Homeಅಂಕಣಗಳುಆಘಾತವಾಣಿ | ಅಟ್ಯಾಕ್ ಹನ್ಮಂತಥೂತ್ತೇರಿ: ರಾಜ್ಯೋತ್ಸವ ಪ್ರಶಸ್ತೀನ ರಸ್ತೆ ಮಾಡೋರಿಗೆ, ಮನೆಕಟ್ಟೋರಿಗೂ ಕೊಡ್ಬೇಕು ಕಣ್ರೀ...

ಥೂತ್ತೇರಿ: ರಾಜ್ಯೋತ್ಸವ ಪ್ರಶಸ್ತೀನ ರಸ್ತೆ ಮಾಡೋರಿಗೆ, ಮನೆಕಟ್ಟೋರಿಗೂ ಕೊಡ್ಬೇಕು ಕಣ್ರೀ…

- Advertisement -
- Advertisement -

ಯಾಹೂ |

ಮೋಹನ್‌ರಾಂ ಎಂಬ ತಿಕ್ಕಲು ಬ್ರಾಹ್ಮಣ ಲಂಕೇಶರಿಂದ ಉಗಿಸಿಕೊಂಡು ಹೋದ 36 ವರ್ಷಗಳ ನಂತರ ಮತ್ತೆ ಕಾಣಿಸಿಕೊಂಡಿದ್ದಾನಂತಲ್ಲಾ. ಅಂದರೆ ಲಂಕೇಶ್ ಎಷ್ಟರ ಮಟ್ಟಿಗೆ ಉಗಿದಿರಬಹುದೆಂದು ವೇದ್ಯವಾಗುತ್ತದೆ. ಇಂತವನನ್ನು ನೋಡಿಯೇ ಏನೋ ದೇವನೂರು ಒಂದು ಕತೆ ಬರೆದಿದ್ದರು. ಮೋಹನ ಶಾಸ್ತ್ರಿ ಎಂಬ ಗುಮಾಸ್ತನಿದ್ದ. ಅವನ ಬಾಸು ಲಂಕೇಗೌಡ. ಈ ಲಂಕೇಗೌಡ ಗುಮಾಸ್ತನಿಗೆ ಕೆಟ್ಟದಾಗಿ ಬೈಯ್ಯುತ್ತಿದ್ದ. ಇದರಿಂದ ಸೇಡಿಗೆ ತುತ್ತಾದ ಮೋಹನಶಾಸ್ತ್ರಿ ಲಂಕೇಗೌಡನ ಸರ‍್ವಿಸ್ ರಿಜಿಸ್ಟರಿನಲ್ಲಿ ಗೌಡನ ಆಕಾರ ಬರೆದು ಮುಂದಿನ ಎರಡು ಹಲ್ಲಿಲ್ಲ ಎಂದು ಬರೆದು ನಿವೃತ್ತನಾಗಿದ್ದನಂತೆ. ಲಂಕೇಗೌಡ ನಿವೃತ್ತನಾಗುವಾಗ ಅನಿವಾರ್ಯವಾಗಿ ಎರಡಲ್ಲು ಕೀಳಿಸಿಕೊಂಡು ಪಿಂಚನಿ ಪಡೆದನಂತೆ. ನಮ್ಮ ನಡುವಿನ ಪುರೋಹಿತಶಾಹಿಗಳ ಪಿಂಡಗಳು ಆಂತರ್ಯದಲ್ಲಿ ಹೊಂದಿರುವ ಹಗೆ ಎಂತದ್ದು ಎಂಬುದನ್ನು ಹೇಳಲು ದೇವನೂರು ಈ ಕತೆಯನ್ನು ಪಂಚಮದಲ್ಲಿ ಬರೆದಿದ್ದರು. ಮೂವತ್ತಾರು ವರ್ಷಗಳ ನಂತರ ಲಂಕೇಶರ ಹಲ್ಲು ಎಣಿಸಿರುವ ಸದರಿ ಮೋಹನ್ ರಾಂ ಎಂಬುವನ ಬಗ್ಗೆ ಲಂಕೇಶ್ ಹೇಳಿದ್ದೇನೆಂದರೆ, ‘ಆತ ಸುಳ್ಳು ಬರೆಯುತ್ತಾನೆ, ಈಗತಾನೆ ಬಾಂಬೆಯಿಂದ ಬಂದೆ. ಅಮಿತಾ ಬಚ್ಚನ್ ಇಂಟ್ರೂ ಮಾಡಿದೆ ಎಂದು ಮನೆಯಲ್ಲಿ ಕುಳಿತು ಬರೆದು ತಂದಿದ್ದ ಅದಕ್ಕೆ ಓಡಿಸಿದೆ’ ಎಂದು ಹೇಳಿದ್ದರಲ್ಲಾ, ಥೂತ್ತೇರಿ.

* * * *

ಎಂದಿನಂತೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳು ಪ್ರಕಟಣೆಗೊಂಡಿವೆ. ಸಮ್ಮಿಶ್ರ ಸರಕಾರವೊಂದು ನೇಮಿಸಿದ್ದ ಆಯ್ಕೆ ಸಮಿತಿಯ ಸದರಿ ವಿದ್ವಾಂಸರು ಆಯ್ಕೆ ಮಾಡಿದ ಪ್ರತಿಭಾವಂತರ ಬಗ್ಗೆ ಚಕಾರವೆತ್ತದ ಜಯಮಾಲ ಹಾಗು ಮುಖ್ಯಮಂತ್ರಿ ಕುಮಾರಸ್ವಾಮಿ ಇನ್ನೇನು ಅನುಮೋದನೆಯ ಸೀಲು ಒತ್ತಿ ಪತ್ರಿಕೆಗಳಿಗೆ ಬಿಡುಗಡೆ ಮಡಬೇಕೆನ್ನುವಷ್ಟರಲ್ಲಿ ಸದರಿ ಪಟ್ಟಿಯನ್ನು ಕಿತ್ತುಕೊಂಡ ಡಿ.ಕೆ.ಶಿವಕುಮಾರ್ ಎಂಬ ಕರ್ನಾಟಕ ರಾಜಕಾರಣದ ಸಮಸ್ಯೆ, ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಅಂದ್ರೆ ಬರೀ ಸಾಹಿತಿಗಳು, ಜನಪದ ಕಲಾವಿದರಿಗಷ್ಟೇ ಕೊಡಬಾರ್ದು ಕಂಡ್ರೀ. ರಾಜಕಾರಣಿಗಳು, ನಮಗೆ ಪಾಠ ಹೇಳಿದ ಮೇಷ್ಟ್ರು, ನಮ್ಮ ಪರ ವಾದ ಮಾಡೋ ಲಾಯರ್‌ಗಳು, ರಸ್ತೆ ಮಾಡೋರು, ಮನೆಕಟ್ಟೋರನ್ನೂ ಪರಿಗಣಿಸಬೇಕು’ ಎಂದು ರಾಜ್ಯೋತ್ಸವ ಪಟ್ಟಿಯೊಳಕ್ಕೆ ತನ್ನ ಅಭಿರುಚಿಯನ್ನ ಸೇರಿಸಿದರಂತಲ್ಲಾ. ಆಗ ಮುಖ್ಯಮಂತ್ರಿಯಾಗಿ ಯಾರನ್ನು ಸೇರಿಸಲಾಗದ ಕುಮಾರಸ್ವಾಮಿ ಅನಿವಾರ್ಯವಾಗಿ ಡಿ.ಕೆ.ಸಿ. ಅಭಿರುಚಿಯನ್ನು ಮನ್ನಿಸಿದರಂತಲ್ಲಾ, ಥೂತ್ತೇರಿ.

* * * *

ಈ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳು ತಮ್ಮ ಮಹತ್ವ ಕಳೆದುಕೊಂಡಿದ್ದು ಬಂಗಾರಪ್ಪನ ಕಾಲದಲ್ಲಂತಲ್ಲಾ. ಹಿಂದುಳಿದ ವರ್ಗದ ನಾಯಕರಾದ ಬಂ ಸಾಮಾಜಿಕ ನ್ಯಾಯವನ್ನು ರಾಜ್ಯೋತ್ಸವ ಪ್ರಶಸ್ತಿ ಮುಖಾಂತರ ಸರಿಮಾಡಲು ಹೋಗಿ ಪ್ರಶಸ್ತಿ ಹಂಚಿದ ಪರಿಗೆ ಬೆದರಿದ ಪತ್ರಕರ್ತರು ಇದೇನು ಸಾರ್ ಅನರ್ಹರಿಗೆಲ್ಲಾ ಪ್ರಶಸ್ತಿ ಕೊಟ್ಟರಲ್ಲ ಎಂದಾಗ ಅರ್ಹರಿಗೆ ಮುಂದಿನ ಬಾರಿ ಕೊಡೋಣ ಬಿಡಿ ಎಂದರು. ಅರ್ಹರ‍್ಯಾರು, ಅವರು ಪಡೆದ ಸವಲತ್ತುಗಳೇನು ಎಂಬುದು ’ಬಂ’ಗೆ ಗೊತ್ತಿತ್ತು. ಆ ನಂತರ ಬಂದ ಬಿ.ಜೆ.ಪಿ ಸರಕಾರದಲ್ಲಿ ಬಿಸಿಬೇಳೆ ಬಾತು ಮಾಡುವವರಿಗೆಲ್ಲಾ ಪ್ರಶಸ್ತಿಗಳು ಸಿಕ್ಕವು. ಒಂದೆರಡು ಕನ್ನಡ ರಾಜ್ಯೋತ್ಸವ ಮಾಡಿದವನಿಗೂ ಈಶ್ವರಪ್ಪ ಪ್ರಶಸ್ತಿ ಕೊಡಿಸಿದರೆ, ನಾನು ಈಶ್ವರಪ್ಪನಿಗೇನು ಕಡಿಮೆ ಎಂದು ಭಾವಿಸಿದ ಯಡೂರಪ್ಪನ ಮಗಳು ಮಾತುಮಾತಿಗು ತನ್ನನ್ನು ನಗಿಸುತ್ತಿದ್ದ ಹುಡುಗನಿಗೂ ಒಂದು ರಾಜ್ಯೋತ್ಸವ ಪ್ರಶಸ್ತಿ ಕೊಡಿಸಿದಳು. ಅದೇ ತರಹ ಈಗೊಂದು ಪ್ರಶಸ್ತಿ ವ್ಯರ್ಥವಾಗಿ ಹೋಯ್ತು. ಪ್ರತಿಭಾವಂತರೊಬ್ಬರ ಕೈಯಿಂದ ಪ್ರಶಸ್ತಿ ಕಿತ್ತುಕೊಂಡ ಡಿ.ಕೆ.ಶಿ ಅದನ್ನ ಮಾರ್ಗರೇಟ್ ಆಳ್ವರಿಗೆ ಕೊಟ್ಟಿದ್ದಾರೆ. ಈ ಮಾಜಿ ರಾಜ್ಯಪಾಲೆ ನಿರಾಕರಿಸಬಹುದಿತ್ತು. ಎಲ್ಲರ ಬಳಿ ಘನತೆವೆತ್ತ ಗುಣ ಸುಳಿಯುವುದು ಕಡಿಮೆಯಂತಲ್ಲಾ, ಥೂತ್ತೇರಿ.

* * * *

ರಾಜ್ಯೋತ್ಸವ ಪ್ರಶಸ್ತಿ ವಿಷಯ ಬಿತ್ತರಿಸುವಲ್ಲಿ ಕೆಲವು ಪತ್ರಿಕೆಗಳು ಹರಾಜಾಗಿ ಹೋದವಂತಲ್ಲಾ ಉದಾಹರಣೆ ಕೊಡುವುದಾದರೆ, ಪ್ರಶಸ್ತಿಯ ಆಯ್ಕೆ ಸಮಿತಿಯೇ ರಚನೆಯಾಗಿಲ್ಲ ಎಂದು ಅವು ಕರೆಯುತ್ತಿದ್ದಾಗ ಆಯ್ಕೆ ಸಮಿತಿ ಕಲಾಗ್ರಾಮದಲ್ಲಿ ಆಯ್ಕೆಯಲ್ಲಿ ನಿರತವಾಗಿತ್ತು. ಎರಡೂ ಪಕ್ಷದ ಒತ್ತಡದಲ್ಲಿ ಕುಮಾರಸ್ವಾಮಿ ನಲುಗಿ ಹೋಗಿದ್ದಾರೆ ಎಂದು ಬರೆಯುತ್ತಿದ್ದಾಗ ಕುಮಾರಸ್ವಾಮಿ ಚುನಾವಣಾ ಪ್ರಚಾರದಲ್ಲಿದ್ದರು.

ಪ್ರಶಸ್ತಿ ಕೊಡುವ ಹಿಂದಿನ ದಿನ ಆಯ್ಕೆ ನಡೆಸಿ ಮರುದಿನ ವಿತರಿಸಲಾಗುವುದೆಂದು ಪತ್ರಿಕೆಗಳು ಬರೆಯುವಾಗ ಎರಡು ವಾರಗಳ ಆಯ್ಕೆ ಪರಿಶ್ರಮದಿಂದ ಮುಕ್ತವಾದ ಆಯ್ಕೆ ಸಮಿತಿ ಕುಮಾರಸ್ವಾಮಿಗೆ ತಮ್ಮ ವರದಿಕೊಟ್ಟಿತ್ತು. ಹೀಗೆ ಮನಸ್ಸಿಗೆ ಬಂದ ವರದಿ ಬರೆಯುತ್ತಿದ್ದ ಪತ್ರಿಕೆಗಳನ್ನು ಕಂಡು ನಗುವುದರ ಬದಲು ನಗಿಸಲಾಗುತ್ತಿತ್ತು. ಏಕೆಂದರೆ ಏನೊಂದೂ ಪರಿಶೀಲಿಸದೆ ಕುಳಿತಲ್ಲೇ ಒಂದು ಊಹಾತ್ಮಕ ವರದಿ ಬರೆದು ಕೊಡುವುದರಿಂದ ಅನಾಹುತಗಳು ಜರುಗುವ ಸಂಭವವಿರುತ್ತದೆ. ಪಬ್ಲಿಕ್ ಟಿವಿಯ ಕಡ್ಡಿ ರಂಗ ಚಿಕ್ಕಮಗಳೂರು ಡಿ.ವೈ.ಎಸ್.ಪಿ ವಿಷಯದಲ್ಲಿಯೂ ಹೀಗೆಯೇ ಸುಳ್ಳು ಸುದ್ದಿ ಬಿತ್ತರಿಸಿದ್ದ. ಅವರ ಆತ್ಮಹತ್ಯೆಗೆ ಕಾರಣನಾದವರು ನಮ್ಮ ಕಣ್ಣು ಮುಂದಿರುವುದರಿಂದ ಪತ್ರಕರ್ತರು ಆದಷ್ಟೂ ಕಣ್ಣು ಕಿವಿ ತೊಳೆಯುವುದೊಳ್ಳೆಯದಂತಲ್ಲಾ, ಥೂತ್ತೇರಿ.

* * * *

ಪ್ರಶಸ್ತಿಗಳ ಬಗ್ಗೆ ಮನಸ್ಸಿಗೆ ಬಂದ ಸುಳ್ಳು ಸುದ್ದಿ ಬರೆದ ಪತ್ರಿಕೆಗಳು ಆ ನಂತರ ತಮ್ಮ ಜವಾಬ್ದಾರಿಯ ಕಡೆ ಗಮನಹರಿಸಲಿಲ್ಲವಂತಲ್ಲಾ. ಆಯ್ಕೆಯಾದ ೬೩ ಜನರಲ್ಲಿನ ವೈವಿಧ್ಯಮಯ ಪ್ರತಿಭೆ ಬೆರಗು ಹುಟ್ಟಿಸುವಂತಿತ್ತು. ತಮ್ಮ ಕ್ಷೌರದ ಅಂಗಡಿಯಲ್ಲೇ ಸಮಾಜವಾದದ ಚಳುವಳಿ ರೂಪಿಸಿದ ರಾಚಪ್ಪ ಹಡಪದ. ಇವರನ್ನು ನೋಡಿ ಮಾತನಾಡಿಸಲು ತೇಜಸ್ವಿ ಸ್ಕೂಟರಿನಲ್ಲೇ ಹೋಗಿದ್ದರಂತೆ. ಇನ್ನು ಕೈಗೆ ಕಾಸು ಸಿಕ್ಕ ಕೂಡಲೇ ಕೆರೆ, ಚೆಕ್ ಡ್ಯಾಂ ಕಟ್ಟುವ ಕಲ್ಮನೆ ಕಾಮೇಗೌಡ, ಆ ಕಾಲಕ್ಕೆ ಕ್ರಾಂತಿ ಮಾಡಿದ ಅಮ್ಮೆಂಬಳ ಆನಂದ, ಜನಪದ ನಿಧಿ ಗುಲ್ಬರ್ಗದ ಶಂಕ್ರಮ್ಮ ಇಂತಹ ಇತಿಹಾಸಗಳನ್ನ ಕೆದಕಿದರೆ ಸಾಕು, ಸಾರ್ಥಕ ಬದುಕೊಂದು ನಮ್ಮ ಮುಂದೆ ತೆರೆದುಕೊಳ್ಳುತ್ತದೆ. ಹೊಸ ತಲೆಮಾರಿಗೆ ಇವರ ಬದುಕು ಸ್ಪೂರ್ತಿ ನೀಡಬಲ್ಲದು. ಇವರ ಪ್ರತಿಭೆ ಪ್ರಭಾವ ಬೀರಬಹುದು. ಇದಾವುದನ್ನು ಗ್ರಹಿಸದೆ ಕೇವಲ ಅವರ ಹೆಸರುಗಳನ್ನಷ್ಟೇ ಪ್ರಕಟಿಸಿ ಕೈತೊಳೆದುಕೊಂಡ ಪತ್ರಿಕೆಗಳು ಮತ್ತು ದೃಶ್ಯ ಮಾಧ್ಯಮಗಳು ಸತ್ತು ಎಷ್ಟೋ ವರ್ಷಗಳಾಗಿವೆಯಂತಲ್ಲಾ. ವಿಶೇಷವೆಂದರೆ, ಸಾಂಸ್ಕೃತಿಕವಾಗಿ ಸತ್ತಂತಿರುವ ಈ ಮಾಧ್ಯಮಗಳ ವಿಷಯದಲ್ಲಿ ಜನರೂ ಕೂಡ ನಿರ್ಲಕ್ಷ್ಯದಿಂದಿದ್ದಾರಂತಲ್ಲಾ, ಥೂತ್ತೇರಿ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...