Homeಕರ್ನಾಟಕಕೋವಿಡ್‌ ನಿರ್ಬಂಧ ತೆರವು: ದೊಡ್ಡ ಆಲದ ಮರಕ್ಕೆ ಪ್ರವಾಸಿಗರ ದಂಡು

ಕೋವಿಡ್‌ ನಿರ್ಬಂಧ ತೆರವು: ದೊಡ್ಡ ಆಲದ ಮರಕ್ಕೆ ಪ್ರವಾಸಿಗರ ದಂಡು

ಕೊರೊನಾ ಮತ್ತು ಲಾಕ್‌ ಡೌನ್ ಮನುಷ್ಯ ಪ್ರಾಣಿಗಳ ಬೇಧವಿಲ್ಲದೇ ಎಲ್ಲರನ್ನೂ ಕಂಗೆಡಿಸಿದೆ. ಪ್ರವಾಸಿಗರು ನೀಡುವ ಹಣ್ಣು ಹಂಪಲು ತಿಂಡಿಗಳಿಗೆ ಅಭ್ಯಾಸವಾಗಿದ್ದ ಕೋತಿಗಳು ಕಳೆದ 3 ತಿಂಗಳಿನಲ್ಲಿ ಆಹಾರ ವಿಲ್ಲದೇ ಮೃತಪಟ್ಟಿವೆ.

- Advertisement -
- Advertisement -

ಕೋವಿಡ್‌ ನಿರ್ಬಂಧಗಳು ತೆರವಾಗುತ್ತಿದ್ದಂತೆ ಬೆಂಗಳೂರಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಮೆಜೆಸ್ಟಿಕ್, ಯಶವಂತಪುರ ರೈಲ್ವೆ ನಿಲ್ಧಾಣಗಳು ಪ್ರಯಾಣಿಕರಿಂದ ತುಂಬಿ ತುಳುಕಾಡುತ್ತಿವೆ. ಹಾಗೆ ಬೆಂಗಳೂರಿನ ಪ್ರವಾಸಿ ತಾಣಗಳಲ್ಲಿ ಕಲರವ ಕೇಳಿ ಬರಲಾರಂಭಿಸಿದ್ದು ನಗರದ ಸುತ್ತಮುತ್ತದ ಸ್ಥಳಗಳಿಗೆ ಜನರು ಭೇಟಿ ನೀಡುತ್ತಿದ್ದಾರೆ. ಮಳೆಯ ತಂಪಾದ ವಾತಾವರಣ ಕೂಡ ಇದಕ್ಕೆ ಸಹಕಾರ ನೀಡಿದ್ದು ಇಂದು ನಗರದ ಅನೇಕ ಕಡೆ ಆರ್ಥಿಕ ಮತ್ತು ಪ್ರವಾಸೋದ್ಯಮದ ಚಟುವಟಿಕೆಗಳು ಚೇತರಿಸಿಕೊಂಡಿರುವುದು ಕಂಡು ಬಂದಿದೆ.

ನಗರದ ಹೊರ ವಲಯದಲ್ಲಿರುವ ಪುರಾತನ ದೊಡ್ಡ ಆಲದ ಮರವನ್ನು ನೋಡಲು ಇಂದು ಪ್ರವಾಸಿಗಳು  ಭೇಟಿ ನೀಡಿದ್ದು ಸುತ್ತಲಿನ ವ್ಯಾಪರಸ್ಥರ ಮುಖದಲ್ಲಿ ಒಂದಷ್ಟು ಗೆಲುವಿನ ಕಳೆ ಮೂಡಿದೆ.

ಇದನ್ನೂ ಓದಿ: ಮೈದುಂಬಿ ಹರಿಯುವ ನದಿಗಳು, ಧುಮ್ಮಿಕ್ಕುತ್ತಿರುವ ಜಲಪಾತಗಳ ನಡುವೆ ಬಣಗುಡುತ್ತಿರುವ ಮಲೆನಾಡಿನ ಪ್ರವಾಸಿ ತಾಣಗಳು

ಸರಿ ಸುಮಾರು ಮೂರು ತಿಂಗಳಿನಿಂದ ಬಂದ್‌ ಆಗಿದ್ದ ದೊಡ್ಡ ಆಲದ ಮರ ಈ ವಾರ ಸಾರ್ವಜನಿಕರ ಪ್ರವೇಶಕ್ಕೆ ತೆರೆದಿದೆ. ತಿಂಗಳುಗಳ ಕಾಲ ಮನೆಯಲ್ಲಿಯೇ ಕುಳಿತಿದ್ದ ಜನರು ಇಂದು ತಮ್ಮ ತಮ್ಮ ವಾಹನ ಮತ್ತು ಆಟೋ ರಿಕ್ಷಾದಲ್ಲಿ ಪುರಾತನ ದೊಡ್ಡ ಆಲದ ಮರಕ್ಕೆ ತೆರಳಿ ಪುಳಕಗೊಂಡರು.

ಬೆಂಗಳೂರಿನಲ್ಲಿ ಅನೇಕರಿಗೆ ದೊಡ್ಡ ಆಲದ ಮರದ ಪರಿಚಯ ಇದೆ. ಇನ್ನು ಕೆಲವರಿಗೆ ನಮ್ಮ ಸುತ್ತಲಿನ ಪ್ರದೇಶದ ಮಾಹಿತಿ ಇಲ್ಲ. ದೊಡ್ಡ ಆಲದ ಮರದ ವಿಶೇಷತೆ ಏನು? ಯಾಕಿದು ಪ್ರವಾಸಿ ತಾಣ ಎಂಬುದು ಹೆಚ್ಚು ಮುನ್ನೆಲೆಗೆ ಬಂದಿಲ್ಲ.

ಇದನ್ನೂ ಓದಿ: ಮುತ್ತು ಸುತ್ತು; ಸಾವನದುರ್ಗ: ಪ್ರಪಂಚದ ಅತಿದೊಡ್ಡ ಏಕಶಿಲಾ ಬೆಟ್ಟವಿದು, ಶಕ್ತಿಯಿದ್ದಷ್ಟು ಹತ್ತಿ ನೋಡ!

ದೊಡ್ಡ ಆಲದ ಮರ ಅಥವಾ ಬಿಗ್ ಬ್ಯಾನಿಯನ್ ಟ್ರೀ 

4-

ಇದೇನಪ್ಪಾ ಆಲದ ಮರವನ್ನು ಯಾವತ್ತೂ ನೋಡೇ ಇಲ್ವಾ ಅಂತಾ ನೀವು ಯೋಚಿಸಿರುವಿರಿ. ಆದರೆ ಇವತ್ತು ನಾವು ನಿಮಗೆ ಹೊರಟಿರುವ ಆಲದ ಮರ ಅಂತಿಂಥ ಆಲದ ಮರವಲ್ಲ. ಇದು ಸುಮಾರು 95  ಫೀಟ್‌ ಎತ್ತರ ಹಾಗೂ 400 ವರ್ಷಗಳ ಇತಿಹಾಸವನ್ನು ಹೊಂದಿರುವ ವಿಶೇಷ ಆಲದ ಮರ. ಬೆಂಗಳೂರು ದಕ್ಷಿಣದ ಕೇತೋಹಳ್ಳಿಯಲ್ಲಿರುವ ಈ ಆಲದ ಮರವನ್ನು ದೊಡ್ಡ ಆಲದ ಮರ ಅಥವಾ ಬಿಗ್ ಬ್ಯಾನಿಯನ್ ಟ್ರೀ ಎಂದೂ ಕರೆಯುತ್ತಾರೆ. ಇದು ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿರುವ ಪ್ರವಾಸಿ ಆಕರ್ಷಣೆಯಾಗಿ ಬೆಳೆದಿದ್ದು ರಾಜ್ಯದ ಇಕೋ ಟೂರಿಸಂನ ಒಂದು ಭಾಗವಾಗಿದೆ.

ಇದನ್ನೂ ಓದಿ: ಕರ್ನಾಟಕಕ್ಕೂ ಬಂತು ವಿಸ್ಟಾಡೋಮ್ ರೈಲು: ಮಂಗಳೂರು-ಬೆಂಗಳೂರು ನಡುವೆ ಮೊದಲ ಓಡಾಟ

400-

ಈ ಆಲದ ಮರವು ಭಾರತದ ಪುರಾತನ ಆಲದ ಮರಗಳಲ್ಲಿ ನಾಲ್ಕನೆಯ ಸ್ಥಾನವನ್ನು ಪಡೆದುಕೊಂಡಿದೆ. ಆಂಧ್ರಪ್ರದೇಶದ ಮೆಹಬೂಬ್ ನಗರ, ಪಶ್ಚಿಮ ಬಂಗಾಳದ ಕೊಲ್ಕತ್ತ ಹಾಗೂ ತಮಿಳುನಾಡಿನ ಚೆನ್ನೈನಲ್ಲ್ಲಿ ಕ್ರಮವಾಗಿ ಮೊದಲ ಮೂರು ದೈತ್ಯ ಆಲದ ಮರಗಳಿವೆ. ಇಲ್ಲಿ ಒಂದು ಪುರಾತನ ಮುನೀಶ್ವರ ದೇವರ ದೇವಾಲಯ ಕೂಡಾ ಇದೆ.

ಇದನ್ನೂ ಓದಿ: ಕೋವಿಡ್‌ ನಿರ್ಬಂಧ ತೆರವು : ಪ್ರವಾಸಿ ತಾಣಗಳತ್ತ ಜನ-ಹಂಪಿಯಲ್ಲಿ ಜನ ಜಂಗುಳಿ

ಕರ್ನಾಟಕ ರಾಜ್ಯ ಸರ್ಕಾರದ ತೋಟಗಾರಿಕೆ ಇಲಾಖೆಯು ಈ ದೊಡ್ಡ ಆಲದ ಮರದ ಸಂರಕ್ಷಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಆಲದ ಮರದ ಸುತ್ತಮುತ್ತಲಿನ ಪ್ರದೇಶಕ್ಕೆ ಕಬ್ಬಿಣದ ಗ್ರಿಲ್ ಹಾಕಲಾಗಿದೆ. ಪ್ರವಾಸೋದ್ಯಮ ಇಲಾಖೆ ದೊಡ್ಡ ಆಲದ ಮರವನ್ನು ಪಾರಂಪರಿಕ ವೃಕ್ಷವೆಂದು ಘೋಷಿಸಿ ತಾಣವನ್ನು ಪ್ರವಾಸಿ ಕೇಂದ್ರವನ್ನಾಗಿ ಮಾಡಿದೆ. ಈ ಮರದ ಸುತ್ತಲೂ ಪ್ರವಾಸಿಗರಿಗೆ ಕುಳಿತುಕೊಳ್ಳಲು ಕಲ್ಲಿನ ಬೆಂಚುಗಳನ್ನು ಹಾಕಲಾಗಿದೆ.

ಈಗ ನೋಡುತ್ತಿರುವ ಆಲದ ಮರವು ಹಲವು ವರ್ಷಗಳ ಹಿಂದೆ ಇನ್ನೂ ದೊಡ್ಡದಾಗಿತ್ತು, ಆದರೆ ಯಾವುದೋ ನೈಸರ್ಗಿಕ ಕಾಯಿಲೆಗೆ ಒಳಗಾಗಿ ನಶಿಸಿತು. ಆದ್ದರಿಂದ ಮರವು ಈಗ ಅನೇಕ ವಿಭಿನ್ನ ಮರಗಳಂತೆ ಕಾಣಿಸುತ್ತದೆ.

ಒಟ್ಟಾರೆಯಾಗಿ ವೀಕೆಂಡ್‌ ಕರ್ಪ್ಯೂ ತೆರವಾದ ಮೊದಲ ವೀಕೆಂಡ್‌ನಲ್ಲಿ ಭಾನುವಾರ ಸಂಜೆ ಹೊತ್ತಿನಲ್ಲಿ  ಹತ್ತಾರು ಪ್ರವಾಸಿಗರು ಪ್ರಶಾಂತವಾಗಿ ಕಾಲಕಳೆದಿದ್ದಾರೆ.  ಕಲ್ಲು ಬೆಂಚುಗಳಲ್ಲಿ ಕುಳಿತು ಹರಟೆ ಹೊಡೆಯುತ್ತಾ  ಕೋತಿಗಳ ಚೇಷ್ಟೆಯನ್ನು ಎಂಜಾಯ್ ಮಾಡುತ್ತಾ ಕಾಲ ಕಳೆದಿದ್ದಾರೆ.

ದೊಡ್ಡ ಆಲದ ಮರದಲ್ಲಿ ಕೋತಿಗಳ ಸಂಭ್ರಮ

ಪ್ರವಾಸಿಗರು ನೀಡುವ ಹಣ್ಣು ಹಂಪಲು ತಿಂಡಿಗಳಿಗೆ ಅಭ್ಯಾಸವಾಗಿದ್ದ ಕೋತಿಗಳು ಕಳೆದ 3 ತಿಂಗಳು ಸಾಕಷ್ಟು ಕಷ್ಟಪಟ್ಟವು. ಕೆಲವು ನಗರ ಪ್ರದೇಶಕ್ಕೆ ಹೋದವು. ಒಂದಷ್ಟು ಚಿಕ್ಕ ಕೋತಿಗಳು ಹಸಿವಿನಿಂದ ಮೃತಪಟ್ಟಿವೆ ಎಂದು ಸ್ಥಳೀಯ ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ.

ಕೊರೊನಾ ಮತ್ತು ಲಾಕ್‌ ಡೌನ್ ಮನುಷ್ಯ ಪ್ರಾಣಿಗಳ ಬೇಧವಿಲ್ಲದೇ ಎಲ್ಲರನ್ನೂ ಕಂಗೆಡಿಸಿದೆ.  3ನೇ ಅಲೆಯ ಭೀತಿಯ ನಡುವೆ ನಿಟ್ಟುಸಿರಿಗೊಂದಷ್ಟು ಅವಕಾಶ ಸಿಕ್ಕಿದೆ. ಎಚ್ಚರಿಕೆಯ ನಡುವೆ ಅಚ್ಚರಿಯ ಹುಡುಕಾಟಕ್ಕೆ ದೊಡ್ಡ ಆಲದ ಮರ ಒಂದು ಪ್ರಶಸ್ತ ತಾಣ. ವಿಶ್ರಾಂತಿ, ವಿಜ್ಞಾನ ಎರಡನ್ನೂ ಒಟ್ಟಿಗೆ ನೀಡುವ ಬಿಗ್‌ ಬ್ಯಾನಿಯನ್‌  ಟ್ರೀ ನಮ್ಮ ಮುಂದಿನ ಪ್ರವಾಸಕ್ಕೆ ಪ್ರಶಸ್ತ ನಿಲ್ಧಾಣ.

-ರಾಜೇಶ್‌ ಹೆಬ್ಬಾರ್‌

ಇದನ್ನೂ ಓದಿ: ಕೈ ಬೀಸಿ ಕರೆಯಲಿರುವ ಕೇರಳ…ಪ್ರವಾಸಿ ತಾಣಗಳು ಪುನರಾರಂಭ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...