Homeಮುಖಪುಟಅಮೆರಿಕಾ ಚುನಾವಣೆ: ಹೊಸ ಭರವಸೆಯಿತ್ತ ನಾಲ್ವರು ಪ್ರಗತಿಪರ ಮಹಿಳೆಯರ ಗೆಲುವು

ಅಮೆರಿಕಾ ಚುನಾವಣೆ: ಹೊಸ ಭರವಸೆಯಿತ್ತ ನಾಲ್ವರು ಪ್ರಗತಿಪರ ಮಹಿಳೆಯರ ಗೆಲುವು

ಈ ನಾಲ್ವರು ಮಹಿಳೆಯರು “ಬ್ಲೂ ವೇವ್” 2018 ರ ಮಧ್ಯಂತರ ಚುನಾವಣೆಗಳಲ್ಲಿ ಆಯ್ಕೆಯಾದವರು. ಇವರು ತಮ್ಮ ಬೆಂಬಲಿಗರು ಮತ್ತು ತಮ್ಮದೇ ಗುಂಪುಗಳಲ್ಲಿ “ದಿ ಸ್ಕ್ವಾಡ್” ಎಂದು ಪ್ರಸಿದ್ಧರಾದವರು.

- Advertisement -
- Advertisement -

ಅಮೆರಿಕಾ ಚುನಾವಣೆ ಫಲಿತಾಂಶದಲ್ಲಿ ಎಲ್ಲರ ಗಮನ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮತ್ತು ಜೋ ಬಿಡೆನ್ ಮೇಲೆ ಕೇಂದ್ರಿಕರಿಸಿದೆ. ಆದರೆ ಇತ್ತ ಅಧ್ಯಕ್ಷರ ಆಯ್ಕೆಗೂ ಮುನ್ನ ಖುಷಿ ನೀಡುವ ಮತ್ತಷ್ಟು ಸುದ್ದಿಗಳಿವೆ. ಸಮಾಜದ ಲೈಂಗಿಕತೆ, ವರ್ಣಭೇದ ನೀತಿ, ಇಸ್ಲಾಮೋಫೋಬಿಯಾಗಳ ವಿರುದ್ಧ ಹೋರಾಡುತ್ತಾ, ಟೀಕೆ, ದಾಳಿಗಳನ್ನು ಎದುರಿಸಿದ ನಾಲ್ವರು ಪ್ರಗತಿಪರ ಮಹಿಳೆಯರು ಜಯಗಳಿಸಿದ್ದಾರೆ.

ಹೌದು, ಮಿನ್ನಿಯಾಪೊಲೀಸ್‌ನ ಇಲ್ಹಾನ್ ಒಮರ್, ನ್ಯೂಯಾರ್ಕ್‌ನ ಅಲೆಕ್ಸಾಂಡ್ರಿಯಾ ಒಕಾಸಿಯೊ-ಕಾರ್ಟೆಜ್, ಮ್ಯಾಸಚೂಸೆಟ್ಸ್‌ನ ಅಯನ್ನಾ ಪ್ರೆಸ್ಲೆ, ಮತ್ತು ಮಿಚಿಗನ್‌ನ ರಶೀದಾ ಟ್ಲೈಬ್ ಎಲ್ಲರೂ  ಮರುಚುನಾವಣೆಯಲ್ಲಿ ವಿಜಯ ಸಾಧಿಸಿದ್ದಾರೆ.

ಈ ನಾಲ್ವರು ಕಾಂಗ್ರೆಸ್ ಮಹಿಳೆಯರು “ಬ್ಲೂ ವೇವ್” 2018 ರ ಮಧ್ಯಂತರ ಚುನಾವಣೆಗಳಲ್ಲಿ ಆಯ್ಕೆಯಾದವರು. ಇವರು ತಮ್ಮ ಬೆಂಬಲಿಗರು ಮತ್ತು ತಮ್ಮದೇ ಗುಂಪುಗಳಲ್ಲಿ “ದಿ ಸ್ಕ್ವಾಡ್” ಎಂದು ಪ್ರಸಿದ್ಧರಾದವರು.

ಇದನ್ನೂ ಓದಿ: ಟ್ರಂಪ್ ನಡೆಸಿದ 18 ರ್ಯಾಲಿಗಳಿಂದ 30 ಸಾವಿರ ಜನರಿಗೆ ಸೋಂಕು, 700 ಸಾವು ಸಾಧ್ಯತೆ: ವರದಿ

ಡೆಮಾಕ್ರಟಿಕ್ ಪಕ್ಷದ ಎಒಸಿ ಎಂದೂ ಕರೆಯಲ್ಪಡುವ ಒಕಾಸಿಯೊ-ಕಾರ್ಟೆಜ್, ರಿಪಬ್ಲಿಕನ್ ಎದುರಾಳಿ ಜಾನ್ ಕಮ್ಮಿಂಗ್ಸ್ ಅವರನ್ನು ಸೋಲಿಸಿ, ನ್ಯೂಯಾರ್ಕ್‌ನ 14 ನೇ ಜಿಲ್ಲೆಯಲ್ಲಿ 68.8% ಮತಗಳೊಂದಿಗೆ ಮರು ಆಯ್ಕೆಯಾಗಿದ್ದಾರೆ. 2018 ರಲ್ಲಿ ಎಒಸಿ ಸದನಕ್ಕೆ ಚುನಾಯಿತರಾದ ಅತ್ಯಂತ ಕಿರಿಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಎಒಸಿ ತಮ್ಮ ಪ್ರಗತಿಪರ ಸಿದ್ದಾಂತಗಳು ಮತ್ತು ಅಜೆಂಡಾವನ್ನು ಬಹಿರಂಗವಾಗಿ ಮಾತನಾಡಿದ್ದು, ಅವರ ಸಹೋದ್ಯೋಗಿಗಳು ಮತ್ತು ಸಂಪ್ರದಾಯವಾದಿ ಪತ್ರಿಕಾ ಮಾಧ್ಯಮಗಳನ್ನು ಕೆರಳಿಸಿತ್ತು. ಸದ್ಯ 31 ವರ್ಷದ ಒಕಾಸಿಯೊ-ಕಾರ್ಟೆಜ್, 60 ವರ್ಷದ ಕ್ಯಾಥೊಲಿಕ್ ಪ್ರೌಢಶಾಲಾ ಶಿಕ್ಷಕ, 10 ಮಿಲಿಯನ್ ಡಾಲರ್‌ಗಳಿಗೂ ಹೆಚ್ಚು ಹಣ ಸಂಪಾಡಿಸಿರುವ ರಿಪಬ್ಲಿಕನ್ ಅಭ್ಯರ್ಥಿ ಜಾನ್ ಕಮ್ಮಿಂಗ್ಸ್ ಅವರನ್ನು ಸೋಲಿಸಿದ್ದಾರೆ.

ರಿಪಬ್ಲಿಕನ್ ಅಭ್ಯರ್ಥಿ ಲ್ಯಾಸಿ ಜಾನ್ಸನ್ ವಿರುದ್ಧ 64.6% ಮತಗಳೊಂದಿಗೆ ಮಿನ್ನೇಸೋಟದ 5 ನೇ ಕಾಂಗ್ರೆಸ್ ಜಿಲ್ಲೆಯಲ್ಲಿ ಇಲ್ಹಾನ್ ಒಮರ್ ಗೆಲುವು ಸಾಧಿಸಿದ್ದಾರೆ. ಬಾಲ್ಯದಲ್ಲಿ ಅಂತರ್ಯುದ್ಧದಿಂದ ಪಲಾಯನ ಮಾಡಿದ ಸೊಮಾಲಿ ನಿರಾಶ್ರಿತರಾಗಿದ್ದ ಒಮರ್, ಸದನಕ್ಕೆ ಚುನಾಯಿತರಾದ ಮೊದಲ ಸೊಮಾಲಿ ಅಮೆರಿಕನ್ ಎನಿಸಿಕೊಂಡಿದ್ದಾರೆ.

ಅವರು ತನ್ನ ಜನರ ಬಗ್ಗೆ, ತನ್ನ ಮಣ್ಣಿನ ಬಗ್ಗೆ ಬಹಿರಂಗವಾಗಿ ಮಾತನಾಡುವ ದೊಡ್ಡ ಧ್ವನಿಯಾಗಿದ್ದಾರೆ. ಜನಾಂಗೀಯ ಹಲ್ಲೆ ಮತ್ತು ವಲಸಿಗರ ಮೇಲೆ ನಡೆಯುವ ದಾಳಿಗಳ ಬಗ್ಗೆ ಮಾತನಾಡಿದ್ದಾರೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಇದನ್ನೆ ದಾಳವಾಗಿಸಿ ರಿಪಬ್ಲಿಕನ್ ಅಭ್ಯರ್ಥಿ ಲ್ಯಾಸಿ ಜಾನ್ಸನ್ ವಿರುದ್ಧ ಜಯಗಳಿಸಿದ್ದಾರೆ.

ಇದನ್ನೂ ಓದಿ: ಅಮೇರಿಕಾ ಚುನಾವಣೆ: ಗೆಲುವಿನ ತುದಿಯಲ್ಲಿರುವ ಬೈಡೆನ್; ಟ್ರಂಪ್‌ಗೆ ಹಿನ್ನಡೆ!

 

ಇನ್ನು ಮ್ಯಾಸಚೂಸೆಟ್ಸ್‌ನ 7 ನೇ ಜಿಲ್ಲೆಯ ಪಾದ್ರಿಯಾಗಿದ್ದ ಸ್ವತಂತ್ರ ಅಭ್ಯರ್ಥಿ ರಾಯ್ ಓವೆನ್ಸ್‌ರನ್ನು 87.5% ಮತಗಳನ್ನು ಪಡೆಯುವ ಮೂಲಕ ಪ್ರೆಸ್ಲೆ ಸೋಲಿಸಿದರು. ಕಪ್ಪು ಹುಡುಗಿಯರ ಮೇಲಾಗುವ ಅನ್ಯಾಯದ ಅಪರಾಧೀಕರಣವನ್ನು ಸರಿಪಡಿಸುವ ಯೋಜನೆಗಳ ಬಗ್ಗೆ ಅವರು ಗಮನಾರ್ಹವಾಗಿ ಮಾತನಾಡಿದ್ದಾರೆ ಮತ್ತು ಈ ಕುರಿತು ಪ್ರಸ್ತಾಪಿಸಿದ್ದಾರೆ. ಈ ವರ್ಷದ ಆರಂಭದಲ್ಲಿ, ಅವರು ಸ್ಪೂರ್ತಿದಾಯಕ ವೀಡಿಯೊವನ್ನು ಸಹ ಬಿಡುಗಡೆ ಮಾಡಿದರು, ಇದರಲ್ಲಿ ತಾವು ಬೋಳುತಲೆ(ಅಲೋಪೆಸಿಯಾ) ಹೊಂದಿರುವ ಕುರಿತು ವಿವರಿಸಿದ್ದರು.

ಮಿಚಿಗನ್‌ನ 13 ನೇ ಜಿಲ್ಲೆಯ ರಿಪಬ್ಲಿಕನ್ ಎದುರಾಳಿ ಡೇವಿಡ್ ಡುಡೆನ್‌ಹೋಫರ್ ವಿರುದ್ಧ ಟ್ಲೈಬ್ ಜಯಗಳಿಸಿದ್ದಾರೆ. ಟ್ಲೈಬ್, 2018 ರಲ್ಲಿ ಸದನದಲ್ಲಿ ಪ್ಯಾಲೇಸ್ಟಿನಿಯನ್ ಮೂಲದ ಮೊದಲ ಮಹಿಳೆ ಮತ್ತು ಒಮರ್ ಜೊತೆಗೆ  ಸದನಕ್ಕೆ ಆಯ್ಕೆಯಾದ ಮೊದಲ ಇಬ್ಬರು ಮುಸ್ಲಿಂ ಮಹಿಳೆಯರಲ್ಲಿ ಒಬ್ಬರಾಗಿದ್ದರು.

“ದಿ ಸ್ಕ್ವಾಡ್” ಎಂದು ಕರೆಸಿಕೊಳ್ಳುವ ಇವರ ಮೇಲೆ ಅಧ್ಯಕ್ಷ ಟ್ರಂಪ್ ಪದೇ ಪದೇ ಆಕ್ರಮಣ ಮಾಡಿದ್ದಾರೆ. ಈನಾಲ್ವರನ್ನು “ಎಒಸಿ ಪ್ಲಸ್ ತ್ರೀ” ಎಂದು ವ್ಯಂಗ್ಯವಾಡುತ್ತಾರೆ. ಕಳೆದ ವರ್ಷ, ಟ್ರಂಪ್ ಈ ನಾಲ್ವರು ಅಮೆರಿಕಾ ಪ್ರಜೆಗಳಾಗಿದ್ದರೂ ತಾವು ಬಂದ ದೇಶಗಳಿಗೆ ಹಿಂತಿರುಗಿ ಎಂದು ಹೇಳಿದ್ದರು.

ಇದನ್ನೂ ಓದಿ: ಗುಡ್ ನ್ಯೂಸ್: ಬೊಲಿವಿಯಾದಲ್ಲಿ ಮಹಿಳಾ ಜನಪ್ರತಿನಿಧಿಗಳ ಸಂಖ್ಯೆ ಶೇ.50ಕ್ಕಿಂತಲೂ ಹೆಚ್ಚು!

ಈ ನಾಲ್ವರೂ ಎಂದು ಸುಮ್ಮನೆ ಕುಳಿತವರಲ್ಲ. ತಮ್ಮ ತಮ್ಮ ವ್ಯಾಪ್ತಿಯಲ್ಲಿ, ವ್ಯಾಪ್ತಿಯ ಹೊರಗಡೆಯೂ ಅನ್ಯಾಯಗಳ ವಿರುದ್ಧ ಧ್ವನಿ ಮಾಡಿದವರು. ಲೈಂಗಿಕತೆ, ಇಸ್ಲಾಮೋಫೋಬಿಯಾ ಮತ್ತು ವರ್ಣಭೇದ ನೀತಿಯಿಂದ ಜೀನೋಫೋಬಿಯಾ (ವಲಸಿಗರ ಮೇಲೆ ದಾಳಿ) ವರೆಗಿನ ಬಗ್ಗೆ ಬಹಿರಂಗವಾಗಿ ಮಾತನಾಡಿವರು. ಈ ಕಾರಣಕ್ಕೆ ಅನೇಕ ದಾಳಿಗಳು ಮತ್ತು ಟೀಕೆಗಳನ್ನು ಎದುರಿಸಿದ್ದಾರೆ.

ಒಕಾಸಿಯೊ-ಕಾರ್ಟೆಜ್, ಈ ನಾಲ್ವರಲ್ಲಿ ಗಮನಾರ್ಹವಾದವರು. ತನ್ನ ಎಡಪಂಥೀಯ ರಾಜಕಾರಣಕ್ಕಾಗಿ ಸಂಪ್ರದಾಯವಾದಿಗಳಿಂದ ಕಟುಟೀಕೆ ಎದುರಿಸಿದವರು.

ಇನ್ನು ಈ ನಾಲ್ವರಲ್ಲಿ ಅಮೆರಿಕಾಕ್ಕೆ ಹೊರಗಡೆಯಿಂದ ಬಂದವರು ಇಲ್ಹಾನ್ ಒಮರ್ ಮಾತ್ರ. ಯುವತಿಯೊಬ್ಬಳು ವಲಸೆಗಾರರ ಬಗ್ಗೆ ಮತ್ತು ಇಸ್ಲಾಮೋಫೋಬಿಯಾ ಬಗ್ಗೆ ಸಾಕಷ್ಟು ಧ್ವನಿ ಎತ್ತಿದ್ದರಿಂದ ಈಕೆಯನ್ನು ಚಿಕ್ಕವಯಸ್ಸಿನಲ್ಲೇ ಅಮೆರಿಕಕ್ಕೆ ಕರೆತರಲಾಗಿತ್ತು.

ಅಮೆರಿಕಾ ಚುನಾವಣೆ ಅಧ್ಯಕ್ಷೀಯ ಚುನಾವಣಾ ಫಲಿತಾಂಶಕ್ಕಾಗಿ ಇಡೀ ವಿಶ್ವದ ಜನರೇ ಎದುರು ನೋಡುತ್ತಿದ್ದಾರೆ. ಡೆಮಾಕ್ರಟಿಕ್ ಅಭ್ಯರ್ಥಿ ಜೋ ಬೈಡೆನ್ ವೈಟ್ ಹೌಸ್‌ನತ್ತ ಮುನ್ನುಗ್ಗುತ್ತಿದ್ದಾರೆ. ಆದರೆ ಪೂರ್ತಿ ಮತ ಏಣಿಕೆ ಮುಗಿರುವವರೆಗೂ ಯಾವುದನ್ನೂ ನಿರ್ಧರಿಸಲು ಸಾಧ್ಯವಿಲ್ಲ.

ಅಮೆರಿಕಾ ಚುನಾವಣೆ ಫಲಿತಾಂಶ ಏನೇ ಇರಲಿ. ಕೆಲವು ಸ್ಥಳಗಳಲ್ಲಿನ ಮಹಿಳೆಯರ ಗೆಲುವು, ಹೋರಾಟಗಾರರು, ಅನ್ಯಾಯ ವಿರುದ್ಧ ದನಿ ಎತ್ತುವವರಿಗೆ ಹೊಸ ಭರವಸೆ ಮೂಡಿಸಿರುವುದು ಸುಳ್ಳಲ್ಲ.


ಇದನ್ನೂ ಓದಿ: ಮತದಾನದಲ್ಲಿ ವಂಚನೆ, ಸುಪ್ರೀಂಕೋರ್ಟ್‌ಗೆ ಹೋಗಲಿದ್ದೇವೆ: ಡೊನಾಲ್ಡ್ ಟ್ರಂಪ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...