ಕರ್ನಾಟಕದಲ್ಲಿ ಅವೈಜ್ಞಾನಿಕವಾಗಿ ಜಾರಿಮಾಡಲು ಹೊರಟಿರುವ SIR ಅನ್ನು ವಿರೋಧಿಸಿ ಜನಜಾಗೃತಿ ಜಾಥಾವು ಇಂದು ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಜಿಲ್ಲೆಯನ್ನು ಪ್ರವೇಶಿಸಿತು.
ಹೋರಾಟಗಳ ನೆಲ ರಾಯಚೂರಿನಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಹೋರಾಟಗಾರರು, ವಿವಿಧ ಸಮುದಾಯದ ಮುಖಂಡರು ಜಾಥಾವನ್ನು ಬರಮಾಡಿಕೊಂಡಿತು. ನಗರದ ಮಧ್ಯಭಾಗದಲ್ಲಿರುವ ಅಂಬೇಡ್ಕರ್ ವೃತ್ತದಲ್ಲಿ ಜಮಾವಣೆಗೊಂಡು ಅಲ್ಲಿನ ಅಂಬೇಡ್ಕರ್ ಮಾಲಾರ್ಪಣೆ ಮಾಡಿ ನಂತರ ಜಿಲ್ಲಾ ಕ್ರೀಡಾಂಗಣದ ಬಳಿಯಿರುವ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನೂರಾರು ಯುವಕರು ಬೈಕ್ ಜಾಥಾ ಆರಂಭಿಸಿದರು.
ಜಾಥಾ ಉದ್ಘಾಟನೆ ಮಾಡಿ ಮಾತನಾಡಿದ ಚಾಮರಸ ಮಾಲಿ ಪಾಟೀಲ್, ಮಹಮ್ಮದ್ ಶಾಲಂ, ಶ್ರೀನಿವಾಸ ರೆಡ್ಡಿ, ಎಂ ಆರ್ ಭೇರಿ, ಎಸ್ ಮಾರೆಪ್ಪ, ವಿಜಯರಾಣಿ, ಅಂಬಣ್ಣ ಆರೋಲಿಕರ್ SIR ಎಂಬ ಷಡ್ಯಂತ್ರವು ಹೀಗೆ ಎಲ್ಲಾ ಸಮುದಾಯದ ಬಡವರ ವಿರೋಧಿಯಾಗಿದೆ ಹಾಗೂ ಮಹಿಳೆಯರ ವಿರೋಧಿಯಾಗಿದೆ ಎಂದು ವಿವರಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷರಾದ ಚಾಮರಸ ಮಾಲಿ ಮಾಲಿ ಪಾಟೀಲ್ ಅವರು ಮಾತನಾಡಿ, ಈ ದೇಶದಲ್ಲಿ ನೂರಾರು ವರ್ಷಗಳಿಂದ ನೆಲೆಸಿರುವ ಜನರನ್ನು ನೀವು ಈ ದೇಶದ ನಾಗರಿಕತ್ವವನ್ನು ಸಾಬೀತುಪಡಿಸಿಕೊಳ್ಳಿ ಎಂದು ಹೇಳುವಂತಿದೆ ಈ SIR. ಇದು ಸರ್ವಾಧಿಕಾರದ ಮನೋಭಾವ. ಇನ್ನು ಚುನಾವಣಾ ಆಯೋಗವೂ ಕೂಡ ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟರು.

ನಂತರ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ರಾಯಚೂರು ವಿಧಾಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಮೊಹಮ್ಮದ್ ಶಾಲಂ, SIR ಎನ್ನುವದು ಕೇವಲ ಅಲ್ಪಸಂಖ್ಯಾತರಿಗೆ ಮಾತ್ರ ಸಂಬಂಧಿಸಿದ್ದಲ್ಲ. ಇದು ಕರ್ನಾಟಕದ ಎಲ್ಲ ಜಾತಿ ಧರ್ಮಗಳ ಬಡವರ ಹಕ್ಕುಗಳನ್ನು ಕಿತ್ತುಕೊಳ್ಳಲು ನಡೆಸುತ್ತಿರುವ ಕೃತ್ಯ ಎಂದು ಅಭಿಪ್ರಾಯಪಟ್ಟರು.
ರಾಯಚೂರು ಮಹಾನಗರ ಪಾಲಿಕೆಯ ಸದಸ್ಯರಾದ ಶ್ರೀನಿವಾಸ ರೆಡ್ಡಿ, SIR ಎಂಬ ಜನವಿರೋಧಿ ಪ್ರಕ್ರಿಯೆಯನ್ನು ವಿರೋಧಿಸಲು ಎಲ್ಲ ಸಂವಿಧಾನ ಪ್ರೇಮಿಗಳು ಒಂದಾಗಬೇಕೆಂದು ವಿನಂತಿ ಮಾಡಿದರು.
ಹಿರಿಯ ದಲಿತ ಹೋರಾಟಗಾರರಾದ ಎಂ.ಆರ್. ಭೇರಿ ಮಾತನಾಡುತ್ತಾ, ಈ SIR ಎಂಬ ಷಡ್ಯಂತ್ರಕ್ಕೆ ಮೊದಲು ಬಲಿಯಾಗುತ್ತಿರುವುದು ಈ ದೇಶದ ಮಹಿಳೆಯರು, ದಲಿತರು ಹಾಗೂ ಅಲ್ಪಸಂಖ್ಯಾತರು.
ಮಹಿಳೆಯರು ಮದುವೆಯಾದ ನಂತರ ಗಂಡನ ಮನೆಗೆ ಬಂದಾಗ ಬೇರೊಂದು ಹೆಸರಿಟ್ಟುಕೊಳ್ಳುತ್ತಾರೆ. ಹೀಗಾಗಿ ಅವರ ದಾಖಲಾತಿಯಲ್ಲಿಯೇ ಬೇರೆ ಹೆಸರಿರುತ್ತದೆ, ಮತ ಪಟ್ಟಿಯಲ್ಲಿ ಬೇರೆಯದೇ ಹೆಸರಿರುತ್ತದೆ. ಹೀಗಾಗಿ ಮಹಿಳೆಯರು ಈ SIR ನಿಂದ ಹೆಚ್ಚು ಬಾದಿತರಾಗುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.






ಹಿರಿಯ ಒಳಮೀಸಲಾತಿ ಹೋರಾಟಗಾರರಾದ ಎಸ್. ಮಾರೆಪ್ಪ ಅವರು ಮಾತನಾಡುತ್ತಾ, ಈ ದೇಶದಲ್ಲಿ ಬೀದಿ ಬೀದಿಗಳಲ್ಲಿ ಗುಡಿಸಲು ಹಾಕಿಕೊಂಡಿರುವ ಅಲೆಮಾರಿ ಜನರ ಬಳಿ ಯಾವ ದಾಖಲೆಗಳು ಇರುತ್ತವೆ. ಅವರ ತನ್ನ ಜೀವನವನ್ನು ನಡೆಸಲು ಊರೂರು ಅಲೆಯುತ್ತಾ ಭಿಕ್ಷೆ ಬೇಡುವವರು. ಅವರ ಬಳಿ ನಿಮ್ಮ ಶಾಲೆಗಳನ್ನು ತೂರಿಸಿ ಎನ್ನುವದು ನಿಜಕ್ಕೂ ಕ್ರೌರ್ಯ ಎಂದು ಅಭಿಪ್ರಾಯಪಟ್ಟರು.
ಹಿರಿಯ ಒಳಮೀಸಲಾತಿ ಹೋರಾಟಗಾರದ ಅಂಬಣ್ಣ ಆರೋಲಿಕರ್ ಮಾತನಾಡುತ್ತಾ, ಈ ದೇಶದಲ್ಲಿ ಸಂವಿಧಾನವನ್ನು ಜಾರಿಮಾಡಬೇಕಾದ ಸುಪ್ರೀಮ್ ಕೋರ್ಟ್ ಕೂಡಾ ಜನರ ಮತದಾನದ ಹಕ್ಕನ್ನು ಕಿತ್ತುಕೊಳ್ಳಲು ಮುಂದಾದರೆ ಜನರು ಯಾರ ಬಳಿ ನ್ಯಾಯ ಕೇಳಲು ಹೋಗಬೇಕು, ಇದು ಈ ದೇಶದಲ್ಲಿ ಸರ್ವಾಧಿಕಾರ ಆಡಳಿತ ಜಾರಿಯಾಗಿದೆ ಎಂಬ ಸೂಚನೆಯಾಗಿದೆ. ಜನರು ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಜನವಿರೋಧಿ ನೀತಿಗಳ ವಿರುದ್ಧ ದೊಡ್ಡ ಆಂದೋಲನ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ಜಾಥಾದ ರಾಯಚೂರು ಜಿಲ್ಲೆಯ ಹೇಮರಾಜ್, ಜಾನ್ ವೆಸ್ಲಿ, ಆಸುಮುದ್ದಿನ ಅಕ್ತರ್, ಸಮ್ಮದ್ ಪಾಷಾ, ಫೈನಲ್ ಖಾನ್, ಮಾರಪ್ಪ ಹರವಿ, ಹಿಜಾಜಾ ಅಲಿ, ಗುರುರಾಜ್ ಪಾಟೀಲ್, ಲಕ್ಷ್ಮಣ್ ಮಂಡಲಗೇರಾ ಮುಂತಾದವರು ಭಾಗವಹಿಸಿದ್ದರು.
ಕಾರ್ಯಕಾರಿ ಸಂಪಾದಕ, ನಾನುಗೌರಿ.ಕಾಮ್


