Homeಅಂಕಣಗಳುದೊರೆಸ್ವಾಮಿ ಸನ್ಹೇಕ್ಕೋಗಿ ಕ್ಷಮೆ ಕೇಳಲೆ - ಯತ್ನಾಳ್‌ ಜೊತೆ ಯಾಹೂ ಮಾತುಕತೆ

ದೊರೆಸ್ವಾಮಿ ಸನ್ಹೇಕ್ಕೋಗಿ ಕ್ಷಮೆ ಕೇಳಲೆ – ಯತ್ನಾಳ್‌ ಜೊತೆ ಯಾಹೂ ಮಾತುಕತೆ

- Advertisement -
- Advertisement -

ಸ್ವಾತಂತ್ರ್ಯ ಹೋರಾಟದ ಸಂಕೇತದಂತಿರುವ ದೊರೆಸ್ವಾಮಿಯವರ ಬಗ್ಗೆ ಅತ್ಯಂತ ಪ್ರೀತ್ಯಾಧರಗಳಿಂದ ಮಾತನಾಡಿರುವ ಬಿಜಾಪುರದ ಬಸನಗೌಡ ಪಾಟೀಲ ಯತ್ನಾಳ್ ಎಂಬ ಧೀಮಂತ ನಾಯಕನನ್ನು ಮಾತನಾಡಿಸಿ, ದೊರೆಸ್ವಾಮಿಯವರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬೇಕು ಅನ್ನಿಸಿತಲ್ಲಾ. ಆ ಕೂಡಲೇ ಫೋನ್ ಮಾಡಲಾಗಿ ರಿಂಗಾಯ್ತು.

ರಿಂಗ್‍ಟೋನ್: “ನಮಸ್ತೇ ಸದಾವತ್ಸಲೇ ಮಾತೃಭೂಮಿ….” “ಹಲೋ ಯಾರ್ರಿ”
“ನಾನಲೆ ಎಫ್.ಜೆ.ತಳವಾರ.”
“ಯಾರಂತ ಗೊತ್ತಾಗಲಿಲ್ರಿ.”
“ನಿಮ ತಂದಿ ಗೆಳಯ ಕಣೋ, ಯತ್ನಾಳ.”
“ಏನಾಗಬೇಕಿತ್ರಿ.”
“ಏನಿಲ್ಲಪ. ನಿನಕಡಿಂದ ನನಗ ಆಗಬೇಕಾದ್ದೇನಿಲ್ಲ. ನಿನ್ನ ಆರೋಗ್ಯ ಹೆಂಗದಾ.”
“ಯದುಕ್ರಿ ಹಾಂಗ ಕೇಳಕತ್ತಿರಿ.”
“ಯದಕಪ್ಪ ಅಂದ್ರಾ, ಇಲ್ಲಿ ದರವೊಬ್ಬರೂ ನಿನ್ನ ತೆಲಿ ಶುದ್ದಿಲ್ಲಂತ ಮಾತಾಡಕತ್ಯಾರ. ಅದಕ ನನಿಗ ಗಾಬರಿಯಾತು. ಆರಡಿ ಎತ್ತರಕ ವೀರಸಿಂಧೂರ ಲಕ್ಷ್ಮಣನಂಗಿದ್ದ. ಮುಂಜಾಲೆದ್ದು ಮೂರು ಎಮ್ಮಿ ಹಾಲಿಂಡತಿದ್ದ ನನ್ನ ಗೆಳೆಯನ ಮಗ ಇವುಗೇನಾತಪ ಅಂತ ಗಾಬರಾತಲೇ ಮಗನ.”
“ಯಾರೊ ಸುಳ್ಳು ಹೇಳ್ಯಾರ್ರಿ, ನನ್ನ ತಲಿಗೇನಾಗಿಲ್ಲ.”
“ಅಂದ್ರ ಮಿದುಳಿಗೇನೋ ಆಗೇತಿ ಅದಕ 23 ಕೇಸು ತೆಲಿ ಮೇಲದಾವು.”
“ಇಲ್ರಿ ಅವು ಸುಳ್ಳು ಕೇಸು. ಪ್ರಕೃತಿ ನೆಟ್ಟಗೈತಿ. ಅರಾಮದಿನಿ.”
“ಇರವಲ್ಯಾಕ, ಆದ್ರ ಸ್ವಾತಂತ್ರ ಹೋರಾಟಗಾರ ಶತಾಯುಷಿ ದೊರೆಸ್ವಾಮಿಗಳನ್ನ ಯದುಕ್ಕಲೆ ಬೈಯಕತ್ತಿಯಂತೆ.”
“ಬೋದಿಲ್ರೀ. ಅವ ಡೋಂಗಿ ಸ್ವಾತಂತ್ರ ಹೋರಾಟಗಾರ ಅಂದೀನಿ ಅಷ್ಟ.”
“ಮಗ ಸತ್ತಲೆ ನೀನು. ದೊರೆಸ್ವಾಮಿ ಅಂದ್ರೇನು. ನೀ ಅಂದ್ರೇನು. ಅವರ ಚಪ್ಪಲಿ ಬಿಡೋ ಜಾಗದಾಗ ನಿಂದ್ರಕ್ಕೆ ಲಾಯಕ್ಕಿಲ್ಲದ ಮನುಶ್ಯದಿ ನೀನು. ಯದುಕಲೆ ಅಂಗಂದಿ.”
“ಆತ ಕಾಂಗ್ರೆಸ್ಸಿನ ಪರ ಮಾತಾಡತಾರ.”
“ಸಿದ್ದರಾಮಯ್ಯನ ಸರಕಾರಿದ್ದಾಗ ಅವರ ಸರಕಾರನೂ ಟೀಕಿ ಮಾಡಿದರಲ್ಲಾ. ಆಗ ನಿನ್ನ ಕಿವಿಗೇನು ಗೂಟಬಡಿಕೊಂಡಿದ್ದೇನು.”
“ಆ ಟೀಕಿನೂ ಡೋಂಗಿರಿ. ಅವುರು ಕಾಂಗ್ರೆಸಿಗರ ಪರ”
“ಅವರ ಪರ ಅಲ್ಲಲೇ, ಯಾರು ಜನಕ್ಕೆ ಒಳ್ಳೇದು ಮಾಡ್ತರೋ ಅವುರ ಪರ ಇರತರ. ತಲಿಕೆಟ್ಟ ಹಲಕಟ್ಟವುರ ಪರ ಇರೂದಿಲ್ಲವುರು ತಿಳಿತಿಲ್ಲಾ.”
“ಅವುರು ಪಾಕೀಸ್ತಾನದ ಪರ ಅವುರ.”
“ಪಾಕಿಸ್ತಾನದ ಪರ ಯದಕ್ಕಿರತರಲೇ. ನೀವು ಏನದೀರಲ್ಲಾ, ಅಂದ್ರ ಬಿಜೆಪಿಗಳು ನಿಮಗಿರುವಷ್ಟು ಪಾಕಿಸ್ತಾನದ ಪ್ರೀತಿ ನಮ ದೇಶದಾಗ ಯಾರಿಗೂ ಇಲ್ಲ ನೋಡು. ಅಲ್ಲಲೆ ದಿನ ಬೆಳಗಾತು ಅಂದ್ರ ಪಾಕಿಸ್ತಾನ ಪಾಕಿಸ್ತಾನ ಅನ್ನಕತ್ತೀರಲ್ಲಾ, ಆ ದೇಶ ಕಂಡ್ರ ಅದೇನು ಪ್ರೀತಿಲೆ ನಿಮಗೆ.”
“ಪ್ರೀತಿಯಲ್ಲ ದ್ವೇಷ.”
“ದ್ವೇಷ ಅಲ್ಲಲೆ ಪ್ರೀತಿ. ನಿಮ್ಮ ಪ್ರಧಾನಿ ಏನದಾನಲ್ಲ ಮೋದಿ, ಆತ ಚೊಣಬಿ ಹೊಕ್ಕಂಗ ದೌಡು ಪಾಕಿಸ್ತಾನಕ್ಕೋಗಿ ಲಗೂನು ಬಂದನಲ್ಲ ಯದಕ್ಕೋಗಿದ್ದಾ. ದ್ವೇಷ ಇದ್ರೋತಿದ್ನೇನವ. ಪಾಪ ಆ ದೇಶದ ಪ್ರಧಾನಿ ಮಗಳ ಲಗ್ನಕ್ಕೋಗಿ ಬಿರಿಯಾನಿ ತಿಂದ. ಇನ್ನ ಮುಂದೆ ಹಿಂಗೇ ಇರೂನು ಅಂತೇಳಿ ಬಂದ. ಅದಕ್ಕೂ ಮೊದ್ಲು ವಾಜಪೇಯಿ, ನಿಮ್ಮ ವಿಜಯ ಸಂಕೇಶ್ವರನಂಗೆ ಬಸ್ ಓಡಿಸಿದ್ದ. ಈ ಕಡಿ ಬಸ್ ಹೋತು, ಆಕಂಡಿದ ಪಾಕಿಸ್ತಾನದ ಸೈನಿಕರು ಒಳಬಂದ್ರು. ಐದು ನೂರು ಮಂದಿ ನಮ್ಮ ಸೈನಿಕರು ತೀರಿಕೊಂಡ್ರು. ಮಕ್ಕಳಾ, ವಿಜಯೋತ್ಸವ ಮಾಡ್ತೀರಿ, ಇತಿಹಾಸಗೊತ್ತೇನಲೆ ನಿನಗ.”
“ಗೊತ್ತೈತಿ.”
“ಗೊತ್ತಿದ್ರ ದೊರೆಸ್ವಾಮಿ ಹೋರಾಟವ ಡೋಂಗಿ ಅಂತಿರಲಿಲ್ಲ ನೀನು. ಕ್ವಿಟ್ ಇಂಡಿಯಾ ಚಳುವಳೀಲಿ ನೀ ಹುಟ್ಟಿದ್ದೇನಲೇ? ಆಗಲೇ ದೊರೆಸ್ವಾಮಿ ಜೈಲಿಗೋಗಿದ್ರು.”
“ಆ ಚಳುವಳಿ ಇಲ್ದಿದ್ರೆ ಅವುರು ಜೈಲಿಗೋತಿರಲಿಲ್ಲ.”
“ತೆಲಿಯಾಗೇನು ಮೆದುಳೈತೋ ಎಮ್ಮಿ ಸಗಣಿ ಐತೋ ನಿನಗ. ಅಲ್ಲಪ್ಪ ಜೈಲಿಗೋಗದಿದ್ರೆ ಚಳುವಳಿ ಮಾಡತಿದ್ರು ಗೊತ್ತೇನು.”
“ಅವರ ಚಳುವಳಿನೆ ಡೋಂಗಿ.”
“ಇನ್ಯಾರದು ಖರೆ ಐತಿ ಹೇಳು ನೋಡೊನು.”
“ವೀರ ಸಾವರ್ಕರ ಚಳುವಳಿ.”
“ಲೇ ಮಂಗ್ಯನ ಮಗನ. ಆ ಸಾವರಕರ ಯಾರು ಗೊತ್ತೇನಲೆ. ಅಂಡಮಾನ್ ಜೈಲಾಗೆ ಇರಕ್ಕಾಗುದಿಲ್ಲಂತ ಹೇಳಿ ಬ್ರಿಟಿಷರಿಗೆ ಮೂರು ಬಾರಿ ಕ್ಷಮಾಪಣೆ ಪತ್ರ ಬರದು, ಬಿಡುಗಡೆಯಾಗಿ ನಾಗಪುರಕ್ಕೆ ಬಂದು ಖೋಲಿ ಹಿಡುದು ಕುಂತವ. ಹಿಂದೂಮಹಾಸಭಾ, ವಿಶ್ವಹಿಂದೂ ಪರಿಷತ್ ಮಾಡಿ ಇವತ್ತು ನಿನ್ನಂತವರ ತೆಲಿಕೆಟ್ಟು ಮಸರಗಡಿಗಿಯಾಗಂಗೆ ಮಾಡಿ ಹೋದವ. ನೀ ಮದುಲು ಹಿಂಗರಲಿಲ್ಲ, ಭಾಳ ಸಂಭಾವಿತಿದ್ದಿ. ಯಾವಾಗ ನಾಗಪುರಕ್ಕೆ ಕೇಳಂಗೆ ಮಾತಾಡಕತ್ತಿದ್ಯೋ ಆಗ ಹಿಂಗಾದಿ. ಒಂದು ತಿಳಕೊ ಮಗನ.”
“ಏನೇಳ್ರಿ.”
“ನೀ ಏಟೇ ವದರಿದ್ರು ಮಂತ್ರಿಯಾಗೂದಿಲ್ಲಲೆ.”
“ಯದಕ್ರಿ.”
“ದೊರೆಸ್ವಾಮಿ ಶಾಪ ಕಣಲೆ. ಅದಕ್ಕೂ ಮೊದ್ಲು ಶೋಭಾ ಕರಂದ್ಲಾಜೆ ಶಾಪ ಕೊಟ್ಟಿದ್ಲು.”
“ಹೌದೇನ್ರೀ.”
“ಹೌದಲೇ, ನೀ ಎಡೂರಪ್ಪ ಶೋಭಾ ಕರಂದ್ಲಾಜೆ ತೆಕ್ಕಿಬಡಕೊಂಡಿದ್ರು ನಾನೇ ನೋಡಿದೆ ಅಂತ ಚಿಕ್ಕಮಗಳೂರಾಗ ಹೇಳಿ ಹೋದಿ. ಅದು, ಶೋಬನ ಕಿವಿತಲುಪ್ತು, ಅದು ಎಡೂರಪ್ಪನ ಕಿವಿ ಕೂಡ ಆಗಿತ್ತು.”
“ಯಾರೊ ಚಾಡಿ ಹೇಳ್ಯಾರ್ರಿ.”
“ಇಲ್ಲಿ ಕೇಳಿಸಿಕೊಂಡಿದ್ದ ಅಲ್ಲೇಳಿದ್ರ ಚಾಡಿ ಯಂಗಲೆ ಆತದೆ. ಸುಳ್ಳು ಹೇಳಿದ್ರೆ ಅದು ಚಾಡಿಯಾಕ್ಯತಿ- ತಿಳಿತೇನಲೇ. ಅಂತೂ ನೀ ಎಡೂರಪ್ಪನ ಸಂಪುಟ ಸೇರೋದು ಸುಳ್ಳಾತು.”
“ಮಂತ್ರಿನೆ ಆಗಬೇಕು ಅನ್ನದೇನೂ.”
“ಅಲ್ಲಲೆ ಖಬರಗೇಡಿ ಕೇಂದ್ರದಾಗ ಮಂತ್ರಿಯಾಗಿದ್ದವ ರಾಜ್ಯದಾಗೂ ಮಂತ್ರಿಯಾಗಬೇಕಲ್ಲೇನು.”
“ಹೌದ್ರಿ.”
“ಮತ್ತ ಆಗಿಲ್ಲಂದ್ರ ನೀ ಆಯೋಗ್ಯದಿ, ನಾಲಾಯ್ಕದಿ, ಒಟ್ಟ ಶಾಸಕ ಆಗಕ್ಕೂ ಯೋಗ್ಯಲ್ಲ ನೀನು ಅಂದಂಗಾತು.”
“ನನ್ನ ಯೋಗ್ಯತೆ ಬಗ್ಗೆ ಮಾತಾಡಬೇಡಿ.”
“ಇಲ್ಲಪ ನಿನ್ನ ಯೋಗ್ಯತೆ ಬಾಳ ಬೇಷೈತಿ, ಅಲ್ಲಲೆ ಮನ್ನಿ ಇಡೀ ಕರನಾಟಕನೆ ನಿನ್ನ ವಿರುದ್ಧ ಪ್ರತಿಭಟನೆ ಮಾಡ್ತು. ವಿಜಾಪುರದ ಗೌರವನೆ ಹೋತಲ್ಲಲೇ. ಅದಕೂ ಮೊದ್ಲು ಬಿಜಾಪುರಂದ್ರ ಮಂದಿ ಎಷ್ಟು ಬೆಲಿ ಕೊಡತಿದ್ರ ಗೊತ್ತೇನು.”
“ಈಗ ಇನ್ನ ಕೊಡ್ತಾರ. ನಾ ಎಂಪಿಯಾಗಿ, ಮಂತ್ರಿಯಾಗಿ, ಎಮ್ಮೆಲ್ಲೆಯಾಗಿ ಬಿಜಾಪುರಕ್ಕ ಹೆಸರು ತಂದೀನಿ.”
“ತಂದಿ ಬುಡು ಮಗನ. ಅಲ್ಲಲೆ, ಒಮ್ಮೆ ಅಂತಾ ಸಿರಿಗೆರೆ ಶಿವಾಚಾರ್ಯ ಸ್ವಾಮಿ ಬಂದಿದ್ರು. ಅವರ ಕಾರ್ಯಕ್ರಮದ ಮೆರವಣಿಗಿ ಏನಿತ್ತಲ್ಲ ಅದಕ ಮುಸ್ಲಿಂ ಮಹಿಳೆಯರು ಎಷ್ಟು ಮಂದಿ ಬಂದಿದ್ರು ಗುರುತೇನ, ಮೂರು ಸಾವುರ ಮಂದಿ ಬಂದಿದ್ರು. ಆಗ ಗುರುಗಳು ನಮ್ಮ ಬಿಜಾಪುರದ ಧರ್ಮ ಸಾಮರಸ್ಯ ಕೊಂಡಾಡಿ ಹೋದ್ರು. ಇಂಥಾ ಊರಿಗೆ ನೀ ಎಲ್ಲಿಂದ ಬಂದೇ ಹನುಮಂತ. ಮೊದಲು ದಕ್ಷಿಣ ಕನ್ನಡಕ್ಕೋಗು, ಅಲ್ಲಿ ನಿನ್ನಂಥವರು ಭಾಳಮಂದಿ ಅದಾರ.”
“ವಿಜಾಪುರ ಅನಾಥಮಾಡಿ ನಾ ಎಲ್ಯೂ ಹೋಗುದಿಲ್ಲ.”
“ಅನಾಥಲ್ಲಲೇ, ನೀ ಇದ್ರಾ ಮಶಾಣಾಕ್ಯತಿ, ಈಗಾಗಲೇ ನಿಮ್ಮ ಬ್ರದರ್ಸ್ ದೆಹಲಿನ ಮಶಾಣ ಮಾಡಕತ್ಯಾರ, ಅದಿರ್ಲಿ ಮೊದಲು ನಮ್ಮ ದೊರೆಸ್ವಾಮಿ ಸನೇಕ್ಕೋಗಿ ಕ್ಷಮಿಸಿರಿಯಪ್ಪಾ ಅನ್ನು.”
“ನಾ ಅನ್ನುದಿಲ್ರಿ.”
“ಹಾಳಾಗಿ ಹೋಗು.”
“ಅಂಗೇ ಮಾಡ್ತೇನ್ರೀ…”

ಥೂತ್ತೇರಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...