Homeಸಿನಿಮಾಕ್ರೀಡೆಫೇಸ್ ಬುಕ್‍ನಲ್ಲಿ ಫೇಮಸ್ ಆಗಿರುವ ಕ್ರೀಡಾಪಟು, ಸಿನಿಮಾ ನಟರು ಮತ್ತು ರಾಜಕರಾಣಿಗಳು

ಫೇಸ್ ಬುಕ್‍ನಲ್ಲಿ ಫೇಮಸ್ ಆಗಿರುವ ಕ್ರೀಡಾಪಟು, ಸಿನಿಮಾ ನಟರು ಮತ್ತು ರಾಜಕರಾಣಿಗಳು

ಕೆಲವು ರಾಜಕಾರಣಿಗಳು ದುಡ್ಡು ಕೊಟ್ಟು ಕೆಲವು ಪೇಜ್‍ಗಳನ್ನು ಖರೀದಿಸಿ ನಂತರ ಅವರ ಹೆಸರಾಗಿ ಮಾರ್ಪಡಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

- Advertisement -
- Advertisement -

| ನಾನುಗೌರಿ ಡೆಸ್ಕ್ |

ನಾಯಕರಿಗಿರುವ ಫಾಲೋವರ್ಸ್‍ಗಳ ಸಂಖ್ಯೆಯು ಅವರು ಸಮಾಜದಲ್ಲಿ ಬೀರುವ ಪ್ರಭಾವವನ್ನು ಸಹ ಸೂಚಿಸುತ್ತದೆ. ಈ ನಿಟ್ಟಿನಲ್ಲಿ ಫೇಸ್ ಬುಕ್‍ನಲ್ಲಿ ಯಾವ ಯಾವ ಸ್ಟಾರ್‍ಗೆ ಎಷ್ಟೆಷ್ಟು ಜನ ಫಾಲೋವರ್ಸ್ ಇದ್ದಾರೆ ಎಂದು ಗೊತ್ತಾದರೆ ನೀವು ಬೆಚ್ಚಿ ಬೀಳುತ್ತೀರಿ.. ಇನ್ನೇಕೆ ತಡ ನೋಡಿಬಿಡಿ. ಕ್ರೀಡೆ, ಸಿನಿಮಾ ಮತ್ತು ರಾಜಕೀಯ ಸೆಲೆಬ್ರೆಟಿಗಳನ್ನು ನೋಡೋಣ.

ಯುವಜನರ ನೆಚ್ಚಿನ ಕ್ರಿಕೆಟಿಗ ವಿರಾಟ್ ಕೊಯ್ಲಿಗೆ ಫೇಸ್ ಬುಕ್ ನಲ್ಲಿ 3 ಕೋಟಿ 71 ಲಕ್ಷ ಬೆಂಬಲಿಗರಿದ್ದರೆ, ಸಚಿನ್ ತೆಂಡೂಲ್ಕರ್‍ಗೆ 2 ಕೋಟಿ 84 ಲಕ್ಷ ಜನ ಫಾಲೋವರ್ಸ್ ಇದ್ದಾರೆ. ಮಹೇಂದ್ರ ಸಿಂಗ್ ಧೋನಿ ಪೇಜ್‍ಗೆ 2 ಕೋಟಿ 4 ಲಕ್ಷ ಲೈಕ್ಸ್ ಇವೆ. ಯುವರಾಜ್ ಸಿಂಗ್‍ಗೆ 1ಕೋಟಿ 45 ಲಕ್ಷ, ವೀರೇಂದರ್ ಸೆಹ್ವಾಗ್‍ಗೆ 1ಕೋಟಿ 43 ಲಕ್ಷ, ರೋಹಿತ್ ಶರ್ಮಾಗೆ 1ಕೋಟಿ 9 ಲಕ್ಷ ಬೆಂಬಲಿಗರಿದ್ದಾರೆ. ಇನ್ನು ಭಾರತದ ಟೆನಿಸ್ ತಾರೆ ಸಾನಿಯ ಮಿರ್ಜಾಗೆ 1ಕೋಟಿ 24 ಲಕ್ಷ ಫಾಲೋವರ್ಸ್ ಇದ್ದರೆ, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್‍ಗೆ 78ಲಕ್ಷ ಲೈಕ್ಸ್ ಇವೆ.

ಸಿನಿಮಾ ತಾರೆಯರಲ್ಲಿ ಪ್ರಿಯಾಂಕ ಚೋಪ್ರಾಗೆ ಬರೋಬ್ಬರಿ 4ಕೋಟಿ ಫಾಲೋವರ್ಸ್ ಇದ್ದಾರೆ. ಇನ್ನುಳಿದಂತೆ ಸಲ್ಮಾನ್ ಖಾನ್ ಗೆ 3ಕೋಟಿ, 63ಲಕ್ಷ, ದೀಪಿಕಾ ಪಡುಕೋಣೆಗೆ 3ಕೋಟಿ, 42 ಲಕ್ಷ, ಅಮಿತಾಬ್ ಬಚ್ಚನ್‍ಗೆ 3ಕೋಟಿ 2 ಲಕ್ಷ, ಶಾರುಕ್ ಖಾನ್‍ಗೆ 2ಕೋಟಿ 94 ಲಕ್ಷ, ಶ್ರೇಯಾ ಘೋಷಾಲ್‍ಗೆ 2ಕೋಟಿ 77 ಲಕ್ಷ, ಮಾಧುರಿ ದಿಕ್ಷಿತ್‍ಗೆ 2ಕೋಟಿ 57 ಲಕ್ಷ, ಅಮಿರ್ ಖಾನ್‍ಗೆ 1ಕೋಟಿ 55 ಲಕ್ಷ, ಕತ್ರಿನಾ ಕೈಫ್‍ಗೆ 1ಕೋಟಿ 41 ಲಕ್ಷ ಫ್ಯಾನ್ಸ್ ಇದ್ದಾರೆ.

ರಾಜಕೀಯ ವ್ಯಕ್ತಿಗಳಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ಫೇಸ್ ಬುಕ್ ನಲ್ಲಿ 4 ಕೋಟಿ 39 ಲಕ್ಷ ಫಾಲೋವರ್ಸ್ ಇದ್ದಾರೆ. ಅಮಿತ್ ಶಾಗೆ 1ಕೋಟಿ 44 ಲಕ್ಷ, ದೇವೇಂದ್ರ ಫಡ್ನಾವಿಸ್ 92 ಲಕ್ಷ, ಅರವಿಂದ್ ಕೇಜ್ರಿವಾಲ್‍ಗೆ 71 ಲಕ್ಷ, ಗೌತಮ್ ಗಂಭೀರ್ 69 ಲಕ್ಷ, ಅಖಿಲೇಶ್ ಯಾದವ್ 68 ಲಕ್ಷ, ರಾಜ್‍ನಾಥ್ ಸಿಂಗ್ 68 ಲಕ್ಷ, ಕಮಲ್ ಹಾಸನ್ 35 ಲಕ್ಷ, ಮಮತಾ ಬ್ಯಾನರ್ಜಿ 30 ಲಕ್ಷ, ರಾಹುಲ್ ಗಾಂಧಿ 28 ಲಕ್ಷ, ಅಸಾದ್ದೀನ್ ಒವೈಸಿಗೆ 26 ಲಕ್ಷ, ಎಂ.ಕೆ ಸ್ಟ್ಯಾಲಿನ್ 20 ಲಕ್ಷ, ಚಂದ್ರಬಾಬು ನಾಯ್ಡು 18 ಲಕ್ಷ, ಜಗನ್ ಮೋಹನ್ ರೆಡ್ಡಿ 17 ಲಕ್ಷ, ನವೀನ್ ಪಟ್ನಾಯಕ್ 14 ಲಕ್ಷ ಫಾಲೋವರ್ಸ್‍ಗಳನ್ನು ಹೊಂದಿದ್ದಾರೆ.

ಕರ್ನಾಟಕಕ್ಕೆ ಬರುವುದಾದರೆ ಪ್ರಕಾಶ್ ರಾಜ್‍ರವರಿಗೆ 44 ಲಕ್ಷ, ಯಡಿಯೂರಪ್ಪನವರಿಗೆ 17 ಲಕ್ಷ, ರಮ್ಯ ದಿವ್ಯ ಸ್ಪಂದನರವರಿಗೆ 15 ಲಕ್ಷ, ಡಿ.ಕೆ ಶಿವಕುಮಾರ್‍ಗೆ 5 ಲಕ್ಷ, ಎಚ್.ಡಿ ಕುಮಾರಸ್ವಾಮಿರವರಿಗೆ 2 ಲಕ್ಷ, ಸಿದ್ದರಾಮಯ್ಯನವರಿಗೆ 2 ಲಕ್ಷ, ಎಚ್.ಡಿ ದೇವೇಗೌಡರಿಗೆ 1 ಲಕ್ಷ ಅಭಿಮಾನಿಗಳಿದ್ದಾರೆ.

ಸಿನಿಮಾ ನಟರಲ್ಲಿ ಹರಿಪ್ರಿಯಾಗೆ 21 ಲಕ್ಷ, ದರ್ಶನ್ ತೂಗುದೀಪ್‍ಗೆ 12 ಲಕ್ಷ, ರಾಧಿಕ ಪಂಡಿತ್‍ಗೆ 9 ಲಕ್ಷ, ಯಶ್‍ಗೆ 7ಲಕ್ಷ, ಪುನೀತ್ ರಾಜ್‍ಕುಮಾರ್‍ರವರಿಗೆ 7 ಲಕ್ಷ, ಸುದೀಪ್‍ರವರ ಫ್ಯಾನ್ಸ್ ಅಸೋಷಿಯೇಷನ್ ಪೇಜ್ ಗೆ 14 ಲಕ್ಷ ಫಾಲೋವರ್ಸ್ ಇದ್ದಾರೆ.

ಇದರಲ್ಲಿ ಕೆಲವು ರಾಜಕಾರಣಿಗಳು ದುಡ್ಡು ಕೊಟ್ಟು ಕೆಲವು ಪೇಜ್‍ಗಳನ್ನು ಖರೀದಿಸಿ ನಂತರ ಅವರ ಹೆಸರಾಗಿ ಮಾರ್ಪಡಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಮತ್ತೆ ಕೆಲವು ರಾಜಕಾರಣಿಗಳು ಸಾಕಷ್ಟು ದುಡ್ಡು ಖರ್ಚು ಮಾಡಿ ತಮ್ಮ ಪೇಜ್ ಅನ್ನು ಪ್ರಮೋಷನ್ ಮಾಡಿಸಿರುತ್ತಾರೆ. ಹಾಗೆಯೇ ಟ್ವಿಟ್ಟರ್‍ನಲ್ಲಿ ನರೇಂದ್ರ ಮೋದಿಯವರನ್ನು ಫಾಲೋ ಮಾಡುತ್ತಿರುವವರಲ್ಲಿ ಶೇ.60 ರಷ್ಟ್ಟು ಫೇಕ್ ಅಕೌಂಟ್‍ಗಳೇ ಇವೆ ನ್ಯೂಇಂಡಿಯನ್ ಎಕ್ಸ್‍ಪ್ರೆಸ್, ಡೈಲಿಯೊ, ಎಸ್.ಬಿ.ಎಸ್ ಮುಂತಾದ ನಿಯತಕಾಲಿಕಗಳು ವರದಿ ಮಾಡಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ಕರ್ತವ್ಯದ ವೇಳೆ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್: ಚಿಕಿತ್ಸೆ ಫಲಿಸದೇ ಸಾವು

ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಕೆಲಸದ ಹೆಸರಿನಲ್ಲಿ ಶಿಕ್ಷಕರ ಮೇಲೆ ಹೇರುತ್ತಿರುವ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಮತ್ತೊಬ್ಬ ಶಿಕ್ಷಕಿ ಬಲಿಯಾಗಿದ್ದಾರೆ. ಬೆಂಗಳೂರಿನ...

ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ: ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ

ದೇಶಾದ್ಯಂತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಈ ನಡುವೆ ವಿದ್ಯಾರ್ಥಿಗಳ ಹೋರಾಟವನ್ನು ಕುಹಕವಾಡಿರುವ ವಿಧಾನ ಪರಿಷತ್ ಬಿಜೆಪಿ...

ಪ್ರತಿಭಟನೆಯನ್ನು ಹತ್ತಿಕ್ಕಲು ಅಕ್ಕಾಡಕ್ಕಿಳಿದಿವೆ ಹಿಂದುತ್ವವಾದಿ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್‌ ಮತ್ತು ಉಗ್ರ ಗೂಂಡಾ ಪಡೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಜೂನ್ 20ರಂದು ಶುರುವಾಗಿದ್ದ ಈ ಆಂದೋಲನ ಇದೀಗ ದೇಶಾದ್ಯಂತ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಸಿಜೆಪಿ ಪಟ್ಟು ಹಿಡಿದಿದ್ದು, ಇಂದು...

ಜಿರಳೆಗಳನ್ನು ಸಾಯಿಸಿ ಎಂದು ವಿವಾದಾತ್ಮಕ ಪೋಸ್ಟ್‌ ಹಾಕಿದ ಪ್ರಜ್ಞಾ ಸಿಂಗ್ ಠಾಕೂರ್

ಮಾಜಿ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ದೇಶದಿಂದ ಜಿರಳೆಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ವ್ಯವಸ್ಥೆ ಮಾಡುವಂತೆ ದೇಶದ ನಾಯಕರಿಗೆ ಮನವಿ ಮಾಡಿದ್ದಾರೆ. X (ಟ್ವಿಟರ್) ನಲ್ಲಿ ಮಾಡಿದ ಪೋಸ್ಟ್‌ನಲ್ಲಿ, 2008 ರ...

ಸೋನಮ್ ವಾಂಗ್ಚುಕ್ ಮತ್ತು ಸರ್ಕಾರದ ಡೀಲ್‌ನಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಅಂಶವೇ ಇಲ್ಲ

ಕೇಂದ್ರದ ಮೋದಿ ಸರ್ಕಾರ ತನ್ನ ಮೂರು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡ ನಂತರ, ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಜುಲೈ 23ರ ಗುರುವಾರ ತಮ್ಮ 26 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ....

“50 ಗ್ರಾಂ ಡ್ರಗ್ಸ್ ಇಟ್ಟು ಕೇಸ್ ಹಾಕ್ತೀನಿ!”: ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಮಾದಕದ್ರವ್ಯ ಪ್ರಕರಣದ ಬೆದರಿಕೆಯೊಡ್ಡಿದ ಮುಂಬೈ ಪೊಲೀಸ್!

ಮುಂಬೈ: ದೇಶಾದ್ಯಂತ ವಿದ್ಯಾರ್ಥಿ ಸಮುದಾಯದ ಆಕ್ರೋಶ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಿರುವ ಯುವಜನರನ್ನು ಹತೋಟಿಗೆ ತರಲು ಪೊಲೀಸರು ಯಾವ ಮಟ್ಟದ ದಮನಕಾರಿ ಮಾರ್ಗಗಳನ್ನು ತುಳಿಯುತ್ತಿದ್ದಾರೆ ಎಂಬುದಕ್ಕೆ ಮುಂಬೈನಲ್ಲಿ ನಡೆದ ಘಟನೆಯೊಂದು...

ಬಿಡದಿ ಟೌನ್‌ಶಿಪ್: 80% ರೈತರ ಒಪ್ಪಿಗೆ ಇದೆ ಎಂಬ ವಾದ ಸಾಬೀತುಪಡಿಸಿ – ಸರ್ಕಾರಕ್ಕೆ ಸಂಯುಕ್ತ ಹೋರಾಟ ಸವಾಲು

ಬಿಡದಿ ಟೌನ್‌ಶಿಪ್ ಯೋಜನೆಗೆ ಭೂಮಿ ನೀಡಲು ಉದ್ದೇಶಿತ ಪ್ರದೇಶದ ಶೇಕಡಾ 80 ರಷ್ಟು ರೈತರು ಒಪ್ಪಿದ್ದಾರೆ ಎಂಬ ಸರ್ಕಾರದ ವಾದಕ್ಕೆ ಯಾವುದೇ ವಾಸ್ತವಿಕ ಆಧಾರವಿಲ್ಲ. ಸರ್ಕಾರಕ್ಕೆ ಧೈರ್ಯವಿದ್ದರೆ ತನ್ನ ಈ ಹೇಳಿಕೆಯನ್ನು ಜನರ...

ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯ: ವಿಚಾರಣೆ ತಿರಸ್ಕರಿಸಿದ ಸುಪ್ರೀಂ; “ವಿಡಿಯೋ ನೋಡಲು ನಮಗೆ ಆಸಕ್ತಿಯೂ ಇಲ್ಲ, ಸಮಯವೂ ಇಲ್ಲ” ಎಂದ ನ್ಯಾಯಮೂರ್ತಿ ಸೂರ್ಯಕಾಂತ್

ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಶಾಂತಿಯುತವಾಗಿ ಹೋರಾಡುತ್ತಿದ್ದ ಯುವ ಸಮೂಹದ ಮೇಲೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯದ ವಿರುದ್ಧ ನ್ಯಾಯದ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೆ ದೇಶದ ಅತ್ಯುನ್ನತ ನ್ಯಾಯಾಲಯದಿಂದ...

ರಾಹುಲ್ ಗಾಂಧಿ ವಿದ್ಯಾರ್ಥಿಗಳನ್ನು ‘ರಾಜಕೀಯ ದಾಳ’ವಾಗಿ ಬಳಸುತ್ತಿದ್ದಾರೆ ಎಂದ ಧರ್ಮೇಂದ್ರ ಪ್ರಧಾನ್ ವಿರುದ್ಧ ವ್ಯಾಪಕ ಆಕ್ರೋಶ

ನವದೆಹಲಿ: ದೇಶಾದ್ಯಂತ ನೀಟ್ (NEET) ಪರೀಕ್ಷೆಯ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶಿಕ್ಷಣ ಇಲಾಖೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ವಿದ್ಯಾರ್ಥಿಗಳು ಮತ್ತು ವಿರೋಧ ಪಕ್ಷಗಳು ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಶಿಕ್ಷಣ ಸಚಿವ ಧರ್ಮೇಂದ್ರ...

ಸಿಜೆಪಿ ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್ ಬಳಕೆ, ವಿದ್ಯುತ್ ಲಾಠಿ ಪ್ರಹಾರ: ಆರೋಪ ನಿರಾಕರಿಸಿದ ಪೊಲೀಸರು

ಸೋಮವಾರ (ಜುಲೈ 20) ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಕರೆ ನೀಡಿದ್ದ ಸಂಸತ್ ಚಲೋ ಮೆರವಣಿ ಸಂದರ್ಭದಲ್ಲಿ ನಡೆದ ಪೊಲೀಸರ ದೌರ್ಜನ್ಯದಲ್ಲಿ ಗಾಯಗೊಂಡ 80 ಪ್ರತಿಭಟನಾಕಾರರಲ್ಲಿ ಕನಿಷ್ಠ ಒಬ್ಬರಿಗೆ ಪೆಲೆಟ್ ಗನ್ ಗಾಯಗಳಾಗಿವೆ...