Homeಮುಖಪುಟಹಸಿವಿನ ಅಲೆಯಬ್ಬರಕ್ಕೆ ಪರಿಹಾರ ಹುಡುಕುತ್ತಾ : ಲಾಕ್‌ಡೌನ್‌ ಸ್ವಯಂಸೇವಕರೊಬ್ಬರ ಅನುಭವ ಬರಹ

ಹಸಿವಿನ ಅಲೆಯಬ್ಬರಕ್ಕೆ ಪರಿಹಾರ ಹುಡುಕುತ್ತಾ : ಲಾಕ್‌ಡೌನ್‌ ಸ್ವಯಂಸೇವಕರೊಬ್ಬರ ಅನುಭವ ಬರಹ

ಲಾಕ್‍ಡೌನ್‍ನಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರಿಗೆ ದುಡ್ಡು ಮತ್ತು ಆಹಾರ ಇವರೆಡನ್ನೂ ವೈರುಧ್ಯಗಳೆಂದು ನೋಡಬಾರದು. ಇಂತಹ ಸಮಯದಲ್ಲಿ ಉಚ್ಚ ನ್ಯಾಯಾಲಯವು ಸಂಕಷ್ಟಕ್ಕೆ ಈಡಾದವರಿಗೆ ಹೇಗೆ ಸಹಾಯ ಮಾಡಬೇಕೆನ್ನುವುದನ್ನು ನೋಡಬೇಕೆ ಹೊರತು ಕಡೆಗಣಿಸಬಾರದು.

- Advertisement -
- Advertisement -

ಒಂದು ವರ್ಷದ ಮಗು ಇದೆ, ಮಗುವಿಗೆ ಹಾಲು ಕೊಳ್ಳಲೂ ಹಣವಿಲ್ಲ’. ಇದನ್ನು ಹೇಳಿದ್ದು ತಮಿಳುನಾಡಿನ ತಿರುಪುರಿನಲ್ಲಿ ದಿನಗೂಲಿ ಕೆಲಸ ಮಾಡುವ ಕೃಷ್ಣ. ಝಾರ್ಖಂಡದಿಂದ ಕೆಲಸ ಅರಸುತ್ತ ಬಂದ ಕೃಷ್ಣನಿಗೆ ಲಾಕ್‍ಡೌನ್ ಆದಾಗಿನಿಂದ ಯಾವುದೇ ಕೂಲಿ ದುಡ್ಡು ಸಿಕ್ಕಿಲ್ಲ. ಬಿಹಾರದಿಂದ ಬಂದ ಪಂಪಿ ಕುಮಾರಿ ಮತ್ತು ಆಕೆಯ ಗಂಡ ಇಬ್ಬರೂ ಹರಿಯಾಣದ ಗುರುಗ್ರಾಮದಲ್ಲಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಗಂಡ ಕಟ್ಟಡ ಕಾರ್ಮಿಕನಾಗಿ ದುಡಿದರೆ, ಈಕೆ ಒಂದು ಮೆಡಿಕಲ್ ಸರಬರಾಜು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಆಕೆಗೆ ಲಿವರ್ ಸಮಸ್ಯೆಯಾಗಿ ಇತ್ತೀಚಿನ ದಿನಗಳಲ್ಲಿ ಕೆಲಸಕ್ಕೆ ಹೋಗಲು ಆಗುತ್ತಿಲ್ಲ ಹಾಗೂ ಗಂಡನಿಗೆ ಲಾಕ್‍ಡೌನ್ ಆದಾಗಿನಿಂದ ದಿನಗೂಲಿ ಸಿಗುತ್ತಿಲ್ಲ. ಲಾಕ್‍ಡೌನ್ ಮುಗಿಯುವವರೆಗೆ ಅವರ ಬಳಿ ಇರುವುದು ಕೇವಲ ಇನ್ನೂರು ರೂಪಾಯಿ; ಪಂಪಿ ಕುಮಾರಿಯ ಚಿಕಿತ್ಸೆಗಾಗಿ ಈಗಾಗಲೇ 10,000 ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಸುರೇಶ್ ಯಾದವ ಕೂಡ ಝಾರ್ಖಂಡನವ, ಒರಿಸ್ಸಾದ ಸುಂದರಗಢದಲ್ಲಿ ವಾಹನ ಚಾಲಕನ ಕೆಲಸ ಮಾಡುತ್ತಿದ್ದ ಸುರೇಶ ಈಗ ಕೆಲಸವಿಲ್ಲದೇ ಅಲ್ಲಿಯೇ ಸಿಕ್ಕಿಕೊಂಡಿದ್ದಾರೆ. ಮಾರ್ಚ್ 24ರಿಂದ ಆತನ ವಾಹನ ಮನೆ ಬಿಟ್ಟು ಹೊರಗೆ ಹೋಗಿಲ್ಲ ಹಾಗೂ ಈಗ ಅವನ ಬಳಿ ಇರುವುದು ಕೇವಲ 50 ರೂಪಾಯಿ. ಅಡುಗೆ ಮಾಡಲು ಅವನ ಬಳಿ ಯಾವುದೇ ಸರಂಜಾಮುಗಳಿಲ್ಲ ಹಾಗೂ ಊಟ ವಿತರಿಸುವ ಕೇಂದ್ರಗಳಿಗೆ ಹೋಗಲು ದಾರಿಗಳೂ ಇಲ್ಲ.

ಇವುಗಳು ನನಗೆ ಟಾಲ್ಸ್ಟಾಯ್‍ನ ಕಾದಂಬರಿ ಅನ್ನಾ ಕರೆನಿನಾದ ಮೊದಲ ಸಾಲುಗಳು ನೆನಪಿಸುತ್ತಿವೆ; ‘ಎಲ್ಲಾ ಸುಖಿ ಕುಟುಂಬಗಳು ಒಂದೇ ತೆರ, ಆದರೆ ದುಃಖಿ ಕುಟುಂಬಗಳ ಸಂಕಷ್ಟಗಳು ಕುಟುಂಬದಿಂದ ಕುಟುಂಬಕ್ಕೆ ವಿಭಿನ್ನವಾಗಿರುತ್ತವೆ’.

ಲಾಕ್‍ಡೌನ್ ಮತ್ತು ಅದರ ವಿಸ್ತರಣೆಯ ವಿರುದ್ಧದ ಅಸಮಾಧಾನ ಮತ್ತು ಪ್ರತಿರೋಧದ ದೃಶ್ಯಗಳು ಇತ್ತೀಚಿಗೆ ಮುಂಬಯಿ ಮತ್ತು ಸೂರತ್‍ನಲ್ಲಿ ಕಂಡುಬಂದವು. ಸಾವಿರಾರು ಜನರು ಬೀದಿಗಿಳಿದಿದ್ದರು. ಅವರ ಬೇಡಿಕೆ ಅತ್ಯಂತ ಸರಳವಾಗಿತ್ತು; ಈ ಕಠಿಣ ಲಾಕ್‍ಡೌನ್‍ನಿಂದ ಆದ ಹಾಗೂ ನಿರಂತರವಾಗಿ ಆಗುತ್ತಿರುವ ಆಘಾತ ತಪ್ಪಿಸಿಕೊಳ್ಳುವುದು ಹಾಗೂ ಮನೆಗೆ ಹೋಗಬೇಕೆನ್ನುವುದು; ಅಂದರೆ, ಮನುಷ್ಯನ ಮೂಲಭೂತ ಅವಶ್ಯಕತೆಗಳು.

ಲಾಕ್‍ಡೌನ್ ಆದಾಗಿನಿಂದ ವಾಲಂಟಿಯರ್‌ಗಳ ಗುಂಪೊಂದು (SWAN- Stranded Workers Action Network) ದೇಶಾದ್ಯಂತ ಇರುವ ವಲಸೆ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸುತ್ತಿದೆ. ಸಂಕಷ್ಟದಲ್ಲಿರುವ ಕಾರ್ಮಿಕರ ಕರೆಗಳನ್ನು ಸ್ವೀಕರಿಸಿ, ಮೂಲ ಅವಶ್ಯಕತೆಗಳ ಪೂರೈಕೆಗೆ ಹಣವನ್ನು ಟ್ರಾನ್ಸ್‍ಫರ್ ಮಾಡಲಾಗುತ್ತಿದೆ ಹಾಗೂ ಸ್ಥಳೀಯ ಸಂಘಸಂಸ್ಥೆಗಳು ಮತ್ತು ಆಡಳಿತಕ್ಕೆ ಸಂಪರ್ಕಿಸಲು ಸಹಾಯ ಮಾಡುತ್ತಿದೆ. ಮಾರ್ಚ್ 27ರಿಂದ ಎಪ್ರಿಲ್ 13ರ ತನಕ ಸುಮಾರು 10,000 ಕಾರ್ಮಿಕರಿಗೆ ಸಹಾಯ ಮಾಡಲಾಗಿದೆ. ಅದರ ವಿವರವಾದ ವರದಿಯನ್ನು ಕಳುಹಿಸಿಕೊಡಬಲ್ಲೆವು. ಈ ವರದಿ ಒಂದು ಅಧ್ಯಯನವಾಗಿರದೇ, ಸ್ವಾನ್ ಎಂಬ ಈ ವೇದಿಕೆ ಮಾಡಿದ ಸಹಾಯ ಕಾರ್ಯದ ಪರಿಣಾಮವಾಗಿದೆ. ಪರಿಹಾರ ಕಾರ್ಯ ನಡೆಯುತ್ತಲೇ ಇದೆ.

ಈ ವರದಿಯು ಕಲೆಹಾಕಿರುವ ದತ್ತಾಂಶಗಳನ್ನು ನೋಡಿದರೆ – ಸ್ವಾನ್ ಇನ್ನೂ ವಿಕಾಸಗೊಳ್ಳುತ್ತಿರುವ ಕಾರಣದಿಂದ ವರದಿಗಳ ಸ್ವರೂಪ ಒಂದೇ ತೆರನಾಗಿ ಇಲ್ಲದಿದ್ದರೂ – ಅತ್ಯಂತ ಮನಕಲುಕುವ ಚಿತ್ರಣವನ್ನು ತೆರೆದಿಡುತ್ತದೆ. ಸುಮಾರು 49% ಜನರ (2707 ಕಾರ್ಮಿಕರನ್ನು ಸಂಪರ್ಕಿಸಲಾದ ಬಳಿಕ ಬಂದ ಅಂಕಿಅಂಶ) ಬಳಿ ಕೇವಲ ಒಂದು ದಿವಸಕ್ಕಾಗಿ ಆಗುವಷ್ಟು ಆಹಾರ ಧಾನ್ಯಗಳಿದ್ದವು. 96% (9302 ಕಾರ್ಮಿಕರಲ್ಲಿ) ಜನರಿಗೆ ಸರಕಾರದಿಂದ ಆಹಾರಧಾನ್ಯಗಳು ತಲುಪಿರಲಿಲ್ಲ ಹಾಗೂ 70% (2293ರಲ್ಲಿ) ಜನರು ಯಾವುದೇ ರೀತಿಯ ತಯಾರಿಸಿದ ಆಹಾರ ಪಡೆದಿಲ್ಲ. ಹಾಗೂ 44% ಕರೆಗಳು ಊಟ ಇಲ್ಲದಕ್ಕೆ ಹಾಗೂ ಹಣ ಇಲ್ಲದ್ದಕ್ಕೆ ಬಂದ ತುರ್ತು ಕರೆಗಳಾಗಿದ್ದವು. ಹಸಿವಿನ ವೇಗವು ಪರಿಹಾರದ ವೇಗಕ್ಕಿಂತ ಹೆಚ್ಚಿರುವುದು ಅತ್ಯಂತ ದುರದೃಷ್ಟಕರವಾಗಿದೆ. ಲಾಕ್‍ಡೌನ್‍ನ ಮೂರನೆಯ ವಾರದಲ್ಲಿ ತಮ್ಮ ಬಳಿ ಕೇವಲ ಒಂದು ದಿವಸಕ್ಕಾಗುವಷ್ಟು ಆಹಾರಧಾನ್ಯಗಳಿವೆ ಎಂದು ಹೇಳಿದವರ ಸಂಖ್ಯೆ ಶೇಕಡ 36ರಿಂದ 49ಕ್ಕೆ ಏರಿಕೆ ಕಂಡಿತು. ಹಾಗೂ ಸರಕಾರದಿಂದ ಆಹಾರಧಾನ್ಯಗಳನ್ನು ಪಡೆದವರ ಸಂಖ್ಯೆ 1%ದಿಂದ 4%ರಷ್ಟು ಮಾತ್ರ ಹೆಚ್ಚಳ ಕಂಡಿದೆ.

ರಾಜ್ಯ ಸರಕಾರಗಳ ಅಭಿಪ್ರಾಯಗಳನ್ನು ಪರಿಗಣನೆಗೆ ತೆಗೆದುಕೊಳ್ಳದೇ ಕೇಂದ್ರವು ತೆಗೆದುಕೊಂಡ ಲಾಕ್‍ಡೌನ್‍ನ ಏಕಪಕ್ಷೀಯ ನಿರ್ಧಾರವು ಅಧಿಕಾರವರ್ಗಕ್ಕೆ ಮತ್ತು ವಲಸೆ ಕಾರ್ಮಿಕರಿಗೆ ಶಾಕ್ ನೀಡಿದಂತಾಗಿದೆ.

ರಾಜ್ಯ ಸರಕಾರಗಳ ಆಡಳಿತದ ಪ್ರತಿಕ್ರಿಯೆಗಳು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಭಿನ್ನವಾಗಿವೆ. ಕರ್ನಾಟಕದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತಿರಾಜ್‍ನ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್ ಅವರು ಆಹಾರಧಾನ್ಯಗಳ ತುರ್ತುಕರೆಗಳಿಗೆ ಮಾನವೀಯತೆಯಿಂದ ಮತ್ತು ತುರ್ತಾಗಿ ಸ್ಪಂದಿಸಿದ್ದಾರೆ. (ಕರ್ನಾಟಕದಲ್ಲಿ 33% ಕಾರ್ಮಿಕರ ಬಳಿ ಕೇವಲ ಒಂದು ದಿವಸಕ್ಕಾಗುವಷ್ಟು ಆಹಾರಧಾನ್ಯಗಳಿದ್ದವು.) ಆದರೆ, ಇತರ ರಾಜ್ಯಗಳ ಅಧಿಕಾರಸ್ಥರ ಪ್ರತಿಕ್ರಿಯೆಗಳು ಅಷ್ಟು ಸರಿಯಾಗಿದ್ದಿಲ್ಲ. ವಿಶೇಷವಾಗಿ ಮಹಾರಾಷ್ಟ್ರದ ಪ್ರತಿಕ್ರಿಯೆಯು ಕೆಟ್ಟದಾಗಿತ್ತು ಎನ್ನಬಹುದು. ಎಪ್ರಿಲ್ 20ರ ತನಕ, ಮಹಾರಾಷ್ಟ್ರದಿಂದ ನಮಗೆ ಕರೆ ಮಾಡಿದ 1366 ಕಾರ್ಮಿಕರಲ್ಲಿ 73% ಕ್ಕೂ ಹೆಚ್ಚು ಜನರ ಬಳಿ ಒಂದು ದಿನಕ್ಕೆ ಸಾಕಾಗುವಷ್ಟೂ ಆಹಾರಧಾನ್ಯವಿರಲಿಲ್ಲ.

ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಈಡಾದವರ ವಲಸೆಯನ್ನು ತಡೆಗಟ್ಟಲು ಗೃಹ ಸಚಿವಾಲಯವು ಮಾರ್ಚ್ 29ರಂದು ಒಂದು ಆದೇಶ ಹೊರಡಿಸಿತು. ಅದರಲ್ಲಿ ಕಾರ್ಮಿಕರಿಗೆ ಅವರ ಮಾಲೀಕರು ಸಂಪೂರ್ಣ ವೇತನವನ್ನು ನೀಡಬೇಕೆಂದು ಹಾಗೂ ಸಿಲುಕಿಕೊಂಡಿರುವ ಕಾರ್ಮಿಕರಿಂದ ಮನೆಯ ಮಾಲೀಕರು ಬಾಡಿಗೆ ಪಡೆಯಬಾರದು ಎಂದು ಹೇಳಲಾಗಿತ್ತು. ಆದರೆ, 90% (4503 ಜನರಲ್ಲಿ) ಕಾರ್ಮಿಕರು ಲಾಕ್‍ಡೌನ್ ಸಮಯದಲ್ಲಿ ತಮಗೆ ಯಾವುದೇ ವೇತನ ನೀಡಲಾಗಿಲ್ಲ ಎಂದು ಹೇಳಿದರು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯಿದೆ (2005), ಅಂತರರಾಜ್ಯ ವಲಸೆ ಕಾರ್ಮಿಕರ ಕಾಯಿದೆ (1979) ಹಾಗೂ ಬೀದಿ ವ್ಯಾಪಾರಿಗಳ ಕಾಯಿದೆ (2014) ಈ ಕಾಯಿದೆಗಳ ಅನುಗುಣವಾಗಿ ವಲಸೆ ಕಾರ್ಮಿಕರಿಗೆ ಸಂಬಂಧಿಸಿದಂತೆ ದಾಖಲೆ ಇಡುವುದು ಕಾನೂನಿನ ಪ್ರಕಾರ ಕಡ್ಡಾಯ. ಅದರೊಂದಿಗೆ, ಕಾರ್ಮಿಕರಿಗೆ ಸಂಪೂರ್ಣ ಮತ್ತು ಸಮಯಬದ್ಧವಾಗಿ ವೇತನ, ಸ್ಥಳಾಂತರ ಭತ್ಯೆ ಹಾಗೂ ಮನೆಗೆ ಪ್ರಯಾಣ ಮಾಡಲು ಇರುವ ಭತ್ಯೆಯನ್ನು ನೀಡುವುದನ್ನು ಕಡ್ಡಾಯಗೊಳಿಸುವ ಇತರ ಕಾಯಿದೆಗಳೂ ಇವೆ. ಹರ್ಷ್‍ಮಂದರ್ ಮತ್ತು ಅಂಜಲಿ ಭಾರದ್ವಾಜ್ ಅವರ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪ್ರತಿಕ್ರಿಯೆಯಾಗಿ ಭಾರತದ ಮುಖ್ಯ ನ್ಯಾಯಮೂರ್ತಿ ‘ಅವರಿಗೆ ಊಟ ನೀಡುತ್ತಿದ್ದರೆ, ಆಹಾರಕ್ಕಾಗಿ ಹಣವನ್ನೇಕೆ ನೀಡಬೇಕು?’ ಎಂದು ಹೇಳಿದ್ದರು. ಆದರೆ, ನಾವು ಮಾತನಾಡಿದ ಸುಮಾರು 200 ಕಾರ್ಮಿಕರಲ್ಲಿ 78%ಕ್ಕೂ ಹೆಚ್ಚು ಜನರ ಬಳಿ ಮುನ್ನೂರು ರೂಪಾಯಿಗಳಿಗಿಂತ ಕಡಿಮೆ ಹಣ ಇದೆ ಎಂದು ಹೇಳಿದ್ದಾರೆ. ಈ ಬಾಕಿ ಉಳಿದಿರುವ 300 ರೂಪಾಯಿಯಲ್ಲಿ ಅವರು ಸಾಬೂನು, ಎಣ್ಣೆ, ನೀರು, ತರಕಾರಿ, ಔಷಧಿ ಇತ್ಯಾದಿ ಕೊಳ್ಳಬೇಕು ಹಾಗೂ ತಮ್ಮ ಫೋನ್ ರಿಚಾರ್ಜ್ ಮಾಡಬೇಕು, ಮನೆ ಬಾಡಿಗೆ ಕಟ್ಟಬೇಕು ಹಾಗೂ ಮನೆಗೆ ಹಿಂತಿರುಗಬೇಕಿದೆ. ಅದಲ್ಲದೇ, 4503 ಕಾರ್ಮಿಕರಲ್ಲಿ 90% ಜನರಿಗೆ ಲಾಕ್‍ಡೌನ್‍ನಲ್ಲಿ ಯಾವುದೇ ವೇತನವನ್ನು ಪಡೆದಿಲ್ಲ. ಸುಮಾರು 10,000 ಕಾರ್ಮಿಕರ ಮಾರ್ಮಿಕ ಹೇಳಿಕೆಗಳ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಾಧೀಶರ ಪ್ರತಿಕ್ರಿಯೆಯು ಈ ಮಾನವೀಯ ಬಿಕ್ಕಟ್ಟಿನ ಹಾಗೂ ಹಣದ ಅಗತ್ಯಗಳನ್ನು ಕಡೆಗಣಿಸುತ್ತದೆ. ಲಾಕ್‍ಡೌನ್‍ನಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರಿಗೆ ದುಡ್ಡು ಮತ್ತು ಆಹಾರ ಇವರೆಡನ್ನೂ ವೈರುಧ್ಯಗಳೆಂದು ನೋಡಬಾರದು. ಇಂತಹ ಸಮಯದಲ್ಲಿ ಉಚ್ಚ ನ್ಯಾಯಾಲಯವು ಸಂಕಷ್ಟಕ್ಕೆ ಈಡಾದವರಿಗೆ ಹೇಗೆ ಸಹಾಯ ಮಾಡಬೇಕೆನ್ನುವುದನ್ನು, ಪರಿಹಾರ ನೋಡಬೇಕೆ ಹೊರತು ಕಡೆಗಣಿಸಬಾರದು.

635 ಶೈಕ್ಷಣಿಕ ತಜ್ಞರು ಮತ್ತು ಸಾಮಾಜಿಕ ಕಾರ್ಯಕರ್ತರು ತುರ್ತು ಪರಿಹಾರ ಕ್ರಮಗಳ ಸೂಚಿಯೊಂದಿಗೆ ಕೇಂದ್ರ ಸರಕಾರಕ್ಕೆ ಮಾರ್ಚ್ 24ರಂದು ಮನವಿ ಮಾಡಿಕೊಂಡಿದ್ದರು. ಅದರಲ್ಲಿ ಒಂದು ಕ್ರಮ, ತಳಮಟ್ಟದಲ್ಲಿರುವ 80% ಕುಟುಂಬಗಳಿಗೆ ಕನಿಷ್ಠ ಎರಡು ತಿಂಗಳ ಮಟ್ಟಿಗೆ ಪ್ರತಿ ತಿಂಗಳು ತಲಾ 7,000 ರೂಪಾಯಿಗಳ ತುರ್ತು ಧನ ಪರಿಹಾರವನ್ನು ನೀಡಬೇಕು ಎಂಬುದು. ಇಂತಹ ಪರಿಹಾರ ಕ್ರಮದ ಅಗತ್ಯ ಇದೆ ಎಂಬುದನ್ನು ಸರಕಾರದ್ದೇ ಅಂಕಿ ಅಂಶಗಳೇ ಧೃಢಪಡಿಸುತ್ತವೆ.

ಪಿರಿಯಾಡಿಕ್ ಲೇಬರ್ ಫೋರ್ಸ್ ಸರ್ವೇ(PLFS) ಪ್ರಕಾರ, ಸುಮಾರು 82% ಕುಟುಂಬಗಳ ಒಟ್ಟು ಆದಾಯ 18,000 ರೂಪಾಯಿಗಳಿಗಿಂದ ಕಡಿಮೆ; ಅಂದರೆ 7ನೇ ವೇತನ ಆಯೋಗ ನಿರ್ಧರಿಸಿದ ಕನಿಷ್ಠ ಬದುಕಿಗೆ ಅಗತ್ಯವಿರುವ ಆದಾಯಕ್ಕಿಂತ ಕಡಿಮೆ. ಹಾಗೂ 69% ಕುಟುಂಬಗಳು ದಿನಕ್ಕೆ (ಸರಾಸರಿ) 400 ರೂಪಾಯಿಗಿಂತ ಕಡಿಮೆ ಆದಾಯವನ್ನು ಹೊಂದಿದ್ದಾರೆ. ಲಾಕ್‍ಡೌನ್ ಆದಾಗಿನಿಂದ ಮೇಲಿನ ಮನವಿಯಲ್ಲಿಯ ಪರಿಹಾರ ಕ್ರಮಗಳೂ ಸಾಲುವುದಿಲ್ಲ ಅನಿಸುತ್ತದೆ. ಬೆಂಗಳೂರಿನಲ್ಲಿರುವ ಝಾರ್ಖಂಡಿನ ವಲಸೆ ಕಾರ್ಮಿಕ ನಮಮ್ನ್ನು ಸಂಪರ್ಕಿಸಿದಾಗ ಹೇಳಿದ್ದು; ತನ್ನ ಹೆಂಡತಿ ತನ್ನ ಹಸುಗೂಸಿಗೆ ಹಾಲುಣಿಸಲೂ ಆಗುತ್ತಿಲ್ಲ. ಏಕೆಂದರೆ ಕಳೆದ ಎರಡು ದಿನಗಳಿಂದ ಆಕೆ ಏನನ್ನೂ ತಿಂದಿರಲಿಲ್ಲ!

ಈ ಲೇಖನದಲ್ಲಿ ಅವರ ಗೌಪ್ಯತೆಯನ್ನು ಕಾಪಾಡಲು ಕಾರ್ಮಿಕರ ಹೆಸರುಗಳನ್ನು ಹೆಸರುಗಳನ್ನು ಬದಲಿಸಬೇಕೆ ಎಂದು ನಾವು ಚರ್ಚಿಸಿದೆವು. ಆದರೆ ಹಾಗೆ ಮಾಡಲಿಲ್ಲ. ಮೊದಲೇ ಸಮಾಜದಲ್ಲಿ ಯಾರ ಕಣ್ಣಿಗೂ ಕಾಣದಂತೆ ಇರುವ ಈ ಅನಾಮಧೇಯ ವ್ಯಕ್ತಿಗಳನ್ನು ಇನ್ನೂ ಎಷ್ಟಂತೆ ಅನಾಮಧೇಯವಾಗಿಸುವುದು? ಈ ವಿನಾಶದ ವ್ಯಾಪ್ತಿಯನ್ನು ಸರಿಪಡಿಸಲು ಇನ್ನೂ ಸಮಯವಿದೆ, ಈ ಸಂದರ್ಭವನ್ನು ನಾವು ಒಂದು ಕಲ್ಯಾಣ ರಾಜ್ಯವಾಗಿ ಮರು ಚಿಂತನೆ ಮಾಡಲು ಬಳಸಿಕೊಳ್ಳಬಹುದು ಹಾಗೂ ಎಲ್ಲರಿಗೂ ಘನತೆಯ ಮತ್ತು ಸುರಕ್ಷತೆಯ ಜೀವನವನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಮುಂದುವರೆಯಬಹುದು.

ಒಂದು ತುರ್ತು ಕ್ರಮವಾಗಿ, ಈಗಾಗಲೆ ಎಫ್‍ಸಿಐ ಗೋದಾಮುಗಳಲ್ಲಿ 7 ಕೋಟಿ 80 ಲಕ್ಷ ಟನ್ನುಗಳಷ್ಟು ಆಹಾರಧಾನ್ಯಗಳು ಇರುವುದರಿಂದ, ನಾವು ಉಚಿತ ಸಾರ್ವತ್ರಿಕ ಉಚಿತ ರೇಷನ್, ಆಹಾರ ವಿತರಿಸುವ ಕೇಂದ್ರಗಳನ್ನು ಹೆಚ್ಚಿಸುವುದು ಹಾಗೂ ಸಂಕಷ್ಟದಲ್ಲಿ ಸಿಲುಕಿಕೊಂಡಿರುವ ಕುಟುಂಬಗಳಿಗೆ ಕನಿಷ್ಠ ತಿಂಗಳಿಗೆ 7,000 ರೂಪಾಯಿಗಳನ್ನು ನೀಡಬೇಕೆಂದು ಆಗ್ರಹಿಸುತ್ತೇವೆ. ಮಹಿಳೆಯರಿಗೆ, ಅದರಲ್ಲೂ ಗರ್ಭಿಣಿಯರಿಗೆ ಪೌಷ್ಟಿಕಾಂಶಗಳ ನೀಡಬೇಕು ಹಾಗೂ ರೇಷನ್‍ನೊಂದಿಗೆ ಸ್ಯಾನಿಟರಿ ಪ್ಯಾಡ್‍ಗಳನ್ನು ಮಹಿಳೆಯರಿಗೆ ನೀಡಬೇಕು. ಈ ಕ್ರಮಗಳನ್ನು ಕೈಗೊಳ್ಳದಿದ್ದರೆ, ನಾವು ಹಸಿವು, ಅಪೌಷ್ಟಿಕತೆ, ಅಪರಾಧ ಮತ್ತು ಸಾವುಗಳ ಹಿಂದೆಂದೂ ಕಾಣ ಬಹುಆಯಾಮದ ಬಿಕ್ಕಟ್ಟನ್ನು ಕಾಣಲಿದ್ದೇವೆ.

(ಲಾಕ್‍ಡೌನ್‍ನಲ್ಲಿ ಸಿಲುಕಿಕೊಂಡವರ ನೆರವಿಗೆ ಧಾವಿಸಿದ 70ಕ್ಕೂ ಹೆಚ್ಚು ವಾಲಂಟಿಯರ್‌ಗಳಲ್ಲಿ ರಾಜೇಂದ್ರನ್ ಸಹಾ ಒಬ್ಬರು. ಅವರುಗಳೇ ಸೇರಿ ಮಾಡಿಕೊಂಡ ಗುಂಪು ಸ್ವ್ಯಾನ್. ಆ ಕೆಲಸದ ಭಾಗವಾಗಿ ತಯಾರಿಸಿದ ಈ ವರದಿಯು ಇನ್ನೊಂದು ರೂಪದಲ್ಲಿ ಬೇರೆಡೆಯೂ ಪ್ರಕಟವಾಗಿದೆ. ರಾಜೇಂದ್ರನ್ ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದಾರೆ.)


ಇದನ್ನೂ ಓದಿ: ಪ್ರಪಂಚವನ್ನೇ ಕಟ್ಟಿದ ಮೂಲನಿವಾಸಿಗಳ ಬದುಕು ಬೀದಿಗೆ ಬಿದ್ದಿದ್ದೇಕೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಈ ವಿಶಮ ಪರಿಸ್ಥಿತಿಯಲ್ಲಿ ಬಡವರ ಕಷ್ಟಕ್ಕೆ ನೆರವಾಗಬೇಕಿರುವುದು, ಸರ್ಕಾರಗಳ ಮೊದಲ ಕರ್ತವ್ಯ ಆಗಬೇಕು.

LEAVE A REPLY

Please enter your comment!
Please enter your name here

- Advertisment -

ಗಾಜಾ; ಗೊಂಬೆಯೊಂದಿಗೆ ‘ಅಂತ್ಯಕ್ರಿಯೆ’ ಆಟ ಆಡುವ ಎಳೆಯ ಮಕ್ಕಳ ವಿಡಿಯೋ ವೈರಲ್; ಸುತ್ತಲಿನ ಘಟನೆಯನ್ನು ಪುನರಾವರ್ತಿಸುವ ಮಕ್ಕಳು

ಅಕ್ಟೋಬರ್ 2023 ರಲ್ಲಿ ಇಸ್ರೇಲಿ ಮಿಲಿಟರಿ ದಾಳಿಯನ್ನು ಪ್ರಾರಂಭಿಸಿದ ನಂತರ ಗಾಜಾದಿಂದ ದುಃಖಕರ ದೃಶ್ಯಗಳು ಹೊರಹೊಮ್ಮುತ್ತಿವೆ. ಇತ್ತೀಚಿನ ಒಂದು ಘಟನೆಯಲ್ಲಿ, ಚಿಕ್ಕ ಮಕ್ಕಳು ಅಂತ್ಯಕ್ರಿಯೆಗಾಗಿ ಗೊಂಬೆಯನ್ನು ಹೊತ್ತುಕೊಂಡು ಹೋಗುವುದನ್ನು ಕಾಣಬಹುದು - ಇದು ಅವರು...

ದೆಹಲಿ| ಆಳವಾದ ಚರಂಡಿಗೆ ಬಿದ್ದು ನೈರ್ಮಲ್ಯ ಕಾರ್ಮಿಕ ಸಾವು; ನ್ಯಾಯಕ್ಕೆ ಆಗ್ರಹಿಸಿದ ಮೃತನ ಕುಟುಂಬ

ಮಾರ್ಚ್ 30 ರಂದು ಪೂರ್ವ ದೆಹಲಿಯ ದಿಲ್ಶಾದ್ ಗಾರ್ಡನ್ ಪ್ರದೇಶದಲ್ಲಿ ಸುರಕ್ಷತಾ ಸಾಧನಗಳಿಲ್ಲದೆ ಆಳವಾದ ಚರಂಡಿ ಸ್ವಚ್ಛಗೊಳಿಸುವ ಸಮಯದಲ್ಲಿ ಯುವ ನೈರ್ಮಲ್ಯ ಕಾರ್ಮಿಕ ರಾಹುಲ್ ಎಂಬುವವರು ಸಾವನ್ನಪ್ಪಿದ್ದಾರೆ. ಮಧ್ಯಾಹ್ನ 2:00 ರ ಸುಮಾರಿಗೆ...

ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಆಸ್ಪತ್ರೆಗೆ ದಾಖಲು; ಕಾರ್ಯಕ್ರಮದಲ್ಲಿ ಏಕಾಏಕಿ ಕುಸಿದು ಬಿದ್ದು ಅಸ್ವಸ್ಥ

ಬೆಂಗಳೂರು: ಕರ್ನಾಟಕದ ನಿವೃತ್ತ ಲೋಕಾಯುಕ್ತ ಎನ್‌.ಸಂತೋಷ್‌ ಹೆಗ್ಡೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಭಾಷಣದ ವೇಳೆ ಕುಸಿದು ಬಿದ್ದು ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಏಪ್ರಿಲ್ 4ರ, ಶುಕ್ರವಾರ ಬೆಂಗಳೂರಿನ ಕೊಂಡಜಿ ಬಸಪ್ಪ ಸಭಾಂಗಣದಲ್ಲಿ...

ಎಸ್‌ಎಸ್‌ಎಲ್‌ಸಿಯಲ್ಲಿ ತೃತೀಯ ಭಾಷೆಗೆ ಗ್ರೇಡ್: ನಿರ್ಧಾರ ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ ರಾಜ್ಯಪಾಲ ಗೆಹ್ಲೋಟ್ 

ಬೆಂಗಳೂರು: 10ನೇ ತರಗತಿ ಪರೀಕ್ಷೆಯಲ್ಲಿ ತೃತೀಯ ಭಾಷೆಯ ವಿಷಯಕ್ಕೆ ಅಂಕಗಳನ್ನು ಬದಲಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ರಾಜ್ಯ ಸರ್ಕಾರವನ್ನು ಕೇಳಿದ್ದಾರೆ. ಸರ್ಕಾರವು ಈ ನಿರ್ಧಾರವನ್ನು "ಸಮಗ್ರವಾಗಿ ಪರಿಶೀಲಿಸಬೇಕು" ಎಂದು ಲೋಕಭವನವು...

ತಿರುಚ್ಚಿ ಪೂರ್ವದ ಪೆರಂಬೂರಿನಲ್ಲಿ ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಅಫಿಡವಿಟ್‌ಗಳಲ್ಲಿ ಹಲವು ವ್ಯತ್ಯಾಸಗಳಿರುವುದಾಗಿ ವರದಿ  

ಚೆನ್ನೈ: ನಟ ಮತ್ತು ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಎರಡು ಪ್ರತ್ಯೇಕ ಚುನಾವಣಾ ಅಫಿಡವಿಟ್‌ಗಳಲ್ಲಿ ವ್ಯತ್ಯಾಸಗಳು ಕಾಣಿಸಿಕೊಂಡಿದ್ದು, ವಿಧಾನಸಭಾ ಚುನಾವಣೆಗೆ ಮುನ್ನ ಕಾನೂನು ಮತ್ತು ರಾಜಕೀಯ ಪರಿಶೀಲನೆಗೆ ಅವಕಾಶ ನೀಡುವ ಸಾಧ್ಯತೆಯಿದೆ. ಪೆರಂಬೂರು ಮತ್ತು...

ಉತ್ತಮ್ ನಗರದಲ್ಲಿ ಶಾಂತಿ ಕಾಪಾಡುವಲ್ಲಿ ದೆಹಲಿ ಪೊಲೀಸರ ಪ್ರಯತ್ನಗಳನ್ನು ಶ್ಲಾಘಿಸಿದ ಎಪಿಸಿಆರ್

ಈದ್ ಅಲ್-ಫಿತರ್, ರಾಮ ನವಮಿ ಮತ್ತು ಹನುಮಾನ್ ಜಯಂತಿ ಸೇರಿದಂತೆ ಧಾರ್ಮಿಕ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿಯ ಉತ್ತಮ್ ನಗರ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿದ್ದಕ್ಕಾಗಿ ನಾಗರಿಕ ಹಕ್ಕುಗಳ ರಕ್ಷಣಾ...

ದಲಿತ ಸಮುದಾಯಕ್ಕೆ ಕ್ಷಮೆಯಾಚಿಸಿದ ನೇಪಾಳದ ಹೊಸ ಸರ್ಕಾರ

ಪ್ರಧಾನಿ ಬಾಲೇಂದ್ರ ಶಾ ಅವರ ನೇಪಾಳದ ಹೊಸ ಸರ್ಕಾರದ 100 ಅಂಶಗಳ ಸುಧಾರಣಾ ಕಾರ್ಯಸೂಚಿಯಡಿಯಲ್ಲಿ, ಮುಂದಿನ 15 ದಿನಗಳ ಒಳಗೆ ದಲಿತರು ಮತ್ತು ಐತಿಹಾಸಿಕವಾಗಿ ಹೊರಗಿಡಲ್ಪಟ್ಟ ಇತರೆ ಸಮುದಾಯಗಳಿಗೆ 'ಔಪಚಾರಿಕ ಕ್ಷಮೆಯಾಚನೆ' ಕೇಳುವುದಾಗಿ...

‘ಯಾರು ಹೆದರುತ್ತಾನೋ ಅವನು ಸತ್ತಂತೆ’: ರಾಘವ್ ಛಡ್ಡಾಗೆ ತೀವ್ರವಾಗಿ ಪ್ರತಿಕ್ರಿಯೆ ನೀಡಿದ ಎಎಪಿ ನಾಯಕ ಸೌರಭ್ ಭಾರದ್ವಾಜ್ 

ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮತ್ತು ದೆಹಲಿ ಘಟಕದ ಮುಖ್ಯಸ್ಥ ಸೌರಭ್ ಭಾರದ್ವಾಜ್ ಅವರು ವೀಡಿಯೊ ಸಂದೇಶದಲ್ಲಿ ಆಪ್ ಸಂಸದ ರಾಘವ್ ಛಡ್ಡಾ ಅವರು ಸಂಸತ್ತಿನಲ್ಲಿ "ಸಾಫ್ಟ್ ಪಿಆರ್" ನಲ್ಲಿ ತೊಡಗಿದ್ದಾರೆ...

ಚಂಡೀಗಢ ಬಿಜೆಪಿ ಕಚೇರಿ ಸ್ಫೋಟ: ಪಂಜಾಬ್ ಕೌಂಟರ್ ಇಂಟೆಲಿಜೆನ್ಸ್ ಪಡೆಯಿಂದ ಇಬ್ಬರು ಶಂಕಿತರ ಮನೆಗಳ ಮೇಲೆ ದಾಳಿ

ಚಂಡೀಗಢದಲ್ಲಿರುವ ಪಂಜಾಬ್ ಬಿಜೆಪಿ ಕಚೇರಿಯ ಹೊರಗೆ ಸ್ಫೋಟ ನಡೆಸಿದ ಆರೋಪದ ಮೇಲೆ ಇಬ್ಬರು ಶಂಕಿತರ ಮನೆಗಳ ಮೇಲೆ  ಪಂಜಾಬ್ ಪೊಲೀಸರ ಗುಪ್ತಚರ ನಿಗ್ರಹ ದಳವು ಇಂದು ಮುಂಜಾನೆ ದಾಳಿ ನಡೆಸಿದೆ.  ರೋಪರ್ ಜಿಲ್ಲೆಯ ಮೊರಿಂಡಾ ಪ್ರದೇಶದ...

‘ನನ್ನ ಮೌನವನ್ನು ಸೋಲು ಎಂದು ತಿಳಿಯಬೇಡಿ’’: ರಾಜ್ಯಸಭೆಯಲ್ಲಿ ಪದಚ್ಯುತಿಯ ನಂತರ ಎಎಪಿಗೆ ತಿರಗೇಟು ನೀಡಿದ ಸಂಸದ ರಾಘವ್ ಛಡ್ಡಾ

ರಾಜ್ಯಸಭೆಯಲ್ಲಿ ಪಕ್ಷದ ಉಪ ನಾಯಕನ ಸ್ಥಾನದಿಂದ ತೆಗೆದುಹಾಕಲ್ಪಟ್ಟ ಒಂದು ದಿನದ ನಂತರ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಛಡ್ಡಾ ಅವರು ಶುಕ್ರವಾರ "ನನ್ನ ಬಾಯಿ ಮುಚ್ಚಿಸಬಹುದು, ಸೋಲಿಸಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ. ಪಕ್ಷದ...