Homeಮುಖಪುಟಯೆಸ್ ಬ್ಯಾಂಕ್ ಪತನಕ್ಕೆ ಮುನ್ನುಡಿ ಬರೆದ ಮೂವರು ಮಾಜಿ ಬಿಲಿಯಾಧಿಪತಿಗಳು: ಅಂಬಾನಿ, ವಾಧ್ವಾನ್ ಮತ್ತು ಚಂದ್ರ!

ಯೆಸ್ ಬ್ಯಾಂಕ್ ಪತನಕ್ಕೆ ಮುನ್ನುಡಿ ಬರೆದ ಮೂವರು ಮಾಜಿ ಬಿಲಿಯಾಧಿಪತಿಗಳು: ಅಂಬಾನಿ, ವಾಧ್ವಾನ್ ಮತ್ತು ಚಂದ್ರ!

ದಿವಾಳಿ ಅಂಚಿನಲ್ಲಿರುವ ಮೂವರು ಮಿಲಿಯಾಧಿಪತಿಗಳ ಜೊತೆ ವ್ಯವಹರಿಸುತ್ತಿದ್ದ ಯೆಸ್ ಬ್ಯಾಂಕ್ ಲೆಕ್ಕಪತ್ರಗಳ ಸೂಕ್ಷ್ಮ ಅಪರಾಧಿಕ ಪರಿಶೀಲನೆ ನಡೆಸಿದಲ್ಲಿ ಇನ್ನಷ್ಟು ಅಸ್ತಿಪಂಜರಗಳು ಹೊರಬರಲಿವೆ.

- Advertisement -
- Advertisement -

ಸಂಗ್ರಹಾನುವಾದ: ನಿಖಿಲ್ ಕೋಲ್ಪೆ

ಮುಂಬಯಿಯ ಗಜಿಬಿಜಿಯ ಲೋವರ್ ಪರೇಲ್‌ನಲ್ಲಿರುವ ಯಾವುದೇ ದೇಖಾದೇಕಿ ಇಲ್ಲದ ಮೂರು ಗಗನಚುಂಬಿ ಕಟ್ಟಡಗಳನ್ನು ಹೊಂದಿರುವ ಇಂಡಿಯಾ ಬುಲ್ಸ್ ಫೈನಾನ್ಸ್ ಸೆಂಟರ್ ಎಂಬ ವಾಣಿಜ್ಯ ಸಂಕೀರ್ಣದಲ್ಲಿರುವ ಯೆಸ್ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಈಗ ಭಯಹುಟ್ಟಿಸುವ ಮೌನವಿದೆ. ಕೆಟ್ಟ ಸಾಲಗಳು ಮತ್ತು ಅಭದ್ರ ಆಸ್ತಿಗಳ ಕಾರಣದಿಂದ ಕಳೆದ ವಾರ ಪ್ರಪಾತದ ಅಂಚಿನಲ್ಲಿದ್ದ ದೇಶದ ನಾಲ್ಕನೇ ಅತಿದೊಡ್ಡ ಖಾಸಗಿ ಬ್ಯಾಂಕಿನಲ್ಲೀಗ ಬದುಕಬಹುದೋ ಏನೋ ಎಂಬ ಆಶಾವಾದ ಮೂಡಿದೆ.

ಕಳೆದ ವಾರ ಭಾರತೀಯ ರಿಸರ್ವ್ ಬ್ಯಾಂಕ್ ಈ ಬ್ಯಾಂಕಿನ ಮೇಲೆ ನಿರ್ಬಂಧ ಹೇರಿ ಹಣ ಹಿಂತೆಗೆತಕ್ಕೆ ಮಿತಿಯನ್ನು ವಿಧಿಸಿದಾಗ ಹಣ ಕಳೆದುಕೊಳ್ಳುವ ಭೀತಿಗೆ ಒಳಗಾದ ಸಾವಿರಾರು ಜನರು ಈ ಬ್ಯಾಂಕಿನ ವಿಶಾಲವಾದ ಲಾಬಿಯಲ್ಲಿ ಜಮಾಯಿಸಿದ್ದರು. ಈ ಕಟ್ಟಡಗಳಲ್ಲಿರುವ ಹಲವಾರು ಮಧ್ಯಮ ಪ್ರಮಾಣದ ಕಂಪನಿಗಳು ಈ ಬ್ಯಾಂಕಿನ ಕಾರ್ಪೊರೇಟ್ ಗ್ರಾಹಕರಾಗಿದ್ದು, ತಮ್ಮ ನೌಕರರ ಸಂಬಳದ ಖಾತೆಗಳನ್ನು ಇಲ್ಲಿಯೇ ಹೊಂದಿರುವುದು ಬಹುದೊಡ್ಡ ಗದ್ದಲಕ್ಕೆ ಕಾರಣವಾಗಿತ್ತು.

ಇದೀಗ ನಿಮ್ಮ ಹಣ ಸುರಕ್ಷಿತ ಎಂದು ಸರಕಾರ ಭರವಸೆ ನೀಡಿರುವುದರಿಂದ ಗ್ರಾಹಕರು ಸ್ವಲ್ಪ ಮಟ್ಟಿನ ನಿಟ್ಟುಸಿರು ಬಿಟ್ಟಿದ್ದಾರೆ. 16 ವರ್ಷಗಳ ಹಿಂದೆ ಈ ಬ್ಯಾಂಕನ್ನು ಸ್ಥಾಪಿಸಿದ್ದ ರಾಣಾ ಕಪೂರ್ ಇದೀಗ ಭಾರತೀಯ ಬ್ಯಾಂಕಿಂಗ್ ಕ್ಷೇತ್ರದ ಹೊಸ ಖಳನಾಯಕ ಎನಿಸಿದ್ದಾರೆ. ಅವರೀಗ ಮುಂಬಯಿಯ ಜಾರಿ ನಿರ್ದೇಶನಾಲಯದ ವಶದಲ್ಲಿದ್ದು, ಕ್ರಿಮಿನಲ್ ಸಂಚು, ವಂಚನೆ ಮತ್ತು ಭ್ರಷ್ಟಾಚಾರದ ಆರೋಪದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.

ಇದೇ ಕಪೂರ್ ಈಗ ಬ್ಯಾಂಕಿನ ಪತನಕ್ಕಾಗಿ ಆರ್ಥಿಕ ಹಿಂಜರಿತ ಮತ್ತು ನೋಟು ಅಮಾನ್ಯೀಕರಣವನ್ನು ದೂರಬಹುದು. ಆದರೆ, ಇವರೇ ಅದನ್ನು ಸರಕಾರದ ಮಾಸ್ಟರ್ ಸ್ಟ್ರೋಕ್ ಎಂದು ಕೊಂಡಾಡಿದ್ದರು. ಬ್ಯಾಂಕಿನ ರಕ್ತಸಿಕ್ತ ಲೆಕ್ಕಪತ್ರದ ವಿವರಗಳು ಏನನ್ನು ತೋರಿಸುತ್ತವೆ ಎಂದರೆ ಹಿಂದೆ ಬಿಲಿಯಾಧಿಪತಿಗಳಾಗಿದ್ದು ನಂತರ ಆಸ್ತಿಪಾಸ್ತಿಗಳ ವಿನಾಶಕರಾಗಿ ಪರಿಣಮಿಸಿದ ಮೂವರು ಮಹಾನುಭಾವರು ಈ ಬ್ಯಾಂಕಿನ ಪತನಕ್ಕೆ ಮುನ್ನುಡಿ ಬರೆದಿದ್ದಾರೆ.

ಅವರೇ ಅನಿಲ್ ಅಂಬಾನಿ (ರಿಲಯನ್ಸ್ ಗ್ರೂಪ್), ಕಪಿಲ್ ವಾಧ್ವಾನ್ (ಡಿಎಚ್‌ಎಫ್‌ಎಲ್) ಮತ್ತು ಸುಭಾಷ್ ಚಂದ್ರ (ಎಸ್ಸೆಲ್ ಗ್ರೂಪ್). ಇವರು ಅಪಾಯದೊಂದಿಗೆ ಆಟವಾಡುವ ಚಾಳಿಯ ಶೋಕಿಲಾಲ ಕಪೂರ್ ಜೊತೆ ನಡೆಸಿದ ಗುಪ್ತ ವ್ಯವಹಾರಗಳ ಈಗ ತನಿಖಾ ಸಂಸ್ಥೆಗಳ ಭೂತಕನ್ನಡಿಯ ಅಡಿಯಲ್ಲಿವೆ. ಇವರು ಬ್ಯಾಂಕಿನ ಒಟ್ಟು 50,000 ಕೋಟಿ ರೂ.ಗಳ ಒತ್ತಡದ ಆಸ್ತಿಯಲ್ಲಿ 20,000 ಕೋಟಿ ರೂ.ಗಳ ಆಸ್ತಿಯನ್ನು ಪಡೆಯಲು ಈ ಮೂವರು ಕಪೂರ್‌ಗೆ ನೆರವಾದರು ಎಂದು ಬ್ಯಾಂಕಿನ ಕಾರ್ಪೊರೇಟ್ ಸಾಲಗಳ ಲೆಕ್ಕಪುಸ್ತಕವು ತೋರಿಸುತ್ತದೆ. ಇದಕ್ಕಾಗಿ ಕಪೂರ್ ವಂಚನೆಯ ಪ್ರತಿಯೊಂದು ಕೊಳಕು ತಂತ್ರಗಳನ್ನು ಬಳಸಿದ್ದಾರೆ- ರೌಂಡ್ ಟ್ರಿಪ್ಪಿಂಗ್ ಅಂದರೆ ಮಾಲಕರೇ ಅಥವಾ ಸಹವರ್ತಿಗಳು ಹೊಂದಿರುವ ಶೆಲ್ ಕಂಪನಿಗಳಿಗೆ ಅಂದರೆ ನಕಲಿ ಕಂಪನಿಗಳಿಗೆ ಸಾಲ ನೀಡುವುದು, ಕಪ್ಪು ಹಣ ಬಿಳಿ ಮಾಡುವುದು, ಒಳಗಿನ ಗುಟ್ಟು ಬೇರೆಯವರಿಗೆ ನೀಡಿ ಲಾಭ ಮಾಡುವುದು (ಇನ್‌ಸೈಡರ್ ಟ್ರೇಡಿಂಗ್), ಭ್ರಷ್ಟಾಚಾರ, ಸಾಂಸ್ಥಿಕ ದುರಾಡಳಿತ ಇತ್ಯಾದಿ.

ಈ ಬೇಜವಾಬ್ದಾರಿ ಬ್ಯಾಂಕ್ ಮಾಲಕ ಅಪಾಯಕಾರಿ ಅಟಗಳನ್ನು ವಿಸ್ತರಿಸಿ, ತಾನೊಬ್ಬ ಬಹುದೊಡ್ಡ ಸಾಲ ನೀಡಿಕೆದಾರ ಎಂದು ಎಂದು ಸಾಬೀತುಪಡಿಸುತ್ತಿರುವಾಗ ತಾನೊಂದು ಚತುರ ನಿಯಂತ್ರಕ ಸಂಸ್ಥೆ ಎಂಬ ರಿಸರ್ವ್ ಬ್ಯಾಂಕಿನ ಪ್ರತಿಷ್ಟೆ ನಡುಗಲು ಆ‌ರಂಭಿಸಿತು.

ಪ್ರಸ್ತುತ ನಡೆಯುತ್ತಿರುವ ತನಿಖೆಯು ಬ್ಯಾಂಕಿನ ಬಾಕಿ ಸಾಲಗಳು 2013-14ರಲ್ಲಿ 55,000 ಕೋಟಿ ರೂ.ಗಳಿದ್ದದ್ದು, 2018-19ರಲ್ಲಿ ಬಹುಪಟ್ಟು ಹೆಚ್ಚಳವಾಗಿ 2.4 ಕೋಟಿ ರೂ.ಗಳಿಗೆ ತಲಪಿದವು ಎಂಬುದನ್ನು ತೋರಿಸುತ್ತದೆ. ಇದು ಆರ್ಥಿಕ ಹಿಂಜರಿಕೆಯ ಹೊರತಾಗಿಯೂ ನಡೆದಿದೆ. ಬ್ಯಾಂಕಿನ ಬಾಕಿ ಸಾಲವು 2016-17ರಲ್ಲಿದ್ದ 1.3 ಲಕ್ಷ ಕೋಟಿಯಿಂದ ಎರಡೇ ವರ್ಷಗಳಲ್ಲಿ  80 ಶೇಕಡಾ ರಹಿತ ಕ್ಷೇತ್ರಗಳು ಎಂದರೆ, ಖಾಸಗಿ ನಿರ್ಮಾಣಗಾರರಿಗೆ, ಪ್ರವಾಸೋದ್ಯಮ, ಸೇವೆಗಳು, ವೈಯಕ್ತಿಕ ಸಾಲ ಇತ್ಯಾದಿಗಳಿಗೆ ನೀಡಿದ ಸಾಲ ಅಸಹಜವಾದ ಏರಿಕೆ ಕಂಡಿತು- ಅದೂ ಎಲ್ಲಾ ಭಾರತೀಯ ಕಂಪನಿಗಳು ನಿರಾಶರಾಗಿ 2018-19ರ ವಿಸ್ತರಣಾ ಯೋಜನೆಗ ಕಸದ ಬುಟ್ಟಿಗೆ ಎಸೆದಿರುವ ಸಂದರ್ಭದಲ್ಲಿ! ಇದೇ ಸಂದರ್ಭದಲ್ಲಿ ದುಡಿಯದ ಬಂಡವಾಳವೂ ಅಸಹಜವಾಗಿ ಏರಿಕೆ ಕಂಡಿದೆ. ತುರ್ತು ನಿಧಿಯು 2017-18ರಲ್ಲಿ 1,553.8 ಕೋಟಿ ರೂ. ಇದ್ದದ್ದು, 2018-19ರಲ್ಲಿ ಒಮ್ಮೆಲೇ 272 ಶೇಕಡಾ ಏರಿ 5,777.56 ಕೋಟಿಗೆ ತಲಪಿತು. ಅದೇ ಹೊತ್ತಿಗೆ ಲಾಭವು 2018-19ರ ವಾರ್ಷಿಕ ವರದಿಯಂತೆ 59 ಶೇಕಡಾ ಇಳಿದು 1,720.28 ಕೋಟಿ ರೂ.ಗಳಿಗೆ ತಲಪಿತು.

ಬ್ಯಾಂಕಿನ ಅಂದಾಜು ಅಪಾಯಕಾರಿ ಸಾಲವು 46,000 ಕೋಟಿ ರೂ.ಗಳಷ್ಟಿದೆ ಎಂದು ಜೆಪಿ ಮೋರ್ಗನ್ ಹೇಳಿದ್ದರೆ, ಕೆಲವು ಆರ್ಥಿಕ ತಜ್ಞರು 55,000 ಕೋಟಿ ರೂ. ಎಂದು ಹೇಳುತ್ತಿದ್ದಾರೆ. ಇವೆಲ್ಲವೂ ಕಳೆದ ನಾಲ್ಕೈದು ವರ್ಷಗಳಲ್ಲಿ ಉಂಟಾದವುಗಳು. ಅತ್ಯಂತ ಹೆಚ್ಚು ಸಾಲ ಪಡೆದ 20 ಖಾತೆಗಳ ಸಾಲವು ಒಂದು ವರ್ಷ ಹಿಂದೆ 48,435.4 ಕೋಟಿ ರೂ. ಇದ್ದದ್ದು ಮಾರ್ಚ್ 31, 2019ರಲ್ಲಿ 61,799.3 ಕೋಟಿ ರೂ.ಗಳಿಗೆ ಏರಿರುವುದು ಸಾಲ ನೀಡಿಕೆಯು ಕೆಲವೇ ಆಪ್ತರಿಗೆ ಸೀಮಿತಗೊಳ್ಳುತ್ತಿತ್ತು ಎಂಬುದನ್ನು ಸೂಚಿಸುತ್ತದೆ.

ಕಳೆದ 2-3 ವರ್ಷಗಳಿಂದ ಬಿಲಿಯಾಧಿಪತಿಗಳ ಏಣಿಯಿಂದ ಉರುಳುತ್ತಲೇ ಬಂದಿರುವ ಅನಿಲ್ ಅಂಬಾನಿ ಮತ್ತು ಈ ಬ್ಯಾಂಕಿನ ಜೊತೆ ಸಂಬಂಧ ಹೊಂದಿರುವ ಬಹುತೇಕ ಎಲ್ಲಾ ಉದ್ಯಮ ಸಂಸ್ಥೆಗಳು ಉರುಳುತ್ತಲೇ ಇರುವುದು ಬ್ಯಾಂಕಿನ ದುರ್ಗತಿಗೆ ಕಾರಣ. ಡಿಸೆಂಬರ್ 31, 2019ರ ಲೆಕ್ಕಾಚಾರದಂತೆ ಅನಿಲ್ ಅಂಬಾನಿಯ ಟೆಲಿಕಾಂ, ಮೂಲಸೌಕರ್ಯ, ನೌಕಾ ಮತ್ತು ವಿದ್ಯುತ್ ಕ್ಷೇತ್ರದ ಕಂಪನಿಗಳು ಯೆಸ್ ಬ್ಯಾಂಕಿಗೆ 43,800 ರೂ. ಮುಳುಗಿಸಿವೆ. ಇದರಲ್ಲಿ ಕಾಲು ಭಾಗ ಯೆಸ್ ಬ್ಯಾಂಕಿನಿಂದ ಪಡೆದುದಾಗಿದೆ. ಈ ಎಲ್ಲಾ ಕಂಪನಿಗಳು ಇಸ್ಪೀಟ್ ಎಲೆಗಳಂತೆ ಉರುಳಿದವು. ಹಣಕಾಸು ಒದಗಿಸುವವರು ಭಾರೀ ತಳಮಳಕ್ಕೆ ಒಳಗಾದರು.

ಯೆಸ್ ಬ್ಯಾಂಕ್ ಭಾರಿ ಪ್ರಮಾಣದಲ್ಲಿ ಶೇರುಗಳ ಅಡಮಾನಿನ ಆಧಾರದಲ್ಲಿ ಸಾಲಗಳನ್ನು ನೀಡಲು ಆರಂಭಿಸಿತು. ಇದು ಕಡಲ ತಡಿಯಲ್ಲಿ ನೆಟ್ಟಗೆ ನಿಂತಂತೆ. ಕಾಲಡಿಯ ಉಸುಕು ಅಥವಾ ಹೊಯ್ಗೆ ಕೊಚ್ಚಿಹೋಗಿ ಯಾವಾಗ ಉರುಳುವಿರೋ ಗೊತ್ತಾಗದು. ಅನಿಲ್ ಅಂಬಾನಿಯ ರಿಲಯನ್ಸ್ ಪವರ್ 685 ಕೋಟಿ ಕೋಟಿ ರೂ.ಗಳ ಸಾಲ ಬಾಕಿ ಇರಿಸಿ ಇದೇ ಅಡವು ಸಾಲದ ಮೇಲೆ ತನ್ನದೇ ಸಬ್ಸಿಡರಿ ಕಂಪನಿಯಾದ ರೋಸಾ ಪಲರ್ ಸಪ್ಲೈ ಕಂಪನಿಯಿಂದ 30 ಶೇಕಡಾ ಪಾಲುದಾರಿಕೆ ಖರೀದಿಸಿತು.

ಸುಬಾಷ್ ಚಂದ್ರ ಅವರ ಎಸ್ಸೆಲ್ ಗ್ರೂಪ್ ಅದೇ ರೀತಿಯಲ್ಲಿ 3,330 ಕೋಟಿ ರೂ.ಗಳ ಧೋಕಾ ಮಾಡಿತು. ಈ ರೀತಿಯಲ್ಲಿ 20 ದೊಡ್ಡ ಸಾಲಗಾರ ಕುಳಗಳು ಬ್ಯಾಂಕಿನ ಮಾಲಕರ ಸಹಕಾರದ ಮೂಲಕವೇ ಸಾವಿರಾರು ಕೋಟಿ ಸಾಲ ಮಾಡಿ ಮುಳುಗಿಸಿದ್ದಾರೆ. ಠೇವಣಿದಾರರ ಹಣ ಮತ್ತು ನಂಬಿಕೆ ಮುಳುಗಿಸಿದ್ದಾರೆ. ಇದು ಸರಕಾರ ಜನರಿಗೆ ಒದಗಿಸುತ್ತಿರುವ ಆರ್ಥಿಕ ಭದ್ರತೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...