Homeಅಂಕಣಗಳುದೊರೆಸ್ವಾಮಿ ಸನ್ಹೇಕ್ಕೋಗಿ ಕ್ಷಮೆ ಕೇಳಲೆ - ಯತ್ನಾಳ್‌ ಜೊತೆ ಯಾಹೂ ಮಾತುಕತೆ

ದೊರೆಸ್ವಾಮಿ ಸನ್ಹೇಕ್ಕೋಗಿ ಕ್ಷಮೆ ಕೇಳಲೆ – ಯತ್ನಾಳ್‌ ಜೊತೆ ಯಾಹೂ ಮಾತುಕತೆ

- Advertisement -
- Advertisement -

ಸ್ವಾತಂತ್ರ್ಯ ಹೋರಾಟದ ಸಂಕೇತದಂತಿರುವ ದೊರೆಸ್ವಾಮಿಯವರ ಬಗ್ಗೆ ಅತ್ಯಂತ ಪ್ರೀತ್ಯಾಧರಗಳಿಂದ ಮಾತನಾಡಿರುವ ಬಿಜಾಪುರದ ಬಸನಗೌಡ ಪಾಟೀಲ ಯತ್ನಾಳ್ ಎಂಬ ಧೀಮಂತ ನಾಯಕನನ್ನು ಮಾತನಾಡಿಸಿ, ದೊರೆಸ್ವಾಮಿಯವರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬೇಕು ಅನ್ನಿಸಿತಲ್ಲಾ. ಆ ಕೂಡಲೇ ಫೋನ್ ಮಾಡಲಾಗಿ ರಿಂಗಾಯ್ತು.

ರಿಂಗ್‍ಟೋನ್: “ನಮಸ್ತೇ ಸದಾವತ್ಸಲೇ ಮಾತೃಭೂಮಿ….” “ಹಲೋ ಯಾರ್ರಿ”
“ನಾನಲೆ ಎಫ್.ಜೆ.ತಳವಾರ.”
“ಯಾರಂತ ಗೊತ್ತಾಗಲಿಲ್ರಿ.”
“ನಿಮ ತಂದಿ ಗೆಳಯ ಕಣೋ, ಯತ್ನಾಳ.”
“ಏನಾಗಬೇಕಿತ್ರಿ.”
“ಏನಿಲ್ಲಪ. ನಿನಕಡಿಂದ ನನಗ ಆಗಬೇಕಾದ್ದೇನಿಲ್ಲ. ನಿನ್ನ ಆರೋಗ್ಯ ಹೆಂಗದಾ.”
“ಯದುಕ್ರಿ ಹಾಂಗ ಕೇಳಕತ್ತಿರಿ.”
“ಯದಕಪ್ಪ ಅಂದ್ರಾ, ಇಲ್ಲಿ ದರವೊಬ್ಬರೂ ನಿನ್ನ ತೆಲಿ ಶುದ್ದಿಲ್ಲಂತ ಮಾತಾಡಕತ್ಯಾರ. ಅದಕ ನನಿಗ ಗಾಬರಿಯಾತು. ಆರಡಿ ಎತ್ತರಕ ವೀರಸಿಂಧೂರ ಲಕ್ಷ್ಮಣನಂಗಿದ್ದ. ಮುಂಜಾಲೆದ್ದು ಮೂರು ಎಮ್ಮಿ ಹಾಲಿಂಡತಿದ್ದ ನನ್ನ ಗೆಳೆಯನ ಮಗ ಇವುಗೇನಾತಪ ಅಂತ ಗಾಬರಾತಲೇ ಮಗನ.”
“ಯಾರೊ ಸುಳ್ಳು ಹೇಳ್ಯಾರ್ರಿ, ನನ್ನ ತಲಿಗೇನಾಗಿಲ್ಲ.”
“ಅಂದ್ರ ಮಿದುಳಿಗೇನೋ ಆಗೇತಿ ಅದಕ 23 ಕೇಸು ತೆಲಿ ಮೇಲದಾವು.”
“ಇಲ್ರಿ ಅವು ಸುಳ್ಳು ಕೇಸು. ಪ್ರಕೃತಿ ನೆಟ್ಟಗೈತಿ. ಅರಾಮದಿನಿ.”
“ಇರವಲ್ಯಾಕ, ಆದ್ರ ಸ್ವಾತಂತ್ರ ಹೋರಾಟಗಾರ ಶತಾಯುಷಿ ದೊರೆಸ್ವಾಮಿಗಳನ್ನ ಯದುಕ್ಕಲೆ ಬೈಯಕತ್ತಿಯಂತೆ.”
“ಬೋದಿಲ್ರೀ. ಅವ ಡೋಂಗಿ ಸ್ವಾತಂತ್ರ ಹೋರಾಟಗಾರ ಅಂದೀನಿ ಅಷ್ಟ.”
“ಮಗ ಸತ್ತಲೆ ನೀನು. ದೊರೆಸ್ವಾಮಿ ಅಂದ್ರೇನು. ನೀ ಅಂದ್ರೇನು. ಅವರ ಚಪ್ಪಲಿ ಬಿಡೋ ಜಾಗದಾಗ ನಿಂದ್ರಕ್ಕೆ ಲಾಯಕ್ಕಿಲ್ಲದ ಮನುಶ್ಯದಿ ನೀನು. ಯದುಕಲೆ ಅಂಗಂದಿ.”
“ಆತ ಕಾಂಗ್ರೆಸ್ಸಿನ ಪರ ಮಾತಾಡತಾರ.”
“ಸಿದ್ದರಾಮಯ್ಯನ ಸರಕಾರಿದ್ದಾಗ ಅವರ ಸರಕಾರನೂ ಟೀಕಿ ಮಾಡಿದರಲ್ಲಾ. ಆಗ ನಿನ್ನ ಕಿವಿಗೇನು ಗೂಟಬಡಿಕೊಂಡಿದ್ದೇನು.”
“ಆ ಟೀಕಿನೂ ಡೋಂಗಿರಿ. ಅವುರು ಕಾಂಗ್ರೆಸಿಗರ ಪರ”
“ಅವರ ಪರ ಅಲ್ಲಲೇ, ಯಾರು ಜನಕ್ಕೆ ಒಳ್ಳೇದು ಮಾಡ್ತರೋ ಅವುರ ಪರ ಇರತರ. ತಲಿಕೆಟ್ಟ ಹಲಕಟ್ಟವುರ ಪರ ಇರೂದಿಲ್ಲವುರು ತಿಳಿತಿಲ್ಲಾ.”
“ಅವುರು ಪಾಕೀಸ್ತಾನದ ಪರ ಅವುರ.”
“ಪಾಕಿಸ್ತಾನದ ಪರ ಯದಕ್ಕಿರತರಲೇ. ನೀವು ಏನದೀರಲ್ಲಾ, ಅಂದ್ರ ಬಿಜೆಪಿಗಳು ನಿಮಗಿರುವಷ್ಟು ಪಾಕಿಸ್ತಾನದ ಪ್ರೀತಿ ನಮ ದೇಶದಾಗ ಯಾರಿಗೂ ಇಲ್ಲ ನೋಡು. ಅಲ್ಲಲೆ ದಿನ ಬೆಳಗಾತು ಅಂದ್ರ ಪಾಕಿಸ್ತಾನ ಪಾಕಿಸ್ತಾನ ಅನ್ನಕತ್ತೀರಲ್ಲಾ, ಆ ದೇಶ ಕಂಡ್ರ ಅದೇನು ಪ್ರೀತಿಲೆ ನಿಮಗೆ.”
“ಪ್ರೀತಿಯಲ್ಲ ದ್ವೇಷ.”
“ದ್ವೇಷ ಅಲ್ಲಲೆ ಪ್ರೀತಿ. ನಿಮ್ಮ ಪ್ರಧಾನಿ ಏನದಾನಲ್ಲ ಮೋದಿ, ಆತ ಚೊಣಬಿ ಹೊಕ್ಕಂಗ ದೌಡು ಪಾಕಿಸ್ತಾನಕ್ಕೋಗಿ ಲಗೂನು ಬಂದನಲ್ಲ ಯದಕ್ಕೋಗಿದ್ದಾ. ದ್ವೇಷ ಇದ್ರೋತಿದ್ನೇನವ. ಪಾಪ ಆ ದೇಶದ ಪ್ರಧಾನಿ ಮಗಳ ಲಗ್ನಕ್ಕೋಗಿ ಬಿರಿಯಾನಿ ತಿಂದ. ಇನ್ನ ಮುಂದೆ ಹಿಂಗೇ ಇರೂನು ಅಂತೇಳಿ ಬಂದ. ಅದಕ್ಕೂ ಮೊದ್ಲು ವಾಜಪೇಯಿ, ನಿಮ್ಮ ವಿಜಯ ಸಂಕೇಶ್ವರನಂಗೆ ಬಸ್ ಓಡಿಸಿದ್ದ. ಈ ಕಡಿ ಬಸ್ ಹೋತು, ಆಕಂಡಿದ ಪಾಕಿಸ್ತಾನದ ಸೈನಿಕರು ಒಳಬಂದ್ರು. ಐದು ನೂರು ಮಂದಿ ನಮ್ಮ ಸೈನಿಕರು ತೀರಿಕೊಂಡ್ರು. ಮಕ್ಕಳಾ, ವಿಜಯೋತ್ಸವ ಮಾಡ್ತೀರಿ, ಇತಿಹಾಸಗೊತ್ತೇನಲೆ ನಿನಗ.”
“ಗೊತ್ತೈತಿ.”
“ಗೊತ್ತಿದ್ರ ದೊರೆಸ್ವಾಮಿ ಹೋರಾಟವ ಡೋಂಗಿ ಅಂತಿರಲಿಲ್ಲ ನೀನು. ಕ್ವಿಟ್ ಇಂಡಿಯಾ ಚಳುವಳೀಲಿ ನೀ ಹುಟ್ಟಿದ್ದೇನಲೇ? ಆಗಲೇ ದೊರೆಸ್ವಾಮಿ ಜೈಲಿಗೋಗಿದ್ರು.”
“ಆ ಚಳುವಳಿ ಇಲ್ದಿದ್ರೆ ಅವುರು ಜೈಲಿಗೋತಿರಲಿಲ್ಲ.”
“ತೆಲಿಯಾಗೇನು ಮೆದುಳೈತೋ ಎಮ್ಮಿ ಸಗಣಿ ಐತೋ ನಿನಗ. ಅಲ್ಲಪ್ಪ ಜೈಲಿಗೋಗದಿದ್ರೆ ಚಳುವಳಿ ಮಾಡತಿದ್ರು ಗೊತ್ತೇನು.”
“ಅವರ ಚಳುವಳಿನೆ ಡೋಂಗಿ.”
“ಇನ್ಯಾರದು ಖರೆ ಐತಿ ಹೇಳು ನೋಡೊನು.”
“ವೀರ ಸಾವರ್ಕರ ಚಳುವಳಿ.”
“ಲೇ ಮಂಗ್ಯನ ಮಗನ. ಆ ಸಾವರಕರ ಯಾರು ಗೊತ್ತೇನಲೆ. ಅಂಡಮಾನ್ ಜೈಲಾಗೆ ಇರಕ್ಕಾಗುದಿಲ್ಲಂತ ಹೇಳಿ ಬ್ರಿಟಿಷರಿಗೆ ಮೂರು ಬಾರಿ ಕ್ಷಮಾಪಣೆ ಪತ್ರ ಬರದು, ಬಿಡುಗಡೆಯಾಗಿ ನಾಗಪುರಕ್ಕೆ ಬಂದು ಖೋಲಿ ಹಿಡುದು ಕುಂತವ. ಹಿಂದೂಮಹಾಸಭಾ, ವಿಶ್ವಹಿಂದೂ ಪರಿಷತ್ ಮಾಡಿ ಇವತ್ತು ನಿನ್ನಂತವರ ತೆಲಿಕೆಟ್ಟು ಮಸರಗಡಿಗಿಯಾಗಂಗೆ ಮಾಡಿ ಹೋದವ. ನೀ ಮದುಲು ಹಿಂಗರಲಿಲ್ಲ, ಭಾಳ ಸಂಭಾವಿತಿದ್ದಿ. ಯಾವಾಗ ನಾಗಪುರಕ್ಕೆ ಕೇಳಂಗೆ ಮಾತಾಡಕತ್ತಿದ್ಯೋ ಆಗ ಹಿಂಗಾದಿ. ಒಂದು ತಿಳಕೊ ಮಗನ.”
“ಏನೇಳ್ರಿ.”
“ನೀ ಏಟೇ ವದರಿದ್ರು ಮಂತ್ರಿಯಾಗೂದಿಲ್ಲಲೆ.”
“ಯದಕ್ರಿ.”
“ದೊರೆಸ್ವಾಮಿ ಶಾಪ ಕಣಲೆ. ಅದಕ್ಕೂ ಮೊದ್ಲು ಶೋಭಾ ಕರಂದ್ಲಾಜೆ ಶಾಪ ಕೊಟ್ಟಿದ್ಲು.”
“ಹೌದೇನ್ರೀ.”
“ಹೌದಲೇ, ನೀ ಎಡೂರಪ್ಪ ಶೋಭಾ ಕರಂದ್ಲಾಜೆ ತೆಕ್ಕಿಬಡಕೊಂಡಿದ್ರು ನಾನೇ ನೋಡಿದೆ ಅಂತ ಚಿಕ್ಕಮಗಳೂರಾಗ ಹೇಳಿ ಹೋದಿ. ಅದು, ಶೋಬನ ಕಿವಿತಲುಪ್ತು, ಅದು ಎಡೂರಪ್ಪನ ಕಿವಿ ಕೂಡ ಆಗಿತ್ತು.”
“ಯಾರೊ ಚಾಡಿ ಹೇಳ್ಯಾರ್ರಿ.”
“ಇಲ್ಲಿ ಕೇಳಿಸಿಕೊಂಡಿದ್ದ ಅಲ್ಲೇಳಿದ್ರ ಚಾಡಿ ಯಂಗಲೆ ಆತದೆ. ಸುಳ್ಳು ಹೇಳಿದ್ರೆ ಅದು ಚಾಡಿಯಾಕ್ಯತಿ- ತಿಳಿತೇನಲೇ. ಅಂತೂ ನೀ ಎಡೂರಪ್ಪನ ಸಂಪುಟ ಸೇರೋದು ಸುಳ್ಳಾತು.”
“ಮಂತ್ರಿನೆ ಆಗಬೇಕು ಅನ್ನದೇನೂ.”
“ಅಲ್ಲಲೆ ಖಬರಗೇಡಿ ಕೇಂದ್ರದಾಗ ಮಂತ್ರಿಯಾಗಿದ್ದವ ರಾಜ್ಯದಾಗೂ ಮಂತ್ರಿಯಾಗಬೇಕಲ್ಲೇನು.”
“ಹೌದ್ರಿ.”
“ಮತ್ತ ಆಗಿಲ್ಲಂದ್ರ ನೀ ಆಯೋಗ್ಯದಿ, ನಾಲಾಯ್ಕದಿ, ಒಟ್ಟ ಶಾಸಕ ಆಗಕ್ಕೂ ಯೋಗ್ಯಲ್ಲ ನೀನು ಅಂದಂಗಾತು.”
“ನನ್ನ ಯೋಗ್ಯತೆ ಬಗ್ಗೆ ಮಾತಾಡಬೇಡಿ.”
“ಇಲ್ಲಪ ನಿನ್ನ ಯೋಗ್ಯತೆ ಬಾಳ ಬೇಷೈತಿ, ಅಲ್ಲಲೆ ಮನ್ನಿ ಇಡೀ ಕರನಾಟಕನೆ ನಿನ್ನ ವಿರುದ್ಧ ಪ್ರತಿಭಟನೆ ಮಾಡ್ತು. ವಿಜಾಪುರದ ಗೌರವನೆ ಹೋತಲ್ಲಲೇ. ಅದಕೂ ಮೊದ್ಲು ಬಿಜಾಪುರಂದ್ರ ಮಂದಿ ಎಷ್ಟು ಬೆಲಿ ಕೊಡತಿದ್ರ ಗೊತ್ತೇನು.”
“ಈಗ ಇನ್ನ ಕೊಡ್ತಾರ. ನಾ ಎಂಪಿಯಾಗಿ, ಮಂತ್ರಿಯಾಗಿ, ಎಮ್ಮೆಲ್ಲೆಯಾಗಿ ಬಿಜಾಪುರಕ್ಕ ಹೆಸರು ತಂದೀನಿ.”
“ತಂದಿ ಬುಡು ಮಗನ. ಅಲ್ಲಲೆ, ಒಮ್ಮೆ ಅಂತಾ ಸಿರಿಗೆರೆ ಶಿವಾಚಾರ್ಯ ಸ್ವಾಮಿ ಬಂದಿದ್ರು. ಅವರ ಕಾರ್ಯಕ್ರಮದ ಮೆರವಣಿಗಿ ಏನಿತ್ತಲ್ಲ ಅದಕ ಮುಸ್ಲಿಂ ಮಹಿಳೆಯರು ಎಷ್ಟು ಮಂದಿ ಬಂದಿದ್ರು ಗುರುತೇನ, ಮೂರು ಸಾವುರ ಮಂದಿ ಬಂದಿದ್ರು. ಆಗ ಗುರುಗಳು ನಮ್ಮ ಬಿಜಾಪುರದ ಧರ್ಮ ಸಾಮರಸ್ಯ ಕೊಂಡಾಡಿ ಹೋದ್ರು. ಇಂಥಾ ಊರಿಗೆ ನೀ ಎಲ್ಲಿಂದ ಬಂದೇ ಹನುಮಂತ. ಮೊದಲು ದಕ್ಷಿಣ ಕನ್ನಡಕ್ಕೋಗು, ಅಲ್ಲಿ ನಿನ್ನಂಥವರು ಭಾಳಮಂದಿ ಅದಾರ.”
“ವಿಜಾಪುರ ಅನಾಥಮಾಡಿ ನಾ ಎಲ್ಯೂ ಹೋಗುದಿಲ್ಲ.”
“ಅನಾಥಲ್ಲಲೇ, ನೀ ಇದ್ರಾ ಮಶಾಣಾಕ್ಯತಿ, ಈಗಾಗಲೇ ನಿಮ್ಮ ಬ್ರದರ್ಸ್ ದೆಹಲಿನ ಮಶಾಣ ಮಾಡಕತ್ಯಾರ, ಅದಿರ್ಲಿ ಮೊದಲು ನಮ್ಮ ದೊರೆಸ್ವಾಮಿ ಸನೇಕ್ಕೋಗಿ ಕ್ಷಮಿಸಿರಿಯಪ್ಪಾ ಅನ್ನು.”
“ನಾ ಅನ್ನುದಿಲ್ರಿ.”
“ಹಾಳಾಗಿ ಹೋಗು.”
“ಅಂಗೇ ಮಾಡ್ತೇನ್ರೀ…”

ಥೂತ್ತೇರಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಸವಣ್ಣನ ಕಲ್ಯಾಣದಲ್ಲಿ SIR ವಿರೋಧಿ ಜಾಥಾ.

ಬಸವಕಲ್ಯಾಣSIR ವಿರೋಧಿಸಿ ಕರ್ನಾಟಕದಾದ್ಯಂತ ನಡೆಯುತ್ತಿರುವ ಜಾಗೃತಿ ಜಾತಾವು ಬಸವಕಲ್ಯಾಣಕ್ಕೆ ತಲುಪಿತು. ಬಸವಕಲ್ಯಾಣದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಜನರು ಜನವಿರೋಧಿ SIR ನ್ನೂ ವಿರೋಧಿಸಿ ನಿರ್ಣಯ ಕೈಗೊಂಡರು. ಸಭೆಯಲ್ಲಿ ಮಾತನಾಡಿದ ಜಾಥಾದ ಮುಖ್ಯಸ್ಥ...

ಸಂಸದ ಬಿ.ವೈ ರಾಘವೇಂದ್ರ ನಡೆಸುತ್ತಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ SIR ವಿರೋಧಿ ಜನಜಾಗೃತಿ ಜಾಥಾ ಕರಪತ್ರ ಹಂಚಿದ ಕಾರ್ಯಕರ್ತರು

ಶಿವಮೊಗ್ಗ : ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲೆಯ ಸಾಗರ ತಾಲ್ಲೂಕಿನ ರೈಲು ನಿಲ್ದಾಣದಲ್ಲಿ ಕುಂದುಕೊರತೆಗಳ ಸಭೆ ನಡೆಸುತ್ತಿದ್ದ ವೇಳೆ ಎಸ್‌ಐಆರ್ ವಿರುದ್ಧ ’ಎದ್ದೇಳು ಕರ್ನಾಟಕ’ ಮತ್ತು ’ಎಸ್‌ಐಆರ್ ವಿರೋಧಿ ಒಕ್ಕೂಟ’ದ ಮುಖಂಡರು...

ಬೀದರ್‌ ನಿಂದ ಶುರವಾದ SIR ವಿರೋಧಿ ಜನಜಾಗೃತಿ ಜಾಥಾ

SIR ವಿರೋಧಿ ಕರ್ನಾಟಕ ಹಾಗೂ ಎದ್ದೇಳು ಕರ್ನಾಟಕವು ಕರ್ನಾಟಕದಲ್ಲಿ SIR ಜಾರಿಯನ್ನು ವಿರೋಧಿಸಿ ರಾಜ್ಯದ 5 ಸ್ಥಳಗಳಿಂದ ಜನಜಾಗೃತಿ ಜಾಥಾ ಆಯೋಜಿಸಿದೆ. ಇಂದು ಬೀದರ್‌ ನ ಅಂಬೇಡ್ಕರ್‌ ಸರ್ಕಲ್‌ ನಿಂದ ಆರಂಭವಾದ ಜಾಥಾವು...

ಒಬ್ಬರೇ ಒಬ್ಬ ಅರ್ಹ ಮತದಾರರ ಹೊರಗಿಡುವುದನ್ನು ಒಪ್ಪುವುದಿಲ್ಲ : ಯೂಸುಫ್ ಕನ್ನಿ

ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲಿ, ಆದರೆ, ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬೇಡವೇ ಬೇಡ. ಎಸ್‌ಐಆರ್‌ ಮೂಲಕ ಒಬ್ಬರೇ ಒಬ್ಬರು ಅರ್ಹ ಮತದಾರರನ್ನೂ ಪಟ್ಟಿಯಿಂದ ಹೊರಗಿಡುವುದನ್ನು ನಾವು ಒಪ್ಪುವುದಿಲ್ಲ ಎಂದು ಜಮಾಅತೆ ಇಸ್ಲಾಮಿ...

ಪ್ರಜಾಪ್ರಭುತ್ವದ ರಕ್ಷಣೆಗೆ ಎಸ್‌ಐಆರ್ (SIR) ವಿರುದ್ಧ ಜನಜಾಗೃತಿ ಜಾಥಾಕ್ಕೆ ಶಿವಮೊಗ್ಗದಲ್ಲಿ ಚಾಲನೆ

ಕೇಂದ್ರ ಸರ್ಕಾರದ ಎಸ್‌ಐಆರ್ (SIR) ನೀತಿಯ ವಿರುದ್ಧ ರಾಜ್ಯಾದ್ಯಂತ ಜನವಿರೋಧಿ ಅಲೆ ಎದ್ದಿದೆ. "ಸಂತ-ಶರಣರ ಈ ನಾಡಿನಲ್ಲಿ ಯಾವುದೇ ರೀತಿಯ ದುಷ್ಟ ಆಟ, ಮೋಸ, ವಂಚನೆಗೆ ಅವಕಾಶವಿಲ್ಲ" ಎಂಬ ದೃಢ ಸಂಕಲ್ಪದೊಂದಿಗೆ 'ಎಸ್‌ಐಆರ್...

ಜೂನ್ 13 ರಿಂದ ಕರ್ನಾಟಕದಲ್ಲಿ ‘SIR ವಿರೋಧಿ’ ಜನಜಾಗೃತಿ ಜಾಥ

ರಾಜ್ಯ ಚುನಾವಣಾ ಆಯೋಗವು ಎಸ್‌ಐಆರ್ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ನಾಗರಿಕರ ಆಕ್ಷೇಪಣೆಗಳಿಗೆ ಸ್ಪಂದಿಸದಿರುವ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಾಗೂ ‘ಎದ್ದೇಳು ಕರ್ನಾಟಕ’ ಸಂಘಟನೆಯ ವತಿಯಿಂದ ಜೂನ್ 13 ರಿಂದ...

‘ಕಾನೂನು ಪ್ರಕ್ರಿಯೆಯದುರುಪಯೋಗ’: ನ್ಯೂಸ್‌ಕ್ಲಿಕ್ ವಿರುದ್ಧದ ದೆಹಲಿ ಪೊಲೀಸ್, ಇಡಿ ಪ್ರಕರಣಗಳನ್ನು ರದ್ದುಗೊಳಿಸಿದ ಹೈಕೋರ್ಟ್

ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನಿಯಮಗಳ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ನ್ಯೂಸ್‌ಕ್ಲಿಕ್ ಸುದ್ದಿ ಸಂಸ್ಥೆ ಮತ್ತು ಅದರ ಮುಖ್ಯ ಸಂಪಾದಕ ಪ್ರಬೀರ್ ಪುರಕಾಯಸ್ಥ ವಿರುದ್ಧ ದೆಹಲಿ ಪೊಲೀಸರು ಹಾಗೂ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ್ದ ಪ್ರಕರಣಗಳನ್ನು ದೆಹಲಿ...

ಕಾಂಗ್ರೆಸ್ ಜೊತೆ ವಿಲೀನ? ಅದೆಲ್ಲ ಬರೀ ಸುಳ್ಳು ಎಂದ ಟಿಎಂಸಿ

ಕಾಂಗ್ರೆಸ್ ಪಕ್ಷದೊಂದಿಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿಲೀನವಾಗಬಹುದು ಎಂಬ ವರದಿಗಳನ್ನು ಟಿಎಂಸಿ ಉನ್ನತ ಮೂಲಗಳು ಬುಧವಾರ (ಇಂದು) ಸಂಪೂರ್ಣವಾಗಿ ತಳ್ಳಿಹಾಕಿವೆ. "ನಮ್ಮ ಪಕ್ಷಕ್ಕೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಮತ್ತು ವಿಲೀನಕ್ಕೆ...

ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕಾರ : ಬಿಜೆಪಿಯ ಸೀಟ್ ಚೋರಿ?

ರಾಜ್ಯಸಭಾ ಚುನಾವಣೆಗೆ ಮಧ್ಯಪ್ರದೇಶದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿರುವುದು ದೇಶದಲ್ಲಿ ದೊಡ್ಡ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಕಾಂಗ್ರೆಸ್ ಈ ವಿಚಾರವನ್ನು ಬಹಳ ಗಂಭೀರವಾಗಿ ಪರಿಗಣಿಸಿ ಬುಧವಾರ (ಜೂ. 10)...

ಒಳಮೀಸಲಾತಿ ನಾಡು ಕಂಡ ಸುದೀರ್ಘ ಹೋರಾಟದ ಕಥೆ

ಇದು ಬೆವರು ನಿಟ್ಟುಸಿರುಗಳ ಚಳವಳಿ. ತಮ್ಮ ಅನ್ನದ ಬಟ್ಟಲಿಗಾಗಿ ದಶಕಗಳ ಕಾಲ ಹಸಿವು, ಬಾಯಾರಿಕೆ, ನಿದ್ರೆ ಎಲ್ಲವನ್ನೂ ಬಿಟ್ಟು ನಡೆಸಿದ ಅಭೂತಪೂರ್ವ ಚಳವಳಿ. ರಾಜಕೀಯ ಚಕ್ರವ್ಯೂಹಗಳನ್ನು ಬೇಧಿಸಿ, ಸಾಂವಿಧಾನಿಕ ಹಕ್ಕನ್ನು ತಮ್ಮದಾಗಿಸಿಕೊಂಡ ಚಳವಳಿ....