Homeಮುಖಪುಟಜಸ್ಟ್ ಆಸ್ಕಿಂಗ್: Pegasus ಗೂಢಚರ್ಯೆಯ ಅಸಲಿ ಕ್ರೋನಾಲಜಿಯನ್ನು ತಿಳಿಯೋಣವೇ?

ಜಸ್ಟ್ ಆಸ್ಕಿಂಗ್: Pegasus ಗೂಢಚರ್ಯೆಯ ಅಸಲಿ ಕ್ರೋನಾಲಜಿಯನ್ನು ತಿಳಿಯೋಣವೇ?

- Advertisement -
- Advertisement -

ಮೋದಿ ಸರ್ಕಾರವು ಇಸ್ರೇಲಿನ Pegasus ಸೈಬರ್ ಗೂಢಚರ್ಯೆ ಉಪಕರಣವನ್ನು ಬಳಸಿಕೊಂಡು ಭಾರತೀಯ ಪತ್ರಕರ್ತರ ಮೇಲೆ, ವಿರೋಧ ಪಕ್ಷಗಳಮೇಲೆ ಹಾಗು ಸರ್ಕಾರದ ಬೆದರಿಕೆಗೆ ಬಗ್ಗದ ಅಧಿಕಾರಿಗಳು ಮತ್ತು ವಿದ್ವಾಂಸರ ಮೇಲೆ ಹಲವಾರು ವರ್ಷಗಳಿಂದ ಗೂಢಚರ್ಯೆ ಮಾಡುತ್ತಿರುವುದು ಇದೀಗ ಬಯಲಾಗಿಯಷ್ಟೇ..

ಆದರೇನಂತೆ… ಮೋದಿ ಸರ್ಕಾರ ಮಾಮೂಲಿನಂತೆ ಇವೆಲ್ಲಾ ವಿದೇಶಿ ಶಕ್ತಿಗಳ ಜೊತೆಸೇರಿ ಸ್ಥಳೀಯ ವಿರೋಧ ಪಕ್ಷಗಳು ದೇಶದ ವಿರುದ್ಧ ನಡೆಸುತ್ತಿರುವ ಕುತಂತ್ರ ಎಂಬ ಕ್ರೋನಾಲಜಿ ಕಟ್ಟುತ್ತಿದೆ…

ಅಮಿತ್ ಷಾ ಅವರಂತೂ, ಈ ಭಾರತದ ಸಂಸತ್ತು ಸಮಾವೇಶಗೊಳ್ಳುವ ಹಿಂದಿನ ದಿನವೇ ಈ ವರದಿ ಬಿಡುಗಡೆಯಾಗಿರುವ ಹಿಂದಿನ ಕ್ರೋನಾಲಜಿ ಅರ್ಥಮಾಡಿಕೊಳ್ಳಿ ಎಂದು ಸಂಚು ಕಥನ ಹೆಣೆಯಲು ಮುಂದಾಗಿದ್ದಾರೆ…

ಗೃಹಮಂತ್ರಿಗಳು ಇಷ್ಟೆಲ್ಲಾ ಹೇಳಿದ ಮೇಲೆ ಅಸಲೀ ಕ್ರೋನಾಲಜಿಯನ್ನೇ ನೋಡಿಬಿಡೋಣ …

ಗೃಹಮಂತ್ರಿಗಳೇ … ಕ್ರೋನಾಲಜಿ ಹೀಗಿದೆ:

– ಮೊದಲನೆಯದಾಗಿ ಈ ಜಗತ್ತಿನ ಹತ್ತು ದೇಶಗಳ 16 ಮಾಧ್ಯಮ ಸಂಸ್ಥೆಗಳ 80 ಪತ್ರಕರ್ತರು ಜೊತೆಗೂಡಿ ಸಿದ್ಧಪಡಿಸಿದ ಈ ತನಿಖಾ ವರದಿ ಜಗತ್ತಿನಾದ್ಯಂತ ಏಕಕಾಲದಲ್ಲಿ ಜುಲೈ 18 ರಂದು ಬಿಡುಗಡೆಯಾಗಿದೆ.

ಮತ್ತು ಇದು ಭಾರತವನ್ನು ಒಳಗೊಂಡಂತೆ ಇತರ ಹತ್ತು ದೇಶಗಳ ಸರ್ಕಾರ ಗಳು ಪೆಗಾಸಸ್ ಅನ್ನು ಹೇಗೆ ದುರ್ಬಳಕೆ ಮಾಡಿಕೊಂಡಿರಬಹುದು ಎಂಬ ವಿವರಗಳನ್ನು ಕೊಡುತ್ತದೆ. ಕೇವಲ ಭಾರತದ್ದಲ್ಲ…

ಈ ವರದಿಯ ಪ್ರಾಥಮಿಕ ಕಂತು ಸ್ಪಷ್ಟಪಡಿಸುತ್ತಿರುವಂತೆ ಪೆಗಾಸಸ್ ಬಳಿ ಜಗತ್ತಿನ 20 ಬೇರೆಬೇರೆ ದೇಶಗಳಲ್ಲಿ ವಾಸವಾಗಿರುವ 50,000 ಜನರ ಫೋನ್ ನಂಬರ್ಗಳು ಉದ್ದೇಶಿತ ಗೂಢಚರ್ಯೆ ಪಟ್ಟಿಯಲ್ಲಿತ್ತು.

ಅದರಲ್ಲಿ 1000 ನಂಬರ್ ಗಳು ಭಾರತಕ್ಕೆ ಸೇರಿದ್ದವಾಗಿದ್ದರೆ 15,000 ಮೆಕ್ಸಿಕೋಗೆ ಸೇರಿದ್ದವು. ಮೆಕ್ಸಿಕೋಗೆ ಸಂಬಂಧಪಟ್ಟ ವಿವರಗಳು ಸಹಾ ಜುಲೈ 18ರಂದೇ ಜಾಗತೀಕವಾಗಿ ಬಿಡುಗಡೆಯಾಗಿದೆ.

ಹಾಗೆಯೇ ಅಜರ್ಬೈಜಾನ್ ಬಹರೈನ್, ಸೌದಿ ಅರೇಬಿಯಾ, ಹಂಗೇರಿ, ಮೆಕ್ಸಿಕೋ ಇನ್ನಿತರ ಹತ್ತು ದೇಶಗಳಲ್ಲಿ ಅಲ್ಲಿನ ಸರ್ಕಾರಗಳು ಹೇಗೆ ತನ್ನ ಭಿನ್ನಮತೀಯರ ಮೇಲೆ ಬೇಹುಗಾರಿಕೆ ನಡೆಸಿದೆ ಎಂದು ಈ ವರದಿ ಬಯಲು ಮಾಡಿದೆ.

ಭಾರತವನ್ನು ಬಿಟ್ಟರೆ ಬೇರೆ ಯಾವ ದೇಶದಲ್ಲೂ ಸಂಸತ್ ಅಧಿವೇಶನ ಇರಲಿಲ್ಲ… ಜಗತ್ತು ಎಂದರೆ ಭಾರತವೇ ಅಲ್ಲ ಅಲ್ಲವೇ ಗೃಹ ಮಂತ್ರಿಗಳೇ..??

– ಇನ್ನು ಕೆಲವು ಅಸಲಿ ಕ್ರೋನಾಲಜಿಗಳು ಹೀಗಿವೆ..:

– ಸೌದಿ ಅರೇಬಿಯಾದ ಸಾಮ್ರಾಟರಿಗೆ ತಲೆನೋವಾಗಿದ್ದ ಜಮಾಲ್ ಕಶೊಗಿ ಎಂಬ ಪತ್ರಕರ್ತನ ಪ್ರೇಯಸಿಯ ಫೋನಿನಲ್ಲಿ ಪೆಗಾಸಸ್ ಸ್ಪೈವೇರ್ ಕೂಡಿಸಿದ ನಾಲ್ಕೇ ದಿನಗಳಲ್ಲಿ ಕಶೋಗಿ ಟರ್ಕಿಯ ಸೌದಿ ಅರೇಬಿಯಾದ ರಾಯಭಾರ ಕಚೇರಿಯಲ್ಲಿ 2018ರ ಅಕ್ಟೊಬರ್ ನಲ್ಲಿ ಹೆಣವಾಗುತ್ತಾನೆ..
ಇದು ಅಸಲಿ ಕ್ರೋನಾಲಜಿ

– ಮೆಕ್ಸಿಕೋದ ಸಿಸಿಲಿಯೋ ಪಿನೆಡಾ ಎಂಬ ಪತ್ರಕರ್ತ 2017ರಲ್ಲಿ ಮೆಕ್ಸಿಕೋದ ಬೀದಿಯಲ್ಲಿ ಕೊಲೆಯಾಗಿದ್ದ. ಕಾರಣ ಆಡಳಿತಾರೂಢ ಸರ್ಕಾರಕ್ಕೂ ಡ್ರಗ್ ಮಾಫಿಯಾಗಳಿಗೂ ಇದ್ದ ಸಂಬಂಧಗಳ ಬಗ್ಗೆ ಆತ ಬರೆಯಲು ಶುರು ಮಾಡಿದ್ದ. ಮರು ವರ್ಷ ಚುನಾವಣೆಯಿತ್ತು. ಆತನು ಸಾಯುವ ಕೆಲವು ವಾರಗಳ ಮುನ್ನ ಆತನ ಫೋನಿನಲ್ಲಿ, ಹಾಗೂ ಆತನ ಆಪ್ತರ ಫೋನುಗಳಲ್ಲಿ ಪೆಗಾಸಸ್ ಸ್ಪೈವೇರ್ ಸ್ಥಾಪಿಸಲಾಗಿತ್ತು. ಇದು ಅಸಲಿ ಕ್ರೋನಾಲಜಿ

– ಭಾರತದಲ್ಲಿ…

– indian Express ನ ಸುಶಾಂತ್ ಸಿಂಗ್ ಅವರು 2017 ರಿಂದ ರಫೇಲ್ ಯುದ್ಧ ವಿಮಾನ ಹಗರಣದ ಬಗ್ಗೆ ತನಿಖಾ ಲೇಖನ ಬರೆಯಲು ಪ್ರಾರಂಭಿಸುತ್ತಾರೆ. 2018ರ ಪ್ರಾರಂಭದಿಂದಲೇ ಅವರ ಫೋನಿನಲ್ಲಿ ಪೆಗಾಸಸ್ ಪತ್ತೆಯಾಗಿದೆ.

– 2019ರ ಚುನಾವಣೆಯಲ್ಲಿ ಭಾರತದ ಚುನಾವಣಾ ಆಯೋಗದ ಹಿರಿಯ ಸದಸ್ಯರಾಗಿದ್ದ ಅಶೋಕ್ ಲಾವಾಸಾ ಅವರು ಮೋದಿಯವರ ಚುನಾವಣಾ ಭಾಷಣಗಳ ಬಗೆ ತೀವ್ರವಾದ ತಕರಾರು ಎತ್ತುತ್ತಾರೆ. ಅದರ ಮರು ತಿಂಗಳಿಂದಲೇ ಅವರ ಹೆಸರು ಪೆಗಾಸಸ್ ನ ಸಂಭಾವ್ಯ ಗೂಢಚರ್ಯೆ ಪಟ್ಟಿ ಸೇರಿಕೊಳ್ಳುತ್ತದೆ.

– ಮೋದಿ ಕ್ಯಾಬಿನೆಟ್ಟಿನ ಹಾಲಿ ಮಂತ್ರಿ ಒರಿಸ್ಸಾದ ಅಷ್ವಿನಿ ವೈಷ್ಣವ್ ಅವರು ಅಧಿಕಾರಿಯಾಗಿದ್ದಾಗ ವಾಜಪೇಯಿಯವರ ಆಪ್ತ ಸಹಾಯಕನಾಗಿದ್ದರೂ ಬಿಜು ಜನತಾ ದಾಳಕ್ಕೆ ಆಪ್ತರಾಗಿದ್ದವರು. 2017ರಿಂದಲೇ ಅವರ ಫೋನ್ ನಂಬರ್ ಸಂಭಾವ್ಯ ಪೆಗಾಸಸ್ ಗೂಢಚರ್ಯೆ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಅದಾದ ಮರುವರ್ಷದಲ್ಲೆ ಅವರು ಬಿಜೆಪಿ ಸೇರಿಕೊಳ್ಳುತ್ತಾರೆ.

-ಮಾಜಿ ಮುಖ್ಯ ನ್ಯಾಯಾಧೀಶ ಹಾಲಿ ಬಿಜೆಪಿ ನಾಮನಿರ್ದೇಶಿತ ರಾಜ್ಯ ಸಭಾ ಸದಸ್ಯ ರಂಜನ್ ಗೊಗೋಯ್ ಅವರು ತನ್ನ ಜೊತೆ ಅನುಚಿತವಾಗಿ ನಡೆದುಕೊಂಡಿದ್ದಾರೆಂದು ಮಹಿಳಾ ಉದ್ಯೋಗಿಯೊಬ್ಬರು ದೂರು ನೀಡಿದ ಮರು ವಾರದಿಂದಲೇ ಆಕೆಯ ಹಾಗೂ ಆಕೆಯ ಸಂಬಂಧಿಕರ ಹೆಸರುಗಳು ಪೆಗಾಸಸ್ ಪಟ್ಟಿ ಸೇರಿಕೊಳ್ಳುತ್ತದೆ.

ಆ ನಂತರ ಗೊಗೋಯ್ ಕೊಟ್ಟ ತೀರ್ಪು ಗಳೆಲ್ಲ ಮೋದಿ ಸರ್ಕಾರದ ಪರವೇ.

ಈ ಕ್ರೋನಾಲಜಿಯನ್ನು ಹೇಗೆ ಅರ್ಥಮಾಡಿಕೊಳ್ಳುವುದು ಅಮಿತ್ ಷಾ ಅವರೇ?????

  • ಶಿವಸುಂದರ್‌

ಇದನ್ನೂ ಓದಿ: Explainer: ಏನಿದು ಪೆಗಾಸಸ್? ಹೇಗೆ ಫೋನ್ ಹ್ಯಾಕ್ ಮಾಡುತ್ತದೆ? ಅಪಾಯಗಳೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...