Homeಆರೋಗ್ಯಸಫಲತೆ ಮತ್ತು ಸಂತೋಷಕ್ಕೆ ಕೇವಲ ಜಾಣರಾಗಿದ್ದರೆ, ಒಳ್ಳೆಯ ಐ.ಕ್ಯು. ಇದ್ದರೆ ಸಾಲದು, ಅದಕ್ಕೆ ಒಳ್ಳೆಯ ಇ.ಕ್ಯು....

ಸಫಲತೆ ಮತ್ತು ಸಂತೋಷಕ್ಕೆ ಕೇವಲ ಜಾಣರಾಗಿದ್ದರೆ, ಒಳ್ಳೆಯ ಐ.ಕ್ಯು. ಇದ್ದರೆ ಸಾಲದು, ಅದಕ್ಕೆ ಒಳ್ಳೆಯ ಇ.ಕ್ಯು. ಸಹ ಇರಬೇಕು.

ಒಂದು ಸ್ಟಾಪ್-ವಾಚ್ ಹಿಡಿದು, ಶಾಂತ ಚಿತ್ತರಾಗಿ, ಒಂದೆಡೆ ಕುಳಿತು ಒಂದು ನಿಮಿಷ ನಿಮ್ಮ ಮನಸ್ಸನ್ನು ನಿರಾಳವಾಗಿ ಯೋಚಿಸಲು ಬಿಡಿ, ಆದರೆ ಅದು ಹೇಗೆ ಹೋಗುತ್ತಿದೆ, ಅದರಲ್ಲಿ ಯಾವ ಭಾವನೆ/ಯೋಚನೆ ಬರುತ್ತಿದೆ ಎಂದು ನಿರೀಕ್ಷಿಸಿ.

- Advertisement -
- Advertisement -

ಜೀವನ ಕಲೆಗಳು: ಅಂಕಣ-19

ಭಾವನೆಗಳ ನಿರ್ವಹಣೆ

ನಮ್ಮಲ್ಲಿ ಹಲವರಿಗೆ ತಮ್ಮ ಬುದ್ಧಿ ಕೋಷ್ಟಕ (ಇಂಟೆಲಿಜೆನ್ಸ್ ಕೋಶಂಟ್ – ಐ.ಕ್ಯು.) ಎಷ್ಟೆಂದು ತಿಳಿದಿರಬಹುದು. ಜೊತೆಗೆ, ಅವರು ತಮ್ಮ ಶಾಲಾ/ಕಾಲೇಜು ಪರೀಕ್ಷೆಗಳಲ್ಲಿ ಉತ್ತಮ ಅಂಕವನ್ನೂ ಪಡೆದು, ಒಳ್ಳೆಯ ಕೆಲಸವನ್ನೂ ಗಿಟ್ಟಿಸಿರಬಹುದು. ಆದರೆ ತಮ್ಮ  ಜೀವನದಲ್ಲಿ ಅಷ್ಟೇ ಸಫಲರಾಗಿರುತ್ತಾರೆ ಮತ್ತು ಸಂತೋಷದಿಂದಿರುತ್ತಾರೆ ಎನ್ನುವುದು ಸದಾ ಸರಿಯಲ್ಲ, ಏಕೆಂದರೆ ಸಫಲತೆ ಮತ್ತು ಸಂತೋಷಕ್ಕೆ ಕೇವಲ ಜಾಣರಾಗಿದ್ದರೆ, ಒಳ್ಳೆಯ ಐ.ಕ್ಯು. ಇದ್ದರೆ ಸಾಲದು, ಅದಕ್ಕೆ ಒಳ್ಳೆಯ ಇ.ಕ್ಯು. ಸಹ ಇರಬೇಕು.

ಏನಿದು ಇ.ಕ್ಯು.? ಎಮೋಷನಲ್ ಕೋಶಂಟ್ ಅಥವಾ ಎಮೋಷನಲ್ ಇಂಟೆಲಿಜೆನ್ಸ್ ಅಥವಾ ಭಾವನಾತ್ಮಕ ಬುದ್ಧಿವಂತಿಕೆ ಚೆನ್ನಾಗಿರುವ ವ್ಯಕ್ತಿಗಳು ತಮ್ಮಸ್ವಂತ, ಮತ್ತು ಗುಂಪಿನಲ್ಲಿ ಇತರರ, ಭಾವನೆಗಳನ್ನು ಎಷ್ಟು ಸಮರ್ಪಕವಾಗಿ ಅರಿತು, ನಿರ್ವಹಣೆ ಮಾಡುತ್ತಾರೆ ಅದರ ಮಾಪನವಾಗಿರುತ್ತದೆ. ಇಂತಹ ವ್ಯಕ್ತಿಗಳು ತಾವೂ ಸುಖವಾಗಿದ್ದು ಇತರರನ್ನು ಸಹ ಸಂತೋಷವಾಗಿ ಇರಲು ಬಿಡುತ್ತಾರೆ.

ಹೆಚ್ಚಿನ ಇ.ಕ್ಯು. ಇರುವವರು ಪರಸ್ಪರ ವೈಯುಕ್ತಿಕ ಸಂಬಂಧಗಳನ್ನು ಜೋಡಿಸುವಲ್ಲಿ, ನಿಭಾಯಿಸುವಲ್ಲಿ, ಯಶಸ್ವಿಯಾಗುತ್ತಾರೆ. ತಾವು ಸೇರಿದ ಯಾವುದೇ ಗುಂಪಿಗೆ ಹೊಂದಿಕೊಳ್ಳುತ್ತಾರೆ.

ತಮ್ಮ ಮನಃಸ್ಥಿತಿ ಅರಿತು, ತಮ್ಮ ಆತಂಕ, ದುಗುಡಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಾರೆ. ಹಾಗಾಗಿ, ಮಾನಸಿಕ ಖಿನ್ನತೆ ಮುಂತಾದ ಕಾಯಿಲೆಗಳಿಂದ ದೂರವಿರುತ್ತಾರೆ.

ಮೇಲೆ ಹೇಳಿದ ಐ.ಕ್ಯು. ಮತ್ತು ಇ.ಕ್ಯು., ಎರಡೂ ಬೇರೆ ಬೇರೆ, ಒಂದಕ್ಕೊಂದು ಸಂಬಂಧವಿಲ್ಲ. ಕಡಿಮೆ ಐ.ಕ್ಯು. ಇರುವ ವ್ಯಕ್ತಿಗೆ ಹೆಚ್ಚಿನ ಇ.ಕ್ಯು. ಅಥವಾ ಹೆಚ್ಚಿನ ಐ.ಕ್ಯು. ಇರುವ ವ್ಯಕ್ತಿಗೆ ಕಡಿಮೆ ಇ.ಕ್ಯು. ಇರಬಹುದು. ಎರಡು ಹೆಚ್ಚು ಅಥವಾ ಎರಡೂ ಕಡಿಮೆಯೂ ಇರಬಹುದು. ಅದು ಅವರವರ ಸಮಗ್ರ ವ್ಯಕ್ತಿತ್ವದ ಮೇಲೆ ಅವಲಂಬಿಸಿರುತ್ತದೆ. ಆದರೆ ಒಂದಂತೂ ನಿಜ, ಮಾನವರು ಹೊಸ ಕಲೆಗಳನ್ನು ಕಲಿಯುವ/ಪ್ರಯೋಗಕ್ಕೆ ತರುವ ಮೂಲಕ ತಮ್ಮ ಇ.ಕ್ಯು. ಹೆಚ್ಚಿಸಿಕೊಳ್ಳಬಹುದು.

ಹಿಂದೂ/ಬುದ್ಧ/ಜೈನ ಧರ್ಮದ ಪರಿಕಲ್ಪನೆಯಲ್ಲಿ ಅರಿಷಡ್ವರ್ಗ ಎನಿಸಿಕೊಳ್ಳುವ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೇ ನಿರ್ವಹಿಸಬೇಕಾಗಿರುವ ನಮ್ಮ ಭಾವನಾತಿರೇಕಗಳು ಮತ್ತು ಶತ್ರುಗಳು. ಯಾವ ಕಾಲದಲ್ಲಿ, ಯಾವ ವ್ಯಕ್ತಿಯಲ್ಲಿ, ಯಾವ ಭಾವನೆಗಳು ಕೆರಳಿ, ಯಾರು ಇದರ ದುಷ್ಪರಿಣಾಮ ಎದುರಿಸಬೇಕಾಗುತ್ತದೋ ಹೇಳುವುದು ಕಷ್ಟ. ಕೆಲವು ಮನೋವಿಕಾರಗಳು ವಯೋಧರ್ಮದಿಂದ ಬಂದಿದ್ದರೆ ಕೆಲವು ಸಂದರ್ಭ ಅಥವಾ ಪರಿಸ್ಥಿತಿಯಿಂದಾಗಿ ಕಾಣಿಸಿಕೊಳ್ಳಬಹುದು. ಇವೆಲ್ಲವೂ ಮಾನವ ಸಹಜ ಧರ್ಮವಾದರೂ ಸಹ ಅತಿರೇಕಕ್ಕೆ ಹೋದಾಗ, ಇದರಿಂದ ಬೇರೊಬ್ಬರಿಗೆ ತೊಂದರೆ ಆದಾಗ, ಸಮಾಜದ ಶಾಂತಿ, ಸಾಮರಸ್ಯ ಹಾಳಾಗುತ್ತದೆ. ಹಾಗಾಗಿ ಭಾವನಾತಿರೇಕವನ್ನು ಹದ್ದುಬಸ್ತಿನಲ್ಲಿ ಇಡಬೇಕಾದ ಕೆಲಸ ಎಲ್ಲರಿಗೂ ಸೇರುತ್ತದೆ.

ಖ್ಯಾತ ಲೇಖಕ ಮತ್ತು ವಿಜ್ಞಾನ ವಿಷಯದ ಪತ್ರಕರ್ತ ಡೇನಿಯಲ್ ಗೋಲ್ಮನ್ ಭಾವನಾತ್ಮಕ ಬುದ್ಧಿವಂತಿಕೆಯನ್ನು ಅತ್ಯಾವಶ್ಯಕ ಕಲೆ ಎನ್ನುತ್ತಾರೆ. ವೈಯುಕ್ತಿಕ ಸ್ತರದಲ್ಲಿ “ಸ್ವ-ಅರಿವು”, “ಸ್ವ-ನಿಯಂತ್ರಣ” ಮತ್ತು ಸ್ವ-ಪ್ರೇರಣೆ ಹಾಗೂ ಸಮಾಜದ ಸ್ತರದಲ್ಲಿ “ಅನುಭೂತಿ” ಮತ್ತು “ಇತರ ಸಾಮಾಜಿಕ ಕಲೆ” ಎಂದು ವಿಂಗಡಿಸುತ್ತಾರೆ.

ಸ್ವ-ಅರಿವಿನಡಿಯಲ್ಲಿ ನಮ್ಮನ್ನು ನಾವೇ ಪರೀಕ್ಷಿಸಿಕೊಂಡು, ಯಾವ ಭಾವನೆಗಳು ನಮ್ಮನ್ನು ಅತಿ ಹೆಚ್ಚು ಕಾಡುತ್ತವೆ, ಅದಕ್ಕೆ ಕಾರಣಗಳೇನು, ಅದನ್ನು ಶಾಂತಗೊಳಿಸಲು ನಮ್ಮ ವಿಧಾನಗಳೇನು ಎಂಬುದನ್ನು ಗುರುತು ಹಾಕಿಕೊಳ್ಳುವುದು. ಒಂದು ದಿನಚರಿ ಪುಸ್ತಕ ಇಟ್ಟು ಅದರಲ್ಲಿ ಸನ್ನಿವೇಶಗಳು, ಅದರಿಂದ ಉತ್ಪನ್ನವಾದ ನಮ್ಮ ಭಾವನೆಗಳನ್ನು ಮತ್ತು ಅದು ಹೇಗೆ ಶಾಂತವಾಯಿತು ಎಂಬುದನ್ನು ಬರೆಯುತ್ತಾ ಹೋದಲ್ಲಿ, ನಮ್ಮ ಸಮಸ್ಯೆಗೆ ತಾನೇ ಉತ್ತರ ಸಿಗುತ್ತದೆ. ಸಿಗದಿದ್ದಲ್ಲಿ, ಅದಕ್ಕೆ ಪರಿಣಿತರ/ಹಿರಿಯರ ಸಲಹೆ ಪಡೆಯಬಹುದು. ಈ ಭಾವನೆಗಳನ್ನು ಧನಾತ್ಮಕ ಅಥವಾ ಋಣಾತ್ಮಕ ಎಂದು ವರ್ಗೀಕರಿಸುವ ಅವಶ್ಯಕತೆ ಇಲ್ಲ. ಉದಾ: ಎಲ್ಲರೂ ಕೋಪ ಕೆಟ್ಟದ್ದು ಎನ್ನುತ್ತಾರೆ, ಆದರೆ ಸನ್ನಿವೇಶಕ್ಕೆ ಅನುಗುಣವಾಗಿ ಕೋಪ ಸಹಜವೂ, ಉಪಯುಕ್ತವೂ ಆಗಿರಬಹುದು. ಎಲ್ಲಾ ಭಾವನೆಗಳಿಗೂ ಒಂದು ನಿರ್ದಿಷ್ಟ ಕೆಲಸ ಇರುತ್ತದೆ.

ಸ್ವ-ನಿಯಂತ್ರಣ ನಮ್ಮ ಸಂಸ್ಕೃತಿ, ಲಾಲನೆ-ಪೋಷಣೆಯಿಂದಾಗಿ ಬರುತ್ತದೆ. ಇದು ನಮ್ಮ ನೈತಿಕ ದಿಕ್ಸೂಚಿಯೂ ಹೌದು. ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ಯಾರೂ ಹೇಳದಿದ್ದರೂ, ನಮ್ಮ ಅಂತರಂಗ ನಮಗೆ ನಿರಂತರವಾಗಿ ಸೂಚಿಸುತ್ತಿರುತ್ತದೆ. ಅದರ ಕೂಗನ್ನು ಬಲವಂತವಾಗಿ ಹತ್ತಿಕ್ಕಿ ಮಾಡುವ ಕೆಲಸ ಖಂಡಿತಾ ತಪ್ಪು.

ಸ್ವ-ಪ್ರೇರಣೆ ನಮ್ಮನ್ನು ಗುರಿಯತ್ತ ತಲುಪಿಸುವ ಕೆಲಸ ಮಾಡುತ್ತದೆ. ಗುರಿಯ ಪ್ರತಿ ನಮ್ಮ ಬದ್ಧತೆ, ಮೊದಲ ಹೆಜ್ಜೆ, ಆಶಾವಾದ, ಸ್ವಸ್ಥಿತಿಗೆ ಹಿಂತಿರುಗುವ ತವಕ ಇವೆಲ್ಲವೂ ನಮ್ಮನ್ನು ದಾರಿ ತಪ್ಪದಂತೆ ನೋಡಿಕೊಳ್ಳುತ್ತವೆ.

ಸಾಮಾಜಿಕ ಸ್ತರದಲ್ಲಿ ಅನುಭೂತಿ ನಮಗೆ ಬೇರೆಯವರ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ, ಭಾವನೆಗಳನ್ನು ಹಂಚಿಕೊಳ್ಳುವುದಕ್ಕೆ ಸಹಾಯಕವಾಗುತ್ತದೆ.ನಮಗಿಂತ ಭಿನ್ನವಾದ ವ್ಯಕ್ತಿಗಳು, ಅವರು ದಿವ್ಯಾಂಗರಾಗಿರಬಹುದು, ಬೇರೆ ದೇಶ, ಪ್ರಾಂತ್ಯ, ಭಾಷೆ, ವೇಷ-ಭೂಷ-ಆಹಾರ-ವಿಚಾರದವರಾಗಿರಬಹುದು, ಎಲ್ಲರನ್ನೂ ನಮ್ಮವರಂತೆ ಕಾಣಲು ಸಹಾಯಕವಾಗುತ್ತದೆ. ಸಮಾಜದ ವಿವಿಧತೆಯಲ್ಲಿ ಏಕತೆ, ಐಕ್ಯತೆ ಕಾಣಲು ಸಹಕಾರಿಯಾಗುತ್ತದೆ. ಸಮಾಜ ಸೇವೆಯಲ್ಲಿ ತೊಡಗಲು ಪ್ರೇರೇಪಿಸುತ್ತದೆ.

ಇತರ ಸಾಮಾಜಿಕ ಕಲೆಗಳಲ್ಲಿ, ಆತ್ಮ ವಿಶ್ವಾಸ, ಪ್ರಭಾವ ಬೀರುವುದು, ಸಂವಹನ, ನಾಯಕತ್ವ, ವ್ಯಾಜ್ಯಗಳ ಪರಿಹಾರ, ತಂಡ ಸಾಮರ್ಥ್ಯ, ಸಹೋದ್ಯಮ, ಸಹಕಾರ, ಸಹಬಾಳ್ವೆ ಮುಂತಾದವುಗಳನ್ನು ಕಲಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ನಮ್ಮ ಸುತ್ತಮುತ್ತ, ಭಾವನಾತ್ಮಕ ಬುದ್ಧಿವಂತಿಕೆಯ ಕೊರತೆಯಿಂದಾಗಿ, ಗುಂಪು ಘರ್ಷಣೆ, ಮತ್ತು ಎಲ್ಲಾ ರೀತಿಯ ಸಮಾಜವಿರೋಧಿ ಚಟುವಟಿಕೆಗಳು ಕಾಣಿಸಿಕೊಳ್ಳುತ್ತಿವೆ. ಇತ್ತೀಚೆಗೆ ನಡೆಸಿದ ಸರ್ವೇಕ್ಷಣೆಗಳಿಂದ, ನಾವು ಮಕ್ಕಳಿಗೆ ಚಿಕ್ಕಂದಿನಿಂದ ಭಾವನಾತ್ಮಕ ಬುದ್ಧಿವಂತಿಕೆಯನ್ನು ಕಲಿಸಿದ್ದೇ ಆದಲ್ಲಿ, ಅವರ ಅಸಾಮಾಜಿಕ ನಡತೆಯಲ್ಲಿ ಗಣನೀಯ ಇಳಿತ ಕಂಡುಬಂದು, ಒಳ್ಳೆಯ ನಡತೆಯೂ ಉತ್ತಮಗೊಳ್ಳುವುದರ ಜೊತೆಗೆ ಅವರ ಶೈಕ್ಷಣಿಕ ಪ್ರಗತಿಯೂ ಉತ್ತಮಗೊಂಡಿರುವುದು ಕಂಡುಬಂದಿದೆ.

ಸ್ವಾಮಿ ವಿವೇಕಾನಂದರು ಮನಸ್ಸನ್ನು, ಯೋಚನೆಗಳನ್ನು, ಭಾವನೆಗಳನ್ನು ಲಗಾಮಿಲ್ಲದ ಕುದುರೆಗೆ ಹೋಲಿಸುತ್ತಾರೆ. ಅದು ಹೇಗೆಂದರೆ ಹಾಗೆ ಓಡುತ್ತಿರುತ್ತದೆ. ಅದನ್ನು ನಿಯಂತ್ರಿಸಲು ಅವರು ಸುಲಭ ಉಪಾಯ ಸೂಚಿಸುತ್ತಾರೆ. ಒಂದು ಸ್ಟಾಪ್-ವಾಚ್ ಹಿಡಿದು, ಶಾಂತ ಚಿತ್ತರಾಗಿ, ಒಂದೆಡೆ ಕುಳಿತು ಒಂದು ನಿಮಿಷ ನಿಮ್ಮ ಮನಸ್ಸನ್ನು ನಿರಾಳವಾಗಿ ಯೋಚಿಸಲು ಬಿಡಿ, ಆದರೆ ಅದು ಹೇಗೆ ಹೋಗುತ್ತಿದೆ, ಅದರಲ್ಲಿ ಯಾವ ಭಾವನೆ/ಯೋಚನೆ ಬರುತ್ತಿದೆ ಎಂದು ನಿರೀಕ್ಷಿಸಿ. ಒಂದು ನಿಮಿಷವಾದ ಕೂಡಲೇ ಎಲ್ಲವನ್ನು ನಿಲ್ಲಿಸಿ, ನಿಮ್ಮ ಮನಸ್ಸನ್ನು ಒಂದು ನಿಮಿಷದ ಹಿಂದಕ್ಕೆ ರಿವೈಂಡ್ ಮಾಡಿ. ಯೋಚನೆ ಎಲ್ಲಿಂದ ಪ್ರಾರಂಭವಾಯಿತು, ಎಲ್ಲಿಂದ ಎಲ್ಲಿಗೆ ಹಾರಿತು, ಎಲ್ಲಿಗೆ ಬಂದು ನಿಂತಿತು ಎಂಬುದನ್ನು ಗುರುತು ಹಾಕಿಕೊಳ್ಳಿ. ಒಂದು ನಿಮಿಷದ ಲಾಗ್-ಬುಕ್ ಸಿಕ್ಕ ನಂತರ, ಕಾಲಾವಕಾಶವನ್ನು ಎರಡು, ಮೂರು, ಐದು, ಹತ್ತು ನಿಮಿಷಕ್ಕೆ ಏರಿಸುತ್ತಾ ಹೋಗಿ. ನಿಮ್ಮ ಯೋಚನೆ ಮತ್ತೆ ಮತ್ತೆ ಅದೇ ವಿಷಯದತ್ತ ಓಡುತ್ತಿದ್ದರೆ, ಅಲ್ಲಿದೆ ನಿಮ್ಮ ಸಮಸ್ಯೆ. ಹೀಗೆ ಮಾಡುವುದರಿಂದ ನಿಮ್ಮ ಮನಸ್ಸಿನ ಮೇಲೆ, ಯೋಚನೆಯ ಮೇಲೆ, ಭಾವನೆಯ ಮೇಲೆ ನಿಮಗೆ ನಿಯಂತ್ರಣ ಸಿಗಲು ಸಾಧ್ಯವಾಗುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಮತಾ ಬ್ಯಾನರ್ಜಿಗೆ ಬಿಗ್ ಶಾಕ್: ನೇಮಕಗೊಂಡ ತಿಂಗಳಲ್ಲೇ ಟಿಎಂಸಿ ರಾಜ್ಯಾಧ್ಯಕ್ಷೆ ಚಂದ್ರಿಮಾ ಭಟ್ಟಾಚಾರ್ಯ ರಾಜೀನಾಮೆ

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ಹಿನ್ನೆಲೆಯಲ್ಲಿ, ಅತ್ಯಂತ ನಿರ್ಣಾಯಕವಾದ ಸಾಂಸ್ಥಿಕ ಜವಾಬ್ದಾರಿಗೆ ನೇಮಕಗೊಂಡ ಕೇವಲ ಒಂದು ತಿಂಗಳ ಒಳಗಾಗಿಯೇ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ರಾಜ್ಯ ಘಟಕದ ಅಧ್ಯಕ್ಷೆ ಚಂದ್ರಿಮಾ...

ಜಿಲ್ಲಾ ನ್ಯಾಯಾಧೀಶೆ ತಬಸ್ಸುಮ್ ಖಾನ್‌ಗೆ ಬಲಪಂಥೀಯರಿಂದ ಬೆದರಿಕೆ : ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್

ನರ್ಮದಾಪುರಂ ಜಿಲ್ಲಾ ನ್ಯಾಯಾಧೀಶರಾದ ತಬಸ್ಸುಮ್ ಖಾನ್ ಅವರು ತಮ್ಮ ಕರ್ತವ್ಯ ನಿರ್ವಹಣೆಯ ಕಾರಣಕ್ಕಾಗಿ ಬೆದರಿಕೆ ಮತ್ತು ನಿಂದನೆಗೆ ಒಳಗಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಮಧ್ಯಪ್ರದೇಶ ಹೈಕೋರ್ಟ್, ಅವರಿಗೆ ಸೂಕ್ತ ರಕ್ಷಣೆ ನೀಡುವಂತೆ ಮತ್ತು ಅಪರಾಧಿಗಳನ್ನು ಪತ್ತೆಹಚ್ಚಲು ಕೈಗೊಂಡಿರುವ...

ಎಸ್ಐಆರ್ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗದ ಪಕ್ಷಪಾತದ ಬಗ್ಗೆ ಸಿಜೆಐಗೆ ಪ್ರತಿಪಕ್ಷಗಳಿಂದ ಪತ್ರ: ‘ಪ್ರಜಾಪ್ರಭುತ್ವ ಅಪಾಯದಲ್ಲಿದೆ’ ಎಂದು ಆರೋಪ

ದೇಶದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರತೀಯ ಚುನಾವಣಾ ಆಯೋಗವು (ECI) ಪಕ್ಷಪಾತ ಧೋರಣೆ ತಳೆದಿದೆ ಎಂದು ಆರೋಪಿಸಿ, 24 ವಿರೋಧ ಪಕ್ಷಗಳ ನಾಯಕರು ಹಾಗೂ ಒಬ್ಬರು ಸ್ವತಂತ್ರ...

ಬೆಂಗಳೂರು| ಕೆ.ಆರ್. ವೃತ್ತದ ಬಳಿ ಬಿಎಂಟಿಸಿ ಬಸ್‌ಗಳ ನಡುವೆ ಅಪಘಾತ; ಹಲವರಿಗೆ ಗಾಯ

ಇಂದು ಬೆಳಿಗ್ಗೆ ವಿಧಾನಸೌಧದಿಂದ ಸ್ವಲ್ಪ ದೂರದಲ್ಲಿರುವ ಜನನಿಬಿಡ ಕೆ.ಆರ್. ವೃತ್ತ ಜಂಕ್ಷನ್ ಬಳಿ ಎರಡು ಬಿಎಂಟಿಸಿ ಬಸ್‌ಗಳು ಡಿಕ್ಕಿ ಹೊಡೆದ ಪರಿಣಾಮ ಹಲವಾರು ಪ್ರಯಾಣಿಕರು ಗಾಯಗೊಂಡರು. ಡಿಕ್ಕಿಯ ಪರಿಣಾಮ ಬಸ್ಸಿನೊಳಗೆ ಹಲವಾರು ಪ್ರಯಾಣಿಕರು...

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಲೋಪ ಆರೋಪ; ಕೋಲಾರ-ಮೈಸೂರಿನ ಅಧಿಕಾರಿಗಳಿಗೆ ನೋಟಿಸ್ ಜಾರಿ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಗೆ ಸಂಬಂಧಿಸಿದಂತೆ, ಕೋಲಾರ ಮತ್ತು ಮೈಸೂರಿನಲ್ಲಿ ನಡೆದ ಕಾರ್ಯವಿಧಾನದಲ್ಲಿ ನಿಯಮ ಉಲ್ಲಂಘನೆ ಆರೋಪ ಕೇಳಿಬಂದೆ. ಕೋಲಾರದಲ್ಲಿ, ಪರಿಷ್ಕರಣಾ ಕಾರ್ಯದ ಸಮಯದಲ್ಲಿ ಕರ್ತವ್ಯ...

ಸೂರತ್ ಧ್ವಂಸ ಕಾರ್ಯಾಚರಣೆ ಸಂಪೂರ್ಣ ‘ಕಾನೂನುಬಾಹಿರ’: 100 ನಿರಾಶ್ರಿತ ಕುಟುಂಬಗಳ ಪುನರ್ವಸತಿಗೆ ಗುಜರಾತ್ ಹೈಕೋರ್ಟ್ ಆದೇಶ

ಅಹಮದಾಬಾದ್: ಗುಜರಾತ್‌ನ ಸೂರತ್‌ನ ನಾಸಿರ್ ನಗರದಲ್ಲಿ ನಡೆದ ಮನೆಗಳ ಧ್ವಂಸ ಕಾರ್ಯಾಚರಣೆಯನ್ನು ತೀವ್ರವಾಗಿ ಖಂಡಿಸಿರುವ ಗುಜರಾತ್ ಹೈಕೋರ್ಟ್, ಇದನ್ನು "ಸಂಪೂರ್ಣ ಕಾನೂನುಬಾಹಿರ" ಎಂದು ಕರೆದಿದೆ. ಮೇ 30 ರಂದು ನಡೆದ ಈ "ಅನಧಿಕೃತ"...

ವಿದ್ಯುತ್ ಖಾಸಗೀಕರಣ ವಿರುದ್ದದ ಹೋರಾಟಕ್ಕೆ ಗೆಲುವು: ಅರ್ಜಿ ಹಿಂಪಡೆದ ಟಾಟಾ ಪವರ್ ಕಂಪನಿ

ರಾಜ್ಯದಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಖಾಸಗೀಕರಣದ ಹೆಜ್ಜೆ ಇಡಲು ಮುಂದಾಗಿದ್ದ ಟಾಟಾ ಪವರ್ ಕಂಪನಿಗೆ ಭಾರಿ ಹಿನ್ನಡೆಯಾಗಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (KERC) ಮುಂದೆ ರಾಜ್ಯದ 19 ಕಂದಾಯ ಜಿಲ್ಲೆಗಳಿಗೆ ಸಂಬಂಧಿಸಿದಂತೆ ತಾನು...

SIR: ಮತದಾರರ ಮನೆಗೆ ಹೋಗದೆ ಕಚೇರಿಯಲ್ಲೇ ಕುಳಿತು ಫಾರ್ಮ್ ವಿತರಣೆ ಆರೋಪ, BLO ಗಳಿಗೆ ಎಚ್ಚರಿಕೆ ನೀಡಿದ ಆಯೋಗ

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬಂದ ಬೆನ್ನಲ್ಲೇ, ರಾಜ್ಯ ಚುನಾವಣಾ ಆಯೋಗವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮತದಾರರ ಮನೆ-ಮನೆಗೆ ಭೇಟಿ...

ಅಳುವ ಕಂದಮ್ಮಗಳನ್ನು ವಾಷಿಂಗ್ ಮೆಷಿನ್‌ನಲ್ಲಿ ಕೂಡಿಹಾಕ್ತಿದ್ದ ಇಬ್ಬರು ಕೇರ್‌ಟೇಕರ್ ಅರೆಸ್ಟ್

ಸಿಲಿಕಾನ್ ಸಿಟಿಯ ಬ್ರೂಕ್‌ಫೀಲ್ಡ್‌ನಲ್ಲಿರುವ ಪ್ರಮುಖ ಐಟಿ ಸಂಸ್ಥೆ 'ಕ್ಯಾಪ್‌ಜೆಮಿನಿ' ಕ್ಯಾಂಪಸ್‌ನ ಡೇ-ಕೇರ್ ಸೆಂಟರ್‌ನಲ್ಲಿ ಪುಟ್ಟ ಕಂದಮ್ಮಗಳನ್ನು ಬಾತ್‌ರೂಮ್ ಹಾಗೂ ವಾಷಿಂಗ್ ಮೆಷಿನ್‌ಗಳಲ್ಲಿ ಕೂಡಿಹಾಕಿ ವಿಕೃತಿ ಮೆರೆದಿದ್ದ ಪ್ರಕರಣದಲ್ಲಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಪ್ರಕರಣದ...

“ನಾಗರಿಕರು ಸರ್ಕಾರದ ಗುಲಾಮರಲ್ಲ”: ಸಿಎಎ, ಜ್ಞಾನವಾಪಿ ವಿರೋಧಿ ಪ್ರತಿಭಟನೆ ಸಂಬಂಧ ಎಸ್‌ಡಿಪಿಐ ನಾಯಕನ ಗಡಿಪಾರು ಪ್ರಶ್ನಿಸಿದ ಬಾಂಬೆ ಹೈಕೋರ್ಟ್

“ದೇಶದ ನಾಗರಿಕರು ಸರ್ಕಾರದ ಗುಲಾಮರಲ್ಲ. ಕೇವಲ ಸರ್ಕಾರದ ನಿರ್ಧಾರಗಳನ್ನು ವಿರೋಧಿಸುವುದು ಅಥವಾ ಆಡಳಿತ ವ್ಯವಸ್ಥೆಯ ವಿರುದ್ಧ ಘೋಷಣೆಗಳನ್ನು ಕೂಗುವುದು ಒಬ್ಬ ನಾಗರಿಕನನ್ನು ಗಡಿಪಾರು ಮಾಡಲು ಕಾನೂನಾತ್ಮಕ ಕಾರಣವಾಗಲಾರದು,” ಎಂದು ಬಾಂಬೆ ಹೈಕೋರ್ಟ್‌ ಐತಿಹಾಸಿಕ...