Homeಅಂಕಣಗಳುಬಾಯ್ಕಟ್‌ ಚೀನಾ ಅಭಿಯಾನ: ಸಂಪೂರ್ಣ ಭಾರತೀಯ ಫೋನು ತಯಾರಿಸೋ ಕಂಪನಿ ಯಾವುದೂ ಗೊತ್ತೆ?

ಬಾಯ್ಕಟ್‌ ಚೀನಾ ಅಭಿಯಾನ: ಸಂಪೂರ್ಣ ಭಾರತೀಯ ಫೋನು ತಯಾರಿಸೋ ಕಂಪನಿ ಯಾವುದೂ ಗೊತ್ತೆ?

- Advertisement -
- Advertisement -

ಈ ಸಮಾಜ ವಿರೋಧಿ ಮಾಧ್ಯಮಗಳಲ್ಲಿ (ಎಂಟಿ-ಸೋಷಿಯಲ್ ಮೀಡಿಯಾಗಳಲ್ಲಿ) ಒಂದು ಸಂದೇಶ ಓಡಾಡಾಕ ಹತ್ತೇತಿ. ಅದೇನೆಂದರ “ಈ ಆಪ್‍ನ ನಿಮ್ಮ ಮೊಬೈಲಿನಾಗ ಹಾಕ್ಕೋರಿ, ಅದರಾಗ ಇರಬಹುದಾದ ಎಲ್ಲಾ ಚೈನಾ ಆಪುಗಳನ್ನೂ ತಗೀರಿ, ದೇಶಪ್ರೇಮದ ರಸದಿಂದ ನಿಮ್ಮ ಫೋನನ್ನ ಸ್ವಚ್ಛ ಮಾಡರಿ” ಅಂತ. ಅದನ್ನ ಸುಮಾರು ಒಂದು ಕೋಟಿ ಜನ ಹಾಕಿಕೊಂಡು ಅದು ತೋರಿಸಿದಂತೆ ಚೈನಾ ಆಪುಗಳನ್ನ ತಗದಾರು.

ಕೆಲವರು ಪೇಟಿ ಎಮ್ಮು, ಬಿಗ್ ಬಾಸ್ಕೆಟಿನಂಥಾ ಆಪು ತಗದು, ಒದ್ಯಾಡಿದಾರು.

ಇದರಾಗ ಜೋಕು ಏನಪಾ ಅಂದರ, ಭಾಳ ಮಂದಿ ಈ ದೇಶಪ್ರೇಮದ ಕೆಲಸಾ ಮಾಡಾಕ ತಮ್ಮ ಚೀನಾ ಫೋನು ಉಪಯೋಗ ಮಾಡಿದಾರು. ಭಾರತದಾಗ ಒಂದು ನೂರು ಫೋನು ಅದಾವು ಅಂದರ ಅದರಾಗ 70 ಫೋನು ಚೀನಾ ಕಂಪನಿವು ಅದಾವು. ಭಾಳ ಜನರಿಗೆ ತಮ್ಮ ಫೋನು ಯಾವ ದೇಶದ್ದೂ ಅಂತ ಗೊತ್ತಿರೋದಿಲ್ಲ. ಖರೇ ಹೇಳಬೇಕಂದರ, ಫ್ರೀಡಂ ಅನ್ನೋ ಕಂಪನಿ ಒಂದು ಬಿಟ್ಟರ ಸಂಪೂರ್ಣ ಭಾರತೀಯ ಫೋನು ತಯಾರಿಸೋ ಕಂಪನಿ ಯಾವುದೂ ಇಲ್ಲ. ಅಂದಂಗ ಮೊನ್ನೆ ನಮ್ಮ ಪಂಥ ಪ್ರಧಾನ ಸೇವಕ ಅವರು ಲೋಕಲ್ ವೋಕಲ್ ಅಂತ ಹೇಳೋ ತನಕಾ ಅಂತೂ ಇರಲಿಲ್ಲ. ಕಳೆದ ಒಂದು ವಾರದಾಗ ಯಾವುದರ ಕಂಪನಿ ಹುಟ್ಟಿಕೊಂಡಿದ್ದರ ನಮಗ ಗೊತ್ತಿಲ್ಲ ಮತ್ತ.

ಯಾಕ ಹಂಗಂತೇನಪಾ ಅಂದರ, ಅದಕ್ಕೊಂದು ಕಾರಣ ಐತಿ.

ಮೂರು ವರ್ಷದ ಹಿಂದ ಅವರು ಫ್ರಾನ್ಸಿಗೆ ಹೋಗಿದ್ದರು. ಆವಾಗ ಅವರ ಸ್ನೇಹಿತರು ಹಾಗೂ ಖಜಾಂಚಿಗಳೂ ಆದ ಆತ್ಮ ನಿರ್ಭರ ಸಹೋದರು ಬರೇ ಹತ್ತು ದಿನದಾಗ ಒಂದು ರಕ್ಷಣಾ ತಂತ್ರಜ್ಞಾನದ ಕಂಪನಿ ಹುಟ್ಟು ಹಾಕಿದರು. ಅದನ್ನ ನೋಡಿ ಇವರು ಯಾವುದೋ ಮ್ಯಾಗಿ ನೂಡಲ್ ಕಂಪನಿ ಯೊಳಗ ಕೆಲಸ ಮಾಡಿರಬೇಕು ಬಾರಲೇ ಅಂತ ಹೇಳಿ ಇವರು ಅವರಿಗೆ ಯುದ್ಧ ವಿಮಾನ ತಯಾರು ಮಾಡೋ ಕೆಲಸ ಕೊಟ್ಟರು. “ಅಯ್ಯೋ ಅದನ್ನ ಯಾಕ ಅವರಿಗೆ ಕೊಟ್ಟರಿ, ನಾವ ಮಾಡತಿದ್ದೆವಲ್ಲ. ಎಪ್ಪತ್ತು ವರ್ಷದಿಂದ ನಾವನ ವಿಮಾನ ತಯಾರು ಮಾಡಾಕ ಹತ್ತೇವಿ. ನಿಮಗೂ ಗೊತ್ತೈತೆಲ್ಲಾ” ಅಂತ ಬೆಂಗಳೂರಿನ ಎಚ್‍ಎಎಲ್ ಅನ್ನೋ ಕಂಪನಿಯವರು ಸಣ್ಣಕ ದನಿ ತಗದಿದ್ದರಂತ. ಅದಕ್ಕ ಇವರು “ಹೋಗ ಹೋಗರಿ, ಎಲ್ಲಾ ನಿಮಗ ಏನು? ಹಳಬರಿಗೆ ಅವಕಾಶ ಸಾಕು, ಹೊಸಬರಿಗೆ ಅವಕಾಶ ಇರಲಿ. ರಾಜಕೀಯದಾಗೂ ಈ ನಿಯಮ ತಂದೇವಿ, ಇನ್ನ ಯುದ್ಧ ವಿಮಾನ ತಯಾರಿಗೆ ಬಿಡತೇವೇನು” ಅಂತ ಅಂದರು. ಈಗ ಆ ಹೊಸಾ ಕಂಪನಿ ಹಳೇ ಕಂಪನಿಯ ವಜ್ಜಾ ತಡಕೊಳ್ಳಲಾರದ ಮುಚ್ಚಾಕ ಬಂದೇತಿ. ಅದು ಬ್ಯಾರೆ ವಿಷಯ.

ಇನ್ನ ನಮ್ಮವರಿಗೆ ಚೀನಾದ ಮ್ಯಾಲೆ ಕೆಂಗಣ್ಣು ಬಿಡೋ ಅಷ್ಟು ಸಿಟ್ಟು ಯಾಕ ಬಂತು? ಅದಕ್ಕ ಒಂದಿಷ್ಟು ಹಿಂದ ಹೋಗಬೇಕಾಗತೇತಿ. ನಿಮಗೆ “ಹೋಕೆ ಮಜಬೂರ ಮುಝೆ ಉಸನೆ ಭುಲಾಯಾ ಹೋಗಾ” (‘ಅನಿವಾರ್ಯವಾಗಿ ಅಕಿ ನನ್ನ ಮರತಿರಬೇಕು’) ಅನ್ನೋ ಹಾಡು ನೆನಪು ಇರಬೇಕು. ಅದು ಒಂದು ಕರೇ – ಬಿಳೇ ಹಳೇ ಹಿಂದಿ ಸಿನಿಮಾದ ಹಾಡು. ಅದರಾಗ ಭಾರತೀಯ ಸೈನಿಕರು ಹೋಗಿ ಚೀನಾದ ಮ್ಯಾಲೆ ಯುದ್ಧ ಮಾಡಿ ಗೆದ್ದು ಬರತಾರ. ಸಿನಿಮಾದಾಗ ಗೆದ್ದರು ಆದರ ಅದನ್ನ ಚೀನಾದವರು ಇನ್ನೂ ಒಪ್ಪಾಕ ತಯಾರು ಇಲ್ಲ. ಭಾರತ- ಚೀನಾ ಗಡಿ ಮೂರು ಸಾವಿರದ ಎಂಟು ನೂರು ಕಿಲೋಮಿಟರ್ ಅಂತ ನಮ್ಮ ವಿದೇಶಾಂಗ ಮಂತ್ರಿ ಅಂದಿದ್ದಕ್ಕ ಚೀನಾದವರು ಎಲ್ಲಾಸುಳ್ಳ. ಅದು ಬರೇ ಎರಡು ಸಾವಿರ ಕಿಲೋಮೀಟರ್ ಅಂತ ಹೇಳಿ ಆಟ ಗೂಟ ಜೈ ಅಂತ ಹೇಳಿ ನಮ್ಮ ಮ್ಯಾಲೆ ಜಗಳಾ ಆಡಾಕ ಬಂದಾರ. ನಮ್ಮ ಹಳ್ಳೀ ಒಳಗ ಒಂದ ಕ್ರಿಕೆಟ್ ಪಿಚ್ಚಿನ್ಯಾಗ ಸಣ್ಣ ಹುಡುಗರು ಆಡಾಕ ಹತ್ತಿದಾಗ ದೊಡ್ಡವರು ಬಂದು ಅವರ ಸ್ಟಂಪು – ಬಾಲು ಕಸಗೊಂಡರ ಹೆಂಗ ಸಣ್ಣ ಹುಡುಗರು, ಯೆಣ್ಣಾ ನೀವು ಹೋಗರಿ ಯಣ್ಣಾ, ನಾವು ಒಂದೀಟ ಆಡತೇವಿ. ನೀವು ಆಮ್ಯಾಕ ಬರೀರೆಂತ ಅಂತ ಹೇಳಿ ಅವರಿಗೆ ಆಗ್ರಹ ಮಾಡತಾರಲ್ಲಾ ಹಂಗ ನಮ್ಮ ಭಾರತೀಯರು ಅದನ್ನ ಕೇಳಿಕೊಂಡರು. ಒಂದಿಬ್ಬರು ಹೊಡದಾಡಿಕೊಂಡರು ಅಂತನೂ ಸುದ್ದಿ ಬಂದವು.

ಇದು ನಿಮಗ ರೊಮ್ಯಾಂಟಿಕ್ ಚಿತ್ರಣ ಅನ್ನಿಸಿದರ ನೀವು ಅದಕ್ಕ ಸಂಬಂಧ ಪಟ್ಟ ವಿಡಿಯೋ ಸುದ್ದಿ ನೋಡರಿ, ಅಲ್ ಜಜೀರಾ ಅವರ ವೆಬ್ ಸೈಟಿನೊಳಗ.

ಇದು ಯಾಕಪಾ ಅಂದರ ಭಾರತದ ಮಾಧ್ಯಮಗಳು ತೋರಿಸಲಾರದ್ದನ್ನ ಹೊರಗಿನವು ತೋರಿಸಿದವು. ಯಾಕಂದರ ನಮ್ಮವರು ಸುದ್ದಿ ವ್ಯಾಪಾರಸ್ಥರಾಗಿ ಬಿಟ್ಟಾರ. ಅವರು ಇನ್ನೂ ಪತ್ರಕರ್ತರಾಗಿ ಉಳದಾರ.

“ಇಲ್ಲಾ. ನಮಗೂ ಅವರಿಗೂ ಜಗಳ ಆಗಿಲ್ಲ. ಬರೇ ಒಂದಿಷ್ಟು ಮಾತು ಆಗಿದಾವು” ಅಂತ ನಮ್ಮ ಕೇಂದ್ರ ಸರಕಾರ ಹೇಳಿಕೊಂಡೇತಿ.

ಹಂಗಾರ ಅಲ್ಲಿ ಆಗಿದ್ದೇನು. ದೇಶಗಳ ನಡುವೆ ಮೂರು ಥರದ ಗೆರಿ ಇರತಾವು. ಅಂತರರಾಷ್ಟ್ರೀಯ ಗಡಿ, ನಿಯಂತ್ರಣ ರೇಖೆ ಮತ್ತು ಖರೆ ಖರೆ ನಿಯಂತ್ರಣ ರೇಖೆ (ಬಾರ್ಡರು, ಎಲ್‍ಓಸಿ, ಎಲ್‍ಏಸಿ) ಚೀನಾ ಹಾಗೂ ಭಾರತದ ನಡುವೆ ಎಲ್ಲರೂ ಒಪ್ಪುವಂಥಾ ಗಡಿ ಇಲ್ಲ. ನಾವು ಒಂದು ಅಂತೇವಿ ಅವರು ಇಲ್ಲ ಅಂತಾರ. ಅವರು ಒಂದು ಅಂತಾರ ನಾವು ಇಲ್ಲಾ ಅಂತೇವಿ.

ಅಂಥಾದರಾಗ ನಮ್ಮ ದೊಡ್ಡಣ್ಣಾರು, ಬಿಳಿಮನಿ ಟ್ರಂಪಣ್ಣನವರ್ ಅವರು “ಇವರು ಇಬ್ಬರೂ ಕಿತ್ಯಾಡಾಕ ಹತ್ಯಾರು. ನಾನು ನೋಡಾ ಹತ್ತೇನಿ. ನನ್ನ ಕಡೆ ಬಂದರ ನಾ ಜಗಳಾ ಬಿಡಸತೇನಿ,” ಅಂತ ಟ್ವಿಟರಿನ್ಯಾಗ ಕಾರಿಕೊಂಡರು. ನೀವು ಬರೋದು ಬ್ಯಾಡ. ನಿಮ್ಮ ಎಲ್ಯಾಗ ಕತ್ತಿ ಸತ್ತು ಬಿದ್ದೇತಿ, ನಮ್ಮ ನೊಣಾ ಯಾಕ ಝಾಡಸಾಕ ಬರತೀರಿ ಅಂತ ಇಬ್ಬರೂ ದೂರಾದರು. ಆ ಬೆಕ್ಕಿನ ಪ್ರೀತಿಯಿಂದ ಕೊಸರಾಡಿಕೊಂಡು ಬಿಡಿಸಿಕೊಂಡರು.

ಕೆಲವರ ಪ್ರಕಾರ ಚೀನಾ ಸೈನಿಕರು ಲಡಾಖಿನ ಹತ್ತಿರ ಭಾರತದ ಗಡಿಯೊಳಗ ಸುಮಾರು ಒಂಬೈನೂರು ಚದುರ ಕಿಲೋಮೀಟರ್ ಕ್ಷೇತ್ರದೊಳಗ ಒಳಗ ಬಂದಾರ. ಚೀನಾದವರು ಅದು ನಮ್ಮದ ಜಾಗ. ಅದರಾಗ ನಾವು ಹೆಂಗ ಬೇಕಾದಂಗ ಅಡ್ಯಾಡತೇವಿ. ನೀವು ಯಾರು ಅಂತ ಹೇಳ್ಯಾರು. ಭಾರತೀಯ ಗಡಿ ರಸ್ತೆ ಸಂಸ್ಥೆಯವರು ಚೀನಾ ಪ್ರದೇಶದೊಳಗ ರಸ್ತೆ ಮಾಡಾಕ ಬಂದಾರು. ಅದು ತಪ್ಪು ಅಂತ ಹೇಳ್ಯಾರು. ಒಂದು ಸಣ್ಣ ಗ್ರಾಮ ಪಂಚಾಯಿತಿ ರಸ್ತೆ ಮಾಡೋದರಾಗ ಕಳಪೆ ಕಾಮಗಾರಿ – ಲಂಚ ಎಲ್ಲಾ ನಡೀತಾವು. ಇನ್ನ ಹಿಮಾಲಯದಾಗ ಏನು ಮಾಡತಾರ ಇವರು ಅಂತ ಯಾರೋ ಅವರಿಗೆ ಮೂಗರ್ಜಿ ಬರದಿರಬೇಕು. ಅದಕ್ಕ ಅವರು ಬ್ಯಾಡ ಹೋಗರಿ ಅಂದಿರಬೇಕು.

ಇವು ಎಲ್ಲಾ ನಡಿಯೋವ. ಇದಕ್ಕ ಯುದ್ಧಕ್ಕ ಹೋಗಲಾರದ ಹಂಗ ಒಂದ ಕಡೆ ಕುತಗೊಂಡು ಮಾತಾಡಿ ಮುಗಿಸಿಕೊಳ್ಳೋ ವಿಚಾರ ಇವು. ಇದರಾಗ ವಿಶೇಷ ಏನು ಅಂದರ ನಮ್ಮನ್ನ ಆಳುವವರ ಪ್ರತಿಕ್ರಿಯೆ.

ಪಂಥ ಪ್ರಧಾನ ಸೇವಕರು ಎಂದಿನಂತೆ ಇದರ ಬಗ್ಗೆ ಮಾತಾಡಿಲ್ಲ. ನೀವು ಯಾವ ನೆಗಟಿವ್ ವಿಷಯ ಮಾತಾಡಬಾರದು. ಸರಕಾರದ ಯಾವ ತಪ್ಪೂ ಒಪ್ಪಿಕೊಳ್ಳಬಾರದು, ಯಾವುದೇ ನಿಖರವಾದ ಆಶ್ವಾಸನೆ ಕೊಡಬಾರದು. ಯಾವಾಗಲೂ ಪಾಸಿಟಿವ್ ಆಗಿ, ಎಲ್ಲರನ್ನೂ ಹುರಿದುಂಬಿಸುವ ಮಾತಾಡಬೇಕು ಅಂತ ಅವರಿಗೆ ಚುನಾವಣ ಪಂಡಿತ ಪ್ರಶಾಂತ ಕಿಶೋರ ಹೇಳಿದ್ದರಂತ. ಅದನ್ನ ಅವರು ಚಾಚೂ ತಪ್ಪದೇ ಪಾಲಿಸತಾರ. ಹೋಗಲಿ, ಭಾರತದಲ್ಲಿ ಮೊದಲಿಗೆ ವಿದೇಶಾಂಗ ಸಚಿವನಾಗಿದ್ದು ನಂತರ ವಿದೇಶ ಮಂತ್ರಿ ಆದ ಏಕೈಕ ವ್ಯಕ್ತಿ ಜಯಶಂಕರ ಅವರೂ ಮಾತಾಡಿಲ್ಲ. ಗೃಹ ಖಾತೆ ಸಚಿವ ಅಮಿತ ಷಾ ಅವರು ಎಂಟು ವರ್ಷದ ಹಿಂದೆ ಚೀನಾ ಸೈನಿಕರು ಭಾರತವನ್ನ ಪಿಕ್ ನಿಕ್ ತಾಣ ಅಂತ ತಿಳಕೊಂಡಾರು. ತಮಗ ಬೇಕಾದಾಗ ಬಂದು, ಮಜಾ ಮಾಡಿ ಹೋಗತಾರು. ನಮ್ಮ ಸರಕಾರ ಸುಮ್ಮನೇ ಕೂಡತೇತಿ ಅಂತ ಹೇಳಿದ್ದರು. ಅದನ್ನು ಯಾರೋ ಪುಣ್ಯಾತ್ಮರು ಟ್ವಿಟರ್ ನ್ಯಾಗಿಂದ ಹೊರಗ ತಗದು ತೋರಸಾಕ ಹತ್ಯಾರು.

ಅವ್ವ ಮಾಡಿದ ಅಡಿಗಿಗೆ ಹೆಸರು ಇಡಬ್ಯಾಡ್ರಿ ಅಂತ ಒಂದು ಶಾಯರಿ ಐತಿ. ‘ನಿಮಗ ಮಾಡಾಕ ಬರತಿದ್ದರ ಅಕೀ ಕೆಲಸ ತಪ್ಪಿಸಿ ನೀವು ಮಾಡರಿ. ಅಕಿ ಮಾಡೋ ಕೆಲಸಾ ಮಾಡೋದು ಕಷ್ಟ. ಅದಕ್ಕ ಹೆಸರು ಇಡೋದು ಸುಲಭ’ ಅಂತ.

ಹಂಗ, ಬ್ಯಾರೆದವರು ಸರಕಾರ ನಡೆಸೋವಾಗ ಟೀಕಾ ಮಾಡೋದು ವಿರೋಧ ಪಕ್ಷದವರಿಗೆ ಸುಲಭ. ಅದನ್ನ ನಂಬಿ ಜನಾ ಅವರಿಗೇ ಅಧಿಕಾರ ಕೊಟ್ಟರ ಸರಕಾರ ನಡೆಸೋದು ಕಷ್ಟ. ಆ ಶಾಯರಿ ಗೊತ್ತಿರಲಾರದವರಿಗೂ ಇದು ಗೊತ್ತಿರಬೇಕು.


ಇದನ್ನು ಓದಿ: ಹೊಸ ಮಾಧ್ಯಮ: ಮೂರನೇ ಬೆಲ್ ಬಾರಿಸಿದೆ, ಇನ್ನೀಗ ಶುರು ಮಾಡಲೇಬೇಕು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...