Homeನಿಜವೋ ಸುಳ್ಳೋಮೋದಿ ಸಂದರ್ಶನ: ಜಮ್ಮುವಿನಿಂದ ಜಾಬ್ಸ್ ವರೆಗೆ ಬರೀ ಸುಳ್ಳುಗಳ ಮೆರವಣಿಗೆ!

ಮೋದಿ ಸಂದರ್ಶನ: ಜಮ್ಮುವಿನಿಂದ ಜಾಬ್ಸ್ ವರೆಗೆ ಬರೀ ಸುಳ್ಳುಗಳ ಮೆರವಣಿಗೆ!

- Advertisement -
- Advertisement -

| ಮಲ್ಲಿ |

ದೇಶದ ಅತ್ಯುನ್ನತ ಹುದ್ದೆಯಲ್ಲಿರುವ ವ್ಯಕ್ತಿ ಸಾರ್ವಜನಿಕ ವೇದಿಕೆಗಳ ಮೂಲಕ ಪದೇ ಪದೇ ಸುಳ್ಳುಗಳನ್ನು ಹೇಳುತ್ತ ಬಂದಿದ್ದು, ಈಗವರು ಆಯ್ದ ಚಾನೆಲ್‍ಗಳಲ್ಲಿ ಸಂದರ್ಶನ ನೀಡುತ್ತ, ತಮ್ಮ ಸರ್ಕಾರದ ಗೃಹ ಇಲಾಖೆಯ ಅಂಕಿಅಂಶಗಳನ್ನೇ ಮರೆಮಾಚಿ ಸುಳ್ಳು ಹೇಳುತ್ತಾರೆ. ಎದುರಿಗೆ ಪ್ರಶ್ನೆ ಕೇಳಲು ಕೂತ ಭೂಪರು ಗೋಣು ಹಾಕುತ್ತಾರೆ. ಈ ಸುಳ್ಳುಗಳ ಜೊತೆಗೆ ದೇಶಭಕ್ತಿಯ ಕುರಿತಾಗಿ ಪ್ರಧಾನಿ ನಿರರ್ಗಳವಾಗಿ ಬೊಗಳೆ ಬಿಡುತ್ತಾರೆ.
ರಫೆಲ್ ಕುರಿತು ಕೇಳಿದ ಪ್ರಶ್ನೆಗಳಿಗೆ ಚಾನೆಲ್ ವಿರುದ್ಧವೇ ಸಿಟ್ಟಾದ ಪ್ರಧಾನಿ, ಇದನ್ನೇ ನೆಪ ಮಾಡಿಕೊಂಡು ರಫೆಲ್‍ಗೆ ತಾವೇ ಕ್ಲೀನ್‍ಚಿಟ್ ಕೊಟ್ಟುಕೊಂಡರು. ಇದು ಕೂಡ ನಾಟಕೀಯವಾಗಿಯೇ ಇತ್ತು. ಮತ್ತು ಪೂರ್ವಯೋಜಿತವಾಗಿತ್ತು.

ನಿನ್ನೆ ಏಪ್ರಿಲ್ 5ರಂದು ಎಬಿಪಿ ನ್ಯೂಸ್ ಚಾನೆಲ್‍ನಲ್ಲಿ ಈ ಸಂದರ್ಶನ ಪ್ರಸಾರವಾಗಿದ್ದು, ಅವರು ಮಾಡಿರುವ ಸುಳ್ಳು ಕ್ಲೈಮ್‍ಗಳನ್ನು ಮತ್ತು ವಾಸ್ತವವನ್ನು ನಿಮ್ಮ ಮುಂದಿಡುತ್ತಿದ್ದೇವೆ. 75 ನಿಮಿಷಗಳ ಈ ಸಂದರ್ಶನದಲ್ಲಿ ಸತ್ಯದ ತಲೆ ಮೇಲೆ ಹೊಡೆದಂತಿರುವ ಸುಳ್ಳುಗಳನ್ನು ಇಲ್ಲಿ ಆಯ್ದು ನೀಡಲಾಗಿದೆ.

ಮೋದಿ ಮಿಥ್ಯ: “ಈಗ ಜಮ್ಮು ಕಾಶ್ಮೀರದಲ್ಲಿ ಮೊದಲು ನಡೆಯುತ್ತಿದ್ದ ಘಟನೆಗಳು (ಉಗ್ರರ ದಾಳಿ, ಚಟುಚಟಿಕೆ) ಈಗ ತುಂಬ ಕಡಿಮೆಯಾಗಿವೆ….”
ಸತ್ಯ: ಗೃಹ ಇಲಾಖೆಯ 2017-18ರ ವಾರ್ಷಕ ವರದಿ ಪ್ರಕಾರ, ಜಮ್ಮು-ಕಾಶ್ಮೀರದಲ್ಲಿ 2013-17ರ ಅವಧಿಯಲ್ಲಿ ಭಯೋತ್ಪಾದನಾ ಹಿಂಸೆಯ ಪ್ರಕರಣಗಳು ಹೆಚ್ಚಿವೆ.
ಭಯೋತ್ಪಾದನಾ ಹಿಂಸೆಯ ಘಟನೆಗಳು:
2013 : 170, 2014: 222, 2015: 208, 2016: 322, 2017: 342,
ರಾಜ್ಯಸಭೆಯಲ್ಲಿ ಸರ್ಕಾರ ನೀಡಿದ ಉತ್ತರದ ಪ್ರಕಾರ, 2018 ಜನವರಿ-ಜೂನ್: 231
ಅಂದರೆ, ಪ್ರಧಾನಿ ಹೇಳಿದಂತೆ ಅಲ್ಲಿ ಹಿಂಸಾಚಾರ ಕಡಿಮೆಯಾಗಿಲ್ಲ, ಬದಲಿಗೆ ಏರುತ್ತ ಸಾಗಿದೆ.
***

ಮೋದಿ ಮಿಥ್ಯ: ‘ಜಮ್ಮು-ಕಾಶ್ಮೀರದಲ್ಲಿ ಪ್ರವಾಸೋದ್ಯಮ ಚಟುವಟಿಕೆ ಹೆಚ್ಚಿದೆ…’
ಸತ್ಯ: 2018ರ ಲೇಟೆಸ್ಟ್ ಆರ್ಥಿಕ ಸಮೀಕ್ಷೆ ವರದಿ ಪ್ರಕಾರ, 2012ರಿಂದ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡುತ್ತಿರುವ ಪ್ರವಾಸಿಗರ ಸಂಖ್ಯೆಯಲ್ಲಿ ಕ್ರಮೇಣ ಇಳಿಮುಖವಾಗುತ್ತಿದೆ.
ಪ್ರವಾಸಿಗರ ಸಂಖ್ಯೆ:
2012: 1.25 ಕೋಟಿ, 2013: 1.09 ಕೋಟಿ, 2014: 95 ಲಕ್ಷ, 2015: 92 ಲಕ್ಷ,
2016: 84 ಲಕ್ಷ, 2017: 73 ಲಕ್ಷ
ಅಂದರೆ, ಈ ಅಧಿಕೃತ ಅಂಕಿಅಂಶದ ಪ್ರಕಾರ, ಮೋದಿ ಸುಳ್ಳು ಹೇಳ್ತಾ ಇದ್ದಾರೆ.
***

ಮೋದಿ ಮಿಥ್ಯ: ‘ತಮಿಳುನಾಡಿನಲ್ಲಿ ಅಣು ವಿದ್ಯುತ್ ಘಟಕದ ವಿರುದ್ಧ ಪ್ರತಿಭಟನೆ ನಡೆದಾಗ ಕಾಂಗ್ರೆಸ್ ದೇಶದ್ರೋಹ ಅಪಾದನೆಯ ಮೇಲೆ 6 ಸಾವಿರ ಜನರನ್ನು ಜೈಲಿಗೆ ಹಾಕಿತ್ತು…’
ಸತ್ಯ: ‘ಫಸ್ಟ್ ಪೋಸ್ಟ್’ ವರದಿಯ ಪ್ರಕಾರ, ಹಿರಿಯ ಪತ್ರಕರ್ತ ಸಯಾಮ ರಾಜಪ್ಪ ನೇತೃತ್ವದ ತಂಡದ ಅಧ್ಯಯನದ ಪ್ರಕಾರ, 2011ರ ಸೆಪ್ಟೆಂಬರ್-ಡಿಸೆಂಬರ್ ಅವಧಿಯಲ್ಲಿ ತಮಿಳುನಾಡು ಪೊಲೀಸರು ದೇಶದ್ರೋಹದ ಆರೋಪದ ಮೇಲೆ ಕೂಡುಕೂಳಂ ಅಣು ಸ್ಥಾವರದ ವಿರುದ್ಧ ಪ್ರತಿಭಟಿಸುತ್ತಿದ್ದ 6 ಸಾವಿರ ಜನರನ್ನು ಜೈಲಿಗೆ ಹಾಕಿದ್ದರು.
ಆ ಸಂದರ್ಭದಲ್ಲಿ ಅಲ್ಲಿ ಆಗ ಎಐಡಿಎಂಕೆ (ಈಗ ಬಿಜೆಪಿಯ ಮಿತ್ರ) ಅಧಿಕಾರದಲ್ಲಿತ್ತು.
ಅಂದರೆ, ಆ ಸಂದರ್ಭದಲ್ಲಿ ಡಿಎಂಕೆ-ಕಾಂಗ್ರೆಸ್ ಅಧಿಕಾರದಲ್ಲಿ ಇರಲಿಲ್ಲ. ಇಲ್ಲೂ ಪ್ರಧಾನಿ ಹಸಿಸುಳ್ಳನ್ನು ಹೇಳಿದರು.
***

ಮೋದಿ ಮಿಥ್ಯ: 4.25 ಕೋಟಿ ಜನರು ಮುದ್ರಾ ಸಾಲ ಪಡೆದಿದ್ದು, ಅವರು ಉದ್ಯಮ ಆರಂಭಿಸಿ ಎಷ್ಟೋ ಜನರಿಗೆ ಉದ್ಯೋಗ ಕೊಟ್ಟರಬಹುದಲ್ಲ…ಇದು ಉದ್ಯೋಗ ಸೃಷ್ಟಿಯಲ್ಲವೇ? ಸಿಐಐ (ವಾಣಿಜ್ಯೋದ್ಯಮ ಸಂಘ) ಪ್ರಕಾರ 6 ಕೋಟಿ ಉದ್ಯೋಗಗಳು ಸೃಷ್ಟಿಯಾಗಿವೆ.
ಸತ್ಯ: ಮೊದಲಿಗೆ ಮುದ್ರಾ ಸಾಲ ಪಡೆಯುವುದನ್ನು ಉದ್ಯೋಗ ಸೃಷ್ಟಿಗೆ ತಳುಕು ಹಾಕುವುದು ಕಷ್ಟವೇ.
ಎರಡನೇದಾಗಿ, ಸಿಎಂಐಇ (ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ) ವರದಿ ಪ್ರಕಾರ, 2016-18ರ ಅವಧಿಯಲ್ಲಿ ಕಾರ್ಮಿಕ ಸಮೂಹದ ಭಾಗವಹಿಸುವಿಕೆ ದರ ತುಂಬ ಕಡಿಮೆ ಪ್ರಮಾಣದಲ್ಲಿದೆ.


ಕಾರ್ಮಿಕ ಸಮೂಹದ ಭಾಗವಹಿಸುವಿಕೆ ದರ:
ಸೆಪ್ಟೆಂಬರ್ 2016 : 45.98, ಸೆಪ್ಟೆಂಬರ್ 2017: 44.0, ಸೆಪ್ಟೆಂಬರ್ 2018: 42.81
ಇನ್ನೊಂದು ಕಡೆ, ಸರ್ಕಾರ ಉದ್ಯೋಗ/ನಿರುದ್ಯೋಗ ಕುರಿತ ಅಂಕಿಸಂಖ್ಯೆಗಳನ್ನು ಬಿಡುಗಡೆ ಮಾಡುತ್ತಿಲ್ಲ. ಎನ್‍ಎಸ್‍ಎಸ್‍ಒ ಅಧ್ಯಯನದ ವರದಿ ( ಸೋರಿಕೆಯಾಗಿತ್ತು) ಪ್ರಕಾರ, ಈಗ ನಿರುದ್ಯೋಗ ಪ್ರಮಾಣ ಶೇ. 6.1ರಷ್ಟಿದ್ದು, ಕಳೆದ 45 ವರ್ಷಗಳಲ್ಲೇ ಇದು ಹೆಚ್ಚಿನ ಪ್ರಮಾಣದ ನಿರುದ್ಯೋಗ ಎಂದು ವಿವರಿಸಿದೆ. ಸಿಎಂಐಇ ವರದಿ ಪ್ರಕಾರ ನಿರುದ್ಯೋಗ ಪ್ರಮಾಣ ಶೇ. 6.7
ಆದರೆ ವಾಣಿಜ್ಯೋದ್ಯಮಿಗಳ ಸಂಘದ ಲೆಕ್ಕ ಹೇಳುವ ಪ್ರಧಾನಿ, ಸರ್ಕಾರದ ಅಧಿಕೃತ ಅಂಕಿಸಂಖ್ಯೆಗಳ ಬಗ್ಗೆ ಪ್ರಸ್ತಾಪಿಸುವುದಿಲ್ಲ. ಬೀದಿಯಲ್ಲಿ ನಿಂತು ನೋಡಿದರಷ್ಟೇ ನಿರುದ್ಯೋಗದ ಭೀಕರತೆ ಅರ್ಥವಾಗುತ್ತದೆ ಮಿಸ್ಟರ್ ಪಿಎಂ!
ಸ್ಕ್ರಿಪ್ಟೆಡ್ ಸಂದರ್ಶನಗಳಲ್ಲಿ ಇವೆಲ್ಲವೂ ನಡೆಯುತ್ತವೆ. ಆದರೆ ಪ್ರೆಸ್‍ಮೀಟ್‍ನಲ್ಲಿ ನಡೆಯುವುದಿಲ್ಲ. ಹೀಗಾಗಿ ಈ ದೇಶದ ಪ್ರಧಾನಿ ಇಲ್ಲಿವರೆಗೂ ಒಂದೂ ಪ್ರೆಸ್‍ಮೀಟ್ ಮಾಡಿಲ್ಲ.
(ಆಧಾರ: ದಿ ಕ್ವಿಂಟ್ ವೆಬ್ಕೂಫ್)

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...