Homeಮುಖಪುಟವಿಶ್ವದ ದಿಕ್ಕು ಬದಲಿಸಿದ ಮಹಾನ್ ನಾಯಕರ ಕೆಲವು ಭಾಷಣಗಳ ತುಣುಕುಗಳು

ವಿಶ್ವದ ದಿಕ್ಕು ಬದಲಿಸಿದ ಮಹಾನ್ ನಾಯಕರ ಕೆಲವು ಭಾಷಣಗಳ ತುಣುಕುಗಳು

ನಮ್ಮ ಪ್ರಧಾನಿ ಮೋದಿ ಅವರು ಸಹ ಕೆನಡಿವಾದಿಗಳು ಅಂತ ಕಾಣತದ. ನಾಲ್ಕು ಸಲೆ ಭಾಷಣ ಮಾಡಿದರೂ ಸಹಿತ ನೀವು ಹಿಂಗ ಮಾಡ್ರಿ, ನೀವು ಹಂಗ ಮಾಡಬ್ಯಾಡ್ರಿ ಅಂತ ಹೇಳಿದರು ಹೊರತು, ನಾವು ಏನು ಮಾಡಬೇಕು, ಏನು ಮಾಡಲಿಕ್ಕೆ ಹತ್ತೇವಿ ಅನ್ನೋದನ್ನ ಹೇಳಲಿಲ್ಲ.

- Advertisement -
- Advertisement -

“ಜನರಿಂದ, ಜನರಿಗಾಗಿ ನಡೆಯುವ ಜನರ ಸರಕಾರವನ್ನು ಈ ವಿಶ್ವದಿಂದ ಅಳಿಸಲು ಯಾರಿಗೂ ಸಾಧ್ಯವಿಲ್ಲ,ʼʼ ಈ ಮಾತು ಯಾರಿಗೆ ನನಪಿಲ್ಲ? ಪ್ರಾಥಮಿಕ ಸಾಲಿಯೊಳಗಿನ ಪ್ರಜಾಪ್ರಭುತ್ವದ ಪಾಠ ಕಲಿಯುವಾಗ ನಮಗೆಲ್ಲಾರಿಗೂ ಕೇಳಿಸಿದ ಮೊದಲನೇ ವ್ಯಾಖ್ಯಾನ ಇದು.

ಇದು ಅಮೇರಿಕಾ ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರು ಗೆಟಿಸಬರ್ಗ್ ಎಂಬ ನಗರದಾಗ 1863ರೊಳಗ ಹುತಾತ್ಮ ಸೈನಿಕರ ಸ್ಮಾರಕ ಉದ್ಘಾಟಿಸುವಾಗ ಮಾಡಿದ ಭಾಷಣದ ಕೊನೆಯ ಸಾಲು.

ಕೇವಲ 275 ಶಬ್ದಗಳ, 3-4 ನಿಮಿಷದ ಈ ಭಾಷಣ ವಿಶ್ವದ ಇತಿಹಾಸದಲ್ಲಿ ದಾಖಲಾಗೇದ. ಅದು ಗುಲಾಮಗಿರಿಯನ್ನು ನಿರ್ಮೂಲನೆ ಮಾಡೋ ಲಿಂಕನ್ ಅವರ ನಿಲುವನ್ನು ಗಟ್ಟಿಯಾಗಿಸಿತು ಮತ್ತು ಪ್ರಜಾಪ್ರಭುತ್ವದ ಬಗ್ಗೆ ಕಲಿಯುವ ಜಗತ್ತಿನ ನೂರಾರು ದೇಶಗಳ ಕೋಟ್ಯಾಂತರ ವಿದ್ಯಾರ್ಥಿಗಳಿಗೆ ಪಾಠವಾಯಿತು.

ಮಹಾಮಹಿಮ ಪಂತ ಪ್ರಧಾನರು ಇಲ್ಲಿವರೆಗೆ ಕೊರೊನಾದ ಬಗ್ಗೆ ನಾಲ್ಕು ಭಾಷಣ ಮಾಡ್ಯಾರ. ಅದರಾಗ ಮೂರು ಠೀವಿದಾಗ ಬಂದಾವು, ಒಂದು ರೇಡಿಯೋದಾಗ ಬಂದೇತಿ. ಅವು ಭಾರತದ ದಿಕ್ಕು ಬದಲಿಸಿದ ಭಾಷಣಗಳು ಅಂತ ಹೇಳಿ ಅವರ ಬೆಂಬಲಿಗರ ಅಂಬೋಣ.

ಹಂಗಾರ ಈ ಸಲಾ ವಿಶ್ವದ ದಿಕ್ಕು ಬದಲಿಸಿದ ಮಹಾನ್ ನಾಯಕರ ಕೆಲವು ಭಾಷಣಗಳನ್ನು ಪುನರ್ ಮನನ ಮಾಡೋಣ.

“ಅಮೇರಿಕಾದ ನನ್ನ ಸಹೋದರ -ಸಹೋದರಿಯರೇ” ಅಂತ ಶುರುವಾಗೋ ಭಾಷಣ ಮಾಡಿದ್ದು ಯಾರು ಅಂತ ಕೇಳಿದರ ಎಲ್ಲಾರು ಕೈ ಎತ್ತುತಾರ. ಸ್ವಾಮಿ ವಿವೇಕಾನಂದ ಅವರು ಷಿಕಾಗೋದಾಗ ಮಾಡಿದ ಐದು ದಿನಗಳ ಭಾಷಣ ಸರಣಿಯೊಳಗ ಇದು ಎಲ್ಲಾರಿಗಿಂತ ಜನಪ್ರಿಯ ಭಾಷಣ. ಇದು ವಿಶ್ವಕ್ಕ ಭಾರತೀಯ ಸಂಸ್ಕೃತಿಯನ್ನ, ಹಿಂದೂ ಧರ್ಮವನ್ನು ಪರಿಚಯಿಸಿತು. ಭಾರತದ ಗೌರವವನ್ನು ಅಂತರಾಷ್ಟ್ರೀಯ ಮಟ್ಟದಾಗ ಎತ್ತಿ ಹಿಡೀತುʼʼ ಅನ್ನೋದು ಸರ್ವಾಭಿಪ್ರಾಯ. ಜೀವನ ಪೂರ್ತಿ ಜನಪರ ಕೆಲಸ ಮಾಡಿದ ಸ್ವಾಮಿ ವಿವೇಕಾನಂದರನ್ನು ಈ ಭಾಷಣ ಒಂದರಿಂದನ ಬಲ್ಲವರು ಭಾಳ ಇದ್ದಾರ.

ಜವಾಹರಲಾಲ ನೆಹರೂ ಅವರು ಸ್ವಾತಂತ್ರದ ರಾತ್ರಿ ಮಾಡಿದ ʻʻನಿಯತಿಯೊಂದಿಗೆ ನಮ್ಮ ಮಿಲನದ ಒಪ್ಪಂದʼʼದ ಭಾಷಣ ಜನಪ್ರಿಯವಾಗಿದೆ. ಅದಕ್ಕಿಂತ ಮುಖ್ಯವಾದ ಅವರ ಭಾಷಣವೊಂದಿದೆ. ಉತ್ತರ ಪ್ರದೇಶ ಹಳ್ಳಿಯ ಮಾರ್ಗವಾಗಿ ಮಧ್ಯರಾತ್ರಿ ಪ್ರಯಾಣ ಬೆಳೆಸಿದ್ದ ನೆಹರೂ ಅವರನ್ನು ಅಲ್ಲಿಯ ಜನ ʻಪ್ರಧಾನ ಮಂತ್ರಿಯನ್ನು ನೋಡುವುದಕ್ಕಾಗಿʼ ಅವರ ಕಾರನ್ನು ನಿಲ್ಲಿಸುತ್ತಾರ. ಆಗ ಹೊರ ಬಂದ ನೆಹರೂ ಅವರಿಗೆ ಒಂದು ಪ್ರಶ್ನೆ ಕೇಳುತ್ತಾರೆ. ʻʻನೀವೆಲ್ಲಾ ʻಜೈ ಹಿಂದʼ ಅಂತ ಘೋಷಣೆ ಕೂಗುತ್ತಾ ಇದ್ದೀರಲ್ಲಾ, ಹಾಗಂದರೇನು?ʼʼ ಅವರು ಇದು ʻʻಈ ದೇಶಕ್ಕ, ನಿಮಗೆ, ನಿಮ್ಮ ಸರಕಾರಕ್ಕೆ ಜೈಕಾರ ಅಂತ ಹೇಳಿದಾಗ, ʻʻಅಲ್ಲ, ಇದು ನಿಮಗೆ ನೀವೆ ಜೈಕಾರ ಹಾಕಿಕೊಂಡಂತೆ. ಇದನ್ನು ನೀವು ಚನ್ನಾಗಿ ಅರಿತುಕೊಳ್ಳಿʼʼ ಅಂತ ಹೇಳತಾರ.

ಅಮೇರಿಕಾದ ಸ್ವಾತಂತ್ರ‍್ಯ ಹೋರಾಟಗಾರರು ಹಾಗೂ ಸಂಸ್ಥಾಪಕ ನಾಯಕರಲ್ಲಿ ಒಬ್ಬನಾದ ಪ್ಯಾಟ್ರಿಕ್ ಹೆನ್ರಿ ಅವರು ಭಾಷಣದಲ್ಲಿ ಹೇಳಿದ ʻʻನನಗೆ ಸ್ವಾತಂತ್ರ‍್ಯ ಕೊಡಿ ಅಥವಾ ಮರಣವನ್ನು ನೀಡಿʼʼ ಅನ್ನುವ ಮಾತು ಇಂಗ್ಲಂಡಿನ ವಸಾಹತುಶಾಹಿ ನೀತಿಯ ವಿರುದ್ಧ ಹೋರಾಟದಲ್ಲಿ ಮೈಲಿಗಲ್ಲಾಗಿ ಪರಿಗಣಿಸಿತು. ಇದೇ ಧಾಟಿಯ ಮಾಡು ಇಲ್ಲವೇ ಮಡಿ ಅನ್ನುವ ಮಹಾತ್ಮಾ ಗಾಂಧಿಯವರ ಭಾರತ ಬಿಟ್ಟು ತೊಲಗಿ ಭಾಷಣ ಬ್ರಿಟಿಷರ ವಿರುದ್ಧ ʻಯುದ್ಧಘೋಷʼವಾಗಿ ಪರಿಗಣಿಸಿತು.

ಬಾಲಗಂಗಾಧರ ತಿಲಕರ ʻʻಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು, ಅದನ್ನು ನಾನು ಪಡೆದೇ ತೀರುತ್ತೇನೆʼʼ ಎನ್ನುವ ಮಾತು ಅವರನ್ನು ಅಮರರಾಗಿಸಿತು.

ದುಂಡು ಮೇಜಿನ ಪರಿಷತ್ತಿನ ಸಭೆಯೊಳಗ ಡಾ. ಅಂಬೇಡ್ಕರ್ ‘ಸಾಮಾಜಿಕ -ಆರ್ಥಿಕ ಸ್ವಾತಂತ್ರ‍್ಯವಿಲ್ಲದ ರಾಜಕೀಯ ಸ್ವಾತಂತ್ರ‍್ಯ ಅರ್ಥಹೀನ’ ಅಂತ ಹೇಳಿದ್ದು, ಪಂಜಾಬಿನ ಜಾತ ಪಾತ ತೋಡಕ ಮಂಡಲದಲ್ಲಿ ಮಾಡಿದ ಜಾತಿ ವಿನಾಶ ಭಾಷಣಗಳು ಐತಿಹಾಸಿಕ. ಅವರ ವಿರೋಧಿಗಳು ಸಹ ಉಲ್ಲೇಖಿಸುವ ʻʻಸಕಲ ಸವಲತ್ತುಗಳನ್ನು ಪಡೆದು ಬೆಳೆದ ನನ್ನವರೇ ನನಗೆ ವಿಶ್ವಾಸದ್ರೋಹ ಮಾಡಿದರು. ಅವರು ತಮ್ಮ ದೌರ್ಭಾಗ್ಯಪೂರ್ಣ ಅಣ್ಣ-ತಮ್ಮಂದಿರ ಕಾಳಜಿ ಮಾಡುತ್ತಾರೆ ಎಂದುಕೊಂಡಿದ್ದೆ. ಆದರೆ ಅವರು ಹಾಗೆ ಮಾಡಲಿಲ್ಲ. ಅವರು ತಮ್ಮ ಗಳಿಕೆಯ ಶೇಕಡಾ ಐದರಷ್ಟಾನದರೂ ಸಮಾಜದ ಕಲ್ಯಾಣಕ್ಕೆ ಬಳಸಬೇಕುʼʼ ಅನ್ನುವ 1956ರ ಹಿಂದಿ ಭಾಷಣ ಸಹ ಗಮನಾರ್ಹ.

ಅಮೇರಿಕಾದ ವರ್ಣಬೇಧ ನೀತಿಯ ವಿರುದ್ಧ ಹೋರಾಡಿದ ಮಾರ್ಟಿನ್ ಲೂಥರ್ ಕಿಂಗ್ ಅವರ ʻನನಗೊಂದು ಕನಸಿದೆʼ ಭಾಷಣ ಜಗತ್ತಿನಾದ್ಯಂತ ಎಲ್ಲಿ ಶೋಷಣೆ ಕಂಡುಬಂದರೂ ಅದನ್ನು ವಿರೋಧಿಸುವವರಿಗೆ ಮಂತ್ರ ವಾಯಿತು.

ʻʻಸಮಾನತೆ ಹಾಗೂ ಸ್ವಾತಂತ್ರ‍್ಯ ನಮ್ಮ ಜೀವ ಉಳಿಸುವ ಮೌಲ್ಯಗಳು. ಇವುಗಳನ್ನು ಪಡೆಯಲು ನಾನು ನನ್ನ ಜೀವನದಾದ್ಯಂತ ಹೋರಾಡುತ್ತೇನೆ. ಅಗತ್ಯ ಬಿದ್ದರೆ ನನ್ನ ಪ್ರಾಣ ಕೊಡಲೂ ಸಹ ತಯಾರುʼʼ ಎಂದು ರಿವೋನಿಯಾದ ನ್ಯಾಯಾಲಯದಲ್ಲಿ ದಕ್ಷಿಣ ಆಫ್ರಿಕಾದ ನಾಯಕ ನೆಲ್ಸನ್ ಮಂಡೇಲಾ ಮಾಡಿದ ಭಾಷಣ ಇಡೀ ಆಫ್ರಿಕಾ ಖಂಡದಲ್ಲಿ ಮಾರ್ದನಿ ಗೈದಿತು.

ಅಮೇರಿಕಾದ ಕರಿಯರ ನಾಯಕ ಫ್ರೆಡರಿಕ್ ಡಗ್ಲಸ್ ಅವರು ʻʻನೀವು ನಮಗೆ ತೋರಿಸುತ್ತಿರುವ ಕರುಣೆ ಸುಳ್ಳು ಮತ್ತು ತೋರಿಕೆಯಿಂದ ಕೂಡಿದ್ದು. ಅದು ನಿನ್ನೆಯೂ ಸುಳ್ಳಾಗಿತ್ತು. ಇಂದೂ ಸುಳ್ಳಾಗಿದೆ, ನಾಳೆಯೂ ಸುಳ್ಳಾಗಿಯೇ ಇರಲಿದೆʼʼ ಅಂತ ರಸ್ತೆ ಬದಿಯಲ್ಲಿ ಮಾಡಿದ ಭಾಷಣ ಅನೇಕ ಬಿಳಿಯರ ಹೃದಯ ಪರಿವರ್ತನೆಗೆ ಕಾರಣವಾಯಿತು.

ಜರ್ಮನಿಯ ವಿರುದ್ಧ ಹೋರಾಡಲು ಕೇವಲ ಒಂದು ವಾರ ಸಮಯ ಇದ್ದಾಗ ಬ್ರಿಟಿಷ್ ಪ್ರಧಾನಿ ವಿನಸ್ಟನ್ ಚರ್ಚಿಲ್ ಅವರು ಮಾಡಿದ ‘ನಾವು ಸತ್ತರೂ ಗೆದ್ದು ಸಾಯುತ್ತೇವೆ, ಇದ್ದರೂ ಗೆಲ್ಲುತ್ತೇವೆ. ಸಮುದ್ರ ದಂಡೆಯಲ್ಲೂ ಹೋರಾಡುತ್ತೇವೆ, ರಸ್ತೆಯಲ್ಲಿಯೂ ಹೋರಾಡುತ್ತೇವೆ, ಆಕಾಶದಲ್ಲಿ, ಸಮುದ್ರದಲ್ಲಿಯೂ ಹೋರಾಡುತ್ತೇವೆ. ನಮಗೆ ಇರುವ ಗುರು ಗೆಲುವು ಒಂದೇ’ ಅಂತ ಮಾಡಿದ ರೇಡಿಯೋ ಭಾಷಣ, ಅಲ್ಲಿನ ಯುವಕರನ್ನು ರೊಚ್ಚಿಗೆಬ್ಬಿಸಿತು. ಅವರು ದೊಡ್ಡ ಸಂಖ್ಯೆಯಲ್ಲಿ ಸೈನ್ಯ ಸೇರಿದರು, ಜರ್ಮನಿಯನ್ನು ಸೋಲಿಸಿದರು.

ಅಮೇರಿಕಾದ ಮಾಜಿ ಅಧ್ಯಕ್ಷ ಜಾನ್ ಕೆನಡಿ ಅವರು ಯಾವ ಮುಹೂರ್ತದಲ್ಲಿ ನಿಮ್ಮ ದೇಶ ನಿಮಗೇನು ಮಾಡಿದೆ ಅಂತ ಕೇಳಬೇಡಿ. ನೀವು ನಿಮ್ಮ ದೇಶಕ್ಕೆ ಏನು ಮಾಡಿದ್ದೀರಿ ಅಂತ ಕೇಳಿ ಅಂತ ಹೇಳಿದರೋ ಗೊತ್ತಿಲ್ಲ. ಇವತ್ತಿನ ಅನೇಕ ನಾಯಕರು ಅದೇ ಧಾಟಿಯಲ್ಲಿ ಮಾತನಾಡಲಿಕ್ಕೆ ಹತ್ಯಾರ. ನಮ್ಮ ಪ್ರಧಾನಿ ಮೋದಿ ಅವರು ಸಹ ಕೆನಡಿವಾದಿಗಳು ಅಂತ ಕಾಣತದ. ನಾಲ್ಕು ಸಲೆ ಭಾಷಣ ಮಾಡಿದರೂ ಸಹಿತ ನೀವು ಹಿಂಗ ಮಾಡ್ರಿ, ನೀವು ಹಂಗ ಮಾಡಬ್ಯಾಡ್ರಿ ಅಂತ ಹೇಳಿದರು ಹೊರತು, ನಾವು ಏನು ಮಾಡಬೇಕು, ಏನು ಮಾಡಲಿಕ್ಕೆ ಹತ್ತೇವಿ ಅನ್ನೋದನ್ನ ಹೇಳಲಿಲ್ಲ.

ಅಮೇರಿಕಾ ಸ್ವಾತಂತ್ರ‍್ಯದ 300 ವರ್ಷದ ನಂತರ ಗೆದ್ದ ಕರಿಯ ಬರಾಕ್ ಒಬಾಮಾ ಅವರು ಮಾಡಿದ ಯಸ್ ವಿ ಕ್ಯಾನ್ ಭಾಷಣವನ್ನು ನೀವು ಮತ್ತ ಮತ್ತ ನೋಡಿದರ ಒಂದು ಮಜಾ ವಿಷಯ ತಿಳೀತದ. ಅವರು ನ್ಯೂಹೆಂಪಶಾಯರ್‌ನ ನೋಷುವಾದಲ್ಲಿ ಅವರ ಬೆಂಬಲಿಗರ ಮಧ್ಯ ಭಾಷಣ ಮಾಡತಾರ. ಬೆಂಬಲಿಗರ ʻʻಓಬಾಮಾ, ಓಬಾಮಾʼʼ ಅನ್ನುವ ಘೋಷಣೆಗಳ ನಡುವೆ ಆರಂಭವಾದ ಭಾಷಣ ಯಸ್ ವಿ ಕ್ಯಾನ್ ಅಂತ ಮುಕ್ತಾಯ ಆಗತದ.

ನಮ್ಮಲ್ಲೂ ಹಾಗಾಗಬಹುದೇ, ಮನೋಲ್ಲಾಸಿನಿ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...