Homeಮುಖಪುಟ'ಅಪೋಫಿಸ್' ಧರೆಗೆ ಅಪ್ಪಳಿಸುವ ಮುನ್ನ ನಿಮ್ಮ ಎಲ್ಲಾ ಆಸೆಗಳನ್ನು ಆದಷ್ಟು ಬೇಗ ಪೂರೈಸಿಕೊಳ್ಳಿ!

‘ಅಪೋಫಿಸ್’ ಧರೆಗೆ ಅಪ್ಪಳಿಸುವ ಮುನ್ನ ನಿಮ್ಮ ಎಲ್ಲಾ ಆಸೆಗಳನ್ನು ಆದಷ್ಟು ಬೇಗ ಪೂರೈಸಿಕೊಳ್ಳಿ!

ಅಪೋಫಿಸ್ ಏಪ್ರಿಲ್ 13, 2029ರಂದು ಧರೆಯ ಸಮೀಪದಿಂದ ಹಾದು ಹೋಗಲಿದ್ದು, ಅದನ್ನು ಬರಿಯ ಕಣ್ಣಿಂದ, ಯಾವುದೇ ಟೆಲೆಸ್ಕೋಪ್ ಅಥವಾ ಬೈನಾಕ್ಯುಲರ್ ಸಹಾಯವಿಲ್ಲದೇ ನೋಡಬಹುದಾಗಿದೆ.

- Advertisement -
- Advertisement -

ಸೃಷ್ಟಿಪೂರ್ವದ ಭೂತಸಾಮಗ್ರಿಯ ಅವ್ಯವಸ್ಥಿತ ಸ್ಥಿತಿಯ ಗ್ರೀಕ್ ದೇವತೆ “ಅಪೋಫಿಸ್” ಹೆಸರಿನ ಈ ಉಲ್ಕಾಬಂಡೆ ತನ್ನ ವೇಗವನ್ನು ದಿನೇ ದಿನೇ ಹೆಚ್ಚಿಸಿಕೊಳ್ಳುತ್ತಿದೆ. ಸುಮಾರು 340 ಚ.ಮೀಟರ್, ಅಂದರೆ ಸುಮಾರು ಮೂರು ಫುಟ್ಬಾಲ್ ಮೈದಾನದಷ್ಟು, ವಿಸ್ತೀರ್ಣದ ಈ ಉಲ್ಕೆ 2068 ರಲ್ಲಿ ಭೂಮಿಗೆ ಬಂದು ಅಪ್ಪಳಿಸುವ ಸಾಧ್ಯತೆ ಇದೆ.

ಅಸಮತೋಲಿತ ಸೌರ ತಾಪಮಾನ ಹೆಚ್ಚಳಿಕೆಯಿಂದಾಗಿ ಇದು ತನ್ನ ವೇಗ ಹೆಚ್ಚಿಸಿಕೊಳ್ಳುತ್ತಿದ್ದು “ಯಾರ್ಕೊವ್ಸ್ಕಿ ಪರಿಣಾಮ” ದಿಂದಾಗಿ ಧರೆಯೆಡೆಗೆ ಮುನ್ನುಗ್ಗುತ್ತಿದೆ. ಆದರೆ  ಯಾರ್ಕೊವ್ಸ್ಕಿ ಪರಿಣಾಮದ ದೀರ್ಘಕಾಲೀನ ಭವಿಷ್ಯ ನುಡಿಯುವುದೂ ಕಷ್ಟಕರ ಎನ್ನುತ್ತಾರೆ ಹವಾಯಿ ವಿಶ್ವವಿದ್ಯಾಲಯದ ಇನ್ಸ್ಟಿಟ್ಯೂಟ್ ಆಫ್ ಅಸ್ಟ್ರಾನಮಿಯ ವಿಜ್ಞಾನಿಗಳು. ಇತ್ತೀಚೆಗೆ ಅಮೇರಿಕಾದ ನಾಸಾ ಸಂಸ್ಥೆ ಉಲ್ಕೆ “ಬೆನ್ನು” ವಿನ ಬೆನ್ನೇರಿ ಅದರಿಂದ ಸ್ಯಾಂಪಲ್ ಪಡೆದ್ದಿದ್ದು ಸಹ ಈ ಯಾರ್ಕೋವ್ಸ್ಕಿ ಪರಿಣಾಮವನ್ನು ಅರಿಯುವ ಒಂದು ಪ್ರಯತ್ನವಾಗಿದೆ.

ಈ ಉಲ್ಕೆ ಧರೆಗೆ ಅಪ್ಪಳಿಸಿದ್ದೇ ಆದರೆ ಅದರಿಂದ ಸುಮಾರು 880 ಮಿಲಿಯನ್ ಟನ್ ಡೈನಾಮೈಟ್  ಅಥವಾ ಹಿರೋಶಿಮಾ ನಗರವನ್ನು ಧ್ವಂಸ ಮಾಡಿದ 65,000  ಅಣುಬಾಂಬ್‌ಗ ಳು ಏಕಕಾಲಕ್ಕೆ ಸ್ಫೋಟಗೊಂಡ ವಿಧ್ವಂಸಕ ಪರಿಣಾಮ ಬೀರುತ್ತದೆ.

ಅಮೇರಿಕದ ಅಸ್ಟ್ರೋನಾಮಿಕಲ್ ಸೊಸೈಟಿಯ ಡಿವಿಜನ್ ಆಫ್ ಪ್ಲಾನೆಟರಿ ಸೈನ್ಸ್‌ನ 2020ರಲ್ಲಿ ನಡೆದ ವರ್ಚ್ಯುಅಲ್ ಸಭೆಯಲ್ಲಿ ಮಂಡಿಸಲಾದ ಒಂದು ವೈಜ್ಞಾನಿಕ ಲೇಖನದ ಸಹ ಲೇಖಕರಾದ ಡೇವ್ ಥೋಲೆನ್ ಪ್ರಕಾರ ಸುಬಾರು ಟೆಲೆಸ್ಕೋಪ್ ಮೂಲಕ ಸಿಕ್ಕ ದತ್ತಾಂಶಗಳಿಂದ ಅಪೋಫಿಸ್ ವೇಗ ಹೆಚ್ಚುತ್ತಿರುವುದು ಮತ್ತು ತನ್ನ ಗುರುತ್ವಾಕರ್ಷಣ ವಕ್ರಪಥವನ್ನು ಬಿಟ್ಟು ವರ್ಷಕ್ಕೆ 170 ಮೀಟರ್ ಜಾರುತ್ತಿರುವುದು ತಿಳಿದುಬಂದಿದೆ. ಇದರಿಂದ ಅದು 2068ಕ್ಕೆ ಧರೆಗೆ ಅಪ್ಪಳಿಸುವುದು ಬಹುತೇಕ ಖಚಿತ ಎನ್ನುತ್ತಾರೆ.

ಸಣ್ಣ ಅಂದರೆ ಐದರಿಂದ ಹತ್ತು ಮೀಟರ್ ವಿಸ್ತೀರ್ಣದ ಉಲ್ಕೆಗಳು ಧರೆಯ ಹತ್ತಿರದಿಂದ ಹಾದು ಹೋಗುವುದು ಸಾಮಾನ್ಯ, ಆದರೆ ಇಷ್ಟು ದೊಡ್ಡ ಉಲ್ಕೆ ಅಪರೂಪವಷ್ಟೇ ಅಲ್ಲ, ಇಷ್ಟು ಸಮೀಪ ಬರುವುದಿಲ್ಲ. 2068ರಲ್ಲಿ ಧರೆಗೆ ಅಪ್ಪಳಿಸುವ ಮುನ್ನ ಅಪೋಫಿಸ್ ಏಪ್ರಿಲ್ 13, 2029ರಂದು ಧರೆಯ ಸಮೀಪದಿಂದ ಹಾದು ಹೋಗಲಿದ್ದು, ಅದನ್ನು ಬರಿಯ ಕಣ್ಣಿಂದ, ಯಾವುದೇ ಟೆಲೆಸ್ಕೋಪ್ ಅಥವಾ ಬೈನಾಕ್ಯುಲರ್ ಸಹಾಯವಿಲ್ಲದೇ ನೋಡಬಹುದಾಗಿದೆ.

2068ರಲ್ಲಿ ನಾನಂತೂ ಇರುವುದಿಲ್ಲ, ನೀವು ಇರುವುದಾದಲ್ಲಿ ನಿಮ್ಮ ಆಸೆಗಳನ್ನು ಮುಂಚಿತವಾಗಿ ಪೂರೈಸಿಕೊಳ್ಳಿ.

 

  • ಕನ್ನಡ ಅನುವಾದ: ಜಿ.ಆರ್. ವಿದ್ಯಾರಣ್ಯ

ಮೂಲ ಇಂಗ್ಲಿಷ್ ಲೇಖನ ಓದಲು ಇಲ್ಲಿ ಕ್ಲಿಕ್ ಮಾಡಿ.


ಇದನ್ನೂ ಓದಿ: ಕೈದಿಗಳ ಉಭಯ ಸಂಕಟದ ಕಥೆ: ಇದು ಕೇವಲ ಕಥೆಯಲ್ಲ, ಒಂದು ರಣನೀತಿಯೂ ಹೌದು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೋರ್ಟ್ ರಾಜಕೀಯ ಅಖಾಡ ಅಲ್ಲ: ಸಿಎಂ ವಿಜಯ್ ವಿರುದ್ಧ ಅರ್ಜಿ ಸಲ್ಲಿಸಿದ್ದ ಡಿಎಂಕೆಗೆ ಸುಪ್ರೀಂ ತರಾಟೆ

ತಮಿಳುನಾಡಿನ ಕರೂರ್ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರನ್ನು ಭೇಟಿ ಮಾಡದಂತೆ ಮುಖ್ಯಮಂತ್ರಿ ವಿಜಯ್ ಅವರಿಗೆ ನಿರ್ಬಂಧ ಹೇರಬೇಕೆಂದು ಕೋರಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ. ಜನರಿಂದ...

ಸುರಂಗ ರಸ್ತೆ ಕಾಮಗಾರಿ ವೇಳೆ ವಯನಾಡಿನಲ್ಲಿ ಭೂಕುಸಿತ: ಜನರು ಜೀವ ಉಳಿಸಿಕೊಳ್ಳಲು ಓಡಿದ ಭಯಾನಕ ದೃಶ್ಯ ಸೆರೆ

ಕೇರಳದ ವಯನಾಡ್ ಜಿಲ್ಲೆಯ ಮೇಪ್ಪಾಡಿಯಲ್ಲಿ ಮಂಗಳವಾರ (ಇಂದು) ಭೀಕರ ಭೂಕುಸಿತ ಸಂಭವಿಸಿದ್ದು, ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಏಳು ಜನರು ಗಾಯಗೊಂಡಿದ್ದಾರೆ. ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಕಾರ್ಯಾಚರಣೆ ಮುಂದುವರಿದಿದ್ದು, ಈ...

ಒಟಿಟಿಗೆ ಬಂದ ಎರಡೇ ದಿನಕ್ಕೆ ದಿಲ್ಜಿತ್ ದೋಸಾಂಜ್ ನಟನೆಯ ‘ಸಟ್ಲಜ್’ ಸಿನಿಮಾ ಔಟ್! ಜೀ5 ವಿರುದ್ಧ ಆಕ್ರೋಶ, ಕಾನೂನು ಹೋರಾಟದ ಭರವಸೆ

ತೀವ್ರ ವಿವಾದ ಹಾಗೂ ಸೆನ್ಸಾರ್ ಮಂಡಳಿಯ ಕತ್ತರಿ ಪ್ರಯೋಗದ ನಡುವೆಯೂ ಕೊನೆಗೂ ಒಟಿಟಿ ಪರದೆಯ ಮೇಲೆ ಬಿಡುಗಡೆಯಾಗಿದ್ದ ಖ್ಯಾತ ನಟ ದಿಲ್ಜಿತ್ ದೋಸಾಂಜ್ ಅಭಿನಯದ 'ಸಟ್ಲಜ್' (ಮೂಲ ಶೀರ್ಷಿಕೆ: ಪಂಜಾಬ್ 95) ಚಿತ್ರವನ್ನು...

ಫೇಕ್ ಮದುವೆ ಜಾಲಕ್ಕೆ ಬಿದ್ದ ಫೇಮಸ್ ಗೋರಕ್ಷಕ ‘ಬಿಟ್ಟು ಬಜರಂಗಿ’

ಹರಿಯಾಣದಲ್ಲಿ "ಲವ್ ಜಿಹಾದ್" ಮತ್ತು ಅಂತರ್ಧರ್ಮೀಯ ವಿವಾಹಗಳ ವಿರುದ್ಧ ನಿರಂತರವಾಗಿ ಹೋರಾಡುತ್ತಾ, ತನ್ನದೇ ಆದ ಸಾರ್ವಜನಿಕ ಪ್ರಭಾವ ಬೆಳೆಸಿಕೊಂಡಿದ್ದ ರಾಜ್ ಕುಮಾರ್ ಅಲಿಯಾಸ್ ಬಿಟ್ಟು ಬಜರಂಗಿಗೆ ತನಗೆ ಇಂತಹದ್ದೊಂದು ಪರಿಸ್ಥಿತಿ ಎದುರಾಗಬಹುದು ಎಂಬ...

ಕರ್ನಾಟಕದ ಎಸ್‌ಐಆರ್ ಪ್ರಕ್ರಿಯೆಯಲ್ಲಿ ‘ಸಾಮೂಹಿಕ ಅಕ್ರಮ’ ಆರೋಪ: ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ ಎನ್‌ಡಿಎ ನಿಯೋಗ

ಬೆಂಗಳೂರು: ಕರ್ನಾಟಕದಲ್ಲಿ ಸದ್ಯ ಚಾಲ್ತಿಯಲ್ಲಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರಿ ಪ್ರಮಾಣದ ಸಾಂಸ್ಥಿಕ ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿ, ರಾಜ್ಯದ ಪ್ರಮುಖ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು...

SIR: ಮತದಾರರ ಹಕ್ಕು ರಕ್ಷಣೆಗೆ ಕಣಕ್ಕಿಳಿದ ‘ನಾಗರಿಕ ಮತ ಕಾವಲು ಸಮಿತಿ’

ರಾಜ್ಯದ ಶೋಷಿತ, ಹಿಂದುಳಿದ ಮತ್ತು ಅಂಚಿನಲ್ಲಿರುವ ಸಮುದಾಯಗಳ ಮತದಾನದ ಹಕ್ಕಿಗೆ ಯಾವುದೇ ಚ್ಯುತಿ ಬಾರದಂತೆ ತಡೆಯಲು ಬೂತ್ ಮಟ್ಟದಿಂದ ಹಿಡಿದು ರಾಜ್ಯ ಮಟ್ಟದವರೆಗೆ ‘ನಾಗರಿಕ ಮತ ಕಾವಲು ಸಮಿತಿ’ಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಎಸ್‌ಐಆರ್...

ಮೋಹನ್‌ಲಾಲ್ ‘ದಂತ’ ಕಥೆ: ಅರಣ್ಯ ಇಲಾಖೆ ಮುಂದೆ 10 ಆನೆ ದಂತ, 13 ಮೂರ್ತಿಗಳ ಅಚ್ಚರಿಯ ಘೋಷಣೆ!

ನಟ ಮೋಹನ್‌ಲಾಲ್ ಅವರು ತಾವೇ ಕಾನೂನುಬಾಹಿರವಾಗಿ ವನ್ಯಜೀವಿ ವಸ್ತುಗಳನ್ನು ಹೊಂದಿರುವ ಆರೋಪದ ಮೇಲೆ ವಿಚಾರಣೆ ಎದುರಿಸುತ್ತಿದ್ದರೂ, ತಮ್ಮ ಬಳಿ 10 ಆನೆ ದಂತಗಳು ಮತ್ತು 13 ದಂತದ ಮೂರ್ತಿಗಳು ಇರುವುದಾಗಿ ಕೇರಳ ಅರಣ್ಯ...

ಅಯೋಧ್ಯೆ ರಾಮಮಂದಿರ ಹಗರಣ: ‘ಕದ್ದ ಹಣ’ ಹಂಚಿಕೆಯ ಮೊಬೈಲ್ ಚಾಟ್‌ಗಳು ಬಹಿರಂಗ; ತೀವ್ರಗೊಂಡ ತನಿಖೆ

ಲಕ್ನೋ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ನಿಧಿ ದುರುಪಯೋಗ ಮತ್ತು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಂತ ಸ್ಫೋಟಕ ಮಾಹಿತಿ ಹೊರಬಿದ್ದಿದ್ದು, ತನಿಖೆ ತೀವ್ರಗೊಂಡಿದೆ. ಪ್ರಕರಣದ ಪ್ರಮುಖ ಆರೋಪಿಗಳ ಮೊಬೈಲ್ ಫೋನ್‌ಗಳ...

ಅಪ್ರಾಪ್ತ ಬಾಲಕಿಯ ಅತ್ಯಾಚಾರ-ಕೊಲೆ ಆರೋಪ : ಪ. ಬಂಗಾಳದ ಬಾರುಯಿಪುರದಲ್ಲಿ ಹಿಂಸಾಚಾರ ; ಶಂಕಿತ ಆರೋಪಿಯ ಗುಂಪು ಹತ್ಯೆ

ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಬಾರುಯಿಪುರದಲ್ಲಿ ಶನಿವಾರ (ಜು.4) ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿಯೊಬ್ಬಳ ಶವ ಭಾನುವಾರ (ಜು.5) ಬೆಳಿಗ್ಗೆ ಕೆರೆಯಲ್ಲಿ ಪತ್ತೆಯಾಗಿದ್ದು, ಆ ಬಳಿಕ ಅಲ್ಲಿ ತೀವ್ರ ಹಿಂಸಾತ್ಮಕ...

SIR ಬಳಿಕ ಒಡಿಶಾದ ಕರಡು ಮತದಾರರ ಪಟ್ಟಿ ಪ್ರಕಟ : 20 ಲಕ್ಷ ಹೆಸರುಗಳು ಡಿಲೀಟ್

ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಗಣತಿ ಹಂತದ ಬಳಿಕ ಚುನಾವಣಾ ಆಯೋಗ ಭಾನುವಾರ (ಜು.5) ಒಡಿಶಾದ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು, ಇದರಲ್ಲಿ 20 ಲಕ್ಷಕ್ಕೂ ಹೆಚ್ಚು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...