Homeಅಂತರಾಷ್ಟ್ರೀಯಗಂಗಾವತಿಯಲ್ಲಿ ಮೋದಿ ಭಾಷಣ: ಸಾಧನೆಗಳೇ ಇಲ್ಲದ ತರಾವರಿ ಕಾಲಹರಣ!

ಗಂಗಾವತಿಯಲ್ಲಿ ಮೋದಿ ಭಾಷಣ: ಸಾಧನೆಗಳೇ ಇಲ್ಲದ ತರಾವರಿ ಕಾಲಹರಣ!

- Advertisement -
- Advertisement -

| ಮಲ್ಲನಗೌಡರ್ ಪಿ.ಕೆ |

‘ಲೇ ತಮ್ಮಾ, ಈ ಸರೆ ಪರೀಕ್ಸೆ ಹೆಂಗಾಗ್ಯಾವ್ಲೇ….ನೀ ಓದಿದ್ದ ನೋಡಿಲ್ಲಲೇ…ಹ್ಯಂಗ್ ಬರದಿದಿ?’- ಸಂಬಂಧಿಯೊಬ್ಬರು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದಿರುವ ಹುಡುಗನನ್ನು ಪ್ರಶ್ನಿಸಿದರು.
ಹುಡುಗ: ಅಂವಾ ಅಣ್ಣಾ ನಮ್ ಮನಿ ಮಗ್ಗಲ ಅದಾನಲ್ರಿ. ಅವಾ ಹ್ವಾದ ವರ್ಷ ಫೇಲಾಗಿದ್ದಾರಿ…ಹಹಹಹಾ…
ಸಂಬಂಧಿ: ನೀ ಹ್ಯಾಂಗ ಬರದಿಯೋ?
ಹುಡುಗ: ಅಂವಾ ನಮ್ ಸ್ಕೂಲ್ ಸೆಕ್ಯುರಿಟಿ ಅದಾನಲ್ರಿ, ಬಾಳ ಸ್ಟ್ರಿಕ್ಟ್ ಅದಾನರಿ. ಕಾಪಿ ಚೀಟಿ ಒಯ್ಯಾಕ ಬಿಡದ ಇಲ್ರಿ.
ಸಂಬಂಧಿ: ಹಂಗ ಇರ್ಬೇಕೋ…
(ಹುಡುಗ ಮನಸ್ಸಲ್ಲೇ ನಗುತ್ತ, ಯಪ್ಪಾ, ಪರೀಕ್ಷೆ ವಿಷಯ ಬಿಟ್ರಲ್ಲ ಸಾಕು ಎಂದು ವಿಷಯಾಂತರ ಮಾಡುತ್ತ ಹೋದ)
**

2019ರ ಚುನಾವಣೆಯಲ್ಲಿ ಮೋದಿ ಈ ಹುಡುಗನ ತರಹ ಭಾಷಣ ಕುಟ್ಟುತ್ತಿದ್ದಾರೆ. ಶುಕ್ರವಾರ ಗಂಗಾವತಿಯಲ್ಲಿ ಅವರು ಅಕ್ಷರಶ: ತೌಡು ಕುಟ್ಟಿ ಹೋದರು. ವಿಷಯಗಳೇ ಇಲ್ಲದ, ಸಾಧನೆಗಳೇ ಇಲ್ಲದ ವ್ಯಕ್ತಿ, ‘ಪಕ್ಕದ ಮನೆ ಅಣ್ಣ ಫೇಲಾಗಿದ್ದನ್ನು, ಸ್ಕೂಲ್ ಸೆಕ್ಯರಿಟಿ ಗಾರ್ಡ್ ಸ್ಟ್ರಿಕ್ಟ್ ಇರುವುದನ್ನು’ ಹೇಳುತ್ತ ಕಾಲಹರಣ ಮಾಡಿ ಹೋಗಿದ್ದಾರೆ.

ಅವರ ಭಾಷಣ ಆರಂಭವಾಗುವುದೇ ಎಚ್.ಡಿ. ರೇವಣ್ಣರ ಹೇಳಿಕೆ ಪ್ರಸ್ತಾಪಿಸುವ ಮೂಲಕ! ‘2014ರಲ್ಲೂ ದೇವೇಗೌಡರು ಹೀಗೆ ಹೇಳಿದ್ದರು, ಮೋದಿ ಪ್ರಧಾನಿಯಾದರೆ ರಾಜಕೀಯ ಸನ್ಯಾಸ ತಗೊಳ್ತೀನಿ ಅಂತಾ. ಸನ್ಯಾಸ ತಗೊಂಡ್ರಾ? (ಪ್ರೇಕ್ಷಕರಿಂದ ಯಾವುದೇ ಪ್ರತಿಕ್ರಿಯೆ ಇಲ್ಲ!), ಅವರ ಮಗ ತಗಳ್ತಾರಾ?’- ಹೀಗೆ ಶುರುವಾಗಿ, ‘ಇದು ಕುಟುಂಬ ರಾಜಕಾರಣ ಮತ್ತು ರಾಷ್ಟ್ರವಾದಗಳ ನಡುವಿನ ಚುನಾವಣೆ’ ಎಂದು ನೀರು ಕುಡಿಯುತ್ತಾರೆ. ಅಷ್ಟರಲ್ಲಿ ‘ಮೋದಿ ಮೋದಿ’ ಎಂಬ ನಾದ ತೇಲಿ ಬಂದ ಕೂಡಲೇ, ‘ನಿಮ್ಮ ಪ್ರೀತಿಗೆ ಋಣಿ’ ಎನ್ನುತ್ತಾರೆ. ಒಟ್ಟು ಸುಮಾರು 40 ನಿಮಿಷದ ಭಾಷಣದಲ್ಲಿ ಐದು ಸಲ ಹೀಗೆ ‘ಡಿಸ್ಟರ್ಬ್’ ಆಗುತ್ತದೆ. ಮೋದಿ ಸುಧಾರಿಸಿಕೊಳ್ಳಲು ಭಕ್ತರು ಅವಕಾಶ ಮಾಡಿಕೊಡುತ್ತಾರೆ!

ಒಮ್ಮೆ ಬಲಗೈನ ತೋರುಬೆರಳು, ಮರುಕ್ಷಣವೇ ಎಡಗೈನ ತೋರುಬೆರಳನ್ನು ಆಕಾಶಕ್ಕೆ ತೋರಿಸುತ್ತ ಧ್ವನಿಯಲ್ಲಿ ಹಾವಭಾವ ತೋರಿಸಲು ಯತ್ನಿಸಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಸೈನಿಕರ ಕುರಿತು ಕಾಳಜಿಯಿಂದ ಮಾತಾಡಿದ್ದು, ಸೈನಿಕರ ಹೆಸರನ್ನು ಬಳಸಿಕೊಳ್ಳುವ ಮೋದಿಯನ್ನು ಟೀಕಿಸಿದ್ದನ್ನು ತಿರುಚಿದ ಮೋದಿ, ‘ಎರಡು ಹೊತ್ತು ಊಟ ಇಲ್ಲದವರು ಸೇನೆ ಸೇರುತ್ತಾರೆ ಎಂದು ಕುಮಾರಸ್ವಾಮಿ ಸೈನಿಕರನ್ನು ಅವಮಾನಿಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿವ ಅಭಿನಯ ಮಾಡಿದರು.

ಒಟ್ಟೂ ಭಾಷಣದಲ್ಲಿ ಆರು ಸಲ ಸೇನೆಯ ವಿಷಯ, ಎರಡು ಸಲ ಪಾಕ್ ವಿಷಯ ಬರುತ್ತದೆ. ‘ಮಾಸೂಮ್ ಬಚ್ಚೇ’ ಎಂದು ಐದು ಸಲ ಪ್ರಸ್ತಾಪಿಸುವ ಮೋದಿ, ‘ಮಧ್ಯಪ್ರದೇಶ ಸರ್ಕಾರವು ಮುಗ್ಧ ಮಕ್ಕಳ ಮತ್ತು ಗರ್ಭಿಣಿಯರಿಗೆ ಆಹಾರ ನೀಡುವ ಯೋಜನೆಯಲ್ಲಿ ಭ್ರಷ್ಟಾಚಾರ ಮಾಡಿ ಕಾಂಗ್ರೆಸ್‍ಗೆ ದುಡ್ಡು ನೀಡಿದೆ’ ಎಂದು ಅಪಾದಿಸುತ್ತಾರೆ. ಮಾಸೂಮ್ ಬಚ್ಚೇ ಕೆ ಥಾಲಿ’ (ಮುಗ್ಧ ಮಕ್ಕಳ ರೊಟ್ಟಿ) ಕಸಿದಿದ್ದಾರೆ ಎಂಬ ಭಾವನಾತ್ಮಕ ಮಾತನ್ನು ರಿಪೀಟ್ ಮಾಡಿ ಸುಸ್ತಾಗಿ ಮತ್ತೆ ನೀರು ಕುಡಿಯುತ್ತಾರೆ. ಮತ್ತೆ ಮೋದಿ ಮೋದಿ…..

ಉದ್ಯೋಗ ಸೃಷ್ಟಿ, ಬೆಲೆ ಏರಿಕೆ, ಕೃಷಿ ಬಿಕ್ಕಟ್ಟು –ಇದ್ಯಾವುದರ ಕುರಿತು ಚಕಾರವೇ ಇಲ್ಲ. ‘ಮೇಕ್ ಇನ್ ಇಂಡಿಯಾ’ , ಸ್ಮಾರ್ಟ್ ಸಿಟಿ ಬಗ್ಗೆಯೂ ಮಾತೇ ಇಲ್ಲ. ರಫೇಲ್ ಕುರಿತು ಬಾಯಿ ಬಿಡಲೇ ಇಲ್ಲ!

ಮೋದಿಯ ಜೋಶ್ ಇಳಿದು ಹೋಗಿದೆ. ಅದು ವಯಸ್ಸಿನ ಕಾರಣಕ್ಕೆ , ದೇಹದ ಕಾರಣಕ್ಕೆ ಅಲ್ಲ. ಮಾನಸಿಕವಾಗಿ ಮೋದಿ ‘ವೀಕ್’ ಆಗಿದ್ದಾರೆ. ಭಾಷಣಕ್ಕೆ ವಸ್ತುಗಳಿಲ್ಲದೇ ಪಾಕ್, ಸೈನಿಕರ ಮೊರೆ ಹೋಗುತ್ತಿದ್ದಾರೆ. ಕೊಪ್ಪಳ, ಬಳ್ಳಾರಿ, ರಾಯಚೂರು ಕ್ಷೇತ್ರಗಳ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ಈ ಸಭೆ ಆಯೋಜಿಸಲಾಗಿತ್ತು. ಇಲ್ಲಿ ಮೂರೂ ಕಡೆ ಜೆಡಿಎಸ್ ಅಭ್ಯರ್ಥಿಗಳೇ ಇಲ್ಲ. ಆದರೆ ಭಾಷಣದ ಮೊದಲ ಹತ್ತು ನಿಮಿಷವನ್ನು ಜೆಡಿಎಸ್ ಟೀಕೆಯಲ್ಲೇ ಕಳೆದರು. ಇಡೀ ಭಾಷಣದಲ್ಲಿ ಅವರ ಕುಗ್ಗಿದ ಆತ್ಮವಿಶ್ವಾಸ ಎದ್ದು ಕಾಣುತ್ತಿತ್ತು. ಏನೋ ಮಾತಾಡಬೇಕು ಎಂಬಂತೆ ಕಾಲಹರಣ ಮಾಡಿದ್ದಷ್ಟೇ ಬಂತು. ಹಿಂದಿ ಭಾಷಿಕ ಪ್ರೇಕ್ಷಕರ ಎದುರೇ ಸಪ್ಪೆಯಾಗಿರುವ ಮೋದಿ, ಕನ್ನಡ-ತೆಲುಗು ಭಾಷಿಕ ಪ್ರೇಕ್ಷಕರ ಎದುರು ಫುಲ್ ಡಲ್. ಖಾಲಿ ಡಬ್ಬಿಯನ್ನು ಅಲ್ಲಾಡಿಸಿದಂತೆ ಇತ್ತು ಅವರ ಭಾಷಣ.. ನಡುನಡುವೆ ಮಬ್ಭಕ್ತರ ‘ಮೋದಿ ಮೋದಿ’ ಎಂಬುದಷ್ಟೇ ಮೋದಿಗೆ ಹಿತ ತಂದಿರಬಹುದು.

ರಾಹುಲ್ ಗಾಂಧಿ ಕನ್ನಡದಲ್ಲಿ ತಪ್ಪಾಗಿ ಮಾತಾಡಿದಾಗ ನ್ಯೂಸ್ ಮಾಡುವ ಮಾಧ್ಯಮಗಳು, ಮೋದಿ ಮಾಡಿದ ಅಪಭ್ರಂಶಗಳ ಬಗ್ಗೆ ಸುದ್ದಿನೇ ಮಾಡಿದಂತೆ ಕಾಣ್ತಾ ಇಲ್ಲ. ‘ಹಳ್ಳಿ ಹಳ್ಳಿಗೂ ಮೋದಿ’ ಎನ್ನುವಾಗ ಅವರು ‘ಹಲ್ಲಿ ಹಲ್ಲಿಗೂ ಮೋದಿ’ ಎಂದರು. ಸತ್ಯದ ಮಾತೇ ಎಂದು ಸುಮ್ಮನಿದ್ದು ಬಿಡೋಣವೇ?
***

ಈಗ ಮೊದಲ ಪ್ಯಾರಾಕ್ಕೆ ಬನ್ನಿ. ಈ ಸಲ ಪರೀಕ್ಷೆ ಬರೆದ ಎಸ್‍ಎಸ್‍ಎಲ್‍ಸಿ ಹುಡುಗ ಸಂಬಂಧಿಯನ್ನು ಯಾಮಾರಿಸುವ ರೀತಿಯಲ್ಲಿ ಮೋದಿ ಭಾಷಣವಿತ್ತು.
ಮನೆಗೆ ಹೋದ ಸಂಬಂಧಿ, ಆ ಹುಡುಗ ಫೇಲ್ ಆಗ್ತಾನೆ ಬಿಡು ಎಂದು ಪತ್ನಿಗೆ ಹೇಳಿ ಸುಮ್ಮನಾದರಂತೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...