- Advertisement -
- Advertisement -
ಬಡವರು, ಮಹಿಳೆಯರು ಮತ್ತು ಮಕ್ಕಳನ್ನು ಮೇಲೆತ್ತುವ ಮೂಲಕ ಅವರ ಸಬಲೀಕರಣಕ್ಕೆ ನಮ್ಮ ಪ್ರಯತ್ನ ಮುಂದುವರಿಯಲಿದೆ. ಅದೇ ಮಾರ್ಗದಲ್ಲಿ ನಾವು ನಡೆಯುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಮೋದಿ ನಮ್ಮ ಬಜೆಟ್ ಬಡವರ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದೆ. ಈ ಕುರಿತು ಸದನದಲ್ಲಿ ಚರ್ಚೆ ನಡೆಯಲಿದೆ. ನಮ್ಮ ಪ್ರಯತ್ನಗಳು ಒಂದೇ ದಿಕ್ಕಿನಲ್ಲಿವೆ. ನಮ್ಮ ಬಜೆಟ್ ಕೇಂದ್ರೀಕೃತವಾಗಿದೆ ಎಂದು ನಾವು ಖಚಿತಪಡಿಸುತ್ತೇವೆ ಎಂದು ಹೇಳಿದರು.
ಹಣಕಾಸು ಮತ್ತು ಬಡವರ ಸಬಲೀಕರಣ ಚರ್ಚೆಯು ಒಂದೇ ರೀತಿ ಸುತ್ತುತ್ತದೆ ಮತ್ತು ಅದು ಉತ್ಪಾದಕವಾಗಲಿದೆ ಎಂದು ನಾನು ಭಾವಿಸುತ್ತೇನೆ ಎಂದು ತಿಳಿಸಿದರು.
ರಾಷ್ಟ್ರಪತಿಗಳು ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡುವ ಮೊದಲು ಮಾತನಾಡಿರುವ ಪ್ರಧಾನಿ ಕಲಾಪ ಏಪ್ರಿಲ್ 3ರವರೆಗೆ ನಡೆಯಲಿದೆ. ಫೆಬ್ರವರಿ 1ರಂದು ಬಜೆಟ್ ಮಂಡನೆಯಾಗಲಿದೆ. ಕೇಂದ್ರ ಹಣಕಾಸು ಸಚಿವ ನಿರ್ಮಲ ಸೀತಾರಾಮನ್ ಬಜೆಟ್ ಮಂಡಿಸುವರು ಎಂದು ಹೇಳಿದರು.