Homeಅಂಕಣಗಳುದೊರೆಸ್ವಾಮಿ ಸನ್ಹೇಕ್ಕೋಗಿ ಕ್ಷಮೆ ಕೇಳಲೆ - ಯತ್ನಾಳ್‌ ಜೊತೆ ಯಾಹೂ ಮಾತುಕತೆ

ದೊರೆಸ್ವಾಮಿ ಸನ್ಹೇಕ್ಕೋಗಿ ಕ್ಷಮೆ ಕೇಳಲೆ – ಯತ್ನಾಳ್‌ ಜೊತೆ ಯಾಹೂ ಮಾತುಕತೆ

- Advertisement -
- Advertisement -

ಸ್ವಾತಂತ್ರ್ಯ ಹೋರಾಟದ ಸಂಕೇತದಂತಿರುವ ದೊರೆಸ್ವಾಮಿಯವರ ಬಗ್ಗೆ ಅತ್ಯಂತ ಪ್ರೀತ್ಯಾಧರಗಳಿಂದ ಮಾತನಾಡಿರುವ ಬಿಜಾಪುರದ ಬಸನಗೌಡ ಪಾಟೀಲ ಯತ್ನಾಳ್ ಎಂಬ ಧೀಮಂತ ನಾಯಕನನ್ನು ಮಾತನಾಡಿಸಿ, ದೊರೆಸ್ವಾಮಿಯವರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬೇಕು ಅನ್ನಿಸಿತಲ್ಲಾ. ಆ ಕೂಡಲೇ ಫೋನ್ ಮಾಡಲಾಗಿ ರಿಂಗಾಯ್ತು.

ರಿಂಗ್‍ಟೋನ್: “ನಮಸ್ತೇ ಸದಾವತ್ಸಲೇ ಮಾತೃಭೂಮಿ….” “ಹಲೋ ಯಾರ್ರಿ”
“ನಾನಲೆ ಎಫ್.ಜೆ.ತಳವಾರ.”
“ಯಾರಂತ ಗೊತ್ತಾಗಲಿಲ್ರಿ.”
“ನಿಮ ತಂದಿ ಗೆಳಯ ಕಣೋ, ಯತ್ನಾಳ.”
“ಏನಾಗಬೇಕಿತ್ರಿ.”
“ಏನಿಲ್ಲಪ. ನಿನಕಡಿಂದ ನನಗ ಆಗಬೇಕಾದ್ದೇನಿಲ್ಲ. ನಿನ್ನ ಆರೋಗ್ಯ ಹೆಂಗದಾ.”
“ಯದುಕ್ರಿ ಹಾಂಗ ಕೇಳಕತ್ತಿರಿ.”
“ಯದಕಪ್ಪ ಅಂದ್ರಾ, ಇಲ್ಲಿ ದರವೊಬ್ಬರೂ ನಿನ್ನ ತೆಲಿ ಶುದ್ದಿಲ್ಲಂತ ಮಾತಾಡಕತ್ಯಾರ. ಅದಕ ನನಿಗ ಗಾಬರಿಯಾತು. ಆರಡಿ ಎತ್ತರಕ ವೀರಸಿಂಧೂರ ಲಕ್ಷ್ಮಣನಂಗಿದ್ದ. ಮುಂಜಾಲೆದ್ದು ಮೂರು ಎಮ್ಮಿ ಹಾಲಿಂಡತಿದ್ದ ನನ್ನ ಗೆಳೆಯನ ಮಗ ಇವುಗೇನಾತಪ ಅಂತ ಗಾಬರಾತಲೇ ಮಗನ.”
“ಯಾರೊ ಸುಳ್ಳು ಹೇಳ್ಯಾರ್ರಿ, ನನ್ನ ತಲಿಗೇನಾಗಿಲ್ಲ.”
“ಅಂದ್ರ ಮಿದುಳಿಗೇನೋ ಆಗೇತಿ ಅದಕ 23 ಕೇಸು ತೆಲಿ ಮೇಲದಾವು.”
“ಇಲ್ರಿ ಅವು ಸುಳ್ಳು ಕೇಸು. ಪ್ರಕೃತಿ ನೆಟ್ಟಗೈತಿ. ಅರಾಮದಿನಿ.”
“ಇರವಲ್ಯಾಕ, ಆದ್ರ ಸ್ವಾತಂತ್ರ ಹೋರಾಟಗಾರ ಶತಾಯುಷಿ ದೊರೆಸ್ವಾಮಿಗಳನ್ನ ಯದುಕ್ಕಲೆ ಬೈಯಕತ್ತಿಯಂತೆ.”
“ಬೋದಿಲ್ರೀ. ಅವ ಡೋಂಗಿ ಸ್ವಾತಂತ್ರ ಹೋರಾಟಗಾರ ಅಂದೀನಿ ಅಷ್ಟ.”
“ಮಗ ಸತ್ತಲೆ ನೀನು. ದೊರೆಸ್ವಾಮಿ ಅಂದ್ರೇನು. ನೀ ಅಂದ್ರೇನು. ಅವರ ಚಪ್ಪಲಿ ಬಿಡೋ ಜಾಗದಾಗ ನಿಂದ್ರಕ್ಕೆ ಲಾಯಕ್ಕಿಲ್ಲದ ಮನುಶ್ಯದಿ ನೀನು. ಯದುಕಲೆ ಅಂಗಂದಿ.”
“ಆತ ಕಾಂಗ್ರೆಸ್ಸಿನ ಪರ ಮಾತಾಡತಾರ.”
“ಸಿದ್ದರಾಮಯ್ಯನ ಸರಕಾರಿದ್ದಾಗ ಅವರ ಸರಕಾರನೂ ಟೀಕಿ ಮಾಡಿದರಲ್ಲಾ. ಆಗ ನಿನ್ನ ಕಿವಿಗೇನು ಗೂಟಬಡಿಕೊಂಡಿದ್ದೇನು.”
“ಆ ಟೀಕಿನೂ ಡೋಂಗಿರಿ. ಅವುರು ಕಾಂಗ್ರೆಸಿಗರ ಪರ”
“ಅವರ ಪರ ಅಲ್ಲಲೇ, ಯಾರು ಜನಕ್ಕೆ ಒಳ್ಳೇದು ಮಾಡ್ತರೋ ಅವುರ ಪರ ಇರತರ. ತಲಿಕೆಟ್ಟ ಹಲಕಟ್ಟವುರ ಪರ ಇರೂದಿಲ್ಲವುರು ತಿಳಿತಿಲ್ಲಾ.”
“ಅವುರು ಪಾಕೀಸ್ತಾನದ ಪರ ಅವುರ.”
“ಪಾಕಿಸ್ತಾನದ ಪರ ಯದಕ್ಕಿರತರಲೇ. ನೀವು ಏನದೀರಲ್ಲಾ, ಅಂದ್ರ ಬಿಜೆಪಿಗಳು ನಿಮಗಿರುವಷ್ಟು ಪಾಕಿಸ್ತಾನದ ಪ್ರೀತಿ ನಮ ದೇಶದಾಗ ಯಾರಿಗೂ ಇಲ್ಲ ನೋಡು. ಅಲ್ಲಲೆ ದಿನ ಬೆಳಗಾತು ಅಂದ್ರ ಪಾಕಿಸ್ತಾನ ಪಾಕಿಸ್ತಾನ ಅನ್ನಕತ್ತೀರಲ್ಲಾ, ಆ ದೇಶ ಕಂಡ್ರ ಅದೇನು ಪ್ರೀತಿಲೆ ನಿಮಗೆ.”
“ಪ್ರೀತಿಯಲ್ಲ ದ್ವೇಷ.”
“ದ್ವೇಷ ಅಲ್ಲಲೆ ಪ್ರೀತಿ. ನಿಮ್ಮ ಪ್ರಧಾನಿ ಏನದಾನಲ್ಲ ಮೋದಿ, ಆತ ಚೊಣಬಿ ಹೊಕ್ಕಂಗ ದೌಡು ಪಾಕಿಸ್ತಾನಕ್ಕೋಗಿ ಲಗೂನು ಬಂದನಲ್ಲ ಯದಕ್ಕೋಗಿದ್ದಾ. ದ್ವೇಷ ಇದ್ರೋತಿದ್ನೇನವ. ಪಾಪ ಆ ದೇಶದ ಪ್ರಧಾನಿ ಮಗಳ ಲಗ್ನಕ್ಕೋಗಿ ಬಿರಿಯಾನಿ ತಿಂದ. ಇನ್ನ ಮುಂದೆ ಹಿಂಗೇ ಇರೂನು ಅಂತೇಳಿ ಬಂದ. ಅದಕ್ಕೂ ಮೊದ್ಲು ವಾಜಪೇಯಿ, ನಿಮ್ಮ ವಿಜಯ ಸಂಕೇಶ್ವರನಂಗೆ ಬಸ್ ಓಡಿಸಿದ್ದ. ಈ ಕಡಿ ಬಸ್ ಹೋತು, ಆಕಂಡಿದ ಪಾಕಿಸ್ತಾನದ ಸೈನಿಕರು ಒಳಬಂದ್ರು. ಐದು ನೂರು ಮಂದಿ ನಮ್ಮ ಸೈನಿಕರು ತೀರಿಕೊಂಡ್ರು. ಮಕ್ಕಳಾ, ವಿಜಯೋತ್ಸವ ಮಾಡ್ತೀರಿ, ಇತಿಹಾಸಗೊತ್ತೇನಲೆ ನಿನಗ.”
“ಗೊತ್ತೈತಿ.”
“ಗೊತ್ತಿದ್ರ ದೊರೆಸ್ವಾಮಿ ಹೋರಾಟವ ಡೋಂಗಿ ಅಂತಿರಲಿಲ್ಲ ನೀನು. ಕ್ವಿಟ್ ಇಂಡಿಯಾ ಚಳುವಳೀಲಿ ನೀ ಹುಟ್ಟಿದ್ದೇನಲೇ? ಆಗಲೇ ದೊರೆಸ್ವಾಮಿ ಜೈಲಿಗೋಗಿದ್ರು.”
“ಆ ಚಳುವಳಿ ಇಲ್ದಿದ್ರೆ ಅವುರು ಜೈಲಿಗೋತಿರಲಿಲ್ಲ.”
“ತೆಲಿಯಾಗೇನು ಮೆದುಳೈತೋ ಎಮ್ಮಿ ಸಗಣಿ ಐತೋ ನಿನಗ. ಅಲ್ಲಪ್ಪ ಜೈಲಿಗೋಗದಿದ್ರೆ ಚಳುವಳಿ ಮಾಡತಿದ್ರು ಗೊತ್ತೇನು.”
“ಅವರ ಚಳುವಳಿನೆ ಡೋಂಗಿ.”
“ಇನ್ಯಾರದು ಖರೆ ಐತಿ ಹೇಳು ನೋಡೊನು.”
“ವೀರ ಸಾವರ್ಕರ ಚಳುವಳಿ.”
“ಲೇ ಮಂಗ್ಯನ ಮಗನ. ಆ ಸಾವರಕರ ಯಾರು ಗೊತ್ತೇನಲೆ. ಅಂಡಮಾನ್ ಜೈಲಾಗೆ ಇರಕ್ಕಾಗುದಿಲ್ಲಂತ ಹೇಳಿ ಬ್ರಿಟಿಷರಿಗೆ ಮೂರು ಬಾರಿ ಕ್ಷಮಾಪಣೆ ಪತ್ರ ಬರದು, ಬಿಡುಗಡೆಯಾಗಿ ನಾಗಪುರಕ್ಕೆ ಬಂದು ಖೋಲಿ ಹಿಡುದು ಕುಂತವ. ಹಿಂದೂಮಹಾಸಭಾ, ವಿಶ್ವಹಿಂದೂ ಪರಿಷತ್ ಮಾಡಿ ಇವತ್ತು ನಿನ್ನಂತವರ ತೆಲಿಕೆಟ್ಟು ಮಸರಗಡಿಗಿಯಾಗಂಗೆ ಮಾಡಿ ಹೋದವ. ನೀ ಮದುಲು ಹಿಂಗರಲಿಲ್ಲ, ಭಾಳ ಸಂಭಾವಿತಿದ್ದಿ. ಯಾವಾಗ ನಾಗಪುರಕ್ಕೆ ಕೇಳಂಗೆ ಮಾತಾಡಕತ್ತಿದ್ಯೋ ಆಗ ಹಿಂಗಾದಿ. ಒಂದು ತಿಳಕೊ ಮಗನ.”
“ಏನೇಳ್ರಿ.”
“ನೀ ಏಟೇ ವದರಿದ್ರು ಮಂತ್ರಿಯಾಗೂದಿಲ್ಲಲೆ.”
“ಯದಕ್ರಿ.”
“ದೊರೆಸ್ವಾಮಿ ಶಾಪ ಕಣಲೆ. ಅದಕ್ಕೂ ಮೊದ್ಲು ಶೋಭಾ ಕರಂದ್ಲಾಜೆ ಶಾಪ ಕೊಟ್ಟಿದ್ಲು.”
“ಹೌದೇನ್ರೀ.”
“ಹೌದಲೇ, ನೀ ಎಡೂರಪ್ಪ ಶೋಭಾ ಕರಂದ್ಲಾಜೆ ತೆಕ್ಕಿಬಡಕೊಂಡಿದ್ರು ನಾನೇ ನೋಡಿದೆ ಅಂತ ಚಿಕ್ಕಮಗಳೂರಾಗ ಹೇಳಿ ಹೋದಿ. ಅದು, ಶೋಬನ ಕಿವಿತಲುಪ್ತು, ಅದು ಎಡೂರಪ್ಪನ ಕಿವಿ ಕೂಡ ಆಗಿತ್ತು.”
“ಯಾರೊ ಚಾಡಿ ಹೇಳ್ಯಾರ್ರಿ.”
“ಇಲ್ಲಿ ಕೇಳಿಸಿಕೊಂಡಿದ್ದ ಅಲ್ಲೇಳಿದ್ರ ಚಾಡಿ ಯಂಗಲೆ ಆತದೆ. ಸುಳ್ಳು ಹೇಳಿದ್ರೆ ಅದು ಚಾಡಿಯಾಕ್ಯತಿ- ತಿಳಿತೇನಲೇ. ಅಂತೂ ನೀ ಎಡೂರಪ್ಪನ ಸಂಪುಟ ಸೇರೋದು ಸುಳ್ಳಾತು.”
“ಮಂತ್ರಿನೆ ಆಗಬೇಕು ಅನ್ನದೇನೂ.”
“ಅಲ್ಲಲೆ ಖಬರಗೇಡಿ ಕೇಂದ್ರದಾಗ ಮಂತ್ರಿಯಾಗಿದ್ದವ ರಾಜ್ಯದಾಗೂ ಮಂತ್ರಿಯಾಗಬೇಕಲ್ಲೇನು.”
“ಹೌದ್ರಿ.”
“ಮತ್ತ ಆಗಿಲ್ಲಂದ್ರ ನೀ ಆಯೋಗ್ಯದಿ, ನಾಲಾಯ್ಕದಿ, ಒಟ್ಟ ಶಾಸಕ ಆಗಕ್ಕೂ ಯೋಗ್ಯಲ್ಲ ನೀನು ಅಂದಂಗಾತು.”
“ನನ್ನ ಯೋಗ್ಯತೆ ಬಗ್ಗೆ ಮಾತಾಡಬೇಡಿ.”
“ಇಲ್ಲಪ ನಿನ್ನ ಯೋಗ್ಯತೆ ಬಾಳ ಬೇಷೈತಿ, ಅಲ್ಲಲೆ ಮನ್ನಿ ಇಡೀ ಕರನಾಟಕನೆ ನಿನ್ನ ವಿರುದ್ಧ ಪ್ರತಿಭಟನೆ ಮಾಡ್ತು. ವಿಜಾಪುರದ ಗೌರವನೆ ಹೋತಲ್ಲಲೇ. ಅದಕೂ ಮೊದ್ಲು ಬಿಜಾಪುರಂದ್ರ ಮಂದಿ ಎಷ್ಟು ಬೆಲಿ ಕೊಡತಿದ್ರ ಗೊತ್ತೇನು.”
“ಈಗ ಇನ್ನ ಕೊಡ್ತಾರ. ನಾ ಎಂಪಿಯಾಗಿ, ಮಂತ್ರಿಯಾಗಿ, ಎಮ್ಮೆಲ್ಲೆಯಾಗಿ ಬಿಜಾಪುರಕ್ಕ ಹೆಸರು ತಂದೀನಿ.”
“ತಂದಿ ಬುಡು ಮಗನ. ಅಲ್ಲಲೆ, ಒಮ್ಮೆ ಅಂತಾ ಸಿರಿಗೆರೆ ಶಿವಾಚಾರ್ಯ ಸ್ವಾಮಿ ಬಂದಿದ್ರು. ಅವರ ಕಾರ್ಯಕ್ರಮದ ಮೆರವಣಿಗಿ ಏನಿತ್ತಲ್ಲ ಅದಕ ಮುಸ್ಲಿಂ ಮಹಿಳೆಯರು ಎಷ್ಟು ಮಂದಿ ಬಂದಿದ್ರು ಗುರುತೇನ, ಮೂರು ಸಾವುರ ಮಂದಿ ಬಂದಿದ್ರು. ಆಗ ಗುರುಗಳು ನಮ್ಮ ಬಿಜಾಪುರದ ಧರ್ಮ ಸಾಮರಸ್ಯ ಕೊಂಡಾಡಿ ಹೋದ್ರು. ಇಂಥಾ ಊರಿಗೆ ನೀ ಎಲ್ಲಿಂದ ಬಂದೇ ಹನುಮಂತ. ಮೊದಲು ದಕ್ಷಿಣ ಕನ್ನಡಕ್ಕೋಗು, ಅಲ್ಲಿ ನಿನ್ನಂಥವರು ಭಾಳಮಂದಿ ಅದಾರ.”
“ವಿಜಾಪುರ ಅನಾಥಮಾಡಿ ನಾ ಎಲ್ಯೂ ಹೋಗುದಿಲ್ಲ.”
“ಅನಾಥಲ್ಲಲೇ, ನೀ ಇದ್ರಾ ಮಶಾಣಾಕ್ಯತಿ, ಈಗಾಗಲೇ ನಿಮ್ಮ ಬ್ರದರ್ಸ್ ದೆಹಲಿನ ಮಶಾಣ ಮಾಡಕತ್ಯಾರ, ಅದಿರ್ಲಿ ಮೊದಲು ನಮ್ಮ ದೊರೆಸ್ವಾಮಿ ಸನೇಕ್ಕೋಗಿ ಕ್ಷಮಿಸಿರಿಯಪ್ಪಾ ಅನ್ನು.”
“ನಾ ಅನ್ನುದಿಲ್ರಿ.”
“ಹಾಳಾಗಿ ಹೋಗು.”
“ಅಂಗೇ ಮಾಡ್ತೇನ್ರೀ…”

ಥೂತ್ತೇರಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಲೋಪ ಆರೋಪ; ಕೋಲಾರ-ಮೈಸೂರಿನ ಅಧಿಕಾರಿಗಳಿಗೆ ನೋಟಿಸ್ ಜಾರಿ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಗೆ ಸಂಬಂಧಿಸಿದಂತೆ, ಕೋಲಾರ ಮತ್ತು ಮೈಸೂರಿನಲ್ಲಿ ನಡೆದ ಕಾರ್ಯವಿಧಾನದಲ್ಲಿ ನಿಯಮ ಉಲ್ಲಂಘನೆ ಆರೋಪ ಕೇಳಿಬಂದೆ. ಕೋಲಾರದಲ್ಲಿ, ಪರಿಷ್ಕರಣಾ ಕಾರ್ಯದ ಸಮಯದಲ್ಲಿ ಕರ್ತವ್ಯ...

ಸೂರತ್ ಧ್ವಂಸ ಕಾರ್ಯಾಚರಣೆ ಸಂಪೂರ್ಣ ‘ಕಾನೂನುಬಾಹಿರ’: 100 ನಿರಾಶ್ರಿತ ಕುಟುಂಬಗಳ ಪುನರ್ವಸತಿಗೆ ಗುಜರಾತ್ ಹೈಕೋರ್ಟ್ ಆದೇಶ

ಅಹಮದಾಬಾದ್: ಗುಜರಾತ್‌ನ ಸೂರತ್‌ನ ನಾಸಿರ್ ನಗರದಲ್ಲಿ ನಡೆದ ಮನೆಗಳ ಧ್ವಂಸ ಕಾರ್ಯಾಚರಣೆಯನ್ನು ತೀವ್ರವಾಗಿ ಖಂಡಿಸಿರುವ ಗುಜರಾತ್ ಹೈಕೋರ್ಟ್, ಇದನ್ನು "ಸಂಪೂರ್ಣ ಕಾನೂನುಬಾಹಿರ" ಎಂದು ಕರೆದಿದೆ. ಮೇ 30 ರಂದು ನಡೆದ ಈ "ಅನಧಿಕೃತ"...

ವಿದ್ಯುತ್ ಖಾಸಗೀಕರಣ ವಿರುದ್ದದ ಹೋರಾಟಕ್ಕೆ ಗೆಲುವು: ಅರ್ಜಿ ಹಿಂಪಡೆದ ಟಾಟಾ ಪವರ್ ಕಂಪನಿ

ರಾಜ್ಯದಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಖಾಸಗೀಕರಣದ ಹೆಜ್ಜೆ ಇಡಲು ಮುಂದಾಗಿದ್ದ ಟಾಟಾ ಪವರ್ ಕಂಪನಿಗೆ ಭಾರಿ ಹಿನ್ನಡೆಯಾಗಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (KERC) ಮುಂದೆ ರಾಜ್ಯದ 19 ಕಂದಾಯ ಜಿಲ್ಲೆಗಳಿಗೆ ಸಂಬಂಧಿಸಿದಂತೆ ತಾನು...

SIR: ಮತದಾರರ ಮನೆಗೆ ಹೋಗದೆ ಕಚೇರಿಯಲ್ಲೇ ಕುಳಿತು ಫಾರ್ಮ್ ವಿತರಣೆ ಆರೋಪ, BLO ಗಳಿಗೆ ಎಚ್ಚರಿಕೆ ನೀಡಿದ ಆಯೋಗ

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬಂದ ಬೆನ್ನಲ್ಲೇ, ರಾಜ್ಯ ಚುನಾವಣಾ ಆಯೋಗವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮತದಾರರ ಮನೆ-ಮನೆಗೆ ಭೇಟಿ...

ಅಳುವ ಕಂದಮ್ಮಗಳನ್ನು ವಾಷಿಂಗ್ ಮೆಷಿನ್‌ನಲ್ಲಿ ಕೂಡಿಹಾಕ್ತಿದ್ದ ಇಬ್ಬರು ಕೇರ್‌ಟೇಕರ್ ಅರೆಸ್ಟ್

ಸಿಲಿಕಾನ್ ಸಿಟಿಯ ಬ್ರೂಕ್‌ಫೀಲ್ಡ್‌ನಲ್ಲಿರುವ ಪ್ರಮುಖ ಐಟಿ ಸಂಸ್ಥೆ 'ಕ್ಯಾಪ್‌ಜೆಮಿನಿ' ಕ್ಯಾಂಪಸ್‌ನ ಡೇ-ಕೇರ್ ಸೆಂಟರ್‌ನಲ್ಲಿ ಪುಟ್ಟ ಕಂದಮ್ಮಗಳನ್ನು ಬಾತ್‌ರೂಮ್ ಹಾಗೂ ವಾಷಿಂಗ್ ಮೆಷಿನ್‌ಗಳಲ್ಲಿ ಕೂಡಿಹಾಕಿ ವಿಕೃತಿ ಮೆರೆದಿದ್ದ ಪ್ರಕರಣದಲ್ಲಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಪ್ರಕರಣದ...

“ನಾಗರಿಕರು ಸರ್ಕಾರದ ಗುಲಾಮರಲ್ಲ”: ಸಿಎಎ, ಜ್ಞಾನವಾಪಿ ವಿರೋಧಿ ಪ್ರತಿಭಟನೆ ಸಂಬಂಧ ಎಸ್‌ಡಿಪಿಐ ನಾಯಕನ ಗಡಿಪಾರು ಪ್ರಶ್ನಿಸಿದ ಬಾಂಬೆ ಹೈಕೋರ್ಟ್

“ದೇಶದ ನಾಗರಿಕರು ಸರ್ಕಾರದ ಗುಲಾಮರಲ್ಲ. ಕೇವಲ ಸರ್ಕಾರದ ನಿರ್ಧಾರಗಳನ್ನು ವಿರೋಧಿಸುವುದು ಅಥವಾ ಆಡಳಿತ ವ್ಯವಸ್ಥೆಯ ವಿರುದ್ಧ ಘೋಷಣೆಗಳನ್ನು ಕೂಗುವುದು ಒಬ್ಬ ನಾಗರಿಕನನ್ನು ಗಡಿಪಾರು ಮಾಡಲು ಕಾನೂನಾತ್ಮಕ ಕಾರಣವಾಗಲಾರದು,” ಎಂದು ಬಾಂಬೆ ಹೈಕೋರ್ಟ್‌ ಐತಿಹಾಸಿಕ...

ಗೌರಿಯಕ್ಕ, ಸುರೇಶ್ ಭಟ್ರ ಬಗ್ಗೆ ತಿಳಿಯಲು ಎಕ್ಸ್ ಆರೆಸ್ಸೆಸ್‌ನವರ ಪ್ರಮಾಣ ಪತ್ರ ಬೇಕಿಲ್ಲ

ಕರ್ನಾಟಕ ಕೋಮು ಸೌಹಾರ್ದ ವೇದಿಕೆಯಲ್ಲಿ ನಮ್ಮ ಒಡನಾಡಿಯಾಗಿದ್ದ ಎ‌ಐಸಿಸಿ ಕಾರ್ಯದರ್ಶಿಯೂ ಆಗಿರುವ ಪಿ.ವಿ.ಮೋಹನ್‌ರಿಗೆ ವಿಧಾನ ಪರಿಷತ್ ಸದಸ್ಯತ್ವ ಸಿಕ್ಕಿದ್ದು ಸಹಜವಾಗಿಯೇ ನಮಗೆ ಖುಷಿಯಾಗಿತ್ತು. ಈ ನಿಟ್ಟಿನಲ್ಲಿ ಮಂಗಳೂರಿನ ವುಡ್‌ಲ್ಯಾಂಡ್ಸ್ ಹೋಟೆಲಲ್ಲಿ ಕೋಮು ಸೌಹಾರ್ದ...

ಡ್ರಗ್ಸ್ ಮುಕ್ತ ಕರ್ನಾಟಕ ನಮ್ಮ ಗುರಿ: ‘ಆಪರೇಷನ್ RISE’ ಮತ್ತು ‘ಬೇಡ BRO’ ಅಭಿಯಾನಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಕರೆ

ಬೆಂಗಳೂರು: ಮಾದಕ ದ್ರವ್ಯ ಮುಕ್ತ ಕರ್ನಾಟಕವನ್ನು ನಿರ್ಮಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಮಾದಕ ವ್ಯಸನದ ವಿರುದ್ಧ ಯುವಜನತೆ ಮತ್ತು ಸಾರ್ವಜನಿಕರು ಕೈಜೋಡಿಸಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ...

ಬೆಂಗಳೂರಿನ 3 ಪ್ರಮುಖ ಮಾರ್ಗಗಳಲ್ಲಿ ಟೋಲ್ ದರ ಭಾರಿ ಹೆಚ್ಚಳ: ಇಂದಿನಿಂದಲೇ ಜಾರಿ 

ಬೆಂಗಳೂರು: ಸಿಲಿಕಾನ್ ಸಿಟಿಯ ವಾಹನ ಸವಾರರಿಗೆ ಜುಲೈ ಒಂದರಿಂದಲೇ ಅನ್ವಯವಾಗುವಂತೆ ಬೆಲೆ ಏರಿಕೆಯ ಭಾರಿ ಬಿಸಿ ತಟ್ಟಿದೆ. ಬೆಂಗಳೂರಿನ ಪ್ರಮುಖ ಸಂಪರ್ಕ ರಸ್ತೆಗಳಾದ ನೈಸ್ ರಸ್ತೆ (NICE Road), ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್...

ಕೊಪ್ಪಳದ ಬೋಚನಹಳ್ಳಿಯಲ್ಲಿ ದಲಿತರ ಮೇಲೆ ಹಲ್ಲೆ: ದೂರು-ಪ್ರತಿದೂರು; ಹೋರಾಟಕ್ಕೆ ಸಂಘಟನೆಗಳ ನಿರ್ಧಾರ

ಮೊಹರಂ ಮೆರವಣಿಗೆ ವೇಳೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ದಲಿತರ ಮನೆಗಳಿಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಕೊಪ್ಪಳ ತಾಲೂಕಿನ ಅಳವಂಡಿ ಬಳಿಯ ಬೋಚನಹಳ್ಳಿ ಗ್ರಾಮದಲ್ಲಿ ನಡೆದಿದೆ. ಜೂನ್ 25ರಂದು ಗ್ರಾಮದಲ್ಲಿ ಮೊಹರಂ ಮೆರವಣಿಗೆ...