Homeಅಂಕಣಗಳುಬಿ. ಚಂದ್ರೇಗೌಡರ ಕಟ್ಟೆಪುರಾಣ - ಪ್ರವಾಹಕ್ಕೆ ಕಾಸು ಕೊಡದೋನು ಕೊರೋನಾಕ್ಕೆ ಕೊಟ್ಟನೆ

ಬಿ. ಚಂದ್ರೇಗೌಡರ ಕಟ್ಟೆಪುರಾಣ – ಪ್ರವಾಹಕ್ಕೆ ಕಾಸು ಕೊಡದೋನು ಕೊರೋನಾಕ್ಕೆ ಕೊಟ್ಟನೆ

- Advertisement -
- Advertisement -

‘ಅಂತು ಎಡೂರಪ್ಪ ಕಡಿಗೂ ವಸಿ ಸಡ್ಳ ಮಾಡಿದ’ ಎಂದ ವಾಟಿಸ್ಸೆ.

‘ಮೋದಿಗಿಂತ ಪರವಾಗಿಲ್ಲ ಕಣೊ ಎಡೂರಪ್ಪ’ ಎಂದ ಉಗ್ರಿ.

‘ಅಂಗರಿವುನೆ ಪ್ರಧಾನಿಯಾಗಬೇಕಿತ್ತು ಕಂಡ್ಳ’ ಎಂದಳು ಜುಮ್ಮಿ.

‘ನೀನೇಳದು ನಿಜಕಣಕ್ಕ ಎಡೂರಪ್ಪ ಪ್ರಧಾನಿಯಾಗಿದ್ರೆ ಚನ್ನಾಗಿತ್ತು’.

‘ಮೋದಿ ತರದೊನು ಪ್ರಪಂಚದಲ್ಲೇ ಇಲ್ಲ ಅಂತ ಆ ಚಡ್ಡಿ ಮಂಜ ಹೇಳಿಕಂಡು ತಿರುಗ್ತನೆ’.

‘ಅವುಂದಿರ್ಲಿ ಇನ್ಯಾವಳೊ ವಾಟ್ಸಾಪ್ ಮಾಡ್ಯವುಳೆ ಕಣೊ ಉಗ್ರೀ, ಮೋದಿ ಸಾಧನೆ ನೋಡಿದ್ರೆ ಅವುನಂಥೊನಿಲ್ಲ ಅಂದವುಳೆ’.

‘ಅವುಳ್ಯಾವಳ್ಳ’ ಎಂದಳು ಜುಮ್ಮಿ.

‘ಅವುಳ್ಯಾವಳು ಅನ್ನಕ್ಕೆ ಬರದಿಲ್ಲ ಕಣಕ್ಕ. ಒಂದೊಂದು ಸತಿ ಬಿಜೆಪಿಗಳೆ ಬೃಹನ್ನಳೆಯಾಗಿ ಮೋದಿ ಸಾಧನೆ ಒಂದು ಮಹಿಳೆ ಹೆಸರಲ್ಲಿ ವ್ಯಾಟ್ಸಾಪ್ ಮಾಡಿಬುಡ್ತವೆ. ಆಗೇನೀಸಗಂಡೀ’.

‘ಅಂಗೂ ಮಾಡ್ತವ’.

‘ಅಂಗೂ ಮಾಡ್ತವಾ ಅಂತಿಯಲ್ಲಕ್ಕ, ಅವು ಮಾಡದೆ ಅಂಗೆ’.

‘ಮೋದಿಯಾ ಅಂಗೆ ಹೊಗಳಿಬುಟ್ಟವುಳಲ್ಲ ಅವುನು ಬಂದಮ್ಯಾಲೆ ಏಟು ಜನ ಸತೃ ಗೊತ್ತೆ’ ಎಂದ ಉಗ್ರಿ.

‘ಏಟು ಜನ ಸತ್ತಿದ್ದರ್ಲ’.

‘ನೋಡೆ ಅವುನು ಗುಜರಾತಿನ ಮುಖ್ಯಮಂತ್ರಿಯಾದಾಗ ಸರಕಾರನೆ ಬಳಸಿ ಸಾವುರಾರು ಜನ ಸಾಬರು ಸಾಯಂಗೆ ಮಾಡಿದ’.

‘ನಿಜವೇನ್ಲ’.

‘ಮರತುಬುಟ್ಟೇನೆ ನೀನು, ಅದ್ಕೆ ಪೇಪರ್ ಓದದ ಕಲ್ತಕೊ ಅನ್ನದು’.

‘ಪೇಪರ್ರ ಮೋದಿನೆ ಓತ್ತನೊ ಇಲುವೊ ಅವುಳಿಗೇಳ್ತಿಯಲ್ಲೊ ಉಗ್ರಿ’.

‘ನಿಜ ಇವತ್ತಿನ ಪೇಪ್ರ ಓದ್ದೆಯಿದ್ರೂ ಆಯ್ತದೆ’ ಎಂದ ವಾಟಿಸ್ಸೆ.

‘ಟಿವಿ ನೊಡದೆಯಿದ್ರು ಆಯ್ತದೆ ಕಣೊ’ ಎಂದ ಉಗ್ರಿ.

‘ಮೋದಿಗೇನು ಹೇಳ್ಳ.

‘ಸಾರಿ ಕಣಕ್ಕ, ಮೋದಿ ರಾತ್ರೊ ರಾತ್ರಿ ನೋಟ್‍ಬ್ಯಾನ್ ಮಾಡಿದ. ಆಗ ನೂರಾರು ಜನ ಸತೃ. ನಮ್ಮ ಯಸ್ಸೆಂ ಕಿಸ್ಣನಳಿಯ ನೀರಿಗೆ ಬಿದ್ದು ತೀರೊದದ್ದು ಅದ್ಕೆಯಾ’.

‘ಪಾಪ ಅವುನ್ನ ನ್ಯನಿಸಿಗಂಡ್ರೆ ಹ್ವಟ್ಯಲ್ಲ ಉರಿತದೆ’.

‘ಅಮ್ಯಾಲೆ ಮೋದಿ ಸಿಎಎ ಅಂತ ತಂದ. ಅದರ ಗಲಾಟಿ ಗೋಲಿಬಾರಲ್ಲಿ ಜನ ಸತೃ. ಅದೂ ಸಾಬರು’.

‘ಅದ್ಕೆ ಸಾಬ್ರು ಕರೋನಾ ತಂದು ಹಬ್ಬುಸ್ತಾ ಅವುರೆ ಅಂತ ಚೆಡ್ಡಿ ಮಂಜ ಹೇಳತಿದ್ದ ಕಂಡ್ಳ’.

‘ಯಕ್ಕ ಚೆಡ್ಡಿ ಮಂಜನ ಮಾತ ಅತ್ತಗೆ ಮಡಗಿ ಯೋಚನೆ ಮಾಡು ಬಂಬಾಯಿಂದ ಸಾತೆನಳ್ಳಿಗೆ ಬಂದು ಸುತ್ಲಳ್ಳಿಗ್ಯಲ್ಲ ಕೊರೋನಾ ಹರಡಿದನಲ್ಲ ಅವುನು ಸಾಬರೋನಾ? ನಮ್ಮೋನೆ ಅಲವೇನಕ್ಕ’.

‘!?’

‘ಏನೂ ಬ್ಯಾಡವ್ವ, ತುಪ್ಪದಮಡಕ್ಕೆ ಇಬ್ರು ಬಂಬಾಯಿಂದ ಬಂದವುರೆ. ಅವು ನಮ್ಮ ಸಮಂದಿಕರೆಯ. ಅವುರು ಸಾಬರೆ’.

‘ಅದಿರ್ಲಿ ಕಣೊ ಕೆ.ಆರ್.ಪೇಟೆ ನಾರಾಯಣಗೌಡ ಬಂಬಾಯಿಂದ ಕರುಸ್ತಾ ಅವುನಲ್ಲ ಅವುರಿಗ್ಯಲ್ಲ ಕರೋನಾ ಹಟಕಾಯಿಸಿಗಂಡದೆ, ಅವುರ್ಯಾರು ಸಾಬರಲ್ಲ. ಯಲ್ಲ ನಮ್ಮೋರೆಯ ಇದಕೇನೇಳ್ತಿ’ ಎಂದ ಉಗ್ರಿ.

‘ಈ ಬಿಜೆಪಿಗಳೆ ಅಷ್ಟು ಕಣೊ. ಏನೇ ಆದ್ರು ಸಾಬರಮ್ಯಾಲಾಕ್ತರೆ. ಇಡೀ ದೇಸಕ್ಕೆ ಕರೋನಾ ಹರಡಿದೋರೆ ಅವುರು ಅಂತ ಹೇಳಿಕಂಡು ತಿರುಗ್ತ ಅವುರೆ ಏನು ಮಾಡನ’.

‘ಏನೂ ಮಾಡ ಬ್ಯಾಡ ಸುಳ್ಳೆಳೊ ಸೂಳೆ ಮಕ್ಕಳ ಬಾಯಿಮ್ಯಾಲೆ ಹ್ವಡಕಂಡೋಗಬೇಕು ಆಷ್ಟೆಯ’.

‘ಮೋದಿ ಏನೊ ಲಕ್ಷಾಂತೃಪಾಯಿ ದುಡ್ಡು ಕೊಡ್ತನಂತಲ್ಲಾ’.

‘ಯಾರಿಗೆ ಕೊಡ್ತನಕ್ಕ’.

‘ರೈತರು, ಕೂಲಿಮಾಡೋರು, ಕ್ವಟ್ಣಕುಟ್ಟೋರು ಯಲ್ಲಾರಿಗೂ ಲಕ್ಸ ಲಕ್ಸ ಕೊಡ್ತನಂತೆ’.

‘ಕೊಡ್ತನಿರು ಈಸ್ಕಳಿವೆ’.

‘ಅಂಗರೆ ಕೊಡಕಿಲ್ಲ ಅನ್ನು’.

‘ಅಕ್ಕಾ ಹಾದ್ನೆ ವರಸೆ, ಮಳೆ ವಡದು ಪ್ರವಾಹ ಬಂದು ಜನ ಮನೆ ಮಠ ಕಳಕಂಡು ಬೀದಿಗೆ ಬಿದ್ರು. ಆಗ ಸಿದ್ದರಾಮಯ್ಯ ಒಂದು ಲಕ್ಸ ಕೋಟಿ ಲಾಸಾಗ್ಯದೆ ಅಂದ. ಎಡೂರಪ್ಪ ಮುವ್ವತೆಂಟು ಸಾವುರ ಕೋಟಿ ಲಾಸು ಅಂತ ತೋರಿಸಿ ದುಡ್ಡು ಕೊಡಿ ಅಂತ ಮೋದಿಗೆ ಅರ್ಜಿ ಬರದ. ಆ ಅರ್ಜಿಗೆ ಇವತ್ತಿಗೂ ಉತ್ತರ ಕೊಟ್ಟಿಲ್ಲ ಇನ್ನ ಕೊರೋನಾಕ್ಕೆ ಕಾಸು ಕೊಡ್ತನೇನಕ್ಕ’.

‘ನಿಜವೇನ್ಲ ನೀನೇಳದು’.

‘ಮೋದಿ ತಾಯಿ ಆಣೆ ನಿಜಕಣಕ್ಕ’.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನುಡಿಯು ಸಿರಿಯಲ್ಲ ಬದುಕು’ ಕರಾವಳಿಯಲ್ಲಿ ಮತ್ತೆ ಪ್ರತಿರೋಧದ ಧ್ವನಿ: ನವೆಂಬರ್ 28-29ಕ್ಕೆ ‘ಜನನುಡಿ-2026’

"ನವೆಂಬರ್ ಕೊನೆಯ ಶನಿವಾರ ಮತ್ತು ಭಾನುವಾರ ಮಂಗಳೂರಿನಲ್ಲಿ ಕೇವಲ ವಿಚಾರ ಸಂಕಿರಣ ಮಾತ್ರವಲ್ಲ, ಹರಟೆ, ಚರ್ಚೆ, ಸೌಹಾರ್ದತೆಯ ಮೀನೂಟ ಹಾಗೂ ಪ್ರೀತಿಯೊಂದಿಗೆ ಸಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಹೊಸ ಬೆಳಕನ್ನು ಕಂಡುಕೊಳ್ಳಲಿದ್ದೇವೆ," ಎಂದು 'ಅಭಿಮತ...

‘ಟ್ರಂಪ್’ ಗಾಗಿ ಭಾರತದ ಹಿತವನ್ನು ಬಲಿ ಕೊಟ್ಟ ಕೇಂದ್ರ: E20 ಎಥೆನಾಲ್ ನೀತಿ ಹಿಂಪಡೆಯಲು ಕೇಜ್ರಿವಾಲ್ ಪಟ್ಟು

ವಾಹನಗಳ ಎಂಜಿನ್‌ಗೆ ಹಾನಿಯುಂಟುಮಾಡುತ್ತಿದೆ ಎಂದು ಆರೋಪಿಸಲಾದ ಇ20 (E20) ಎಥೆನಾಲ್ ಮಿಶ್ರಿತ ಪೆಟ್ರೋಲ್ ನೀತಿಯನ್ನು ಹಿಂಪಡೆಯುವಂತೆ ಆಗ್ರಹಿಸಿ, ದೇಶಾದ್ಯಂತ ಸಂಗ್ರಹಿಸಲಾಗಿದ್ದ 2.30 ಲಕ್ಷಕ್ಕೂ ಅಧಿಕ ಸಾರ್ವಜನಿಕ ಸಹಿಗಳ ಮನವಿ ಪತ್ರದೊಂದಿಗೆ ಪ್ರಧಾನಿ ನರೇಂದ್ರ...

ಗಾಝಾ | ಇಸ್ರೇಲ್ ನರಮೇಧಕ್ಕೆ ಬಲಿಯಾದ ಎರಡು ಕುಟುಂಬಗಳ 112 ಸದಸ್ಯರ ಸಾಮೂಹಿಕ ಅಂತ್ಯಸಂಸ್ಕಾರ: ಸಾವಿರಾರು ಜನರಿಂದ ಕಣ್ಣೀರ ವಿದಾಯ

ಇಸ್ರೇಲ್ ಬಾಂಬ್ ದಾಳಿಯಿಂದ ಧ್ವಂಸಗೊಂಡಿದ್ದ ಮನೆಗಳ ಅವಶೇಷಗಳ ಅಡಿಯಲ್ಲಿ ಇತ್ತೀಚೆಗೆ ಪತ್ತೆಯಾದ ಗಾಝಾದ ಹಸಾಯ್ನ ಮತ್ತು ಅಬು ಶರಿಯಾ ಕುಟುಂಬಗಳ 112 ಸದಸ್ಯರ ಮೃತದೇಹಗಳ ಅಂತ್ಯ ಸಂಸ್ಕಾರ ಮಂಗಳವಾರ (ಆ.4) ನಡೆಯಿತು. ಸಾವಿರಾರು...

E20 ಇಂಧನ ರಾದ್ಧಾಂತ: ನಾಗ್ಪುರದಲ್ಲಿ ಗಡ್ಕರಿ ಮನೆಗೆ ಮುತ್ತಿಗೆ ಯತ್ನ, ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನ

ಎಥೆನಾಲ್ ಮಿಶ್ರಿತ ಇ20 (E20) ಇಂಧನದಿಂದ ದೇಶದ ಲಕ್ಷಾಂತರ ವಾಹನ ಮಾಲೀಕರು ಎಂಜಿನ್ ಹಾನಿ ಮತ್ತು ಮೈಲೇಜ್ ಅಭಾವ ಎದುರಿಸುತ್ತಿದ್ದಾರೆ ಎಂಬ ಆಕ್ರೋಶದ ನಡುವೆಯೇ, ನಾಗ್ಪುರದಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್...

ರಾಜ್ಯದಲ್ಲಿ ‘SIR’ ಅವಾಂತರ: 1.ಕೋಟಿಗೂ ಹೆಚ್ಚು ಮತದಾರರನ್ನು ಹೊರಗಿಡಲು ಸಂಚು, ‘SIR ವಿರೋಧಿ ಕರ್ನಾಟಕ’ ಆಕ್ರೋಶ

ಕರ್ನಾಟಕದಲ್ಲಿ ಜಾರಿಯಲ್ಲಿರುವ ಬೂತ್ ಮಟ್ಟದ ಮತದಾರರ ಪಟ್ಟಿ ಸರಿಪಡಿಸುವ 'ಎಸ್‌ಐಆರ್' (SIR) ಪ್ರಕ್ರಿಯೆಯಲ್ಲಿ ಭಾರೀ ಅವ್ಯವಹಾರ ಮತ್ತು ಕಪಟತನ ನಡೆದಿದ್ದು, ರಾಜ್ಯದ ಶೇ. 20 ರಷ್ಟು (ಆಗಸ್ಟ್ 2026ರ ಹೊತ್ತಿಗೆ ಸುಮಾರು 1.10...

‘ಜನರು ಬಿಜೆಪಿಯಿಂದ ಅತೃಪ್ತರಾಗಿದ್ದಾರೆ…’: ದಾಟಿಯಾ ಉಪಚುನಾವಣೆಯಲ್ಲಿ ಗೆಲುವಿನ ನಂತರ ಆಡಳಿತ ಪಕ್ಷದ ವಿರುದ್ಧ ಘನಶ್ಯಾಮ್ ಸಿಂಗ್ ವಾಗ್ದಾಳಿ

ಭೋಪಾಲ್ (ಮಧ್ಯಪ್ರದೇಶ): ಮಧ್ಯಪ್ರದೇಶದ ದಾಟಿಯಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಶಾಸಕ ಘನಶ್ಯಾಮ್ ಸಿಂಗ್ ಅವರು, ತಮ್ಮ ಅಭೂತಪೂರ್ವ ಗೆಲುವನ್ನು ಬಿಜೆಪಿಯ 'ಭ್ರಷ್ಟಾಚಾರ'ಕ್ಕೆ ಸಾರ್ವಜನಿಕರು ನೀಡಿದ ತಕ್ಕ ಹಾಗೂ ಸೂಕ್ತ...

ಇಂದಿನ ವಿಚಾರಣೆ ಬಳಿಕ ಉದಯನಿಧಿ ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ನಿರ್ದೇಶನ

ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಬಂಧಿತರಾದ ತಮಿಳುನಾಡು ವಿಧಾನಸಭೆಯ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು, ವಿಚಾರಣೆಯಯ ಬಳಿಕ ಸ್ಟೇಷನ್ ಬೇಲ್ (ಠಾಣಾ ಜಾಮೀನು) ಮೇಲೆ ಬಿಡುಗಡೆ ಮಾಡುವಂತೆ ಮದ್ರಾಸ್ ಹೈಕೋರ್ಟ್...

ರಾಜೀನಾಮೆ ನೀಡಿದರೆ ಕೆಲವೇ ನಿಮಿಷಗಳಲ್ಲಿ ಅಂಗೀಕರಿಸುವೆ, ಸಚಿವ ಸ್ಥಾನ ವಂಚಿತರ ಬೆದರಿಕೆಗೆ ಸಿಎಂ ಡಿ.ಕೆ. ಶಿವಕುಮಾರ್ ವಾರ್ನಿಂಗ್

ಪಕ್ಷದ ಹಿತವೇ ಎಲ್ಲಕ್ಕಿಂತ ಮುಖ್ಯ. ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಯಾರಾದರೂ ರಾಜೀನಾಮೆ ಸಲ್ಲಿಸಿದರೆ, ಕೆಲವೇ ನಿಮಿಷಗಳಲ್ಲಿ ಅದನ್ನು ನಾನು ಅಂಗೀಕರಿಸುತ್ತೇನೆ" ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಶಾಸಕರ...

ನಮಗೆ ಚುನಾವಣಾ ರಾಜಕೀಯದ ಉದ್ದೇಶವಿಲ್ಲ, ಜನಾಂದೋಲನವೇ ನಮ್ಮ ಗುರಿ: ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ

ಕಾಕ್ರೋಚ್ ಜನತಾ ಪಾರ್ಟಿ (CJP) ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ಯಾವುದೇ ಉದ್ದೇಶವನ್ನು ಹೊಂದಿಲ್ಲ, ಬದಲಾಗಿ ದೇಶದ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲಿನ ಜನರ ನಂಬಿಕೆಯನ್ನು ಮರುಸ್ಥಾಪಿಸಲು ಬೃಹತ್ ಜನಾಂದೋಲನವನ್ನು ಕಟ್ಟುವುದೇ ನಮ್ಮ ಮೂಲ ಗುರಿ...

ನೀಟ್ ಪ್ರತಿಭಟನೆ: ಮಧ್ಯಪ್ರದೇಶ ಪೊಲೀಸರು ಧರ್ಮದ ಕಾರಣಕ್ಕೆ ನನ್ನ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ: ಜೆಎನ್‌ಯು ವಿದ್ಯಾರ್ಥಿ ನಾಯಕಿ ಡ್ಯಾನಿಶ್ ಅಲಿ ಆರೋಪ

ದೇಶದ ಶಿಕ್ಷಣ ವ್ಯವಸ್ಥೆಯ ಜವಾಬ್ದಾರಿಯನ್ನು ಪ್ರಶ್ನಿಸಿ ನಡೆದ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ, ಮಧ್ಯಪ್ರದೇಶ ಪೊಲೀಸರು ತಮ್ಮ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ ಎಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ...