Homeಅಂಕಣಗಳುಬಿ. ಚಂದ್ರೇಗೌಡರ ಕಟ್ಟೆಪುರಾಣ - ಪ್ರವಾಹಕ್ಕೆ ಕಾಸು ಕೊಡದೋನು ಕೊರೋನಾಕ್ಕೆ ಕೊಟ್ಟನೆ

ಬಿ. ಚಂದ್ರೇಗೌಡರ ಕಟ್ಟೆಪುರಾಣ – ಪ್ರವಾಹಕ್ಕೆ ಕಾಸು ಕೊಡದೋನು ಕೊರೋನಾಕ್ಕೆ ಕೊಟ್ಟನೆ

- Advertisement -
- Advertisement -

‘ಅಂತು ಎಡೂರಪ್ಪ ಕಡಿಗೂ ವಸಿ ಸಡ್ಳ ಮಾಡಿದ’ ಎಂದ ವಾಟಿಸ್ಸೆ.

‘ಮೋದಿಗಿಂತ ಪರವಾಗಿಲ್ಲ ಕಣೊ ಎಡೂರಪ್ಪ’ ಎಂದ ಉಗ್ರಿ.

‘ಅಂಗರಿವುನೆ ಪ್ರಧಾನಿಯಾಗಬೇಕಿತ್ತು ಕಂಡ್ಳ’ ಎಂದಳು ಜುಮ್ಮಿ.

‘ನೀನೇಳದು ನಿಜಕಣಕ್ಕ ಎಡೂರಪ್ಪ ಪ್ರಧಾನಿಯಾಗಿದ್ರೆ ಚನ್ನಾಗಿತ್ತು’.

‘ಮೋದಿ ತರದೊನು ಪ್ರಪಂಚದಲ್ಲೇ ಇಲ್ಲ ಅಂತ ಆ ಚಡ್ಡಿ ಮಂಜ ಹೇಳಿಕಂಡು ತಿರುಗ್ತನೆ’.

‘ಅವುಂದಿರ್ಲಿ ಇನ್ಯಾವಳೊ ವಾಟ್ಸಾಪ್ ಮಾಡ್ಯವುಳೆ ಕಣೊ ಉಗ್ರೀ, ಮೋದಿ ಸಾಧನೆ ನೋಡಿದ್ರೆ ಅವುನಂಥೊನಿಲ್ಲ ಅಂದವುಳೆ’.

‘ಅವುಳ್ಯಾವಳ್ಳ’ ಎಂದಳು ಜುಮ್ಮಿ.

‘ಅವುಳ್ಯಾವಳು ಅನ್ನಕ್ಕೆ ಬರದಿಲ್ಲ ಕಣಕ್ಕ. ಒಂದೊಂದು ಸತಿ ಬಿಜೆಪಿಗಳೆ ಬೃಹನ್ನಳೆಯಾಗಿ ಮೋದಿ ಸಾಧನೆ ಒಂದು ಮಹಿಳೆ ಹೆಸರಲ್ಲಿ ವ್ಯಾಟ್ಸಾಪ್ ಮಾಡಿಬುಡ್ತವೆ. ಆಗೇನೀಸಗಂಡೀ’.

‘ಅಂಗೂ ಮಾಡ್ತವ’.

‘ಅಂಗೂ ಮಾಡ್ತವಾ ಅಂತಿಯಲ್ಲಕ್ಕ, ಅವು ಮಾಡದೆ ಅಂಗೆ’.

‘ಮೋದಿಯಾ ಅಂಗೆ ಹೊಗಳಿಬುಟ್ಟವುಳಲ್ಲ ಅವುನು ಬಂದಮ್ಯಾಲೆ ಏಟು ಜನ ಸತೃ ಗೊತ್ತೆ’ ಎಂದ ಉಗ್ರಿ.

‘ಏಟು ಜನ ಸತ್ತಿದ್ದರ್ಲ’.

‘ನೋಡೆ ಅವುನು ಗುಜರಾತಿನ ಮುಖ್ಯಮಂತ್ರಿಯಾದಾಗ ಸರಕಾರನೆ ಬಳಸಿ ಸಾವುರಾರು ಜನ ಸಾಬರು ಸಾಯಂಗೆ ಮಾಡಿದ’.

‘ನಿಜವೇನ್ಲ’.

‘ಮರತುಬುಟ್ಟೇನೆ ನೀನು, ಅದ್ಕೆ ಪೇಪರ್ ಓದದ ಕಲ್ತಕೊ ಅನ್ನದು’.

‘ಪೇಪರ್ರ ಮೋದಿನೆ ಓತ್ತನೊ ಇಲುವೊ ಅವುಳಿಗೇಳ್ತಿಯಲ್ಲೊ ಉಗ್ರಿ’.

‘ನಿಜ ಇವತ್ತಿನ ಪೇಪ್ರ ಓದ್ದೆಯಿದ್ರೂ ಆಯ್ತದೆ’ ಎಂದ ವಾಟಿಸ್ಸೆ.

‘ಟಿವಿ ನೊಡದೆಯಿದ್ರು ಆಯ್ತದೆ ಕಣೊ’ ಎಂದ ಉಗ್ರಿ.

‘ಮೋದಿಗೇನು ಹೇಳ್ಳ.

‘ಸಾರಿ ಕಣಕ್ಕ, ಮೋದಿ ರಾತ್ರೊ ರಾತ್ರಿ ನೋಟ್‍ಬ್ಯಾನ್ ಮಾಡಿದ. ಆಗ ನೂರಾರು ಜನ ಸತೃ. ನಮ್ಮ ಯಸ್ಸೆಂ ಕಿಸ್ಣನಳಿಯ ನೀರಿಗೆ ಬಿದ್ದು ತೀರೊದದ್ದು ಅದ್ಕೆಯಾ’.

‘ಪಾಪ ಅವುನ್ನ ನ್ಯನಿಸಿಗಂಡ್ರೆ ಹ್ವಟ್ಯಲ್ಲ ಉರಿತದೆ’.

‘ಅಮ್ಯಾಲೆ ಮೋದಿ ಸಿಎಎ ಅಂತ ತಂದ. ಅದರ ಗಲಾಟಿ ಗೋಲಿಬಾರಲ್ಲಿ ಜನ ಸತೃ. ಅದೂ ಸಾಬರು’.

‘ಅದ್ಕೆ ಸಾಬ್ರು ಕರೋನಾ ತಂದು ಹಬ್ಬುಸ್ತಾ ಅವುರೆ ಅಂತ ಚೆಡ್ಡಿ ಮಂಜ ಹೇಳತಿದ್ದ ಕಂಡ್ಳ’.

‘ಯಕ್ಕ ಚೆಡ್ಡಿ ಮಂಜನ ಮಾತ ಅತ್ತಗೆ ಮಡಗಿ ಯೋಚನೆ ಮಾಡು ಬಂಬಾಯಿಂದ ಸಾತೆನಳ್ಳಿಗೆ ಬಂದು ಸುತ್ಲಳ್ಳಿಗ್ಯಲ್ಲ ಕೊರೋನಾ ಹರಡಿದನಲ್ಲ ಅವುನು ಸಾಬರೋನಾ? ನಮ್ಮೋನೆ ಅಲವೇನಕ್ಕ’.

‘!?’

‘ಏನೂ ಬ್ಯಾಡವ್ವ, ತುಪ್ಪದಮಡಕ್ಕೆ ಇಬ್ರು ಬಂಬಾಯಿಂದ ಬಂದವುರೆ. ಅವು ನಮ್ಮ ಸಮಂದಿಕರೆಯ. ಅವುರು ಸಾಬರೆ’.

‘ಅದಿರ್ಲಿ ಕಣೊ ಕೆ.ಆರ್.ಪೇಟೆ ನಾರಾಯಣಗೌಡ ಬಂಬಾಯಿಂದ ಕರುಸ್ತಾ ಅವುನಲ್ಲ ಅವುರಿಗ್ಯಲ್ಲ ಕರೋನಾ ಹಟಕಾಯಿಸಿಗಂಡದೆ, ಅವುರ್ಯಾರು ಸಾಬರಲ್ಲ. ಯಲ್ಲ ನಮ್ಮೋರೆಯ ಇದಕೇನೇಳ್ತಿ’ ಎಂದ ಉಗ್ರಿ.

‘ಈ ಬಿಜೆಪಿಗಳೆ ಅಷ್ಟು ಕಣೊ. ಏನೇ ಆದ್ರು ಸಾಬರಮ್ಯಾಲಾಕ್ತರೆ. ಇಡೀ ದೇಸಕ್ಕೆ ಕರೋನಾ ಹರಡಿದೋರೆ ಅವುರು ಅಂತ ಹೇಳಿಕಂಡು ತಿರುಗ್ತ ಅವುರೆ ಏನು ಮಾಡನ’.

‘ಏನೂ ಮಾಡ ಬ್ಯಾಡ ಸುಳ್ಳೆಳೊ ಸೂಳೆ ಮಕ್ಕಳ ಬಾಯಿಮ್ಯಾಲೆ ಹ್ವಡಕಂಡೋಗಬೇಕು ಆಷ್ಟೆಯ’.

‘ಮೋದಿ ಏನೊ ಲಕ್ಷಾಂತೃಪಾಯಿ ದುಡ್ಡು ಕೊಡ್ತನಂತಲ್ಲಾ’.

‘ಯಾರಿಗೆ ಕೊಡ್ತನಕ್ಕ’.

‘ರೈತರು, ಕೂಲಿಮಾಡೋರು, ಕ್ವಟ್ಣಕುಟ್ಟೋರು ಯಲ್ಲಾರಿಗೂ ಲಕ್ಸ ಲಕ್ಸ ಕೊಡ್ತನಂತೆ’.

‘ಕೊಡ್ತನಿರು ಈಸ್ಕಳಿವೆ’.

‘ಅಂಗರೆ ಕೊಡಕಿಲ್ಲ ಅನ್ನು’.

‘ಅಕ್ಕಾ ಹಾದ್ನೆ ವರಸೆ, ಮಳೆ ವಡದು ಪ್ರವಾಹ ಬಂದು ಜನ ಮನೆ ಮಠ ಕಳಕಂಡು ಬೀದಿಗೆ ಬಿದ್ರು. ಆಗ ಸಿದ್ದರಾಮಯ್ಯ ಒಂದು ಲಕ್ಸ ಕೋಟಿ ಲಾಸಾಗ್ಯದೆ ಅಂದ. ಎಡೂರಪ್ಪ ಮುವ್ವತೆಂಟು ಸಾವುರ ಕೋಟಿ ಲಾಸು ಅಂತ ತೋರಿಸಿ ದುಡ್ಡು ಕೊಡಿ ಅಂತ ಮೋದಿಗೆ ಅರ್ಜಿ ಬರದ. ಆ ಅರ್ಜಿಗೆ ಇವತ್ತಿಗೂ ಉತ್ತರ ಕೊಟ್ಟಿಲ್ಲ ಇನ್ನ ಕೊರೋನಾಕ್ಕೆ ಕಾಸು ಕೊಡ್ತನೇನಕ್ಕ’.

‘ನಿಜವೇನ್ಲ ನೀನೇಳದು’.

‘ಮೋದಿ ತಾಯಿ ಆಣೆ ನಿಜಕಣಕ್ಕ’.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...