HomeಮುಖಪುಟJNU ಮಾತ್ರವಲ್ಲ, ವಿಶ್ವದ ಹಲವು ವಿವಿಗಳ ಮೇಲೆ ಯೋಜಿತ ನಿರಂತರ ದಾಳಿ ನಡೆದಿದೆ. ಏಕೆ?

JNU ಮಾತ್ರವಲ್ಲ, ವಿಶ್ವದ ಹಲವು ವಿವಿಗಳ ಮೇಲೆ ಯೋಜಿತ ನಿರಂತರ ದಾಳಿ ನಡೆದಿದೆ. ಏಕೆ?

ನಿನಗಿಂತ ಮೊದಲು ಈ ಸಿಂಹಾಸನದ ಮ್ಯಾಲೆ ಒಬ್ಬವ ಕೂತಿದ್ದನಲ್ಲಾ ಅವನಿಗೂ ನಿನ್ನಂಗನ, ತಾನ ದೇವರು ಅನ್ನೋದು ಖಾತ್ರಿ ಆಗಿತ್ತು...

- Advertisement -
- Advertisement -

ಸುದ್ದಿಯೇನೇ ಮನೋಲ್ಲಾಸಿನಿ? ಬೈ ಐ. ವಿ ಗೌಲ್

ಈಗೇನು ಸುದ್ದಿ – ಜೆಎನ್‌ಯೂನಲ್ಲಿ ಹರಿದ ರಕ್ತದ ಸುದ್ದಿ

ಕೆಲವು ವರ್ಷಗಳ ಹಿಂದ ಈಗ ರಾಜ್ಯ ಸಚಿವಸಂಪುಟದಲ್ಲಿ ಇರುವ ಸಚಿವರೊಬ್ಬರು ಅಂದಿನ ಉಚ್ಚಶಿಕ್ಷಣ ಮಂತ್ರಿಗಳಲ್ಲಿ ಒಂದು ಮನವಿ ಮಾಡಿದ್ದರು. ಅದೇನು ಅಂದರ ಅವರ ತಾಲೂಕಿನೊಳಗ ಐಐಟಿ ಸ್ಥಾಪಿಸುವುದು. ಸಚಿವರು ನೋಡೋಣ ಅಂದರು. ಅದೇ ಕಾರ್ಯಕ್ರಮದೊಳಗ ಇದ್ದ ಒಬ್ಬ ಲೇಖಕರು ಶಾಸಕರನ್ನು ಬಾಜೂ ಕರದು. ಐಐಟಿ ಕೇಳಬೇಡಿ. ನಮ್ಮದು ಅತೀ ಹಿಂದುಳಿದ ತಾಲೂಕು. ಅವರು ನಿಕ್ಕೀ ಕೊಡೋದಿಲ್ಲ. ದೊಡ್ಡ ದೊಡ್ಡ ಶಹರಗಳಿಗೆ ಮಾತ್ರ ಕೊಡತಾರ. ನಿಮಗ ನಿಜವಾಗಿಯೂ ನಿಮ್ಮ ತಾಲೂಕಿನ ಬಡವರ ಬಗ್ಗೆ ಕಾಳಜಿ ಇದ್ದರ ಹೋಬಳಿಗೊಂದು ಐಟಿಐ ಕೇಳ್ರಿ ಅಂತ ಸಲಹೆ ಕೊಟ್ಟರು.

ಆಗ ಆ ಶಾಸಕರು ಐಐಟಿಗೂ, ಐಟಿಐಗೂ ಭಾಳ ವ್ಯತ್ಯಾಸ ಇರ್ತದಾ ಸಾರ್ ಅಂತ ಕೇಳಿದರು.

ಅವರಿಗೆ ಇದ್ದ ಸಂದೇಹ ಈಗಲೂ ಅನೇಕರ ಮನಸ್ಸಿನೊಳಗ ಮುಂದುವರದದ. ಜವಾಹರ ಲಾಲ ನೆಹರು ವಿಶ್ವವಿದ್ಯಾಲಯ ಹಾಗೂ ಇತರ ಕಾಲೇಜುಗಳ ನಡುವೆ ವ್ಯತ್ಯಾಸ ಗೊತ್ತಿರದವರು ಈ ದೇಶದಾಗ ಅನೇಕರಿದ್ದಾರ. ಅವರೊಳಗ ಕೆಲವರಿಗೆ ಅಧಿಕಾರ ಸಿಕ್ಕದ. ಅವರು ಮಂತ್ರಿ, ತಂತ್ರಿ, ಇನ್ನೇನೋ ಆಗಿ ಹೋಗ್ಯಾರ.

ʻʻಹೆಂಗೆಂಗೋ ಇದ್ದವರು ಹಿಂಗ ಹಿಂಗ ಆಗಿ ಬಿಟ್ಟಾರ

ಹಿಂಗ ಹಿಂಗ ಇದ್ದವರು ಹೆಂಗೆಂಗೋ ಆಗಿ ಬಿಟ್ಟಾರʼʼ

ಅಂತ ಹೇಳಿದ ನಮ್ಮ ದಖ್ಖನಿ ಕವಿ ನಜೀರ ಹೇಳ್ಯಾನಲ್ಲಾ ಹಂಗ.

ಈಗ ಇವರ ಷಾಗಿರ್ದಗಳು ಒಂದೊಂದಾಗಿ ವಿಶ್ವವಿದ್ಯಾಲಯದೊಳಗ ಹುಡುಕಿ ಹುಡುಕಿ ಹುಡುಗ ಹುಡುಗಿಯರನ್ನ ಹಿಡಕೊಂಡು ಹೊಡೀಲಿಕ್ಕೆ ಹತ್ಯಾರ. ಮೊದಲಿಗೆ ಮುಸ್ಲಿಂ ಹುಡುಗರು ಓದೋ ಸಂಸ್ಥೆ ಅಂತ ತಿಳಕೊಂಡು ಜಾಮಿಯಾ ಮತ್ತು ಅಲಿಘರ್‌ಗೆ ಪೊಲೀಸರನ್ನ ಕಳಿಸಿದರು.

ಅವರನ್ನ ಕೆಲವೇ ಕೆಲವು ಹುಡುಗಿಯರು ಹಿಡದು ನಿಲ್ಲಿಸಿದ್ದು ನೋಡಿ, ಇದು ಪೊಲೀಸರ ಕೈಯಲ್ಲಿ ಆಗಲಾರದ ಮಾತು ಅಂತ ಹೇಳಿ ತಾವೇ ಲಾಠಿ ಹಿಡಕೊಂಡು ಹೊಡಿಲಿಕ್ಕೆ ಹೋದರು. ಮೈಯೊಳಗ ಪಾವು ಲೀಟರ್ ರಕ್ತ ಇರೋ ಐಷೆ ಘೋಷ್ ಅನ್ನೋ ಹುಡುಗಿ ತಲಿ ಒಡದು ಅರ್ಧ ರಕ್ತ ಹರಿಸಿದರು.

ಆದರ ಇದು ಯಾವುದೂ ಹೊಸಾದಲ್ಲ. ಇದು ಅಲೆಕ್ಸಾಂಡರ್ ದಿ ಗ್ರೇಟ್ ಅವರ ಟೈಂನಿಂದ ಶುರು ಆಗೇದ. ಓದಿನ, ಜ್ಞಾನದ, ತಿಳಿವಳಿಕೆ, ಮಾಹಿತಿಯ ಕೇಂದ್ರಗಳನ್ನು ಹಾಳು ಮಾಡೋದು ಆಳುವವರ ಹಳೇ ಚಾಳಿ.

ಐದು ಸಾವಿರ ವರ್ಷ ಹಿಂದೆ ಅಲೆಕ್ಸಾಂಡ್ರಿಯಾದಲ್ಲಿ ಇದ್ದ ಬೃಹತ್ ಗ್ರಂಥಾಲಯಕ್ಕ ಗ್ರೀಕ್ ಸೈನಿಕರು ಬೆಂಕಿ ಹಾಕಿದರು. ಅಲೆಕ್ಸಾಂಡರ್ ಅವರು ತಮ್ಮ ಸೈನ್ಯದ ದೋಣಿಗಳಿಗೆ ಬೆಂಕಿ ಹಾಕಲು ಹೋಗಿ ಆ ಲೈಬ್ರರಿ ಉರಿದು ಬಿತ್ತು ಅಂತ ಸಮಜಾಯಿಷಿ ಕೊಡೋರೂ ಇದ್ದಾರ. ತೀರ ಲೈಬ್ರರಿಗೂ ದೋಣಿಗೂ ವ್ಯತ್ಯಾಸ ಗೊತ್ತಿರಲಾರದವರು ಎಂಥಾ ನಾಯಕರು ಇರಬೇಕು. ಲೈಬ್ರರಿ ಅಂದರ ನೆಲದ ಮ್ಯಾಲೆ ಇರತಾವು. ದೋಣಿ ನೀರಾಗ ಇರತಾವು. ಇನ್ನ ಗ್ರಂಥಾಲಯ ಅಂದರ ಪುಸ್ತಕದ ಮನೆ. ಇದರಾಗ ಪುಸ್ತಕ ಇರತಾವು ದೋಣಿ ಅಂದರ ಸಂಚಾರ ಸಾಧನ. ಅದರಾಗ ಹುಟ್ಟು, ಚೀಲ, ಹಗ್ಗ, ತೋಪು, ಇತ್ಯಾದಿ ಇರತಾವು. ಇದನ್ನೂ ಯಾರರ ಅಲೆಕ್ಸಾಂಡರಿಗೆ ಹೇಳಿ ಕೊಡಬೇಕಾಗಿತ್ತ?

ಭಾರತದ ವಿವಿಗಳ ಮೇಲೆ ಪ್ರಾಚೀನ ಕಾಲದಾಗ, ಮಧ್ಯಯುಗದಾಗನೂ ದಾಳಿ ನಡದದ,

ಆಧುನಿಕ ಕಾಲದಾಗ ನೈಜಿರಿಯಾದಾಗ ಗುಜಬಾ ಹಾಗೂ ಒಬಾಫೇಮಿ ವಿವಿಗಳ ಮ್ಯಾಲೆ ದಾಳಿ ನಡದಿತ್ತು.

ಸಿರಿಯಾದಾಗ ಅಲೆಪ್ಪೋ ವಿವಿ ಮ್ಯಾಲೆ ಬಾಂಬ್ ದಾಳಿ ಆಗಿತ್ತು.

ಇಸ್ರೇಲಿನ ಹಿಬ್ರು ವಿವಿ ಮೇಲೆ ಬಾಂಬ್ ದಾಳಿ ನಡೀತು.

ಪಾಕಿಸ್ತಾನದ ಬಚ್ಚಾಖಾನ್ ವಿವಿ ಹಾಗೂ ಅಂತರರಾಷ್ಟ್ರೀಯ ಇಸ್ಲಾಮಿಕ್ ಮೇಲೆ ನಡೀತು.

ಢಾಕಾ ವಿವಿ ಮೇಲೆ,

ಮೆಕ್ಸಿಕೊದ ಮಾಂಟೆರಿ ತಾಂತ್ರಿಕ ವಿವಿ ಮೇಲೆ,

ಇರಾಕಿನ ಮುಸ್ತಾನ ಸಿರಿಯಾ ವಿವಿ ಮೇಲೆ,

ಅಮೆರಿಕದ ಕ್ಯಾಲಿಫೋರ್ನಿಯಾ ವಿವಿ ಸೇರಿದಂತೆ 37 ವಿವಿ ಹಾಗೂ ಕಾಲೇಜುಗಳ ಮ್ಯಾಲೆ ದಾಳಿ ನಡದದ.

ಹಂಗಾರ ಇವು ಯಾಕ ನಡೀತಾವ?

ಯಾಕಂದರ ವಿಚಾರವನ್ನ ವಿಚಾರದಿಂದ ವಿರೋಧ ಮಾಡಲಿಕ್ಕಾಗಲಾರದವರು ಹೊಡದು- ಬಡದು ಮಾಡಲಿಕ್ಕೆ ಬರತಾರ. ಕೈಲೆ ಆಗಲಾರದವರು ಮೈ ಪರಚಿಕೊಂಡಾ ಅಂತಾರಲ್ಲ. ಹಂಗ ಇವರು ಬ್ಯಾರೆದವರ ಮೈಪರಚಲಿಕ್ಕೆ ಬರತಾರ. ಯಾರಿಗೆ ವೈಚಾರಿಕತೆ ಕಂಡರ ಆಗಂಗಿಲ್ಲೋ, ಯಾರು ಕೇವಲ ಅಂಧಾನುಕರಣೆಯೊಳಗ ವಿಶ್ವಾಸ ಇಟ್ಟಿರತಾರೋ, ಯಾರು ಪ್ರಶ್ನೆ ಕೇಳೋದನ್ನ ಮರತುಬಿಟ್ಟಿರತಾರೋ, ಯಾರು ವಿಚಾರವಂತಿಕೆಯನ್ನ ಗೂಟಕ್ಕ ಹಾಕಿ ಕಟ್ಟಿ ಮನಿಯಿಂದಾ ಹೊರಗ ಬೀಳತಾರೋ, ಅವರಿಗೆ ಮಾಹಿತಿ, ಜ್ಞಾನ, ವಿವೇಕ, ತಿಳವಳಿಕೆ ಅನ್ನೋದು ಎಲ್ಲಾ ಅಲರ್ಜಿ ಆಗಿಹೋಗಿರತದ. ಇಷ್ಟು ದಿವಸ ರಾಜಕೀಯರಹಿತವಾಗಿ ಇರಬಲ್ಲವರನ್ನು ಸುಮ್ಮನೇ ಬಿಟ್ಟು ಬಿಡತಾ ಇದ್ದರು ಆದರ ಈಗ ಅದುನೂ ಉಳದಿಲ್ಲ. ನೀವು ನಮ್ಮ ಸಂಗಡ ಇಲ್ಲದಿದ್ದರೆ ನಮ್ಮ ವಿರುದ್ಧ ಇದ್ದಂತ ಅಂದ ಜಾರ್ಜ ಬುಷ್ ಅವರ ನೀತಿ ಎಲ್ಲಾ ಕಡೆ ಪಸರಿಸಿಬಿಟ್ಟದ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಹೇಳೀದ ಮಾತೊಂದು ನೆನಪ ಆಗತದ. ಪುಸ್ತಕವನ್ನು ಪುಸ್ತಕವೇ ಸರಿಗಟ್ಟಬಲ್ಲದು. ಅದನ್ನು ಬೇರೆ ರೀತಿಯಿಂದ ವಿರೋಧಿಸಬಾರದು ಅಂತ. ಈ ಮಾತು ಅವರ ಹಿಂಬಾಲಕರಿಗಿಂತ ಇತರರಿಗೇ ಹೆಚ್ಚು ನೆನಪ ಐತಿ ಅಂತ ಅನಸತೈತಿ.

ಹಂಗಾರ ಇವರು ತಿಳಕೊಂಡಿರೋದರ ಏನು?

ಸರ್ವಕಾಲಕ್ಕೂ ನಾವೇ ಅಧಿಕಾರಕ್ಕ ಬರೋರು

ನಮಗ ರಾಜಕೀಯ ಅಧಿಕಾರ ಸಿಕ್ಕು ಬಿಟ್ಟರ ಸಾಕು ಎಲ್ಲಾ ರೀತಿ ಅಧಿಕಾರ ಸಿಕ್ಕಂಗ

ನಮಗ ಅಧಿಕಾರ ಬಂದಾಗ ನಾವು ಏನು ಬೇಕಾದ್ದು ಮಾಡಬಹುದು. ಯಾರೂ ಏನೂ ಕೇಳಂಗಿಲ್ಲ

ಯಾರು ಕಂಕಿಂ ಅಂತಾರೋ ಅವರನ್ನ ನಾವು ಉಸಿರು ಎತ್ತಲಾರದಂಗ ಮಾಡಿ ಬಿಡತೇವಿ

ಈ ರೀತಿ ವಿಚಾರ ಮಾಡೋರು ಒಂದು ಮಾತು ನೆನಪು ಇಟ್ಟುಕೊಳ್ಳಬೇಕು.

ಅಧಿಕಾರ ಶಾಶ್ವತ ಅಲ್ಲ. ಅದನ್ನ ಯಾರೂ ಯಾರಿಗೂ ಬರದು ಕೊಟ್ಟಿಲ್ಲ.

ಈಗ ಸೋತವರು ನಾಳೆ ಗೆಲ್ಲಬಹುದು. ಈ ದೇಶದಾಗ ಯರ‍್ಯಾರು ಸೋತಾರ ಅನ್ನೋದನ್ನ ನೆನಪಿಸಿಕೊಂಡರ ಗಾಬರಿ ಆಗತದ.

ಹಂಗೇನರ ಆಗಿ ಇವರು ಸೋತು ಅವರು ಬಂದರ.

ಈಗ ಇವರು ಮಾಡಿದ್ದನ್ನ ನಾಳೆ ಅವರು ಮಾಡಬಹುದು.

ಹಂಗ ಮಾಡಿದಾಗ ಇವರು ಸುಮ್ಮನೇ ಇರಬೇಕಾಗತದ.

ಯಾಕಂದರ ತಮಗ ಅಧಿಕಾರ ಬಂದಾಗ ಇವರು ಹಿಂಗೆಲ್ಲಾ ಮಾಡಿ ಮೇಲ್ಪಂಕ್ತಿ ಹಾಕಿ ಕೊಟ್ಟಿರತಾರ. ಬ್ಯಾರೆದವರು ಅನುಕರಿಸಲಿ ಅಂತ ಹೇಳಿ.

ಆವಾಗ ಇಬ್ಬರೂ ಮಾತಾಡಂಗಿಲ್ಲ. ಆದರ ಇಬ್ಬರ ಕ್ರೌರ್ಯಕ್ಕ ಬಲಿ ಆಗೋರು ಮಾತ್ರ , ಬಡವರು, ಹೊಟ್ಟಿಗೆ ಇರಲಾರದವರು, ಅಧಿಕಾರದ ಚೌಕಟ್ಟಿನಿಂದ ದೂರ ಇರೋರು, ಭಿಕ್ಷಾ ಬೇಡೋರು, ರೋಡಿನ್ಯಾಗ ನಿಂಬಿಹಣ್ಣು ಮಾರೋರು, ಇತ್ಯಾದಿ

ಹಿಟ್ಲರ್‌ನ ಆಳ್ವಿಕೆಯಲ್ಲಿ ನಾಜಿಗಳು ಒಂದು ಹಬ್ಬ ಆಚರಿಸತಾರ. ಅದೇನಪಾ ಅಂದರ ಕ್ರಿಸ್ಟಲ್ ನೈಟ್ ಅಥವಾ ಗಾಜಿನ ರಾತ್ರಿ. ಆಳುವ ಪಕ್ಷದ ಸೈನಿಕರು ಊರಾಗಿನ ಎಲ್ಲಾ ಗಾಜುಗಳನ್ನ ಒಡದು, ಅದರ ಮ್ಯಾಲೆ ಯಹೂದಿಗಳನ್ನ ಬರಿಗಾಲಿನಿಂದ ನಡಸತಾರ. ಸಣ್ಣಸಣ್ಣ ಹುಡುಗರು, ಮುದುಕರು, ಹೆಣ್ಣುಮಕ್ಕಳು ಹಿಂಗ ನಡೆಯುವಾಗ, ಅವರ ಕಾಲಾಗ ರಕ್ತ ಬಂದು ಅವರು ನೋವಿನಿಂದ ಚೀರಿದಾಗ, ನಾಜಿಗಳು ಸಾಲಾಗಿ ನಿಂತು ಮಜಾ ನೋಡತಾರ.

ಅಧಿಕಾರಸ್ಥರು ತಮ್ಮ ಅಫಸರ್‌ಶಾಹಿ ಆಡಳಿತದಿಂದ ಈ ಥರದ ಪೂರ್ವ ನಿಯೋಜಿತ ಪಾಪಕೃತ್ಯಗಳನ್ನು ಮಾಡೋದು ವಿಶ್ವವ್ಯಾಪಿ. ಆದರ ಅದು ಎರಡು ಅಲುಗಿನ ಕತ್ತಿ.

ಭಾರತದ ರಾಜಕೀಯ ಅರ್ಥಮಾಡಿಕೊಳ್ಳಬೇಕು ಅನ್ನೋವವರು ಉಲ್ಟಾ ತರ್ಕದಿಂದ ವಿಚಾರ ಮಾಡಬೇಕು ಅಂತ ವಿಚಾರವಾದಿ ಕಾನ್ಶಿರಾಂ ಹೇಳತ್ತಿದ್ದರಂತ. ಜೆಎನ್‌ಯು ಘಟನೆಯನ್ನೂ ಉಲ್ಟಾ ವಿಚಾರ ಮಾಡಿದರ ನಮ್ಮ ಮುಂದ ಕಾಣುವುದು ಇದು. ಬಹಳ ಜನ ಈಗ ಆಗಿರೋದು ಸರಿ ಅಂತ ವಾದಿಸುತ್ತಾ ಇದ್ದಾರ. ಇಂಥವರಿಗೆ

ಒಂದು ಪ್ರಶ್ನೆ. ಎನ್‌ಡಿಎ ಜಾಗದಲ್ಲಿ ಯುಪಿಎ ಇತ್ತು ಅನಕೋರಿ. ಜೆಎನ್‌ಯು ಜಾಗದಾಗ ಬನಾರಸ್ ಹಿಂದೂ ವಿವಿನೋ, ಸಂಸ್ಕೃತ- ಯೋಗ ವಿವಿನೋ ಇತ್ತು ಅಂತ ತಿಳಕೋರಿ, ಪೊಲೀಸರೋ ಅಥವಾ ಈಗಿನಂತೆ ಮುಖ ಮುಚ್ಚಿಕೊಂಡ ದುಷ್ಕರ್ಮಿಗಳು ಎಡಪಂಥೀಯ ಹುಡುಗರ ಬದಲಿಗೆ ಬಲಪಂಥೀಯ ಹುಡುಗರನ್ನ ಹೊಡದಿದ್ದರಂದರ ನಿಮ್ಮ ಪ್ರತಿಕ್ರಿಯೆ ಏನಿರುತ್ತಿತ್ತು? ಈ ದೇಶದಾಗ ಹಿಂಗಾಗಿದ್ದು, ಹಂಗಾಗಲಿಕ್ಕೂ ಸಾಧ್ಯ ಅದ ಹೌದಲ್ಲೋ?

ಎರಡೂ ತಪ್ಪು ಅಂತ ನಿಮಗ ಅನ್ನಿಸಿದರ ಮಾತ್ರ ನೀವು ಮನುಷ್ಯರು.

ಇಂದಿನ ನಮ್ಮ ಸಂಕಟ ವ್ಯಕ್ತಪಡಿಸೋ ಹಬೀಬ್ ಜಾಲಿಬ್ ಅವರ ಒಂದು ಕವನ ಹಿಂಗದ

ʻʻನಿನಗಿಂತ ಮೊದಲು ಈ ಸಿಂಹಾಸನದ ಮ್ಯಾಲೆ ಒಬ್ಬವ ಕೂತಿದ್ದನಲ್ಲಾ

ಅವನಿಗೂ ನಿನ್ನಂಗನ, ತಾನ ದೇವರು ಅನ್ನೋದು ಖಾತ್ರಿ ಆಗಿತ್ತು.

ಜನರಿಗೆ ಸೆಡ್ಡು ಹೊಡದು ನಿಲ್ಲೋರು ಯಾರರ ಇದ್ದರ ತೋರಸರೆಲ್ಲಾ

ತಮ್ಮ ತಮ್ಮ ಮ್ಯಾಲೆ ಭಾಳ ಅಭಿಮಾನ ಇರೋರು ಎಲ್ಲಾದರೋ ಏನೋ

ಈ ಮಣ್ಣಿನ ಕೆಳಗ ಮಲಗಿದವರು ಯರ‍್ಯಾರು ಗೊತ್ತೈತೇನು?

ಅದರಾಗ ಕೆಲವರು ಬೆಂಕಿ, ಇನ್ನ ಕೆಲವರು ಮಂಜು,

ಮತ್ತ ಕೆಲವರು ಚಂದ್ರಕಾಂತಿ ಅನ್ನಿಸಿಕೊಂಡವರು

ಈಗೇನು ನಮ್ಮೂರಿನ ಗಲ್ಲಿಯೊಳಗ ಒಬ್ಬೊಬ್ಬರ ಅಡ್ಯಾಡತಾರಲ್ಲಾ

ಒಂದು ಕಾಲದಾಗ ಅವರ ಧಿಮಾಕು ಮುಗಿಲಿಗೂ ಮ್ಯಾಲ ಇತ್ತೇನಪಾ

ಮನಿ ಬಿಟ್ಟು ಇರೋದು ನಮಗೇನು ಹೊಸಾದು ಅಲ್ಲೇ ಅಲ್ಲಪಾ ಜಾಲಿಬ್,

ನಾವು ಯಾವಾಗಲೂ ದೇಶದ ಚಿಂತಿ ಮಾಡೇವಿ ಹೊರತು

ಜೈಲಿನ ವಿಚಾರನ ಬಂದಿಲ್ಲೇನಪಾ

ನಿನಗಿಂತ ಮೊದಲು ಈ ಸಿಂಹಾಸನದ ಮ್ಯಾಲೆ ಒಬ್ಬವ ಕೂತಿದ್ದನಲ್ಲಾ

ಅವನಿಗೂ ನಿನ್ನಂಗನ, ತಾನ ದೇವರು ಅನ್ನೋದು ಖಾತ್ರಿ ಆಗಿತ್ತು.”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೂತುಕುಡಿ ಸಾತನ್‌ಕುಳಂ ತಂದೆ-ಮಗನ ಕಸ್ಟಡಿ ಸಾವು ಪ್ರಕರಣ : ಅಪರಾಧಿಗಳಾದ ಎಲ್ಲಾ 9 ಪೊಲೀಸರಿಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ

ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾತನ್‌ಕುಳಂ ಪೊಲೀಸ್ ಠಾಣೆಯಲ್ಲಿ ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಸಂಭವಿಸಿದ, ವ್ಯಾಪಾರಿ ಪಿ. ಜಯರಾಜ್ (58) ಮತ್ತು ಅವರ ಮಗ ಜೆ. ಬೆನಿಕ್ಸ್ (31) ಅವರ ಕಸ್ಟಡಿ ಸಾವು ಪ್ರಕರಣದ...

ದಾವಣಗೆರೆ ದಕ್ಷಿಣ ಉಪ-ಸಮರ: ಶಾಮನೂರು ಸಾಮ್ರಾಜ್ಯದಲ್ಲಿ ಅಹಿಂದ ಬಂಡಾಯ!

ತುಂಗಭದ್ರಾ ನದಿ ಪರ‍್ವಕ್ಕೆ ಎತ್ತರದ ಪ್ರದೇಶದಲ್ಲಿರುವ ದಾವಣಗೆರೆ ಮಧ್ಯ ಕರ್ನಾಟಕದ ಪ್ರಮುಖ ವಾಣಿಜ್ಯ ನಗರಿ. ಬೆಣ್ಣೆ ದೋಸೆಯ ಘಮಲಿನ ದಾವಣಗೆರೆಯ ರಾಜಕಾರಣ ಮಾತ್ರ ಮಿರ್ಚಿ-ಮಂಡಕ್ಕಿಯ ಖಡಕ್ ಖಾರಾ ಕುರುಕುಲಿನಂತೆ! ದಾವಣಗೆರೆ ಮತ್ತದರ ಸುತಮುತ್ತಲಿನ...

‘Dr. Nimo Yadav’, ‘Nehr Who’ ಎಕ್ಸ್‌ ಖಾತೆಗಳನ್ನು ತಕ್ಷಣ ಮರುಸ್ಥಾಪಿಸಲು ದೆಹಲಿ ಹೈಕೋರ್ಟ್ ಆದೇಶ

'Dr. Nimo Yadav' ಮತ್ತು 'Nehr Who' ಎಂಬ ಎರಡು ಪರೋಡಿ ಎಕ್ಸ್‌ ಖಾತೆಗಳನ್ನು ತಕ್ಷಣ ಮರು ಸ್ಥಾಪಿಸುವಂತೆ ದೆಹಲಿ ಹೈಕೋರ್ಟ್ ಸೋಮವಾರ (ಏ.6) ಎಕ್ಸ್ ಸಂಸ್ಥೆಗೆ (X Corp) ಆದೇಶಿಸಿದೆ. 'Dr....

ಬಂಗಾಳ| ಮತದಾರರ ಪಟ್ಟಿಯಿಂದ ಹೆಸರು ತೆಗೆದ ಬಳಿಕ ಸಾವಿಗೆ ಶರಣಾದ ಮುಸ್ಲಿಂ ವ್ಯಕ್ತಿ

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ನಂತರ ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯಿಂದ ತನ್ನ ಹೆಸರನ್ನು ತೆಗೆದುಹಾಕಿದ್ದರಿಂದ ಮನನೊಂದ ಮುಸ್ಲಿಂ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಮೃತನನ್ನು ಬಿರ್ಭುಮ್...

‘ಯೋಜನೆಯು ಕೇರಳಕ್ಕೆ ಜೀವನಾಡಿಯಾಗಲಿದೆ’: ವಯನಾಡ್ ಸುರಂಗ ಮಾರ್ಗ ವಿರುದ್ದದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಕೇರಳದ ಕೋಝಿಕ್ಕೋಡ್-ವಯನಾಡ್ ಸುರಂಗ ಮಾರ್ಗ ನಿರ್ಮಾಣಕ್ಕೆ ನೀಡಲಾದ ಪರಿಸರ ಅನುಮತಿ (ಇಸಿ) ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ (ಏ.6) ವಜಾಗೊಳಿಸಿದೆ. ಸುರಂಗ ನಿರ್ಮಾಣದ ಸಮಯದಲ್ಲಿ ಪರಿಸರ ಅನುಮತಿಯ ಷರತ್ತುಗಳ ಉಲ್ಲಂಘನೆಯಾದರೆ, ಅರ್ಜಿದಾರರು...

651 ಕೋಟಿ ರೂ. ಮೌಲ್ಯದ ನಗದು, ಮದ್ಯ, ಮಾದಕ ವಸ್ತು ವಶಪಡಿಸಿಕೊಂಡ ಚುನಾವಣಾ ಆಯೋಗ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಧಿಕಾರಿಗಳು 651.51 ಕೋಟಿ ರೂ.ಗೂ ಹೆಚ್ಚು ಮೌಲ್ಯದ ನಗದು, ಮದ್ಯ, ಮಾದಕ ವಸ್ತುಗಳು ಮತ್ತು ಇತರ ಉಚಿತ ವಸ್ತುಗಳನ್ನು...

ಪೇರಳೆ ಹಣ್ಣು ಕದ್ದಿದ್ದಾಳೆಂದು ಆರೋಪಿಸಿ ಬಾಲಕಿಯನ್ನು ಸರಪಳಿಯಿಂದ ಕಟ್ಟಿ ಥಳಿಸಿದ ಮಾಜಿ ಸೇನಾಧಿಕಾರಿ

ಪೇರಳೆ ಹಣ್ಣು ಕದ್ದಿದ್ದಾಳೆಂದು ಆರೋಪಿಸಿ ನಾಲ್ಕು ವರ್ಷದ ಬಾಲಕಿಯನ್ನು ನಿವೃತ್ತ ಸೇನಾಧಿಕಾರಿಯೊಬ್ಬರು ಸರಪಳಿಯಿಂದ ಕಟ್ಟಿಹಾಕಿ ಕ್ರೂರವಾಗಿ ಥಳಿಸಿರುವ ಆಘಾತಕಾರಿ ಘಟನೆ ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಬೆಹಡಾಲ ಗ್ರಾಮದಲ್ಲಿ ನಡೆದಿದೆ. ಬಾಲಕಿಯು ನಿವೃತ್ತ ಸೇನಾಧಿಕಾರಿಯ ತೋಟದ...

ಆಂಧ್ರ ವಿಧಾನಸಭಾ ಸ್ಪೀಕರ್ ಅಯ್ಯಣ್ಣ ಪಾತ್ರುಡು ಅವರಿಂದ ದಲಿತ ವ್ಯಕ್ತಿಗೆ ಕಪಾಳಮೋಕ್ಷ: ವೈಎಸ್‌ಆರ್‌ಸಿಪಿ ವಾಗ್ದಾಳಿ

ಏಪ್ರಿಲ್ 3 ರ ಗುರುವಾರ ನರಸಿಪಟ್ಟಣದಲ್ಲಿ ದಲಿತ ವ್ಯಕ್ತಿಯೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಕ್ಕಾಗಿ ಆಂಧ್ರಪ್ರದೇಶ ವಿಧಾನಸಭಾ ಸ್ಪೀಕರ್ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕ ಅಯ್ಯಣ್ಣ ಪಾತ್ರುಡು ಅವರ ವಿರುದ್ಧ ವೈಎಸ್‌ಆರ್ ಕಾಂಗ್ರೆಸ್...

ಪ. ಬಂಗಾಳ | ಬಿಜೆಪಿ ಪ್ರಚಾರ ಸಾಮಗ್ರಿ ಸಜ್ಜುಗೊಳಿಸಿದ ವಿಡಿಯೋ ವೈರಲ್ : ಚುನಾವಣಾ ಕರ್ತವ್ಯದಲ್ಲಿದ್ದ ಅಧಿಕಾರಿ ಅಮಾನತು

ಬಿಜೆಪಿ ಪ್ರಚಾರ ಸಾಮಗ್ರಿಗಳನ್ನು ತಯಾರಿಸಲು ಸಹಾಯ ಮಾಡಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಪಾಣಿಹಟಿ ವಿಧಾನಸಭಾ ಕ್ಷೇತ್ರದ ಅಧಿಕಾರಿಯೊಬ್ಬರನ್ನು ಚುನಾವಣಾ ಆಯೋಗ ಅಮಾನತುಗೊಳಿಸಿದೆ ಎಂದು ದಿ ಇಂಡಿಯನ್...

ಮುಸ್ಲಿಮರ ವಿರುದ್ಧ ದ್ವೇಷ ಕಾರುವ ಅಸ್ಸಾಂ ಸಿಎಂ ಪತ್ನಿ ಬಳಿ 2 ಮುಸ್ಲಿಂ ದೇಶಗಳ ಪಾಸ್‌ಪೋರ್ಟ್ ಇದೆ : ಕಾಂಗ್ರೆಸ್ ಆರೋಪ

ಮತದಾನಕ್ಕೆ ಇನ್ನೇನು ಮೂರು ದಿನಗಳು ಬಾಕಿ ಇರುವಾಗ, ಅಸ್ಸಾಂನಲ್ಲಿ ಕಾಂಗ್ರೆಸ್‌-ಬಿಜೆಪಿ ನಡುವೆ ವೈಯಕ್ತಿಕ ವಿಚಾರಗಳ ಕುರಿತ ವಾಗ್ಯುದ್ಧ ತಾರಕಕ್ಕೇರಿದೆ. ಸಿಎಂ ಹಿಮಂತ ಬಿಸ್ವಾ ಶರ್ಮಾ ಮತ್ತು ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ...