಿದರು. ಈ ಹೇಳಿಕೆಗೆ ತಕ್ಷಣವೇ ವಿರೋಧ ಪಕ್ಷದ ಸದಸ್ಯರಿಂದ ತೀವ್ರ ಪ್ರತಿಕ್ರಿಯೆಗಳು ಬಂದವು. ರಾಜ್ಯದಲ್ಲಿ ನಡೆಯುತ್ತಿರುವ ಸೈದ್ಧಾಂತಿಕ ಚರ್ಚೆಯನ್ನು ತೀವ್ರಗೊಳಿಸಲಾಯಿತು.
ಉದಯನಿಧಿ ಸ್ಟಾಲಿನ್ ಇಂತಹ ಹೇಳಿಕೆಗಳನ್ನು ನೀಡಿದ್ದು ಇದೇ ಮೊದಲಲ್ಲ. ಇದಕ್ಕೂ ಮೊದಲು, ಅವರ ಇದೇ ರೀತಿಯ ಹೇಳಿಕೆಯು ರಾಷ್ಟ್ರವ್ಯಾಪಿ ಆಕ್ರೋಶ ಮತ್ತು ಕಾನೂನು ಪರಿಶೀಲನೆಗೆ ಕಾರಣವಾಗಿತ್ತು. ಸ್ಟಾಲಿನ್ ಧಾರ್ಮಿಕ ಭಾವನೆಗಳನ್ನು ಅವಮಾನಿಸಿದ್ದಾರೆ ಎಂದು ಹಿಂದುತ್ವವಾದಿಗಳು ಆರೋಪಿಸಿದರು.
ತಮ್ಮ ಭಾಷಣದ ಸಮಯದಲ್ಲಿ, ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ರಾಜಕೀಯ ಸಹಕಾರಕ್ಕಾಗಿ ಮನವಿ ಉದಯನಿಧಿ ಸ್ಟಾಲಿನ್ ಮಾಡಿದರು. ಸದನದಲ್ಲಿ ಬೇರೆಬೇರೆ ಜಾಗದಲ್ಲಿ ಕುಳಿತಿದ್ದರೂ ಸಹ, ಎಲ್ಲಾ ನಾಯಕರು ತಮಿಳುನಾಡಿನ ಅಭಿವೃದ್ಧಿಗಾಗಿ ಒಟ್ಟಾಗಿ ಕೆಲಸ ಮಾಡಬೇಕು ಎಂದು ಅವರು ಹೇಳಿದರು.
“ನಾವು ಆಡಳಿತ ಸರ್ಕಾರ ಮತ್ತು ವಿರೋಧ ಪಕ್ಷವಾಗಿ ಬೇರೆ ಬೇರೆ ಸಾಲುಗಳಲ್ಲಿ ಕುಳಿತರೂ ಸಹ, ತಮಿಳುನಾಡಿನ ಅಭಿವೃದ್ಧಿಗಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು” ಎಂದು ಅವರು ಹೇಳಿದರು
ಚರ್ಚೆಗೆ ಕಾರಣವಾದ ರಾಜ್ಯ ಗೀತೆ ಮತ್ತು ರಾಷ್ಟ್ರಗೀತೆ ಕುರಿತಾದ ಹೇಳಿಕೆಗಳು
ಉದಯನಿಧಿ ಸ್ಟಾಲಿನ್ ವಿಧಾನಸಭೆಯಲ್ಲಿ, ಸಾಂಸ್ಕೃತಿಕ ಮತ್ತು ರಾಜಕೀಯ ಸಂಕೇತಗಳ ಬಗ್ಗೆಯೂ ಕಳವಳ ವ್ಯಕ್ತಪಡಿಸಿದರು. ತಮಿಳುನಾಡು ರಾಜ್ಯ ಗೀತೆಗೆ ಇತರ ರಾಷ್ಟ್ರೀಯ ಗೀತೆಗಳಿಗಿಂತ ಕಡಿಮೆ ಪ್ರಾಮುಖ್ಯತೆ ನೀಡಬಾರದು ಎಂದು ಅವರು ಹೇಳಿದರು.
“ವಂದೇ ಮಾತರಂ ನಂತರ ತಮಿಳುನಾಡು ರಾಜ್ಯ ಗೀತೆಯನ್ನು ನುಡಿಸಿದ ನಂತರ ವಿರೋಧ ಪಕ್ಷವು ಕಳವಳ ವ್ಯಕ್ತಪಡಿಸಿದೆ. ನಮ್ಮ ರಾಜ್ಯ ಗೀತೆಯನ್ನು ಎಂದಿಗೂ ಎರಡನೇ ಸ್ಥಾನಕ್ಕೆ ತಳ್ಳಬಾರದು” ಎಂದು ಅವರು ಹೇಳಿದರು.
ವಿವಿಧ ರಾಜ್ಯಗಳಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಚಿಹ್ನೆಗಳ ಬಳಕೆಯಲ್ಲಿನ ಅಸಂಗತತೆಯನ್ನು ಅವರು ಎತ್ತಿ ತೋರಿಸಿದರು. ದೇಶದ ಬೇರೆಡೆ ತೆಗೆದುಕೊಂಡ ರಾಜಕೀಯ ನಿರ್ಧಾರಗಳನ್ನು ಪರೋಕ್ಷವಾಗಿ ಟೀಕಿಸಿದರು.
ಉದಯನಿಧಿ ಸ್ಟಾಲಿನ್ ಹೇಳಿಕೆಗಳನ್ನು ಟೀಕಿಸಿದ ಬಿಜೆಪಿ
ಉಯನಿಧಿ ಹೇಳಿಕೆಗಳು ಬಿಜೆಪಿಯಿಂದ ಬಲವಾದ ಪ್ರತಿಕ್ರಿಯೆಯನ್ನು ಉಂಟುಮಾಡಿದೆ. ಡಿಎಂಕೆ ನಾಯಕ ಧಾರ್ಮಿಕ ಭಾವನೆಗಳನ್ನು ಪದೇ ಪದೇ ನೋಯಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ವಕ್ತಾರ ಸಿ.ಆರ್. ಕೇಶವನ್ ಮಾತನಾಡಿ, “ಈ ಪುನರಾವರ್ತಿತ ಅಪರಾಧಿಗಳು ತಮಿಳುನಾಡು ರಾಜ್ಯದ ಲಾಂಛನದಲ್ಲಿ ದೇವಾಲಯ ಗೋಪುರವಿದೆ ಎಂಬುದನ್ನು ನೆನಪಿನಲ್ಲಿಡಬೇಕು. ತಮಿಳುನಾಡಿನ ಜನರು ತಮ್ಮ ನಂಬಿಕೆಗೆ ಮಾಡುವ ಇಂತಹ ಅವಮಾನಗಳನ್ನು ಕ್ಷಮಿಸುವುದಿಲ್ಲ” ಎಂದು ಹೇಳಿದರು.
ಉದಯನಿಧಿ ಸ್ಟಾಲಿನ್ ಅವರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಹೋಲಿಸಿದರು. “ಅವರು ತಮಿಳುನಾಡಿನ ರಾಹುಲ್ ಗಾಂಧಿ, ವಿಭಜಕ ರಾಜಕೀಯವನ್ನು ಉತ್ತೇಜಿಸುತ್ತಿದ್ದಾರೆ” ಎಂದು ಹೇಳಿದರು.
ಮತ್ತೆ ವಿವಾದಕ್ಕೆ ಕಾರಣವಾದ “ಸನಾತನ ನಿರ್ಮೂಲನೆ” ಹೇಳಿಕೆ
ಉದಯನಿಧಿ ಸ್ಟಾಲಿನ್ ಅವರ ಇತ್ತೀಚಿನ ಹೇಳಿಕೆಯು ಸುಮಾರು ಮೂರು ವರ್ಷಗಳ ಹಿಂದೆ ಸನಾತನ ಧರ್ಮದ ಬಗ್ಗೆ ಇದೇ ರೀತಿಯ ಹೇಳಿಕೆಗಳನ್ನು ನೀಡಿದಾಗ ಮೊದಲು ಭುಗಿಲೆದ್ದ ಪ್ರಮುಖ ವಿವಾದವನ್ನು ಮುನ್ನೆಲೆಗೆ ತಂದಿದೆ. ಅವರು ಸನಾತನವನ್ನು ಡೆಂಗ್ಯೂ ಮತ್ತು ಮಲೇರಿಯಾದಂತಹ ರೋಗಗಳಿಗೆ ಹೋಲಿಸಿದ್ದರು. ಅದನ್ನು ವಿರೋಧಿಸುವ ಬದಲು ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದರು.
ಈ ಹೇಳಿಕೆಯು ರಾಷ್ಟ್ರವ್ಯಾಪಿ ಪ್ರತಿಭಟನೆಗಳು ಮತ್ತು ಕಾನೂನು ದೂರುಗಳಿಗೆ ಕಾರಣವಾಯಿತು. ದ್ವೇಷ ಭಾಷಣವನ್ನು ಉತ್ತೇಜಿಸುತ್ತಿದ್ದಾರೆ ಎಂದು ಹಿಂದುತ್ವವಾದಿಗಳು ಆರೋಪಿಸಿದರು. ನಂತರ ಮದ್ರಾಸ್ ಹೈಕೋರ್ಟ್ ಅವರ ಹೇಳಿಕೆಗಳು ದ್ವೇಷ ಭಾಷಣಕ್ಕೆ ಸಮನಾಗಿದ್ದು, ರಾಜಕೀಯ ಪ್ರತಿಕ್ರಿಯೆಯನ್ನು ತೀವ್ರಗೊಳಿಸಿತು ಎಂದು ಗಮನಿಸಿತು.
ಟೀಕೆಗಳ ಹೊರತಾಗಿಯೂ, ಉದಯನಿಧಿ ಈ ಹಿಂದೆ ತಮ್ಮ ಹೇಳಿಕೆಗಳನ್ನು ಸಮರ್ಥಿಸಿಕೊಂಡಿದ್ದಾರೆ. ನನ್ನ ಉದ್ದೇಶ ಜಾತಿ ತಾರತಮ್ಯ ಮತ್ತು ಅಸಮಾನತೆಯನ್ನು ವಿರೋಧಿಸುವ ಗುರಿಯನ್ನು ಹೊಂದಿವೆ ಎಂದು ಹೇಳಿದ್ದಾರೆ.
ನೂತನ ಮುಖ್ಯಮಂತ್ರಿ ಒಡನಾಟ ನೆನೆದ ಉದಯ್
ಹೊಸದಾಗಿ ಆಯ್ಕೆಯಾದ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರೊಂದಿಗಿನ ತಮ್ಮ ವೈಯಕ್ತಿಕ ಸಂಪರ್ಕವನ್ನು ಉದಯನಿಧಿ ಸ್ಟಾಲಿನ್ ನೆನಪಿಸಿಕೊಂಡರು. ನಾವು ಒಂದೇ ಕಾಲೇಜಿನಲ್ಲಿ ಓದಿದ್ದೇವೆ ಎಂದು ಹೇಳಿದರು. “ನಾವು ನಮ್ಮ ಅನುಭವ ಮತ್ತು ಜ್ಞಾನವನ್ನು ಹಂಚಿಕೊಳ್ಳಲು ಬಯಸುತ್ತೇವೆ. ಮುಖ್ಯಮಂತ್ರಿಗಳು ನಮ್ಮ ಸಲಹೆಗಳನ್ನು ಸಹ ಸ್ವೀಕರಿಸಬೇಕು” ಎಂದು ಅವರು ಹೇಳಿದರು.


