Homeಕರ್ನಾಟಕಮಾಂದಲ್‌ಪಟ್ಟಿಯ ಗುಡ್ಡ ವಿಸ್ತಾರದಲ್ಲಿ ಅರಳಿದ ನೀಲಿ ಸಂತಸ! ಕಣ್ಮನ ಸೆಳೆದ ನೀಲಕುರಿಂಜಿಯ ಸೋದರ ಸಂಬಂಧಿ

ಮಾಂದಲ್‌ಪಟ್ಟಿಯ ಗುಡ್ಡ ವಿಸ್ತಾರದಲ್ಲಿ ಅರಳಿದ ನೀಲಿ ಸಂತಸ! ಕಣ್ಮನ ಸೆಳೆದ ನೀಲಕುರಿಂಜಿಯ ಸೋದರ ಸಂಬಂಧಿ

- Advertisement -
- Advertisement -

ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ 7000ಕ್ಕೂ ಮಿಗಿಲಾದ ಹೂ ಬಿಡುವ ಸಸ್ಯ ಪ್ರಬೇಧಗಳಿವೆ. ಆದರೆ ಸಮುದ್ರ ಮಟ್ಟದಿಂದ 1700 ಮೀಟರ್‌ಗಿಂತಲೂ ಹೆಚ್ಚಿನ ಎತ್ತರದ ಪ್ರದೇಶಗಳಲ್ಲಿರುವ ಶೋಲಾ ಅರಣ್ಯ ಪ್ರದೇಶಗಳ ಪರ್ವತ ಶ್ರೇಣಿಗಳಲ್ಲಿ ಬೆಳೆಯುವ ಹೂ ಬಿಡುವ ಪೊದೆಯಂತಹ ಸಸ್ಯಜಾತಿಯೇ ಕುರಿಂಜಿ ಹೂ ಅಥವಾ ನೀಲಕುರಿಂಜಿ ಹೂ.

ಏನಿದು ನೀಲಕುರಿಂಜಿ?

ವೈಜ್ಞಾನಿಕವಾಗಿ ಗುರುತಿಸಲ್ಪಟ್ಟಿರುವ ಹಲವಾರು ಸಸ್ಯ ಪ್ರಬೇಧಗಳಲ್ಲಿ ಸ್ಟ್ರೊಬಿಲಾಂತಸ್ (Strobilanthes) ಅನ್ನುವ ಸಸ್ಯಕುಲಕ್ಕೆ ಸೇರಿದ ಅಕ್ಯಾಂತೇಸಿಯೇ (Acanthaceae) ಕುಟುಂಬದ ಒಂದು ಸದಸ್ಯ ಈ ನೀಲಕುರಿಂಜಿ. ಸ್ಟ್ರೊಬಿಲಾಂತಸ್ ಸಸ್ಯಕುಲದಲ್ಲಿ 250ಕ್ಕೂ ಹೆಚ್ಚಿನ ಹೂವುಗಳು ಅರಳುತ್ತವೆ. ಕರ್ನಾಟಕದ ಕೊಡಗು ಜಿಲ್ಲೆಯ ಪುಷ್ಪಗಿರಿ ಪರ್ವತಶ್ರೇಣಿ, ಬ್ರಹ್ಮಗಿರಿ ಪರ್ವತಶ್ರೇಣಿ, ಚಿಕ್ಕಮಗಳೂರಿನ ಬಾಬಾಬುಡನ್‌ಗಿರಿ ಪರ್ವತಶ್ರೇಣಿ ಮತ್ತು ಬಳ್ಳಾರಿಯ ಸಂಡೂರಿನ ಬೆಟ್ಟಗಳಲ್ಲಿ ಕೂಡಾ ಈ ಹೂವುಗಳು ಅರಳುತ್ತವೆ.

ನೀಲಕುರಿಂಜಿಯ ವಿಶೇಷ ಏನು?

ಸ್ಟ್ರೊಬಿಲಾಂತಸ್ ಸಸ್ಯಕುಲದ ಹೂವುಗಳಲ್ಲಿ ಕೆಲವು ಹೂವುಗಳು ಪ್ರತೀ ವರ್ಷ ಅರಳಿದರೆ ಕೆಲವು 16 ವರ್ಷಗಳಿಗೊಮ್ಮೆ ಅರಳುತ್ತವೆ. ಹಾಗೇ 12 ವರ್ಷಗಳಿಗೊಮ್ಮೆ ಅರಳುವ ಹೂವೇ ನೀಲಕುರಿಂಜಿ ಹೂವು. ನೀಲಕುರಿಂಜಿ ಎನ್ನುವುದು ಮೂಲದಲ್ಲಿ ತಮಿಳಿನದಾಗಿದ್ದು ನೀಲಿ ಬಣ್ಣದಿಂದ ತುಂಬಿದ ಪರ್ವತ ಎಂದರ್ಥ. ವೈಜ್ಞಾನಿಕವಾಗಿ ಸ್ಟ್ರೊಬಿಲಾಂತಸ್ ಕುಂತಿಯಾನ (Strobilanthes kunthiana) ಎಂಬ ಹೆಸರಿನ ಈ ಹೂವು ಆ ಕುಲದಲ್ಲೇ ಅತೀ ಹೆಚ್ಚು ಪ್ರಮಾಣದಲ್ಲಿ ಪರ್ವತಶ್ರೇಣಿಯ ತುಂಬೆಲ್ಲಾ ಹಬ್ಬಿ ಅರಳುವ ಹೂವಾಗಿದೆ. ಈ ಹೂವು ಅರಳಿರುವ ಕಾಲದಲ್ಲಿ ಇಡೀ ಪರ್ವತವೇ ನೀಲಿ ಬಣ್ಣದಿಂದ ತುಂಬಿ ನೀಲಕುರಿಂಜಿಯೆ ಹೆಸರಿನ ಅರ್ಥವನ್ನು ಸಾರುತ್ತದೆ ಮಾತ್ರವಲ್ಲ ನೋಡುಗರ ಕಣ್ಮನ ಸೆಳೆಯುತ್ತದೆ.

ಈ ನೀಲಕುರಿಂಜಿ ಹೂವುಗಳು ಪ್ರತೀ 12 ವರ್ಷಗಳಿಗೊಮ್ಮೆ ಅರಳುತ್ತದೆ. ಈಗಾಗಲೇ ದಾಖಲಿಸಲ್ಪಟ್ಟಿರುವ ಮಾಹಿತಿಯಂತೆ ಈ ಹೂವು ಮೊದಲ ಬಾರಿಗೆ 1838ರಲ್ಲಿ ದಾಖಲಾಗಿದ್ದು ನಂತರ 12 ವಷರ್ಗಳ ಅಂತರದಲ್ಲಿ 1850, 1862 1874, 1886, 1898, 1910, 1922, 1934, 1946, 1958, 1970, 1982, 1994, 2006 ಮತ್ತು ಕೊನೆಯದಾಗಿ 2018ರಲ್ಲಿ ಅರಳಿರುವುದು ದಾಖಲಾಗಿರುತ್ತದೆ. 2018ರಲ್ಲಿ ಕೊಡಗಿನ ಪುಷ್ಪಗಿರಿ ಪರ್ವತ ಶ್ರೇಣಿಯ ತುದಿಯಲ್ಲಿ ಈ ಹೂವುಗಳು ಅರಳಿರುವುದನ್ನು ಅಲ್ಲಿನ ಅರಣ್ಯಾಧಿಕಾರಿಗಳು ದೃಢೀಕರಿಸಿರುತ್ತಾರೆ. ಮುಂದೆ 2030ಕ್ಕೆ ಅರಳುವುದನ್ನು ನಿರೀಕ್ಷಿಸಲಾಗಿದೆ. ಪುಷ್ಪಗಿರಿ ಅರಣ್ಯ ಪ್ರದೇಶವು ಸಮುದ್ರ ಮಟ್ಟದಿಂದ 1700 ಮೀಟರ್ ಎತ್ತರದಲ್ಲಿರುವುದು ನಾವು ಗಮನಿಸಬೇಕಾದ ವಿಚಾರ.

2021ರಲ್ಲಿ ಕೊಡಗಿನಲ್ಲಿ ಅರಳಿರುವ ಹೂವು ಯಾವುದು?

ಸ್ಟ್ರೊಬಿಲಾಂತಸ್ ಸಸ್ಯಕುಲದಲ್ಲಿ 250ಕ್ಕೂ ಹೆಚ್ಚಿನ ಹೂವುಗಳಿದ್ದು ಅವುಗಳಲ್ಲಿ ಕೊಡಗು ಜಿಲ್ಲೆಯ ಪರ್ವತ ಶ್ರೇಣಿಗಳಲ್ಲಿ ಮೂರು ಜಾತಿಯ ಹೂವುಗಳು ಅರಳುವುದು ದಾಖಲಾಗಿರುತ್ತದೆ. ಅವುಗಳೆಂದರೆ ಸ್ಟ್ರೊಬಿಲಾಂತಸ್ ಕುಂತಿಯಾನ (Strobilanthes kunthiana), ಸ್ಟ್ರೊಬಿಲಾಂತಸ್ ಸಿಸಿಲಿಸ್ (Strobilanthes sessilis) ಮತ್ತು ಸ್ಟ್ರೊಬಿಲಾಂತಸ್ ಕುಸ್ಪಿಡೇಟಸ್ (Strobilanthes cuspidatus). ಇವುಗಳಲ್ಲಿ ಸ್ಟ್ರೊಬಿಲಾಂತಸ್ ಕುಂತಿಯಾನ ಹೊರತುಪಡಿಸಿ ಉಳಿದ 2 ಜಾತಿಯ ಹೂವುಗಳು 4-5-6-7 ವರ್ಷಗಳ ಅಂತರದಲ್ಲಿ ಕೊಡಗು ಜಿಲ್ಲೆಯ ಪರ್ವತಗಳಲ್ಲಿ ಅಥವಾ ಎತ್ತರದ ಗುಡ್ಡಗಳಲ್ಲಿ ಅರಳುವುದನ್ನು ಅಲ್ಲಿನ ಸ್ಥಳೀಯರು ದಾಖಲಿಸಿರುತ್ತಾರೆ. ಸದರಿ 2021ರ ಆಗಸ್ಟ್ ಮಾಹೆಯಲ್ಲಿ ಕೊಡಗಿನ ಅತ್ಯಂತ ಆಕರ್ಷಣೀಯ ಪರ್ವತ ಪ್ರದೇಶವಾದ ಮಾಂದಲ್‌ಪಟ್ಟಿಯಲ್ಲಿ ಮತ್ತು ಪುಷ್ಪಗಿರಿ ಪರ್ವತ ಪ್ರದೇಶದಲ್ಲಿ ಅರಳಿರುವುದು ಸ್ಟ್ರೊಬಿಲಾಂತಸ್ ಸಿಸಿಲಿಸ್ ಜಾತಿಯ ಕುರಿಂಜಿ ಹೂವಾಗಿರುತ್ತದೆ.

ಈ ಹೂವುಗಳನ್ನು ಕಳೆದ ಮೂರು ವರ್ಷಗಳಿಂದ ಕೊಡಗಿನ ಬೇರೆ ಬೇರೆ ಗುಡ್ಡ ಪ್ರದೇಶಗಳಲ್ಲಿ ಅರಳಿರುವುದನ್ನು ನಾನೇ ಕಂಡಿದ್ದೇನೆ. ಕಳೆದ ವರ್ಷ ಕೂಡಾ ಕೊಡಗು ಜಿಲ್ಲೆಯ ಕಾಲೂರಿನಲ್ಲಿ ಮತ್ತು ಪುಷ್ಪಗಿರಿಯಲ್ಲಿ ಈ ಹೂವುಗಳು ಅರಳಿದೆ. ಆದರೆ ಈ ವರ್ಷ ಮಾಂದಲ್‌ಪಟ್ಟಿಯ ಬೆಟ್ಟದ ಪೂರ್ತಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಅರಳಿರುವುದರಿಂದ ಅತ್ಯಂತ ಹೆಚ್ಚಿನ ಮಟ್ಟದಲ್ಲಿ ಸುದ್ದಿಯಾಗಿದ್ದು ಮಾತ್ರವಲ್ಲದೆ ಪ್ರವಾಸಿಗರನ್ನು ಆಕರ್ಷಿಸುವ ಕಾರಣದಿಂದಲೋ ಅಥವಾ ಮಾಹಿತಿಯ ಕೊರತೆಯಿಂದಲೋ ಸುದ್ದಿ ಮಾಧ್ಯಮಗಳು ಮತ್ತು ವಿಶೇಷವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಜನ ಈ ಹೂವುಗಳನ್ನು ನೀಲಕುರಿಂಜಿ ಎಂದು ಕರೆದರು. ಆದರೆ
ವಾಸ್ತವದಲ್ಲಿ ಕೊಡಗು ಜಿಲ್ಲೆಯ ಅನೇಕ ಗುಡ್ಡಗಳಲ್ಲಿ ಅರಳಿರುವ ಈ ನೀಲಿ ಸುಂದರಿ ಮಾತ್ರ ಸ್ಟ್ರೊಬಿಲಾಂತಸ್ ಸಿಸಿಲಿಸ್!.

ವ್ಯತ್ಯಾಸವೇನು?

ಸ್ಟ್ರೊಬಿಲಾಂತಸ್ ಕುಂತಿಯಾನ ಮತ್ತು ಸ್ಟ್ರೊಬಿಲಾಂತಸ್ ಸಿಸಿಲಿಸ್ ಹೂವುಗಳ ನಡುವೆ ಕಾಣಲು ಅಂತಹ ದೊಡ್ಡ ವ್ಯತ್ಯಾಸವೇನಿರುವುದಿಲ್ಲ. ಎರಡೂ ಪೊದೆಯ ಸಸ್ಯಗಳಾಗಿದ್ದು ಹೂವುಗಳು ಗೊಂಚಲಾಗಿ ಬೆಳೆಯುತ್ತದೆ ಮತ್ತು ಹೂವುಗಳಿಗೆ ಬೇರೆ ಹೂವುಗಳಂತೆ ತೊಟ್ಟುಗಳಿರುವುದಿಲ್ಲ. ಹೂವನ್ನು ನೇರ ಗೊಂಚಲಿನಿಂದಲೇ ಬೇರ್ಪಡಿಸಬೇಕು. ಕನಕಾಂಬರ ಹೂವಿನ ಹಾಗೆ!.

ನೀಲಕುರಿಂಜಿಯ ಹೂವುಗಳ ಕಾಂಡವು ತುಸು ಎತ್ತರಕ್ಕೆ, ನೇರವಾಗಿ ಬೆಳಯುವುದಲ್ಲದೆ ಕಾಂಡವು ಗಟ್ಟಿಯಾಗಿರುತ್ತದೆ. ಎಲೆಗಳು ತುಸು ಉದ್ದವಾಗಿರುತ್ತದೆ. ಹೂವಿನ ಮುಂಭಾಗ ತುಸು ಹೆಚ್ಚೇ ಅಗಲವಾಗಿರುತ್ತದೆ. ಆದರೆ ಸ್ಟ್ರೊಬಿಲಾಂತಸ್ ಸಿಸಿಲಿಸ್ ಹೂವುಗಳು ಗಂಟೆಯಾಕಾರದಲ್ಲಿ ಅರಳಿ ಹೂವಿನ ದಳದ ಅಂಚುಗಳು ಸ್ವಲ್ಪವೇ ಸ್ವಲ್ಪ ಹಿಮ್ಮುಖವಾಗಿ ಬಾಗಿರುತ್ತದೆ. ಎರಡೂ ಹೂವುಗಳನ್ನು ಒಟ್ಟಿಗೇ ನೋಡುವ ಕಾಲ ಬಹುಶಃ ಸಿಗಲಾರದೇನೋ ಅಥವಾ ಮುಂಬರುವ ದಿನಗಳಲ್ಲಿ ಒಟ್ಟಿಗೇ ಒಂದೇ ವರ್ಷ ಅರಳುವುದೇನೋ? ಕಾದು ನೋಡಬೇಕಿದೆ.

ವಿನೋದ್ ಕುಮಾರ್ ವಿ ಕೆ

ವಿನೋದ್ ಕುಮಾರ್ ವಿ ಕೆ
ವಿನೋದ್ ಹುಟ್ಟಿದ್ದು ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ. 2011ರಿಂದ ಛಾಯಾಗ್ರಹಣದಲ್ಲಿ ಆಸಕ್ತಿ. ಹಕ್ಕಿ, ಚಿಟ್ಟೆ, ಕೀಟಗಳಿಂದ ಪ್ರಾರಂಭವಾಗಿ ಟ್ರೆಕ್ಕಿಂಗ್ ಹವ್ಯಾಸವಾಗಿ ಬೆಳೆದಿದೆ. ಅರಣ್ಯ ಇಲಾಖೆಯಲ್ಲಿ ಕಚೇರಿ ಸಹಾಯಕನಾಗಿ ವೃತ್ತಿ. ಸದ್ಯಕ್ಕೆ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ವಾಸವಾಗಿದ್ದಾರೆ.


ಇದನ್ನೂ ಓದಿ: ಗೌರಿ ಕಾರ್ನರ್: ಸೌಹಾರ್ದ ಗಿರಿಯಲ್ಲಿ ನಿಸರ್ಗದ ’ನೀಲಿಗ್ಯಾನ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸತೀಶ್‌ ಜಾರಕಿಹೊಳಿ ಮೇಲಿನ ಇಡಿ ದಾಳಿಯನ್ನು ‘ಚಾರಿತ್ರ್ಯ ಹರಣ’ ಎಂದ ವಿಜಯ್ ಮಲ್ಯ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯವು (ಇಡಿ) ನಡೆಸಿದ ದಾಳಿಯನ್ನು ಮಾಜಿ ಸಂಸದ ಮತ್ತು ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಸಾರ್ವಜನಿಕವಾಗಿ ಚಾರಿತ್ರ್ಯ...

ಒಗ್ಗಟ್ಟಿನ ಮಾತುಗಳಷ್ಟೇ ಸಾಲದು, ಕೃತಿಯಲ್ಲಿರಲಿ ದಿಟ್ಟತನ : ಬ್ರಿಕ್ಸ್ ವಿಚಾರದಲ್ಲಿ ಕೇಂದ್ರಕ್ಕೆ ಕಾಂಗ್ರೆಸ್ ಚಾಟಿ

ಜಾಗತಿಕ ಮಟ್ಟದಲ್ಲಿ ಬ್ರಿಕ್ಸ್ (BRICS) ಒಕ್ಕೂಟದ ಪ್ರಭಾವ ಹೆಚ್ಚುತ್ತಿರುವುದನ್ನು ಸ್ವಾಗತಿಸಿರುವ ಕಾಂಗ್ರೆಸ್, ಈ ಒಕ್ಕೂಟದ ಅಧ್ಯಕ್ಷತೆಯನ್ನು ವಹಿಸಿರುವ ಭಾರತವು ‘ಗ್ಲೋಬಲ್ ಸೌತ್’ (Global South) ರಾಷ್ಟ್ರಗಳ ನಡುವೆ ತನ್ನ ರಾಜತಾಂತ್ರಿಕ ಸ್ಥಾನಮಾನವನ್ನು ಮರುಸ್ಥಾಪಿಸಲು...

9/11 ರ ಹಿಂದಿನ ದಾಳಿಯನ್ನು ಇರಾನ್ ಜೊತೆಗಿನ ಇಂದಿನ ಯುದ್ಧಕ್ಕೆ ಜೋಡಿಸಿದ ಡೊನಾಲ್ಡ್‌ ಟ್ರಂಪ್

"ಸೆಪ್ಟೆಂಬರ್ 11, 2001 ರ ದಾಳಿಯನ್ನು ಯುನೈಟೆಡ್ ಸ್ಟೇಟ್ಸ್ ಎಂದಿಗೂ ಮರೆಯುವುದಿಲ್ಲ. 25 ವರ್ಷಗಳ ನಂತರವೂ ಇರಾನ್ ಮೇಲೆ ದಾಳಿ ಮಾಡುವ ಮೂಲಕ ದೇಶವು ಭಯೋತ್ಪಾದನೆ ವಿರುದ್ಧದ ಯುದ್ಧವನ್ನು ಮುಂದುವರೆಸಿದೆ" ಎಂದು ಅಧ್ಯಕ್ಷ...

SIR ನೋಟಿಸ್ ಮತ್ತು ವಿಚಾರಣೆಯಲ್ಲಿ ಅಕ್ರಮ : ಚು. ಆಯೋಗದ ವಿರುದ್ಧ ನಾಗರಿಕ ಸಂಘಟನೆಗಳಿಂದ 2ನೇ ಎಫ್‌ಐಆರ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಭಾಗವಾಗಿ, ಆಗಸ್ಟ್ 24ರಂದು ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದ ಕರಡು ಮತದಾರರ ಪಟ್ಟಿಯನ್ನು ತಿರಸ್ಕರಿಸಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಎಫ್‌ಐಆರ್ ಬಿಡುಗಡೆ...

‘ಕೊಂಕಣಿ – ಮಾಲ್ವಣಿ ಸಮುದಾಯಗಳು ಹಿಂದುತ್ವದ ಬೆಂಬಲಿಗರು..’; ಮಹಾರಾಷ್ಟ್ರ ಬಿಜೆಪಿ ನಾಯಕ ಅಮೀತ್ ಸತಮ್

ಮುಂಬೈನಲ್ಲಿ ವಾಸಿಸುತ್ತಿರುವ ಕೊಂಕಣಿ ಮತ್ತು ಮಾಲ್ವಣಿ ಸಮುದಾಯಗಳು ಸೇರಿದಂತೆ ಕೊಂಕಣ ಪ್ರದೇಶದ ಜನರು ಹಿಂದುತ್ವವನ್ನು ಬೆಂಬಲಿಸುತ್ತಾರೆ ಎಂದು ಬಿಜೆಪಿ ನಾಯಕ ಅಮೀತ್ ಸತಮ್ ಹೇಳಿದ್ದಾರೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದ ಸಾವಂತವಾಡಿಗೆ ಗಣಪತಿ ಭಕ್ತರಿಗಾಗಿ ಛತ್ರಪತಿ...

SIR! ಸಾಮಾನ್ಯರಿಗೆ ಸಂಕಷ್ಟ; ಗಣ್ಯರಿಗೆ ಮನೆ ಬಾಗಿಲಲ್ಲೇ ಸೇವೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕರ್ನಾಟಕದಲ್ಲಿ ಮುಂದುವರೆದಿರುವ ನಡುವೆಯೇ, ಅದರ ಜಾರಿಯಲ್ಲಿ ಸಾಮಾನ್ಯ ಮತದಾರರು ಮತ್ತು ಪ್ರಭಾವಿ ವ್ಯಕ್ತಿಗಳ ಅನುಭವದ ನಡುವಿನ ವ್ಯತ್ಯಾಸದ ಕುರಿತು ಪ್ರಶ್ನೆಗಳು ಎದ್ದಿವೆ. ಮತದಾರರ ಪಟ್ಟಿಯಲ್ಲಿನ...

ದಲಿತ ಬಾಲಕಿ ನಿಶು ಆಜಾದ್ ಕುಟುಂಬಕ್ಕೆ ನಿಲ್ಲದ ಕಿರುಕುಳ; ಅಸಭ್ಯ ಭಾಷೆ – ಬೆದರಿಕೆ ಸಂದೇಶ ರವಾನೆ

ಸಿಜೆಪಿ ಪ್ರತಿಭಟನೆಯಲ್ಲಿ ಗಮನ ಸೆಳೆದಿದ್ದ ಹದಿನಾಲ್ಕು ವರ್ಷ ವಯಸ್ಸಿನ ದಲಿತ ಸಮುದಾಯದ ಕಂಟೆಂಟ್ ಕ್ರಿಯೇಟರ್ ನಿಶು ಆಜಾದ್ ಮತ್ತು ಅವರ ಕುಟುಂಬಕ್ಕೆ ಮೊಬೈಲ್‌ ಫೋನ್‌ ಮೂಲಕ ನಿರಂತರ ಕಿರುಕುಳ ಸಂದೇಶ ಬರುತ್ತಿವೆ ಎಂದು...

ಉತ್ತರ ಪ್ರದೇಶ| 8ನೇ ತರಗತಿಯ ದಲಿತ ವಿದ್ಯಾರ್ಥಿಗೆ ಶಿಕ್ಷಕಿಯಿಂದ ಜಾತಿ ತಾರತಮ್ಯ

ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯೊಬ್ಬರು ಶಿಕ್ಷಕಿಯಿಂದ ಜಾತಿ ಆಧಾರಿತ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿದ್ದಾನೆ. ಕೃಷ್ಣ ಎಂದು ಗುರುತಿಸಲ್ಪಟ್ಟ ಈ ವಿದ್ಯಾರ್ಥಿ ಪರಿಶಿಷ್ಟ...

ಯೆಮನ್ | ಸಂಪೂರ್ಣ ರೆಡ್ ಸೀ ಕರಾವಳಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಹೌತಿ ಪಡೆ : ಮಂದೇಬ್ ಜಲಸಂಧಿ ಮೇಲೆಯೂ ಹಿಡಿತ ಸಾಧಿಸಿರುವುದಾಗಿ ವರದಿ

ಮಹತ್ವದ ಬೆಳವಣಿಗೆಯಲ್ಲಿ, ಹೌತಿ ಬಂಡುಕೋರರು ಯೆಮನ್‌ನ ಇಡೀ ಕೆಂಪು ಸಮುದ್ರದ (ರೆಡ್ ಸೀ) ಕರಾವಳಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇರಾನ್ ಬೆಂಬಲಿತ ಹೌತಿ ಸಶಸ್ತ್ರ ಪಡೆಗಳು ಯೆಮನ್ ಸರ್ಕಾರದ ನಿಯಂತ್ರಣದಲ್ಲಿದ್ದ...

ಭಾರತದ ಚುನಾವಣಾ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿದೆ: ಸಿಇಸಿ ಜ್ಞಾನೇಶ್ ಕುಮಾರ್

ಭಾರತದ ಚುನಾವಣಾ ಪ್ರಕ್ರಿಯೆಯು ವಿಶ್ವದಲ್ಲೇ ಅತ್ಯಂತ ಪಾರದರ್ಶಕವಾದದ್ದು ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ (ಸೆ.11) ಹೇಳಿದ್ದಾರೆ. ಗುಜರಾತ್ ವಿಶ್ವವಿದ್ಯಾಲಯದ ಅಟಲ್ ಕಲಾಂ ಸಭಾಂಗಣದಲ್ಲಿ ನಡೆದ 'ಮತಗಟ್ಟೆ ಮಟ್ಟದ ಅಧಿಕಾರಿಗಳೊಂದಿಗೆ...