Homeಆರೋಗ್ಯಸಫಲತೆ ಮತ್ತು ಸಂತೋಷಕ್ಕೆ ಕೇವಲ ಜಾಣರಾಗಿದ್ದರೆ, ಒಳ್ಳೆಯ ಐ.ಕ್ಯು. ಇದ್ದರೆ ಸಾಲದು, ಅದಕ್ಕೆ ಒಳ್ಳೆಯ ಇ.ಕ್ಯು....

ಸಫಲತೆ ಮತ್ತು ಸಂತೋಷಕ್ಕೆ ಕೇವಲ ಜಾಣರಾಗಿದ್ದರೆ, ಒಳ್ಳೆಯ ಐ.ಕ್ಯು. ಇದ್ದರೆ ಸಾಲದು, ಅದಕ್ಕೆ ಒಳ್ಳೆಯ ಇ.ಕ್ಯು. ಸಹ ಇರಬೇಕು.

ಒಂದು ಸ್ಟಾಪ್-ವಾಚ್ ಹಿಡಿದು, ಶಾಂತ ಚಿತ್ತರಾಗಿ, ಒಂದೆಡೆ ಕುಳಿತು ಒಂದು ನಿಮಿಷ ನಿಮ್ಮ ಮನಸ್ಸನ್ನು ನಿರಾಳವಾಗಿ ಯೋಚಿಸಲು ಬಿಡಿ, ಆದರೆ ಅದು ಹೇಗೆ ಹೋಗುತ್ತಿದೆ, ಅದರಲ್ಲಿ ಯಾವ ಭಾವನೆ/ಯೋಚನೆ ಬರುತ್ತಿದೆ ಎಂದು ನಿರೀಕ್ಷಿಸಿ.

- Advertisement -
- Advertisement -

ಜೀವನ ಕಲೆಗಳು: ಅಂಕಣ-19

ಭಾವನೆಗಳ ನಿರ್ವಹಣೆ

ನಮ್ಮಲ್ಲಿ ಹಲವರಿಗೆ ತಮ್ಮ ಬುದ್ಧಿ ಕೋಷ್ಟಕ (ಇಂಟೆಲಿಜೆನ್ಸ್ ಕೋಶಂಟ್ – ಐ.ಕ್ಯು.) ಎಷ್ಟೆಂದು ತಿಳಿದಿರಬಹುದು. ಜೊತೆಗೆ, ಅವರು ತಮ್ಮ ಶಾಲಾ/ಕಾಲೇಜು ಪರೀಕ್ಷೆಗಳಲ್ಲಿ ಉತ್ತಮ ಅಂಕವನ್ನೂ ಪಡೆದು, ಒಳ್ಳೆಯ ಕೆಲಸವನ್ನೂ ಗಿಟ್ಟಿಸಿರಬಹುದು. ಆದರೆ ತಮ್ಮ  ಜೀವನದಲ್ಲಿ ಅಷ್ಟೇ ಸಫಲರಾಗಿರುತ್ತಾರೆ ಮತ್ತು ಸಂತೋಷದಿಂದಿರುತ್ತಾರೆ ಎನ್ನುವುದು ಸದಾ ಸರಿಯಲ್ಲ, ಏಕೆಂದರೆ ಸಫಲತೆ ಮತ್ತು ಸಂತೋಷಕ್ಕೆ ಕೇವಲ ಜಾಣರಾಗಿದ್ದರೆ, ಒಳ್ಳೆಯ ಐ.ಕ್ಯು. ಇದ್ದರೆ ಸಾಲದು, ಅದಕ್ಕೆ ಒಳ್ಳೆಯ ಇ.ಕ್ಯು. ಸಹ ಇರಬೇಕು.

ಏನಿದು ಇ.ಕ್ಯು.? ಎಮೋಷನಲ್ ಕೋಶಂಟ್ ಅಥವಾ ಎಮೋಷನಲ್ ಇಂಟೆಲಿಜೆನ್ಸ್ ಅಥವಾ ಭಾವನಾತ್ಮಕ ಬುದ್ಧಿವಂತಿಕೆ ಚೆನ್ನಾಗಿರುವ ವ್ಯಕ್ತಿಗಳು ತಮ್ಮಸ್ವಂತ, ಮತ್ತು ಗುಂಪಿನಲ್ಲಿ ಇತರರ, ಭಾವನೆಗಳನ್ನು ಎಷ್ಟು ಸಮರ್ಪಕವಾಗಿ ಅರಿತು, ನಿರ್ವಹಣೆ ಮಾಡುತ್ತಾರೆ ಅದರ ಮಾಪನವಾಗಿರುತ್ತದೆ. ಇಂತಹ ವ್ಯಕ್ತಿಗಳು ತಾವೂ ಸುಖವಾಗಿದ್ದು ಇತರರನ್ನು ಸಹ ಸಂತೋಷವಾಗಿ ಇರಲು ಬಿಡುತ್ತಾರೆ.

ಹೆಚ್ಚಿನ ಇ.ಕ್ಯು. ಇರುವವರು ಪರಸ್ಪರ ವೈಯುಕ್ತಿಕ ಸಂಬಂಧಗಳನ್ನು ಜೋಡಿಸುವಲ್ಲಿ, ನಿಭಾಯಿಸುವಲ್ಲಿ, ಯಶಸ್ವಿಯಾಗುತ್ತಾರೆ. ತಾವು ಸೇರಿದ ಯಾವುದೇ ಗುಂಪಿಗೆ ಹೊಂದಿಕೊಳ್ಳುತ್ತಾರೆ.

ತಮ್ಮ ಮನಃಸ್ಥಿತಿ ಅರಿತು, ತಮ್ಮ ಆತಂಕ, ದುಗುಡಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಾರೆ. ಹಾಗಾಗಿ, ಮಾನಸಿಕ ಖಿನ್ನತೆ ಮುಂತಾದ ಕಾಯಿಲೆಗಳಿಂದ ದೂರವಿರುತ್ತಾರೆ.

ಮೇಲೆ ಹೇಳಿದ ಐ.ಕ್ಯು. ಮತ್ತು ಇ.ಕ್ಯು., ಎರಡೂ ಬೇರೆ ಬೇರೆ, ಒಂದಕ್ಕೊಂದು ಸಂಬಂಧವಿಲ್ಲ. ಕಡಿಮೆ ಐ.ಕ್ಯು. ಇರುವ ವ್ಯಕ್ತಿಗೆ ಹೆಚ್ಚಿನ ಇ.ಕ್ಯು. ಅಥವಾ ಹೆಚ್ಚಿನ ಐ.ಕ್ಯು. ಇರುವ ವ್ಯಕ್ತಿಗೆ ಕಡಿಮೆ ಇ.ಕ್ಯು. ಇರಬಹುದು. ಎರಡು ಹೆಚ್ಚು ಅಥವಾ ಎರಡೂ ಕಡಿಮೆಯೂ ಇರಬಹುದು. ಅದು ಅವರವರ ಸಮಗ್ರ ವ್ಯಕ್ತಿತ್ವದ ಮೇಲೆ ಅವಲಂಬಿಸಿರುತ್ತದೆ. ಆದರೆ ಒಂದಂತೂ ನಿಜ, ಮಾನವರು ಹೊಸ ಕಲೆಗಳನ್ನು ಕಲಿಯುವ/ಪ್ರಯೋಗಕ್ಕೆ ತರುವ ಮೂಲಕ ತಮ್ಮ ಇ.ಕ್ಯು. ಹೆಚ್ಚಿಸಿಕೊಳ್ಳಬಹುದು.

ಹಿಂದೂ/ಬುದ್ಧ/ಜೈನ ಧರ್ಮದ ಪರಿಕಲ್ಪನೆಯಲ್ಲಿ ಅರಿಷಡ್ವರ್ಗ ಎನಿಸಿಕೊಳ್ಳುವ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೇ ನಿರ್ವಹಿಸಬೇಕಾಗಿರುವ ನಮ್ಮ ಭಾವನಾತಿರೇಕಗಳು ಮತ್ತು ಶತ್ರುಗಳು. ಯಾವ ಕಾಲದಲ್ಲಿ, ಯಾವ ವ್ಯಕ್ತಿಯಲ್ಲಿ, ಯಾವ ಭಾವನೆಗಳು ಕೆರಳಿ, ಯಾರು ಇದರ ದುಷ್ಪರಿಣಾಮ ಎದುರಿಸಬೇಕಾಗುತ್ತದೋ ಹೇಳುವುದು ಕಷ್ಟ. ಕೆಲವು ಮನೋವಿಕಾರಗಳು ವಯೋಧರ್ಮದಿಂದ ಬಂದಿದ್ದರೆ ಕೆಲವು ಸಂದರ್ಭ ಅಥವಾ ಪರಿಸ್ಥಿತಿಯಿಂದಾಗಿ ಕಾಣಿಸಿಕೊಳ್ಳಬಹುದು. ಇವೆಲ್ಲವೂ ಮಾನವ ಸಹಜ ಧರ್ಮವಾದರೂ ಸಹ ಅತಿರೇಕಕ್ಕೆ ಹೋದಾಗ, ಇದರಿಂದ ಬೇರೊಬ್ಬರಿಗೆ ತೊಂದರೆ ಆದಾಗ, ಸಮಾಜದ ಶಾಂತಿ, ಸಾಮರಸ್ಯ ಹಾಳಾಗುತ್ತದೆ. ಹಾಗಾಗಿ ಭಾವನಾತಿರೇಕವನ್ನು ಹದ್ದುಬಸ್ತಿನಲ್ಲಿ ಇಡಬೇಕಾದ ಕೆಲಸ ಎಲ್ಲರಿಗೂ ಸೇರುತ್ತದೆ.

ಖ್ಯಾತ ಲೇಖಕ ಮತ್ತು ವಿಜ್ಞಾನ ವಿಷಯದ ಪತ್ರಕರ್ತ ಡೇನಿಯಲ್ ಗೋಲ್ಮನ್ ಭಾವನಾತ್ಮಕ ಬುದ್ಧಿವಂತಿಕೆಯನ್ನು ಅತ್ಯಾವಶ್ಯಕ ಕಲೆ ಎನ್ನುತ್ತಾರೆ. ವೈಯುಕ್ತಿಕ ಸ್ತರದಲ್ಲಿ “ಸ್ವ-ಅರಿವು”, “ಸ್ವ-ನಿಯಂತ್ರಣ” ಮತ್ತು ಸ್ವ-ಪ್ರೇರಣೆ ಹಾಗೂ ಸಮಾಜದ ಸ್ತರದಲ್ಲಿ “ಅನುಭೂತಿ” ಮತ್ತು “ಇತರ ಸಾಮಾಜಿಕ ಕಲೆ” ಎಂದು ವಿಂಗಡಿಸುತ್ತಾರೆ.

ಸ್ವ-ಅರಿವಿನಡಿಯಲ್ಲಿ ನಮ್ಮನ್ನು ನಾವೇ ಪರೀಕ್ಷಿಸಿಕೊಂಡು, ಯಾವ ಭಾವನೆಗಳು ನಮ್ಮನ್ನು ಅತಿ ಹೆಚ್ಚು ಕಾಡುತ್ತವೆ, ಅದಕ್ಕೆ ಕಾರಣಗಳೇನು, ಅದನ್ನು ಶಾಂತಗೊಳಿಸಲು ನಮ್ಮ ವಿಧಾನಗಳೇನು ಎಂಬುದನ್ನು ಗುರುತು ಹಾಕಿಕೊಳ್ಳುವುದು. ಒಂದು ದಿನಚರಿ ಪುಸ್ತಕ ಇಟ್ಟು ಅದರಲ್ಲಿ ಸನ್ನಿವೇಶಗಳು, ಅದರಿಂದ ಉತ್ಪನ್ನವಾದ ನಮ್ಮ ಭಾವನೆಗಳನ್ನು ಮತ್ತು ಅದು ಹೇಗೆ ಶಾಂತವಾಯಿತು ಎಂಬುದನ್ನು ಬರೆಯುತ್ತಾ ಹೋದಲ್ಲಿ, ನಮ್ಮ ಸಮಸ್ಯೆಗೆ ತಾನೇ ಉತ್ತರ ಸಿಗುತ್ತದೆ. ಸಿಗದಿದ್ದಲ್ಲಿ, ಅದಕ್ಕೆ ಪರಿಣಿತರ/ಹಿರಿಯರ ಸಲಹೆ ಪಡೆಯಬಹುದು. ಈ ಭಾವನೆಗಳನ್ನು ಧನಾತ್ಮಕ ಅಥವಾ ಋಣಾತ್ಮಕ ಎಂದು ವರ್ಗೀಕರಿಸುವ ಅವಶ್ಯಕತೆ ಇಲ್ಲ. ಉದಾ: ಎಲ್ಲರೂ ಕೋಪ ಕೆಟ್ಟದ್ದು ಎನ್ನುತ್ತಾರೆ, ಆದರೆ ಸನ್ನಿವೇಶಕ್ಕೆ ಅನುಗುಣವಾಗಿ ಕೋಪ ಸಹಜವೂ, ಉಪಯುಕ್ತವೂ ಆಗಿರಬಹುದು. ಎಲ್ಲಾ ಭಾವನೆಗಳಿಗೂ ಒಂದು ನಿರ್ದಿಷ್ಟ ಕೆಲಸ ಇರುತ್ತದೆ.

ಸ್ವ-ನಿಯಂತ್ರಣ ನಮ್ಮ ಸಂಸ್ಕೃತಿ, ಲಾಲನೆ-ಪೋಷಣೆಯಿಂದಾಗಿ ಬರುತ್ತದೆ. ಇದು ನಮ್ಮ ನೈತಿಕ ದಿಕ್ಸೂಚಿಯೂ ಹೌದು. ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ಯಾರೂ ಹೇಳದಿದ್ದರೂ, ನಮ್ಮ ಅಂತರಂಗ ನಮಗೆ ನಿರಂತರವಾಗಿ ಸೂಚಿಸುತ್ತಿರುತ್ತದೆ. ಅದರ ಕೂಗನ್ನು ಬಲವಂತವಾಗಿ ಹತ್ತಿಕ್ಕಿ ಮಾಡುವ ಕೆಲಸ ಖಂಡಿತಾ ತಪ್ಪು.

ಸ್ವ-ಪ್ರೇರಣೆ ನಮ್ಮನ್ನು ಗುರಿಯತ್ತ ತಲುಪಿಸುವ ಕೆಲಸ ಮಾಡುತ್ತದೆ. ಗುರಿಯ ಪ್ರತಿ ನಮ್ಮ ಬದ್ಧತೆ, ಮೊದಲ ಹೆಜ್ಜೆ, ಆಶಾವಾದ, ಸ್ವಸ್ಥಿತಿಗೆ ಹಿಂತಿರುಗುವ ತವಕ ಇವೆಲ್ಲವೂ ನಮ್ಮನ್ನು ದಾರಿ ತಪ್ಪದಂತೆ ನೋಡಿಕೊಳ್ಳುತ್ತವೆ.

ಸಾಮಾಜಿಕ ಸ್ತರದಲ್ಲಿ ಅನುಭೂತಿ ನಮಗೆ ಬೇರೆಯವರ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ, ಭಾವನೆಗಳನ್ನು ಹಂಚಿಕೊಳ್ಳುವುದಕ್ಕೆ ಸಹಾಯಕವಾಗುತ್ತದೆ.ನಮಗಿಂತ ಭಿನ್ನವಾದ ವ್ಯಕ್ತಿಗಳು, ಅವರು ದಿವ್ಯಾಂಗರಾಗಿರಬಹುದು, ಬೇರೆ ದೇಶ, ಪ್ರಾಂತ್ಯ, ಭಾಷೆ, ವೇಷ-ಭೂಷ-ಆಹಾರ-ವಿಚಾರದವರಾಗಿರಬಹುದು, ಎಲ್ಲರನ್ನೂ ನಮ್ಮವರಂತೆ ಕಾಣಲು ಸಹಾಯಕವಾಗುತ್ತದೆ. ಸಮಾಜದ ವಿವಿಧತೆಯಲ್ಲಿ ಏಕತೆ, ಐಕ್ಯತೆ ಕಾಣಲು ಸಹಕಾರಿಯಾಗುತ್ತದೆ. ಸಮಾಜ ಸೇವೆಯಲ್ಲಿ ತೊಡಗಲು ಪ್ರೇರೇಪಿಸುತ್ತದೆ.

ಇತರ ಸಾಮಾಜಿಕ ಕಲೆಗಳಲ್ಲಿ, ಆತ್ಮ ವಿಶ್ವಾಸ, ಪ್ರಭಾವ ಬೀರುವುದು, ಸಂವಹನ, ನಾಯಕತ್ವ, ವ್ಯಾಜ್ಯಗಳ ಪರಿಹಾರ, ತಂಡ ಸಾಮರ್ಥ್ಯ, ಸಹೋದ್ಯಮ, ಸಹಕಾರ, ಸಹಬಾಳ್ವೆ ಮುಂತಾದವುಗಳನ್ನು ಕಲಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ನಮ್ಮ ಸುತ್ತಮುತ್ತ, ಭಾವನಾತ್ಮಕ ಬುದ್ಧಿವಂತಿಕೆಯ ಕೊರತೆಯಿಂದಾಗಿ, ಗುಂಪು ಘರ್ಷಣೆ, ಮತ್ತು ಎಲ್ಲಾ ರೀತಿಯ ಸಮಾಜವಿರೋಧಿ ಚಟುವಟಿಕೆಗಳು ಕಾಣಿಸಿಕೊಳ್ಳುತ್ತಿವೆ. ಇತ್ತೀಚೆಗೆ ನಡೆಸಿದ ಸರ್ವೇಕ್ಷಣೆಗಳಿಂದ, ನಾವು ಮಕ್ಕಳಿಗೆ ಚಿಕ್ಕಂದಿನಿಂದ ಭಾವನಾತ್ಮಕ ಬುದ್ಧಿವಂತಿಕೆಯನ್ನು ಕಲಿಸಿದ್ದೇ ಆದಲ್ಲಿ, ಅವರ ಅಸಾಮಾಜಿಕ ನಡತೆಯಲ್ಲಿ ಗಣನೀಯ ಇಳಿತ ಕಂಡುಬಂದು, ಒಳ್ಳೆಯ ನಡತೆಯೂ ಉತ್ತಮಗೊಳ್ಳುವುದರ ಜೊತೆಗೆ ಅವರ ಶೈಕ್ಷಣಿಕ ಪ್ರಗತಿಯೂ ಉತ್ತಮಗೊಂಡಿರುವುದು ಕಂಡುಬಂದಿದೆ.

ಸ್ವಾಮಿ ವಿವೇಕಾನಂದರು ಮನಸ್ಸನ್ನು, ಯೋಚನೆಗಳನ್ನು, ಭಾವನೆಗಳನ್ನು ಲಗಾಮಿಲ್ಲದ ಕುದುರೆಗೆ ಹೋಲಿಸುತ್ತಾರೆ. ಅದು ಹೇಗೆಂದರೆ ಹಾಗೆ ಓಡುತ್ತಿರುತ್ತದೆ. ಅದನ್ನು ನಿಯಂತ್ರಿಸಲು ಅವರು ಸುಲಭ ಉಪಾಯ ಸೂಚಿಸುತ್ತಾರೆ. ಒಂದು ಸ್ಟಾಪ್-ವಾಚ್ ಹಿಡಿದು, ಶಾಂತ ಚಿತ್ತರಾಗಿ, ಒಂದೆಡೆ ಕುಳಿತು ಒಂದು ನಿಮಿಷ ನಿಮ್ಮ ಮನಸ್ಸನ್ನು ನಿರಾಳವಾಗಿ ಯೋಚಿಸಲು ಬಿಡಿ, ಆದರೆ ಅದು ಹೇಗೆ ಹೋಗುತ್ತಿದೆ, ಅದರಲ್ಲಿ ಯಾವ ಭಾವನೆ/ಯೋಚನೆ ಬರುತ್ತಿದೆ ಎಂದು ನಿರೀಕ್ಷಿಸಿ. ಒಂದು ನಿಮಿಷವಾದ ಕೂಡಲೇ ಎಲ್ಲವನ್ನು ನಿಲ್ಲಿಸಿ, ನಿಮ್ಮ ಮನಸ್ಸನ್ನು ಒಂದು ನಿಮಿಷದ ಹಿಂದಕ್ಕೆ ರಿವೈಂಡ್ ಮಾಡಿ. ಯೋಚನೆ ಎಲ್ಲಿಂದ ಪ್ರಾರಂಭವಾಯಿತು, ಎಲ್ಲಿಂದ ಎಲ್ಲಿಗೆ ಹಾರಿತು, ಎಲ್ಲಿಗೆ ಬಂದು ನಿಂತಿತು ಎಂಬುದನ್ನು ಗುರುತು ಹಾಕಿಕೊಳ್ಳಿ. ಒಂದು ನಿಮಿಷದ ಲಾಗ್-ಬುಕ್ ಸಿಕ್ಕ ನಂತರ, ಕಾಲಾವಕಾಶವನ್ನು ಎರಡು, ಮೂರು, ಐದು, ಹತ್ತು ನಿಮಿಷಕ್ಕೆ ಏರಿಸುತ್ತಾ ಹೋಗಿ. ನಿಮ್ಮ ಯೋಚನೆ ಮತ್ತೆ ಮತ್ತೆ ಅದೇ ವಿಷಯದತ್ತ ಓಡುತ್ತಿದ್ದರೆ, ಅಲ್ಲಿದೆ ನಿಮ್ಮ ಸಮಸ್ಯೆ. ಹೀಗೆ ಮಾಡುವುದರಿಂದ ನಿಮ್ಮ ಮನಸ್ಸಿನ ಮೇಲೆ, ಯೋಚನೆಯ ಮೇಲೆ, ಭಾವನೆಯ ಮೇಲೆ ನಿಮಗೆ ನಿಯಂತ್ರಣ ಸಿಗಲು ಸಾಧ್ಯವಾಗುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೊಸ ಕಾರ್ಮಿಕ ಕಾನೂನು ಶ್ರಮಿಕರ ಮೂಲಭೂತ ಹಕ್ಕುಗಳಿಗೆ ಕತ್ತರಿ!

"8 ಗಂಟೆ ಕೆಲಸ, 8 ಗಂಟೆ ಮನರಂಜನೆ, 8 ಗಂಟೆ ವಿಶ್ರಾಂತಿ" ಎಂಬ ತತ್ವವು ಸುಲಭವಾಗಿ ದೊರೆತದ್ದಲ್ಲ, ಇದು ದೀರ್ಘಕಾಲದ ಹೋರಾಟ, ತ್ಯಾಗ ಮತ್ತು ಏಕತೆಯ ಫಲವಾಗಿದೆ. ಕೆಲಸದ ಹೊರೆ ಅತಿಯಾಗಿ ಇದ್ದ...

ಮನರೇಗಾ ಯಶೋಗಾಥೆ: ಭಾಗ-1 ದಲಿತರು-ಮಹಿಳೆಯರಿಗೆ ಆರ್ಥಿಕ ಭದ್ರತೆ; ಗ್ರಾಮ ಸಬಲೀಕರಣಕ್ಕೆ ಮನರೇಗಾ ಕೊಟ್ಟ ಕೊಡುಗೆ ಅಪಾರ

2001-2004 ರವರೆಗಿನ ನಿರಂತರ ಬರ ಕರ್ನಾಟಕದ ಬಹುತೇಕ ಹಳ್ಳಿಗಳನ್ನು ಕಂಗಾಲಾಗಿಸಿದ್ದಂತೂ ನಿಜ. ಎಲ್ಲ ಕೆರೆಗಳು ಬತ್ತಿಹೋಗಿದ್ದರಿಂದ ದನಕರುಗಳಿಗೆ ನೀರು ಕುಡಿಸಲೂ ಜನ ಅಲೆದಾಡುತ್ತಿದ್ದರು. ಜನರಿಗೆ ಕುಡಿಯುವ ನೀರು ಪೂರೈಕೆ ಸಹ ಆ ಸಂದರ್ಭದಲ್ಲಿ...

ಮಣಿಪುರ: ಬುಡಕಟ್ಟು ಚರ್ಚ್ ನಾಯಕರ ಮೇಲೆ ಉಗ್ರ ದಾಳಿ:  ಹಲವೆಡೆ ಮೇಣದ ಬತ್ತಿಯ ಜೊತೆಗೆ ಶೋಕ ವ್ಯಕ್ತ ಪಡಿಸಿದ ಕುಕಿ ಸಮುದಾಯ 

ಇಂಫಾಲ್: ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೂವರು ಪ್ರಮುಖ ಕುಕಿ ಚರ್ಚ್ ನಾಯಕರನ್ನು ಹೊಂಚು ಹಾಕಿ ದಾಳಿ ನಡೆಸಿ ಕೊಲ್ಲಲಾಗಿದೆ. ಈ ಘಟನೆಯು ರಾಜ್ಯದಲ್ಲಿ ಜನಾಂಗೀಯ ಉದ್ವಿಗ್ನತೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.  ಮೇ 13ರಂದು ಬೆಳಿಗ್ಗೆ ಚುರಾಚಂದ್‌ಪುರನಲ್ಲಿ...

ಗುಜರಾತ್| ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡಿದ ದಲಿತ ವರನ ಮೇಲೆ ಹಲ್ಲೆ

ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಮಡಿ ಗ್ರಾಮದಲ್ಲಿ ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡುತ್ತಿದ್ದ ದಲಿತ ವರನ ಮೇಲೆ ಮೇಲ್ಜಾತಿಯ ಪುರುಷರ ಗುಂಪೊಂದು ಜಾತಿ ನಿಂದನೆ ಮಾಡಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮೇ 10 ರಂದು...

ಆತಂಕಕಾರಿಯಾದ ಆನೆ ದಾಳಿ

ಆನೆ ದಾಳಿ ಹಿಂದೆಂದಿಗಿಂತಲೂ ದುಪ್ಪಟ್ಟಾಗಿದೆ. ಅರಣ್ಯಮಂತ್ರಿ ಈಶ್ವರ್ ಖಂಡ್ರೆಯವರ ಪ್ರಕಾರ ಆನೆಗಳ ಸಂಖ್ಯೆ ದುಪ್ಪಟ್ಟಾಗಿದೆ. ಕಾಡಿನ ಪ್ರಮಾಣ ಅಷ್ಟೆ ಇದೆ. ಅಂದರೆ ಕಾಡಿನ ಪ್ರಮಾಣ ಹೆಚ್ಚು ಮಾಡಬೇಕೆಂದರೆ ಮನುಷ್ಯರ ಆವಾಸ ಇಲ್ಲದೆ ಆನೆಗಳಿಗಾಗಿ...

ವೈದ್ಯಕೀಯ ಸೀಟುಗಳ ಹಂಚಿಕೆ ಕೇಂದ್ರೀಕರಣಕ್ಕೆ ದಕ್ಷಿಣದ ವಿರೋಧ; ನೀಟ್ ಪರೀಕ್ಷೆಯನ್ನೇ ರದ್ದುಗೊಳಿಸಲು ಇದು ಸಕಾಲ

ರಾಜ್ಯಪಟ್ಟಿಯಲ್ಲಿದ್ದ ಶಿಕ್ಷಣದ ಹಕ್ಕನ್ನು ನೀಟ್‌ ಹೆಸರಿನಲ್ಲಿ ಕೇಂದ್ರದ ಜಂಟಿ ಪಟ್ಟಿಗೆ ಸೇರಿಸುವ ಒಕ್ಕೂಟ ಸರ್ಕಾರದ ನಿರ್ಧಾರದಿಂದ ದಕ್ಷಿಣದ ರಾಜ್ಯಗಳು ಭಾರಿ ನಷ್ಟ ಅನುಭವಿಸುತ್ತಿವೆ. ಜೊತೆಗೆ, ನೀಟ್ ಪಾಸ್‌ ಮಾಡುವ ಒತ್ತಡ ತಾಳಲಾರದೆ ದೇಶದಾದ್ಯಂತ...

‘ಮತ’ ವ್ಯರ್ಥ ಮಾಡದ ಮತದಾರ: 2026ರಲ್ಲಿ ಕುಸಿಯಿತು ‘ನೋಟಾ’ ಅಬ್ಬರ

2026ರ ವಿಧಾನಸಭಾ ಚುನಾವಣೆಯಲ್ಲಿ ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಾದ್ಯಂತ ಸುಮಾರು 10.9 ಲಕ್ಷ ಮತಗಳು 'ನೋಟಾ' (ಯಾರಿಗೂ ಮತವಿಲ್ಲ) ಪಾಲಾಗಿವೆ. ಆದರೆ, 2016 ಮತ್ತು 2021ರ ಚುನಾವಣೆಗಳಿಗೆ ಹೋಲಿಸಿದರೆ...

ಕೇರಳದ 13ನೇ ಮುಖ್ಯಮಂತ್ರಿ ವಿ.ಡಿ. ಸತೀಶನ್: ವಿದ್ಯಾರ್ಥಿ ನಾಯಕನಿಂದ ಸಿಎಂ ಸ್ಥಾನದವರೆಗೆ ಸತೀಶನ್ ಪಯಣ

ತಿರುವನಂತಪುರಂ: ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಆ ಮೂಲಕ ಹಲವು ದಿನಗಳಿಂದ ಈ ಬಗ್ಗೆ ನಡೆಯುತ್ತಿದ್ದ ಕುತೂಹಲ ಮತ್ತು ಚರ್ಚೆಗಳಿಗೆ ತೆರೆ ಬಿದ್ದಿದೆ.  ಅಖಿಲ ಭಾರತ...

ದಲಿತರ ನ್ಯಾಯಕ್ಕೆ ಹೊಸ ಅಡ್ಡಿಯಾಗಲಿದೆಯೇ ‘ಸಾರ್ವಜನಿಕ ವೀಕ್ಷಣೆ’ ನಿಯಮ? ಪರಿಶಿಷ್ಟರನ್ನು ಆತಂಕಕ್ಕೆ ತಳ್ಳಿದ ಸುಪ್ರೀಂ ತೀರ್ಪು

ಸಾರ್ವಜನಿಕರು ನೋಡದ ಜಾಗದಲ್ಲಿ, ಅಂದರೆ ಯಾರೂ ನೋಡದ ಜಾಗದಲ್ಲಿ ಜಾತಿ ನಿಂದನೆ ಅಥವಾ ಅವಮಾನ ನಡೆದರೆ, ಅದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ 1989ರ ಅಡಿಯಲ್ಲಿ ಅಪರಾಧ...

ಪಶ್ಚಿಮ ಬಂಗಾಳ: “ಇದು ಬುಲ್ಡೋಜರ್ ರಾಜ್ಯವಲ್ಲ”: ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಗುರುವಾರ ವಕೀಲರ ನಿಲುವಂಗಿಯನ್ನು ಧರಿಸಿ ಕಲ್ಕತ್ತಾ ಹೈಕೋರ್ಟ್‌ಗೆ ಬಂದ ಅವರು ವಿಧಾನಸಭಾ...