Homeಅಂಕಣಗಳುಪಿಕೆ ಟಾಕೀಸ್: ಕೌಟುಂಬಿಕ ಕರಾಳತೆಯನ್ನು ಬಿಂಬಿಸುವ ಯಾನಿಸ್‌ನ ವರ್ಣರಹಿತ ಚಿತ್ರಗಳು

ಪಿಕೆ ಟಾಕೀಸ್: ಕೌಟುಂಬಿಕ ಕರಾಳತೆಯನ್ನು ಬಿಂಬಿಸುವ ಯಾನಿಸ್‌ನ ವರ್ಣರಹಿತ ಚಿತ್ರಗಳು

- Advertisement -
- Advertisement -

ಪಿಕೆ ಟಾಕೀಸ್ 11/ ಜಾಗತಿಕ ಸಿನಿಮಾ/ ಗ್ರೀಸ್/ ಯಾನಿಸ್ ಯಕಾನೊಮಿಡಿಸ್

ಮ್ಯಾಚ್ ಬಾಕ್ಸ್ (2003): ಇಕ್ಕಟ್ಟಿನ ಚೌಕದಲ್ಲಿ ಬೆಂಕಿ ಹತ್ತಿಕೊಂಡು ಉರಿದು ಹೋಗಬಲ್ಲವರೆಲ್ಲವರು ಒಟ್ಟಾಗಿ ಇರುವುದನ್ನು ರೂಪಕವಾಗಿ ಮ್ಯಾಚ್ ಬಾಕ್ಸ್/ ಬೆಂಕಿಪೊಟ್ಟಣ ಎಂದಿದ್ದಾರೆ. ಅದೇ ಈ ಸಿನಿಮಾದ ಕಥಾನಕ. ಒಂದೇ ಮನೆಯಲ್ಲಿ ಬೇಸಿಗೆಯ ಬಿಸಿಯಿಂದ ಬೆವರು ಸುರಿಯುವ ಹವಾಮಾನದಲ್ಲಿ ಕುಟುಂಬ ಸದಸ್ಯರು ಪರಸ್ಪರ ಕೋಪಾಗ್ನಿಗೆ ಒಳಗಾಗದರೆ ಏನಾಗಬಹುದು?

ಬಿಸಿ ತುತ್ತತುದಿ ಮುಟ್ಟಿದಾಗ, ಐವತ್ತು ವಯಸ್ಸು ದಾಟಿದ ಮುಂಗೋಪಿ ಡಿಮಿಟ್ರಿ ತನ್ನ ಅಂಗಡಿ ವ್ಯಾಪಾರದ ಕುರಿತು ನಿರಾಸಕ್ತನಾದ ಕೆಲಸಗಾರನಿಗೆ, ವ್ಯವಹಾರಗಳನ್ನು ಗಮನವಿಟ್ಟು ಸರಿಯಾಗಿ ನಡೆಸುವಂತೆ ಜೋರಾಗಿ ಕೂಗಿ ಕಿರುಚಾಡುತ್ತಿರುತ್ತಾನೆ. ಕೆಲಸಗಾರ ಅವನ ಮಾತಿಗೆ ಹೌದು ಅಥವಾ ಇಲ್ಲವೆಂಬಂತೆ ಉತ್ತರ ನೀಡುತ್ತಿರುತ್ತಾನೆ. ಇದರಿಂದ ಇನ್ನಷ್ಟು ಕೋಪಗೊಂಡು ಬೈಯ್ಯುತ್ತಿರುತ್ತಾನೆ. ಇದೆಲ್ಲವೂ ನಮಗೆ ಸಂಬಂಧಿಸಿದಲ್ಲವೆಂಬಂತಿರುವ ಬೇಜಾವಾಬ್ದಾರಿ ಯುವ ಮಗ, ತಂದೆಗೆ ತಿರುಗಿ ಬೈಯ್ಯುವ ಮಗಳು, ಡಿಮಿಟ್ರಿಯ ಬಗ್ಗೆ ಆಸಕ್ತಿಯೆ ವಹಿಸದ ಹೆಂಡತಿ ಇವೆಲ್ಲದರ ಜೊತೆಗೆ ಉರಿಯುವ ಬಿಸಿಲು!

ಮಹಡಿಯ ಮೇಲೆ ಈ ಬೇಜಾವಾಬ್ದಾರಿ ಮಗ ತನ್ನ ಫೋನಿನಲ್ಲಿ ಗೆಳೆಯರೊಂದಿಗೆ, ತನ್ನ ತಂದೆ ಮಾತನಾಡುವಾಗ ಬಳಸುವ ಅವೇ ಕೆಟ್ಟ ಮಾತುಗಳನ್ನು ಆಡುತ್ತಾ ಹುಡುಗಿಯರು ಮತ್ತು ಚಟಗಳ ಕುರಿತು ಮಾತಾಡುತ್ತಿರುತ್ತಾನೆ. ಬಾಲ್ಕನಿಯಲ್ಲಿ ಮಗಳು ಕೋಪದಿಂದ ಫೋನಿನಲ್ಲಿ ಯಾರ ಜೊತೆಗೋ ಕೂಗಾಡುತ್ತಿರುತ್ತಾಳೆ. ಹೀಗೆ ಮನೆಯ ಸದಸ್ಯರೆಲ್ಲ ಅವರವರ ಪಾಡಿಗೆ ಅವರದ್ದೇ ಪ್ರಪಂಚಗಳಲ್ಲಿ ಕೋಪದಿಂದ ಕುದಿಯುತ್ತಿರುತ್ತಾರೆ.

PC : Taste of Cinema

ಮತ್ತೊಂದು ಪ್ರಸಂಗದಲ್ಲಿ, ಅಂಗಡಿಯ ಮತ್ತೊಬ್ಬ ಕೆಲಸಗಾರನಿಗೆ ಗರ್ಭಿಣಿ ಹೆಂಗಸೊಬ್ಬಳನ್ನು ಮದುವೆಯಾಗುವಂತೆ ಡಿಮಿಟ್ರಿ ಒತ್ತಾಯಿಸುತ್ತಾನೆ. ಅದಕ್ಕೆ, ಆ ಮಹಿಳೆ ಗರ್ಭ ಧರಿಸುವುದಕ್ಕೂ ತನಗೂ ಸಂಬಂಧವಿಲ್ಲವೆಂದು ಆ ಕೆಲಸಗಾರ ಹೇಳುತ್ತಾನೆ. ಆದರೆ ಡಿಮಿಟ್ರಿ ಸಿಡಿಮಿಡಿಗೊಂಡು ಅವನು ಆಕೆಯನ್ನು ಮದುವೆಯಾಗಲೇಬೇಕೆಂದು ಹಠಮಾಡುತ್ತಾನೆ. ಆಗ ಅಲ್ಲಿಂದ ಕೆಲಸಗಾರ ಹೋಗಿಬಿಡುತ್ತಾನೆ. ಇವೆಲ್ಲಾ ಜಗಳದ ಗದ್ದಲದಿಂದ ಡಿಮಿಟ್ರಿಗೆ ತನ್ನ ಹೆಂಡತಿಯೊಂದಿಗೆ ಜಗಳ ಹಚ್ಚಿಕೊಳ್ಳುತ್ತದೆ. ಶಾಂತವಾಗಿದ್ದವಳು ಒಮ್ಮೆಲೆ ಕೋಪಗೊಂಡು ಅವಳು ಧರಿಸಿದ್ದ ಬಟ್ಟೆಗಳನ್ನು ಬಿಚ್ಚಿ, ಜಗಳಕ್ಕಿಳಿದು ಡಿಮಿಟ್ರಿಯನ್ನು ಬೈಯ್ಯುತ್ತಾ, ತಮ್ಮ ಮಗಳು ಡಿಮಿಟ್ರಿಯಿಂದ ಹುಟ್ಟಿಲ್ಲವೆಂದು ಹೇಳಿ ಹೊರನಡೆಯುತ್ತಾಳೆ.

ಈ ವಿಷಯ ತಿಳಿದು ಡಿಮಿಟ್ರಿ ಆಘಾತದಿಂದ ಕುಸಿಯುತ್ತಾನೆ. ಆಗ ಅವನ ನಿರಾಸಕ್ತ ಕೆಲಸಗಾರ ಬರುತ್ತಾನೆ. ’ಕೆಲಸಗಾರನಿಗೆ ತನ್ನ ಹೆಂಡತಿಯ ಮೇಲೆ ನಂಬಿಕೆ ಇದಿಯಾ’ ಎಂದು ಕೇಳುತ್ತಾನೆ ಡಿಮಿಟ್ರಿ. ಈ ಪ್ರಶ್ನೆಗೂ ಉತ್ತರಿಸದ ಆ ಕೆಲಸಗಾರನಿಗೂ ಮತ್ತು ಡಿಮಿಟ್ರಿಗೂ ಜಗಳ ಏರಿಬಿಡುತ್ತದೆ. ಡಿಮಿಟ್ರಿಯ ಉದ್ವೇಗವನ್ನು ತಣ್ಣಾಗಿಸಲು ಸ್ನಾನ ಮಾಡಿಸಿ ಮಲಗಿಸಲು ಕೆಲಸಗಾರ ಪ್ರಯತ್ನಿಸುತ್ತಾನೆ.

ಇತ್ತ ಮಗ ಅವರಪ್ಪನ ಸ್ಥಿತಿಯನ್ನು ನೋಡಿ ಮತ್ತೆ ಮಹಡಿ ಏರಿ ಹೋಗುತ್ತಾನೆ. ತಿರುಗಿ ಬಂದ ಹೆಂಡತಿ ಮತ್ತೆ ಜಗಳ ಮಾಡಲು ಮುಂದಾದಾಗ ಡಿಮಿಟ್ರಿ ಸುಮ್ಮನಾಗಿಬಿಡುತ್ತಾನೆ. ಹೀಗೆ ಬೇಸಿಗೆಯ ಬಿಸಿಲಿಗೆ, ಮನಸ್ಸಿನ ಅನುಮಾನಗಳ ಬೇಗೆಯನ್ನು ಬೆರೆಸಿ, ಸದಾ ಉದ್ವೇಗದಲ್ಲೇ ಮತ್ತು ನಿರಂತರ ಮಾತುಗಳಿಂದಲೇ ಕಟ್ಟಿರುವ ಸಿನಿಮಾ ಇದು.

ತೊಂಬತ್ತು ನಿಮಿಷಗಳ ಸಿನಿಮಾ ಒಂದೇ ಮನೆಯಲ್ಲಿ ನಡೆಯುವುದು ವಿಶೇಷ. ಯಾವುದೇ ಮಿತಿ ಅಥವಾ ನಿರ್ಭಂದವನ್ನಿಟ್ಟುಕೊಂಡು ಸಿನಿಮಾ ಕಟ್ಟುವುದು ಕಷ್ಟದ ಕೆಲಸ. ಆದರೆ ಇಲ್ಲಿ ಮನೆಯನ್ನು ರೂಪಕವಾಗಿ ಬೆಂಕಿಪೊಟ್ಟಣ್ಣಕ್ಕೆ ಬಳಸಿರುವುದರಿಂದ ಸಿನಿಮಾ ಅಪ್ಯಾಯಮಾನವಾಗಿ ಮೂಡಿದೆ.

ಈ ಸಿನಿಮಾದ ಸಿನಿಮ್ಯಾಟೋಗ್ರಫಿ ಕಪ್ಪು ಬಿಳುಪಿನಲ್ಲಿದ್ದು, ಕೌಟುಂಬಿಕ ಕರಾಳತೆಯನ್ನು ತೋರಿಸಿದ್ದಾರೆ. ಸಿನಿಮಾ ಬಹುಭಾಗವನ್ನು ಕ್ಲೊಸಅಪ್‌ಗಳಲ್ಲೇ ಸೆರೆಹಿಡಿದಿರುವುದರಿಂದ ಎಲ್ಲ ಪಾತ್ರಗಳು ಸನ್ನಿವೇಶಗಳಿಗೆ ಸಿಕ್ಕಿಹಾಕಿಕೊಂಡಿದ್ದಾರೆಂದು ಅನಿಸದ ಇರದು.

ನೈಫಾರ್ (2011): ಹಾಸಿಗೆಯಲ್ಲಿ ಮಲಗಿ ನಿರ್ಭಾವುಕವಾಗಿ ಟಿವಿಯಲ್ಲಿ ಬರುತ್ತಿರುವ ಕಪ್ಪು ಬಿಳುಪಿನ ಕಾರ್ಟೂನ್ ಚಿತ್ರವನ್ನು ನೋಡುತ್ತಿರುವ ವೃದ್ಧ. ಅವನ ಪಕ್ಕಕ್ಕೆ ಕುಳಿತು ಕಡಲೆಕಾಯಿ ತಿನ್ನುತ್ತಿರುವ ನಲವತ್ತರ ಅಸುಪಾಸಿನ ನಿಕೋಸ್. ತನ್ನ ತಂದೆಯ ಸಾವಿನ ನಂತರದಲ್ಲಿ ನಿಕೋಸ್‌ನ ಬದುಕಿನಲ್ಲಾಗುವ ಬದಲಾವಣೆಗಳೇ ಈ ಸಿನಿಮಾದ ಕಥಾನಕ.

ನಿಕೋಸ್ ತನ್ನ ಗೆಳಯರೊಂದಿಗೆ ಸಮಯ ಕಳೆಯುತ್ತಾ, ಯಾವುದೇ ಕೆಲಸ ಕಾರ್ಯವಿಲ್ಲದೆ, ಗ್ರೀಸಿನ ಹಳ್ಳಿಯಲ್ಲಿ ಬದುಕುತ್ತಿರುತ್ತಾನೆ. ವೃದ್ಧ ತಂದೆಯ ಸಾವಿಗೆ ಬಂದ ದೂರದ ಸಂಬಂಧಿ ಐವತ್ತರ ಗಡಿದಾಟಿದ ಅಲೆಕೊಸ್, ಅಥೆನ್ಸ್‌ನ ಹೊರವಲಯದಲ್ಲಿರುವ ತನ್ನ ಮನೆಗೆ ಬರುವಂತೆ ಹೇಳುತ್ತಾನೆ.

ಅಲೆಕೊಸ್ ಮನೆಯಲ್ಲಿರುವ ನಾಯಿಗಳನ್ನು ನೋಡಿಕೊಳ್ಳುವ ಕೆಲಸಕ್ಕೆ ನಿಗದಿಯಾಗುತ್ತಾನೆ ನಿಕೋಸ್. ಅಲ್ಲೂ ಅಷ್ಟಾಗಿ ಕೆಲಸವಿರುವುದಿಲ್ಲ. ತಿನ್ನುವುದು, ಟಿವಿ ನೋಡುವುದು. ಮೊಬೈಲಿನಲ್ಲಿ ಆಟವಾಡುವುದು ಮತ್ತು ಹಸ್ತ ಮೈಥುನ ಮಾಡಿಕೊಳ್ಳುವುದೇ ನಿಕೋಸ್‌ನ ದಿನಚರಿ.

ಅಲೆಕೊಸ್ ನಿಕೋಸ್‌ನನ್ನು ಸದಾ ಬೈಯ್ಯುತಿರುತ್ತಾನೆ. ನಿಕೋಸ್‌ಗೆ ಬೇರೆ ಗತಿಯಿಲ್ಲದೇ ಅಲ್ಲೇ ಇರಬೇಕಾಗುತ್ತದೆ. ಈ ಮಧ್ಯೆ ಅಲೆಕೊಸ್‌ನ ಸುಂದರ ಹೆಂಡತಿ ನಿಕೋಸ್‌ನತ್ತ ಆರ್ಕಷಿತಳಾಗುತ್ತಾಳೆ. ಹಾಗೆಯೇ ಇವರಿಬ್ಬರ ನಡುವೆ ರಹಸ್ಯ ಸಂಬಂಧವೂ ಏರ್ಪಡುತ್ತದೆ. ಇದು ಅಲೆಕೊಸ್‌ಗೆ ತಿಳಿಯುವುದಿಲ್ಲ.

ಅಲೆಕೊಸ್‌ನ ವ್ಯಾಪಾರದ ಸಮಯದಲ್ಲಿ, ಅವನ ಅಂಗಡಿಗೆ ಅಪರಿಚಿತರ ಬಂದು ದಾಳಿ ಮಾಡುತ್ತಾರೆ. ಇದರಿಂದ ಅವನು ಗಾಯಗೊಳ್ಳುತ್ತಾನೆ. ಆಸ್ಪತ್ರೆಯಲ್ಲಿ ವಿಚಾರಿಸಲು ಬಂದ ನಿಕೋಸ್‌ನನ್ನು ತನ್ನ ದಬ್ಬಾಳಿಕೆಯ ಮನೋಭಾವದಿಂದ ತನ್ನ ಹೆಂಡತಿಯ ಮುಂದೆಯೇ ಬೈಯ್ಯುತ್ತಾನೆ. ನಡುವೆ ಬಂದ ಹೆಂಡತಿಯನ್ನೂ ಸಹ ನಿಂದಿಸುತ್ತಾನೆ.

ಅಲ್ಲಿಗೆ ನಿಕೋಸ್ ಮತ್ತು ಅವನ ಪ್ರಿಯತಮೆ, ಅಲೆಕೊಸ್‌ನನ್ನು ಕೊಲ್ಲಲು ಸರಿಯಾದ ಯೋಜನೆ ರೂಪಿಸಿ ಕೊಂದು ಮುಗಿಸಿ, ಅದೇ ಮನೆಯಿಂದ ಮಕ್ಕಳೊಂದಿಗೆ ಕಾರಿನಲ್ಲಿ ಹೋಗುವ ದೃಶ್ಯದೊಂದಿಗೆ ಸಿನಿಮಾ ಮುಗಿಯುತ್ತದೆ.

ಈ ಸಿನಿಮಾ ಆಧುನಿಕ ಗ್ರೀಸ್ ಸಮಾಜದಲ್ಲಿ ಪುರುಷಪ್ರಧಾನ ದಬ್ಬಾಳಿಕೆಯಿಂದ ಜಡ್ಡುಗಟ್ಟಿ, ಕುಸಿಯುತ್ತಿರುವ ಕೌಟುಂಬಿಕ ಮೌಲ್ಯಗಳ ಕುರಿತು ನಿರ್ದೇಶಕನ ವ್ಯಾಖ್ಯಾನಿವೆಸುತ್ತದೆ.

ಯಾನಿಸ್ ಯಕಾನೊಮಿಡಿಸ್: ಯಾನಿಸ್‌ಗೆ ಗ್ರೀಕ್ ವಿಲಕ್ಷಣ ಅಲೆಯಲ್ಲಿ ಅತಿ ಮುಖ್ಯವಾದ ಪಾತ್ರವಿದೆ. ಇವರು ಇಂಡಿಪೆಂಡೆಂಟ್ ಸಿನಿಮಾ ನಿರ್ದೇಶಕ. ಆದರೆ, ಕೇವಲ ತನ್ನನ್ನು ನಿರ್ದೇಶಕನಾಗಿ ಮಾತ್ರ ನಿರ್ಭಂಧಿಸಿಕೊಳ್ಳದೆ, ಹಲವಾರು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದಾರೆ ಕೂಡ. ಅದಲ್ಲದೆ ನಿರ್ಮಾಪಕನಾಗಿ ’ಮ್ಯಾಚ್ ಬಾಕ್ಸ್’ ಜೊತೆಗೆ ಇನ್ನು ಹಲವಾರು ಇಂಡಿಪೆಂಡೆಂಟ್ ಸಿನಿಮಾಗಳನ್ನು ಮಾಡಿದ್ದಾರೆ. ಬರಹಗಾರನಾಗಿಯೂ ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವುದು ಗಮನಾರ್ಹ.

ಯಾನಿಸ್‌ನ ಕಥಾವಸ್ತುಗಳು ಆಧುನಿಕ ಗ್ರೀಸ್ ಸಮಾಜ, ಕುಟುಂಬದಲ್ಲಿನ ಸಂಬಂಧಗಳನ್ನು ಒಳಗೊಂಡಿರುವುದೇ ಹೆಚ್ಚು. ಇವರ ಒಟ್ಟಾರೆ ಸಿನಿಮಾ ತಯಾರಿಸುವ ಶೈಲಿ ಸರಳವಾದದ್ದು ಮತ್ತು ನೇರವಾಗಿರುವ ಸ್ವತಂತ್ರ ಶೈಲಿಯದ್ದು.

ಯಾನಿಸ್ ಯಕಾನೊಮಿಡಿಸ್

ಇವರ ಸಿನಿಮ್ಯಾಟೋಗ್ರಾಫಿಯಂತೂ ಉಲ್ಲೇಖನಿಯ. ನೈಫಾರ್ ಸಿನಿಮಾದಲ್ಲಿ ಕಪ್ಪು ಬಿಳುಪಿನ ಕಲರ್ ಸ್ಕೀಮ್‌ಅನ್ನು ಬಳಸಿದ್ದರೂ, ಅದ್ಬುತವಾಗಿ ಕಾಣುವ ದೃಶ್ಯಗಳನ್ನು ಕಟ್ಟಿಕೊಟ್ಟಿದ್ದಾರೆ. ಕಪ್ಪು ಬಿಳುಪಿನ ಲ್ಯಾಂಡ್‌ಸ್ಕೇಫ್ ಪೋಟೊಗ್ರಾಫಿ ಅತ್ಯುತ್ತಮವಾಗಿ ಮೂಡಿಬಂದಿದೆ.

ಮನೆಗಳು ಅಥವಾ ಚಿಕ್ಕದಾದ ಜಾಗಗಳಲ್ಲಿ ನಟರನ್ನು ಬಾಗಿಲುಗಳ ಮೂಲಕ ಫ್ರೇಮ್ ಮಾಡುವ ಮೂಲಕ ಪಾತ್ರಗಳು ಸಿಕ್ಕಿಹಾಕಿಕೊಂಡಿದ್ದಾರೆಂಬ ಅನಿಸಿಕೆ ಹುಟ್ಟಿಸುತ್ತಾರೆ. ಹಾಗೆಯೇ ಪಾತ್ರಗಳ ಅನೈತಿಕ ಕೆಲಸಗಳನ್ನು ಕಿಟಕಿಗಳ ಮೂಲಕ ನೋಡುತ್ತಿರುವಂತೆ ಪ್ರೇಕ್ಷಕರಿಗೆ ಭಾಸವಾಗುವಂತೆ ಮಾಡುತ್ತಾರೆ.

ಇವರ ಹೆಚ್ಚಿನ ಸಿನಿಮಾಗಳಲ್ಲಿ ಕಪ್ಪು ಬಿಳುಪು ಅಥವಾ ವರ್ಣರಹಿತವಾಗಿರುವ ಕಲರ್ ಸ್ಕೀಮ್ ಇರುವುದನ್ನು ಗಮನಿಸಬಹುದು ಏಕೆಂದರೆ ಇವರ ಕಥಾವಸ್ತುಗಳಲ್ಲಿ ನಿರಾಸಕ್ತಿ, ಖಾಲಿತನವನ್ನೇ ಇವರ ಪೋಟೋಗ್ರಾಫಿಯೂ ಪ್ರತಿಧ್ವನಿಸುತ್ತದೆ.

ಸೋಲ್ ಕಿಕೀಂಗ್(2006)ನಲ್ಲಿ ತಾಕೀಸ್ ಎನ್ನುವ ಪಾತ್ರ ಮನೆ ನಡೆಸಲು ಸಾಲ ಪಡೆದಿರುತ್ತಾನೆ. ಇತ್ತ ಸಾಲಗಾರರು ಕೆಲಸ ಮಾಡುವ ಜಾಗದಲ್ಲಿ ಮತ್ತು ಮನೆಯಲ್ಲಿ ಹೆಂಡತಿ ಈ ಎಲ್ಲರೂ ತಾಕೀಸ್‌ನನ್ನು ಬೈಯ್ಯುತ್ತಿರುವುದೇ ಸಿನಿಮಾದ ಕಥೆ. ಹೀಗೆ ಎಲ್ಲ ಕಡೆಯಿಂದ ಒತ್ತಡವನ್ನು ತಾಳಲಾಗದೆ, ತನ್ನ ಹೆಂಡತಿ ಬೇರೊಬ್ಬನ ಜೊತೆ ಹೊಂದಿರುವ ಅನೈತಿಕ ಸಂಬಂಧವನ್ನು ಸಹಿಸಿಕೊಳ್ಳಲಾಗದೆ ತಾಕೀಸ್ ಕೊಲೆಗಾರನಾಗುವುದೇ ಸಿನಿಮಾದ ಅಂತ್ಯ. ವಿಶೇಷವೆಂದರೆ ಇದರಲ್ಲೂ ಬಣ್ಣಗಳೇ ಇಲ್ಲದಂತೆ ಚಿತ್ರಿಸಿದ್ದಾರೆ.

ವ್ಯಕ್ತಿ ಮತ್ತು ಕೌಟುಂಬಿಕ ಒತ್ತಡಗಳನ್ನು ನಿಭಾಯಿಸಲು ಮಾಡುವ ಪ್ರಯತ್ನಗಳು, ಕೆಲವೊಮ್ಮೆ ಅವುಗಳಿಂದಲೇ ಕೊಲೆಯಾಗುವ ಪಾತ್ರಗಳು, ಇನ್ನೊಮ್ಮೆ ಕೊಲೆ ಮಾಡುವ ಪಾತ್ರಗಳನ್ನು ಸೃಷ್ಠಿಸುವ ಮೂಲಕ ಗ್ರೀಸ್ ಸಮಾಜದಲ್ಲಿರುವ ಕೌಟುಂಬಿಕ ಕಲಹಗಳನ್ನು ಮತ್ತು ಸಂಬಂಧಗಳ ಸಂಘರ್ಷಗಳನ್ನು ನೈಜವಾಗಿ ಯಾನಿಸ್ ಚಿತ್ರಿಸಿದ್ದಾರೆ.


ಇದನ್ನೂ ಓದಿ: ಪಿಕೆ ಟಾಕೀಸ್: ಪೀಳಿಗೆಗಳ ನಡುವಿನ ಸಂಘರ್ಷಗಳನ್ನು ಚಿತ್ರಿಸಿರುವ ಅರ್ಗಿರಿಸ್ ಸಿನಿಮಾಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...