Homeಮುಖಪುಟಜನತಾ ಕಫ್ರ್ಯೂ ಶುರುವಾದದ್ದು ಯಾಕೆ? ದುರ್ಬಳಕೆಯಾದೀತು ಜೋಕೆ!!

ಜನತಾ ಕಫ್ರ್ಯೂ ಶುರುವಾದದ್ದು ಯಾಕೆ? ದುರ್ಬಳಕೆಯಾದೀತು ಜೋಕೆ!!

- Advertisement -
- Advertisement -

ಪೀಪಲ್ಸ್ ಕಫ್ರ್ಯೂ ಕಾನ್ಸೆಪ್ಟನ್ನು ಮೊಟ್ಟಮೊದಲ ಬಾರಿಗೆ ಕೊಟ್ಟವರು ಅಸ್ಸಾಮಿನ ವಿದ್ಯಾರ್ಥಿ ಗಣಪರಿಷತ್ ನಾಯಕರು. ಅಸ್ಸಾಮಿಗಳಿಗೆ ವಂಚನೆ ಮಾಡಿ ಬೆಂಗಾಳಿ ಬಾಬುಗಳಿಗೆ ಅಸ್ಸಾಂ ಆಡಳಿತದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟುದುದರ ವಿರುದ್ಧ ಮೊದಲ ಬಾರಿಗೆ ಸೆಟೆದು ನಿಂತದ್ದು ಅಸ್ಸಾಂ ವಿದ್ಯಾರ್ಥಿ ಗಣಪರಿಷತ್. ಆ ಸಂದರ್ಭದಲ್ಲಿ ವಿಧಾನಸಭಾ ಚುನಾವಣೆ ಬಂತು. ಯಾವ ಅಸ್ಸಾಮಿ ಪ್ರಜೆಯೂ ಈ ಚುನಾವಣೆಯಲ್ಲಿ ಮತಹಾಕಲು ಮತಗಟ್ಟೆಗೆ ಹೋಗಬಾರದೆಂದು ಕರೆನೀಡಿ Peoples Curfew ಘೋಷಿಸಿತು.

Peoples Curfew ಒಂದು ಹೊಸ ಪ್ರಯೋಗ. ಸರ್ಕಾರ ಕಫ್ರ್ಯೂ ಹಾಕುವುದು ಬ್ರಿಟಿಷರ ಕಾಲದಿಂದ ಜಾರಿಯಲ್ಲಿರುವ ಕರಾಳ ಶಾಸನ. ಹೋರಾಟಗಾರರು ಐದು ಜನ ಒಟ್ಟಿಗೆ ಸೇರಿದರೆ ಅವರ ಮೇಲೆ ಗುಂಡು ಹಾರಿಸಲು ಪೊಲೀಸರಿಗೆ ಅನುಮತಿ ನೀಡುವ ಶಾಸನ ಅದು.

ಅಸ್ಸಾಂ ವಿದ್ಯಾರ್ಥಿ ಗಣಪರಿಷತ್ತಿನ Peoples curgfew ಸರ್ಕಾರ ಹಾಕುವ ಕಫ್ರ್ಯೂ ಅಲ್ಲ. ಜನತೆ ಹಾಕುವ ಕಫ್ರ್ಯೂ. ಆಶ್ಚರ್ಯವೆಂದರೆ ಜನತೆ, ತಮ್ಮ ಮೇಲೆ ತಾವೇ ಹಾಕಿಕೊಳ್ಳುವ ಪ್ರತಿಬಂಧಕ. ಆ ಆಜ್ಞೆಯನ್ನು ಕಟ್ಟುನಿಟ್ಟಾಗಿ ಪಾಲಿಸಿದ ಜನ ಮನೆಬಿಟ್ಟು ಹೊರಬೀಳಲೇ ಇಲ್ಲ. ಚುನಾವಣೆ ಪ್ರಕ್ರಿಯೆಯಲ್ಲಿ ಅಸ್ಸಾಮಿನ ಜನ ಭಾಗವಹಿಸಲಿಲ್ಲ. ಶೇ.10ರಷ್ಟು ಮಾತ್ರ ಮತದಾನ ನಡೆಯಿತು. ಆದರೂ ಆಡಳಿತ ಪಕ್ಷ ಆ ಚುನಾವಣೆಯ ಫಲಿತಾಂಶವನ್ನು ಘೋಷಿಸಿತು.

ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದುಬಂದಿದ್ದು, ಕಾಂಗ್ರೆಸ್ ಪಕ್ಷ ಸರ್ಕಾರವನ್ನು ರಚಿಸಿತು. ಆದರೆ ಆ ಸರ್ಕಾರ ಬಹಳ ದಿನ ಉಳಿಯಲಿಲ್ಲ. ರಾಷ್ಟ್ರಾಧ್ಯಕ್ಷರ ಆಳ್ವಿಕೆಯನ್ನು ಅಸ್ಸಾಮಿನ ಮೇಲೆ ಹೇರಲಾಯಿತು. ಆರು ತಿಂಗಳೊಳಗೆ ಮತ್ತೆ ಚುನಾವಣೆ ನಡೆದು ವಿದ್ಯಾರ್ಥಿ ಗಣಪರಿಷತ್ ಅಭೂತಪೂರ್ವ ಜಯಗಳಿಸಿ ಆಡಳಿತಕ್ಕೆ ಬಂತು. ಜನ ಮನಸ್ಸು ಮಾಡಿದರೆ ಜನರೇ ಕಫ್ರ್ಯೂ ಹಾಕುವುದು ಸಾಧ್ಯ. ಅದು ಯಶಸ್ವಿಯಾಗಿ ಜಾರಿಗೆ ಬರುವುದೂ ಸಾಧ್ಯ.

ಆದರೆ ಇಂದು ಜನತಾ ಕಫ್ರ್ಯೂ ಹೇರಿರುವುದು ಪ್ರಧಾನಿ ಮೋದಿ ಮತ್ತು ಬಿಜೆಪಿ ಸರ್ಕಾರ! ಇದೊಂದು ವಿರೋಧಾಭಾಸವೇ ಸರಿ. ಮೋದಿಗೆ ಶಾಸನಾನುಸಾರ ಸರ್ಕಾರದಿಂದ ಜಾರಿಯಾಗುವ ಕಫ್ರ್ಯೂ ಹಾಕುವ ಅಧಿಕಾರವಿದೆ. ಜನತಾ ಕಫ್ರ್ಯೂ ಹಾಕುವ ಅಧಿಕಾರವಿಲ್ಲ. ಅದು ಇರುವುದು ಜನರಿಗೆ ಮತ್ತು ಜನರನ್ನು ಪ್ರತಿನಿಧಿಸುವ ಪ್ರಭುತ್ವೇತರ ವೇದಿಕೆಗೆ. ಸರ್ಕಾರಿ ಕಾಯಿದೆ ಪ್ರಕಾರ ಕಫ್ರ್ಯೂ ಹೇರಿದರೆ ಜನ ಎದುರುಬಿದ್ದಾರೆಂದು ಮೋದಿಯವರು ಜನತಾ ಕಫ್ರ್ಯೂ ಹೇರಿದ್ದಾರೆ.

ಅಸ್ಸಾಂನಲ್ಲಿ ವಿದ್ಯಾರ್ಥಿ ಗಣಪರಿಷತ್ ಕಫ್ರ್ಯೂವನ್ನು ಜನತೆ ಮಾತ್ರ ಪಾಲನೆ ಮಾಡಿತು. ಸರ್ಕಾರ ಜನತಾ ಕಫ್ರ್ಯೂವನ್ನು ಮನ್ನಣೆ ಮಾಡಲಿಲ್ಲ. ಈಗ ಮೋದಿ ಸರ್ಕಾರ ಜನತಾ ಕಫ್ರ್ಯೂ ಹೇರಿ ಈ ಜನತಾ ಕಫ್ರ್ಯೂವನ್ನು ಸರ್ಕಾರವೂ ಪಾಲಿಸಬೇಕು, ಪ್ರಜೆಗಳೂ ಪಾಲಿಸಬೇಕು ಎಂದು ಫರ್ಮಾನ್ ನೀಡಿದ್ದಾರೆ. ಇದು ಎಷ್ಟರಮಟ್ಟಿಗೆ ಸರಿ?

ಏಕೆಂದರೆ ಸರ್ಕಾರಕ್ಕೆ ಜನತಾ ಕಫ್ರ್ಯೂ ಹಾಕಲು ಬರುವುದಿಲ್ಲ. ಅದು ಜನತೆಯ ಹಕ್ಕು. ಜನತೆಯ ಹಕ್ಕನ್ನು ಸರ್ಕಾರ ಕಿತ್ತುಕೊಂಡು ಆ ಹಕ್ಕನ್ನು ಸರ್ಕಾರ ಚಲಾಯಿಸುವುದು ವಿಪರ್ಯಾಸ.

ಕೊರೊನಾ ಭೂತ ನಮ್ಮನ್ನು ಕಾಡುತ್ತಿರುವಾಗ, ಜನರು ಯಾರೂ ಒಂದು ಭಾನುವಾರ ದಯವಿಟ್ಟು ಮನೆಬಿಟ್ಟು ಬರಬೇಡಿ ಎಂದು ಹೇಳುವ ಮತ್ತು ಅದಕ್ಕಾಗಿ ಸರ್ಕಾರಿ ಕಫ್ರ್ಯೂ ಹೇರುವ ಅಧಿಕಾರ ಮೋದಿ ಸರ್ಕಾರಕ್ಕೆ ಇದೆ. ಇದರ ಅವಶ್ಯಕತೆಯನ್ನು ಅರಿತು ಸರ್ಕಾರದೊಡನೆ ಜನ ಸಹಕರಿಸುವುದೂ ಅಗತ್ಯ. ಆದರೆ ಜನತೆಯ ಕಫ್ರ್ಯೂವನ್ನು ಮೋದಿ ಸರ್ಕಾರ ಜಾರಿ ಮಾಡಲು ಹೊರಟಿರುವುದು ವಿರೋಧಾಭಾಸ ಎಂದು ಹೇಳಬೇಕಾಗುತ್ತದೆ. ಇದರ ಬಗೆಗೆ ಮೋದಿಯವರು ಒಂದು ವಿವರಣೆ ನೀಡಬೇಕೆಂದು ಕೇಳಬಯಸುತ್ತೇನೆ. ಸರ್ಕಾರ ತನಗಿಲ್ಲದ ಅಧಿಕಾರ ಬಳಸಿಕೊಂಡು ಜನತಾ ಕಫ್ರ್ಯೂ ಹಾಕಿತು. ಜನ ಇದಕ್ಕೆ ಚೆನ್ನಾಗಿ ಪ್ರತಿಕ್ರಿಯಿಸಿದ್ದಾರೆ. ಅದಕ್ಕೆ ಕಾರಣ ಜನಕ್ಕಿರುವ ಪ್ರಾಣಭಯ. ಜನತಾ ಕಫ್ರ್ಯೂವನ್ನು ಒಳ್ಳೇಕಾರಣಕ್ಕೆ ಈಗ ಮೋದಿ ಬಳಸಿದ್ದಾರೆ. ಜನ ಚೆನ್ನಾಗಿಯೂ ಸ್ಪಂದಿಸಿದ್ದಾರೆ. ಮೋದಿಯವರ ಸರ್ಕಾರ ಮುಂದೆ ಜನತಾ ಕಫ್ರ್ಯೂವನ್ನು ಸ್ವಾರ್ಥಕ್ಕೆ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ. ಅದರ ಬಗೆಗೆ ಜನ ಎಚ್ಚರಿಕೆಯಿಂದಿರಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...