Homeಮುಖಪುಟಬಾಯ್‍ಕಾಟ್ ಚೈನಾ ಅಬ್ಬರದ ಕೂಗು ವಾಣಿಜ್ಯದಲ್ಲಿ ಕಾರ್ಯಗತ ಸಾಧ್ಯವೇ?

ಬಾಯ್‍ಕಾಟ್ ಚೈನಾ ಅಬ್ಬರದ ಕೂಗು ವಾಣಿಜ್ಯದಲ್ಲಿ ಕಾರ್ಯಗತ ಸಾಧ್ಯವೇ?

ಬಾಯ್ ಕಾಟ್ ಚೀನಾ ಎಂಬುದು ಎಷ್ಟು ದೊಡ್ಡ ಪ್ರಹಸನ ಎಂಬುದು ವಿಷಯದ ಆಳಕ್ಕೆ ಇಳಿದರೆ ಅರ್ಥವಾಗುತ್ತದೆ. ಚೀನಾ ನೇರವಾಗಿ ನಮ್ಮ ಮನೆಯೊಳಗೆ ಪ್ರವೇಶಿಸಿ ಎಷ್ಟೋ ಕಾಲವಾಗಿದೆ. ಆಳುವ ಜನರಿಗೂ ಈ ವಾಸ್ತವ ಗೊತ್ತಿದೆ. ಆದರೆ ಜನರ ಭಾವನೆಗಳನ್ನು ಕೆರಳಿಸಿ ರಾಜಕಾರಣ ಮಾಡುವುದು ಅವರ ಹಳೆಯ ಖಯಾಲಿ.

- Advertisement -
- Advertisement -

ಭಾರತ ಚೀನಾ ಗಡಿಭಾಗದ ಗಾಲ್ವಾನ್ ನದಿ ಕಣಿವೆಯಲ್ಲಿ ನಡೆದ ಭಾರತ-ಚೈನಾ ಸೈನಿಕರ ಮುಖಾಮುಖಿ ಸಂಘರ್ಷ ಇತಿಹಾಸದಲ್ಲಿ ಕಂಡು ಕೇಳರಿಯದಂಥದ್ದು. ಮೊಳೆಗಳಿರುವ ರಾಡ್‍ಗಳನ್ನು ಬಳಸಿ ಭಾರತದ ಇಪ್ಪತ್ತು ಸೈನಿಕರನ್ನು ಕೊಲ್ಲಲಾಯಿತು ಎಂದರೆ ಅಲ್ಲಿ ನಡೆದ ನರಮೇಧದ ಕ್ರೌರ್ಯ ಅರ್ಥವಾಗುತ್ತದೆ. ಈ ಮುಖಾಮುಖಿ ಸಂಘರ್ಷದಲ್ಲಿ ಚೀನಾದ ಪಿಎಲ್‍ಎ ಸೈನಿಕರ ಪೈಕಿ ಗಾಯಗೊಂಡ ಮತ್ತು ಮೃತಪಟ್ಟವರ ಸಂಖ್ಯೆ ಒಟ್ಟು ನಲವತ್ಮೂರು ಎಂದು ಭಾರತದ ಎನ್‍ಎನ್‍ಐ ಸುದ್ದಿ ಸಂಸ್ಥೆ ವರದಿ ಮಾಡಿತು. ಆದರೆ ಚೀನಾ ಇದುವರೆಗೆ ತನ್ನ ಪಿಎಲ್‍ಎ ಯೋಧರಿಗೆ ಆದ ಪ್ರಾಣಹಾನಿಯ ಕುರಿತು ಯಾವುದೇ ಸಂಖ್ಯೆಯನ್ನು ಹೇಳಿಕೊಂಡಿಲ್ಲ. ಉಭಯ ದೇಶಗಳ ಜನರ ನಡುವೆ ದ್ವೇಷ, ಪ್ರತೀಕಾರದ ಭಾವನೆಗಳನ್ನು ಎಬ್ಬಿಸಬಹುದಾದ ಹಿನ್ನೆಲೆಯಲ್ಲಿ ತನ್ನ ಸೈನಿಕರ ಸಾವು-ನೋವಿನ ಸಂಖ್ಯೆಯನ್ನು ಹೇಳುತ್ತಿಲ್ಲ ಎಂದು ಚೀನಾ ಸಮರ್ಥನೆ ಮಾಡಿಕೊಂಡಿದೆ.

ಭಾರತ-ಚೀನಾ ಗಡಿ ಸಂಘರ್ಷದಲ್ಲಿ ಇಪ್ಪತ್ತು ಭಾರತೀಯ ಯೋಧರು ಮೃತಪಟ್ಟ ಘಟನೆ ಇಡೀ ದೇಶದಲ್ಲಿ ಆಕ್ರೋಶದ ಅಲೆಯನ್ನು ಎಬ್ಬಿಸಿತು. ಭಾರತ ಭಾಗದ ಗಾಲ್ವಾನ್ ಕಣಿವೆಯಲ್ಲಿ ಚೀನಾ ಪ್ರವೇಶ ಮಾಡಿದ ದಿನದಿಂದಲೂ ಏನಾದರೊಂದು ಅನಾಹುತವಾಗಬಹುದೆಂಬ ಮುನ್ಸೂಚನೆ ಇತ್ತು. ಭಾರತ-ಚೀನಾ ಸೇನಾಧಿಕಾರಿಗಳ ಮಟ್ಟದ ಮಾತುಕತೆಗಳು ನಡೆಯುತ್ತಿದ್ದ ಸಂದರ್ಭದಲ್ಲೇ ಈ ಭಯಾನಕ ಘಟನೆ ನಡೆದುಹೋಯಿತು.

ಈ ನಡುವೆ `ಚೀನಾ ವಸ್ತುಗಳನ್ನು ಬಹಿಷ್ಕರಿಸಿ’ ಎಂಬ ಅಭಿಯಾನ ಭಾರತದಲ್ಲಿ ಆರಂಭಗೊಂಡಿತು. ಇದರ ನೇತೃತ್ವವನ್ನು ವಹಿಸಿಕೊಂಡಿದ್ದು ಭಾರತೀಯ ಮೀಡಿಯಾಗಳು ಮತ್ತು ಅವುಗಳ ಕೂಗುಮಾರಿ ಆಂಕರ್‍ಗಳು. ಚೀನಾ ನಮ್ಮ ಸೈನಿಕರನ್ನು ಕೊಂದಿರುವ ಹಿನ್ನೆಲೆಯಲ್ಲಿ ಚೀನಾ ತಯಾರಿಸಿದ ಯಾವುದೇ ವಸ್ತುಗಳನ್ನು ನಾವು ಬಳಸಬಾರದು ಎಂಬ ಕೂಗನ್ನು ಮೀಡಿಯಾ ಮತ್ತು ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಐಟಿ ಸೆಲ್ ಮತ್ತು ಅದರ ಟ್ರೋಲ್ ಆರ್ಮಿ ಎಬ್ಬಿಸಿತು. ಬಾಯ್ ಕಾಟ್ ಚೈನಾ ಎಂಬ ಅಬ್ಬರದ ಹ್ಯಾಶ್ ಟ್ಯಾಗ್ ಗಳು ಎದ್ದುನಿಂತವು.

ಸರ್ಕಾರವನ್ನು ರಕ್ಷಿಸುವ ತಂತ್ರ

ಇಪ್ಪತ್ತು ಭಾರತೀಯ ಸೈನಿಕರು ಹತರಾದರಲ್ಲ? ನಾವು ಭಾರತೀಯರು ದೇಶಭಕ್ತಿಯಲ್ಲಿ ಯಾರಿಗೇನು ಕಡಿಮೆಯಿಲ್ಲ. ಆಕ್ರೋಶದ ಅಲೆ ಹರಡುವುದು ಸಹಜ. ಇಂಥ ಸಂದರ್ಭದಲ್ಲಿ ಸಾರ್ವಜನಿಕ ಆಕ್ರೋಶ ಸರ್ಕಾರದ ಮೇಲೆ ತಿರುಗಬಾರದಲ್ಲ. ಹಲವು ದಿನ ಗಳಿಂದ ಚೀನಾ ಸೈನಿಕರು ಇಂಥದ್ದೊಂದು ಕುತಂತ್ರ ಮಾಡಬಹುದು ಎಂಬುದು ಗೊತ್ತಿದ್ದೂ ಸರ್ಕಾರ ಯಾಕೆ ಗಂಭೀರವಾಗಿ ಪರಿಗಣಿಸಲಿಲ್ಲ. ಗಾಲ್ವಾನ್ ಕಣಿವೆಯಲ್ಲಿ ಬಿಹಾರಿ ರೆಜಿಮೆಂಟ್ ಚೀನಾ ಸೈನಿಕರ ಕೈಗೆ ಸಿಕ್ಕು ಹತರಾಗುವಾಗ ಬ್ಯಾಕ್ ಅಪ್ ಫೋರ್ಸ್ ಯಾಕೆ ಕಳುಹಿಸಲಿಲ್ಲ? ಸೇನಾಧಿಕಾರಿಗಳ ಮಾತುಕತೆ ನಡೆಯುವಾಗಲೇ ಇಂಥದ್ದೊಂದು ಘಟನೆ ನಡೆದಿದ್ದು ಯಾಕೆ? ತಮ್ಮ ಜೀವರಕ್ಷಣೆಗಾಗಿಯಾದರೂ ಬಂದೂಕು ಬಳಸದಂತೆ ಸೈನಿಕರಿಗೆ ಯಾಕೆ ಸೂಚನೆ ನೀಡಲಾಯಿತು? ಇಂಥ ಹತ್ತಾರು ಪ್ರಶ್ನೆಗಳನ್ನು ನಾವು ಕೇಳಬೇಕಾಗಿರುವುದು ಸರ್ಕಾರಕ್ಕೆ ತಾನೇ? ಇಂಥ ಪ್ರಶ್ನೆಗಳನ್ನು ಕೇಳದಂತೆ, ಸಾರ್ವಜನಿಕರ ಆಕ್ರೋಶ ಚೀನಾ ಮೇಲಷ್ಟೇ ಕೇಂದ್ರೀಕೃತವಾಗಿರಲಿ ಎಂಬ ಕಾರಣಕ್ಕೆ ಇಂಥ ಬಾಯ್‍ಕಾಟ್ ಅಭಿಯಾನಗಳು ನಡೆದವು.

ಚೀನಾ ಬಹಿಷ್ಕಾರ ನಿಜಕ್ಕೂ ಸಾಧ್ಯವೇ?

ಚೀನಾ ವಸ್ತುಗಳನ್ನಾಗಲೀ, ಚೀನಾ ಕಂಪೆನಿಗಳನ್ನಾಗಲೀ ಭಾರತದಿಂದ ಬಹಿಷ್ಕರಿಸುವುದು ಅಷ್ಟು ಸುಲಭವೇ? ಪ್ರಧಾನಿ ಮೋದಿ ಕೆಲವು ದಿನಗಳ ಹಿಂದೆ `ಆತ್ಮನಿರ್ಬರ್’ ಭಾರತದ ಪ್ರಸ್ತಾಪ ಮಾಡಿದರು. ಅಪ್ಪಿತಪ್ಪಿಯೂ ಅವರು ಚೀನಾ ಬಹಿಷ್ಕರಿಸೋಣ ಎಂದು ಹೇಳಲಿಲ್ಲ. ಕೇಂದ್ರ ಸಚಿವ ರಾಮ್ ದಾಸ್ ಅಠಾವಲೆ `ಚೀನೀ ರೆಸ್ಟೋರೆಂಟ್ ಮತ್ತು ಚೀನಾ ಆಹಾರ ಪದಾರ್ಥಗಳನ್ನು (ಚೈನೀಸ್ ಫುಡ್)’ ಬಹಿಷ್ಕರಿಸಿ ಎಂದು ಮೂರ್ಖತನದ ಹೇಳಿಕೆ ನೀಡಿದ್ದು ಬಿಟ್ಟರೆ ಕೇಂದ್ರದ ಇನ್ಯಾವ ಸಚಿವರೂ ಸಹ ಬಹಿರಂಗವಾಗಿ ಬಾಯ್ ಕಾಟ್ ಚೀನಾ ಕರೆ ನೀಡಲಿಲ್ಲ. ತನ್ನ ಐಟಿ ಸೆಲ್ ಮತ್ತು ಮೀಡಿಯಾ ಮೂಲಕ ಬಾಯ್‍ಕಾಟ್ ಚೀನಾ ಎಂದು ಹೇಳಿಸುವ ಸರ್ಕಾರ ತಾನೇ ಯಾಕೆ ಚೀನಾ ವಸ್ತುಗಳನ್ನು ಬಹಿಷ್ಕರಿಸಿ, ಚೀನಾ ಜತೆಗಿನ ವ್ಯವಹಾರಗಳನ್ನೆಲ್ಲ ಬಂದ್ ಮಾಡುತ್ತಿಲ್ಲ? ಭಾರತ ಸರ್ಕಾರ ಇಂಥ ದುಸ್ಸಾಹಸ ಮಾಡಲಾಗದು. ಮೊದಲನೆಯದಾಗಿ ಅಂತಾರಾಷ್ಟ್ರೀಯ ಒಪ್ಪಂದಗಳು ಇದಕ್ಕೆ ಅಡ್ಡಿ ಬರುತ್ತವೆ. ಎರಡನೆಯದಾಗಿ ಮೊದಲೇ ಆರ್ಥಿಕತೆಯ ಪಾತಾಳ ತಲುಪಿರುವ ಭಾರತ ಹೀಗೇನಾದರೂ ಅಧಿಕೃತ ಬಾಯ್ ಕಾಟ್ ಮಾಡಿದರೆ ಅದು ಇನ್ನೊಂದು ಬಗೆಯ ಆರ್ಥಿಕ ಆತ್ಮಹತ್ಯೆಯಾಗುತ್ತದೆ.

ಏಪ್ರಿಲ್ 2019ರಿಂದ ಫೆಬ್ರವರಿ 2020ರವರೆಗಿನ ಹನ್ನೊಂದು ತಿಂಗಳ ಲೆಕ್ಕ ಇಟ್ಟುಕೊಂಡು ಈ ಬಗ್ಗೆ ಮಾತನಾಡೋಣ. ಈ ಅವಧಿಯಲ್ಲಿ ಭಾರತ 65.4 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಸರಕುಗಳನ್ನು ಚೀನಾದಿಂದ ಆಮದು ಮಾಡಿಕೊಂಡಿತು. ಹೆಚ್ಚುಕಡಿಮೆ ಐದು ಲಕ್ಷ ಕೋಟಿ ರುಪಾಯಿಗಳು! ಇದೇ ಸಮಯದಲ್ಲಿ ಭಾರತ ಇದೇ ಅವಧಿಯಲ್ಲಿ ಚೀನಾಗೆ ಮಾಡಿದ ರಫ್ತು ಪ್ರಮಾಣದ ಮೌಲ್ಯ 15.5 ಬಿಲಿಯನ್ ಡಾಲರ್. ಎರಡರ ನಡುವಿನ ಅಂತರ (Trade deficit ) 47 ಬಿಲಿಯನ್ ಡಾಲರ್! ಭಾರತ ನಿಜಕ್ಕೂ ಕಳವಳಪಡಬೇಕಾಗಿರುವುದು ಈ ಸಂಖ್ಯೆಗೆ. ಭಾರತದ ಒಟ್ಟು ಆಮದು ಬೇಡಿಕೆಯ ಶೇ.14ರಷ್ಟು ಚೀನಾದಿಂದಲೇ ಬರುತ್ತಿರುವಾಗ ನೀವು ಸಂಪೂರ್ಣ ಬ್ಯಾನ್ ಹೇಗೆ ಮಾಡಲು ಸಾಧ್ಯ?

ಚೀನಾ ಜತೆಗಿನ ದ್ವಿಪಕ್ಷೀಯ ವ್ಯಾಪಾರ ಸಂಬಂಧಗಳು ಅಂತಾರಾಷ್ಟ್ರೀಯ ಒಪ್ಪಂದಗಳು, ನಿಯಮಾವಳಿಗೆ ಬದ್ಧವಾಗಿರುತ್ತವೆ ಎಂಬುದು ಸರ್ಕಾರವನ್ನು ನಡೆಸುವವರಿಗೆ ಗೊತ್ತಿರುವುದಿಲ್ಲವೇ? ಆದರೆ ಜನರ ಭಾವನೆಗಳನ್ನು ತಣ್ಣಗೆ ಮಾಡುವುದೂ ಮುಖ್ಯವಲ್ಲವೇ? ಹೀಗಾಗಿ ಸರ್ಕಾರ ತನ್ನ ಮಾತು ಕೇಳುವ ಮೀಡಿಯಾಗಳಿಂದ ಜನರಿಗೆ ಏನನ್ನು ಹೇಳಿಸಬೇಕೋ ಅಷ್ಟನ್ನು ಹೇಳಿಸುತ್ತದೆ, ಏನನ್ನು ಹೇಳಿಸಿದರೆ ತಮಗೆ ಸಮಸ್ಯೆಯೋ ಅಂಥವನ್ನು ಹೇಳಿಸುವುದಿಲ್ಲ.

ಚೀನಾಗೆ ರಾಜಮಾರ್ಗ ಹಾಕಿಕೊಟ್ಟವರಾರು?

ಚೀನಾ ಇಷ್ಟು ದೊಡ್ಡ ಮಟ್ಟದಲ್ಲಿ ಭಾರತದಲ್ಲಿ ವ್ಯವಹಾರ ಮಾಡಲು ಏನು ಕಾರಣ? 2013ರಲ್ಲಿ ಚೀನಾ ಜತೆಗಿನ ಭಾರತದ Trade deficit 31.4 ಬಿಲಿಯನ್ ಡಾಲರ್ ಆಗಿತ್ತು. ಈಗ ಅದು 47 ಬಿಲಿಯನ್ ಡಾಲರ್ ಆಗಿದೆ. 2016-17ನೇ ಸಾಲಿನಲ್ಲಿ ಇದು 51.1 ಬಿಲಿಯನ್ ಡಾಲರ್ ಮತ್ತು 2017-18ರಲ್ಲಿ 62.9 ಬಿಲಿಯನ್ ಡಾಲರ್ ಆಗಿತ್ತು. ಈಗ `ಆತ್ಮನಿರ್ಬರ್’ ಆಗೋಣ ಎಂದವರು ಆರು ವರ್ಷಗಳಿಂದ ಮಾಡಿದ್ದೇನು? ಯಾಕೆ ಈ ಪ್ರಮಾಣ ಕಡಿಮೆಯಾಗುವಂತೆ ಮಾಡಲಿಲ್ಲ? ಚೀನಾ ಭಾರತೀಯ ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಿದ್ದು ನಿನ್ನೆ ಮೊನ್ನೆಯಲ್ಲ. 2011ರಲ್ಲಿ ಅದು 74 ಬಿಲಿಯನ್ ಡಾಲರ್ ನಷ್ಟು ವ್ಯವಹಾರ ಮಾಡುವ ಮೂಲಕ ಭಾರತದ ಮಾರುಕಟ್ಟೆಯಲ್ಲಿ ಇತರ ದೇಶಗಳನ್ನು ಮೀರಿ ನಿಂತಿತು. 2012ರಲ್ಲಿ ಆರ್ಥಿಕ ಹಿಂಜರಿತದಿಂದಾಗಿ ಸ್ವಲ್ಪ ಮಟ್ಟಿನೆ ಹಿನ್ನೆಡೆ ಕಂಡಿದ್ದು ಬಿಟ್ಟರೆ, ಇವತ್ತಿನವರೆಗೆ ಚೀನಾ ಭಾರತ ಮಾರುಕಟ್ಟೆಯನ್ನು ಡಾಮಿನೇಟ್ ಮಾಡುತ್ತಲೇ ಬಂದಿದೆ. ಚೀನಾ ಜತೆಗಿನ ರಫ್ತು-ಆಮದಿನಲ್ಲಿರುವ ಭಾರೀ ಅಂತರ ಭಾರತದ ಪಾಲಿಗೆ ಅಪಾಯಕಾರಿ ಎಂದು ಆರ್ಥಿಕತಜ್ಞರು ಹೇಳುತ್ತಲೇ ಬಂದಿದ್ದಾರೆ. ಹೇಳಿಕೇಳಿ ಭಾರತ-ಚೀನಾ ನೆರೆಹೊರೆಯ ದೇಶಗಳು. ಭಾರತ ಮತ್ತು ಚೀನಾಗಳು 3488 ಕಿ.ಮೀ ಉದ್ದದ ಗಡಿಯನ್ನು ಹಂಚಿಕೊಂಡಿವೆ. 1962ರಲ್ಲಿ ಯುದ್ಧವೊಂದನ್ನೂ ಮಾಡಿಕೊಂಡಿವೆ. ಇಂಥ ಸಂದರ್ಭದಲ್ಲಿ ಭಾರತವು ಚೀನಾವನ್ನು ಹೆಚ್ಚು ಅವಲಂಬಿಸಬಾರದು ಎಂಬುದು ಸಹಜ ಲೆಕ್ಕಾಚಾರವಲ್ಲವೇ? ಆದರೆ ಆರು ವರ್ಷಗಳಲ್ಲಿ ಮೋದಿ ಸರ್ಕಾರ ಮಾಡಿದ್ದೇನು? ಈ ಪ್ರಶ್ನೆಯನ್ನು ಯಾರೂ ಕೇಳಬಾರದೇ?

ಚೀನಾದ ಎರಡನೇ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿರುವ ದೇಶ. ಅದರ ಜಿಡಿಪಿ 13.6 ಟ್ರಿಲಿಯನ್ ಡಾಲರ್. ಇದೇ ಸಂದರ್ಭದಲ್ಲಿ ಭಾರತದ ಜಿಡಿಪಿ 2.7 ಟ್ರಿಲಿಯನ್ ಡಾಲರ್. ಹೆಚ್ಚುಕಡಿಮೆ ಚೀನಾ ನಮಗಿಂತ ಐದು ಪಟ್ಟು ಮುಂದಿದೆ. ಪ್ರಧಾನಿ ನರೇಂದ್ರ ಮೋದಿಯವರು ಐದು ಟ್ರಿಲಿಯನ್ ಎಕಾನಮಿಯ ಕನಸು ಕಂಡಿದ್ದಾರೆ. ನಾವು ಐದು ಟ್ರಿಲಿಯನ್ ಎಕಾನಮಿಯಾಗುವ ಹೊತ್ತಿಗೆ ಚೀನಾ ಇಪ್ಪತ್ತೈದು ಅಥವಾ ಮೂವತ್ತು ಟ್ರಿಲಿಯನ್ ಎಕಾನಮಿಯನ್ನು ಹೊಂದಿರುತ್ತದೆ. ಅದು ಎಷ್ಟಾದರೂ ಬೆಳೆಯಲಿ, ನಾವು ಯಾವಾಗ ಅವರ ಹಾಗೆ ಬೆಳೆಯೋದು?
ಭಾರತವು ಹೊರರಾಷ್ಟ್ರಗಳಿಗೆ ರಫ್ತು ಮಾಡುವ ಒಟ್ಟು ಪ್ರಮಾಣದ ಶೇ.5 ರಷ್ಟು ಚೀನಾಗೆ ರಫ್ತು ಮಾಡುತ್ತದೆ. ಇದೇ ಸಂದರ್ಭದಲ್ಲಿ ಭಾರತದ ಒಟ್ಟು ಆಮದಿನ ಪ್ರಮಾಣದ ಶೇ.14ರಷ್ಟು ಚೀನಾದಿಂದಲೇ ಬರುತ್ತದೆ. ಇದೇ ಸಮಯದಲ್ಲಿ ಚೀನಾ ಹೊರದೇಶಗಳಿಗೆ ಮಾಡುವ ರಫ್ತು ಪ್ರಮಾಣದ ಶೇ.3ರಷ್ಟನ್ನು ಮಾತ್ರ ಭಾರತಕ್ಕೆ ಕಳುಹಿಸುತ್ತದೆ. ಇದೆಲ್ಲ ಅಂಕಿಅಂಶಗಳು ಏನನ್ನು ಹೇಳುತ್ತವೆ ಗೊತ್ತೆ? ಭಾರತದ ಚೀನಾ ಮೇಲಿನ ಅವಲಂಬನೆ, ಚೀನಾದ ಭಾರತದ ಮೇಲಿನ ಅವಲಂಬನೆಗಿಂತ ಹೆಚ್ಚು. ಭಾರತ ಜತೆಗಿನ ಚೀನಾ ವ್ಯವಹಾರ ಸ್ಥಗಿತಗೊಂಡರೆ ಸಮಸ್ಯೆಗೆ ಸಿಲುಕಿಕೊಳ್ಳುವುದು ಸದ್ಯದ ಸ್ಥಿತಿಯಲ್ಲಿ ನಾವೇ.

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಚೀನಾ ಜತೆಗಿನ ವ್ಯಾಪಾರ ವಹಿವಾಟು ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತ ಬಂದಿದೆ. ವ್ಯಾಪಾರ ಸಂಬಂಧ ಹೆಚ್ಚಿದರೆ ಅದರಿಂದ ನಮ್ಮ ದೇಶಕ್ಕೆ ಅನುಕೂಲವೇ. ಆದರೆ ಮೋದಿ ಸರ್ಕಾರದ ಅವಧಿಯಲ್ಲಿ Trade deficit ಕೂಡ ಏರುತ್ತಲೇ ಬಂದಿದೆ. ಈ ಅಸಮತೋಲನವನ್ನು ನೋಡಿಕೊಂಡು ಮೋದಿ ಯಾಕೆ ಸುಮ್ಮನಿದ್ದರು?

ಭಾರತದಲ್ಲಿನ ಚೀನಾ ಕಂಪೆನಿಗಳು

ಚೀನಾ ದೊಡ್ಡ ಮಟ್ಟದಲ್ಲಿ ಭಾರತಕ್ಕೆ ರಫ್ತು ಮಾಡುತ್ತಿದೆ ಎಂಬುದು ಒಂದಾದರೆ, ಭಾರತದ ಒಳಗೆ ಹಲವಾರು ಚೀನಾ ಕಂಪೆನಿಗಳು ಬಂದು ನೆಲೆ ನಿಂತು ವ್ಯಾಪಾರ ವಹಿವಾಟು ನಡೆಸುತ್ತಿವೆ. ಇದರ ಮೌಲ್ಯವೇನು ಕಡಿಮೆಯೇನಲ್ಲ. ಕೃಷಿ, ಇಂಧನ, ಮನೋರಂಜನೆ, ಆರೋಗ್ಯ, ಮೆಟಲ್, ರಿಯಲ್ ಎಸ್ಟೇಟ್, ತಂತ್ರಜ್ಞಾನ, ಪ್ರವಾಸೋದ್ಯಮ, ಸಾರಿಗೆ, ಮೂಲಭೂತ ಸೌಕರ್ಯ ಇತ್ಯಾದಿ ಹತ್ತಾರು ಕ್ಷೇತ್ರಗಳಲ್ಲಿ ಚೀನಾ ಕಂಪೆನಿಗಳು ಕೆಲಸ ಮಾಡುತ್ತಿವೆ. 2014ರಲ್ಲಿ ಮೋದಿ ಸರ್ಕಾರ ಎಫ್‍ಡಿಐ ನೀತಿಯನ್ನು ಸರಳೀಕರಣಗೊಳಿಸಿದ ನಂತರ ಹೆಚ್ಚು ಚೀನೀ ಕಂಪೆನಿಗಳು ಭಾರತದೊಳಗೆ ತಮ್ಮ ಸಂಸ್ಥೆಗಳನ್ನು ಸ್ಥಾಪಿಸಲು ಸಾಧ್ಯವಾಗಿದೆ. ಮೋದಿಯವರ ಮೇಕ್ ಇನ್ ಇಂಡಿಯಾ ಕರೆಯನ್ನು ಯಾರು ಎಷ್ಟು ಗಂಭೀರವಾಗಿ ಸ್ವೀಕರಿಸಿದರೋ ಇಲ್ಲವೋ, ಚೀನಾ ಮಾತ್ರ ಅಕ್ಷರಶಃ ಪಾಲಿಸಿತು. ಅಲ್ಲಿನ ಕಂಪೆನಿಗಳು ಇಂಡಿಯಾದೊಳಗೆ ಬಂದು, ಇಲ್ಲೇ ಉತ್ಪಾದನೆ ಆರಂಭಿಸಿದವು.

2014ಕ್ಕೂ ಮುನ್ನ ವಿದ್ಯುತ್ ಮತ್ತು ಮೂಲಸೌಕರ್ಯ ಕ್ಷೇತ್ರದಲ್ಲಿ ಚೀನಾ ಸಂಸ್ಥೆಗಳು ಹೆಚ್ಚು ಕೆಲಸ ಮಾಡಿದ್ದವು. ಆದರೆ ನಂತರ ಅವುಗಳು ಆಟೋಮೊಬೈಲ್ಸ್, ವಿದ್ಯುತ್, ರಿಯಲ್ ಎಸ್ಟೇಟ್ ಸೇರಿದಂತೆ ಹತ್ತು ಹಲವು ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದವು. ಕರ್ನಾಟಕದಲ್ಲಿ Xingwing, Huwaei ಮತ್ತು CNTC ಸಂಸ್ಥೆಗಳ ಘಟಕಗಳು ಇವೆ. ಇದನ್ನು ಬಿಟ್ಟರೆ ಮಹಾರಾಷ್ಟ್ರ, ಗುಜರಾತ್, ಉತ್ತರಪ್ರದೇಶ, ದೆಹಲಿಗಳಲ್ಲಿ ಚೀನೀ ಸಂಸ್ಥೆಗಳು ನೆಲೆಯೂರಿವೆ. ಇದೆಲ್ಲ ಅಲ್ಲದೆ, ಚೀನಾದ ಅಲಿಬಾಬಾ, ಟೆನ್ಸೆಂಟ್, ಬೈಟ್ ಡ್ಯಾನ್ಸ್ ಮತ್ತಿತರ ಸಂಸ್ಥೆಗಳು ಭಾರತದ ಸ್ಟಾರ್ಟ್ ಅಪ್ ಗಳ ಮೇಲೆ ಸಾಕಷ್ಟು ಬಂಡವಾಳ ಹೂಡಿವೆ. ಭಾರತದ ಒಟ್ಟು 31 ಯೂನಿಕಾರ್ನ್‍ಗಳಲ್ಲಿ (ಒಂದು ಬಿಲಿಯನ್ ಡಾಲರ್ ಮೌಲ್ಯ ಹೊಂದಿರುವ ಸ್ಟಾರ್ಟ್ ಅಪ್‍ಗಳನ್ನು ಯೂನಿಕಾರ್ನ್ ಎಂದು ಕರೆಯಲಾಗುತ್ತದೆ) ಹದಿನೆಂಟರಲ್ಲಿ ಚೀನಾ ಸಂಸ್ಥೆಗಳು ಬಂಡವಾಳ ಹೂಡಿವೆ.

ತುಂಬ ಮುಖ್ಯವಾಗಿ ಭಾರತ ಇತರ ದೇಶಗಳಿಗೆ ರಫ್ತು ಮಾಡುತ್ತಿರುವ ವಸ್ತುಗಳ ತಯಾರಿಕೆಗೆ ಬೇಕಾದ ಕಚ್ಚಾವಸ್ತುಗಳಿಗೆ ಚೀನಾವನ್ನು ಅವಲಂಬಿಸಿದೆ. ಜೆನಿರಿಕ್ ಔಷಧಿ ತಯಾರಿಕೆ ಮತ್ತು ರಫ್ತಿನಲ್ಲಿ ಜಗತ್ತಿನ ನಂ.1 ದೇಶವಾಗಿರುವ ಭಾರತ ಈ ಔಷಧಿ ತಯಾರಿಕೆಗೆ ಬೇಕಾದ ಶೇ. 70ರಷ್ಟು ಮೂಲಧಾತುಗಳನ್ನು ಚೀನಾದಿಂದಲೇ ತರಿಸಿಕೊಳ್ಳುತ್ತದೆ. ಭಾರತ ಸೋಲಾರ್ ಕ್ಷೇತ್ರದಲ್ಲಿ ದೊಡ್ಡ ಯೋಜನೆಗಳನ್ನು ಹಮ್ಮಿಕೊಂಡಿದೆ. ಅದಕ್ಕೆ ಬೇಕಾದ ಉಪಕರಣಗಳಲ್ಲಿ ಶೇ.90ರಷ್ಟನ್ನು ಚೀನಾ ಪೂರೈಸುತ್ತಿದೆ.

ಚೀನಾ ಸಂಸ್ಥೆಗಳು ಈಗಾಗಲೇ ಭಾರತದ ಹಲವು ಕಂಪೆನಿಗಳ ಜತೆ ವ್ಯಾವಹಾರಿಕ ಒಪ್ಪಂದಗಳನ್ನು ಮಾಡಿಕೊಂಡಿವೆ, ಕೆಲವು ಭಾರತಕ್ಕೆ ಸಂಬಂಧಿಸಿದ್ದು, ಮತ್ತೆ ಕೆಲವು ಅಂತಾರಾಷ್ಟ್ರೀಯ ವ್ಯವಹಾರಗಳಿಗೆ ಸಂಬಂಧಿಸಿದ್ದು. ಇದ್ಯಾವುದನ್ನೂ ಮುರಿದುಕೊಳ್ಳಲು ಸಾಧ್ಯವಿಲ್ಲ. ಕೊನೆಯದಾಗಿ, ಭಾರತೀಯ ಸಂಸ್ಥೆಗಳು ಚೀನಾದಿಂದ ಪಡೆದಿರುವ ಸಾವಿರಾರು ಕೋಟಿ ರುಪಾಯಿಗಳ ಸಾಲ? ಅದನ್ನು ಯಾರು ತೀರಿಸುತ್ತಾರೆ? ಬಾಯ್ ಕಾಟ್ ಚೀನಾ ಎಂಬುದು ಎಷ್ಟು ದೊಡ್ಡ ಪ್ರಹಸನ ಎಂಬುದು ವಿಷಯದ ಆಳಕ್ಕೆ ಇಳಿದರೆ ಅರ್ಥವಾಗುತ್ತದೆ. ಚೀನಾ ನೇರವಾಗಿ ನಮ್ಮ ಮನೆಯೊಳಗೆ ಪ್ರವೇಶಿಸಿ ಎಷ್ಟೋ ಕಾಲವಾಗಿದೆ. ಆಳುವ ಜನರಿಗೂ ಈ ವಾಸ್ತವ ಗೊತ್ತಿದೆ. ಆದರೆ ಜನರ ಭಾವನೆಗಳನ್ನು ಕೆರಳಿಸಿ ರಾಜಕಾರಣ ಮಾಡುವುದು ಅವರ ಹಳೆಯ ಖಯಾಲಿ.

ಸದ್ಯಕ್ಕೆ ರಾಜಕಾರಣಿಗಳಿಗೆ ಮತಖರೀದಿಗಾಗಿ ದೇಶಭಕ್ತಿಯೇ ಹೆಚ್ಚು ಬಳಕೆಯಾಗುತ್ತದೆಯಲ್ಲವೇ? ಸದ್ಯದ ಕಾಲಘಟ್ಟದ ಕ್ರೂರ ವ್ಯಂಗ್ಯವೆಂದರೆ ದೇಶಭಕ್ತಿಯ ಹೆಸರಲ್ಲಿ ದೇಶವನ್ನೇ ಮಾರಿ ಬಿಡಬಹುದು. ಚಪ್ಪಾಳೆ ಹೊಡೆಯಲು, ತಟ್ಟೆ ಬಡಿಯಲು, ಕ್ಯಾಂಡಲ್ ಹಚ್ಚಲು ನಾವಿದ್ದೇವಲ್ಲವೇ?


ಇದನ್ನು ಓದಿ: ಚೀನಾದ ಒನ್ ಬೆಲ್ಟ್ ಮತ್ತು ಒನ್ ರೋಡ್ ಯೋಜನೆ ವಿವಾದಕ್ಕೆ ಕೇಂದ್ರವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...