Homeನಿಜವೋ ಸುಳ್ಳೋFact check: ಭಾವುಕರಾಗಿ ಅಳುವ 93ರ ಈ ವೃದ್ದ ಕೊರೊನಾದಿಂದ ಚೇತರಿಸಿದ ವ್ಯಕ್ತಿಯೇ?

Fact check: ಭಾವುಕರಾಗಿ ಅಳುವ 93ರ ಈ ವೃದ್ದ ಕೊರೊನಾದಿಂದ ಚೇತರಿಸಿದ ವ್ಯಕ್ತಿಯೇ?

- Advertisement -
- Advertisement -

ತನ್ನ ಪ್ರೇಯಸಿಗೆ ಬರೆದ ಹಳೆಯ ಪ್ರೇಮ ಪತ್ರ ಓದುತ್ತಾ ದುಃಖಿಸುವ ವೃದ್ದರೊಬ್ಬರ ಫೋಟೋವೊಂದನ್ನು ಕೊರೊನಾ ಸೋಕಿನಿಂದ ಚೇತರಿಕೆ ಹೊಂದಿದ ಇಟಲಿಯ ವ್ಯಕ್ತಿ ಎಂದು ಪ್ರತಿಪಾದಿಸಿ ಸಾಮಾಜಿಕ ಜಾಲತಾಣದಲ್ಲಿ ಹರಡಲಾಗಿದೆ.

ಈ ಚಿತ್ರ ಐದು ವರ್ಷದ ಹಿಂದಿನ ಚಿತ್ರವಾಗಿದ್ದು, ವಾಸ್ತವದಲ್ಲಿ ಆ ವ್ಯಕ್ತಿ ಇಟಲಿಯವರಲ್ಲ. ಚಿತ್ರದಲ್ಲಿ, ಕೊಲೊರಾಡೋ ಮೂಲದ ಬಿಲ್ ಮೂರ್‌ ಎಂಬ ಎರಡನೇ ಮಹಾಯುದ್ಧದಲ್ಲಿ ಭಾಗವಹಿಸಿದ ಮಾಜಿ ಸೈನಿಕ ತಾನು ಮದುವೆಯಾಗಲು ನಿಶ್ಚಿತ ಮಾಡಿಕೊಂಡಿದ್ದ ಪ್ರೇಯಸಿಗೆ ಬರೆದ ಪತ್ರವನ್ನು ಓದುತ್ತಾ ಭಾವುಕನಾಗುವುದು ಕಾಣಬಹುದಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲಾದ ಸಂದೇಶದಲ್ಲಿ, “93 ವರ್ಷದ ವ್ಯಕ್ತಿಯಲ್ಲಿ ವೆಂಟಿಲೇಟರ್ ಬಿಲ್ಲು ಕಟ್ಟುವಂತೆ ಹೇಳಿದಾಗ, ಇದುವರೆಗೆ ಯಾವುದೆ ಬಿಲ್ಲು ಪಡೆಯದೆ ಉಚಿತವಾಗಿ ಉಸಿರಾಡಿಸಿದ ದೇವರ ಅನುಗ್ರಹವನ್ನು ನೆನೆದು ಭಾವುಕನಾಗುತ್ತಾನೆ” ಎಂದು ಬಿತ್ತರಿಸಲಾಗಿದೆ.

ನಾನು ಬಿಲ್ಲು ಕಟ್ಟುತ್ತೇನೆ. ಹಣದ ಬಗ್ಗೆ ಚಿಂತೆಯಿಲ್ಲ. ಆದರೆ 93 ವರ್ಷಗಳ ಕಾಲ ಯಾವುದೇ ಹಣವಿಲ್ಲದೇ ನನಗೆ ಉಸಿರಾಡಲು ಅವಕಾಶ ಮಾಡಿಕೊಟ್ಟ ದೇವರ ಋಣವನ್ನು ಹೇಗೆ ತೀರಿಸಲಿ ಎಂದು ಭಾವುಕರಾಗಿದ್ದಾರೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.

? After the 93 year old man in Italy got better in the hospital, he was told to pay for the ventilator for one day, and…

Posted by Nermeen Mohamed Ezzat on Thursday, April 2, 2020

 

ಅಲ್ಲದೇ ಹಲವಾರು ಜನರು ಇದನ್ನು ಹೀಗೆಯೆ ಹಂಚಿಕೊಂಡಿದ್ದಾರೆ. ನೋಡಲು ಇಲ್ಲಿ ಕ್ಲಿಕ್ ಮಾಡಿ.

ಮೂರ್ ಅವರ ಚಿತ್ರ, ಇದೇ ರೀತಿಯ ನಿರೂಪಣೆಯೊಂದಿಗೆ ಇನ್‌ಸ್ಟಾಗ್ರಾಮ್ ಶೀರ್ಷಿಕೆಯಂತೆ ಕಾಣುವ ಸ್ಕ್ರೀನ್‌ಶಾಟ್ ಒಂದು ಬಿಜೆಪಿಯ ಮುಖಂಡ ಮತ್ತು ನಟ ಪರೇಶ್ ರಾವಲ್ ಅವರು ಟ್ವೀಟ್ ಮಾಡಿದ್ದಾರೆ. ತನ್ನ ಟ್ವೀಟ್‌ನಲ್ಲಿ ಅವರು, “ಮಾನವ ಜನಾಂಗವಾದ ನಾವು ಅರ್ಥಮಾಡಿಕೊಳ್ಳುತ್ತಿದ್ದೇವೆ ಎಂದು ಭಾವಿಸುತ್ತೇನೆ” ಎಂದು ಬರೆದಿದ್ದರು.

ಅಲ್ಲದೆ ಇನ್ನೂ ಕೆಲವರು ಇದನ್ನು ಟ್ವೀಟ್ ಮಾಡಿದ್ದರು.

 

ಇಟಲಿಯಲ್ಲಿ ಎರಡು ಕೊರೊನಾ ಪ್ರಕರಣಗಳು ವರದಿಯಾದ ನಂತರ, ಇಟಲಿಯೂ ಜನವರಿ 31 ರಿಂದ ಕೊರೊನಾ ತುರ್ತು ಪರಿಸ್ಥಿತಿಯನ್ನು ಘೋಷಿಸಿತು. ಇದುವರೆಗೆ ಇಟಲಿಯಲ್ಲಿ ಕೊರೊನಾ ಸೋಂಕಿನಿಂದ 19,468 ಸಾವುಗಳು ಮತ್ತು 32,534 ಚೇತರಿಕೆಯಾಗಿದ್ದಾರೆಂದು ವರದಿಯಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಚಿತ್ರವೂ ವೈರಲಾಗುತ್ತಿರುವುದರಿವಂದ “ಭೂಮ್ ಲೈವ್” ಚಿತ್ರದ ಬಗ್ಗೆ ಫ್ಯಾಕ್ಟ್ ಚೆಕ್ ನಡೆಸಿ, ಚಿತ್ರವು ಐದು ವರ್ಷ ಹಳೆಯದಾಗಿದೆ ಮತ್ತು ಇದು ಇಟಲಿಯಲ್ಲಿ ನಡೆದ ಘಟನೆಯಲ್ಲ ಎಂದು ಕಂಡುಕೊಂಡಿದೆ.

ಇದರ ಮೂಲ ಚಿತ್ರವನ್ನು ಮಾರ್ಚ್ 2015 ರಿಂದ ಎಬಿಸಿ ನ್ಯೂಸ್ ಎಂಬ ಸುದ್ದಿಜಾಲದ ವರದಿಯಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ಚಿತ್ರದಲ್ಲಿರವುದು ನಾನ್‌ಜೆಜೆನೇರಿಯನ್ ಕೊಲೊರಾಡೋ ಮೂಲದ ಎರಡನೇ ಮಹಾಯುದ್ಧದ ಮಾಜಿಸೈನಿಕ ಬಿಲ್ ಮೂರ್. ಯುದ್ಧದ ಸಮಯದಲ್ಲಿ ತನ್ನ ಪ್ರೇಯಸಿಗೆ ಅವರು ಬರೆದ ಪತ್ರ ಕಂಡುಬಂದಿದೆ ಎಂದು ತಿಳಿಸಿದ ನಂತರ ಅವರು ಭಾವುಕರಾಗಿದ್ದರು.

“1944 ರಲ್ಲಿ 20 ವರ್ಷ ಬಿಲ್ ಮೂರ್ ಅವರು ಬರ್ನಾಡಿಯನ್ ಎಂಬ ಯುವತಿಗೆ ಬರೆದ ಪತ್ರವನ್ನು 70 ವರ್ಷಗಳ ನಂತರ ಕಂಡು ಹಿಡಿದು ಓದಿದಾಗ ಮೂರ್ ಭಾವುಕರಗಿದ್ದರು. ವರದಿಯ ವೀಡಿಯೊದಲ್ಲಿ 52 ಸೆಕೆಂಡುಗಳ ನಂತರ ಮೂರ್‌ ಅಂಚೆಚೀಟಿ ಒಡೆಯುವುದನ್ನು ಕಾಣಬಹುದು.

ಇವರಿಗೂ ಕೊರೊನಾದಿಂದ ಗುಣಮುಖರಾದ ರೋಗಿಗೂ ಯಾವುದೇ ಸಂಬಂಧವಿಲ್ಲ. ತಪ್ಪಾಗಿ ಇವರ ಚಿತ್ರವನ್ನು ಬಳಸಿಕೊಳ್ಳಲಾಗಿದೆ ಅಷ್ಟೆ.

ಅಧೀಕೃತ ವರದಿಯಂತೆ ಇಟಲಿಯ ಆರೋಗ್ಯ ರಕ್ಷಣಾ ವ್ಯವಸ್ಥೆಯು ವೆಚ್ಚಗಳನ್ನು ಒಳಗೊಂಡಿದೆ. ರಾಷ್ಟ್ರೀಯ ಆರೋಗ್ಯ ಸೇವೆ (ಎನ್‌ಎಚ್‌ಎಸ್) ಅಡಿಯಲ್ಲಿ ಇಟಲಿಯ ಸಾರ್ವಜನಿಕವಾಗಿ ಧನಸಹಾಯ ಪಡೆದ ಆರೋಗ್ಯ ನೀತಿ ಸಾರ್ವತ್ರಿಕತೆಯನ್ನು ಒಳಗೊಳ್ಳುತ್ತದೆ ಮತ್ತು ಸ್ವಯಂಚಾಲಿತವಾಗಿ ಎಲ್ಲಾ ನಾಗರಿಕರು ಮತ್ತು ಕಾನೂನುಬದ್ಧ ವಿದೇಶಿ ನಿವಾಸಿಗಳು ಈ ವರ್ಗಕ್ಕೆ ಸೇರುತ್ತಾರೆ.

ಮತ್ತೊಂದು ವರದಿಯ ಪ್ರಕಾರ, ಆರೋಗ್ಯ ವ್ಯವಸ್ಥೆಯಲ್ಲಿ ಖಾಸಗಿ ಆರೋಗ್ಯ ವಿಮೆ ಸೀಮಿತ ಪಾತ್ರ ವಹಿಸುತ್ತದೆ. ಇಟಲಿಯಲ್ಲಿ ಖಾಸಗಿ ಆರೋಗ್ಯ ವಿಮೆ ಎರಡು ವಿಧದ ಕಾರ್ಪೊರೇಟ್ ಆಗಿದೆ, ಇದಕ್ಕಾಗಿ ಕಂಪನಿಗಳು ಸ್ವಂತ ಉದ್ಯೋಗಿಗಳನ್ನು ಮತ್ತು ಕೆಲವೊಮ್ಮೆ ಅವರ ಕುಟುಂಬಗಳನ್ನು ಒಳಗೊಳ್ಳುತ್ತವೆ. ಕಾರ್ಪೊರೇಟ್ ಅಲ್ಲದ ವ್ಯಕ್ತಿಗಳು ತಮ್ಮ ಅಥವಾ ತಮ್ಮ ಕುಟುಂಬಗಳಿಗೆ ವಿಮೆಯನ್ನು ಖರೀದಿಸಬಹುದು. ಆದ್ದರಿಂದ ಇಟಲಿಯಲ್ಲಿ ಆರೋಗ್ಯ ಸೇವೆಗಳ ವಿಮೆಯನ್ನು ಪಡೆದ ನಂತರ ರೋಗಿಗಳು ವೈಯಕ್ತಿಕವಾಗಿ ಪಾವತಿಸುವ ಸಾಧ್ಯತೆ ಕಡಿಮೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...