Homeಮುಖಪುಟಪ್ಯಾಲೆಸ್ತೀನ್‌ ನಾಗರಿಕರಿಗೆ ಗಡಿಯನ್ನು ತೆರೆಯಲು ಈಜಿಪ್ಟ್ ನಿರಾಕರಿಸುತ್ತಿರುವುದೇಕೆ?

ಪ್ಯಾಲೆಸ್ತೀನ್‌ ನಾಗರಿಕರಿಗೆ ಗಡಿಯನ್ನು ತೆರೆಯಲು ಈಜಿಪ್ಟ್ ನಿರಾಕರಿಸುತ್ತಿರುವುದೇಕೆ?

- Advertisement -
- Advertisement -

ಇಸ್ರೇಲ್‌-ಪ್ಯಾಲೆಸ್ತೀನ್‌ ಮೇಲೆ ಯುದ್ಧ ಘೋಷಿಸಿದ ಬಳಿಕ ಗಾಝಾ ಪಟ್ಟಿಯಿಂದ ದಕ್ಷಿಣಕ್ಕೆ ನಾಗರಿಕರನ್ನು ಸ್ಥಳಾಂತರಿಸಲು ಬಲವಂತದ ಹಿನ್ನೆಲೆ ಸುಮಾರು 1.5 ಮಿಲಿಯನ್ ಪ್ಯಾಲೆಸ್ತೀನ್‌ ನಾಗರಿಕರು ಪ್ರಸ್ತುತ ದಕ್ಷಿಣ ಗಾಝಾ ನಗರವಾದ ರಫಾದಲ್ಲಿ ನೆಲೆಯೂರಿದ್ದಾರೆ. ಇದೀಗ ರಫಾವನ್ನು ಕೂಡ ಟಾರ್ಗೆಟ್‌ ಮಾಡಿ ಇಸ್ರೇಲ್‌ ಬಾಂಬ್‌ ದಾಳಿ ನಡೆಸುತ್ತಿದ್ದು, ಅಲ್ಲಿ ವಾಸಿಸುತ್ತಿರುವ ನಿರಾಶ್ರಿತರಿಗೆ ಜೀವ ರಕ್ಷಣೆಗೆ ತೆರಳಲು ಇರುವ ಎಲ್ಲಾ ದಾರಿಯು ಬಂದ್ ಆಗಿದೆ.

ಮೂಲತಃ 2,50,000 ಜನಸಂಖ್ಯೆಯನ್ನು ಹೊಂದಿದ್ದ ಗಾಝಾ ಪಟ್ಟಣವು ಈಗ ಗಾಝಾದ ಸಂಪೂರ್ಣ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರಿಗೆ ನೆಲೆಯಾಗಿದೆ. ಯುಎನ್‌ನ ಉನ್ನತ ನೆರವು ಅಧಿಕಾರಿಯು ಅಲ್ಲಿನ ಪರಿಸ್ಥಿತಿ ಹೀನಾಯ ಎಂದು ಕರೆದಿದ್ದು, ಅಲ್ಲಿ ರೋಗ ಹರಡುತ್ತಿದೆ ಮತ್ತು ಕ್ಷಾಮವು ತಲೆದೋರಿದೆ ಎಂದು ಹೇಳಿದ್ದಾರೆ.

ಇಸ್ರೇಲ್ ಗಾಝಾ ಪಟ್ಟಿಯಲ್ಲಿ ಇದುವರೆಗೆ 29,000ಕ್ಕೂ ಅಧಿಕ ಪ್ಯಾಲೆಸ್ತೀನ್‌ ನಾಗರಿಕರನ್ನು ಹತ್ಯೆ ಮಾಡಿದೆ. ರಫಾದ ಮೇಲೆ ಇಸ್ರೇಲ್‌ನ ನಿರೀಕ್ಷಿತ ದಾಳಿಯು ನಾಗರಿಕರನ್ನು ಈಜಿಪ್ಟ್‌ನ ಗಡಿ ಸಿನಾಯ್ ಪೆನಿನ್ಸುಲಾಕ್ಕೆ  ತೆರಳುವಂತೆ ಮಾಡಬಹುದು ಎಂಬ ಆತಂಕಗಳು ಹೆಚ್ಚಿವೆ. ಸುರಕ್ಷಿತ ವಲಯ ಎಂದು ಪರಿಗಣಿಸಲ್ಪಟ್ಟಿದ್ದ ರಫಾಹ್ ಈಗ ಇಸ್ರೇಲ್‌ನ ವೈಮಾನಿಕ ದಾಳಿಗೆ ಗುರಿಯಾಗುತ್ತಿದೆ. ಹಿಂಸಾಚಾರದಿಂದ ಜೀವ ರಕ್ಷಣೆಗೆ ಪಲಾಯನ ಮಾಡಬೇಕೆನ್ನುವವರಿಗೆ ಸುರಕ್ಷಿತ ದಾರಿಯೇ ಇಲ್ಲವಾಗಿದೆ.

ಇಸ್ರೇಲ್‌ನ ಹೊರತಾಗಿ ಗಾಝಾದೊಂದಿಗೆ ಗಡಿಯನ್ನು ಹೊಂದಿರುವ ಏಕೈಕ ದೇಶವಾದ ಈಜಿಪ್ಟ್, ಇಸ್ರೇಲ್‌ನಿಂದ ಸ್ಥಳಾಂತರಿಸಲ್ಪಟ್ಟ ಪ್ಯಾಲೆಸ್ತೀನ್‌ ನಿರಾಶ್ರಿತರನ್ನು ಸ್ವೀಕರಿಸುವ ಬಗ್ಗೆ ಒತ್ತಡವನ್ನು ನಿರಾಕರಿಸಿದೆ. ಗಾಝಾದ ನಿರಾಶ್ರಿತರನ್ನು ಸ್ವೀಕರಿಸಲು ಈಜಿಪ್ಟ್‌ನ್ನು ಒತ್ತಾಯಿಸುವಂತೆ ಇಸ್ರೇಲ್‌ ಅಧಿಕಾರಿಗಳು ಅಂತರಾಷ್ಟ್ರೀಯ ಲಾಬಿ ಮಾಡಲು ಪ್ರಯತ್ನಿಸಿದ್ದಾರೆ ಎಂದು ವರದಿಗಳು ಸೂಚಿಸಿವೆ.

ಆದರೆ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಅವರು ಸಿನಾಯ್‌ಗೆ ಹೆಚ್ಚಿನ ಸಂಖ್ಯೆಯ ಪ್ಯಾಲೆಸ್ತೀನ್‌ ನಾಗರಿಕರ ಪ್ರವೇಶವನ್ನು ನಿರಾಕರಿಸುವಲ್ಲಿ ಅಚಲವಾಗಿದ್ದಾರೆ. ಅವರು ಅದನ್ನು “ಕೆಂಪು ಗೆರೆ” ಎಂದು ಕರೆದಿದ್ದಾರೆ. UNನ ನಿರಾಶ್ರಿತರ ಶಿಬಿರದ ಹೈ ಕಮಿಷನರ್ ಫಿಲಿಪ್ಪೊ ಗ್ರಾಂಡಿ, ಈಜಿಪ್ಟ್‌ಗೆ ನಿರಾಶ್ರಿತ ಗಾಝಾದ ಜನರನ್ನು ಸ್ಥಳಾಂತರಿಸುವುದು ಈಜಿಪ್ಟ್ ಮತ್ತು ಪ್ಯಾಲೆಸ್ತೀನಿಯಾದವರಿಗೆ ವಿಪತ್ತು ಎಂದು ಕರೆದಿದ್ದಾರೆ.

ಈಜಿಪ್ಟ್, ಗಾಝಾದ ಹೊರಗೆ ಪ್ಯಾಲೆಸ್ತೀನ್‌ ಜನರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಲು ಬಯಸುವುದಿಲ್ಲ. ಇಸ್ರೇಲ್‌ನ ಗುಪ್ತಚರ ಸಚಿವಾಲಯದ ಸೋರಿಕೆಯಾದ ದಾಖಲೆಯು, ಗಾಝಾದ 2.3 ಮಿಲಿಯನ್ ಜನಸಂಖ್ಯೆಯನ್ನು ಭೂಪ್ರದೇಶದಿಂದ ಮತ್ತು ಈಜಿಪ್ಟ್‌ನ ಸಿನಾಯ್ ಮರುಭೂಮಿಯ ಟೆಂಟ್ ನಗರಗಳಿಗೆ ಬಲವಂತವಾಗಿ ವರ್ಗಾಯಿಸಲು ಶಿಫಾರಸುಗಳನ್ನು ಒಳಗೊಂಡಿದೆ. ಸರ್ಕಾರದ ಮಂತ್ರಿಗಳಾದ ಬೆಜಲೆಲ್ ಸ್ಮೊಟ್ರಿಚ್ ಮತ್ತು ಇಟಮಾರ್ ಬೆನ್-ಗ್ವಿರ್ ಇಬ್ಬರೂ ಸಹ ಗಾಝಾದಿಂದ ಪ್ಯಾಲೆಸ್ತೀನಿಯನ್ನರನ್ನು ಹೊರಹಾಕುವುದನ್ನು ಬಹಿರಂಗವಾಗಿ ಪ್ರತಿಪಾದಿಸಿದ್ದಾರೆ. ಜನವರಿಯಲ್ಲಿ ಈ ಯೋಜನೆಗೆ ಕರೆ ನೀಡುವ ಇಸ್ರೇಲ್‌ನಲ್ಲಿ ನಡೆದ ಸಮಾವೇಶದಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕ್ಯಾಬಿನೆಟ್‌ನ 11 ಸದಸ್ಯರು ಮತ್ತು 15 ಹೆಚ್ಚುವರಿ ಸಂಸತ್ತಿನ ಸದಸ್ಯರು ಭಾಗವಹಿಸಿದ್ದರು. ನೆತನ್ಯಾಹು ಕಳೆದ ತಿಂಗಳು ಇಸ್ರೇಲ್‌ಗೆ ಶಾಶ್ವತವಾಗಿ ಗಾಝಾವನ್ನು ಆಕ್ರಮಿಸಿಕೊಳ್ಳುವ ಉದ್ದೇಶವಿಲ್ಲ ಎಂದು ಹೇಳಿದ್ದರೂ, ಈ ಬಗೆಗೆನ ಇಸ್ರೇಲ್‌ ಬಯಕೆ ಗೌಪ್ಯವಾಗಿಲ್ಲ.

ಗಾಝಾ ಗಡಿಯಲ್ಲಿ ಈಜಿಪ್ಟ್‌ನ ವಿಶಾಲವಾದ ಕಡಿಮೆ ಜನಸಂಖ್ಯೆ ಹೊಂದಿರುವ ಸಿನೈ ಪ್ರದೇಶವಿದೆ, ಅಲ್ಲಿ ಭಾರೀ ಭದ್ರತಾ ವ್ಯವಸ್ಥೆ ಇದೆ. ಆದರೆ ಈಜಿಪ್ಟ್ ಗಾಝಾ ನಿರಾಶ್ರಿತರಿಗೆ ಗಡಿ ಪ್ರವೇಶಿಸದಂತೆ ಎಚ್ಚರಿಕೆ ನೀಡಿದೆ. ಇದು ಗಾಝಾಕ್ಕೆ ಮಾನವೀಯ ನೆರವು ನೀಡುತ್ತದೆ, ಆದರೆ ಗಾಝಾದಿಂದ ಈಜಿಪ್ಟ್‌ಗೆ ಪ್ಯಾಲೆಸ್ತೀನಿಯರ ಪಲಾಯನಕ್ಕೆ ಅನುಮತಿಸುವುದಿಲ್ಲ ಎಂದು ಹೇಳಿದೆ.

ಈಜಿಪ್ಟ್‌ನ ಮತ್ತೊಂದು ಪ್ರಮುಖ ಕಾಳಜಿ ಅದರ ಭದ್ರತೆಯಾಗಿದೆ. ಪ್ಯಾಲೆಸ್ತೀನಿಯನ್ನರಿಗೆ ಸಿನೈನಲ್ಲಿ ಭದ್ರತೆ ಒದಗಿಸಿದರೆ, ಈಜಿಪ್ಟ್ ಪ್ರದೇಶ ಪ್ರತಿರೋಧ ಕಾರ್ಯಾಚರಣೆಗೆ ಕಾರಣವಾಗಬಹುದು. ಇದು ಈಜಿಪ್ಟ್ ಮತ್ತು ಇಸ್ರೇಲ್‌ ನಡುವೆ ಮಿಲಿಟರಿ ಸಂಘರ್ಷಕ್ಕೆ ಕಾರಣವಾಗಬಹುದು. ನೆತನ್ಯಾಹು ಮುಂಬರುವ ವಾರಗಳಲ್ಲಿ ರಫಾದ ಮೇಲೆ ಆಕ್ರಮಣ ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಅದೇ ಸಮಯದಲ್ಲಿ ಈಜಿಪ್ಟ್ ತನ್ನ ಗಡಿಯನ್ನು ಬಲಪಡಿಸಲು ಮುಂದಾಗಿದೆ.

ಇದನ್ನು ಓದಿ: ಸಿಂಹಗಳ ಜೋಡಿಗೆ ಅಕ್ಬರ್-ಸೀತಾ ನಾಮಕರಣ ವಿವಾದ: ಹಿರಿಯ ಅರಣ್ಯಾಧಿಕಾರಿ ಅಮಾನತು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಿರ್ಗಿಸ್ತಾನ್‌ನಲ್ಲಿ ಹಿಂಸಾಚಾರ: ಮನೆಬಿಟ್ಟು ಹೊರಬರದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

0
ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗುಂಪು ಹಿಂಸಾಚಾರದ ವರದಿಗಳ ಮಧ್ಯೆ ಭಾರತ ಮತ್ತು ಪಾಕಿಸ್ತಾನವು ಶನಿವಾರ ಬಿಷ್ಕೆಕ್‌ನಲ್ಲಿರುವ ವಿದ್ಯಾರ್ಥಿಗಳಿಗೆ ತಾವು ತಂಗಿರುವ ಹಾಸ್ಟೆಲ್‌, ಮನೆಗಳಿಂದ ಹೊರಗೆ ಬರದಂತೆ ಸೂಚಿಸಿದೆ. ಕಿರ್ಗಿಸ್ತಾನ್‌ನಲ್ಲಿರುವ ಭಾರತದ...