Homeಮುಖಪುಟಮಧ್ಯಪ್ರದೇಶ: ಕುಡಿದ ಮತ್ತಿನಲ್ಲಿ ವೃದ್ದ ಪೋಷಕರನ್ನು ಅಮಾನವೀಯವಾಗಿ ಥಳಿಸಿದ ಯೋಧ!

ಮಧ್ಯಪ್ರದೇಶ: ಕುಡಿದ ಮತ್ತಿನಲ್ಲಿ ವೃದ್ದ ಪೋಷಕರನ್ನು ಅಮಾನವೀಯವಾಗಿ ಥಳಿಸಿದ ಯೋಧ!

- Advertisement -
- Advertisement -

ಪ್ರಭು ಸೂರ್ಯವಂಶಿ ಎಂಬ ಯೋಧನೊಬ್ಬ ತನ್ನ ವೃದ್ಧ ತಂದೆ ತಾಯಿಯ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿರುವ ಘಟನೆ ಕಳೆದ ಭಾನುವಾರ ಮಧ್ಯಪ್ರದೇಶದ ಬೆತುಲ್‌ನ ಮುಲ್ತಾಯ್‌ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ತಮ್ಮ ಮಗನ ವರ್ತನೆಯಿಂದ ಪೋಷಕರು ಆಘಾತಕ್ಕೊಳಗಾಗಿದ್ದು, ಆತ ಅಮಾನವೀಯವಾಗಿ ಹಲ್ಲೆ ನಡೆಸಿರುವುದು ಮಾತ್ರವಲ್ಲದೆ, ಮೂತ್ರ ಕುಡಿಯುವಂತೆ ಒತ್ತಾಯಿಸಿದ್ದಾರೆ. ಆರೋಪಿ ಪ್ರಭು ಸೂರ್ಯವಂಶಿ ಕುಡಿದ ಮತ್ತಿನಲ್ಲಿ ಪೋಷಕರನ್ನು ನಿಂದಿಸಿ, ಅಮಾನುಷವಾಗಿ ದೊಣ್ಣೆಯಿಂದ ಹೊಡೆದಿದ್ದಾನೆ.

ವೃದ್ಧ ದಂಪತಿಗಳು ಗಂಭೀರವಾಗಿ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸೇನೆಯಲ್ಲಿ ಕೆಲಸ ಮಾಡುತ್ತಿರುವ ಪ್ರಭು ಸೂರ್ಯವಂಶಿ, ಡಿಸೆಂಬರ್ 10 ರಂದು ರಜೆಯ ಮೇಲೆ ಊರಿಗೆ ಬಂದಿದ್ದರು. ಘಟನೆ ಬಗ್ಗೆ ವಿವರಿಸಿರುವ ಗಾಯಾಳು ತಂದೆ ‘ರಾತ್ರಿ ಸಂಪೂರ್ಣವಾಗಿ ಕುಡಿದು ನಮ್ಮನ್ನು ನಿಂದಿಸಲು ಪ್ರಾರಂಭಿಸಿದ. ನಾವು ಅವನ ಜಗಳವನ್ನು ವಿರೋಧಿಸಿದಾಗ, ಅವನು ನಿಂದಿಸಲು ಪ್ರಾರಂಭಿಸಿದ, ನಮ್ಮಿಬ್ಬರನ್ನೂ ಕೋಲಿನಿಂದ ಅಮಾನವೀಯವಾಗಿ ಥಳಿಸಿದ; ಮೂತ್ರ ಕುಡಿಯುವಂತೆ ನಮ್ಮನ್ನು ಒತ್ತಾಯಿಸಿದ’ ಎಂದು ಹೇಳಿದ್ದಾರೆ.

ಈ ಅಮಾನವೀಯ ಘಟನೆಗೆ ಗ್ರಾಮದ ನೆರೆಯ ನಿವಾಸಿಗಳು ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ ಎಂದು ಯೋಧನ ತಾಯಿ ತಿಳಿಸಿದ್ದಾರೆ. ಆರೋಪಿ ಪ್ರಭು ಸೂರ್ಯವಂಶಿ ವಿರುದ್ಧ ಐಪಿಸಿ ಸೆಕ್ಷನ್ 323, 294, 506 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೋಷಕರು ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ‘ಬಲವಂತವಾಗಿ ಮೂತ್ರ ಕುಡಿಯುವುದಕ್ಕೆ ಒತ್ತಾಯಿಸಿರುವುದು ಸಾಬೀತಾದದೆ ಆರೋಪಿಯ ವಿರುದ್ಧ ಹೆಚ್ಚುವರಿ ಸೆಕ್ಷನ್‌ಗಳನ್ನು ಸಹ ಹಾಕಬಹುದು’ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ; ಜನವರಿ ಮೊದಲ ವಾರದಲ್ಲಿ ‘ಕೈ’ ಹಿಡಿಯಲಿರುವ ವೈಎಸ್ಆರ್ ಪುತ್ರಿ! ದೆಹಲಿ ರಾಜಕಾರಣಕ್ಕೆ ಶರ್ಮಿಳಾ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬ್ರಿಜ್ ಭೂಷಣ್ ಪುತ್ರನಿಗೆ ಬಿಜೆಪಿ ಟಿಕೆಟ್: ಎನ್‌ಡಿಎ ಮೈತ್ರಿ ಪಕ್ಷದ ನಾಯಕ ರಾಜೀನಾಮೆ

0
ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಬಿಜೆಪಿಯ ಬ್ರಿಜ್ ಭೂಷಣ್ ಶರಣ್‌ ಸಿಂಗ್‌ ಅವರ ಪುತ್ರನಿಗೆ ಟಿಕೆಟ್ ನೀಡಿದ ಬೆನ್ನಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿ ಎನ್‌ಡಿಎ ಮೈತ್ರಿ ಪಕ್ಷ ಆರ್‌ಎಲ್‌ಡಿಯ ರಾಷ್ಟ್ರೀಯ ವಕ್ತಾರ ರೋಹಿತ್...