ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಮುಂಬೈ ತೀವ್ರ ತೊಂದರೆಗೆ ಒಳಗಾಗಿದೆ. ಇದರ ನಡುವೆಯೇ ಮತ್ತೊಂದು ದುರಂತ ಘಟನೆ ನಡೆದಿದೆ. ಮುಂಬೈನ ವರ್ಲಿಯ ಹನುಮಾನ್ ಗಲ್ಲಿಯಲ್ಲಿರುವ ಕಟ್ಟಡದ ಲಿಫ್ಟ್ ಕುಸಿದು ನಾಲ್ಕು ಜನರು ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಹನುಮಾನ್ ಗಲ್ಲಿಯಲ್ಲಿರುವ ಲತೀತ್ ಅಂಬಿಕಾ ಎಂಬ ಕಟ್ಟಡದ ಕೆಲಸ ನಡೆಯುತ್ತಿದ್ದು, ವಾಹನ ನಿಲುಗಡೆ ನಿರ್ಮಾಣ ನಡೆಯುತ್ತಿರುವಾಗ ಲಿಫ್ಟ್ ಕುಸಿದಿದೆ ಎಂದು ಹೇಳಲಾಗಿದೆ.
ಮೃತರನ್ನು ಅವಿನಾಶ್ ದಾಸ್ (35), ಭಾರತ್ ಮಂಡಲ್ (27), ಚಿನ್ಮಯ್ ಮಂಡಲ್ (33) ಎಂದು ಗುರುತಿಸಲಾಗಿದೆ. ಮತ್ತೊಬ್ಬ 45 ವರ್ಷದ ವ್ಯಕ್ತಿಯ ಗುರುತು ಪತ್ತೆಯಾಗಬೇಕಿದೆ. ಗಾಯಾಳುವನ್ನು ಲಕ್ಷ್ಮಣ್ ಮಂಡಲ್ (35) ಎಂದು ಗುರುತಿಸಲಾಗಿದೆ. ಲಕ್ಷ್ಮಣ್ ಮಂಡಲ್ ರನ್ನು ಚಿಕಿತ್ಸೆಗಾಗಿ ಕೆಇಎಂ ಆಸ್ಪತ್ರೆಗೆ ಸಾಗಿಸಲಾಗಿದೆ.
ಮಾಹಿತಿಯ ಪ್ರಕಾರ ಲಲಿತ್ ಅಂಬಿಕಾ ಕಟ್ಟಡದ ಕಾಮಗಾರಿ ನಡೆಯುತ್ತಿದ್ದು, ಶನಿವಾ ಸಂಜೆ 4 ಗಂಟೆ ಸುಮಾರಿಗೆ ಲಿಫ್ಟ್ ಕುಸಿದಿದೆ. ಈ ಲಿಫ್ಟ್ನಲ್ಲಿ ಇನ್ನೂ 6 ಜನರು ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದೆ. ಅವರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ ಎಂದು ಮಾಹಿತಿ ದೊರೆತಿದೆ.
ಇದನ್ನೂ ಓದಿ: ಅವಶ್ಯಕತೆ ಇದ್ದರಷ್ಟೇ ಮೊಬೈಲ್ ಬಳಸಿ: ಮಹಾರಾಷ್ಟ್ರ ಸರ್ಕಾರಿ ಅಧಿಕಾರಿಗಳಿಗೆ ಮಾರ್ಗಸೂಚಿ