Homeಅಂಕಣಗಳುಕಳೆದು ಹೋದ ದಿನಗಳನ್ನು ಮುಗಿಸುವ ಮುನ್ನ: ಪ್ರಸಾದ್ ರಕ್ಷಿದಿ

ಕಳೆದು ಹೋದ ದಿನಗಳನ್ನು ಮುಗಿಸುವ ಮುನ್ನ: ಪ್ರಸಾದ್ ರಕ್ಷಿದಿ

ಹಾರ್ಲೆ ಬಳಗದ ಕಾರ್ಮಿಕ ನೊಬ್ಬನಿಗೆ ಕನ್ನಡ ಕಲಿಸಿದ ಅರ್ಧ ಶತಮಾನದ ನಂತರ ತೋಟದ ಮಾಲಿಕರಿಗೂ ಕನ್ನಡ ಕಾಗುಣಿತ ಕಲಿಸಿದ ಹೆಗ್ಗಳಿಕೆ ನನ್ನದು!

- Advertisement -
- Advertisement -

ಕಳೆದು ಹೋದ ದಿನಗಳು ಭಾಗ -2, ಅಧ್ಯಾಯ -21

ಇಲ್ಲಿಯವರೆಗಿನ ಬರಹಗಳು ಮಲೆನಾಡಿನ ಕಾಫಿ ವಲಯದ ಅದರಲ್ಲಿಯೂ ಮುಖ್ಯವಾಗಿ ಇಂದಿನ ಕೊಡಗು ಮತ್ತು ಕೊಡಗಿನ ಭಾಗವಾಗಿದ್ದ ಮಂಜರಾಬಾದ್ ಪ್ರದೇಶದ ಸುಮಾರು ಒಂದು ಶತಮಾನಕ್ಕೂ ಹೆಚ್ಚು ಕಾಲದ ಸಂಕಥನವನ್ನು ಕಟ್ಟಿಕೊಡುವ ಪ್ರಯತ್ನವನ್ನು ಮಾಡಿದ್ದೇನೆ. ಇಡೀ ಕಾಫಿ ವಲಯವೇ ಇಂದು ಬಿಕ್ಕಟ್ಟಿನಲ್ಲಿದೆ.  ಮುಂದಿನ ದಿನಗಳ ಖಂಡಿತವಾಗಿಯೂ ಹಿಂದಿನಂತೆ ಇರಲು ಸಾಧ್ಯವೇ ಇಲ್ಲವೆಂಬ ಭಾವನೆ ಇಲ್ಲಿನ ಬಹುಪಾಲು ಜನರದ್ದಾಗಿದೆ.

ಅದನ್ನು ಕಾಲವೇ ನಿರ್ಧರಿಸಲಿದೆ.

ಎರಡು ವಿಷಯಗಳೊಂದಿಗೆ ಈ ಸರಣಿಯನ್ನು ಮುಗಿಸುತ್ತೇನೆ,

ಈ ಬರಹದಲ್ಲಿ ಉಲ್ಲೇಖಿಸಲಾದ ಹಲವಾರು ಹಿರಿಯರು ಇಂದು ನಮ್ಮೊಂದಿಗೆ ಇಲ್ಲ. ಈ ಬರಹದ ಹರಹು 1860ನೇ ಇಸವಿ ಆಸುಪಾಸಿನಿಂದ ಪ್ರಾರಂಭವಾಗಿ, ಸುಮಾರು 2000 ಇಸವಿಯ ವರೆಗಿನ ಕಾಲಘಟ್ಟವನ್ನು ಮಾತ್ರ ಗಣನೆಗೆ ತೆಗೆದು ಕೊಂಡಿದ್ದೇನೆ. ಅನಂತರ ನಡೆದ ಕೆಲವು ಘಟನೆಗಳನ್ನು ಸಾಂದಸರ್ಭಿಕವಾಗಿ ಪೂರಕ ವಿಷಯವಾಗಿ ಮಾತ್ರ ತೆಗೆದುಕೊಂಡಿರುವುದರಿಂದ. ಇದು ಸಮಕಾಲೀನ ವಿಷಯಗಳಿಗೆ ಸಮಗ್ರವಾಗಿ ಚಾಚಿಕೊಂಡಿಲ್ಲ ಎನ್ನುವುದನ್ನು ಓದುಗರು ಗಮನಿಸಬೇಕು.

ಇಲ್ಲೇ ಉಲ್ಲೇಖವಾಗಿರುವ ಅನೇಕ ಕುಟುಂಬಗಳವರು ಈಗ ಬೇರೆ ಬೇರೆ ಕಡೆ ಹೋಗಿ ನೆಲೆಸಿದ್ದಾರೆ. ಕೆಲವು ಕುಟುಂಬಗಳವರು ಮಾತ್ರ ಇಲ್ಲಿಯೇ ಉಳಿದು ಹಳೆಯ ವೃತ್ತಿಯನ್ನು ಮುಂದುವರೆಸಿದ್ದಾರೆ.

ಹಾರ್ಲೆ ಗಣಪಯ್ಯನವರ ಸಹೋದರ ಕೃಷ್ಣಮೂರ್ತಿಯವರ ಕುಟುಂಬದವರು ಇಲ್ಲೇ ನೆಲೆಸಿದ್ದಾರೆ.

ಗಣಪಯ್ಯನವರ ಹಾರ್ಲೆ ಎಸ್ಟೇಟ್ ಈಗ ಚಿಕ್ಕಮಗಳೂರಿನ ಕಾಫಿ ಬೆಳೆಗಾರರಾದ ಡಿ.ಎಂ ಶಂಕರ್ ಮತ್ತು ಪೂರ್ಣೇಶ್ ಸಹೋದರರ ಒಡೆತನದಲ್ಲಿದೆ.

ರವೀಂದ್ರನಾಥರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರ ಮಕ್ಕಳು ಬೇರೆ ಬೇರೆ ಉದ್ಯೋಗಗಳಲ್ಲಿ ದೇಶ ವಿದೇಶಗಳಲ್ಲಿ ಇದ್ದಾರೆ.

ಪ್ರದೀಪ್ ಕೆಂಜಿಗೆ

92ರ ಹರೆಯದ ರವೀಂದ್ರನಾಥರು ಇಂದೂ ಉತ್ಸಾಹಿಗಳಾಗಿ ಆಸಕ್ತರಿಗೆ ಆನ್ಲೈನ್ ಮೂಲಕ ಸಂಸ್ಕೃತ ಸಾಹಿತ್ಯದ ಪಾಠ ಮಾಡುತ್ತಿದ್ದಾರೆ. ಭಾರತೀಯ ದ್ರಾವಿಡ ಭಾಷೆಗಳಿಗೂ ಮತ್ತು ಯುರೋಪಿಯನ್ ಭಾಷೆಗಳಿಗೂ ಇರುವ ತುಲನಾತ್ಮಕ ಸಂಬಂಧದ ಬಗ್ಗೆ ಅಧ್ಯಯನ ನಡೆಸಿದ್ದಾರೆ. ನೂರಾರು ಜನರಿಗೆ ಅವರು ತಮ್ಮಲ್ಲಿರುವುದನ್ನು ಹಂಚಿದ್ದಾರೆ.

ನಾನು ವೈಯಕ್ತಿಕವಾಗಿ ಅವರಿಂದ ಕಲಿತದ್ದು ಬಹಳ,

ಅವರು ಯಾವಾಗಲೂ ಹೇಳುವ ಎರಡು ವಿಷಯಗಳು.

ಒಂದು ಮರ ಅಥವಾ ಗಿಡ ಹೂ ಬಿಡುತ್ತದೆ. ಹೂವು ಮಕ್ಕಳ ಹಾಗೆ ಅದು ಎಲ್ಲರನ್ನೂ ಆಕರ್ಷಿಸುತ್ತದೆ. ಹೂವು ತನ್ನಗಿರುವ ಆಕರ್ಷಣೆಯ ಮೂಲವೇ ದುಂಬಿಗಳನ್ನು ಕರೆಯುತ್ತದೆ. ಮಕ್ಕಳಿಗೆ ಇರುವ ಮುಗ್ಧ, ನಿರ್ಮಲ ಆಕರ್ಷಣೆಯೇ ಮಕ್ಕಳನ್ನು ಪೋಷಿಸಲು ಉತ್ತೇಜಿಸುವ ಮುಖ್ಯ ಅಂಶವಾಗಿದೆ

ಕಾಯಿ ಹಾಗಲ್ಲ ಅದು ಹಸಿರಾಗಿ ಎಲೆಯ ಮರೆಯಲ್ಲಿ ರಕ್ಷಣೆ ಪಡೆಯುತ್ತದೆ. ರುಚಿಯೂ ಅಷ್ಟೆ ಕಹಿ, ಹುಳಿ ಅಥವಾ ಒಗರು. ತನ್ನ ಹತ್ತಿರ ಬರದಂತೆ ಎಲ್ಲರಿಂದ ದೂರ ನಿಲ್ಲುತ್ತದೆ.

ಫಲ ಮಾಗಿ ಹಣ್ಣಾಗುತ್ತಿದ್ದಂತೆ ಆಕರ್ಷಕ ಬಣ್ಣ, ರುಚಿ.

ಆಗ ಬಾ ನನ್ನನ್ನು ಸ್ವೀಕರಿಸು ಎಂದು ಎಲ್ಲರನ್ನೂ ಕರೆಯುತ್ತದೆ. ಅದು ಮರು ಹುಟ್ಟಿಗೆ ನಾಂದಿ.

ಹಾಗೆ ಮನುಷ್ಯ ಮಾಗಿದಾಗ ತಾನಾಗಿಯೇ ಎಲ್ಲರಿಗೂ ಬೇಕಾದವನಾಗುತ್ತಾನೆ. ಅಲ್ಲಿಯವರೆಗೆ ಆತನೂ ಕಹಿ, ಹುಳಿ. ಒಗರುಗಳ ಮಿಶ್ರಣ.

ಮನುಷ್ಯ ಮಾಗಬೇಕು…….

**********

“ಶಿವ” ಅತ್ಯಂತ ಪಾರದರ್ಶಕ, ಅತ್ಯಂತ ಸರಳ, ಅದರಿಂದಲೇ ಅವನನ್ನು ಬೋಲೇನಾಥ ಎಂದುಕರೆಯುವುದು, ಅವನು ನಿರ್ಗುಣ, ನಿರಾಕಾರ,

ನೀವು ಎಷ್ಟೆಷ್ಟು ಪಾರದರ್ಶಕ ಆಗುತ್ತೀರೋ ಅಷ್ಟು ಸ್ವೀಕರಿಸುವವರಾಗುತ್ತೀರಿ (ರಿಸೆಪ್ಟಿವ್).
ಆದ್ದರಿಂದಲೇ ಅತ್ಯಂತ ಪಾರದರ್ಶಕನಾದ ಶಿವ ಅತ್ಯಂತ ರಿಸೆಪ್ಟಿವ್, ಜಗತ್ತಿನ ಎಲ್ಲ ವಿಷವನ್ನು ಅಂದರೆ ಕೆಟ್ಟದ್ದನ್ನು ಸ್ವೀಕರಿಸುವ ಶಕ್ತಿ ಅವನಿಗೆ ಮಾತ್ರ ಇದೆ. ಆದ್ದರಿಂದಲೇ ಅವನು ವಿಷಕಂಠನಾದ,
ವಿಷವನ್ನು ತಾನು ಸ್ವೀಕರಿಸಿ ಒಳ್ಳೆಯದನ್ನು ಬೇರೆಯವರಿಗೆ ನೀಡಬಲ್ಲ ಶಕ್ತಿ ಸರಳ, ಪಾರದರ್ಶಕ ವ್ಯಕ್ತಿತ್ವಕ್ಕೆ ಮಾತ್ರ ಇರುತ್ತದೆ. ಅಂತಹ ವ್ಯಕ್ತಿ ಪ್ರಮಾಣಾತೀತ, ಯಾಕೆಂದರೆ ಪಾರದರ್ಶಕತೆಗೆ ಪ್ರಮಾಣವಿಲ್ಲ.
ನಾವು ‘ಶಿವ’ ನಾಗಲು ಪ್ರಯತ್ನಿಸಬೇಕು.

*************

ಈ ಬರಹವನ್ನು ನಿಲ್ಲಿಸುವ ಮುನ್ನ ಒಂದು ಸೋಜಿಗವನ್ನು ನಿಮ್ಮ ಮುಂದಿಡಲು ಬಯಸುತ್ತೇನೆ.

ನನ್ನ ಬಾಲ್ಯದ ಘಟನೆಯೊಂದು ಹಲವಾರು ಸಂಗತಿಗಳಿಗೆ ಕಾರಣವಾಯಿತು.

ನನ್ನ ಅಪ್ಪ ಕೆಲಸ ಮಾಡುತ್ತಿದ್ದ ಸಿ.ಎಂ ಪೂಣಚ್ಚನವರ ಪೂರ್ಣಿಮಾ ಎಸ್ಟೇಟಿನಲ್ಲಿ, ಒಬ್ಬ ಕೆಲಸಗಾರ ಯುವಕನಿದ್ದ. ಆಗ ಎಲ್ಲ ಕೆಲಸಗಾರರರೂ ಹೆಬ್ಬೆಟ್ಟಿನವರೇ, ಲಕ್ಷ್ಮಯ್ಯ ನೆಂಬ ಯುವಕ ನನ್ನ ಅಪ್ಪನ ಅಚ್ಚು ಮೆಚ್ಚಿನವನು. ನನಗೂ ಹಿರಿಯ ಗೆಳೆಯ.

ಬಿ.ಎ.ಜಗನ್ನಾಥ್.ಬಾಳ್ಳುಪೇಟೆ

ಒಂದು ದಿನ ವಾರದ ಸಂಬಳ ಪಡೆಯುವಾಗ ಹೆಬ್ಬಟ್ಟು ಒತ್ತಲು ಹೋಗಿ ಏನೋ ಎಡವಟ್ಟಾಗಿ ಅಪ್ಪನಿಂದ ಬೈಗಳು ತಿಂದು ಅವಮಾನಿತನಾದವನು. ಅದನ್ನೇ ಒಂದು ಸವಾಲಾಗಿ ಸ್ವೀಕರಿಸಿ ನನ್ನಿಂದ ಕಾಗುಣಿತ ಹೇಳಿಸಿಕೊಂಡು ಓದು ಬರಹ ಕಲಿತು ತಲೆಯೆತ್ತಿ ನಿಲ್ಲುತ್ತಾನೆ. ನಾನು ಇದೇ ಘಟನೆಯನ್ನು ವಿಸ್ತಾರವಾಗಿ ಈ ಮೊದಲು ಬರೆದಿದ್ದೇನೆ (ನೋಡಿ ಇದೇ ಲೇಖಕನ ಬೆಳ್ಳೇಕೆರೆ ಹಳ್ಳಿ ಥೇಟರ್ ಪುಸ್ತಕ. ಈ ಪುಸ್ತಕದ ಮೊದಲ ಅಧ್ಯಾಯವೇ “ಲಕ್ಷ್ಮಯ್ಯನ ಕಾಗುಣಿತ”)

ನಾನು ಈ ಕಳೆದುಹೋದ ದಿನಗಳು ಬರಹವನ್ನು ಪ್ರಾರಂಭಿಸಿದಾಗ ಇದರ ಕಂತುಗಳನ್ನು ಶ್ರೀಮತಿ ಕಮಲಾ ರವೀಂದ್ರನಾಥರಿಗೆ ಕಳುಹಿಸುತ್ತಿದ್ದೆ. ರವೀಂದ್ರನಾಥರಿಗೆ ಕನ್ನಡ ಓದಲು ಬಾರದು ಕಮಲಾ ಅವರು ರವೀಂದ್ರನಾಥರಿಗೆ ಪ್ರತಿದಿನ ಇದನ್ನು ಓದಿಹೇಳುವರು. ರವೀಂದ್ರ ನಾಥರು ಈಗ ಶ್ರವಣ ಸಾಧನವನ್ನು ಬಳಸುತ್ತಾರೆ. ನನ್ನ ಬರಹ ಪ್ರಾರಂಭವಾದ ಒಂದೆರಡು ದಿನಗಳಲ್ಲಿ ಅವರ ಶ್ರವಣ ಸಾಧನ ತಪಾಸಣೆಗಾಗಿ ಕಳುಹಿಸಬೇಕಾಯಿತು. ಆಗ ಬೇರೆಯವರು ಅವರಿಗೆ ಓದಿ ಹೇಳುವುದೂ ಕಷ್ಟವಾಯಿತು. ಆಗ ಕಮಲಾ ರವೀಂದ್ರನಾಥರು “ನೀವು ಲೋಕಕ್ಕೆಲ್ಲ ತಿಳುವಳಿಕೆ ಹೇಳುತ್ತೀರಿ ನಿಮಗೆ ಕನ್ನಡ ಕಲಿಯಲೇನು? ಎಂದರಂತೆ!”

ಅದನ್ನೇ ಸವಾಲಾಗಿ ಸ್ವೀಕರಿಸಿದ ರವೀಂದ್ರನಾಥರು ಒಂದು ವಾರದೊಳಗೆ ಕನ್ನಡ ಕಾಗುಣಿತ ಕಲಿತು ನನ್ನ ಬರಹಗಳನ್ನು ಓದಲಾರಂಭಿಸಿದರು. ಅಷ್ಟರಲ್ಲಿ ಶ್ರವಣ ಸಾಧನ ಬಂದಿತ್ತು.

ಆಗ ಕಮಲಾ ರವೀಂದ್ರ ನಾಥರು “ಬೇಕಾದರೆ ಈಗ ನಾನು ಓದಿ ಹೇಳುತ್ತೇನೆ ಎಂದರಂತೆ”.

ಆಗ ರವೀಂದ್ರನಾಥರು “ನೀನು ಓದಿ ಹೇಳುವುದೇನೂ ಬೇಡ, ನಾನೀಗ ಸ್ವತಂತ್ರ” ಎಂದರು.

ಅಷ್ಟೇ ಅಲ್ಲ ನನಗೆ ಫೋನ್ ಮಾಡಿ “ಪ್ರಸಾದ್ ನೀನು ನನಗೆ ಕನ್ನಡ ಕಲಿಸಿದೆ” ಎಂದರು!

ಹೀಗೆ ಹಾರ್ಲೆ ಬಳಗದ ಕಾರ್ಮಿಕ ನೊಬ್ಬನಿಗೆ ಕನ್ನಡ ಕಲಿಸಿದ ಅರ್ಧ ಶತಮಾನದ ನಂತರ ತೋಟದ ಮಾಲಿಕರಿಗೂ ಕನ್ನಡ ಕಾಗುಣಿತ ಕಲಿಸಿದ ಹೆಗ್ಗಳಿಕೆ ನನ್ನದು!

ಈ ಬರಹಗಳ ಮೊದಲ ಭಾಗದ ವಿವರಗಳಲ್ಲಿ ನನಗೆ ಮಾಹಿತಿ ನೀಡಿದ ಹಲವರು ಈ ಭಾಗದ ಬರಹದಲ್ಲಿಯೂ ಸಹಕರಿಸಿದ್ದಾರೆ.

ಇವರಲ್ಲಿ ಮುಖ್ಯವಾಗಿ, ಬಾಳ್ಳು ಪೇಟೆಯ ಬಿ.ಎ.ಜಗನ್ನಾಥ್, ಪ್ರದೀಪ್ ಕೆಂಜಿಗೆ, ಶಿವಶಂಕರ್ ಇಂಜಿನಿಯರಿಂಗ್ ವರ್ಕ್ಸ್‌ನ ಸುಬ್ರಮಣ್ಯಂ ಇದ್ದಾರೆ ಮತ್ತು ಸ್ವತಃ ರವೀಂದ್ರನಾಥರು ಹಲವಾರು ಮಾಹಿತಿ ನೀಡಿದ್ದಾರೆ.

ಇವರೆಲ್ಲರಿಗೂ ನಾನು ಕೃತಜ್ಞ.

ಜೊತೆಗೆ ಇದುವರೆಗೂ ತಾಳ್ಮೆಯಿಂದ ಕಾದು ಈ ಬರಹಗಳನ್ನು ಓದುತ್ತಿರುವ, ಪ್ರತಿಕ್ರಿಯಿಸಿದ ನಿಮಗೆಲ್ಲರಿಗೂ, ಈ ಸಂಕಥನವನ್ನು ಮತ್ತೊಮ್ಮೆ ಹೆಚ್ಚಿನ ಓದುಗರಿಗೆ ತಲುಪಿಸುತ್ತಿರುವ ‘ನಾನು ಗೌರಿ ಡಾಟ್ ಕಾಮ್’ ನ  ಎಲ್ಲ ಗೆಳೆಯರಿಗೂ ಧನ್ಯವಾದಗಳು… ನಮಸ್ಕಾರ…

* ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಮಲೆನಾಡಿನ ವೈವಿಧ್ಯಮಯ ಬೆಳೆಗಳು ಮತ್ತು ಅವುಗಳ ವಿಶೇಷಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...