Homeಅಂಕಣಗಳುಪಿಕೆ ಟಾಕೀಸ್: LGBT ಸಮುದಾಯದ ನೋವು-ನಲಿವಿನ ಪಯಣವನ್ನು ಹಿಡಿಯುವ ಪಾನೋಸ್‌ನ ಸಿನಿಮಾಗಳು

ಪಿಕೆ ಟಾಕೀಸ್: LGBT ಸಮುದಾಯದ ನೋವು-ನಲಿವಿನ ಪಯಣವನ್ನು ಹಿಡಿಯುವ ಪಾನೋಸ್‌ನ ಸಿನಿಮಾಗಳು

- Advertisement -
- Advertisement -

ಪಿಕೆ ಟಾಕೀಸ್ 07/ ಜಾಗತಿಕ ಸಿನಿಮಾ/ ಗ್ರೀಸ್/ ಪಾನೋಸ್ ಕೌತ್ರಾಸ್

ಕ್ಸೇನಿಯಾ (2014): ಕ್ಸೇನಿಯಾ ಎಂದರೆ ಗ್ರೀಕ್ ಪುರಾಣಗಳ ಪ್ರಕಾರ ಅತಿಥಿದೇವೋಭವ. ದೂರದೂರಿನಿಂದ ಬಂದ ಎಲ್ಲರಿಗೂ ಅವರ ಕುರಿತಾಗಿ ಯಾವುದೇ ಪ್ರಶ್ನೆಗಳನ್ನು ಕೇಳದೆ, ಊಟ, ವಸತಿ ಮತ್ತು ರಕ್ಷಣೆಯನ್ನು ಒದಗಿಸಿಬೇಕು ಎಂಬ ಮತ್ತು ಅವರ ನಂಬಿಕೆಯ ಪ್ರಕಾರ ಅತಿಥಿಗಳ ರೂಪದಲ್ಲಿ ದೇವರೇ ಬಂದಿರಬಹುದೆಂಬ ಪದ್ದತಿ.

ತಾಯಿ ಅಲ್ಬೇನಿಯನ್, ತಂದೆ ಗ್ರೀಸಿಗ. ಅವರ ಇಬ್ಬರೂ ಮಕ್ಕಳು ಅತಿ ಸಣ್ಣವರಿದ್ದಾಗಲೇ ತಂದೆ ಅವರನ್ನು ಬಿಟ್ಟು ಗ್ರೀಸಿಗೆ ಬಂದುಬಿಟ್ಟಿರುತ್ತಾನೆ. ಅತಿಯಾದ ಮದ್ಯಪಾನದಿಂದ ತಾಯಿ ತೀರಿಕೊಂಡ ನಂತರ, ಹದಿನೈದು ವರ್ಷಗಳ ಸಲಿಂಗಿ ಬಾಲಕ (ಮಕ್ಕಳಲ್ಲಿ ಒಬ್ಬ) ಗ್ರೀಸಿಗೆ ಬರುತ್ತಾನೆ. ಈಗಾಗಲೇ ಅವನ ಅಣ್ಣ ಹತ್ತೊಂಬರ ಯುವಕ ಗ್ರೀಸಿನ ರೆಸ್ಟರೆಂಟೊಂದರಲ್ಲಿ ಕೆಲಸ ಮಾಡುತ್ತಿರುತ್ತಾನೆ, ಇವರಿಬ್ಬರೂ ಸೇರಿ ತಂದೆಯನ್ನು ಹುಡುಕುವ ಪ್ರಯಾಣವೇ ಈ ಸಿನಿಮಾದ ಕಥಾನಕ.

ಹದಿನೈದು ವರ್ಷಗಳ ಸಲಿಂಗಿ ಹುಡುಗ ಅತಿ ಸಣ್ಣ ಮಗುವಿನಂತೆ ಸದಾ ಲಾಲಿಪಾಪ್ ಚೀಪುತ್ತಿರುತ್ತಾನೆ. ತನ್ನ ಹಾವ ಭಾವಗಳು ಮತ್ತು ತೊಡುವ ಬಟ್ಟೆಗಳಲ್ಲೇ ತನ್ನ ಲೈಂಗಿಕ ಮನೋಧರ್ಮವನ್ನು ಪ್ರದರ್ಶಿಸುತ್ತಿರುತ್ತಾನೆ. ಮೊದಮೊದಲು ಅಣ್ಣ ತನ್ನ ತಮ್ಮನ ನಡತೆಯಿಂದ ಮುಜುಗರಗೊಂಡರೂ, ಅವನನ್ನು ಪ್ರೀತಿಸುತ್ತಾನೆ.

ಕ್ಸೇನಿಯಾ (2014)

ಇವರಿಬ್ಬರ ತಾಯಿ ಉತ್ತಮ ಗಾಯಕಿಯಾಗಿರುತ್ತಾಳೆ. ಅವಳ ಧ್ವನಿ ಇವರಿಬ್ಬರಿಗೂ ಬಂದಿದೆ ಎಂದೆಣೆಸಿ, ಇಬ್ಬರೂ ಸೇರಿ ಟಿವಿ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿ ಗೆಲ್ಲಲೇಬೇಕೆಂದುಕೊಳ್ಳುತ್ತಾರೆ. ಈ ಸ್ಪರ್ಧೆಯನ್ನು ಗೆದ್ದರೆ ಅವರಿಗೆ ದುಡ್ಡು ಸಿಗುತ್ತೆ ಹಾಗೂ ತಂದೆಯನ್ನು ಹುಡುಕಿ ಗ್ರೀಸಿನ ಪೌರತ್ವ ಪಡೆಯುವುದೇ ಮೂಲಗುರಿಯಾಗಿರುತ್ತದೆ.

ಸಿನಿಮಾದ ಮೊದಲ ಫ್ರೇಮಿನಿಂದಲೂ ಸಣ್ಣ ಮಗ ಅವನ ಜೊತೆಯಲ್ಲಿ ಮೊಲವೊಂದನ್ನು ಸಾಕುತ್ತಿರುವುದನ್ನು ತೋರಿಸುತ್ತಾರೆ. ಗ್ರೀಸಿನ ’ಗೇ’ಕ್ಲಬಿನಲ್ಲಿ ತಮ್ಮನ ಗಲಾಟೆಯಿಂದ ಅಣ್ಣ ಪೊಲೀಸ್ ಸ್ಟೇಷನ್ನಿಗೆ ಹೋಗಬೇಕಾಗುತ್ತದೆ. ಅಲ್ಲಿ ಪೊಲೀಸರು ವಲಸಿಗರ ಮೇಲೆ ವಿನಾ ಕಾರಣ ದೌರ್ಜನ್ಯ ನಡೆಸುವ ಮನಕಲಕುವ ದೃಶ್ಯವೂ ಇದೆ.

ಹಾಗೆಯೇ ತನ್ನ ತಮ್ಮನನ್ನು ನೋಡಿ ಕೆಲ ಹುಡುಗರು ಗೇಲಿ ಮಾಡಿದಾಗ, ಅವರಿಗೆ ಭಯಪಡದೇ ಧೈರ್ಯವಾಗಿ ಅವರೊಂದಿಗೆ ಜಗಳಕ್ಕೆ ಇಳಿಯುತ್ತಾನೆ. ಈ ಸಮಯದಲ್ಲಿ ತಮ್ಮ ಅವನ ಬ್ಯಾಗಿನಿಂದ ಪಿಸ್ತೂಲನ್ನ ಹೊರತೆಗೆದು ಹುಡುಗರತ್ತ ಗುಂಡು ಹಾರಿಸುತ್ತಾನೆ. ಇದರಿಂದ ಒಬ್ಬ ಹುಡುಗನೊಬ್ಬನಿಗೆ ಪೆಟ್ಟಾಗುತ್ತದೆ. ಈ ಭಯದಿಂದ ಇವರಿಬ್ಬರೂ ಕಾಡಿನಂತಿರುವ ಜಾಗದಲ್ಲಿ ಅವಿತು ಕುಳಿತಿರುತ್ತಾರೆ. ಇಲ್ಲಿ ಅಣ್ಣ-ತಮ್ಮಂದಿರ ನಡುವಿನ ಸಂಬಂಧ ಗಾಢವಾಗುತ್ತದೆ.

ತಮ್ಮನ ದೃಷ್ಟಿಕೋನದಿಂದ ಸಿನಿಮಾ ಕಥೆ ಚಿತ್ರಿತವಾಗುವಾಗ, ಜೀವಂತವಾಗಿರುವ ಮೊಲ ಕೇವಲ ಬೊಂಬೆ ಎಂಬುದನ್ನು ಕಾಣಬಹುದು. ಬಹುಶಃ ಹುಡುಗನ ಖುಷಿಯನ್ನು ಭ್ರಮೆಯೆಂದು ಸಂಕೇತಿವಾಗಿ ಬೊಂಬೆಯಲ್ಲಿ ನಿರ್ದೇಶಕ ತೋರಿಸುತ್ತಿದ್ದಾರೆ.

ಕೊನೆಗೆ ಅವರ ತಂದೆಯನ್ನು ಹುಡುಕಿ ಅವನ ಮುಂದೆ ಪಿಸ್ತೂಲನ್ನಿಟ್ಟು ಸತ್ಯಾಸತ್ಯತೆಗಳನ್ನು ಕೇಳಿದಾಗ, ಅವನಿಗೆ ಇಲ್ಲೊಂದು ಕುಟುಂಬವಿರುತ್ತದೆ. ತಮ್ಮನ ಉದ್ರೇಕವನ್ನು ಅಣ್ಣ ತಡೆದು ಸಮಾಧಾನ ಮಾಡಿ ಅಲ್ಲಿಂದ ಮುಂದೆ ಸಾಗುತ್ತಾ, ಅಲೆಮಾರಿಗಳಾಗಿ ಮುಂದೆ ಹೋಗುವುದರಲ್ಲಿ ಸಿನಿಮಾ ಅಂತ್ಯವಾಗುತ್ತದೆ.

ಈ ಸಿನಿಮಾದಲ್ಲಿ ಹದಿಹರೆಯುವ ವಯಸ್ಸಿನಲ್ಲಿ ಕಾಣುವ ಸ್ಕಿಝೋಪ್ರೇನಿಯಾ, ಅಲ್ಬೇನಿಯನ್ ಮತ್ತು ಗ್ರೀಸ್ ದೇಶಗಳ ನಡುವಿನ ವಲಸಿಗರ ನೋವನ್ನು, ಸಮಾಜದಲ್ಲಿ ಗಾಢಾವಾಗಿರುವ ’ಹೋಮೊಫೋಬಿಯಾ’ವನ್ನು ಸಹಜವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು.

ಅತಿಥಿದೇವೊಭವ ಎಂದು ಹೇಳಿದರೂ, ಬೇರೆ ಭಾಷೆಯವರು ಅಥವಾ ದೇಶದವರು ಬಂದೊಡನೆ ಅವರನ್ನು ಹೊರಗೆ ತಳ್ಳಲು ಮತ್ತು ಶತ್ರುಗಳಂತೆ ನೋಡುವ ದ್ವಂದ್ವ ಮತ್ತು ವಿರೋಧಾಭಾಸವನ್ನು ನಿರ್ದೇಶಕ ಕಟ್ಟಿಕೊಟ್ಟಿದ್ದಾನೆ.

ಸ್ಟ್ರೆಲ್ಲಾ (2009): ಸತತ ಹದಿನೈದು ವರ್ಷಗಳ ಜೈಲು ಶಿಕ್ಷೆಯ ನಂತರ ಹೊರ ಬಂದ ಯೊರ್ಗೊಸ್ ಐವತ್ತರ ಗಂಡಸ್ಸು. ಹೊರಗೆ ಬಂದು ಬದಲಾದ ಜಗತ್ತಿಗೆ ಹೊಂದಿಕೊಳ್ಳುತ್ತಾ, ತಿಳಿದವರನ್ನು ದೂರವಾಣಿಯ ಮೂಲಕ ಸಂಪರ್ಕಿಸಲು ಪ್ರಯತ್ನಿಸುವ ಸಮಯದಲ್ಲಿ, ಅವನು ತಂಗಿದ್ದ ಹೋಟಿಲಿನಲ್ಲಿ ಯುವ ಟ್ರಾನ್ಸ್‌ಜೆಂಡರ್ ಒಬ್ಬರ ಪರಿಚಯವಾಗುತ್ತದೆ. ಅವಳ ಸೌಂದರ್ಯಕ್ಕೆ ಮರುಳಾದ ಯೊರ್ಗೊಸ್ ಕೂಡಲೇ ಲೈಂಗಿಕ ಸಂಪರ್ಕವನ್ನು ಸಾಧಿಸುತ್ತಾನೆ. ಆ ಟ್ರಾನ್ಸ್‌ಜೆಂಡರ್ ಸ್ಟೆಲ್ಲಾ, ಆದರೆ ಅವಳ ಗೆಳತಿಯರೆಲ್ಲರೂ ಅವಳನ್ನು ಸ್ಟ್ರೆಲ್ಲಾ ಎಂದು ಕರೆಯುತ್ತಾರೆ, ಅದರರ್ಥ ಹುಚ್ಚಿ ಎಂದು.

ಹೀಗೆ ಯಾರು ಇಲ್ಲದ ಯೊರ್ಗೊಸ್ ಮತ್ತು ಸ್ಟೆಲ್ಲಾರ ಸಂಬಂಧ ಏರ್ಪಟ್ಟು, ಸ್ಟೆಲ್ಲಾ ಅವನನ್ನು ತನ್ನ ಮನೆಗೆ ಆಹ್ವಾನಿಸುತ್ತಾಳೆ. ಅವಳೊಂದಿಗೆ ತಂಗಲೂ ಅನುಮತಿಸುತ್ತಾಳೆ. ಸಮಯ ಕಳೆದಂತೆ ಯೊರ್ಗೊಸ್ ಹಳ್ಳಿಯಲ್ಲಿರುವ ಅವನ ಕುಟುಂಬವನ್ನು ನೋಡಲು ತೆರಳುತ್ತಾನೆ. ಅಲ್ಲಿನ ಹೆಂಡತಿ ತೀರಿಕೊಂಡ ವಿಷಯ ತಿಳಿಯುತ್ತದೆ. ಇದ್ದೊಬ್ಬ ಮಗ ಅಥೆನ್ಸಿನಲ್ಲಿ ಇರುವುದಾಗಿ ಮಾಹಿತಿ ಸಿಗುತ್ತದೆ. ಅಲ್ಲಿರುವ ಮನೆಯನ್ನು ಮಾರುವುದಾಗಿ ಗೆಳೆಯನ ಬಳಿ ಹೇಳಿ, ಗಿರಾಕಿ ಹುಡುಕಲು ತಿಳಿಸಿ ಅಥೆನ್ಸ್‌ಗೆ ಬರುತ್ತಾನೆ.

ಸ್ಟ್ರೆಲ್ಲಾ (2009)

ಇತ್ತ ಸ್ಟೆಲ್ಲಾಳ ಜೊತೆ ಸಂಬಂಧ ಮಾನಸಿಕವಾಗಿ ಮತ್ತು ದೈಹಿಕವಾಗಿ ಗಾಢವಾಗುತ್ತದೆ. ಸ್ಟೆಲ್ಲಾ ವೇಶ್ಯಾವಾಟಿಕೆಯಲ್ಲಿ ತೊಡಗಿಕೊಂಡು ಹಣ ಸಂಪಾದಿಸುತ್ತಿರುತ್ತಾಳೆ, ಜೊತೆಗೆ ಮಂಗಳಮುಖಿಯರೆಲ್ಲ ಸೇರಿ, “ಡ್ರ್ಯಾಗ್-ಶೋ” ನಡೆಸುತ್ತಿರುತ್ತಾರೆ. ಅಂದರೆ ಗಾಯನಕೂಟ. ಇವೆಲ್ಲವನ್ನು ನೋಡಿ ಸ್ಟೆಲ್ಲಾ ಮೇಲಿನ ಪ್ರೀತಿ ಹೆಚ್ಚಾಗುತ್ತದೆ.

ಆದರೆ ವಾಪಾಸ್ ಹಳ್ಳಿಯಲ್ಲಿರುವ ಮನೆಯನ್ನು ಮಾರುವ ಸಲುವಾಗಿ ಗಿರಾಕಿಯೊಂದಿಗೆ ಮಾತಾಡಿದಾಗ, ಅವನ ಕಾಣದ ಮಗನ ಕುರಿತಾಗಿ ಮಾಹಿತಿ ಕೇಳಿ ಅಘಾತಕ್ಕೊಳಾಗುತ್ತಾನೆ. ಅದು ಅವನ ಮಗನೇ ಸ್ಟೆಲ್ಲಾಳಾಗಿರುವುದು! ಸ್ಟೆಲ್ಲಾ ಒಪ್ಪಿಕೊಳ್ಳುತ್ತಾಳೆ.

ಯೊರ್ಗೊಸ್ ತನ್ನ ಮಗ ಚಿಕ್ಕವನಿದ್ದಾಗ ಮಾವನೊಬ್ಬ ಅವನೊಂದಿಗೆ ಲೈಂಗಿಕ ದೌರ್ಜನ್ಯ ನಡೆಸುವುದನ್ನು ನೋಡಿ, ಮಾವನನ್ನು ಕೊಂದು ಜೈಲಿಗೆ ಹೋಗಿರುತ್ತಾನೆ. ಈ ವಿಷಯವನ್ನು ಯಾರಿಗೂ ಹೇಳದೆ ತನ್ನಲ್ಲೇ ಮುಚ್ಚಿಟ್ಟುಕೊಂಡಿರುತ್ತಾನೆ. ಕೊನೆಗೆ ಜೈಲಿನಿಂದ ಬಿಡುಗಡೆಯಾದ ನಂತರ ಸ್ವತಃ ತಾನೇ ಮಗನೊಂದಿಗೆ ಲೈಂಗಿಕ ಸಂಬಂಧ ಇಟ್ಟುಕೊಂಡಿದ್ದರ ಕುರಿತು ನೈತಿಕ ಬಿಕ್ಕಟ್ಟಿನಲ್ಲಿ ಸಿಕ್ಕಿಕೊಂಡು, ಅಪರಾಧಿ ಮನೋಭಾವದಿಂದ ಸ್ಟೆಲ್ಲಾಳಿಂದ ದೂರವಾಗಿಬಿಡುತ್ತಾನೆ.

ಕೆಲ ಕಾಲದ ನಂತರ ಯೊರ್ಗೊಸ್ ಸ್ಟೆಲ್ಲಾಳನ್ನು ಭೇಟಿಯಾಗಿ ಅವಳನ್ನು ಅದೇ ಸ್ಥಿತಿಯಲ್ಲಿ ಒಪ್ಪಿಕೊಳ್ಳುತ್ತಾನೆ. ಕೊನೆಗೆ ಹೊಸ ವರ್ಷದ ಸಂಭ್ರಮದಲ್ಲಿ ಯೊರ್ಗೊಸ್‌ನ ಜೈಲಿನ ಗೆಳೆಯ, ಸ್ಟೆಲ್ಲಾ ಮತ್ತು ಅವಳ ಗೆಳತಿಯರೆಲ್ಲ ಸೇರಿ ಸಂಭ್ರಮಿಸುವುದನ್ನು ತೋರಿಸುವುದರ ಮೂಲಕ ಸಿನಿಮಾದ ಅಂತ್ಯವಾಗುತ್ತದೆ.

ಪಾನೋಸ್ ಕೌತ್ರಾಸ್: ಪಾನೋಸ್‌ರ ಸಿನಿಮಾಗಳು ಮುಕ್ತವಾಗಿ LGBT ಸಮುದಾಯದವರ ಬದುಕನ್ನು ಕಟ್ಟಿಕೊಡುತ್ತವೆ. ನಗ್ನವಾಗಿ ನಟ ನಟಿಯರನ್ನು ಚಿತ್ರಿಸಿದರೂ, ಅದು ಅವರ ನಡುವಿನ ಅನ್ಯೋನ್ಯತೆ ಮತ್ತು ಪ್ರೀತಿಯನ್ನು ಪ್ರೇಕ್ಷಕರಿಗೆ ದಾಟಿಸಲು ಮಾತ್ರ.

ನಿರ್ದೇಶಕರ ಪ್ರಕಾರ ಸಮಾಜದಲ್ಲಿರುವ ’ಹೋಮೊಪೋಬಿಯಾ’ವನ್ನು ಹೊರಹಾಕಿ, ಗೇ, ಲೆಸ್ಬಿಯನ್, ಟ್ರಾನ್ಸ್‌ಜೆಂಡರ್ ಮುಂತಾದ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಗಳನ್ನು ಎಲ್ಲರಂತೆ ಸಹಜವಾಗಿ ಕಾಣಬೇಕೆಂಬುದೇ ಇವರ ಸಿನಿಮಾಗಳ ಮೂಲ ಧ್ಯೇಯ.

ಪಾನೋಸ್ ಕೌತ್ರಾಸ್

ಪಾನೋಸ್‌ರ ಸಿನಿಮಾಗಳು ಬದುಕಿನ ಸಹಜತೆಯನ್ನು ಚಿತ್ರಿಸುತ್ತಾ, ಪಾತ್ರಗಳು ನಮ್ಮಲ್ಲಿ ಒಂದಾಗಿಬಿಡುತ್ತಾರೆ. ಸಹಜವಾದ ಕಷ್ಟಗಳು, ಸಂಬಂಧಗಳಲ್ಲಿನ ಸಂಕೀರ್ಣತೆಗೆ ಕನ್ನಡಿ ಹಿಡಿದು ಎಲ್ಲ ಪ್ರೇಕ್ಷಕರೂ ಸಿನಿಮಾ ಜೊತೆಗೆ ರಿಲೇಟ್ ಮಾಡಿಕೊಳ್ಳಲು ಸಾಧ್ಯವಾಗಿಸುತ್ತಾರೆ.

ಇವರ ಸಿನಿಮಾಗಳಲ್ಲಿ LGBT ಸಮುದಾಯದ ನೋವು ನಲಿವಿನ ಜೊತೆಗೆ, ಗ್ರೀಸಿನ ರಾಜಕೀಯ ಮತ್ತು ಸಾಮಾಜಿಕ ಸ್ಥಿತಿಗಳನ್ನು ಅತಿ ಸ್ಫುಟವಾಗಿ ಹಿಡಿದಿಟ್ಟಿದ್ದಾರೆ. ಬಣ್ಣಗಳ ಮೂಲಕವೇ ಕಥೆ ಅಥವಾ ಪಾತ್ರಗಳ ಕುರಿತು ಹೇಳುವುದು, ಪಾತ್ರಗಳು ಸದಾ ಕಿರಿದಾದ ಜಾಗಗಳಲ್ಲಿ ವ್ಯವಹರಿಸುವುದು ವಿಶೇಷ.

ಪಾನೋಸ್ ತನ್ನೆಲ್ಲಾ ಸಿನಿಮಾಗಳಿಗೂ ಕಥೆ ಬರೆದಿದ್ದು, ಮೂರು ಸಿನಿಮಾಗಳಲ್ಲಿ ನಿರ್ಮಾಪಕನಾಗಿಯೂ ತೊಡಗಿಸಿಕೊಂಡಿದ್ದಾನೆ. ಹಾಗೂ ಕೆಲ ಸಿನಿಮಾಗಳಲ್ಲಿ ಕ್ಯಾಮಿಯೋ/ಸಣ್ಣ ಪಾತ್ರವಾಗಿ ಕಾಣಿಸಿಕೊಳ್ಳುವುದರ ಮೂಲಕ ನಟನೆಯನ್ನೂ ಮಾಡಿರುವುದು ವಿಶೇಷ.


ಇದನ್ನೂ ಓದಿ: ಪಿಕೆ ಟಾಕೀಸ್: ಬಹುತ್ವ ಮತ್ತು ಸಹಬಾಳ್ವೆಯೇ ನಮ್ಮ ಮುಂದಿರುವ ಏಕೈಕ ದಾರಿಯೆನ್ನುವ ಸಿತೋಸ್ ಸಿನಿಮಾಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಲಿತ ವಿದ್ಯಾರ್ಥಿನಿ ಕೊಲೆ ಪ್ರಕರಣ: ಪ್ರತಿಭಟನಾಕಾರರ ಮೇಲೆ ಪೊಲೀಸ್ ಲಾಠಿಚಾರ್ಜ್; ಯೋಗಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ

ನವದೆಹಲಿ: ಜುಲೈ 8 ರಂದು ಮೀರತ್‌ನಲ್ಲಿ ನಡೆದ ದಲಿತ ವಿದ್ಯಾರ್ಥಿನಿಯ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ದಲಿತ ಕಾರ್ಯಕರ್ತರು ಮತ್ತು ಮೃತರ ಕುಟುಂಬ ಸದಸ್ಯರ ಮೇಲೆ ಉತ್ತರ ಪ್ರದೇಶ ಪೊಲೀಸರು ಭೀಕರ ಹಲ್ಲೆ,...

ಒಮಾನ್ ಕರಾವಳಿಯಲ್ಲಿ ಮತ್ತೊಂದು ಹಡಗಿನ ಮೇಲೆ ದಾಳಿ: ಭಾರತೀಯ ಪ್ರಜೆ ನಾಪತ್ತೆ, 10 ಜನರ ರಕ್ಷಣೆ: ವಿದೇಶಾಂಗ ಸಚಿವಾಲಯ ಮಾಹಿತಿ

ನವದೆಹಲಿ: ಜುಲೈ 12 ರಂದು ಒಮಾನ್ ಕರಾವಳಿಯ ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಸಾಗುತ್ತಿದ್ದ ‘ಜಿಎಫ್‌ಎಸ್ ಗ್ಯಾಲಕ್ಸಿ’ (GFS Galaxy) ಎಂಬ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಭೀಕರ...

SIR ಪ್ರಕ್ರಿಯೆಯಲ್ಲಿ ಎಐ ಬಳಕೆ, ಭಾರೀ ಪ್ರಮಾಣದಲ್ಲಿ ಮತದಾರರ ಹೆಸರು ಡಿಲೀಟ್ : ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ ವಿಶೇಷ ವರದಿಗಾರರು

ಭಾರತೀಯ ಚುನಾವಣಾ ಆಯೋಗ (ಇಸಿಐ) ಕೈಗೊಂಡ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು (ಎಸ್‌ಐಆರ್) ವ್ಯಾಪಕ ಪ್ರಮಾಣದಲ್ಲಿ ಮತದಾರರ ಹೆಸರುಗಳ ಅಳಿಸುವಿಕೆಗೆ ಕಾರಣವಾಗಿದೆ ಮತ್ತು ಇದು ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳ...

ಮಹಾರಾಷ್ಟ್ರ: ನಂದೂರ್ಬಾರ್‌ನ ಸರ್ಕಾರಿ ಹಾಸ್ಟೆಲ್‌ನಲ್ಲಿ ಕಲುಷಿತ ಆಹಾರ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ; ತೀವ್ರಗೊಂಡ ತನಿಖೆ 

ನಂದೂರ್ಬಾರ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಶಹಾಡಾ ತಾಲೂಕಿನಲ್ಲಿರುವ ಸರ್ಕಾರಿ ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯದಲ್ಲಿ ಶಂಕಿತ ವಿಷಪೂರಿತ ಆಹಾರ ಸೇವಿಸಿ ಸುಮಾರು 40 ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಕಳವಳಕಾರಿ ಘಟನೆ ವರದಿಯಾಗಿದೆ.  ಹಾಸ್ಟೆಲ್‌ನಲ್ಲಿ...

ಇರಾನ್‌ನ 140 ಸ್ಥಳಗಳನ್ನು ಗುರಿಯಾಗಿಸಿ ಅಮೆರಿಕದಿಂದ ದಾಳಿ : ಬಹ್ರೇನ್, ಕತಾರ್, ಯುಎಇ ಮೇಲೆ ಇರಾನ್‌ನಿಂದ ಪ್ರತಿದಾಳಿ

ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನಡೆಸಿದ ದಾಳಿಯಿಂದಾಗಿ ಸರಕು ಸಾಗಣೆ ಹಡಗೊಂದು ಹೊತ್ತಿ ಉರಿದು, ಅದರಲ್ಲಿದ್ದ ಸಿಬ್ಬಂದಿ ಹಡಗು ಬಿಟ್ಟು ಹೊರಡುವಂತಾಗಿತ್ತು. ಈ ಘಟನೆಯನ್ನು ಖಂಡಿಸಿ ಅಮೆರಿಕ ಭಾನುವಾರ (ಜು.12) ಮುಂಜಾನೆ ಇರಾನ್ ಮೇಲೆ...

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...