Homeಮುಖಪುಟಬಹುಜನ ಭಾರತ : ಸಿಂಧ್ಯ ಅಧಿಕಾರದಾಹ ಮತ್ತು ಕಾಂಗ್ರೆಸ್-ಬಿಜೆಪಿಯ ಅಷಾಢಭೂತಿತನ

ಬಹುಜನ ಭಾರತ : ಸಿಂಧ್ಯ ಅಧಿಕಾರದಾಹ ಮತ್ತು ಕಾಂಗ್ರೆಸ್-ಬಿಜೆಪಿಯ ಅಷಾಢಭೂತಿತನ

- Advertisement -
- Advertisement -

ಸ್ವತಂತ್ರ ಭಾರತದ ಮಾಜಿ ರಾಜಪರಿವಾರಗಳು ‘ಜನತಾಂತ್ರಿಕ’ ರಾಜಕಾರಣದಲ್ಲೂ ರಾಜ್ಯವಾಳುತ್ತ ಬಂದಿವೆ. ಅಂತಹ ಪರಿವಾರಗಳ ಪೈಕಿ ಮಧ್ಯಪ್ರದೇಶದ ಗ್ವಾಲಿಯರ್-ಗುಣಾದ ಸಿಂಧ್ಯಾ ಪರಿವಾರ ಎದ್ದು ಕಾಣುವಂತಹುದು. ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕಾನ್ಹರಖೇಡ ಗ್ರಾಮದ ಪಾಟೀಲ ಜನಕೋಜೀರಾವ್ ವಂಶಜರು 27 ಬಾರಿ ಸಂಸದರಾಗಿದ್ದಾರೆ. ಒಂಬತ್ತು ಬಾರಿ ವಿಧಾನಸಭೆಗಳಿಗೆ ಆರಿಸಿಬಂದಿದ್ದಾರೆ. ರಾಜಮಾತಾ ವಿಜಯರಾಜೇ ಸಿಂಧ್ಯಾ ಅವರಿಂದ ಆಕೆಯ ಮೊಮ್ಮಗ ಜ್ಯೋತಿರಾದಿತ್ಯ ಸಿಂಧ್ಯ ಅವರ ತನಕ ಈ ಕುಟುಂಬದ ರಾಜಕೀಯ ಮಹತ್ವಾಕಾಂಕ್ಷೆಗಳು ರಾಜಕೀಯ ಪಕ್ಷಗಳಿಗೆ ಚಳ್ಳೆ ಹಣ್ಣು ತಿನ್ನಿಸುತ್ತ ಬಂದಿವೆ.

ರಾಜಮಾತೆ ವಿಜಯರಾಜೇ ಸಿಂಧ್ಯ ಅವರು 1957ರಲ್ಲಿ ಗುಣಾ ಮತ್ತು 1962ರಲ್ಲಿ ಗ್ವಾಲಿಯರ್ ನಿಂದ ಕಾಂಗ್ರೆಸ್ ಸಂಸದರಾಗಿ ಆರಿಸಿ ಬಂದಿದ್ದರು. 1967ರ ಲೋಕಸಭಾ ಉಪಚುನಾವಣೆಯಲ್ಲಿ ಪಕ್ಷೇತರರಾಗಿ ಗುಣಾದಿಂದ ಗೆದ್ದರು. 1971ರಲ್ಲಿ ಜನಸಂಘ, 1989,1991, 1996, 1998ರಲ್ಲಿ ಬಿಜೆಪಿಯಿಂದ ಲೋಕಸಭೆಗೆ ಆರಿಸಿ ಬಂದರು.

ಜ್ಯೋತಿರಾದಿತ್ಯ ಅವರ ತಂದೆ ಮಾಧವರಾವ್ ಸಿಂಧ್ಯ 1971ರಲ್ಲಿ ಗುಣಾದಿಂದ ಜನಸಂಘದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಲೋಕಸಭೆಗೆ ಆಯ್ಕೆಯಾಗಿದ್ದರು, 1977ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ, 1980, 1984, 1989, 1991ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸಂಸದರಾದರು. 1996ರಲ್ಲಿ ಮಧ್ಯಪ್ರದೇಶ ವಿಕಾಸ ಕಾಂಗ್ರೆಸ್ ಸ್ಥಾಪಿಸಿ ಆಯ್ಕೆ ಹೊಂದಿದರು. 1998 ಮತ್ತು 1999ರಲ್ಲಿ ಪುನಃ ಕಾಂಗ್ರೆಸ್ ನಿಂದ ಆಯ್ಕೆ ಹೊಂದಿದರು.

ವಸುಂಧರಾ ರಾಜೇ ಅವರು ಐದು ಬಾರಿ ಸಂಸದೆ ಮತ್ತು ಐದು ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಕೇಂದ್ರ ಸಚಿವೆಯಾಗಿದ್ದೇ ಅಲ್ಲದೆ ಎರಡು ಬಾರಿ ರಾಜಸ್ತಾನದ ಮುಖ್ಯಮಂತ್ರಿಯಾಗಿದ್ದರು.

ಯಶೋಧರಾ ರಾಜೇ ಐದು ಬಾರಿ ಶಾಸಕಿ ಮತ್ತು ಒಮ್ಮೆ ಸಂಸದೆಯಾಗಿದ್ದರು. ಕಾಂಗ್ರೆಸ್ಸಿನಲ್ಲಿದ್ದ ಜ್ಯೋತಿರಾದಿತ್ಯ ನಾಲ್ಕು ಬಾರಿ ಸಂಸದರು ಮತ್ತು ಎರಡು ಬಾರಿ ಕೇಂದ್ರ ಮಂತ್ರಿಯಾಗಿದ್ದರು.

ಹದಿನೆಂಟು ವರ್ಷಗಳಿಗೂ ಹೆಚ್ಚು ಕಾಲ ಕಾಂಗ್ರೆಸ್ಸಿನಲ್ಲಿದ್ದ ಜ್ಯೋತಿರಾದಿತ್ಯ ಬಿಜೆಪಿಯತ್ತ ನಡೆದಿದ್ದಾರೆ. ಸಿಂಧ್ಯಾ ಕುಟುಂಬದ ಅಧಿಕಾರದಾಹದ ಹೊಸ ಅಧ್ಯಾಯದ ಪುಟಗಳು ತೆರೆಯತೊಡಗಿವೆ. ಜ್ಯೋತಿರಾದಿತ್ಯ ಅವರ ಅತ್ತೆಯರಾದ (ತಂದೆ ಮಾಧವರಾವ್ ಸಿಂಧ್ಯಾ ಅವರ ಸೋದರಿಯರು) ವಸುಂಧರಾರಾಜೇ ಸಿಂಧ್ಯ ಮತ್ತು ಯಶೋಧರರಾಜೇ ಸಿಂಧ್ಯಾ ಈಗಾಗಲೇ ಬಿಜೆಪಿಯಲ್ಲಿ ಬೇರು ಬಿಟ್ಟ ತಲೆಯಾಳುಗಳು. ಜ್ಯೋತಿರಾದಿತ್ಯ ಅವರ ಹಾಲಿ ನಡೆಯನ್ನು ಇವರಿಬ್ಬರೂ ಸ್ವಾಗತಿಸಿದ್ದಾರೆ. ಜ್ಯೋತಿರಾದಿತ್ಯ ತವರಿಗೆ ಮರಳುತ್ತಿದ್ದಾನೆ ಎಂಬ ಅವರ ಮಾತು ನಿಜ.

ಜ್ಯೋತಿರಾದಿತ್ಯ ಅವರ ಅಜ್ಜಿ ರಾಜಮಾತಾ ವಿಜಯರಾಜೇ ಸಿಂಧ್ಯ ಅವರು ಹಿಂದೂ ಮಹಾಸಭಾದಲ್ಲಿ ಎತ್ತರದ ಸ್ಥಾನದಲ್ಲಿದ್ದವರು. ಆನಂತರ ಜನಸಂಘಕ್ಕೆ ಸೇರಿದ್ದರು. ಆನಂತರ ಬಿಜೆಪಿಯ ಸ್ಥಾಪಕ ಸದಸ್ಯರಷ್ಟೇ ಅಲ್ಲದೆ ಈ ಪಕ್ಷದ ಅಧ್ಯಕ್ಷರೂ ಆಗಿದ್ದವರು. ತಂದೆ ಮಾಧವರಾವ್ ಸಿಂಧ್ಯಾ ಕೂಡ 1972ರಲ್ಲಿ ಜನಸಂಘದಿಂದ ಲೋಕಸಭೆಗೆ ಆರಿಸಿ ಬಂದಿದ್ದವರು. ಇಂದಿರಾಗಾಂಧೀ ಅವರ ಕೃಪೆಯಿಂದಾಗಿ ತುರ್ತುಪರಿಸ್ಥಿತಿಯಲ್ಲಿ ಜೈಲು ತಪ್ಪಿಸಿಕೊಂಡಿದ್ದರು. 1977ರಲ್ಲಿ ಪಕ್ಷೇತರ ಸಂಸದ. 1980ರಲ್ಲಿ ಕಾಂಗ್ರೆಸ್ ಸೇರಿ 1996ರಲ್ಲಿ ಪ್ರಾದೇಶಿಕ ಪಕ್ಷ ಕಟ್ಟಿ ಪುನಃ ಕಾಂಗ್ರೆಸ್ ಸೇರಿದ್ದವರು. 2001ರಲ್ಲಿ ಅಪಘಾತದಲ್ಲಿ ನಿಧನರಾಗುವ ತನಕ ಕಾಂಗ್ರೆಸ್ಸಿನಲ್ಲೇ ಇದ್ದರು.

ಮಧ್ಯಪ್ರದೇಶದ ರಾಜಕಾರಣವನ್ನೇ ಗಣನೆಗೆ ತೆಗೆದುಕೊಳ್ಳುವುದಾದರೆ ಸಿಂಧ್ಯಾ ಕುಟುಂಬ 53 ವರ್ಷದ ಹಳೆಯ ಇತಿಹಾಸದ ದಾಳವನ್ನು ಪುನಃ ಉರುಳಿಸಿದೆ. 1967ರಲ್ಲಿ ವಿಜಯರಾಜೇ ಸಿಂಧ್ಯಾ ಅವರ ಕಾರಣ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಬೇಕಾಗಿತ್ತು. ಇದೀಗ ಅವರ ಮೊಮ್ಮಗನ ಕಾಂಗ್ರೆಸ್ ಸರ್ಕಾರವನ್ನು ಪತನದ ಅಂಚಿಗೆ ನೂಕಿದ್ದಾರೆ.

2018ರ ಡಿಸೆಂಬರ್ ನಲ್ಲಿ ಮಧ್ಯಪ್ರದೇಶದ ಮತದಾರರು ಅತಂತ್ರ ವಿಧಾನಸಭೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಬಹುಮತದ ಅಂಚಿಗೆ ಬಂದಿದ್ದ ಕಾಂಗ್ರೆಸ್ ಪಕ್ಷ ಬಿ.ಎಸ್.ಪಿ., ಪಕ್ಷೇತರರು ಮತ್ತು ಎಸ್.ಪಿ. ಬೆಂಬಲದೊಂದಿಗೆ ಸರ್ಕಾರ ರಚಿಸಿದಾಗ ಜ್ಯೋತಿರಾದಿತ್ಯ ಮುಖ್ಯಮಂತ್ರಿ ಸ್ಥಾನಕ್ಕೆ ಹಾತೊರೆದಿದ್ದರು. ಆದರೆ ಕಾಂಗ್ರೆಸ್ ಪಕ್ಷ ಹಳೆಯ ಪಂಟ ಕಮಲನಾಥ್ ಅವರಿಗೆ ಮಣೆ ಹಾಕಿತು. ಆಗಲೇ ಮುನಿದಿದ್ದ ಜ್ಯೋತಿರಾದಿತ್ಯ ಅವರಿಗೆ ಬಿಜೆಪಿ ಬಲೆ ಬೀಸಿತ್ತು. ಕಮಲನಾಥ್ ಮತ್ತು ಸಿಂಧ್ಯ ನಡುವಣ ಕಂದಕ ಹಿರಿದಾಗುತ್ತಲೇ ಹೋಯಿತು. ಸೋನಿಯಾಗಾಂಧೀ-ರಾಹುಲ್ ಗಾಂಧೀ- ಪ್ರಿಯಾಂಕಾ ಗಾಂಧೀ ಈ ಕುರಿತು ತಲೆ ಕೆಡಿಸಿಕೊಳ್ಳಲಿಲ್ಲ. ಅದರ ಫಲಿತಾಂಶ ಇಂದು ಅನಾವರಣಗೊಂಡಿದೆ.

ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡುವ ಮೋದಿ ಸರ್ಕಾರದ ಕ್ರಮವನ್ನು ಜ್ಯೋತಿರಾದಿತ್ಯ ಸ್ವಾಗತಿಸಿದ್ದರು. ಹೈದರಾಬಾದಿನಲ್ಲಿ ಅತ್ಯಾಚಾರದ ಆರೋಪಿಗಳನ್ನು ಪೊಲೀಸರು ಎನ್ಕೌಂಟರ್ ಮಾಡಿ ಕೊಂದ ನಡೆಯನ್ನೂ ಅವರು ಬೆಂಬಲಿಸಿದ್ದರು. ಈ ನಡುವೆ ಸಾಮಾಜಿಕ ಜಾಲತಾಣದ ಅವರ ಅಕೌಂಟುಗಳಿಂದ ಕಾಂಗ್ರೆಸ್ ಬಾವುಟ ಕಾಣೆಯಾಗಿತ್ತು. ಈ ಎಲ್ಲ ಸುಳಿವು ಸಂಕೇತಗಳನ್ನು ಕಾಂಗ್ರೆಸ್ ಓದಲಾರದಾಯಿತು.

ಗ್ವಾಲಿಯರ್ ಸಂಸ್ಥಾನವನ್ನು ಆಳಿದ ಸಿಂಧ್ಯ ಪೂರ್ವಜರು ಬ್ರಿಟಿಷರೊಂದಿಗೆ ಗೆಳೆತನ ಹೊಂದಿದ್ದವರು. ಅವರಿಂದ ಬಿರುದು ಬಾವಲಿಗಳನ್ನು ಸ್ವೀಕರಿಸಿದ್ದವರು. 1857ರಲ್ಲಿ ಝಾನ್ಸಿಯ ರಾಣಿ ಲಕ್ಷ್ಮೀಬಾಯಿ ಮತ್ತು ಬ್ರಿಟಿಷರ ನಡುವೆ ನಡೆದ ಯುದ್ಧದಲ್ಲಿ ಲಕ್ಷ್ಮೀಬಾಯಿಯನ್ನು ಬೆಂಬಲಿಸಲಿಲ್ಲ ಎಂಬ ಆರೋಪ ಹೊತ್ತವರು. ಸಂಕಟದಲ್ಲಿದ್ದ ಲಕ್ಷ್ಮೀಬಾಯಿಗೆ ನಿಶ್ಯಕ್ತ ಕುದುರೆ ನೀಡಿ ಆಕೆಯ ಸಾವಿಗೆ ಕಾರಣನಾಗಿದ್ದ ಗ್ವಾಲಿಯರ್ ಮಹಾರಾಜ ಎಂಬ ಆರೋಪವನ್ನು ಬಿಜೆಪಿಯೇ ಮಾಡಿರುವುದುಂಟು.

ಜ್ಯೋತಿರಾದಿತ್ಯ ಸಿಂಧ್ಯ ಅವರನ್ನು ಬಿಜೆಪಿ ಮುಂಬರುವ ಕೆಲ ಕಾಲ ಹೆಗಲ ಮೇಲೆ ಹೊತ್ತು ಮೆರೆಸಿ ಡೋಲು ಬಾರಿಸೀತು. ಇತ್ತ ಕಾಂಗ್ರೆಸ್ಸು ಬಿಜೆಪಿ ಮಾಡಿದ್ದ ಆಪಾದನೆಯನ್ನೇ ಮಾಡಿ ರಾಣಿ ಲಕ್ಷ್ಮೀಬಾಯಿಯ ಬೆನ್ನಿಗೆ ಚೂರಿ ಹಾಕಿದ ವಂಶಸ್ಥನಿಂದ ಇನ್ನೇನು ನಿರೀಕ್ಷಿಸಲಾದೀತು ಎಂದು ಬಾಯಿ ಬಡಿದುಕೊಳ್ಳಲಿದೆ. ಎರಡೂ ಪಕ್ಷಗಳು ಆಷಾಢಭೂತಿಗಳು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...

ಬಿಹಾರ: ನಕಲಿ ದಾಖಲೆ ನೀಡಿ ಕೆಲಸ ಗಿಟ್ಟಿಸಿದ್ದ 3,000ಕ್ಕೂ ಹೆಚ್ಚು ಶಿಕ್ಷಕರು ವಜಾ!

ನಕಲಿ ಪದವಿ ಹಾಗೂ ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ನೀಡಿ ಸರ್ಕಾರಿ ಶಾಲೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ 3,000ಕ್ಕೂ ಹೆಚ್ಚು ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಲು ಬಿಹಾರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಶುಕ್ರವಾರ ಅಧಿಕೃತ ಪ್ರಕಟಣೆ...

TMC ತೊರೆದು BJP ಸೇರಿದ ಮಾಜಿ ಸಂಸದರಿಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ರಾಜ್ಯಸಭಾ ಸ್ಥಾನಗಳಿಗೆ ರಾಜೀನಾಮೆ ನೀಡಿದ ಕೆಲವೇ ವಾರಗಳಲ್ಲಿ, ಆ ಮೂವರು ಮಾಜಿ ಸಂಸದರು ಈಗ ಬೇರೆ ಬಣ್ಣದ (BJP) ಶಾಲು ಧರಿಸಿ ಮತ್ತೆ...

ಪಶ್ಚಿಮ ಬಂಗಾಳ: ಟಿಎಂಸಿ ಖಾತೆ ಫ್ರೀಜ್ ಮಾಡಿದ್ದ ಪೊಲೀಸರಿಗೆ ಕಲ್ಕತ್ತಾ ಹೈಕೋರ್ಟ್ ತರಾಟೆ!

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಹಲವು ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದ ಪಕ್ಷದ ಮೂರು ಬ್ಯಾಂಕ್...

ಬಂಗಾಳದ ಬಿಸಿಯೂಟ ಇಸ್ಕಾನ್‌ಗೆ ಹಸ್ತಾಂತರವಿಲ್ಲ: ಸರ್ಕಾರದ ಸ್ಪಷ್ಟನೆ, ಕಲ್ಕತ್ತಾ ಹೈಕೋರ್ಟ್‌ನಿಂದ ಅಫಿಡವಿಟ್‌ಗೆ ನಿರ್ದೇಶನ 

ಕೋಲ್ಕತ್ತಾ: ರಾಜ್ಯದ ಶಾಲೆಗಳಲ್ಲಿ ಜಾರಿಯಲ್ಲಿರುವ ಪಿಎಂ-ಪೋಷಣ್ (ಮಧ್ಯಾಹ್ನದ ಬಿಸಿಯೂಟ) ಯೋಜನೆಯ ನಿರ್ವಹಣೆಯನ್ನು ಇಸ್ಕಾನ್ ಸಂಸ್ಥೆಗೆ ಹಸ್ತಾಂತರಿಸುವ ಯಾವುದೇ ಅನುಮೋದಿತ ಪ್ರಸ್ತಾಪ ಸರ್ಕಾರಕ್ಕಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಸ್ಪಷ್ಟಪಡಿಸಿದೆ. ಈ ಕುರಿತು ಅಫಿಡವಿಟ್...

ಗಾಜಿಯಾಬಾದ್‌| ಗೋಮಾಂಸ ಸಾಗಾಣಿಕೆ ಆರೋಪ; ವ್ಯಕ್ತಿ ಮೇಲೆ ಗುಂಪಿನಿಂದ ಹಲ್ಲೆ

ಉತ್ತರ ಪ್ರದೇಶದ ಗಾಜಿಯಾಬಾದ್‌ ನಗರದ ಶಾಸ್ತ್ರಿ ನಗರದಲ್ಲಿ ಗೋಮಾಂಸ ಸಾಗಿಸುತ್ತಿದ್ದಾರೆ ಎಂಬ ಅನುಮಾನದ ಮೇಲೆ ಸಲೀಂ ಎಂದು ಗುರುತಿಸಲಾದ ವ್ಯಕ್ತಿಯ ಮೇಲೆ ನಕಲಿ ಗೋರಕ್ಷಕರ ಗುಂಪೊಂದು ಹಲ್ಲೆ ನಡೆಸಿದೆ. ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ...