ಚೆನ್ನೈನ ಸಿಬಿಎಸ್ಇ ಶಾಲೆಯಲ್ಲಿ 10 ನೇ ತರಗತಿ ಇಂಗ್ಲಿಷ್ ಪ್ರಶ್ನೆ ಪತ್ರಿಕೆಯಲ್ಲಿ ವಿದಾತ್ಮಕ ಪ್ರಶ್ನೆಯನ್ನು ಕೇಳಲಾಗಿದ್ದು, ‘ಗಣರಾಜ್ಯೋತ್ಸವದಂದು ಕಿಡಿಗೇಡಿಗಳು ಬಾಹ್ಯ ಪ್ರಚೋದನೆಯಡಿ ಹಿಂಸೆ ನೆಡೆಸಿದ್ದು, ಈ ಹಿಂಸಾಚಾರವನ್ನು ಖಂಡಿಸಿ ದಿನ ಪತ್ರಿಕೆಯೊಂದಕ್ಕೆ ಪತ್ರ ಬರೆಯಿರಿ’ ಎಂದು 5 ಅಂಕಕ್ಕೆ ಪ್ರಶ್ನೆಯನ್ನು ಕೇಳಲಾಗಿದೆ.
ವಿವಾದಿತ ಪ್ರಶ್ನೆ ಪತ್ರಿಕೆಯ ಚಿತ್ರವನ್ನು ಖ್ಯಾತ ಸಂಗೀತಕಾರ ಟಿ.ಎಂ. ಕೃಷ್ಣ ತಮ್ಮ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದು, ಪ್ರಸ್ತುತ ಚಿತ್ರವು ವ್ಯಾಪಕವಾಗಿ ಹರಿದಾಡುತ್ತಿದೆ. ಅವರು ತನ್ನ ಟ್ವೀಟ್ನಲ್ಲಿ, “ಇದು ಜನಪ್ರಿಯ ಚೆನ್ನೈ ಶಾಲೆಯ 10 ನೇ ತರಗತಿಯ ಇಂಗ್ಲಿಷ್ ಪ್ರಶ್ನೆ ಪತ್ರಿಕೆಯ ಮಾದರಿ. ಘಟನೆ ಬಗ್ಗೆ ಮತ್ತು ಕೃಷಿ ಮಸೂದೆಗಳ ಬಗ್ಗೆ ಇನ್ನೂ ಚರ್ಚಿಸಲಾಗುತ್ತದೆ. ಆದರೆ ಇಲ್ಲಿ ಘಟನೆಯನ್ನು ‘ಬಾಹ್ಯ ಪ್ರಚೋದನೆಯಡಿ ಹಿಂಸೆ ನಡೆಸುತ್ತಿರುವ ಕಿಡಿಗೇಡಿಗಳು’ ಎಂದು ಹೇಳಲಾಗುತ್ತಿದೆ” ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಈ ಪತ್ರಿಕೆಯ ಪರೀಕ್ಷೆ ಫೆಬ್ರವರಿ 11 ರಂದು ನಡೆದಿದ್ದು, ಈ ಪ್ರಶ್ನೆಯು ಎರಡನೇ ಪರಿಷ್ಕರಣೆ ಪರೀಕ್ಷೆಯ ಭಾಗವಾಗಿತ್ತು ಎಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ: ಉನ್ನಾವೊ ದಲಿತ ಬಾಲಕಿಯರ ಸಾವು: ಪ್ರೀತಿ ನಿರಾಕರಿಸಿದ್ದಕ್ಕೆ ವಿಷಪ್ರಾಶನ ಮಾಡಿದವನ ಬಂಧನ
“ಗಣರಾಜ್ಯೋತ್ಸವದಂದು ರಾಷ್ಟ್ರ ರಾಜಧಾನಿಯಲ್ಲಿ ಭುಗಿಲೆದ್ದ ಹಿಂಸಾಚಾರವು ನಾಗರಿಕರಲ್ಲಿ ಅಸಮಾಧಾನ ಸೃಷ್ಟಿಸಿದೆ. ಕೃಷಿ ಕಾನೂನು ವಿರುದ್ದದ ಪ್ರತಿಭಟನಾಕಾರರು ಸಾರ್ವಜನಿಕ ಆಸ್ತಿಯನ್ನು ನಾಶಪಡಿಸಿದರು ಮತ್ತು ಹಾಡಹಗಲೇ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದರು. ವೈಯಕ್ತಿಕ ಅಗತ್ಯ ಮತ್ತು ಲಾಭಗಳಿಗಿಂತಲೂ ದೇಶ ಮೊದಲು ಎಂದು ಅರಿತುಕೊಳ್ಳಲು ವಿಫಲವಾದ ದುಷ್ಕರ್ಮಿಗಳ ಇಂತಹ ಭಯಾನಕ, ಹಿಂಸಾತ್ಮಕ ಕೃತ್ಯಗಳನ್ನು ಖಂಡಿಸಿ, ನಿಮ್ಮ ನಗರದಲ್ಲಿನ ದಿನಪತ್ರಿಕೆಯೊಂದರ ಸಂಪಾದಕರಿಗೆ ಪತ್ರ ಬರೆಯಿರಿ” ಎಂದು ಪ್ರಶ್ನೆಯು ವಿದ್ಯಾರ್ಥಿಗಳಿಗೆ ತಪ್ಪು ಮಾಹಿತಿಯನ್ನು ನೀಡಿದೆ.
“ಸಾರ್ವಜನಿಕ ಆಸ್ತಿಯನ್ನು ನಾಶಪಡಿಸುವುದು, ರಾಷ್ಟ್ರಧ್ವಜವನ್ನು ಅವಮಾನಿಸುವುದು ಮತ್ತು ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ಮಾಡುವುದು ಸೇರಿದಂತೆ ಇನ್ನಿತರ ಅಕ್ರಮ ಅಪರಾಧಗಳನ್ನು ಯಾವುದೇ ಕಾರಣಕ್ಕೂ ಸಮರ್ಥಿಸಲಾಗುವುದಿಲ್ಲ. ಬಾಹ್ಯ ಪ್ರಚೋದನೆಯಡಿಯಲ್ಲಿ ಕಾರ್ಯನಿರ್ವಹಿಸುವ ಇಂತಹ ಹಿಂಸಾತ್ಮಕ ಕಿಡಿಗೇಡಿಗಳನ್ನು ತಡೆಯಲು ಹಲವು ಸಲಹೆಗಳನ್ನು ನೀಡಿ” ಎಂದು ಕೂಡಾ ಪ್ರಶ್ನೆ ಪತ್ರಿಕೆಯು ಕೇಳಿದೆ.
This is a sample fm a Class X English paper of a popular Chennai school. The incident and the much larger farm bills issue is still being discussed but here this is being said 'violent maniacs under external instigation' pic.twitter.com/N27ooheHJV
— T M Krishna (@tmkrishna) February 19, 2021
ಇದನ್ನೂ ಓದಿ: ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಸಮನ್ಸ್ ಜಾರಿಗೊಳಿಸಿದ ಪಶ್ಚಿಮ ಬಂಗಾಳ ನ್ಯಾಯಾಲಯ
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳನ್ನು ವಿರೋಧಿಸಿ 2 ತಿಂಗಳುಗಳ ಕಾಲದಿಂದ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ರೈತರು ಜನವರಿ 26 ರ ಗಣರಾಜ್ಯೋತ್ಸವದಂದು ಟ್ರಾಕ್ಟರ್ ರ್ಯಾಲಿ ನಡೆಸಿದ್ದರು. ಈ ವೇಳೆ ರ್ಯಾಲಿಯು 99% ಶಾಂತಿಯುತವಾಗಿತ್ತು. ಆದರೆ ರೈತ ಸಂಘಟನೆಯ ಒಂದು ಗುಂಪು ಕೆಂಪುಕೋಟೆಗೆ ನುಗ್ಗಿ ಧಾರ್ಮಿಕ ಧ್ವಜ ಹಾರಿಸಿತ್ತು. ಆನಂತರ ದೀಪ್ ಸಿಧು ಎಂಬ ನಟನನ್ನು ಬಂಧಿಸಿದ್ದು ಆತ ಬಿಜೆಪಿ ಕಾರ್ಯಕರ್ತ ಎಂದು ಆರೋಪಿಸಲಾಗಿದೆ.
ಆದರೆ ಈ ಘಟನೆಯನ್ನು ರೈತ ಮುಖಂಡರು ಖಂಡಿಸಿದ್ದು, ಘಟನೆಯಿಂದ ಅಂತರ ಕಾಯ್ದುಕೊಂಡಿದ್ದರು. ದೆಹಲಿ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ಹಿಂಸಾಚಾರಕ್ಕೆ ಸಂಬಂಧಿಸಿದಂತೆ 152 ಜನರನ್ನು ಬಂಧಿಸಿದ್ದಾರೆ. ಘಟನೆಯ ಪ್ರಮುಖ ಆರೋಪಿ ದೀಪ್ ಸಿಧು, ಬಿಜೆಪಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದವರು ಎಂದು ಈಗಾಗಲೇ ವರದಿಯಾಗಿದೆ.
ಇದನ್ನೂ ಓದಿ: ಯುವಜನರನ್ನು ಗುರಿಯಾಗಿಸಿ ಪ್ರಜಾಪ್ರಭುತ್ವದ ಕತ್ತು ಹಿಸುಕಬೇಡಿ: ಲಿಯೋ ಸಾಲ್ಡಾನಾ
ರೈತರನ್ನು ಕಿಡಿಗೇಡಿಗಳು ಎಂದಿರುವವರು, ಮನುವಾದಿಗಳ ಗುಲಾಮರು.