Homeನೂರರ ನೋಟಆದರೂ ಸಹ ನನ್ನ ಬಾಯಿಂದ ‘ಮುಗಿಸಿಬಿಡಿ’ ಎಂಬ ಮಾತು ಬರಬಾರದಾಗಿತ್ತು ಎಂದು ಆತ್ಮ ಹೇಳುತ್ತದೆ: ದೊರೆಸ್ವಾಮಿ

ಆದರೂ ಸಹ ನನ್ನ ಬಾಯಿಂದ ‘ಮುಗಿಸಿಬಿಡಿ’ ಎಂಬ ಮಾತು ಬರಬಾರದಾಗಿತ್ತು ಎಂದು ಆತ್ಮ ಹೇಳುತ್ತದೆ: ದೊರೆಸ್ವಾಮಿ

ದೇವನೂರು ಮಹದೇವ ಮತ್ತು ಸಚಿವ ಸುರೇಶ್‌ಕುಮಾರ್ ಮಧ್ಯೆ ನಡೆದ ಈ ಪತ್ರ ವ್ಯವಹಾರ ಬಹಳ ಆತ್ಮೀಯತೆಯಿಂದ ಕೂಡಿದೆ. ರಾಗದ್ವೇಷರಹಿತವಾದ ಈ ಬಗೆಯ ಪತ್ರ ವ್ಯವಹಾರ ಸಮಾಜದಲ್ಲಿ, ದ್ವೇಷ ಬೆಳೆಸುವ ಈ ದಿನಗಳಲ್ಲಿ ಸಾಮರಸ್ಯ ತರಲು ಸಹಕಾರಿಯಾಗುವುದೆಂದು ನಾನು ಭಾವಿಸುತ್ತೇನೆ.

- Advertisement -
- Advertisement -

ನನ್ನ ವಿಷಯದಲ್ಲಿ ದೇವನೂರು ಮಹದೇವ ಮತ್ತು ಸಚಿವ ಸುರೇಶ್‌ಕುಮಾರ್ ಮಧ್ಯೆ ನಡೆದ ಪತ್ರ ವ್ಯವಹಾರವನ್ನು ಇಲ್ಲಿ ಮುದ್ರಿಸಲಾಗಿದೆ.

ಉಭಯತ್ರರೂ ನನ್ನ ಸ್ನೇಹಿತರು ಹಾಗೂ ಹಿತೈಷಿಗಳು. ದೇವನೂರು ಮಹದೇವ ಅವರು ತಮ್ಮ ಪತ್ರದಲ್ಲಿ ಅಸಲಿಯನ್ನು ನಕಲಿ ಮಾಡುವುದು ಸರಿಯೇ ಎಂದು ಪ್ರಶ್ನೆ ಮಾಡಿದ್ದಾರೆ. ನನ್ನ ಮೇಲೆ ಸಲ್ಲದ ಆರೋಪ ಹೊರೆಸಿ ನನ್ನನ್ನು ನಕಲಿ ಹೋರಾಟಗಾರ ಪಾಕ್ ಏಜೆಂಟ್ ಎಂದೆಲ್ಲ ಆಧಾರ ರಹಿತ ಆಪಾದನೆ ಮಾಡಿ ತೇಜೋವಧೆ ಮಾಡಿರುವ ಬಸವ ಗೌಡ ಯತ್ನಾಳ್ ನಾನು ನಕಲಿ ಪತ್ರಕರ್ತ, 38 ದಿನಗಳ ಪೌರವಾಣಿ ಸಂಪಾದಕ, ಅರುಳು ಮರುಳು ಎಂದೆಲ್ಲ ಅಪ್ಪಟ್ಟ ಸುಳ್ಳು ಆರೋಪಗಳನ್ನು ಮಾಡಿ ನನ್ನ ಚಾರಿತ್ರ್ಯ ವಧೆ ಮಾಡಿರುವ ಬಾಬುಕೃಷ್ಣಮೂರ್ತಿ ಮುಂತಾದ ಮಹನೀಯರೆಲ್ಲರನ್ನೂ ಕುರಿತು ದೇವನೂರು ಮಹದೇವ ನೊಂದು ನುಡಿದಿದ್ದಾರೆ.

ಮಹಾದೇವು ಮುಂದುವರೆದು ಕೊಳೆತ ಹಣ್ಣುಗಳ ಜೊತೆ ತಾಜಾ ಹಣ್ಣುಗಳು ಬೆರೆತುಹೊದಾಗ, ಅವೂ ಕೆಡಬಹುದೇ ಎಂದು ಪ್ರಶ್ನೆ ಮಾಡಿದ್ದಾರೆ. ಮಹದೇವರ ಈ ಮಾತು ಸುರೇಶ್‌ಕುಮಾರ್ ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಸುರೇಶ್‌ಕುಮಾರ್ ಅವರು ದೇವನೂರು ಮಹದೇವ ಅವರಿಗೆ ಈ ಪ್ರಶ್ನೆಗೆ ಉತ್ತರ ಕೊಡುವುದರಲ್ಲಿ ಮುಗ್ಗರಿಸಿ, ನನ್ನವರನ್ನು ಡಿಫೆಂಡ್ ಮಾಡಿಕೊಳ್ಳುವುದು ನನ್ನ ಧರ್ಮ ಎಂದು ಉತ್ತರಿಸಿದ್ದಾರೆ. ಅವರು ಯಾರನ್ನು ಡಿಫೆಂಡ್ ಮಾಡಿಕೊಂಡರು ಎಂಬುದನ್ನೂ ತಿಳಿಸಿದ್ದಾರೆ.


ಇದನ್ನೂ ಓದಿ: ದೊರೆಸ್ವಾಮಿಯವರ ವಿಚಾರವಾಗಿ ಎಸ್.ಸುರೇಶ್ ಕುಮಾರ್ ಅವರಿಗೆ ದೇವನೂರು ಮಹಾದೇವರವರು ಬರೆದ ಬಹಿರಂಗ ಪತ್ರ

ಇದನ್ನೂ ಓದಿ: ದೊರೆಸ್ವಾಮಿ ವಿಚಾರವಾಗಿ ದೇವನೂರು ಪತ್ರಕ್ಕೆ ಸುರೇಶ್‌ ಕುಮಾರ್‌ ಪ್ರತಿಕ್ರಿಯೆ..


ಬ್ರಿಟಿಷರ ವಿರುದ್ಧ ಅಷ್ಟೊಂದು ತೀವ್ರತೆಯಿಂದ ಹೋರಾಡಿದ ವೀರಸಾವರ್ಕರ್ ಕರಿನೀರುಶಿಕ್ಷೆ ಅನುಭವಿಸುವಾಗ ಏಕೆ ಶತ್ರು ಬ್ರಿಟಿಷರಿಗೆ ಶರಣಾಗತರಾದರು? ಬ್ರಿಟಿಷರು ಹಾಕಿದ ಎಲ್ಲ ಷರತ್ತುಗಳಿಗೆ ಅಂದರೆ ನಾನು ಬಿಡುಗಡೆಯಾದರೆ ನನ್ನ ಜಿಲ್ಲೆಬಿಟ್ಟು ಹೊರಗೆ ಓಡಾಡುವುದಿಲ್ಲ. ಪತ್ರಿಕೆಗಳಿಗೆ ಲೇಖನ ಬರೆಯುವುದಿಲ್ಲ. ನಿಮ್ಮ ಆಜ್ಞಾಪಾಲಕನಾಗಿರುತ್ತೇನೆ ಎಂದೆಲ್ಲ ಬರೆದುಕೊಡಲು ಅವರ ಮನಸ್ಸು ಹೇಗೆ ಒಪ್ಪಿಕೊಂಡಿತು? ಧರ್ಮ ಗ್ಲಾನಿ ಅವರಲ್ಲಿ ಹೇಗೆ ಉಂಟಾಯಿತು? ಎಂದು ವೀರ ಸಾವರ್ಕರ್ ನಡವಳಿಕೆಯನ್ನು ಒಪ್ಪಿಕೊಳ್ಳುವ ಮೊದಲು ಚಿಂತಿಸಬೇಡವೇ ಸುರೇಶ್‌ಕುಮಾರ್ ಅವರೇ?

ನನ್ನನ್ನು ಶಾಸನ ಸಭೆಯಲ್ಲಿ ಮೇಲ್ಮನೆ ಸದಸ್ಯ ಬಿಜೆಪಿ ಎಂಎಲ್‌ಸಿ ರವಿಕುಮಾರ್ ನನಗೆ ಅಂತರಾಷ್ಟ್ರೀಯ ವ್ಯಕ್ತಿಗಳ ಸಂಬಂಧ ಇದೆ ಎಂದು ವಿಧಾನ ಪರಿಷತ್ತಿನಲ್ಲಿ ಹೇಳಿದ್ದಾರೆ. ಮಂತ್ರಿ ಈಶ್ವರಪ್ಪನವರು ನಾನು ಯಾರದ್ದೋ ಜೊತೆಗಿರುವ ಫೋಟೊ ತೋರಿಸಿ ಪಾಕಿಸ್ತಾನದ ನಂಟು ನನಗಿದೆ ಎಂದು ವಿಧಾನಸಭೆಯಲ್ಲಿ ಹೇಳಿದ್ದಾರೆ. ನಾನು ಅತಿಥಿಯಾಗಿ ಹೋಗಿರುವ ನೂರಾರು ಸಮಾರಂಭಗಳಲ್ಲಿ ಸಮಾರಂಭ ಮುಗಿದ ಮೇಲೆ ಜನ ನನ್ನ ಜೊತೆ ಫೋಟೊ ತೆಗೆಸಿಕೊಳ್ಳಲು ಮುಗಿಬೀಳುತ್ತಾರೆ. ಹೀಗೆ ಫೋಟೊ ತೆಗೆಸಿಕೊಂಡವರು ಸಾವಿರಾರು ಜನ, ಅದರಲ್ಲಿ ಇದೂ ಒಂದಿರಬಹುದು. ಅಷ್ಟಕ್ಕೇ ನನ್ನನ್ನು ನಕ್ಸಲಿಯ, Anti National, ಪಾಕಿಸ್ತಾನಿ ಏಜೆಂಟ್ ಎಂದು ಕರೆಯವರು ಮೊದಲು ನನ್ನ ಅರಾಷ್ಟ್ರಿಕತೆಗೆ, ಪಾಕಿಸ್ತಾನ್ ಏಜೆಂಟ್ ಎಂಬುದಕ್ಕೆ ಬೇರೆ ಪುರಾವೆಗಳನ್ನು ನೀಡುವ ಒಂದು ಫೋಟೊ ತೋರಿಸಿ. ಇಂತಹ ಗುರುತರ ಆಪಾದನೆ ಮಾಡುವುದು ಮಂತ್ರಿವರ್ಯರಿಗೆ, ಶಾಸಕರಿಗೆ ಗೌರವ ತರುವುದಿಲ್ಲ.

ಅನಂತಕುಮಾರ್ ರಾಷ್ಟ್ರವಿರೊಧಿ ವ್ಯಕ್ತಿ ಎಂದು ಹೇಳಿ ನನಗೆ ಧಿಕ್ಕಾರ ಹೇಳಿದ್ದು, ಮಂತ್ರಿಗಳಾದ ಸೋಮಣ್ಣ, ಈಶ್ವರಪ್ಪ ಮುಂತಾದವರು ನನ್ನ ಮೇಲೆ ಆರೊಪಗಳನ್ನು ಮಾಡಿದ್ದು ನಿಮಗೆ ಸಮ್ಮತ ಮತ್ತು ಅವರನ್ನೆಲ್ಲ ಬೆಂಬಲಿಸುವುದು ನಿಮ್ಮ ಧರ್ಮ ಎಂದು ನಿಮ್ಮ ಹೃದಯ ಒಪ್ಪುತ್ತದೆಯೇ?

ವೀರಸಾವರ್ಕರರಿಗೂ, ಭಗತ್‌ಸಿಂಗ್‌ಗೂ ಬ್ರಿಟಿಷರ ಬಗೆಗೆ ಒಂದೇ ಬಗೆಯ ಭಾವನೆ ಇತ್ತು. ಬ್ರಿಟಿಷರನ್ನು ಭಾರತದಿಂದ ಓಡಿಸಲು ಅವರದೇ ಕಾರ್ಯಕ್ರಮವಿತ್ತು, ಭಗತ್‌ಸಿಂಗ್‌ಗೆ ಮರಣದಂಡನೆ ವಿಧಿಸಿ ಸೆರೆಮನೆಯಲ್ಲಿಟ್ಟಿದ್ದರು. ಆಗ ಅವರ ತಂದೆ ಬ್ರಿಟಿಷರಿಗೆ ಪತ್ರ ಬರೆದು ‘ನನ್ನ ಮಗ ತಿಳಿಯದೆ ಈ ಹತ್ಯೆ ಮಾಡಿದ್ದಾನೆ ದಯವಿಟ್ಟು ಅವನಿಗೆ ಪ್ರಾಣಭಿಕ್ಷೆ ನೀಡಿ’ ಎಂದು ಪತ್ರ ಬರೆದಿರುವ ವಿಚಾರ ಭಗತ್‌ಸಿಂಗ್‌ಗೆ ಗೊತ್ತಾಯಿತು. ನನ್ನ ತಂದೆ ಪುತ್ರ ಮೋಹದಿಂದ ನನ್ನ ಪ್ರಾಣ ಉಳಿಸಲು ನಮ್ಮ ಶತ್ರುಗಳಾದ ಬ್ರಿಟಿಷರಲ್ಲಿ ನನ್ನ ಪ್ರಾಣಭಿಕ್ಷೆ ಕೋರಿದ್ದಾರೆ ಇವರೆಂತಹ ತಂದೆ! ನನ್ನನ್ನು ಬ್ರಿಟಿಷರು ಪ್ರಾಣಭಿಕ್ಷೆ ನೀಡಿ ಬಿಡುಗಡೆ ಮಾಡಿದರೂ ನಾನೂ ಬ್ರಿಟಿಷ್ ಅಧಿಕಾರಿಗಳನ್ನು ಕೊಲ್ಲುವ ಕಾರ್ಯವನ್ನು ಮುಂದುವರೆಸುತ್ತೇನೆ ಎಂದು ಘರ್ಜಿಸಿದರು.

ತನ್ನ ಉಸಿರುವವರೆಗೆ ದೇಶಭಕ್ತಿಯನ್ನು ಬೆಳಗಿದ ಭಗತ್‌ಸಿಂಗ್ ಎಲ್ಲಿ? ಹೋರಾಟದ ಮಧ್ಯೆಯೇ ಶತ್ರುವಿಗೆ ಶರಣಾಗತನಾಗಿ, ಸ್ವಾತಂತ್ರ್ಯ ಹೋರಾಟಕ್ಕೆ ಕಪ್ಪು ಮಸಿ ಬಳಿದ ವೀರಸಾವರ್ಕರ್ ಎಲ್ಲಿ? ತನ್ನವರನ್ನು ಬೆಂಬಲಿಸುವ ಆತುರದಲ್ಲಿ ಹೋರಾಟದ ಚರಿತ್ರೆಯನ್ನೇ ಮರೆತರು ಸಚಿವ ಸುರೇಶ್‌ಕುಮಾರ್!

ಇನ್ನು ಎರಡನೆಯ ವಿಷಯವೆಂದರೆ ನಾನು ಮೋದಿಯವರನ್ನು ಮುಗಿಸಿಬಿಡಿ ಎಂದು ಹೇಳಿದೆನೆಂಬುದು. ಈ ಮಾತನ್ನು ನಾನು ಆಡಿರುವುದು ಕರ್ನಾಟಕದಲ್ಲಿ ನಡೆದ ವಿಧಾನಸಭೆ ಚುನಾವಣೆ ಸಮಯದಲ್ಲಿ. ಮಹದೇವು ಈ ವಿಚಾರದಲ್ಲಿ ವಿವರಿಸಿ ಸಮಜಾಯಿಸಿ ನೀಡಿದ್ದಾರೆ. ಇದು ಚುನಾವಣೆ ಸಂದರ್ಭದಲ್ಲಿ ಹೇಳಿದ ಮಾತು. ಚುನಾವಣೆಯಲ್ಲಿ ಹೇಗಾದರೂ ಮಾಡಿ ವಿರೋಧ ಪಕ್ಷಗಳಾದ ಕಾಂಗ್ರೆಸ್, ಜಾತ್ಯಾತೀತ ಜನತಾದಳಗಳನ್ನು ಸೋಲಿಸಬೇಕೆಂದು ಮೋದಿ ಪಣ ತೊಟ್ಟಿದ್ದ ಸಂದರ್ಭ ಅದು. ಆದರೆ ಆ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಬೇಕಾದಷ್ಟು ಸ್ಥಾನಗಳು ಮೋದಿಯ ಬಿಜೆಪಿಗೆ ಲಭಿಸಲೇ ಇಲ್ಲ.

ಆದರೂ ಸಹ ನನ್ನ ಬಾಯಿಂದ ‘ಮುಗಿಸಿಬಿಡಿ’ ಎಂಬ ಮಾತು ಬರಬಾರದಾಗಿತ್ತು ಎಂದು ಆತ್ಮ ಹೇಳುತ್ತದೆ.

ದೇವನೂರು ಮಹದೇವ ಮತ್ತು ಸಚಿವ ಸುರೇಶ್‌ಕುಮಾರ್ ಮಧ್ಯೆ ನಡೆದ ಈ ಪತ್ರ ವ್ಯವಹಾರ ಬಹಳ ಆತ್ಮೀಯತೆಯಿಂದ ಕೂಡಿದೆ. ರಾಗದ್ವೇಷರಹಿತವಾದ ಈ ಬಗೆಯ ಪತ್ರ ವ್ಯವಹಾರ ಸಮಾಜದಲ್ಲಿ, ದ್ವೇಷ ಬೆಳೆಸುವ ಈ ದಿನಗಳಲ್ಲಿ ಸಾಮರಸ್ಯ ತರಲು ಸಹಕಾರಿಯಾಗುವುದೆಂದು ನಾನು ಭಾವಿಸುತ್ತೇನೆ.


ಇದನ್ನೂ ಓದಿ: ಊಟ, ಉದ್ಯೋಗ, ಸ್ವಾವಲಂಬನೆ ಎಲ್ಲರ ಹಕ್ಕಾಗಲಿ: 103ನೇ ಜನ್ಮದಿನದಂದು HS ದೊರೆಸ್ವಾಮಿಯವರ ಆಶಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...