Homeಮುಖಪುಟ'ಗುಂಪು ಹತ್ಯೆ', 'ಬುಲ್ಡೋಜರ್ ಸಂಸ್ಕೃತಿ': ಪಾಸ್ಮಾಂಡ ಮುಸ್ಲಿಂ ಸಮುದಾಯ ಕಳವಳ

‘ಗುಂಪು ಹತ್ಯೆ’, ‘ಬುಲ್ಡೋಜರ್ ಸಂಸ್ಕೃತಿ’: ಪಾಸ್ಮಾಂಡ ಮುಸ್ಲಿಂ ಸಮುದಾಯ ಕಳವಳ

- Advertisement -
- Advertisement -

ಹಿಂದುಳಿದ ಮುಸ್ಲಿಮರಿಗಾಗಿ ಕಾರ್ಯನಿರ್ವಹಿಸುತ್ತಿರುವ ಅಖಿಲ ಭಾರತ ಪಸ್ಮಾಂಡ ಮುಸ್ಲಿಂ ಮಹಾಜ್ (AIPMM) ಸಂಘಟನೆಯು ಮಂಗಳವಾರ ಬಿಹಾರದ ಜಾತಿ ಸಮೀಕ್ಷೆಯ ಆಧಾರದ ಮೇಲೆ ವರದಿಯನ್ನು ಬಿಡುಗಡೆ ಮಾಡಿದೆ. ಆದರೆ ಕೇಂದ್ರವು ಗುಂಪು ಹತ್ಯೆಯ ವಿರುದ್ಧ ಕಠಿಣ ಕಾನೂನನ್ನು ತರಬೇಕು ಮತ್ತು ಆರೋಪಿಗಳ ವಿರುದ್ಧ “ಬುಲ್ಡೋಜರ್ ಸಂಸ್ಕೃತಿ”ಯನ್ನು ತಡೆಯಬೇಕು ಎಂದು ಒತ್ತಾಯಿಸಿತು. ಈ ಪ್ರಕರಣಗಳಲ್ಲಿ ಬಲಿಪಶುಗಳು ಪಸ್ಮಾಂಡ ಸಮುದಾಯಕ್ಕೆ ಸೇರಿದವರು ಎಂದು ಹೇಳಿಕೊಂಡಿದೆ.

ವರದಿಯು ಪಸ್ಮಾಂಡ ಮುಸ್ಲಿಮರಿಗೆ ಖಾಸಗಿ ವಲಯಗಳಲ್ಲಿ ಮೀಸಲಾತಿಯನ್ನು ಬಯಸುತ್ತದೆ, ಅವರ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳ ಕಳಪೆ ಪರಿಸ್ಥಿತಿಗಳನ್ನು ಪರಿಗಣಿಸಿ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯು ಪಸ್ಮಾಂಡ ಮುಸ್ಲಿಮರನ್ನು ವ್ಯೂಹಾತ್ಮಕ ಕ್ರಮದಲ್ಲಿ ಓಲೈಸುತ್ತಿದೆ, ಆದರೆ ದೊಡ್ಡ ಮುಸ್ಲಿಂ ಸಮುದಾಯವು ಪಕ್ಷದಿಂದ ದೂರ ಉಳಿದಿದೆ. AIPMM ವರದಿಯು ಬಿಜೆಪಿ ಪಕ್ಷ ಮತ್ತು AIMIM ಎರಡನ್ನೂ ಸಮಾನವಾಗಿ ಟೀಕಿಸುತ್ತದೆ. ಆರೆಸ್ಸೆಸ್, ಬಿಜೆಪಿ ಮತ್ತು ಎಐಎಂಐಎಂನ ರಾಜಕೀಯವು ಪರಸ್ಪರ ಒಂದೇ ರೀತಿ ಇದೆ ಎಂದು ನಾವು ಪರಿಗಣಿಸುತ್ತೇವೆ ಎಂದು ವರದಿ ಹೇಳುತ್ತದೆ.

ಬಿಹಾರ ಜಾತಿ ಸಮೀಕ್ಷೆ 2022-2023 ಮತ್ತು ಪಸ್ಮಾಂಡ ಅಜೆಂಡಾ ವರದಿಯಲ್ಲಿ ಗುಂಪು ಹತ್ಯೆ ಮತ್ತು ಸರ್ಕಾರಿ ಬುಲ್ಡೋಜರ್‌ಗಳ ಬಳಕೆ ಸಂತ್ರಸ್ತರಲ್ಲಿ ತೊಂಬತ್ತೈದು ಪ್ರತಿಶತದಷ್ಟು ಜನರು ಪಸ್ಮಾಂಡ ಸಮುದಾಯಕ್ಕೆ ಸೇರಿದವರು. ಇದರ ವಿರುದ್ಧ ಕಠಿಣ ಕಾನೂನು ರೂಪಿಸಬೇಕು ಎಂಬುದು ನಮ್ಮ ಬೇಡಿಕೆ. ಇಂತಹ ಘಟನೆ ನಡೆದಲ್ಲಿ ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಎಸ್ಪಿಯನ್ನೇ ಹೊಣೆ ಮಾಡಬೇಕು. ಇಂತಹ ಘಟನೆಗಳಲ್ಲಿ ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕು ಮತ್ತು ಆ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ವರದಿಯು ಆಗ್ರಹಿಸಿದೆ.

ಬಿಜೆಪಿ ಮತ್ತು ಎಐಎಂಐಎಂನ್ನು ಟೀಕಿಸುತ್ತಾ, ನಮ್ಮ ಪೂರ್ವಜರು ಮೊಹಮ್ಮದ್ ಅಲಿ ಜಿನ್ನಾ ಅವರ ಎರಡು ರಾಜ್ಯಗಳ ಒತ್ತಾಯ ಮತ್ತು ವಿ ಡಿ ಸಾವರ್ಕರ್ ಅವರ ಹಿಂದೂ ರಾಷ್ಟ್ರದ ದೃಷ್ಟಿ ವಿರುದ್ಧ ಪ್ರತಿಭಟಿಸಿದ್ದರು. ಕಳೆದ 25 ವರ್ಷಗಳಿಂದ ಪಾಸ್ಮಂಡ ಮಹಾಜ್ ಅದೇ ಮನೋಭಾವದಿಂದ ಕೆಲಸ ಮಾಡುತ್ತಿದ್ದಾರೆ ಎಂದು ವರದಿ ಹೇಳಿದೆ.

ಬಿಹಾರ ಜಾತಿ ಸಮೀಕ್ಷೆಯನ್ನು ಉಲ್ಲೇಖಿಸಿ, ವರದಿಯು ಹೀಗೆ ಹೇಳುತ್ತದೆ, ಕೇವಲ ಶೇಕಡಾ 0.34ರಷ್ಟು ಪಸ್ಮಾಂಡಾ ಮುಸ್ಲಿಮರು ಐಟಿಐ ಮತ್ತು ಅದಕ್ಕೆ ಸಮಾನವಾದ ಡಿಪ್ಲೋಮಾಗಳನ್ನು ಹೊಂದಿದ್ದಾರೆ ಮತ್ತು ಅವರಲ್ಲಿ ಕೇವಲ 0.13 ರಷ್ಟು ಮಾತ್ರ ಎಂಜಿನಿಯರಿಂಗ್ ಪದವಿಗಳನ್ನು ಹೊಂದಿದ್ದಾರೆ. ಕೇವಲ 2.55 ಪ್ರತಿಶತದಷ್ಟು ಜನರು ಕಲೆ / ವಿಜ್ಞಾನ / ವಾಣಿಜ್ಯ ಪದವೀಧರರಾಗಿದ್ದಾರೆ ಮತ್ತು 0.03 ಶೇಕಡಾ ಪಸ್ಮಾಂಡ ಮುಸ್ಲಿಮರು ಮಾತ್ರ ಚಾರ್ಟರ್ಡ್ ಅಕೌಂಟೆಂಟ್ ಮತ್ತು ಪಿಎಚ್‌ಡಿ ಪದವಿಗಳನ್ನು ಹೊಂದಿದ್ದಾರೆ ಎಂದು ಹೇಳಿದೆ.

ಕಂಪ್ಯೂಟರ್‌ಗಳು, ಲ್ಯಾಪ್‌ಟಾಪ್‌ಗಳು ಅಥವಾ ವಾಹನಗಳಂತಹ ಆಸ್ತಿಯನ್ನು ಹೊಂದಿರುವ ವಿಚಾರದಲ್ಲಿ ಕೂಡ ಪಸ್ಮಾಂಡ ಮುಸ್ಲಿಮರು ತುಂಬಾ ಹಿಂದುಳಿದಿದ್ದಾರೆ. ಸುಮಾರು 99.10 ರಷ್ಟು ಪಾಸ್ಮಾಂಡ ಮುಸ್ಲಿಮರು ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ಗಳನ್ನು ಹೊಂದಿಲ್ಲ ಮತ್ತು 0.62 ಶೇಕಡಾ ಮುಸ್ಲಿಮರು ಮಾತ್ರ ಇಂಟರ್ನೆಟ್ ಬಳಸುತ್ತಾರೆ. ಸುಮಾರು 96.47 ಪಾಸ್ಮಂಡ ಮುಸ್ಲಿಮರು ಯಾವುದೇ ರೀತಿಯ ವಾಹನಗಳನ್ನು ಹೊಂದಿಲ್ಲ. 3.10 ರಷ್ಟು ಮಾತ್ರ ದ್ವಿಚಕ್ರ ವಾಹನಗಳನ್ನು ಹೊಂದಿದ್ದಾರೆ. ಕೇವಲ ಶೇಕಡಾ 0.30 OBC ಮತ್ತು EBC ಮುಸ್ಲಿಮರು ಇತರ ರಾಜ್ಯಗಳಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದರೆ, ಕೇವಲ 1.30 ಶೇಕಡಾ ಮಾತ್ರ ರಾಜ್ಯದ ಹೊರಗೆ ಕೆಲಸ ಮಾಡುತ್ತಿದ್ದಾರೆ. ಸುಮಾರು 30.3 ಶೇಕಡಾ ಪಾಸ್ಮಾಂಡ ಮುಸ್ಲಿಮರು ಮಾಸಿಕ ಆದಾಯ 6,000 ರೂ.ಗಿಂತ ಕಡಿಮೆ ಹೊಂದಿದ್ದಾರೆ.

ಕೇಂದ್ರದ ನೀತಿಗಳ ಬಗ್ಗೆ ಪ್ರಶ್ನಿಸಿದ ಎಐಪಿಎಂಎಂ, ರಾಷ್ಟ್ರಮಟ್ಟದಲ್ಲಿ ಜಾತಿ ಗಣತಿಯನ್ನು ಏಕೆ ಸ್ಥಗಿತಗೊಳಿಸುತ್ತಿದೆ? ಎಸ್‌ಸಿ ಕೋಟಾವನ್ನು ದಲಿತ ಮುಸ್ಲಿಮರು ಮತ್ತು ದಲಿತ ಕ್ರಿಶ್ಚಿಯನ್ನರಿಗೆ ವಿಸ್ತರಿಸಬೇಕು ಮತ್ತು ಮೇವಾಟಿ, ಬಂಗುರ್ಜಾರ್, ಮದರಿ, ಸಪೇರಾ ಮುಂತಾದ ಅನೇಕ ಬುಡಕಟ್ಟುಗಳು ಎಸ್‌ಟಿ ಸ್ಥಾನಮಾನವನ್ನು ನೀಡಬೇಕೆಂದು ಒತ್ತಾಯಿಸಿದೆ.

ಮುಸ್ಲಿಮರಲ್ಲಿ ಗುರುತಿಸಲಾದ 38 ಉಪ-ಗುಂಪುಗಳಲ್ಲಿ 28 ಬಿಹಾರದಲ್ಲಿ ಇಬಿಸಿ ಎಂದು ವರ್ಗೀಕರಿಸಲಾಗಿದೆ, ಇದು ರಾಜ್ಯದ ಜನಸಂಖ್ಯೆಯ 10.57% ರಷ್ಟಿದೆ. ಕೆಲವು ಪ್ರಮುಖ EBC ಗುಂಪುಗಳಲ್ಲಿ ಇದ್ರಿಸಿ, ಇತ್ಫರೋಶ್, ಕಸಬ್, ಕುಲ್ಹಯ್ಯಾ, ಚಿಕ್, ಚೂಡಿಹಾರ್, ಠಾಕುರೈ, ದಫಾಲಿ, ಧುನಿಯಾ, ಪಮಾರಿಯಾ, ಬಕ್ಖೋ, ಮದರಿ, ಮುಕೇರಿ, ಮೆರಿಯಾಸಿನ್, ಹಲಾಲ್ಖೋರ್ ಮತ್ತು ಜುಲಾಹಾ ಸೇರಿವೆ.

AIPMM ಸಂಸ್ಥಾಪಕ ಮತ್ತು ಮಾಜಿ ಸಂಸದ ಅಲಿ ಅನ್ವರ್ ಅನ್ಸಾರಿ ದಿ ಇಂಡಿಯನ್ ಎಕ್ಸ್‌ಪ್ರೆಸ್‌ ಜೊತೆ ಮಾತನಾಡಿದ್ದು, ಬಿಹಾರದ ಜಾತಿ ಸಮೀಕ್ಷೆಯ ವರದಿಯು ಬಿಹಾರದ ಪಾಸ್ಮಾಂಡ ಮುಸ್ಲಿಮರ ಬಡ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಯ ಬಗ್ಗೆ ಕೇವಲ ಇಣುಕುನೋಟವನ್ನು ಒದಗಿಸುತ್ತದೆ. ರಾಷ್ಟ್ರವ್ಯಾಪಿ ಜನಗಣತಿ ನಡೆದರೆ, ಪಾಸ್ಮಾಂಡ ಮುಸ್ಲಿಮರ ಸ್ಥಿತಿಗತಿ ಮತ್ತು ಸರಿಪಡಿಸಲು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ನಾವು ಇನ್ನಷ್ಟು ತಿಳಿದುಕೊಳ್ಳಬಹುದು ಎಂದು ಹೇಳಿದ್ದಾರೆ.

ಇದನ್ನು ಓದಿ: ಪ್ಯಾಲೆಸ್ತೀನ್‌ ನಾಗರಿಕರಿಗೆ ಗಡಿಯನ್ನು ತೆರೆಯಲು ಈಜಿಪ್ಟ್ ನಿರಾಕರಿಸುತ್ತಿರುವುದೇಕೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನ ಬದಲಿಸಿ ಮನುಸ್ಮೃತಿ ತರಲು SIR ಷಡ್ಯಂತ್ರ: ನಟ ಕಿಶೋರ್

ದೇಶದ ಬಹುಕೋಟಿ ಉದ್ಯಮಿ ಗೌತಮ್ ಅದಾನಿಯದ್ದೇ ಇರಲಿ ಅಥವಾ ಒಬ್ಬ ಬಡ ರೈತನದ್ದೇ ಇರಲಿ, ಪ್ರಜಾಪ್ರಭುತ್ವದಲ್ಲಿ ಎಲ್ಲರ ಮತವೂ ಒಂದೇ ಸಮ. ಪ್ರಜೆಗಳನ್ನೆಲ್ಲ ಸಮಾನವಾಗಿ ಕಾಣುವ ಏಕೈಕ ಅಸ್ತ್ರ ಎಂದರೆ ಅದು ಮತದಾನದ...

Nepal: ಭೀಕರ ಪ್ರವಾಹಕ್ಕೆ ಸವಾಲೆಸೆದು ನಿಂತ ‘ಗ್ರೀನ್ ಹೌಸ್’ ಸ್ಟೋರಿ

'ನಮ್ಮ ಬದುಕು ಇಷ್ಟಕ್ಕೇ ಅಂತ್ಯವಾಯಿತು ಎನಿಸುವ ಕ್ಷಣಗಳು ಎದುರಾದಾಗ ಮನಸ್ಸಿನಲ್ಲಿ ಏನು ಓಡಬಹುದು? ಪ್ರವಾಹ ಬಂದಾಗ ನನಗೂ ಅದೇ ಅನಿಸಿತ್ತು' ಇದು ನೇಪಾಳದ ನುವಾಕೋಟ್ ಜಿಲ್ಲೆಯ ತ್ರಿಶೂಲಿ ನದಿಯಲ್ಲಿ ಹರಿದುಬಂದ ಭೀಕರ ಪ್ರವಾಹದಿಂದ...

NEET: ದೇಶಾದ್ಯಂತ ಪ್ರತಿಭಟನಾಕಾರರ ವಿರುದ್ದ ದಾಖಲಾಗಿದ್ದ ಎಲ್ಲಾ FIRಗಳನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಮರುಪರೀಕ್ಷೆ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ಯ (CJP) ಪ್ರತಿಭಟನಾಕಾರರ ವಿರುದ್ಧ ದಾಖಲಾಗಿದ್ದ ಎಲ್ಲಾ FIR ಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಗೊಳಿಸಿದೆ. ಕೇಂದ್ರ ಸರ್ಕಾರವು ಈ...

ಚುನಾವಣಾ ಆಯೋಗ ಚಲೋ: ನಟ ಪ್ರಕಾಶ್ ರಾಜ್ ಸೇರಿದಂತೆ ನೂರಾರು SIR ಸಂತ್ರಸ್ತರು, ಹೋರಾಟಗಾರರನ್ನು ವಶಕ್ಕೆ ಪಡೆದ ಪೊಲೀಸರು

ಕರ್ನಾಟಕ ರಾಜ್ಯದ ಅರ್ಹ ಮತದಾರರ ‘ಮತಹರಣ’ ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಮ್ಮಿಕೊಂಡಿದ್ದ ‘ಚುನಾವಣಾ ಆಯೋಗ ಚಲೋ’ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಹುಭಾಷಾ ನಟ ಪ್ರಕಾಶ್ ರಾಜ್, ಕಿಶೋರ್ ಹಾಗೂ ಪ್ರಮುಖ ನಾಯಕರು ಸೇರಿದಂತೆ...

‘ಚುನಾವಣಾ ಆಯೋಗ ಚಲೋ’: ‘ಮುಚ್ಚಿದ ಬಾಗಿಲಿನ ಮಾತುಕತೆ ಬೇಡ, ಎಲ್ಲವೂ ಸಾರ್ವಜನಿಕರ ಮುಂದೆಯೇ ಇತ್ಯರ್ಥವಾಗಬೇಕು’: ನೂರ್ ಶ್ರೀಧರ್ ಆಗ್ರಹ

ಬೆಂಗಳೂರು: ಕರ್ನಾಟಕದಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ರಾಜ್ಯದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಬೃಹತ್ ಕಳವಳವನ್ನು ಸೃಷ್ಟಿಸಿದೆ. ಕೇಂದ್ರ ಚುನಾವಣಾ ಆಯೋಗವು ಬಿಡುಗಡೆ ಮಾಡಿರುವ ನೂತನ ಕರಡು ಮತದಾರರ...

SIR ಎಂಬುದು ಪ್ರಜಾಪ್ರಭುತ್ವವನ್ನು ಹಾಳುಮಾಡುವ ದೊಡ್ಡ ಸಂಚು ಮತ್ತು ಮೋಸ: ಪ್ರಕಾಶ್ ರಾಜ್

"ನಾನು ಸಣ್ಣವನಿದ್ದಾಗ ಮುಕ್ಕೂಟಿ ಕನ್ನಡಿಗರು ಎನ್ನುತ್ತಿದ್ದರು. ದಶಕಗಳ ನಂತರ ಪಂಚಕೋಟಿ ಕನ್ನಡಿಗರಾಗಿ, ಈಗ ಶತಕೋಟಿ ಆಗಬೇಕಿತ್ತು. ಆದರೆ ಮತದಾರರ ಪಟ್ಟಿ ವಿಶೇಷ ಸಾಂದ್ರ ಪರಿಷ್ಕರಣೆ (SIR) ಹೆಸರಿನಲ್ಲಿ ಮತ್ತೆ ಮುಕ್ಕೂಟಿಗೆ ತಂದು ನಿಲ್ಲಿಸಲಾಗುತ್ತಿದೆ....

‘ಚುನಾವಣಾ ಆಯೋಗ ಚಲೋ’: ಎಸ್ಐಆರ್ ಅನ್ಯಾಯವನ್ನು ಪ್ರಶ್ನಿಸಲು ನಾವು ಚುನಾವಣಾ ಆಯೋಗಕ್ಕೆ ಮುತ್ತಿಗೆ ಹಾಕುತ್ತಿದ್ದೇವೆ: ಯೂಸುಫ್ ಕನ್ನಿ

ಬೆಂಗಳೂರು: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ಅರ್ಹ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ವೇದಿಕೆಯು 2026 ಸೆಪ್ಟಂಬರ್ 01, ಮಂಗಳವಾರ ಹಮ್ಮಿಕೊಂಡಿದ್ದ...

SIR:‘ನಾವು ಕಳ್ಳರಲ್ಲ, ಈ ದೇಶದ ಮೂಲ ನಿವಾಸಿಗಳು’ SIR ಸಂತ್ರಸ್ತರ ಜೊತೆ ಪ್ರಕಾಶ್ ರಾಜ್ ಸಂವಾದ

"ನಾವು ಈ ದೇಶದ ನಾಗರಿಕರು, ಕಳ್ಳರಲ್ಲ. ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡಿ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರಲಾಗುತ್ತಿದೆ. ನಮ್ಮ ಹಕ್ಕನ್ನು ಉಳಿಸಿಕೊಳ್ಳಲು ನಾವು ಹೋರಾಟ ನಡೆಸುತ್ತಿದ್ದೇವೆ," ಎಂದು ಬಹುಭಾಷಾ ನಟ ಹಾಗೂ...

‘ವಿದೇಶದಲ್ಲಿ ಚಿನ್ನ ಖರೀದಿಸಬೇಡಿ, ವಿವಾಹವಾಗಬೇಡಿ’: ಭಾರತೀಯರಿಗೆ ಮೋದಿ ಮನವಿ

ಭಾರತೀಯರು ಅನಗತ್ಯವಾಗಿ ವಿದೇಶಿ ಪ್ರವಾಸ ಕೈಗೊಳ್ಳುವುದನ್ನು, ವಿದೇಶಗಳಲ್ಲಿ ವಿವಾಹವಾಗುವುದನ್ನು ಹಾಗೂ ಅಗತ್ಯವಿಲ್ಲದಿದ್ದರೆ ವಿದೇಶದಿಂದ ಚಿನ್ನ ಖರೀದಿಸುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಸ್ವಾವಲಂಬನೆಗೆ ಉತ್ತೇಜನ ನೀಡುವುದರ...

ಧಾರವಾಡ | ಪ್ರಕಾಶ್ ರಾಜ್ ಭಾಗವಹಿಸಿದ್ದ ಸಮುದಾಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನ : ದೂರು ದಾಖಲು

ಭಾನುವಾರ (ಆ.30) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾ ಭವನದಲ್ಲಿ ಆಯೋಜಿಸಿದ್ದ ಸಮುದಾಯ ಸಂಘಟನೆಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿ ಗಲಾಟೆ ಎಬ್ಬಿಸಿದ ಬಿಜೆಪಿ-ಸಂಘಪರಿವಾರದ ಬೆಂಬಲಿಗರ ವಿರುದ್ಧ ದೂರು ದಾಖಲಿಸಲಾಗಿದೆ. ಸಮುದಾಯ ಸಂಘಟನೆಯ ಧಾರವಾಡದ...