Homeನಿಜವೋ ಸುಳ್ಳೋಮೋದಿ ಸಂದರ್ಶನ: ಜಮ್ಮುವಿನಿಂದ ಜಾಬ್ಸ್ ವರೆಗೆ ಬರೀ ಸುಳ್ಳುಗಳ ಮೆರವಣಿಗೆ!

ಮೋದಿ ಸಂದರ್ಶನ: ಜಮ್ಮುವಿನಿಂದ ಜಾಬ್ಸ್ ವರೆಗೆ ಬರೀ ಸುಳ್ಳುಗಳ ಮೆರವಣಿಗೆ!

- Advertisement -
- Advertisement -

| ಮಲ್ಲಿ |

ದೇಶದ ಅತ್ಯುನ್ನತ ಹುದ್ದೆಯಲ್ಲಿರುವ ವ್ಯಕ್ತಿ ಸಾರ್ವಜನಿಕ ವೇದಿಕೆಗಳ ಮೂಲಕ ಪದೇ ಪದೇ ಸುಳ್ಳುಗಳನ್ನು ಹೇಳುತ್ತ ಬಂದಿದ್ದು, ಈಗವರು ಆಯ್ದ ಚಾನೆಲ್‍ಗಳಲ್ಲಿ ಸಂದರ್ಶನ ನೀಡುತ್ತ, ತಮ್ಮ ಸರ್ಕಾರದ ಗೃಹ ಇಲಾಖೆಯ ಅಂಕಿಅಂಶಗಳನ್ನೇ ಮರೆಮಾಚಿ ಸುಳ್ಳು ಹೇಳುತ್ತಾರೆ. ಎದುರಿಗೆ ಪ್ರಶ್ನೆ ಕೇಳಲು ಕೂತ ಭೂಪರು ಗೋಣು ಹಾಕುತ್ತಾರೆ. ಈ ಸುಳ್ಳುಗಳ ಜೊತೆಗೆ ದೇಶಭಕ್ತಿಯ ಕುರಿತಾಗಿ ಪ್ರಧಾನಿ ನಿರರ್ಗಳವಾಗಿ ಬೊಗಳೆ ಬಿಡುತ್ತಾರೆ.
ರಫೆಲ್ ಕುರಿತು ಕೇಳಿದ ಪ್ರಶ್ನೆಗಳಿಗೆ ಚಾನೆಲ್ ವಿರುದ್ಧವೇ ಸಿಟ್ಟಾದ ಪ್ರಧಾನಿ, ಇದನ್ನೇ ನೆಪ ಮಾಡಿಕೊಂಡು ರಫೆಲ್‍ಗೆ ತಾವೇ ಕ್ಲೀನ್‍ಚಿಟ್ ಕೊಟ್ಟುಕೊಂಡರು. ಇದು ಕೂಡ ನಾಟಕೀಯವಾಗಿಯೇ ಇತ್ತು. ಮತ್ತು ಪೂರ್ವಯೋಜಿತವಾಗಿತ್ತು.

ನಿನ್ನೆ ಏಪ್ರಿಲ್ 5ರಂದು ಎಬಿಪಿ ನ್ಯೂಸ್ ಚಾನೆಲ್‍ನಲ್ಲಿ ಈ ಸಂದರ್ಶನ ಪ್ರಸಾರವಾಗಿದ್ದು, ಅವರು ಮಾಡಿರುವ ಸುಳ್ಳು ಕ್ಲೈಮ್‍ಗಳನ್ನು ಮತ್ತು ವಾಸ್ತವವನ್ನು ನಿಮ್ಮ ಮುಂದಿಡುತ್ತಿದ್ದೇವೆ. 75 ನಿಮಿಷಗಳ ಈ ಸಂದರ್ಶನದಲ್ಲಿ ಸತ್ಯದ ತಲೆ ಮೇಲೆ ಹೊಡೆದಂತಿರುವ ಸುಳ್ಳುಗಳನ್ನು ಇಲ್ಲಿ ಆಯ್ದು ನೀಡಲಾಗಿದೆ.

ಮೋದಿ ಮಿಥ್ಯ: “ಈಗ ಜಮ್ಮು ಕಾಶ್ಮೀರದಲ್ಲಿ ಮೊದಲು ನಡೆಯುತ್ತಿದ್ದ ಘಟನೆಗಳು (ಉಗ್ರರ ದಾಳಿ, ಚಟುಚಟಿಕೆ) ಈಗ ತುಂಬ ಕಡಿಮೆಯಾಗಿವೆ….”
ಸತ್ಯ: ಗೃಹ ಇಲಾಖೆಯ 2017-18ರ ವಾರ್ಷಕ ವರದಿ ಪ್ರಕಾರ, ಜಮ್ಮು-ಕಾಶ್ಮೀರದಲ್ಲಿ 2013-17ರ ಅವಧಿಯಲ್ಲಿ ಭಯೋತ್ಪಾದನಾ ಹಿಂಸೆಯ ಪ್ರಕರಣಗಳು ಹೆಚ್ಚಿವೆ.
ಭಯೋತ್ಪಾದನಾ ಹಿಂಸೆಯ ಘಟನೆಗಳು:
2013 : 170, 2014: 222, 2015: 208, 2016: 322, 2017: 342,
ರಾಜ್ಯಸಭೆಯಲ್ಲಿ ಸರ್ಕಾರ ನೀಡಿದ ಉತ್ತರದ ಪ್ರಕಾರ, 2018 ಜನವರಿ-ಜೂನ್: 231
ಅಂದರೆ, ಪ್ರಧಾನಿ ಹೇಳಿದಂತೆ ಅಲ್ಲಿ ಹಿಂಸಾಚಾರ ಕಡಿಮೆಯಾಗಿಲ್ಲ, ಬದಲಿಗೆ ಏರುತ್ತ ಸಾಗಿದೆ.
***

ಮೋದಿ ಮಿಥ್ಯ: ‘ಜಮ್ಮು-ಕಾಶ್ಮೀರದಲ್ಲಿ ಪ್ರವಾಸೋದ್ಯಮ ಚಟುವಟಿಕೆ ಹೆಚ್ಚಿದೆ…’
ಸತ್ಯ: 2018ರ ಲೇಟೆಸ್ಟ್ ಆರ್ಥಿಕ ಸಮೀಕ್ಷೆ ವರದಿ ಪ್ರಕಾರ, 2012ರಿಂದ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡುತ್ತಿರುವ ಪ್ರವಾಸಿಗರ ಸಂಖ್ಯೆಯಲ್ಲಿ ಕ್ರಮೇಣ ಇಳಿಮುಖವಾಗುತ್ತಿದೆ.
ಪ್ರವಾಸಿಗರ ಸಂಖ್ಯೆ:
2012: 1.25 ಕೋಟಿ, 2013: 1.09 ಕೋಟಿ, 2014: 95 ಲಕ್ಷ, 2015: 92 ಲಕ್ಷ,
2016: 84 ಲಕ್ಷ, 2017: 73 ಲಕ್ಷ
ಅಂದರೆ, ಈ ಅಧಿಕೃತ ಅಂಕಿಅಂಶದ ಪ್ರಕಾರ, ಮೋದಿ ಸುಳ್ಳು ಹೇಳ್ತಾ ಇದ್ದಾರೆ.
***

ಮೋದಿ ಮಿಥ್ಯ: ‘ತಮಿಳುನಾಡಿನಲ್ಲಿ ಅಣು ವಿದ್ಯುತ್ ಘಟಕದ ವಿರುದ್ಧ ಪ್ರತಿಭಟನೆ ನಡೆದಾಗ ಕಾಂಗ್ರೆಸ್ ದೇಶದ್ರೋಹ ಅಪಾದನೆಯ ಮೇಲೆ 6 ಸಾವಿರ ಜನರನ್ನು ಜೈಲಿಗೆ ಹಾಕಿತ್ತು…’
ಸತ್ಯ: ‘ಫಸ್ಟ್ ಪೋಸ್ಟ್’ ವರದಿಯ ಪ್ರಕಾರ, ಹಿರಿಯ ಪತ್ರಕರ್ತ ಸಯಾಮ ರಾಜಪ್ಪ ನೇತೃತ್ವದ ತಂಡದ ಅಧ್ಯಯನದ ಪ್ರಕಾರ, 2011ರ ಸೆಪ್ಟೆಂಬರ್-ಡಿಸೆಂಬರ್ ಅವಧಿಯಲ್ಲಿ ತಮಿಳುನಾಡು ಪೊಲೀಸರು ದೇಶದ್ರೋಹದ ಆರೋಪದ ಮೇಲೆ ಕೂಡುಕೂಳಂ ಅಣು ಸ್ಥಾವರದ ವಿರುದ್ಧ ಪ್ರತಿಭಟಿಸುತ್ತಿದ್ದ 6 ಸಾವಿರ ಜನರನ್ನು ಜೈಲಿಗೆ ಹಾಕಿದ್ದರು.
ಆ ಸಂದರ್ಭದಲ್ಲಿ ಅಲ್ಲಿ ಆಗ ಎಐಡಿಎಂಕೆ (ಈಗ ಬಿಜೆಪಿಯ ಮಿತ್ರ) ಅಧಿಕಾರದಲ್ಲಿತ್ತು.
ಅಂದರೆ, ಆ ಸಂದರ್ಭದಲ್ಲಿ ಡಿಎಂಕೆ-ಕಾಂಗ್ರೆಸ್ ಅಧಿಕಾರದಲ್ಲಿ ಇರಲಿಲ್ಲ. ಇಲ್ಲೂ ಪ್ರಧಾನಿ ಹಸಿಸುಳ್ಳನ್ನು ಹೇಳಿದರು.
***

ಮೋದಿ ಮಿಥ್ಯ: 4.25 ಕೋಟಿ ಜನರು ಮುದ್ರಾ ಸಾಲ ಪಡೆದಿದ್ದು, ಅವರು ಉದ್ಯಮ ಆರಂಭಿಸಿ ಎಷ್ಟೋ ಜನರಿಗೆ ಉದ್ಯೋಗ ಕೊಟ್ಟರಬಹುದಲ್ಲ…ಇದು ಉದ್ಯೋಗ ಸೃಷ್ಟಿಯಲ್ಲವೇ? ಸಿಐಐ (ವಾಣಿಜ್ಯೋದ್ಯಮ ಸಂಘ) ಪ್ರಕಾರ 6 ಕೋಟಿ ಉದ್ಯೋಗಗಳು ಸೃಷ್ಟಿಯಾಗಿವೆ.
ಸತ್ಯ: ಮೊದಲಿಗೆ ಮುದ್ರಾ ಸಾಲ ಪಡೆಯುವುದನ್ನು ಉದ್ಯೋಗ ಸೃಷ್ಟಿಗೆ ತಳುಕು ಹಾಕುವುದು ಕಷ್ಟವೇ.
ಎರಡನೇದಾಗಿ, ಸಿಎಂಐಇ (ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ) ವರದಿ ಪ್ರಕಾರ, 2016-18ರ ಅವಧಿಯಲ್ಲಿ ಕಾರ್ಮಿಕ ಸಮೂಹದ ಭಾಗವಹಿಸುವಿಕೆ ದರ ತುಂಬ ಕಡಿಮೆ ಪ್ರಮಾಣದಲ್ಲಿದೆ.


ಕಾರ್ಮಿಕ ಸಮೂಹದ ಭಾಗವಹಿಸುವಿಕೆ ದರ:
ಸೆಪ್ಟೆಂಬರ್ 2016 : 45.98, ಸೆಪ್ಟೆಂಬರ್ 2017: 44.0, ಸೆಪ್ಟೆಂಬರ್ 2018: 42.81
ಇನ್ನೊಂದು ಕಡೆ, ಸರ್ಕಾರ ಉದ್ಯೋಗ/ನಿರುದ್ಯೋಗ ಕುರಿತ ಅಂಕಿಸಂಖ್ಯೆಗಳನ್ನು ಬಿಡುಗಡೆ ಮಾಡುತ್ತಿಲ್ಲ. ಎನ್‍ಎಸ್‍ಎಸ್‍ಒ ಅಧ್ಯಯನದ ವರದಿ ( ಸೋರಿಕೆಯಾಗಿತ್ತು) ಪ್ರಕಾರ, ಈಗ ನಿರುದ್ಯೋಗ ಪ್ರಮಾಣ ಶೇ. 6.1ರಷ್ಟಿದ್ದು, ಕಳೆದ 45 ವರ್ಷಗಳಲ್ಲೇ ಇದು ಹೆಚ್ಚಿನ ಪ್ರಮಾಣದ ನಿರುದ್ಯೋಗ ಎಂದು ವಿವರಿಸಿದೆ. ಸಿಎಂಐಇ ವರದಿ ಪ್ರಕಾರ ನಿರುದ್ಯೋಗ ಪ್ರಮಾಣ ಶೇ. 6.7
ಆದರೆ ವಾಣಿಜ್ಯೋದ್ಯಮಿಗಳ ಸಂಘದ ಲೆಕ್ಕ ಹೇಳುವ ಪ್ರಧಾನಿ, ಸರ್ಕಾರದ ಅಧಿಕೃತ ಅಂಕಿಸಂಖ್ಯೆಗಳ ಬಗ್ಗೆ ಪ್ರಸ್ತಾಪಿಸುವುದಿಲ್ಲ. ಬೀದಿಯಲ್ಲಿ ನಿಂತು ನೋಡಿದರಷ್ಟೇ ನಿರುದ್ಯೋಗದ ಭೀಕರತೆ ಅರ್ಥವಾಗುತ್ತದೆ ಮಿಸ್ಟರ್ ಪಿಎಂ!
ಸ್ಕ್ರಿಪ್ಟೆಡ್ ಸಂದರ್ಶನಗಳಲ್ಲಿ ಇವೆಲ್ಲವೂ ನಡೆಯುತ್ತವೆ. ಆದರೆ ಪ್ರೆಸ್‍ಮೀಟ್‍ನಲ್ಲಿ ನಡೆಯುವುದಿಲ್ಲ. ಹೀಗಾಗಿ ಈ ದೇಶದ ಪ್ರಧಾನಿ ಇಲ್ಲಿವರೆಗೂ ಒಂದೂ ಪ್ರೆಸ್‍ಮೀಟ್ ಮಾಡಿಲ್ಲ.
(ಆಧಾರ: ದಿ ಕ್ವಿಂಟ್ ವೆಬ್ಕೂಫ್)

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...

ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಸಾವು : ಪಿತೂರಿ ಶಂಕೆ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ, ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ ರಾಜಕೀಯ ನಾಯಕರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಾವಿಗೆ ಕಾರಣವಾದ ಬಾರಾಮತಿ ವಿಮಾನ ಪತನದ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ಜ.28) ಒತ್ತಾಯಿಸಿದ್ದಾರೆ....

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಯಲು ಯುಜಿಸಿ ಹೊಸ ನಿಯಮ; ಮುಂದುವರೆದ ಪ್ರಬಲಜಾತಿ ಗುಂಪಿನ ವಿರೋಧ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಪರಿಷ್ಕೃತ ನಿಯಮಗಳ ಕುರಿತು ದೇಶದಲ್ಲಿ ಭಾರಿ ರಾಜಕೀಯ ವಾಗ್ವಾದ ಭುಗಿಲೆದ್ದಿದೆ. ಹೊಸ ಮಾರ್ಗಸೂಚಿಗಳ ಕುರಿತು...

ಜನಸೇನಾ ಶಾಸಕನಿಂದ ಅತ್ಯಾಚಾರ, ಬಲವಂತದ ಗರ್ಭಪಾತ : ಮಹಿಳೆ ಆರೋಪ

ಆಂಧ್ರ ಪ್ರದೇಶದ ರೈಲ್ವೆ ಕೊಡೂರು ವಿಧಾನಸಭಾ ಕ್ಷೇತ್ರದ ಜನ ಸೇನಾ ಶಾಸಕ ಮತ್ತು ಸರ್ಕಾರಿ ಸಚೇತಕ ಅರವ ಶ್ರೀಧರ್ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಮತ್ತು ಬಲವಂತದ ಗರ್ಭಪಾತ ಆರೋಪ ಮಾಡಿದ್ದಾರೆ. ಈ ಕುರಿತು ವಿಡಿಯೋ...

ಬಾರಾಮತಿ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ನಿಧನ; ಸಂತಾಪ ಸೂಚಿಸಿದ ಪ್ರಮುಖರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ಐವರು ಜನರು ಪ್ರಯಾಣಿಸುತ್ತಿದ್ದ ವಿಮಾನ ಬುಧವಾರ ಬೆಳಿಗ್ಗೆ ಪುಣೆ ಜಿಲ್ಲೆಯಲ್ಲಿ ಪತನಗೊಂಡು ಸಾವನ್ನಪ್ಪಿದ್ದಾರೆ. ಎನ್‌ಸಿಪಿ ನಾಯಕರಾದ ಅಜಿತ್ ಪವಾರ್ (66) ಮತ್ತು ಇತರರನ್ನು ಹೊತ್ತೊಯ್ಯುತ್ತಿದ್ದ...