ಪಶ್ಚಿಮ ಬಂಗಾಳದಲ್ಲಿ ಗಡಿ ಭದ್ರತಾ ಪಡೆಯ (BSF) ಸೈನಿಕನನ್ನು ತೃಣಮೂಲ ಕಾಂಗ್ರೆಸ್ (TMC) ಕಾರ್ಯಕರ್ತರು ಥಳಿಸಿದ್ದಾರೆ ಎಂದು ದೂರು ದಾಖಲಾದ ಹಿನ್ನೆಲೆಯಲ್ಲಿ, ಈ ಸೈನಿಕ ಕಳೆದ ಕೆಲವು ತಿಂಗಳಿನಿಂದ ಸೇವೆಯಲ್ಲಿ ಇರಲಿಲ್ಲ ಎಂದು BSF ತಿಳಿಸಿದೆ.
ಡಿಸಂಬರ್ 11 ರಂದು ಮುರ್ಶಿದಾಬಾದ್ನಲ್ಲಿ TMC ಪಕ್ಷದ ಮೆರವಣಿಗೆಯ ಸಂದರ್ಭದಲ್ಲಿ ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ಬಿಸ್ವಜಿತ್ ಸಹಾನಿ ಎನ್ನುವ ಸೈನಿಕ ಖಂಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಕುರಿತು ಎಎನ್ಐ ಟ್ವೀಟ್ ಮಾಡಿದೆ.
ಇದನ್ನೂ ಓದಿ: ಬಾಯ್ಕಾಟ್ ಜಿಯೋ ಅಭಿಯಾನ: ಏರ್ಟೆಲ್, ವೊಡಾಫೋನ್ ವಿರುದ್ಧ ದೂರು ನೀಡಿದ ಜಿಯೋ!
The jawan was on leave since last few months and was residing at his residence. He was not performing any official duty when the incident took place: Border Security Force (BSF) https://t.co/EhXj92Zw6X
— ANI (@ANI) December 14, 2020
ಇದನ್ನೂ ಓದಿ: ನಟಿ ಕಂಗನಾ ವಿರುದ್ಧ ಹಕ್ಕುಚ್ಯುತಿ ನೋಟಿಸ್ ನೀಡಿದ ಶಿವಸೇನೆ ಶಾಸಕ ಪ್ರತಾಪ್ ಸರ್ನಾಯಕ್
ಮತ್ತೊಂದು ಟ್ವೀಠ್ ಮಾಡಿರುವ ಎಎನ್ಐ, “ಈ ಸೈನಿಕ ಕಳೆದ ಕೆಲವು ತಿಂಗಳಿನಿಂದ ರಜೆಯಲ್ಲಿದ್ದು, ತನ್ನ ಸ್ವಂತ ಸ್ಥಳದಲ್ಲಿಯೇ ವಾಸಿಸುತ್ತಿದ್ದಾರೆ. ಈ ಘಟನೆ ನಡೆದಿದೆ ಎನ್ನುವ ಸ್ಥಳದಲ್ಲಿ ಅವರು ಯಾವುದೇ ಅಧಿಕೃತ ಸೇವೆಯಲ್ಲಿರಲಿಲ್ಲ” ಎಂದು ಭದ್ರತಾ ಪಡೆ ಹೇಳಿರುವುದಾಗಿ ವರದಿ ಮಾಡಿದೆ.
ಇದನ್ನೂ ಓದಿ: ಏಮ್ಸ್ ನರ್ಸ್ಗಳ ಅನಿರ್ದಿಷ್ಟ ಮುಷ್ಕರ: ಕೆಲಸಕ್ಕೆ ಬರುವಂತೆ ಏಮ್ಸ್ ನಿರ್ದೇಶಕರ ಮನವಿ