Homeಅಂಕಣಗಳುಬಿ. ಚಂದ್ರೇಗೌಡರ ಕಟ್ಟೆಪುರಾಣ - ಪ್ರವಾಹಕ್ಕೆ ಕಾಸು ಕೊಡದೋನು ಕೊರೋನಾಕ್ಕೆ ಕೊಟ್ಟನೆ

ಬಿ. ಚಂದ್ರೇಗೌಡರ ಕಟ್ಟೆಪುರಾಣ – ಪ್ರವಾಹಕ್ಕೆ ಕಾಸು ಕೊಡದೋನು ಕೊರೋನಾಕ್ಕೆ ಕೊಟ್ಟನೆ

- Advertisement -
- Advertisement -

‘ಅಂತು ಎಡೂರಪ್ಪ ಕಡಿಗೂ ವಸಿ ಸಡ್ಳ ಮಾಡಿದ’ ಎಂದ ವಾಟಿಸ್ಸೆ.

‘ಮೋದಿಗಿಂತ ಪರವಾಗಿಲ್ಲ ಕಣೊ ಎಡೂರಪ್ಪ’ ಎಂದ ಉಗ್ರಿ.

‘ಅಂಗರಿವುನೆ ಪ್ರಧಾನಿಯಾಗಬೇಕಿತ್ತು ಕಂಡ್ಳ’ ಎಂದಳು ಜುಮ್ಮಿ.

‘ನೀನೇಳದು ನಿಜಕಣಕ್ಕ ಎಡೂರಪ್ಪ ಪ್ರಧಾನಿಯಾಗಿದ್ರೆ ಚನ್ನಾಗಿತ್ತು’.

‘ಮೋದಿ ತರದೊನು ಪ್ರಪಂಚದಲ್ಲೇ ಇಲ್ಲ ಅಂತ ಆ ಚಡ್ಡಿ ಮಂಜ ಹೇಳಿಕಂಡು ತಿರುಗ್ತನೆ’.

‘ಅವುಂದಿರ್ಲಿ ಇನ್ಯಾವಳೊ ವಾಟ್ಸಾಪ್ ಮಾಡ್ಯವುಳೆ ಕಣೊ ಉಗ್ರೀ, ಮೋದಿ ಸಾಧನೆ ನೋಡಿದ್ರೆ ಅವುನಂಥೊನಿಲ್ಲ ಅಂದವುಳೆ’.

‘ಅವುಳ್ಯಾವಳ್ಳ’ ಎಂದಳು ಜುಮ್ಮಿ.

‘ಅವುಳ್ಯಾವಳು ಅನ್ನಕ್ಕೆ ಬರದಿಲ್ಲ ಕಣಕ್ಕ. ಒಂದೊಂದು ಸತಿ ಬಿಜೆಪಿಗಳೆ ಬೃಹನ್ನಳೆಯಾಗಿ ಮೋದಿ ಸಾಧನೆ ಒಂದು ಮಹಿಳೆ ಹೆಸರಲ್ಲಿ ವ್ಯಾಟ್ಸಾಪ್ ಮಾಡಿಬುಡ್ತವೆ. ಆಗೇನೀಸಗಂಡೀ’.

‘ಅಂಗೂ ಮಾಡ್ತವ’.

‘ಅಂಗೂ ಮಾಡ್ತವಾ ಅಂತಿಯಲ್ಲಕ್ಕ, ಅವು ಮಾಡದೆ ಅಂಗೆ’.

‘ಮೋದಿಯಾ ಅಂಗೆ ಹೊಗಳಿಬುಟ್ಟವುಳಲ್ಲ ಅವುನು ಬಂದಮ್ಯಾಲೆ ಏಟು ಜನ ಸತೃ ಗೊತ್ತೆ’ ಎಂದ ಉಗ್ರಿ.

‘ಏಟು ಜನ ಸತ್ತಿದ್ದರ್ಲ’.

‘ನೋಡೆ ಅವುನು ಗುಜರಾತಿನ ಮುಖ್ಯಮಂತ್ರಿಯಾದಾಗ ಸರಕಾರನೆ ಬಳಸಿ ಸಾವುರಾರು ಜನ ಸಾಬರು ಸಾಯಂಗೆ ಮಾಡಿದ’.

‘ನಿಜವೇನ್ಲ’.

‘ಮರತುಬುಟ್ಟೇನೆ ನೀನು, ಅದ್ಕೆ ಪೇಪರ್ ಓದದ ಕಲ್ತಕೊ ಅನ್ನದು’.

‘ಪೇಪರ್ರ ಮೋದಿನೆ ಓತ್ತನೊ ಇಲುವೊ ಅವುಳಿಗೇಳ್ತಿಯಲ್ಲೊ ಉಗ್ರಿ’.

‘ನಿಜ ಇವತ್ತಿನ ಪೇಪ್ರ ಓದ್ದೆಯಿದ್ರೂ ಆಯ್ತದೆ’ ಎಂದ ವಾಟಿಸ್ಸೆ.

‘ಟಿವಿ ನೊಡದೆಯಿದ್ರು ಆಯ್ತದೆ ಕಣೊ’ ಎಂದ ಉಗ್ರಿ.

‘ಮೋದಿಗೇನು ಹೇಳ್ಳ.

‘ಸಾರಿ ಕಣಕ್ಕ, ಮೋದಿ ರಾತ್ರೊ ರಾತ್ರಿ ನೋಟ್‍ಬ್ಯಾನ್ ಮಾಡಿದ. ಆಗ ನೂರಾರು ಜನ ಸತೃ. ನಮ್ಮ ಯಸ್ಸೆಂ ಕಿಸ್ಣನಳಿಯ ನೀರಿಗೆ ಬಿದ್ದು ತೀರೊದದ್ದು ಅದ್ಕೆಯಾ’.

‘ಪಾಪ ಅವುನ್ನ ನ್ಯನಿಸಿಗಂಡ್ರೆ ಹ್ವಟ್ಯಲ್ಲ ಉರಿತದೆ’.

‘ಅಮ್ಯಾಲೆ ಮೋದಿ ಸಿಎಎ ಅಂತ ತಂದ. ಅದರ ಗಲಾಟಿ ಗೋಲಿಬಾರಲ್ಲಿ ಜನ ಸತೃ. ಅದೂ ಸಾಬರು’.

‘ಅದ್ಕೆ ಸಾಬ್ರು ಕರೋನಾ ತಂದು ಹಬ್ಬುಸ್ತಾ ಅವುರೆ ಅಂತ ಚೆಡ್ಡಿ ಮಂಜ ಹೇಳತಿದ್ದ ಕಂಡ್ಳ’.

‘ಯಕ್ಕ ಚೆಡ್ಡಿ ಮಂಜನ ಮಾತ ಅತ್ತಗೆ ಮಡಗಿ ಯೋಚನೆ ಮಾಡು ಬಂಬಾಯಿಂದ ಸಾತೆನಳ್ಳಿಗೆ ಬಂದು ಸುತ್ಲಳ್ಳಿಗ್ಯಲ್ಲ ಕೊರೋನಾ ಹರಡಿದನಲ್ಲ ಅವುನು ಸಾಬರೋನಾ? ನಮ್ಮೋನೆ ಅಲವೇನಕ್ಕ’.

‘!?’

‘ಏನೂ ಬ್ಯಾಡವ್ವ, ತುಪ್ಪದಮಡಕ್ಕೆ ಇಬ್ರು ಬಂಬಾಯಿಂದ ಬಂದವುರೆ. ಅವು ನಮ್ಮ ಸಮಂದಿಕರೆಯ. ಅವುರು ಸಾಬರೆ’.

‘ಅದಿರ್ಲಿ ಕಣೊ ಕೆ.ಆರ್.ಪೇಟೆ ನಾರಾಯಣಗೌಡ ಬಂಬಾಯಿಂದ ಕರುಸ್ತಾ ಅವುನಲ್ಲ ಅವುರಿಗ್ಯಲ್ಲ ಕರೋನಾ ಹಟಕಾಯಿಸಿಗಂಡದೆ, ಅವುರ್ಯಾರು ಸಾಬರಲ್ಲ. ಯಲ್ಲ ನಮ್ಮೋರೆಯ ಇದಕೇನೇಳ್ತಿ’ ಎಂದ ಉಗ್ರಿ.

‘ಈ ಬಿಜೆಪಿಗಳೆ ಅಷ್ಟು ಕಣೊ. ಏನೇ ಆದ್ರು ಸಾಬರಮ್ಯಾಲಾಕ್ತರೆ. ಇಡೀ ದೇಸಕ್ಕೆ ಕರೋನಾ ಹರಡಿದೋರೆ ಅವುರು ಅಂತ ಹೇಳಿಕಂಡು ತಿರುಗ್ತ ಅವುರೆ ಏನು ಮಾಡನ’.

‘ಏನೂ ಮಾಡ ಬ್ಯಾಡ ಸುಳ್ಳೆಳೊ ಸೂಳೆ ಮಕ್ಕಳ ಬಾಯಿಮ್ಯಾಲೆ ಹ್ವಡಕಂಡೋಗಬೇಕು ಆಷ್ಟೆಯ’.

‘ಮೋದಿ ಏನೊ ಲಕ್ಷಾಂತೃಪಾಯಿ ದುಡ್ಡು ಕೊಡ್ತನಂತಲ್ಲಾ’.

‘ಯಾರಿಗೆ ಕೊಡ್ತನಕ್ಕ’.

‘ರೈತರು, ಕೂಲಿಮಾಡೋರು, ಕ್ವಟ್ಣಕುಟ್ಟೋರು ಯಲ್ಲಾರಿಗೂ ಲಕ್ಸ ಲಕ್ಸ ಕೊಡ್ತನಂತೆ’.

‘ಕೊಡ್ತನಿರು ಈಸ್ಕಳಿವೆ’.

‘ಅಂಗರೆ ಕೊಡಕಿಲ್ಲ ಅನ್ನು’.

‘ಅಕ್ಕಾ ಹಾದ್ನೆ ವರಸೆ, ಮಳೆ ವಡದು ಪ್ರವಾಹ ಬಂದು ಜನ ಮನೆ ಮಠ ಕಳಕಂಡು ಬೀದಿಗೆ ಬಿದ್ರು. ಆಗ ಸಿದ್ದರಾಮಯ್ಯ ಒಂದು ಲಕ್ಸ ಕೋಟಿ ಲಾಸಾಗ್ಯದೆ ಅಂದ. ಎಡೂರಪ್ಪ ಮುವ್ವತೆಂಟು ಸಾವುರ ಕೋಟಿ ಲಾಸು ಅಂತ ತೋರಿಸಿ ದುಡ್ಡು ಕೊಡಿ ಅಂತ ಮೋದಿಗೆ ಅರ್ಜಿ ಬರದ. ಆ ಅರ್ಜಿಗೆ ಇವತ್ತಿಗೂ ಉತ್ತರ ಕೊಟ್ಟಿಲ್ಲ ಇನ್ನ ಕೊರೋನಾಕ್ಕೆ ಕಾಸು ಕೊಡ್ತನೇನಕ್ಕ’.

‘ನಿಜವೇನ್ಲ ನೀನೇಳದು’.

‘ಮೋದಿ ತಾಯಿ ಆಣೆ ನಿಜಕಣಕ್ಕ’.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

90 ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದೆ ಆದರೆ ಪ್ರಧಾನ್ ತಮ್ಮ ಕುರ್ಚಿಗೆ ಅಂಟಿಕೊಂಡಿದ್ದಾರೆ: ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ 'ನೀಟ್' (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ತಮ್ಮ ಆಕ್ರೋಶವನ್ನು ಮತ್ತಷ್ಟು ತೀವ್ರಗೊಳಿಸಿವೆ. ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ...

2023ರಿಂದ 20 ಸಾವಿರಕ್ಕೂ ಹೆಚ್ಚು ಪ್ಯಾಲೆಸ್ತೀನ್ ಮಕ್ಕಳನ್ನು ಹತ್ಯೆಗೈದ ಇಸ್ರೇಲ್; ಉದ್ದೇಶಪೂರ್ವಕ ‘ನರಮೇಧ’ ಎಂದ ವರದಿ

ಪ್ಯಾಲೆಸ್ತೀನ್ ಮಕ್ಕಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ಹತ್ಯೆ ಮಾಡುವ ಮೂಲಕ ಇಸ್ರೇಲ್‌ ಸೇನೆ ನರಮೇಧ ನಡೆಸಿದೆ ಎಂದು ವಿಶ್ವಸಂಸ್ಥೆಯ ಸ್ವತಂತ್ರ ಅಂತಾರಾಷ್ಟ್ರೀಯ ವಿಚಾರಣಾ ಆಯೋಗ ಮಂಗಳವಾರ (ಜೂ.23) ತಿಳಿಸಿದೆ. ಇಸ್ರೇಲ್ ಪಡೆಗಳು ಅಕ್ಟೋಬರ್ 2023ರಿಂದ ಈವರೆಗೆ...

ಮೀಸಲಾತಿ ರದ್ದುಗೊಳಿಸಲು ಬಿಜೆಪಿ ಮೂರನೇ ಎರಡರಷ್ಟು ಬಹುಮತ ಬಯಸುತ್ತಿದೆ: ಜೈರಾಮ್‌ ರಮೇಶ್‌

ಲೋಕಸಭೆಯಲ್ಲಿ ಬಿಜೆಪಿ ಮೂರನೇ ಎರಡರಷ್ಟು ಬಹುಮತಕ್ಕಾಗಿ ಶ್ರಮಿಸುತ್ತಿದೆ. ಏಕೆಂದರೆ, ಮೀಸಲಾತಿಯನ್ನು ಕೊನೆಗೊಳಿಸಲು ಸಂವಿಧಾನವನ್ನು ತಿದ್ದುಪಡಿ ಮಾಡುವುದು ಅದರ ನಿಜವಾದ ಮತ್ತು ಅಂತಿಮ ಗುರಿಯಾಗಿದೆ ಎಂದು ಕಾಂಗ್ರೆಸ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್...

ತಿರುವನಂತಪುರಂ | 20 ಬಿಜೆಪಿ ಕೌನ್ಸಿಲರ್‌ಗಳ ಪ್ರಮಾಣವಚನ ಅಸಿಂಧು : ಹೈಕೋರ್ಟ್ ಮಹತ್ವದ ಆದೇಶ

ತಿರುವನಂತಪುರಂ ಮಹಾನಗರ ಪಾಲಿಕೆಯ 20 ಬಿಜೆಪಿ ಕೌನ್ಸಿಲರ್‌ಗಳಿಗೆ ನಾಲ್ಕು ವಾರಗಳ ಒಳಗೆ ಮತ್ತೊಮ್ಮೆ ಪ್ರಮಾಣವಚನ ಸ್ವೀಕರಿಸುವಂತೆ ಕೇರಳ ಹೈಕೋರ್ಟ್ ಬುಧವಾರ (ಜೂ.24) ಆದೇಶಿಸಿದೆ. ಜನವರಿ ತಿಂಗಳಲ್ಲಿ ಕೌನ್ಸಿಲರ್‌ಗಳ ಪ್ರಮಾಣವಚನ ನಡೆದಿತ್ತು. ಡೆಪ್ಯುಟಿ ಮೇಯರ್...

ಎಸ್‌ಐಆರ್‌ನಿಂದ ಹೊರಗಿಡಲಾದ ಜನರಿಗೆ ಪಡಿತರ ನಿರಾಕರಣೆ ಪ್ರಶ್ನಿಸಿದ ಅರ್ಜಿ ತಿರಸ್ಕರಿಸಿದ ಸುಪ್ರೀಂ; ಕಲ್ಕತ್ತಾ ಹೈಕೋರ್ಟ್‌ಗೆ ಹೋಗಲು ಸೂಚನೆ

ನವದೆಹಲಿ: ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲಾದ ವ್ಯಕ್ತಿಗಳಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆಯ (ಪಿಡಿಎಸ್) ಪಡಿತರ ಸೌಲಭ್ಯ ಸೇರಿದಂತೆ ಇತರೆ ಕಲ್ಯಾಣ ಯೋಜನೆಗಳನ್ನು ನಿರಾಕರಿಸುತ್ತಿರುವ ಪಶ್ಚಿಮ ಬಂಗಾಳ...

ಪಶ್ಚಿಮ ಬಂಗಾಳ: ಸರ್ಕಾರಿ ಶಾಲಾ ಬಿಸಿಯೂಟದ ಜವಾಬ್ದಾರಿ ಇಸ್ಕಾನ್‌ಗೆ, ಊಟದಿಂದ ‘ಮೊಟ್ಟೆ’ ಔಟ್

ಪಶ್ಚಿಮ ಬಂಗಾಳದ ಸರ್ಕಾರಿ ಶಾಲೆಗಳ ಬಿಸಿಯೂಟದ ಮೆನುವಿನಲ್ಲಿ ಇನ್ಮೇಲೆ ಮೊಟ್ಟೆಗಳು ಇರುವುದಿಲ್ಲ. ಅವುಗಳ ಬದಲಿಗೆ ಮಕ್ಕಳಿಗೆ ಪನೀರ್ ಮತ್ತು ರಾಜ್ಮಾವನ್ನು ನೀಡಲಾಗುತ್ತದೆ. ಕೋಲ್ಕತ್ತಾ ಮಹಾನಗರ ಪಾಲಿಕೆ ವ್ಯಾಪ್ತಿಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ...

ಕಿರಣ್ ರಿಜಿಜು ‘ಸೇಫ್‌’ವಾದ ಅಲ್ಲಗಳೆದ ಸರಣಿ ಮುಸ್ಲಿಂ ವಿರೋಧಿ ಹಿಂಸಾಚಾರಾಗಳು

ಜೂನ್ 15, 2026ರಂದು ಪ್ರಕಟಗೊಂಡ ಇಂಡಿಯನ್ ಎಕ್ಸ್‌ಪ್ರೆಸ್‌ನ 'ಐಡಿಯಾ ಎಕ್ಸ್‌ಚೇಂಜ್' ಕಾರ್ಯಕ್ರಮದ ಸಂದರ್ಶನವೊಂದರಲ್ಲಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು, “ಭಾರತದಲ್ಲಿ ಮುಸ್ಲಿಮರು ಸುರಕ್ಷಿತವಾಗಿಲ್ಲ ಎಂದು ಹೇಳುವ ಮೂಲಕ ನೀವು ದೇಶದ ಚಾರಿತ್ರ್ಯಕ್ಕೆ...

ರಾಮ ಮಂದಿರ ದೇಣಿಗೆ ದುರುಪಯೋಗ ವಿವಾದ; ಪ್ರಾಥಮಿಕ ವರದಿ ಸಲ್ಲಿಸಿದ ಎಸ್‌ಐಟಿ

ಅಯೋಧ್ಯೆಯ ರಾಮ ಮಂದಿರದಲ್ಲಿ ಸ್ವೀಕರಿಸಿದ ದೇಣಿಗೆಯ ದುರುಪಯೋಗದ ಆರೋಪದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಜೂನ್ 23 ಮಂಗಳವಾರ ಉತ್ತರ ಪ್ರದೇಶ ಸರ್ಕಾರಕ್ಕೆ ತನ್ನ ಪ್ರಾಥಮಿಕ ತನಿಖಾ ವರದಿಯನ್ನು ಸಲ್ಲಿಸಿದೆ...

ಮುಖ್ಯಮಂತ್ರಿ ಸುವೇಂದು ಅಧಿಕಾರಿಗೆ ನೋಟಿಸ್ ಜಾರಿ ಮಾಡಿದ ಕಲ್ಕತ್ತಾ ಹೈಕೋರ್ಟ್

ಭವಾನಿಪುರ ವಿಧಾನಸಭಾ ಕ್ಷೇತ್ರದ ಇತ್ತೀಚಿನ ಚುನಾವಣೆಯಲ್ಲಿ ಸುವೇಂದು ಅಧಿಕಾರಿ ಅವರ ಆಯ್ಕೆಯನ್ನು ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ಹಾಗೂ ಟಿಎಂಸಿ (TMC) ನಾಯಕಿ ಮಮತಾ ಬ್ಯಾನರ್ಜಿ ಸಲ್ಲಿಕೆ ಮಾಡಿರುವ ಚುನಾವಣಾ ಅರ್ಜಿಗೆ ಸಂಬಂಧಿಸಿದಂತೆ ಕಲ್ಕತ್ತಾ...

TMC ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿಯನ್ನು ಉಚ್ಚಾಟಿಸಿದ ತೃಣಮೂಲ ಬಂಡಾಯ ಶಾಸಕರು

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣಾ ಸೋಲಿನ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ ಪಕ್ಷವು ಇತಿಹಾಸದಲ್ಲೇ ಕಾಣದ ಅತ್ಯಂತ ದೊಡ್ಡ ಬಂಡಾಯಕ್ಕೆ ಸಾಕ್ಷಿಯಾಗಿದೆ. ಬಂಡಾಯ ಶಾಸಕರ ನೇತೃತ್ವ ವಹಿಸಿರುವ ಋತಬ್ರತಾ ಬ್ಯಾನರ್ಜಿ ಸೋಮವಾರ ಮಮತಾ ಬ್ಯಾನರ್ಜಿ...